ವಡವಾಟಿಯವರ ಜನುಮ ದಿನ ಕಲಾವಿದರ ದಿನವಾಗಿ ಆಚರಣೆ ಶ್ಲಾಘನೀಯ-ಮಹದೇವಪ್ಪ ಗಂಗಪ್ಪ
ವಡವಾಟಿಯವರ ಜನುಮ ದಿನ ಕಲಾವಿದರ ದಿನವಾಗಿ ಆಚರಣೆ ಶ್ಲಾಘನೀಯ- ಮಹದೇವಪ್ಪ ಗಂಗಪ್ಪ ರಾಯಚೂರು,ಜ.24- ವಿಶ್ವಮಟ್ಟದ ಕ್ಲಾರಿಯೋನೆಟ್ ವಾದಕ ಡಾ. ಪಂ. ನರಸಿಂಹಲು ವಡವಾಟಿಯವರ ಜನುಮ ದಿನವನ್ನು ಕಲಾವಿದರಿಗೆ ಅರ್ಪಿಸಿ ಕಲಾವಿದರ ದಿನವನ್ನಾಗಿ ಆಚರಿಸುತ್ತಿರುವುದು ಭಾರತದ ಕಲಾವಿದರಿಗಷ್ಟೇ ಅಲ್ಲದೆ ಪ್ರಪಂಚದ ಕಲಾವಿದರೆಲ್ಲರಿಗೂ ಸಮರ್ಪಿಸಿರುವುದು ಶ್ರೇಷ್ಟತಮ ಧ್ಯೇಯವನ್ನು ತೋರಿಸಿಕೊಡುತ್ತದೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಮಾನ್ಯ ಮಹದೇವಪ್ಪ ಗಂಗಪ್ಪ ಕುಡ ಒಕ್ಕಲಿಗರ್ ಉದ್ಘಾಟಿಸಿ ಪ್ರಶಂಸೆ ವ್ಯಕ್ತಪಡಿಸಿದರು. ರಾಯಚೂರಿನ ಉದಯನಗರದ ಸ್ವರ ಸಂಗಮ ಸಂಗೀತ ವಿದ್ಯಾ ಸಂಸ್ಥೆಯ ಆವರಣದಲ್ಲಿ ಬೆಂಗಳೂರಿನ ಭಾರತ್ ಸಾಂಸ್ಕöÈತಿಕ ಕಲಾ ಕೇಂದ್ರ ಡಾ. ಪಂ. ನರಸಿಂಹಲು ವಡವಾಟಿಯವರ ಜನುಮ ದಿನ ಜನವರಿ ೨೧ರಂದು ಆಯೋಜಿಸಿದ್ದ ‘ಕಲಾವಿದರ ದಿನ’ ಹಾಗೂ ‘ಸುಗ್ಗಿಯ ಸೊಬಗಲ್ಲಿ ಸಂಗೀತ ಸಂಜೆ’ ಕಾರ್ಯಕ್ರಮವನ್ನು ಪ್ರಶಂಸೆ ವ್ಯಕ್ತಪಡಿಸಿದರು. ವಡವಾಟಿಯವರ ಜನುಮ ದಿನವನ್ನು ಕಲಾವಿದರ ದಿನವಾಗಿ ಹನ್ನೊಂದು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ನೂರ್ಕಾಲ ಇವರ ಕಲಾ ಸೇವೆ ಜಗತ್ತಿಗೆ ದಕ್ಕುತ್ತಿರಲಿ ಎಂದು ಆಶಯ ವ್ಯಕ್ತಪಡಿಸಿದರು. ನಮ್ಮ ಜೊತೆಯಲ್ಲಿ ಅನೇಕ ಕಲಾವಿದರಿದ್ದಾರೆ. ಅವರಿಗೆ ಸರಿಯಾದ ಅವಕಾಶ...