Posts

Image
  ವಾಲ್ಮೀಕಿ ಶ್ರೀಗಳಿಗೆ ಲಘು ಹೃದಯಾಘಾತ, ರಾಯಚೂರಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೈದರಾಬಾದ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಜಯ ಧ್ವಜ ನ್ಯೂಸ್ , ರಾಯಚೂರು,ಫೆ.19 - ರಾಯಚೂರು ಜಿಲ್ಲಾ ಪ್ರವಾಸದಲ್ಲಿದ್ದರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಡಾ. ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಲಘು ಹೃದಯಾಘಾತಕ್ಕೆ ಒಳಗಾಗಿದ್ದರು. ಈಗ ಹೈದರಾಬಾದ್ ಆಸ್ಪತ್ರೆಯಲ್ಲಿ ಗುಣಮುಖರಾಗಿದ್ದಾರೆ. ಶ್ರೀಗಳು ಬುಧವಾರ ಬೆಳಿಗ್ಗೆ ತಿಂಥಣಿ ಬ್ರಿಜ್ ಸಮೀಪದ ಬಂಡೊಳ್ಳಿ ಗ್ರಾಮದಲ್ಲಿರುವ ಶ್ರೀ ಮಠದ ಉದ್ದೇಶಿತ ವಿದ್ಯಾಸಂಸ್ಥೆ ಮಾಡುವ ಸ್ಥಳಕ್ಕೆ ಭೆಟ್ಟಿ ನೀಡಿ ಸಮಾಜದ ಮುಖಂಡರೊಂದಿಗೆ ಸ್ಥಳ ವೀಕ್ಷಿಸಿ ಸಭೆ ಕೂಡ ಮಾಡಿದ್ದರು. ನಂತರ ಅಲ್ಲಿಯೇ ಇರುವ ಕನಕಗುರು ಪೀಠಕ್ಕೆ ತೆರಳಿ ಇತ್ತೀಚೆಗೆ ಲಿಂಗೈಕ್ಯರಾಗಿರುವ ಶ್ರೀ ಸಿದ್ದರಾಮಾನಂದ ಪುರಿ ಮಹಾಸ್ವಾಮಿಗಳ ಗದ್ದುಗೆಗೆ ಪೂಜೆ ನಮನ ಸಲ್ಲಿಸಿ  ಅಲ್ಲಿಂದ ಹಟ್ಟಿ ಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ತೆರಳಿದ್ದರು. ಬೆಳಿಗ್ಗೆ ಯಿಂದ ಗುರುಗಳು ಲವಲವಿಕೆಯಿಂದಲೇ ಇದ್ದರು. ಆದರೆ, ಹಟ್ಟಿಯಲ್ಲಿ ಲಘು ಹೃದಯಾಘಾತ ಉಂಟಾಗಿದ್ದರಿಂದ ತಕ್ಷಣವೇ ಅವರನ್ನು ರಾಯಚೂರಿನ ವಿಜಿ ಕುಲಕರ್ಣಿ ಹೃದಯ ಆಸ್ಪತ್ರೆಗೆ ಎಸ್ಕಾರ್ಟ್ ಸಹಾಯದೊಂದಿಗೆ ರಾತ್ರಿ 9 ಗಂಟೆ ವೇಳೆ ಸಮಯದಲ್ಲಿ ಆಗಮಿಸಿ ಸೇರಿಸಲಾಗಿತ್ತು.  ಈ ಸಂದರ್ಭದಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಕೆ.ಶಿವನಗೌಡ ನಾಯಕ ಅವರು ಮೊಬೈ...
