Posts

Showing posts from December, 2023

35 ವರ್ಷಗಳಿಂದ ಸತತವಾಗಿ ಗುರುಗಳ ಸಂಗೀತ ಸಮ್ಮೇಳನ ಮಾಡುತ್ತಿರುವುದು ಗುರು ಭಕ್ತಿಯನ್ನು ತೋರಿಸುತ್ತದೆ- ಸಂಸದ ರಾಜಾಅಮರೇಶ್ವರ ನಾಯಕ

Image
    35 ವರ್ಷಗಳಿಂದ ಸತತವಾಗಿ ಗುರುಗಳ ಸಂಗೀತ ಸಮ್ಮೇಳನ ಮಾಡುತ್ತಿರುವುದು ಗುರು ಭಕ್ತಿಯನ್ನು ತೋರಿಸುತ್ತದೆ- ಸಂಸದ ರಾಜಾಅಮರೇಶ್ವರ ನಾಯಕ  ರಾಯಚೂರು,ಡಿ.31-ಸಿದ್ದರಾಮ ಜಂಬಲದಿನ್ನಿಯವರ ಶಿಷ್ಯರಾಗಿ ಸಂಗೀತ  ಸಾಧನೆಯ ಮೂಲಕ ಡಾ. ಪಂಡಿತ್ ನರಸಿಂಹಲು ವಡವಾಟಿಯವರು ಪ್ರಪಂಚಕ್ಕೆ ಮುಟ್ಟಿದ್ದಾರೆ ಎಂದು ಲೋಕಸಭೆಯ ಸಂಸದರಾದ ರಾಜ ಅಮರೇಶ್ವರ  ನಾಯಕ ಅಭಿಪ್ರಾಯ ಪಟ್ಟರು.       ಉದಯನಗರದ ಸ್ವರ ಸಂಗಮ ಸಂಗೀತ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪಂಡಿತ್ ಸಿದ್ದರಾಮ ಜಂಬಲದಿನ್ನಿಯವರ ಸ್ಮರಣಾರ್ಥ ಏರ್ಪಡಿಸಿದ್ದ 35ನೇ ಸಂಗೀತ ಸಮ್ಮೇಳನದಲ್ಲಿ ಸಾಧನೆಯನ್ನು ಏಕಾಗ್ರ ಚಿತ್ತದಿಂದ ಮಾಡಬೇಕಾಗುತ್ತದೆ. ನಮ್ಮ ಮಕ್ಕಳು, ಯುವಕರು ಪಾಶ್ಚ್ಯಾತ್ಯ ಸಂಗೀತಕ್ಕೆ ಆಕರ್ಷಿತರಾಗತಿದ್ದರೆ, ಪಾಶ್ಚ್ಯಾತ್ಯರು ನಮ್ಮ ಸಂಗೀತಕ್ಕೆ ಮಾರುಹೋಗುತ್ತಿದ್ದಾರೆ. ನಮ್ಮ ಸಂಸ್ಕೃತಿ ಅಭಿವೃದ್ಧಿಯಾಗಬೇಕು. ವಿದೇಶದಿಂದ ಬಂದು ವಡವಾಟಿಯವರ ಬಳಿ ಕಲಿಯುತ್ತಿದ್ದಾರೆ ನಾವು ಅವರನ್ನು ಬಳಸಿಕೊಳ್ಳಬೇಕು. 35 ವರ್ಷಗಳಿಂದ ಸತತವಾಗಿ ಗುರುಗಳ ಸಂಗೀತ ಸಮ್ಮೇಳನ ಮಾಡುತ್ತಿರುವುದು ಗುರು ಭಕ್ತಿಯನ್ನು ತೋರಿಸುತ್ತದೆ, ಎಂದು ಅಭಿನಂದಿಸಿದರು.      ವಡವಾಟಿಯವರು  ಸಿದ್ದರಾಮ ಜಂಬಲದಿನ್ನಿಯವರ ಹೆಸರನ್ನು ರಂಗಮಂದಿರಕ್ಕೆ ನಾಮಕರಣ ಮಾಡಿಸುವುದರ ಮೂಲಕ ಗುರುಗಳ ಹೆಸರನ್ನು ಚಿರಸ್ತಾಯಿಯಾಗಿಸಿದ್ದಾರೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಣ್ಣ ಹವಳೇ  ಸನ್ಮಾನ ಸ್ವೀಕರಿಸಿ ಮಾತನಾಡಿದರು.        ಆಧ್ಯಾತ

ಪರ್ಯಾವರಣ ಸಂರಕ್ಷಣಾ ಗತಿವಿಧಿ ಅಭ್ಯಾಸವರ್ಗ ಉಧ್ಘಾಟನೆ.

