Posts

Image
ದೇವರ ನೂರಾರು ಕೀರ್ತನೆಗಳನ್ನು ರಚಿಸಿದ ಶ್ರೀ ರಾಮದಾಸರು ಶ್ರೇಷ್ಠ ಹರಿದಾಸರು - ಮುರಳೀಧರ ಕುಲಕರ್ಣಿ ಜಯಧ್ವಜ ನ್ಯೂಸ್ , ರಾಯಚೂರು ,ಡಿ.26-                                    ಬಡೇ ಸಾಹೇಬರು ಶ್ರೀರಾಮದಾಸರಾಗಿ   ಮದ್ವ ಮತಕ್ಕೆ  ಅನುಗುಣವಾಗಿ ಶ್ರೀರಾಮ ಅಂಕಿತದಿಂದ 800ಕ್ಕೂ ಅಧಿಕ ಸಂಕೀರ್ತನೆಗಳನ್ನು ರಚಿಸಿದ ಶ್ರೇಷ್ಠ  ಹರಿ ದಾಸ ರಾಗಿದ್ದಾರೆ .ಎಂದು  ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಯವರು ಹೇಳಿದರು.       ಅವರು ನಿನ್ನೆ ಬುಧವಾರ ಸಂಜೆ  ರಾಯಚೂರಿನ  ಜವಾಹರ ನಗರ ಬಯಲು ಆಂಜನೇಯ ದೇವಸ್ಥಾನದಲ್ಲಿ ಜರುಗಿದ 83ನೇ ಶ್ರೀ ರಾಮದಾಸರ ಆರಾಧನೆಯ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.    ರಾಯಚೂರು ಜಿಲ್ಲೆಯ ಜೋಳ ದಡಗಿ ಇವರ ಜನ್ಮಸ್ಥಳ ಗೋನವಾರ  ಇವರು ಓಡಾಡಿದ ತಾಣ ಲಿಂಗದಹಳ್ಳಿಯಲ್ಲಿ ಇವರ ಬೃಂದಾವನವಿದೆ. ವೈರಾಗ್ಯ ಭಾವನೆ ಯನ್ನು ತಾಳಿದ ಇವರು ಶ್ರೀರಾಮದೂತ ರಿಂದ ಅಂಕಿತ ಪಡೆದು ಅತ್ಯುತ್ತಮ  ಶೈಲಿಯ ಸಂಕೀರ್ತನೆಗಳನ್ನು, ಊಗಾ-ಬೋಗಗಳನ್ನು, ಶತಾಷ್ಟಕಗಳನ್ನು, ಕೋಲಾಟ, ಹಾಗು ಗೀಗಿ ಪದಗಳನ್ನು ರಚಿಸಿ  ದಾಸ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದಾರೆ ಇವರ ಕೃತಿಗಳನ್ನು ಮೈಸೂರು ವಿಶ್ವವಿದ್ಯಾ...
Image
  ನಗರದಲ್ಲಿ ಶ್ರೀ ಮದಾರ್ಯ ಅಕ್ಷೋಭ್ಯ ತೀರ್ಥರ ಆರಾಧನೆ ನಿಮಿತ್ಯ ವಿಚಾರ ಗೋಷ್ಠಿ.                                                            ಜಯ ಧ್ವಜ ನ್ಯೂಸ್, ರಾಯಚೂರು, ಡಿ.19-                                     ನಗರದ ಎನ್.ಜಿ ಓ ಕಾಲೋನಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಮದಾರ್ಯ ಅಕ್ಷೋಭ್ಯ ತೀರ್ಥರ ಆರಾಧನೆ ನಿಮಿತ್ಯ ವಿಚಾರ ಗೋಷ್ಠಿ ಹೊಮ್ಮಿಕೊಳ್ಳಲಾಗಿತ್ತು.            ದಿವ್ಯ ‌ಸಾನಿಧ್ಯವನ್ನು ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾವಿಜಯ ತೀರ್ಥ ಶ್ರೀಪಾದಂಗಳವರು ಮತ್ತು ಬಾಳಗಾರು ಮಠದ ಶ್ರೀ ಅಕ್ಷೋಭ್ಯ ರಾಮ‌ಪ್ರಿಯ ತೀರ್ಥರು ವಹಿಸಿದ್ದರು.    ವಿಚಾರ ಗೋಷ್ಠಿಯಲ್ಲಿ ಶ್ರೀ ವಾದಿರಾಜ ಆಚಾರ್, ದ್ವಾರಕಾನಾಥ್ ಆಚಾರ್, ರಾಜಶ್ರೀ ರಾಜಶ್ರೀ ಕಲ್ಲೂರಕರ್ , ಮಧುಮತಿ ದೇಶಪಾಂಡೆ , ಪವನ್ ಕುಮಾರ್ , ವಸುಧೇಂದ್ರ ಸಿರವಾರ ಸೇರಿದಂತೆ ಅನೇಕ ಸಂಪನ್ಮೂಲ ವ್ಯಕ್ತಿಗಳು ತಮ್ಮ ವಿಚಾರ ಮಂಡಿಸಿದರು. ಕಾರ್ಯಕ್ರಮದಲ್ಲಿ  ಪಂಡಿತರು, ದೇವಸ್ಥಾನ ಸಮಿತಿ ಪದಾ...
