Posts

Image
  ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇರಿದಂತೆ ವಿವಿಧೆಡೆ ಜು.26 ರಿಂದ 28ರವರೆಗೆ ಡಾ.ಈ.ವಿ.ಸ್ವಾಮಿನಾಥನ್ ರವರಿಂದ ಉಪನ್ಯಾಸ ಕಾರ್ಯಕ್ರಮ -ಸ್ಮಿತಾ ಅಕ್ಕ.                                                                                                            ಜಯ ಧ್ವಜ ನ್ಯೂಸ್, ರಾಯಚೂರು, ಜು.24-   ಪ್ರಸಿದ್ಧ ಉಪನ್ಯಾಸಕಾರ ರಾದ ಡಾ.ಈ.ವಿ.ಸ್ವಾಮಿನಾಥನ್ ಮುಂಬೈ ಅವರಿಂದ ಜು.26 ರಿಂದ 28 ವರೆಗೆ ಈಶ್ವರೀಯ ವಿಶ್ವವಿದ್ಯಾಲಯ ಸೇರಿದಂತೆ ನಗರದ ವಿವಿಧೆಡೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಮಿತಾ ಅಕ್ಕ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜು.26 ರಂದು ರಿಮ್ಸ್ ಆಸ್ಪತ್ರೆಯಲ್ಲಿ ಮಾನಸಿಕ ಮತ್ತು ಭಾವನಾತ್ಮಕ ವಿಷಯ ಕುರಿತು ಬೆಳಿಗ್ಗೆ 9.30 ರಿಂದ 11.30ರವರೆಗೆ ಉಪನ್ಯಾಸ ನಂತರ ರಂಗಮಂದಿರದಲ್ಲಿ ಶಿಕ್ಷಕರು ಮತ್ತು ಅಧ್ಯಾಪಕರಿಗೆ ಪರಿಣಾಮಕಾರಿ ಬೋಧನೆ ಬಗ್ಗೆ ಉಪನ್ಯಾಸ  ನಂತ...
Image
  ಜು.26 ರಂದು ಕಲ್ಯಾಣ ಕರ್ನಾಟಕ ಬ್ರಾಹ್ಮಣರ ಹಬ್ಬ:                ಪ್ರತಿಭೋತ್ಸವ ಹಾಗೂ ವಿಪ್ರ ಶ್ರೀ ಪ್ರಶಸ್ತಿ  ಪ್ರದಾನ ಸಮಾರಂಭ - ಜಗನ್ನಾಥ ಕುಲಕರ್ಣಿ.                                        ಜಯ ಧ್ವಜ ನ್ಯೂಸ್, ರಾಯಚೂರು,ಜು.24- ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ರಾಯಚೂರು ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಜು.26 ರಂದು ನಗರದಲ್ಲಿ ಕಲ್ಯಾಣ ಕರ್ನಾಟಕದ ಬ್ರಾಹ್ಮಣರ ಹಬ್ಬ ಹಾಗೂ ಪ್ರತಿಭೋತ್ಸವ ಮತ್ತು ವಿಪ್ರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹಾಗೂ ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಿಭಾಗೀಯ ಅಧ್ಯಕ್ಷ ಜಗನ್ನಾಥ ಕುಲಕರ್ಣಿ ಹೇಳಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜು.26 ರಂದು  ಸಂಜೆ  5ಕ್ಕೆ ನಗರದ ಗಾಜಗಾರ್ ಪೇಟೆಯ ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮ ಉದ್ಘಾಟನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಎಸ್.ರಘುನಾಥ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಜಗನ್ನಾಥ ಕುಲಕರ್ಣಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ ಹಾಗೂ ವಿ...