Image
  ಪರ್ಯಾವರಣ ಸಂರಕ್ಷಣಾ ಗತಿವಿಧಿ ಅಭ್ಯಾಸವರ್ಗ ಉಧ್ಘಾಟನೆ.                                                                        ರಾಯಚೂರು,ಡಿ.31- ಪರಿಸರ ಸಂರಕ್ಷಿಸದಿದ್ದರೆ ಮುಂದಿನ ಪೀಳಿಗೆಗೆ ಆಪತ್ತು ಕಾದಿದೆ ಎಂದು ಯುವ ಕೃಷಿಕ, ಪರಿಸರ ಪ್ರೇಮಿ ಅಶೋಕ್ ಮಾಲಿಪಾಟೀಲ್ ಹೇಳಿದರು.                 ಅವರಿಂದು ನಗರದ ಆರ್ ಟಿ ಓ ವೃತ್ತದ ಬಳಿಯ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಪರ್ಯಾವರಣ ಗತಿವಿಧಿ ಕರ್ನಾಟಕ ಉತ್ತರ ಬಳ್ಳಾರಿ ವಿಭಾಗದ ಅಭ್ಯಾಸ ವರ್ಗದಲ್ಲಿ ವಿಷಯ‌ಮಂಡನೆ ಮಾಡಿದರು.                     ನಾನು ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕನಾಗಿ ಕಾರ್ಯ ನಿರ್ವಹಿಸಿದ್ದು ಸದ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ನಮ್ಮ ಪರಿಸರ ನಾಶವಾಗಿದೆ ಶೇ.0.35ಅರಣ್ಯ ಉಳಿದಿದೆ ಕಾಂಕ್ರೀಟೀಕರಣ, ಕೈಗಾರಿಕೆ, ಉಷ್ಣ ವಿದ್ಯುತ್ ಘಟಕಗಳಿಂದ ಪರಿಸರಕ್ಕೆ ಮಾರಕವಾಗಿದೆ ನಮ್ಮ ಜಿಲ್ಲೆಯಲ್ಲಿಯೇ ಉಷ್ಣವಿದ್ಯುತ್ ಘಟಕದಿಂದ ಮಳೆ ಬೆಳೆ ಕುಂಠಿತವಾಗಿದೆ ಇದಕ್ಕೆ ಪರ್ಯಾಯ ಮಾರ್ಗವೆಂದರೆ ಪ್ರತಿಯೊಬ್ಬರು ಒಂದು ಗಿಡ ನೆಡಬೇಕು ಎಂದರು. ಗ್ರೀನ್ ರಾಯಚೂರು ಸಂಸ್ಥೆಯ ರಾಜೇಂದ್ರ ಶಿವಾಳೆ ಮಾತನಾಡಿ ಜ.22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಲಿದ್ದು ಅಂದು ನಾವೆಲ್ಲರು ರಾಮನ ಹೆಸರಲ್ಲಿ ಒಂದು ಗಿಡ ನೆಡುವ ಸಂಕಲ್ಪ ಮಾಡೋಣವೆಂದರು.                                ವೇದಿಕೆ ಮೇಲೆ ಸಾಗರ್ ಇದ್ದರು. ಈ ಸಂದರ್ಭದಲ್ಲಿ ಲಾಲಾಜಿ ಪಟೇಲ್ ಇನ್

ಸಮಪಾಲು ಪಡೆಯಲು ಎಲ್ಲ ಹಿಂದುಳಿದ, ಶೋಷಿತ ಸಮಾಜದವರ ಒಗ್ಗಟ್ಟು ಪ್ರದರ್ಶನ ಅಗತ್ಯ- ರಾಮಚಂದ್ರಪ್ಪ

Image
  ಸಮಪಾಲು ಪಡೆಯಲು ಎಲ್ಲ ಹಿಂದುಳಿದ, ಶೋಷಿತ ಸಮಾಜದವರ ಒಗ್ಗಟ್ಟು ಪ್ರದರ್ಶನ ಅಗತ್ಯ- ರಾಮಚಂದ್ರಪ್ಪ   ರಾಯಚೂರು,ಡಿ.31-ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಮಪಾಲು ಪಡೆಯಲು ಎಲ್ಲ ಹಿಂದುಳಿದ, ಶೋಷಿತ ಸಮಾಜದವರು ಒಗ್ಗಟ್ಟು ಪ್ರದರ್ಶನ ಮಾಡುವ ಅಗತ್ಯ ಇದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಹೇಳಿದರು. ಇಂದು ರಾಯಚೂರಿನ ಮಡಿವಾಳ ಸಮಾಜದ ಸಮುದಾಯ ಭವನದಲ್ಲಿ ಜನವರಿ 28 ರಂದು ಚಿತ್ರದುರ್ಗದಲ್ಲಿ ನಡೆಯುವ ಶೋಷಿತರ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸ್ವತಂತ್ರ ದೊರೆತ ನಂತರ ಹಿಂದುಳಿದ ವರ್ಗಗಳ ಸ್ಥಿಿತಿಗತಿ ಅಧ್ಯಯನಕ್ಕೆೆ ರವನೆಯಾದ ಆಯೋಗದಿಂದ ನೀಡಿದ ಎಲ್ಲ ವರದಿಗಳಿಗೂ ಮುಂದುವರಿದ ಜನಾಂಗದವರು ವಿರೋಧ ಮಾಡಿಕೊಂಡು ಬಂದಿದ್ದು ಈಗಲೂ ಸಹ ಕಾಂತರಾಜ ವರದಿ ಜಾರಿಗೆ ವಿರೋಧಿಸುತ್ತಿದ್ದು ಅದನ್ನು ನಾವು ಪ್ರಬಲವಾಗಿ ಖಂಡಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಸಲಹೆ ಮಾಡಿದರು. ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ನಮ್ಮ ಜನಸಂಖ್ಯೆೆಗನುಗುಣವಾಗಿ ಸಿಗಬೇಕಾದ ಪಾಲು ಸಿಗುತ್ತಿಿಲ್ಲಘಿ. ನಮಗೆ ಸಿಗಬೇಕಾದ ಸೌಲಭ್ಯಗಳು ಮುಂದುವರಿದ ಜಾತಿಗಳು ಕಬಳಿಸುತ್ತಿಿದ್ದರೂ ನಾವು ವೌನ ವಹಿಸಿದ್ದೇವೆ. ಶೇ.56ರಷ್ಟಿಿರುವ ಹಿಂದುಳಿದ ಸಮಾಜದವರಿಗೆ ಕೇವಲ ಶೇ.27ರಷ್ಟು ಮಾತ್ರ ಇದೆ. ಇಂತಹ ಅನ್ಯಾಾಯ ಕಳೆದ ಏಳು ದಶಕದಿಂದಲೂ ಸಹಿಸುತ್ತ ಬಂದಿದ್ದೇವೆ. ಆದರೆ, ಈಗ ಅದನ್ನು ಮೆಟ್