Image
  ಶಾಮ್ ಸುಂದರ್ ಗುರು ಸ್ವಾಮಿ ರವರಿಂದ ಶಬರಿಮಲೆಗೆ 27ನೇ  ವರ್ಷದ  ಮಹಾಪಾದಯಾತ್ರೆ   .        ಜಯಧ್ವಜ ನ್ಯೂಸ್ ರಾಯಚೂರು, ಡಿ.17-                                         ಪ್ರತಿ ವರ್ಷದಂತೆ ಈ ವರ್ಷವು ರಾಯಚೂರಿನಿಂದ ಶಬರಿಮಲೆಗೆ ಮಹಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಕಳೆದ 27 ವರ್ಷದಿಂದ ಸತತವಾಗಿ ಪಾದಯಾತ್ರೆ ನಡೆಸುತ್ತಿರುವುದು ಶಾಮಸುಂದರ ಗುರುಸ್ವಾಮಿ ಸ್ವಾಮಿಯೊಂದಿಗೆ 40 ಅಯ್ಯಪ್ಪಸ್ವಾಮಿ ಮಾಲಾಧಾರಿ ಸ್ವಾಮಿಗಳು ಹೊರಟಿದ್ದಾರೆ. ಸುಮಾರು 30 ದಿನಗಳ ಕಾಲ ಯಾತ್ರೆ ಇರುತ್ತದೆ ಆದೋನಿ, ಪತ್ತಿಕೊಂಡ ಗುತ್ತಿ ,ಅನಂತಪುರ, ಪೆನಕೊಂಡ ಚಿಕ್ಕಬಳ್ಳಾಪುರ, ದೇವನಹಳ್ಳಿ ವೈಟಫೀಲ್ಡ್, ಸರ್ಜಾಪುರ ಹೊಸೂರು (ತಮಿಳನಾಡು ) ಧರ್ಮಪುರಿ ತಪ್ಪುರು ಘಟ್ಟ ತರಾ ಮಂಗಲಮ್ ತೀರಚನಗೂಢ ಪರಮಾತೀವಿಲರು ಕರೂರು ಧಿಂಡ್ದಗಾಲ ಥೇನಿ ಕುಂಬ್ಳಿ (ಕೇರಳ) ವೇಡಿ ಪರಿಯರ್  ಸತ್ರಮ್ ಪುಲಿಮೆಡು  ರಸ್ತೆ  ಮಾರ್ಗವಾಗಿ ಶಬರಿಮಲೆ ತಲಪುತ್ತಾರೆ.  ಈ ಸಂದರ್ಭದಲ್ಲಿ ಶಾಮ್ ಗುರುಸ್ವಾಮಿ ಮಾತನಾಡಿ ಈ ವರ್ಷ ವಿಶೇಷವಾಗಿದ್ದು ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ 40 ಸ್ವಾಮಿಗಳಯೊಂದಿಗೆ ಪಾದಯಾತ್ರೆಯನ್ನು ಮಾಡವುದು ಅಯ್ಯಪ್ಪ ಅಶೀರ್ವಾವಾದದಿಂದ ಪ್ರಯಾಣವು ಯಶಸ್ವಿ ಯಾ...