Image
 ಫೆ. 21ರಂದು ರಾಷ್ಟ್ರೀಯ ಸಮಾವೇಶ – ರಿಯಲ್ ಎಸ್ಟೇಟ್ ಉದ್ಯಮಿಗಳು ಭಾಗವಹಿಸಲು ಮರೇಗೌಡ ಪಾಟೀಲ್  ಕರೆ ಜಯ ಧ್ವಜ ನ್ಯೂಸ್ ,ರಾಯಚೂರು ,ಫೆ.18-   ವೀರಶೈವ ಲಿಂಗಾಯತ ಸಮುದಾಯದ ಹಿತದೃಷ್ಟಿ ಇಟ್ಟುಕೊಂಡು ರಾಷ್ಟ್ರದಾದ್ಯಂತ ಪ್ರಾರಂಭಿಸಲಾಗಿರುವ ರಿಯಲ್ ಎಸ್ಟೇಟ್ ನೆಟ್ವರ್ಕ್‌ನ ಅಂಗವಾಗಿ ಇದೇ ತಿಂಗಳ 21ರಂದು ಬೆಂಗಳೂರಿನ ರಾಯಲ್ ಆರ್ಕಿಡ್ ರೆಸಾರ್ಟ್‌ನಲ್ಲಿ ರಾಷ್ಟ್ರೀಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ರಿಯಲ್ ಎಸ್ಟೇಟ್ ನೆಟ್ವರ್ಕ್ ನ ರಾಯಚೂರು ಜಿಲ್ಲಾಧ್ಯಕ್ಷರಾದ ಮರೇಗೌಡ ಪಾಟೀಲ್  ತಿಳಿಸಿದ್ದಾರೆ. ದೇಶ-ವಿದೇಶಗಳಿಂದ ಸಾವಿರಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಉದ್ಯಮಿಗಳು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ರಾಷ್ಟ್ರದ ವಿವಿಧ ಭಾಗಗಳಿಂದ ವೀರಶೈವ ಲಿಂಗಾಯತ ಸಮುದಾಯದ ಉದ್ಯಮಿಗಳು ಒಂದೇ ವೇದಿಕೆಯಲ್ಲಿ ಸೇರಿ ಪರಸ್ಪರ ಪರಿಚಯ, ಅಭಿಪ್ರಾಯ ವಿನಿಮಯ ಮತ್ತು ಉದ್ಯಮ ವಿಸ್ತರಣೆಯ ಕುರಿತು ಚರ್ಚಿಸಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಎದುರಾಗುತ್ತಿರುವ ಸವಾಲುಗಳು, ಕಾನೂನು ಸಂಬಂಧಿತ ಅಡೆತಡೆಗಳು ಹಾಗೂ ಮಾರುಕಟ್ಟೆ ಸ್ಥಿತಿಗತಿಗಳ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ನೆರವೇರಿಸಲಿದ್ದಾರೆ. ಶ್ರೇಷ್ಠ ಉದ್ಯಮ ರತ್ನ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರದಾನ ...
Image
       ಸ್ವರಾಜ್ಯದ ಸಿಂಹಗರ್ಜಕ - ಛತ್ರಪತಿ ಶಿವಾಜಿ ಮಹಾರಾಜರು ಭಾರತ ಭೂಖಂಡವು ಅನೇಕ ವೀರರ, ಮಹನೀಯರ, ಧರ್ಮಪರರ ಜನ್ಮಭೂಮಿ. ಧೈರ್ಯ, ಧರ್ಮನಿಷ್ಠೆ, ಸ್ವಾಭಿಮಾನ ಮತ್ತು ಪ್ರಜಾಹಿತ ಚಿಂತನೆಗಳನ್ನು ಒಟ್ಟುಗೂಡಿಸಿಕೊಂಡ ಮಹಾನ್ ರಾಜರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಅಗ್ರಗಣ್ಯರು. ಅವರ ಜೀವನವೇ ಒಂದು ಆದರ್ಶ ಗಾಥೆ. ಶಿವಾಜಿ ಮಹಾರಾಜರು ಶತ್ರುಗಳ ಎದುರು ನಿಂತ ಧೈರ್ಯಶಾಲಿ ಯೋಧರು. ಇವರು 1630ರ ಫೆಬ್ರವರಿ 19ರಂದು ಮಹಾರಾಷ್ಟ್ರದ ಶಿವನೇರಿ ಕೋಟೆಯಲ್ಲಿ  ಜನಿಸಿದರು. ಅವರ ತಂದೆ ಶಾಹಾಜಿ ಭೋಸಲೆ ಮತ್ತು ತಾಯಿ ಜಿಜಾಬಾಯಿ. ಬಾಲ್ಯದಿಂದಲೇ ಶಿವಾಜಿ ಕಷ್ಟ, ಸಹನಶೀಲ ಪರಿಸರದಲ್ಲಿ ಬೆಳೆದವರು. ಕೋಟೆಯ ಗಟ್ಟಿಯಾದ ಗೋಡೆಗಳ ನಡುವೆ ಹುಟ್ಟಿದ ಆ ಬಾಲಕನ ಮನಸ್ಸು ಕೂಡ ಅದೇ ರೀತಿ ದೃಢವಾಗಿತ್ತು. ಶಿವಾಜಿಯ ಬಾಲ್ಯ ಕೇವಲ ಬಾಲ್ಯವಲ್ಲ, ಅದು ಒಂದು ಮಹಾನ್ ನಾಯಕರ ರೂಪುಗೊಳ್ಳುವ ಪ್ರಕ್ರಿಯೆ. ತಾಯಿ ಸಂಸ್ಕಾರ, ಗುರುಗಳ ಮಾರ್ಗದರ್ಶನ, ಕಠಿಣ ಪರಿಸರ ಮತ್ತು ದೇಶಭಕ್ತಿಯ ಪ್ರೇರಣೆ – ಇವೆಲ್ಲವು ಸೇರಿ ಶಿವಾಜಿಯನ್ನು ಭವಿಷ್ಯದ ಮಹಾನ್ ರಾಜನನ್ನಾಗಿ ರೂಪಿಸಿತು. ಶಿವಾಜಿಯ ವ್ಯಕ್ತಿತ್ವ ರೂಪುಗೊಳ್ಳಲು ತಾಯಿ ಜಿಜಾಬಾಯಿಯ ಪಾತ್ರ ಅಪಾರ. ಅವರು ರಾಮಾಯಣ, ಮಹಾಭಾರತದ ವೀರಗಾಥೆಗಳನ್ನು ಹೇಳಿ ದೇಶಭಕ್ತಿ ಮತ್ತು ಧರ್ಮನಿಷ್ಠೆಯ ಬೀಜ ಬಿತ್ತಿದವರು. ಜಿಜಾಬಾಯಿ ತಮ್ಮ ಮಗನಲ್ಲಿ “ಸ್ವರಾಜ್ಯ” ಎಂಬ ಕನಸನ್ನು ನೆಟ್ಟು ಬೆಳೆಸಿದರು. ಬಾಲ ಶಿವಾಜಿಯ ಹೃದಯದಲ...
Image
  ಒಳ ಮೀಸಲಾತಿ ಉಪವರ್ಗೀಕರಣ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಮನವಿ.                                                            ಜಯ ಧ್ವಜ ನ್ಯೂಸ್ , ರಾಯಚೂರು, ಫೆ.18 - ಒಳ ಮೀಸಲಾತಿ ಗೊಂದಲ ನಿವಾರಿಸಿ ಉಪ ವರ್ಗಿಕರಣ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕೆಂದು ರಾಜ್ಯ ಬಲಗೈ ಜಾತಿಗಳ ಒಕ್ಕೂಟ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ. ಒಳ ಮೀಸಲಾತಿ ವರ್ಗಿಕರಣ ಗೊಂದಲಗಳು ನಿವಾರಣೆ ಮಾಡಿ ಹೊಸದಾಗಿ ರೋಷ್ಟರ್ ರಚಿಸಿ ಮೀಸಲಾತಿಯನ್ನು ಜಾರಿಗೆ ತಂದು ಉದ್ಯೋಗ ಮತ್ತು ಶಿಕ್ಷಣದಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ರವೀಂದ್ರ ನಾಥ್ ಪಟ್ಟಿ, ನರಸಿಂಹಲು ನೆಲಹಾಳ , ರಾಜು ಪಟ್ಟಿ ಚಂದ್ರಶೇಖರ ವಕೀಲ, ಭಾಸ್ಕರ್ ರಾಜ್, ಕೆ.ಪರಶುರಾಮ, ಎಂ.ಈರಣ್ಣ ಡಿಎಸ್ ಎಸ್ ಇನ್ನಿತರರು ಇದ್ದರು.