ತಿಮ್ಮಾಪುರ ಏತ ನೀರಾವರಿ ಯೋಜನೆಯ ಲೋಕಾರ್ಪಣೆ ಸಮಾರಂಭ : ಸಿಂಧನೂರು ತಾಲೂಕನ್ನು ಪರಿಪೂರ್ಣ ನೀರಾವರಿಗೊಳಪಡಿಸಲು ಒತ್ತು- ಸಿಎಂ ಸಿದ್ಧರಾಮಯ್ಯ

Image
ತಿಮ್ಮಾಪುರ ಏತ ನೀರಾವರಿ ಯೋಜನೆಯ ಲೋಕಾರ್ಪಣೆ ಸಮಾರಂಭ :                      ಸಿಂಧನೂ ರು ತಾಲೂಕನ್ನು ಪರಿಪೂರ್ಣ ನೀರಾವರಿಗೊಳಪಡಿಸಲು ಒತ್ತು- ಸಿಎಂ ಸಿದ್ಧರಾಮಯ್ಯ ರಾಯಚೂರು, ಡಿ.30-ಸಿಂಧನೂರ ತಾಲೂಕಿನಲ್ಲಿ ಈಗಾಗಲೆ ಶೇ.80ರಷ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಕ್ಕಿದೆ. ಇನ್ನುಳಿದ ಪ್ರದೇಶವನ್ನು ಸಹ ನೀರಾವರಿ ವ್ಯಾಪ್ತಿಗೊಳಪಡಿಸಲು ಒತ್ತು ಕೊಡಲಾಗುವುದು ಎಂದು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಹೇಳಿದರು. ಪಟ್ಟಣದ ಕುಷ್ಟಗಿ ರಸ್ತೆಯಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಡಿಸೆಂಬರ್ 30 ರಂದು ನಡೆದ ಮಹತ್ವದ ತಿಮ್ಮಾಪುರ ಏತ ನೀರಾವರಿ ಯೋಜನೆಯ ಲೋಕಾರ್ಪಣೆ, ಜಲಜೀವನ ಮಿಷನ್ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಸರ್ಕಾರಿ ಪದವಿ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಮತ್ತು ಕರ್ನಾಟಕ ಸಂಭ್ರಮ-50ರ ರಥಯಾತ್ರೆಗೆ ಚಾಲನೆ ಮತ್ತು ಸಿಂಧನೂರ ವಿಧಾನಸಭಾ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭಕ್ಕೆ ಸಂವಿಧಾನ ಪೀಠಿಕೆ ಓದುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ 27,000 ಎಕರೆ ಪ್ರದೇಶಕ್ಕೆ ನೀರು ಸಿಗುತ್ತಿರಲಿಲ್ಲ. ಈ ಭಾಗದ ಜನರು ಶಾಸಕರಾದ ಹಂಪನಗೌಡ ಬಾದರ್ಲಿ ಅವರ ಮೇಲೆ ಒತ್ತಡ ಹಾಕಿ ತಮಗೆ ನೀರು ಕೊಡಿ ಎಂದು ಬೇಡಿಕಿ ಇಟ್ಟಿದ್ದರು

ನಗರಸಭೆ ವಾರ್ಡ್ ನಂ.12 ಉಪಚುನಾವಣೆಯಲ್ಲಿ ಎಂ.ಪವನ್ ಕುಮಾರ್ ಗೆಲುವು.