Image
  ಯರಗೇರಾ ತಾಲೂಕು ರಚನೆ ಹೋರಾಟ ಸಮಿತಿಯಿಂದ ಕಂದಾಯ ಸಚಿವರು, ವಿರೋಧ ಪಕ್ಷದ ನಾಯಕರು, ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ ಜಯ ಧ್ವಜ ನ್ಯೂಸ್, ರಾಯಚೂರು, ಜು.23 - ಯರಗೇರಾ ತಾಲೂಕು ಹೋರಾಟ ಸಮಿತಿ ವತಿಯಿಂದ   ಬೆಂಗಳೂರಿನಲ್ಲಿ   ಮಾನ್ಯ ಕಂದಾಯ ಸಚಿವರಾದ   ಕೃಷ್ಣ ಬೈರೇಗೌಡ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಚಲುವಾದಿ ನಾರಾಯಣ ಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರರವರನ್ನು  ಭೇಟಿಯಾಗಿ ಮನವಿ ಮಾಡಲಾಯಿತು . ಯರಗೇರಾ ತಾಲೂಕ ಘೋಷಣೆ ಮಾಡಲು ಹೋರಾಟ ಸಮಿತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.  ಈ ಮನವಿ ಪತ್ರ  ಸ್ವೀಕರಿಸಿದ ಸಚಿವರು  ಯರಗೇರಾ ತಾಲೂಕ ಘೋಷಣೆಗೆ ಉತ್ತಮ ರೀತಿಯಲ್ಲಿ  ಸ್ಪಂದಿಸಿ ಆಶ್ವಾಸನೆ ನೀಡಿದ್ದು ಇತರ ನಾಯಕರು ಸಹ ಬೆಂಬಲಿಸುವುದಾಗಿ ತಿಳಿಸಿದ್ದಾರೆ.  ಈ ಸಂದರ್ಭದಲ್ಲಿ ಹೋರಾಟ ಸಮಿತಿ ಪ್ರಧಾನ ಸಂಚಾಲಕರರಾದ  ಮಹ್ಮದ್  ನಿಜಾಮುದ್ದೀನ್ , ಸಂಚಾಲಕರಾದ  ಬಸವರಾಜ್ ಹೂಗಾರ್  ಮತ್ತು ಪದಾಧಿಕಾರಿಗಳಾದ ಶ್ರೀ ವಿದ್ಯಾನಂದ ರೆಡ್ಡಿ, ಮೆಹಬೂಬ್ ಪಟೇಲ್, ರಾಘವೇಂದ್ರ ಚಾರ್ಯ   ಜೋಷಿ ,ಟಿ. ಜನಾರ್ಧನ,  ವೈ . ಭೀಮಸೇನ  ನಾಯಕ, ಮೂತಿ೯  ಶೆಟ್ಟಿ,  ಮಹಮ್ಮದ್ ರಫಿ, ಜಗದೀಶ್ ರೆಡ್ಡಿ,ರಮೇಶ್  ಮಿಲ್ ,ಮಹಾದೇವ  ನಾಯಕ್,  ನರಸಿಂಹ ಗುಂಜಳ್ಳಿ,...
Image
  ರೋಟರಿ ಕ್ಲಬ್ ಕೃಷ್ಣಾ ತುಂಗೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮ.                                                                                            ಜಯ ಧ್ವಜ ನ್ಯೂಸ್, ರಾಯಚೂರು,ಜು.23- ರೋಟರಿ ಕ್ಲಬ್ ಕೃಷ್ಣಾ ತುಂಗೆ ರಾಯಚೂರು ಹಾಗೂ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ 101 ಸಸಿ ನೆಡುವ ಕಾರ್ಯಕ್ರಮ ನಡೆಯಿತು. ನಗರದ ಆಶಾಪುರ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 101 ಸಸಿ ನೆಡಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕೃಷ್ಣಾ ತುಂಗೆ ಅಧ್ಯಕ್ಷ ರಾದ ಪವನ್ ಕಿಶೋರ್ ಪಾಟೀಲ್, ಸಾಮಾಜಿಕ ಅರಣ್ಯ ವಲಯ ಅಧಿಕಾರಿ ನಾಗರಾಜ್, ಲಕ್ಷ್ಮೀ ಕಾಂತ್ ರೆಡ್ಡಿ, ಅಮರೇಶ ರೆಡ್ಡಿ, ಮಲ್ಲಿಕಾರ್ಜುನ ಗಣೆಕಲ್, ಸಂಪತ್ ಕುಮಾರ್ ಶೆಟ್ಟಿ, ವಭಂಶು ಜೈನ್, ಮಂಜು ನಾಥ ಹಾನಗಲ್, ತಿರುಮಲ ರೆಡ್ಡಿ,ವಿಶ್ರಾಂತ್ ಮಹಾಮನಿ, ಬಸವರಾಜ ಅಂಗಡಿ ಸೇರಿದಂತೆ ವಸತಿ ನಿಲಯ ಪ್ರಾಂಶುಪಾಲರು, ಸಿಬ್ಬಂದಿಗಳು, ರೋಟರಿ ಕ್ಲಬ್ ಸದಸ್ಯರು  ಹಾಗೂ ಮಕ್ಕಳಿದ್ದರು.
