Posts

ಜಿ.ಪಂ ನೂತನ ಸಿಇಒ ಶಶಿಧರ ಕುರೇರ ಅಧಿಕಾರ ಸ್ವೀಕಾರ

Image
  ಜಿ.ಪಂ ಸಿಇಒ ಶಶಿಧರ ಕುರೇರ ಅಧಿಕಾರ ಸ್ವೀಕಾರ ರಾಯಚೂರು ಆ.೨೩- ಇಲ್ಲಿಯ ಜಿಲ್ಲಾ ಪಂಚಾಯಿತಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶಶಿಧರ ಕುರೇರ  ಅವರು ಅಧಿಕಾರ ಸ್ವೀಕರಿಸಿದರು.       ಇನ್ನು ಮುಂದೆ ಎಲ್ಲಾ ಸರಕಾರಿ, ಅರೆ ಸರಕಾರಿ ಹಾಗೂ ಪ್ರಮುಖ ವಿಷಯಗಳ ಕುರಿತು ಪತ್ರಗಳನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್, ರಾಯಚೂರು  ದೂರವಾಣಿ ಸಂಖ್ಯೆ:೦೮೫೩೨- ೨೨೮೪೪೮, ೨೨೭೧೩೬ಗೆ ಸಂಪರ್ಕಿಸುವ0ತೆ ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಣೆಯಲ್ಲಿ ತಿಳಿಸಿದ್ದಾರೆ.

ಮಂತ್ರಾಲಯದಲ್ಲಿ ಆ.೨೫ ಮತ್ತು ೨೬ ಶ್ರೀ ಮನ್ನಾಯಸುಧಾ ಗ್ರಂಥದ ಮಂಗಳ ಮಹೋತ್ಸವ-ವಾದಿರಾಜಾಚಾರ್

Image
  ಮಂತ್ರಾಲಯದಲ್ಲಿ ಆ.೨೫ ಮತ್ತು ೨೬ ಶ್ರೀ ಮನ್ನಾಯಸುಧಾ ಗ್ರಂಥದ ಮಂಗಳ ಮಹೋತ್ಸವ- ವಾದಿರಾಜಾಚಾರ್ ರಾಯಚೂರು,ಆ.೨೩-ಮಂತ್ರಾಲಯದಲ್ಲಿ ಆ.೨೫ ಮತ್ತು ೨೬ ರಂದು ಶ್ರೀ ಮನ್ನಾö್ಯಯಸುಧಾ ಗ್ರಂಥದ ೫ ನೇ ಮಂಗಳ ಮಹೋತ್ಸವ ನಡಯಲಿದೆ ಎಂದು ಮಂತ್ರಾಲಯ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲರಾದ ಎನ್.ವಾದಿರಾಜ ಆಚಾರ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ.೨೫ ಮತ್ತು ೨೬ ರಂದು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರ ಅಧ್ಯಕ್ಷತೆಯಲ್ಲಿ ಮತ್ತು ರಾಷ್ಟçಪತಿ ಪ್ರಶಸ್ತಿ ಪುರಸ್ಕೃತ ಮಹಾಮಹೋಪಾಧ್ಯಾಯರಾದ ಶ್ರೀ ರಾಜಾ.ಎಸ್. ಗಿರಿಯಾಚಾರ್ಯರ ಘನ ಉಪಸ್ಥಿತಿಯಲ್ಲಿ ಶ್ರೀ ಮತ್ಸಮೀರಸಮಯಸಂವರ್ಧಿನಿ ಸಭಾ ಶ್ರೀಮದನುವ್ಯಾಖ್ಯಾನ ಸಹಿತ ಶ್ರೀ ಮನ್ನಾಯಸುಧಾಗ್ರಂಥದ ೫ನೇಯ ಮಂಗಳ ಮಹೋತ್ಸವ ನಡೆಯಲಿದೆ ಎಂದರು. ಈ ಕಾರ್ಯಕ್ರಮದಲ್ಲಿ ಸುಮಾರು ೧೫೦ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು ತೆಲಂಗಾಣ, ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟç, ಮುಂತಾದ ರಾಜ್ಯಗಳಿಂದ ಸುಮಾರು ೬೦೦ ವಿಧ್ವಾಂಸರು ಪಾಲ್ಗೊಳ್ಳಲಿದ್ದು ಕಾಶಿ ಕ್ಷೇತ್ರದಿಂದಲು ವಿಧ್ವಾಂಸರು ಆಗಮಿಸುವ ನಿರೀಕ್ಷೆಯಿದೆ ಎಂದ ಅವರು ಇದೊಂದು ರೀತಿಯಲ್ಲಿ ಲೌಕಿಕ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಘಟಿಕೋತ್ಸವ ಮಾದರಿಯಲ್ಲಿ ನಡೆಯುವ ಧಾರ್ಮಿಕ ಘಟಿಕೋತ್ಸವ ಎನ್ನಬಹುದೆಂದರು. ಈ ಬಾರಿ ಕೆ.ಶಶಿಧರಾಚಾರ್ಯ, ಕೆ.ರಾಮಕೃಷ್ಣಾಚಾರ...

ಗಣೇಶ ಬೀಡಿ ಲಾರಿಯಲ್ಲಿರಿಸಿದ್ದ ಹಣ ಕಳವು ಪ್ರಕರಣ ಬೇಧಿಸಿದ ಪೊಲೀಸರು : ಪೊಲೀಸರ ಯಶಸ್ವಿ ಕಾರ್ಯಚರಣೆ ಕಳುವಾದ ಲಕ್ಷಾಂತರ ರೂ. ಜಪ್ತಿ-ನಿಖಿಲ್.ಬಿ

Image
ಗಣೇಶ ಬೀಡಿ ಲಾರಿಯಲ್ಲಿರಿಸಿದ್ದ ಹಣ ಕಳವು ಪ್ರಕರಣ ಬೇಧಿಸಿದ ಪೊಲೀಸರು:  ಪೊಲೀಸರ ಯಶಸ್ವಿ ಕಾರ್ಯಚರಣೆ ಪರಿಣಾಮ   ಕಳುವಾದ ಲಕ್ಷಾಂತರ  ರೂ. ಜಪ್ತಿ- ನಿಖಿಲ್ .ಬಿ ರಾಯಚೂರು,ಆ.೨೨- ಪೊಲೀಸರ ಮಿಂಚಿನ ಕಾರ್ಯಚರಣೆ ಪರಿಣಾಮ ೪೮ ಗಂಟೆಗಳಲ್ಲಿ ಕಳುವಾದ ಲಕ್ಷಾಂತರ ರೂ. ಹಣವನ್ನು ಜಪ್ತಿ ಮಾಡಲಾಗಿದೆ.  ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಿಖಿಲ್.ಬಿ ಸುದ್ದಿಗಾರರೊಂದಿಗೆ ಮಾತನಾಡಿ ಆ.೧೮ ರಂದು ಜಿಲ್ಲೆಯ ಸಿಂಧನೂರು ನಗರದಲ್ಲಿ ಗಣೇಶ ಬೀಡಿ ಕಂಪನಿಯ ವಾಹನದಲ್ಲಿಟ್ಟಿದ್ದ ೪೬.೨೩ ಲಕ್ಷ ರೂ .ಗಳನ್ನು ಕಳ್ಳರು ಕದ್ದೊಯದಿದ್ದಾರೆಂದು ವಾಹನದ ಚಾಲಕ ನೀಡಿದ ದೂರಿನ ಮೇರೆಗೆ ತನಿಖಾ ತಂಡ ರಚಿಸಲಾಗಿತ್ತು ಎಂದರು. ಕಳ್ಳತನ ಪ್ರಕರಣದಲ್ಲಿ ವಾಹನದ ಚಾಲಕ ಸೈಯದ್ ಜುಬೇರ್, ಆತನ ಸಹೋದರ ಸೈಯದ್ ಖಲಂದರ್ ಮತ್ತು ಸ್ನೇಹಿತ ಗಣೇಶ ಭಾಗಿಯಾದ ಬಗ್ಗೆ ಸುಳಿವು ದೊರೆತ ಬಳಿಕ ಅರೋಪಿತರನ್ನು ದಸ್ತಗಿರಿ ಮಾಡಿ ಹಣವನ್ನು ವಶಕ್ಕೆ  ಪಡೆಯಲಾಗಿದೆ ಎಂದ ಅವರು ಆರೋಪಿಗಳು ತಾವೆ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದು ತಮ್ಮ ಮೇಲೆ ಬಾರದಂತೆ ಕಳುವಿನ ನಾಟಕವಾಡಿದ್ದು ಕಳ್ಳತನಕ್ಕೆ ಬಳಸಲಾದ ದ್ವಚಕ್ರವಾಹನ ವಶಕ್ಕೆ ಪಡೆಯಲಾಗಿದೆ ಎಂದರು. ತನಿಖಾ ತಂಡವು ಹೆಚ್ಚುವರಿ ಎಸ್ಪಿ ಅರ್.ಶಿವಕುಮಾರ್,ಡಿಎಸ್ಪಿ ವೆಂಕಟಪ್ಪ ನಾಯಕ ಮಾರ್ಗದರ್ಶನದಲ್ಲಿ ಸಿಂಧನೂರು ಸಿಪಿಐ ರವಿಕುಮಾರ್ ಕಪ್ಪತ್ತನವರ್ ನೇತೃತ್ವದಲ್ಲಿ ಸಿಂಧನೂರು ಪಿಎಸೈ ಸೌಮ್ಯ,ಗ್ರಾಮೀಣ ಠಾಣೆ...