Image
  ನಗರಸಭೆ ವಾರ್ಡ್ ನಂ.12  ಉಪಚುನಾವಣೆಯಲ್ಲಿ ಎಂ.ಪವನ್ ಕುಮಾರ್ ಗೆಲುವು.                       ರಾಯಚೂರು,ಡಿ.30-ನಗರಸಭೆ ವಾರ್ಡ್ ನಂ.12 ಮಂಗಳವಾರ ಪೇಟೆ ಉಪಚುನಾವಣೆಯಲ್ಲಿ ಎಂ.ಪವನ್ ಕುಮಾರ್ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಿದ್ದಾರೆ.                           ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಅವರಿಗೆ 2627 ಮತಗಳು ಲಭಿಸಿದ್ದು ಇನ್ನುಳಿದಂತೆ ಪ್ರತಿ ಸ್ಪರ್ಧಿಗಳಾದ    ಮೀರ್ ಅಬ್ದುಲ್ ರಹೀಂ ರವರಿಗೆ 359 ಮತಗಳು ಹಾಗೂ ನೂರ್ ಪಾಷಾ ರವರಿಗೆ 140 ಮತಗಳು ಲಭಿಸಿದ್ದು ನೋಟಾ ಮತಗಳು 18 ಚಲಾವಣೆಗೊಂಡಿವೆ. ಈ.ವಿನಯ್ ಕುಮಾರ್ ರಾಜೀನಾಮೆಯಿಂದ ಇಲ್ಲಿ ಉಪಚುನಾವಣೆ ನಡೆದಿತ್ತು.

ಶೃತಿ ಸಾಹಿತ್ಯ ಮೇಳದಿಂದ ಕುವೆಂಪು ಜನ್ಮ ದಿನಾಚರಣೆ: ಜಗತ್ತಿಗೆ ವಿಶ್ವಮಾನವತ್ವವನ್ನು ಸಾರಿದ ಮನುಜ ಮತದ ಜಗದ ಕವಿ ಕುವೆಂಪು- ಡಾ. ಜಯಲಕ್ಷ್ಮಿ ಮಂಗಳಮೂರ್ತಿ

Image
  ಶೃತಿ ಸಾಹಿತ್ಯ ಮೇಳದಿಂದ ಕುವೆಂಪು ಜನ್ಮ ದಿನಾಚರಣೆ:   ಜಗತ್ತಿಗೆ ವಿಶ್ವಮಾನವತ್ವವನ್ನು ಸಾರಿದ ಮನುಜ ಮತದ ಜಗದ ಕವಿ ಕುವೆಂಪು- ಡಾ. ಜಯಲಕ್ಷ್ಮಿ ಮಂಗಳಮೂರ್ತಿ ರಾಯಚೂರು ,ಡಿ.29-  ರಾಷ್ಟ್ರಕವಿ ಕುವೆಂಪು ಅವರು ನಾಡು ಕಂಡ ಶ್ರೇಷ್ಠ ದಾರ್ಶನಿಕರು,ರಸ ಋಷಿಗಳು, ಯುಗದ ಕವಿಗಳು, ಮಹಾ ಮಾನವತಾವಾದಿಗಳು, ವಿಶ್ವ ಮಾನವತೆಯ ಪ್ರಜ್ಞೆಯನ್ನು ಬಿತ್ತಿದ ಶ್ರೇಷ್ಠ ಧಿ:ಶಕ್ತಿಯ ಜಗದ ಕವಿಗಳು ಇಂದಿನ ಸಂಕೀರ್ಣ ಸಮಾಜದಲ್ಲಿಯೂ ಅವರ ವಿಚಾರಧಾರೆಗಳು ಪ್ರಸ್ತುತತೆ ಮೂಲಕ ಜೀವಂತವಾಗಿವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಾಗೂ ಶ್ರುತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರಾದ ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರು ಹೇಳಿದರು.    ಅವರು ಇಂದು ಸಂಜೆ ಜವಾಹರ್ ನಗರ ಪ್ರೌಡಶಾಲೆ  ಆವರಣದಲ್ಲಿ ಶೃತಿ  ಸಾಹಿತ್ಯ ಮೇಳ ರಾಯಚೂರು ವತಿಯಿಂದ ಹಮ್ಮಿಕೊಂಡ ರಾಷ್ಟ್ರಕವಿ ಕುವೆಂಪು ಅವರ 119ನೇ ಜನ್ಮದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.   ಕನ್ನಡವೆಂದರೆ ಕುವೆಂಪು ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೆ ಏರಿಸಿದ ಮಹಚೇತನ, ಅವರ ಸಣ್ಣ ಕಥೆಗಳು ,ಕವನಗಳು, ಕಾದಂಬರಿಗಳು, ನಾಟಕಗಳು, ಮಹಾಕಾವ್ಯಗಳು, ವಿಮರ್ಶೆ ಹೀಗೆ ಹಲವಾರು ಸಾಹಿತ್ಯದ ಪ್ರಕಾರಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಲ್ಲದೆ ಕನ್ನಡದ ಅಸ್ಮಿತತೆಗೆ ಕಾರಣ ಕರ್ತ ವಾಗಿವೆ.ಕುವೆಂಪು ಅವರು ವಿಶ್ವ ಕಂಡ ಅಪರೂಪದ ತತ್ವಜ್ಞಾನಿಗಳು ಎಂದು ಹೇಳಿದರು.  ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮು

ರಾಜ್ಯ ಮಟ್ಟದ ಮೂರನೇ ವೈಜ್ಞಾನಿಕ ಸಮ್ಮೇಳನ ಉದ್ಘಾಟನೆ: ಮೂಡನಂಬಿಕೆ ತೊಲಗಿಸಲು ಪ್ರತಿಯೊಬ್ಬರು ಪ್ರಯತ್ನಿಸಬೇಕು- ಎನ್.ಎಸ್ ಬೋಸರಾಜು

Image
  ರಾಜ್ಯ ಮಟ್ಟದ ಮೂರನೇ ವೈಜ್ಞಾನಿಕ ಸಮ್ಮೇಳನ ಉದ್ಘಾಟನೆ: ಮೂಡನಂಬಿಕೆ ತೊಲಗಿಸಲು ಪ್ರತಿಯೊಬ್ಬರು ಪ್ರಯತ್ನಿಸಬೇಕು-  ಎನ್.ಎಸ್ ಬೋಸರಾಜು ರಾಯಚೂರು,ಡಿ.29- ಸಮಾಜದಲ್ಲಿರುವ ಮೌಡ್ಯತೆಯನ್ನು ತೊಲಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಯತ್ನಿಸಬೇಕು. ಮತ್ತು ಮೌಡ್ಯತೆಯಿಂದ ಜನರೊಗಾಗುವ ತೊಂದರೆಗಳನ್ನು ಪರಿಹರಿಸುವ ಕಾರ್ಯವಾಗಬೇಕು ಅಂದಾಗ ಮಾತ್ರ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಅವರು ಹೇಳಿದರು. ಅವರು ಇಂದು ಲಿಂಗಸುಗೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮೂರನೇ ವೈಜ್ಞಾನಿಕ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ವಿಜ್ಞಾನ ವಲಯ ಸಾಕಷ್ಟು ಮುಂದುವರೆಯುತ್ತಿದ್ದು, ಆದರೆ ಕೆಲವು ಮೂಡನಂಬಿಕೆ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಜನರಿಗೆ ಅನೇಕ ತೊಂದರೆಗಳಾಗುತ್ತಿದ್ದು, ಮೌಡ್ಯತೆಯನ್ನು ಹೋಗಲಾಡಿಸಲು ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ಸಮಾಜದಲ್ಲಿ ಜನರು ಉತ್ತಮ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದರು. ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ಇತ್ತೀಚಿನ ಯುಗಮಾನಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗ

ಪಂಡಿತ ಸಿದ್ದರಾಮ ಜಂಬಲದಿನ್ನಿ ಪುಣ್ಯ ಸ್ಮರಣೆ:ಡಿ.30 ರಂದು ಸಂಗೀತ ಸಮ್ಮೇಳನ-ಡಾ.ನರಸಿಂಹಲು ವಡವಾಟಿ

Image
  ಪಂಡಿತ ಸಿದ್ದರಾಮ ಜಂಬಲದಿನ್ನಿ ಪುಣ್ಯ ಸ್ಮರಣೆ:                          ಡಿ.30 ರಂದು ಸಂಗೀತ ಸಮ್ಮೇಳನ- ಡಾ.ನರಸಿಂಹಲು ವಡವಾಟಿ .                        ರಾಯಚೂರು,ಡಿ.28-ಸ್ವರ ಸಂಗಮ ಸಂಗೀತ ವಿದ್ಯಾ ಸಂಸ್ಥೆಯಿಂದ ಸಿದ್ಧರಾಮ ಜಂಬಲದಿನ್ನಿಯವರ ಪುಣ್ಯಸ್ಮರಣೆ ಅಂಗವಾಗಿ  ಡಿ.30 ರಂದು 35ನೇ ವರ್ಷದ ಸಂಗೀತ ಸಮ್ಮೇಳನ ಆಯೋಜಿಸಲಾಗಿದೆ ಎಂದು ಖ್ಯಾತ ಕ್ಲಾರಿಯೋನೆಟ್ ವಾದಕ ಡಾ.ಪಂಡಿತ ನರಸಿಂಹಲು ವಡವಾಟಿ ಹೇಳಿದರು.     ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಸಂಜೆ 6 ಕ್ಕೆ ನಗರದ ಉದಯ ನಗರದ  ಸ್ವರ ಸಂಗಮ ಸಂಗೀತ ವಿದ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ. ಉದ್ಘಾಟನೆಯನ್ನು ಸಂಸದ ಅಮರೇಶ್ವರ ನಾಯಕ ನೆರವೇರಿಸಲಿದ್ದು, ಅಧ್ಯಕ್ಷತೆಯನ್ಞು ಜಿಲ್ಲಾ ಎಸ್ಪಿ ನಿಖಿಲ್.ಬಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ರಮೇಶ ಸಾಗರ,ಡಾ.ಶಿವಪ್ರಸಾದ ಜಂಬಲದಿನ್ನಿ,ಅಲ್ಲಮಪ್ರಭು ಬೆಟ್ಟದೂರು ಆಗಮಿಸಲಿದ್ದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಣ್ಣ ಹವಳೆ ಯವರಿಗೆ ಸನ್ಮಾನ ನಡೆಯಲಿದೆ. ದೇಶದ ಖ್ಯಾತ ಸಂಗೀತಗಾರರು, ಕಲಾವಿದರು, ವಾದಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಅಂದು ಬೆಳಿಗ್ಗೆ ಮೊದಲಿಗೆ ಕುಷ್ಠರೋಗ ಕಾಲೋನಿಯ