Image
  ಭರದಿಂದ ಸಾಗಿರುವ ಕೃಷ್ಣಾ ಬ್ರಿಡ್ಜ್  ಕಾಮಗಾರಿ ಸ್ವಾಗತಾರ್ಹ: ಡಾ.ಬಾಬುರಾವ್ ಜಯ ಧ್ವಜ ನ್ಯೂಸ್ ,ರಾಯಚೂರು, ಫೆ.17- ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸುವ ಬಹುದೊಡ್ಡ ಸೇತುವೆಯ ಬಾಕಿ ಇರುವ ಕಾಮಗಾರಿ ಜೂನ್ ತಿಂಗಳೊಳಗೆ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ ಎಂದು   ಎಪಿಎಂಸಿ ಮಾಜಿ ಉಪಾಧ್ಯಕ್ಷ ಹಾಗೂ ಸಮಾಜ ಸೇವಕ ಡಾ.ಬಾಬುರಾವ್ ತಿಳಿಸಿದ್ದಾರೆ.  ಟೆಂಡರ್ ಪ್ರಕಾರ ಈ ಕಾಮಗಾರಿ ನವೆಂಬರ್ 6, 2021 ರಂದು ಪ್ರಾರಂಭವಾಗಿ 2025ರ  ಅಕ್ಟೋಬರದೊಳಗೆ ಪೂರ್ಣಗೊಳಿಸಬೇಕಾಗಿತ್ತು.  ಆಮೆಗತಿಯಲ್ಲಿರುವ ಕಾಮಗಾರಿಗೆ  ವೇಗ ಕಲ್ಪಿಸಬೇಕೆಂದು ಸಂಬಂಧಪಟ್ಟವರಿಗೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಈಗ ಬ್ರಿಡ್ಜ್ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ದ್ವಿಪಥ ಸೇತುವೆ ಕಾಮಗಾರಿ 2026ರ ಜೂನ್ ತಿಂಗಳೊಳಗೆ ಪೂರ್ಣಗೊಂಡು ಸಂಚಾರಕ್ಕೆ ಮುಕ್ತಗೊಂಡ ನಂತರ ಅದಕ್ಕೆ ಹೊಂದಿಕೊಂಡಂತೆ ಮತ್ತೊಂದು  ದ್ವಿಪಥ ಸೇತುವೆ ಕಾಮಗಾರಿಯನ್ನು 2027 ರಲ್ಲಿ 150 ಕೋಟಿ ರೂ.ವೆಚ್ಚದಲ್ಲಿ ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಎರಡು ರಾಜ್ಯಗಳಿಂದ ಜನ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಕ್ಕೆ ಇದೇ ಬ್ರಿಡ್ಜ್ ನ್ನು ಉಪಯೋಗಿಸುತ್ತಿರುವುದರಿಂದ ಈಗ ಬ್ರಿಡ್ಜ್ ನ್ನು ಚತುಷ್ಪಥ ಸೇತುವೆಯ ನಿರ್ಮಾಣ ಕ್ಕೆ ಮುಂದಾಗಿ...