ಬ್ರಾಹ್ಮಣರನ್ನು ಯಾವುದೆ ಸರ್ಕಾರ ಕಡೆಗಣಿಸಬಾರದು- ಅಶೋಕ ಹಾರನಹಳ್ಳಿ

Image
  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ: ಬ್ರಾಹ್ಮಣರನ್ನು ಯಾವುದೆ ಸರ್ಕಾರ ಕಡೆಗಣಿಸಬಾರದು-ಅಶೋಕ ಹಾರನಹಳ್ಳಿ   ರಾಯಚೂರು,ಆ.೨೧-ಬ್ರಾಹ್ಮಣರನ್ನು ಯಾವುದೆ ಸರ್ಕಾರ ಕ ಡೆ ಗಣಿಸಬಾರದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು. ಅವರಿಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮ0ದಿರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕ ಆಯೋಜಿಸಿದ್ದ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬ್ರಾಹ್ಮಣರು ಲೋಕದಲ್ಲಿ ಎಲ್ಲರಿಗೂ ಒಳ್ಳೆದನ್ನೆ ಬಯಸುತ್ತಾರೆ ಆದರೆ ನಮ್ಮನ್ನು ಯಾರು ಸಹ ಪರಿಗಣಿಸುವುದಿಲ್ಲ ಬ್ರಾಹ್ಮಣರು ಸ್ವಾವಲಂಬಿಗಳಾಗಿದ್ದಾರೆ ಯಾರ ಬಳಿ ಕೈಯೊಡ್ಡುವುದಿಲ್ಲ ಇದರ ಅರ್ಥ ಬ್ರಾಹ್ಮಣರಲ್ಲಿ ಎಲ್ಲರೂ ಆರ್ಥಕವಾಗಿ ಸಶಕ್ತರೆಂದು ಹೇಳೀಲು ಬರುವುದಿಲ್ಲ ನಮ್ಮಲ್ಲೂ ಅನೇಕರು ಬಡವರಿದ್ದಾರೆ ಅವರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಬ್ರಾಹ್ಮಣ ಮಹಾಸಭಾ ಹಾಗೂ ಸರ್ಕಾರ ಮಾಡಬೇಕೆಂದರು. ಕೇವಲ ಶಿಕ್ಷಣ ಉದ್ಯೋಗ ಮುಂತಾದ ರಲ್ಲಿ ನಮ್ಮನ್ನು ಕಡೆಗಣಿಸಿಲ್ಲ ಬದಲಾಗಿ ಜಗತ್ತಿಗೆ ಸುದ್ದಿ ನೀಡುವ ಮುದ್ರಣ ಮಾಧ್ಯಮ ನಡೆಸುತ್ತಿರುವ ಬ್ರಾಹ್ಮಣರಿಗೆ ಜಾಹಿರಾತಿನಲ್ಲಿ ಕಡೆಗಣೀಸಲಾಗಿದೆ ನಾವು ಯಾರ ವಿರುದ್ದವು ಅಲ್ಲ ಆದರೆ ನಮ್ಮನ್ನು ಏಕೆ ತುಳೀಯಲಾಗುತ್ತಿದೆ ಎಂದ ಪ್ರಶ್ನಿಸ...