ನಾಳೆ ಶ್ರುತಿ ಸಾಹಿತ್ಯ ಮೇಳ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ

Image
  ನಾಳೆ  ಶ್ರುತಿ ಸಾಹಿತ್ಯ ಮೇಳ  ವತಿಯಿಂದ  ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ     ರಾಯಚೂರು,ಡಿ.28- ನಗರದ ಸಾಂಸ್ಕೃತಿಕ, ಸಾಹಿತಿಕ ಸಂಘಟನೆಯಾದ ಶ್ರುತಿ ಸಾಹಿತ್ಯ ಮೇಳ ರಾಯಚೂರು  ವತಿಯಿಂದ ನಾಡಿನ ರಾಷ್ಟ್ರಕವಿ, ಯುಗದ ಕವಿ, ಜಗದ ಕವಿ ಕುವೆಂಪು ಅವರ 119 ನೇ ಜನ್ಮದಿನಾಚರಣೆಯನ್ನು ನಾಳೆ ಡಿ.29 ಸಂಜೆ 5:00ಗೆ ಜವಾಹರ ನಗರ ಪ್ರೌಢಶಾಲೆಯಲ್ಲಿ ಆಚರಿಸಲಾಗುತ್ತಿದೆ.     ಈ ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯದ ವಿದ್ವಾಂಸರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಾಗೂ ಶ್ರುತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರಾದ ಡಾಕ್ಟರ್ ಜಯಲಕ್ಷ್ಮಿ ಮಂಗಳಮೂರ್ತಿಯವರು ಭಾಗವಹಿಸಲಿದ್ದಾರೆ. ಇದರಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಬೇಕಾಗಿ   ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷರಾದ ಮುರಳಿಧರ ಕುಲಕರ್ಣಿ ಅವರು ವಿನಂತಿಸಿದ್ದಾರೆ.

ಬೆಂಗಳೂರಿನಲ್ಲಿ ಬಾಬುರಾವ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ

Image
  ಬೆಂಗಳೂರಿನಲ್ಲಿ ಬಾಬುರಾವ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ರಾಯಚೂರು,ಡಿ.28-   ನಗರದ ಸಮಾಜ ಸೇವಕರು, ರಾಜಕೀಯ ಧುರೀಣರು, ರೈಲ್ವೆ ಬೋರ್ಡಿನ ಸಲಹಾಗಾರರಾದ   ಬಾಬುರಾವ್ ಇವರಿಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಮದರ್ ತೆರೇಸಾ ವಿಶ್ವವಿದ್ಯಾಲಯದಿಂದ ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್ ಪದವಿಯನ್ನು ಬೆಂಗಳೂರಿನ ಹೋಟೆಲ್ ಪರಾಗದಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು.       ಯಶಸ್ವಿ ಚಂದ್ರಯಾನದ ರೂವಾರಿಯಾಗಿರುವ ಭಾರತ ಸರ್ಕಾರದ ಡಿ ಆರ್ ಡಿ ಯು ಹಾಗೂ ವಿಜ್ಞಾನಿಗಳಾದ ಡಾಕ್ಟರ್ ಎನ್ ಪ್ರಭಾಕರ್ ಅವರು ಸಮಾರಂಭದಲ್ಲಿ ಭಾಗವಹಿಸಿ ಗೌರವ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿದರು.     ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ರಾಯಭಾರಿಗಳಾದ ಡಾ. ಜಿ ರಾಬರ್ಟ್ ಡೊನಾಲ್ಡ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪದವಿ ಸ್ವೀಕರಿಸುತ್ತಿರುವವರಿಗೆ ಶುಭ ಹಾರೈಸಿದರು.   ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಶಿವರಾಜ್ ಪಾಟೀಲ್ ಇವರು ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದ ಶ್ರೀ ಬಾಬುರಾವ್ ಅವರ ಸಮಾಜ ಸೇವೆಯು ಶ್ಲಾಘನೀಯವಾಗಿದೆ ಎಂದು ಶುಭ ಹಾರೈಸಿದರು.     ಅದೇ ರೀತಿ ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಸಚಿವರಾದ ಶ್ರೀ ಎನ್ ಎಸ್ ಬೋಸ್ ರಾಜ್ ಅವರು ಶ್ರೀ ಬಾಬುರಾವ್ ಅವರ ಸಾಮಾಜಿಕ ಸೇವೆ ಯನ್ನು ಮಾಡಿದ ಪ್ರಯುಕ್ತ ಅವರಿಗೆ ಸಂದ ಗೌರವವಾಗಿದೆ ಎಂದು ಅಭಿನಂದಿಸಿದ್ದಾರೆ.    