Image
  ಕೃಷಿ ಪರಿಕರ ಮಾರಾಟಗಾರರು ಮತ್ತು ಕಂಪನಿ ಪ್ರತಿನಿಧಿಗಳ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿ     ಜಯ ಧ್ವಜ ನ್ಯೂಸ್ ರಾಯಚೂರು, ಡಿ.17- ರಾಯಚೂರು ಅಗ್ರಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಇತ್ತೀಚೆಗೆ ಎರೆಡು ದಿನಗಳ ಕಾಲ ನಡೆದ ಬಾಕ್ಸ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಕೃಷಿ ಪರಿಕರ ಮಾರಾಟಗಾರರು ಮತ್ತು ಕಂಪನಿ ಪ್ರತಿನಿಧಿಗಳ ಒಟ್ಟು ೧೪ ತಂಡಗಳು ಭಾಗವಹಿಸಿದ್ದರು. ಕ್ರೀಡಾಕೂಟದ ಅಂತಿಮ ಪಂದ್ಯದಲ್ಲಿ ಶ್ರೀ ಕೃಷ್ಣ ತಂಡ ಅಂಜನಿಪುತ್ರ ತಂಡವನ್ನು ಮಣಿಸಿತು. ಗೆದ್ದ ತಂಡಕ್ಕೆ ಕೃಷಿ ಪರಿಕರ ಮಾರಾಟಗಾರರು ಮತ್ತು ಕಂಪನಿ ಪ್ರತಿನಿಧಿಗಳ ಸಂಘದ ಗೌರವಾಧ್ಯಕ್ಷ ವಿ.ನಾಗಿರೆಡ್ಡಿ ಮತ್ತು ಸಂಘದ ಅಧ್ಯಕ್ಷ ಆನಂದರಾವ್ ಕಪ್ ವಿತರಿಸಿದರು.ಕೃಷಿ ಪರಿಕರ ಮಾರಾಟಗಾರರು ಮತ್ತು ಪ್ರತಿನಿಧಿಗಳು  ಭಾಗವಹಿಸಿದ್ದರು.
Image
  ಕಾಡ್ಲೂರಲ್ಲಿ ಶ್ರೀ ಹನುಮದವ್ರತ ಕಾರ್ಯಕ್ರಮ:                  ವಿದ್ಯಾರ್ಥಿಗಳಲ್ಲಿ ಗುರು ಭಕ್ತಿ ಮುಖ್ಯ- ಶ್ರೀ ನಿರ್ಭಯಾನಂದ ಸ್ವಾಮೀಜಿ                                                                                        ಜಯ ಧ್ವಜ ನ್ಯೂಸ್         ರಾಯಚೂರು,ಡಿ.15- ವಿದ್ಯಾರ್ಥಿಗಳಲ್ಲಿ ಗುರು ಭಕ್ತಿ ಮುಖ್ಯವೆಂದು ವಿಜಯಪುರ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ನಿರ್ಭಯಾನಂದ ಶ್ರೀಗಳು ನುಡಿದರು.                             ಅವರು ಶನಿವಾರ ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾನದಿ ತೀರದ ಶ್ರೀ ವನವಾಸಿ ರಾಮದೇವರ ಹಾಗೂ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ಮತ್ತು ಸ್ವಯಂಭೂ ರುದ್ರ ದೇವರ ಸನ್ನಿಧಾನದಲ್ಲಿ ಹನುಮದ ವ್ರತ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ  ಲಕ್ಷ ಪುಷ್ಪಾರ್ಚನೆ ನೆರವೇರಿಸಿ ಕಾಡ್ಲೂರು ಪ್ರೌಢಶಾಲೆ ವಿದ...
Image
ಕಾಡ್ಲೂರಲ್ಲಿ ಶ್ರೀ ಹನುಮದವ್ರತ ಕಾರ್ಯಕ್ರಮ:                            ಶ್ರೀ ಪ್ರಾಣದೇವರಿಗೆ ಬೆಣ್ಣೆ ಅಲಂಕಾರ                                                                         ರಾಯಚೂರು ,ಡಿ.13- ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ವನವಾಸಿ  ಶ್ರೀ ರಾಮದೇವರ ಹಾಗೂ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ಮತ್ತು ಸ್ವಯಂಭೂ ರುದ್ರ ದೇವರ ಸನ್ನಿಧಾನದಲ್ಲಿ ಶ್ರೀ ಹನುಮದವ್ರತ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು. ಬೆಳಿಗ್ಗೆ ಸುಪ್ರಬಾತ, ಧ್ವಜಾರೋಹಣ, ವಾಯುಸ್ತುತಿ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಹನುಮದವ್ರತ ಕಥೆ, ಪ್ರಾಣ ದೇವರಿಗೆ ನವನೀತ(ಬೆಣ್ಣೆ ಅಲಂಕಾರ) ಮಹಾಮಂಗಳಾರತಿ, ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ, ಶ್ರೀಧರ್ ಕುಲಕರ್ಣಿಯವರಿಂದ ದಾಸವಾಣಿ ನೆರವೇರಿತು ವಿರೇಂದ್ರ ಕುರ್ಡಿ  ಹಾರ್ಮೋನಿಯಮ್ ಸಾಥ್ ನೀಡಿದರು.   ರಾತ್ರಿ ಭಜನೆ, ಪಲ್ಲಕ್ಕಿ ಉತ್ಸವ ,ದೀಪೋತ್ಸವ, ತೆಪ್ಪೋತ್ಸವ , ಕೃಷ್ಣಾನದಿ ಆರತಿ ನೆರವೇರಿದವು .    ...