ಡಿ.ದೇವರಾಜ ಅರಸು ಅವರ ಯೋಜನೆಗಳು ಇಂದಿಗೂ ಜನಪರ ಹಾಗೂ ಪ್ರಸ್ತುತ -ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ

Image
ಡಿ.ದೇವರಾಜ ಅರಸು ಅವರ ಯೋಜನೆಗಳು ಇಂದಿಗೂ ಜನಪರ ಹಾಗೂ ಪ್ರಸ್ತುತ -ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ರಾಯಚೂರು ಆ.೨೦:- ಡಿ.ದೇವರಾಜು ಅರಸು ಅವರು  ಮುತ್ಸದ್ದಿಯಾಗಿ, ಸರಳ ಸಜ್ಜನಿಕೆ ವ್ಯಕ್ತಿ ಯಾಗಿದ್ದರು, ಅವರ ಆಡಳಿತ ಸಂದರ್ಭದಲ್ಲಿ ಸರ್ವ ಜನಾಂಗದವರ ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸ, ಜನಪರ ಯೋಜನೆಗಳು ಜಾರಿಗೆ ತಂದಿದ್ದು, ಇಂದಿಗೂ ಅವರ ಯೋಜನೆಗಳನ್ನು ನೆನೆಯುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರು ಹೇಳಿದರು. ಅವರು ಆ.೨೦ರ ಶನಿವಾರ ದಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಿ.ದೇವರಾಜ ಅರಸು ಅವರ ೧೦೭ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಡಿ.ದೇವರಾಜು ಅರಸು ಅವರು ಯೋಜನೆಗಳು, ಕೊಡುಗೆಗಳನ್ನು ಕಳೆದ ೪೦ವರ್ಷಗಳಿಂದ ನೆನೆಯುತ್ತಿದ್ದೇವೆ, ಅಂತಹ ಕೊಡುಗೆ ನೀಡಿದ್ದರು, ಇವರು ಭೂ ಸುಧಾರಣೆ ಹಾಗೂ ಉಳುವವನೇ ಭೂಮಿಯ ಒಡೆಯ ಎನ್ನುವ ಕಾನೂನುಗಳನ್ನು ಜಾರಿಗೆ ತಂದರು, ರಾಜ್ಯದ ಎಲ್ಲ ವರ್ಗದವರಿಗೆ ಅನುಕೂಲವಾಗುವಂತೆ ಮಾಡಿದ್ದು, ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣ ಮಾಡಲು ಶಿಲಾನ್ಯಾಸ ಮಾಡಿ, ಎಲೆಕ್ಟ್ರಾನಿಕ್ ಸಿಟಿ ಪರಿಕಲ್ಪನೆಯನ್ನು ಎತ್ತಿ ಹಿಡಿದು ಹೆಚ್ಚು ಉದ್ಯೋಗ ಸೃಷ್ಟಿಗೆ ಕಾರಣರಾಗಿದ್ದಾರೆ ಎಂದು ಹೇಳಿದರು. ಉಪನ್ಯಾಸಕರಾಗಿ ಮಹಾದ...

ಎಚ್.ಸಿದ್ದಾಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ: ಗ್ರಾಮಸ್ಥರು ಕಾರ್ಯಕ್ರಮದ ಸದುಪಯೋಗ ಪಡಿದುಕೊಳ್ಳಿ: ಶಾಸಕ ಶಿವನಗೌಡ ನಾಯಕ

Image
  ಎಚ್.ಸಿದ್ದಾಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ: ಗ್ರಾಮಸ್ಥರು ಕಾರ್ಯಕ್ರಮದ ಸದುಪಯೋಗ ಪಡಿದುಕೊಳ್ಳಿ: ಶಾಸಕ ಶಿವನಗೌಡ ನಾಯಕ ರಾಯಚೂರು ಆ.೨೦- ಗ್ರಾಮೀಣ ಪ್ರದೇಶದ ಜನರು ಸರ್ಕಾರದ ಯೋಜನೆಗಳನ್ನು ಪಡೆಯಲು ಕಚೇರಿ- ಕಚೇರಿ ಅಲೆಯುವುದರನ್ನ ತಪ್ಪಿಸಲು ಸರ್ಕಾರ ಈ ಕಾರ್ಯಕ್ರಮ ಆಯೋಜನೆ ಮಾಡಿದೆ. ಗ್ರಾಮಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಸರ್ಕಾರಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ದೇವದುರ್ಗ ಕ್ಷೇತ್ರದ ಶಾಸಕ ಕೆ.ಶಿವನಗೌಡ ನಾಯಕ ಅವರು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು. ಅವರು ಆ.೨೦ರ ಶನಿವಾರ ದಂದು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿಯ ಎಚ್.ಸಿದ್ದಾಪುರ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತವೇ ನಿಮ್ಮ ಬಳಿ ಬಂದಿದ್ದು, ಯಾವುದೇ ಸಮಸ್ಯೆ ಇದ್ದರೂ ಮುಕ್ತವಾಗಿ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದರು. ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಭಾಗವಾಗಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ...