ಅಯೋಧ್ಯೆಯ ಶ್ರೀ ರಾಮನ ದೇವಸ್ಥಾನದ ವಿದ್ಯುತ್ ದೀಪಾಲಂಕಾರಕ್ಕೆ ಸುಬುಧೇಂದ್ರ ತೀರ್ಥರು ಚಾಲನೆ

Image
  ಅಯೋಧ್ಯೆಯ ಶ್ರೀ ರಾಮನ ದೇವಸ್ಥಾನದ ವಿದ್ಯುತ್ ದೀಪಾಲಂಕಾರಕ್ಕೆ  ಸುಬುಧೇಂದ್ರ ತೀರ್ಥರು ಚಾಲನೆ     ರಾಯಚೂರು,ಡಿ.28- ಅಯೋಧ್ಯೆಯ ಶ್ರೀ ರಾಮನ ದೇವಸ್ಥಾನ ಉದ್ಘಾಟನೆಗೆ ಅಣಿಯಾಗುತ್ತಿದ್ದು, ದೇವಸ್ಥಾನದ ವಿದ್ಯುತ್  ಸಂಪರ್ಕ ಹಾಗೂ ವಿದ್ಯುತ್ ಅಲಂಕಾರಕ್ಕೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಚಾಲನೆ  ನೀಡಿದರು.  ನಂತರ ಮಾತನಾಡಿ, ಪ್ರಭು ಶ್ರೀರಾಮನ ಜನ್ಮಸ್ಥಳ ಹಾಗೂ ದೇಶದ ಪ್ರಮುಖ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಒಂದಾದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿ ಉದ್ಘಾಟನೆಗೆ ಅಣಿಯಾಗುತ್ತಿದ್ದು, ಹಿಂದೂಗಳ ಬಹುದಿನಗಳ ಕನಸು ನನಸಾಗುತ್ತಿದೆ. ಇದರ ಹಿಂದೆ ರಾಮ ಮಂದಿರ ನಿರ್ಮಾಣ ಸೇವಾ ಟ್ರಸ್ಟ್  ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ್ದು, ಮಂದಿರದ ವಿದ್ಯುತ್ ದೀಪಾಲಂಕಾರ ಕಾರ್ಯ ನಮ್ಮ ರಾಜ್ಯದವರು ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ನಗರ ಸ್ಥಳೀಯ ಸಂಸ್ಥೆಗಳಿಗೆ ಉಪ ಚುನಾವಣೆ ಶಾಂತಿಯುತ ಮತದಾನ : ರಾಯಚೂರು ನಗರದ ವಾರ್ಡ್ ನಂ.12ರಲ್ಲಿ ಶೇ.56.87ರಷ್ಟು ಮತದಾನ

Image
  ನಗರ ಸ್ಥಳೀಯ ಸಂಸ್ಥೆಗಳಿಗೆ ಉಪ ಚುನಾವಣೆ ಶಾಂತಿಯುತ ಮತದಾನ  :                                       ರಾಯಚೂರು ನಗರದ ವಾರ್ಡ್ ನಂ.12ರಲ್ಲಿ  ಶೇ.56.87ರಷ್ಟು ಮತದಾನ  ರಾಯಚೂರು,ಡಿ.27- 2023ರ ನಗರ ಸ್ಥಳೀಯ ಸಂಸ್ಥೆಗಳ ಉಪಚುನಾವಣೆ ಹಿನ್ನಲೆಯಲ್ಲಿ ಡಿ.27ರಂದು ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ರಾಯಚೂರು ನಗರಸಭೆ, ಸಿಂಧನೂರು ನಗರಸಭೆ, ಹಾಗೂ ದೇವದುರ್ಗ ಪುರಸಭೆ ಉಪಚುನಾವಣೆಯ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಜರುಗಿತು. ರಾಯಚೂರು ನಗರದ ಮತಗಟ್ಟೆಗೆ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ ಅವರು ಭೇಟಿ ನೀಡಿ ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಯಾವುದೇ ಅಹಿತಕರ ಘಟನೆಗಳು ಮತ್ತು ಯಾವುದೇ ಲೋಪದೋಷಗಳಾಗದಂತೆ ಮತದಾನ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ಅಚ್ಚುಕಟ್ಟಾಗಿ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ರಾಯಚೂರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.12ರಲ್ಲಿ ಒಟ್ಟು 5 ಮತಗಟ್ಟೆಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಒಟ್ಟು 5528 ಮತದಾರರಿದ್ದು, ಇದರಲ್ಲಿ ಪುರುಷ ಮತದಾರರು 1633 ಹಾಗೂ ಮಹಿಳಾ ಮತದಾರರು 1511 ಸೇರಿ ಒಟ್ಟು 3144 ಮತದಾರರು ಮತದಾನ ಮಾಡಿದರು ಶೇ.56.87ರಷ್ಟು ಮತದಾನ ರಾಯಚೂರು ನಗರದ ವಾರ್ಡ್ ನಂ.12ರಲ್ಲಿ ನಡೆದ ಚುನಾವಣೆಯಲ್ಲಿ ಆಗಿದೆ. ಸಿಂಧನೂರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.22ರ 22 ಹಾಗೂ 22(ಎ) ಒಟ್ಟು 2 ಮತಗಟ್ಟೆಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಒಟ್ಟು 170