Image
  ಯೋಗೀಶ್ವರ ಯಾಜ್ಞವಲ್ಕ್ಯ ಬ್ರಹ್ಮರ್ಷಿ ಅನುಯಾಯಿಗಳ ಸಮ್ಮೇಳನಕ್ಕೆ ಆಹ್ವಾನ :ಕರಪತ್ರ ಬಿಡುಗಡೆ   ರಾಯಚೂರು,ಡಿ.12- ಶ್ರೀ ಯೋಗಿಶ್ವರ ಯಾಜ್ಞ ವಲ್ಕ್ಯ್ ಬ್ರಹ್ಮರ್ಷಿ ಅನುಯಾಯಿಗಳ ರಾಜ್ಯ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಸ್ವಾಗತ ಸಮಿತಿ ಕಾರ್ಯಧ್ಯಕ್ಷ ರಾದ ಶ್ರೀ ಸತ್ಯನಾರಾಯಣ ಮರಟಗೇರಿ ಹೇಳಿದರು. ಅವರು ಬುಧವಾರ ಶ್ರೀಮನ್ ಮಾಧವತೀರ್ಥರ ಸನ್ನಿಧಾನ ದಲ್ಲಿ ಯಾ.ಸ್ವ.ಸೇ.ಸ ಅಧ್ಯಕ್ಷರಾದ ಶ್ರೀ ರಮೇಶ ಬಾದರ್ಲಿ ,ಸತ್ಯನಾರಾಯಣ ಜೋಷಿ ಯವರ ಸಮ್ಮುಖದಲ್ಲಿ  *ರಾಜ್ಯ ಸಮ್ಮೇಳನದ ಕರಪತ್ರ* ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. *ಡಿಸೆಂಬರ್ 28 ಹಾಗೂ 29 ಎರಡು ದಿನಗಳ ಕಾಲ *ಸಮ್ಮೇಳನ ಹುಬ್ಬಳ್ಳಿಯ ಗೋಕುಲ್ ಗಾರ್ಡನ್* ನಲ್ಲಿ ನಡೆಯಲಿದೆ. 28 ರಂದು ಸಹಸ್ರ ಮೋದಕ ಗಣಪತಿ ಹೋಮ ನಡೆಯಲಿದೆ. ಸಮ್ಮೇಳನವನ್ನು ಹುಣಸಿಹೊಳೆ ಕಣ್ವಮಠದ ಪೀಠಾಧಿಪತಿಗಳಾದ *ಶ್ರೀ ಶ್ರೀವಿದ್ಯಾ ಕಣ್ವ ವಿರಾಜತೀರ್ಥ ಶ್ರೀಪಾದಂಗಳವರು ಉದ್ಘಾಟಿಸುವರು. * ಸ್ಮರಣ ಸಂಚಿಕೆ, ಭಜನಾ ಪುಸ್ತಕ ಬಿಡುಗಡೆ ಸೇರಿದಂತೆ ಹಲವು ವಿದಾಯಕ ವೇದಿಕೆ ಕಾರ್ಯಕ್ರಮಗಳು, ಗೋಷ್ಟಿಗಳು, ಶೋಭಯಾತ್ರೆ, ವಿಪ್ರ ನಗೆ 28 ರಂದು ನಡೆಯಲಿವೆ. ಮರುದಿನ 29 ರಂದು ವಿದ್ವದ್ ಗೋಷ್ಟಿಗಳು, ಮಹಿಳಾ ಗೋಷ್ಠಿಗಳು, ವಿವಿಧ ಸಾಧಕರಿಗೆ ಪ್ರಶಸ್ತಿಗಳ ಪ್ರದಾನ ಮಾಡಲಾಗುವುದು. ವಿವಿಧ ಮಠಗಳ ಪೀಠಾಧಿಪತಿಗಳು ದಿವ್ಯ ಸಾನಿಧ್ಯವನ್ನು ವಹಿಸುವರು.    ಎರಡು ದಿನ ನಡೆಯುವ ಸಮ್ಮೇಳನಕ...