Image
  ಮಂತ್ರಾಲಯ:  ಶ್ರೀ  ಸುಬುಧೇಂದ್ರತೀರ್ಥರಿಂದ ಚಾತುರ್ಮಾಸ್ಯ ದೀಕ್ಷೆ ಸಂಕಲ್ಪ                                        ಜಯ‌ಧ್ವಜ ನ್ಯೂಸ್, ರಾಯಚೂರು,ಜು.22- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಂದ 13 ನೇ ಚಾತುರ್ಮಾಸ್ಯ ದೀಕ್ಷೆ ಸಂಕಲ್ಪ ಕೈಗೊಳ್ಳಲಾಯಿತು. ಬೆಳಿಗ್ಗೆ ಶ್ರೀ ಮಠದಲ್ಲಿ ಪೀಠಾಧಿಪತಿಗಳು ಚಾತುರ್ಮಾಸ್ಯ ದೀಕ್ಷೆಯ ವಿಧಿ ವಿಧಾನ ಕೈಗೊಂಡರು. ಶ್ರೀ ರಾಘವೇಂದ್ರ  ಸ್ವಾಮಿಗಳ ಮತ್ತು ಶ್ರೀ  ವಾದೀಂದ್ರತೀರ್ಥರ ಮತ್ತು ಪರಂಪರೆಯ  ಯತಿಗಳ ಬೃಂದಾವನಗಳಿಗೆ ವಿಶೇಷ ಪೂಜೆ ನೆರವೇರಿದವು. ಚಾತುರ್ಮಾಸ್ಯ ಅಂಗವಾಗಿ ದಿನ ನಿತ್ಯ‌ ಶ್ರೀಮಠದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.   
Image
   ಜಿಲ್ಲಾ ಪೊಲೀಸ್ ಇಲಾಖೆಯಿಂದ ಮನೆಮನೆಗೆ ಪೋಲಿಸ್ ಕಾರ್ಯಕ್ರಮಕ್ಕೆ ಚಾಲನೆ ಜಯ ಧ್ವಜ ನ್ಯೂಸ್,  ರಾಯಚೂರು ಜು. 22  -  ಪೊಲೀಸ್ ವ್ಯವಸ್ಥೆಯನ್ನು ಸಾರ್ವಜನಿಕ ಸ್ನೇಹಿಯನ್ನಾಗಿಸುವ ದಿಸೆಯಲ್ಲಿ ಮನೆ ಮನೆಗೆ ಪೊಲೀಸರು ಎಂಬ ವಿನೂತನ ಪರಿಕಲ್ಪನೆಯ ಮಹತ್ವದ ಕಾರ್ಯಕ್ರಮಕ್ಕೆ ರಾಯಚೂರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಜುಲೈ 22ರಂದು ಚಾಲನೆ ಸಿಕ್ಕಿತು. ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಮಾರ್ ಸ್ವಾಮಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಅವರು ಮಾತನಾಡಿ, ಪೊಲೀಸರನ್ನು ಸಮಾಜದ ಭದ್ರತಾ ಪ್ರತಿನಿಧಿಗಳೆಂದು, ನಾಗರೀಕರ ಮೂಲಭೂತ ಹಕ್ಕುಗಳ ರಕ್ಷಕರೆಂದು ಸಂಬೋಧಿಸಲಾಗುತ್ತದೆ. ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ಅಪರಾಧಗಳ ತಡೆ ಹಾಗೂ ಪತ್ತೆ, ಸಮಾಜದಲ್ಲಿ ನಿರ್ಭಯ ವಾತಾವರಣವನ್ನು ಸೃಜಿಸುವ ಜೊತೆಗೆ ರಕ್ಷಣೆ ಮತ್ತು ಸುರಕ್ಷತೆ ಒದಗಿಸುವ ಕರ್ತವ್ಯ ಮತ್ತು ಗುರುತರ ಜವಾಬ್ದಾರಿಗಳು ಪೊಲೀಸ್ ಇಲಾಖೆಯ ಮೇಲಿವೆ ಎಂದರು. ಪೊಲೀಸ್ ವ್ಯವಸ್ಥೆಯು ಸಮಾಜಸ್ನೇಹಿಯಾಗಿಸಿಕೊಳ್ಳುವುದರಿಂದ ಪೊಲೀಸ್ ಮೂಲಭೂತ ಕರ್ತವ್ಯದ ಪರಿಣಾಮಕತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಪೊಲೀಸ್ ಸೇವೆಗಳ ಪ್ರತಿಯೊಂದು ಸ್ಥರದಲ್ಲೂ, ಸಾರ್ವಜನಿಕರ ಬೆಂಬಲ ಮತ್ತು ಸಹಭಾಗಿತ್ವವನ್ನು ಸಾಧಿಸಿಕೊಳ್ಳುವುದರಿಂದ ಮಾತ್ರವೇ ಸಾರ್ವಜನಿಕರಿಗೆ ಉತ್ಕೃಷ್ಟ ಸೇವೆಯನ್ನು ಒದಗಿಸ...
Image
  ಮಾವಿನಕೆರೆಗೆ ಜಿಲ್ಲಾಧಿಕಾರಿಗಳು, ಪಾಲಿಕೆಯ ಆಯುಕ್ತರು ಭೇಟಿ ಜಯ‌ ಧ್ವಜ ನ್ಯೂಸ್  ,ರಾಯಚೂರು, ಜು.22- ನಗರದ ಐತಿಹಾಸಿಕ ಮಾವಿನಕೆರೆ ಪ್ರದೇಶಕ್ಕೆ ಜಿಲ್ಲಾಧಿಕಾರಿಗಳಾದ ನಿತೀಶ್ . ಕೆ ಹಾಗೂ ಮಹಾನಗರ ಪಾಲಿಕೆಯು ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು. ನಂತರ  ಕೆರೆ ಅಭಿವೃದ್ಧಿ ಕಾಮಗಾರಿಯ ವೀಕ್ಷಣೆ ನಡೆಸಿದರು. ಮಾವಿನಕೆರೆಗೆ ಬೇರೆ ಬೇರೆ ಕಡೆಗಳಿಂದ ಚರಂಡಿ ನೀರು ಹರಿದು ಬಂದು ಕೆರೆಯ ನೀರು ಕಲುಷಿತವಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿರುವ ಹಿನ್ನೆಲೆಯಲ್ಲಿ ಚರಂಡಿ ನೀರು ಕೆರೆಗೆ ಹರಿಯದೇ ಬೇರೆಡೆ ಹರಿಸುವ  ಬಗ್ಗೆ ಇದೆ ವೇಳೆ ಚರ್ಚಿಸಲಾಯಿತು. ಸಾರ್ವಜನಿಕರು ಕೆರೆಗೆ ಕಸ ಮತ್ತು ಪ್ಲಾಸ್ಟಿಕ್ ಎಸೆಯದಂತೆ ಕೆರೆಯ ಸುತ್ತಲು ಕಾವಲು ವ್ಯವಸ್ಥೆಯನ್ನು ಸಿಬ್ಬಂದಿಯ ಮೂಲಕ ಖಾಯಂಗೊಳಿಸುವುದರ ಬಗ್ಗೆ ಸಹ ಇದೆ ವೇಳೆ ಚರ್ಚಿಸಲಾಯಿತು.  ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಇನ್ನಿತರರು ಇದ್ದರು.