ಏಮ್ಸ್ ಹೋರಾಟಕ್ಕೆ ೧೦೦ ದಿನಗಳು: ಆಗಸ್ಟ್ ಅಂತ್ಯದೊಳಗೆ ಜಿಲ್ಲೆಗೆ ಏಮ್ಸ್ ಘೋಷಣೆ ಮಾಡದಿದ್ದಲ್ಲಿ ಉಗ್ರ ಹೋರಾಟ ಪ್ರತ್ಯೇಕ ರಾಜ್ಯದ ಕೂಗು -ಮಠಾಧೀಶರು

Image
  ಏಮ್ಸ್ ಹೋರಾಟಕ್ಕೆ ೧೦೦ ದಿನಗಳು: ಆಗಸ್ಟ್ ಅಂತ್ಯದೊಳಗೆ ಜಿಲ್ಲೆಗೆ ಏಮ್ಸ್ ಘೋಷಣೆ ಮಾಡದಿದ್ದಲ್ಲಿ ಉಗ್ರ ಹೋರಾಟ ಪ್ರತ್ಯೇಕ ರಾಜ್ಯದ ಕೂಗು -ಮಠಾಧೀಶರು  ರಾಯಚೂರು, ಆ.೨೦- ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ೧೦೦ ನೇ ದಿನದ  ಶನಿವಾರದಂದು ಪ್ರತಿಭಟನೆಯಲ್ಲಿ ವಿವಿಧ ಮಠಗಳ ಮಠಾಧೀಶರು ಹೋರಾಟಕ್ಕೆ ಬೆಂಬಲಿಸಿ  ಆಗಸ್ಟ್ ಅಂತ್ಯದೊಳಗೆ ಜಿಲ್ಲೆಗೆ ಏಮ್ಸ್ ಘೋಷಣೆ ಮಾಡದಿದ್ದಲ್ಲಿ ಮಠಾಧೀಶರಿಂದಲೇ ಉಪವಾಸ  ಸತ್ಯಾಗ್ರಹ ಪ್ರಾರಂಭಿಸಿ ಉಘ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಅಲ್ಲದೇ ಈ ಭಾಗದಿಂದ ಚಿನ್ನ,  ಅನ್ನ, ಬೆಳಕು ಪಡೆದು ಈ ಭಾಗದ ಹಕ್ಕನ್ನು ನೀಡುವಲ್ಲಿ ಅನ್ಯಾಯ ಮಾಡಿದರೆ ಕಲ್ಯಾಣ ಕರ್ನಾಟಕ  ಪ್ರತ್ಯೇಕ ರಾಜ್ಯದ ಕರೆ ನೀಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಮಠಾಧೀಶರು ಒಕ್ಕೂರಲದಿಂದ  ಎಚ್ಚರಿಸಿದರು.  ೧೦೦ ನೇ ದಿನದ ಅಂಗವಾಗಿ ಏಮ್ಸ್ ಹೋರಾಟ ಸಮಿತಿಯಿಂದ ಜಿಲ್ಲೆಯಲ್ಲಿ ಏಮ್ಸ್  ಸ್ಥಾಪನೆಗಾಗಿ ಒತ್ತಾಯಿಸಿ ನಗರದ ಮಹಾತ್ಮಾಗಾಂಧಿ ಕ್ರೀಡಾಂಗಣದ ಆವರಣದಲ್ಲಿ ಹಮ್ಮಿಕೊಂಡ  ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಮಠಗಳ ಮಠಾಧೀಶರು ಭಾಗವಹಿಸಿ ಮಾತನಾಡಿದರು.  ಶ್ರೀ ವಿರುಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮುಕ್ತ ಗುಚ್ಛ ಮುತ್ತಿನಪೆಂಡೆ  ಕಲ್ಮಠ ಇವರು ಮಾತನಾಡಿ, ಜಿಲ್ಲೆಗೆ ಐಐಟಿ ನೀಡುವಂತೆ ಡಾ. ನಂಜುAಡಪ್ಪ ಅವರ ವರದಿ  ಸಲ್ಲಿಸಿದ್ದರೂ ಈ...