Image
ಹಿರಿಯ ಪತ್ರಕರ್ತ ದಿ. ಸೈಯದ್ ಅಶ್ರಫ್ ಕುಟುಂಬಕ್ಕೆ ರಾಯಚೂರು ರಿಪೋರ್ಟರ್ಸ ಗಿಲ್ಡ್ ನಿಂದ 1 ಲಕ್ಷ ರೂ. ನೆರವು: ರಿಪೋರ್ಟರ್ಸ್ ಗಿಲ್ಡ್ ಕಾರ್ಯ ಶ್ಲಾಘನೀಯ –  ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಜಯ ಧ್ವಜ ನ್ಯೂಸ್ ,ರಾಯಚೂರು, ಫೆ.16-  ಇತ್ತೀಚೆಗೆ ನಿಧನರಾದ ರಾಯಚೂರಿನ ಹಿರಿಯ ಪತ್ರಕರ್ತ ಸೈಯದ್ ಅಶ್ರಫ್ ಅವರ ಕುಟುಂಬಕ್ಕೆ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್‌ನ ಪತ್ರಕರ್ತರ ತುರ್ತು ನಿಧಿಯಿಂದ  1 ಲಕ್ಷ ರೂಪಾಯಿ ಚೆಕ್ ವಿತರಿಸಲಾಯಿತು.   ನಗರದ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ‌ನ‌‌ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ವಿಧಾನಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್  ಮೃತರ ಕುಟುಂಬಕ್ಕೆ 1 ಲಕ್ಷ ರೂಪಾಯಿಯ ಚೆಕ್ ವಿತರಿಸಿದರು. ಬಳಿಕ ಮಾತನಾಡಿದ ಸಲೀಂ ಅಹ್ಮದ್ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ಮೃತ ಪತ್ರಕರ್ತರ ಕುಟುಂಬಕ್ಕೆ ನೆರವು ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಪತ್ರಕರ್ತರು ಸಮಾಜದ ಎರಡು ಕಣ್ಣುಗಳಂತೆ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ತಪ್ಪುಗಳನ್ನು ತೋರಿಸುವುದಲ್ಲದೆ ಜನರ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತರುವ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಸರ್ಕಾರಕ್ಕೂ ಪತ್ರಕರ್ತರ ಅವಶ್ಯಕತೆ ಸದಾ ಇದೆ ಎಂದು ಹೇಳಿದರು. ರಾಯಚೂರು ರಿಪೋರ್ಟರ‌್ಸ್ ಗಿಲ್ಡ್‌ನ ತುರ್ತು ನಿಧಿಗೆ ಅನುದಾನ ಒದಗಿಸುವ ಕುರಿತು ಮುಖ್ಯಮಂತ್ರಿ ಹಾಗೂ ಮಾಧ್ಯಮ ಸಲಹೆಗಾ...
Image
  ಕುಲಶಾಸ್ತ್ರೀಯ ಅಧ್ಯಯನದಂತೆ ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಸಿಎಂಗೆ ಮನವಿ  ಜಯ ಧ್ವಜ ನ್ಯೂಸ್ ,ರಾಯಚೂರು, ಫೆ.14 - 'ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಕುರಿತು  ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡು 2018ರಿಂದ ಬಾಕಿಯಿರುವ ಕಡತಕ್ಕೆ ರಾಜ್ಯ ಸರ್ಕಾರದ ಅನುಮೋದನೆ ನೀಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಅಖಿಲ ಕರ್ನಾಟಕ ಹೆಳವ ಸಮಾಜದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಾಜ ರಾಜ್ಯಾದ್ಯಕ್ಷ ನಾಗರಾಜ ಗುರೂಜಿ ಅವರು ಮನವಿ ಸಲ್ಲಿಸಿದರು. ಹೆಳವ ಸಮಾಜವು ಶತಮಾನಗಳಿಂದಲೂ ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಹಿಂದುಳಿತವನ್ನು ಅನುಭವಿಸುತ್ತ ಬಂದಿದೆ.ಈ ವಾಸ್ತವ ಸ್ಥಿತಿಯನ್ನು ಗುರುತಿಸಿ ನ್ಯಾಯ ಒದಗಿಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿರುವ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ವತಿಯಿಂದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಮಾನವಶಾಸ್ತ್ರ ವಿಭಾಗದ ಡಾ.ಎಲ್.ಶ್ರೀನಿವಾಸರವರು ಕರ್ನಾಟಕದ ಪಿಚ್ಚಿಗುಂಟ್ಲ, ಹೆಳವ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಳಿಸಿ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಗೆ 2018 ರಲ್ಲಿ ವರದಿ ಸಲ್ಲಿಸಿದ್ದಾರೆ. 2018 ರಿಂದಲೂ ಈ ಮಹತ್ವದ ಕಡತವು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರ ಕಚೇರಿಯಲ್ಲಿ ಅನುಮೋದನೆಗಾಗಿ ಕಾಯುತ್ತಿದೆ ಎಂಬುದು ಅತ್ಯಂ...