ಕಾಡ್ಲೂರಲ್ಲಿ ಶ್ರೀ ರಾಘವೇಂದ್ರ ಮಕ್ಕಳ ಕೂಟ(ಆಟದ ಉದ್ಯಾನ )ಉದ್ಘಾಟನೆ: ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು - ಸುವರ್ಣಾ ಬಾಯಿ ದೇಸಾಯಿ

Image
  ಕಾಡ್ಲೂರಲ್ಲಿ ಶ್ರೀ ರಾಘವೇಂದ್ರ ಮಕ್ಕಳ ಕೂಟ(ಆಟದ ಉದ್ಯಾನ ) ಉದ್ಘಾಟನೆ:                        ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು - ಸುವರ್ಣಾ ಬಾಯಿ ದೇಸಾಯಿ.                  ರಾಯಚೂರು,ಡಿ.26- ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಕಾಡ್ಲೂರು ಸಂಸ್ಥಾನದ ಸುವರ್ಣಾಬಾಯಿ ದೇಸಾಯಿ ಹೇಳಿದರು.                              ಅವರು ತಾಲೂಕಿನ ಕಾಡ್ಲೂರು ಗ್ರಾಮದಲ್ಲಿ ಕಾಡ್ಲೂರು ಸಂಸ್ಥಾನ ಹಾಗೂ ರಂಗದೇ ವತಿಯಿಂದ ನಿರ್ಮಿಸಿದ ಶ್ರೀ ರಾಘವೇಂದ್ರ ಮಕ್ಕಳ ಕೂಟ (ಆಟದ ಉದ್ಯಾನ ) ಉದ್ಘಾಟನೆ ನೆರವೇರಿಸಿ ಮಾತನಾಡಿ ಮಕ್ಕಳಿಗೆ ಶಿಕ್ಷಣ ಜೊತೆ ಆಟೋಟಗಳಲ್ಲಿಯೂ ಆಸಕ್ತಿ ಹೊಂದಬೇಕೆಂದರು.                                  ಆಟದ ಉದ್ಯಾನ ನಾಮಫಲಕ ಅನಾವರಣಗೊಳಿಸಿದ ಶ್ರೀ ವಿಜಯದಾಸರ ವಂಶಸ್ಥರಾದ ಜಗನ್ನಾಥ ದಾಸ ಚೀಕಲಪರ್ವಿ ಮಾತನಾಡಿ ಕಾಡ್ಲೂರು ಸಂಸ್ಥಾನ ಈ ಮೊದಲಿನಿಂದಲು ಪರೋಪಕಾರಿ ಮನೋಭಾವ ಬೆಳೆಸಿಕೊಂಡಿದ್ದು ಮಕ್ಕಳಿಗೆ ಆಟವಾಡಲು ಆಟದ ಉದ್ಯಾನ ನಿರ್ಮಿಸಿದ್ದು ಶ್ಲಾಘನೀಯವಾದುದು.                                      ಶ್ರೀ ರಾಘವೇಂದ್ರ ಮಕ್ಕಳ ಕೂಟದ ನಿರ್ಮಾಣದ ರೂವಾರಿ ರಂಗರಾವ್ ದೇಸಾಯಿ ಕಾಡ್ಲೂರು ಮಾತನಾಡಿ ತಾವು ಉದ್ಯೋಗ ಮಾಡುವ ಭಾಷ್ ಕಂಪನಿ ನೂರು ವರ್ಷ ಪೂರೈಸಿದ್ದು ಅವರು ಹೊರತಂದ ವಿಶೇಷ ಸಂಚಿಕೆಯಲ್ಲಿ ರಂಗದೇ ಮೂಲಕ ಮಾಡಿದ ಸಾಮಾಜಿಕ ಕಾರ್ಯದ ಬಗ್ಗೆ ಲೇಖನ ಪ್ರಕಟಗೊ

ಜ.5ರಂದು ಮಂಗಳೂರಿನಲ್ಲಿ ಕೆಯುಡಬ್ಲ್ಯೂಜೆ ಸರ್ವ ಸದಸ್ಯರ ಮಹಾಸಭೆ:ಜಿಲ್ಲೆಯ ಸರ್ವ ಸದಸ್ಯರು ಪಾಲ್ಗೊಳ್ಳಲು ಮನವಿ

Image
  ಜ.5ರಂದು ಮಂಗಳೂರಿನಲ್ಲಿ ಕೆಯುಡಬ್ಲ್ಯೂಜೆ ಸರ್ವ ಸದಸ್ಯರ ಮಹಾಸಭೆ-ಜಿಲ್ಲೆಯ ಸರ್ವ ಸದಸ್ಯರು ಪಾಲ್ಗೊಳ್ಳಲು ಮನವಿ ರಾಯಚೂರು,ಡಿ.25-ಮಂಗಳೂರಿನ ಸಹ್ಯಾದ್ರಿ ಕಾಲೇಜ್  ಇಂಜಿನಿಯರಿಂಗ್ ಸಭಾಂಗಣದಲ್ಲಿ ಜ.5ರಂದು ಬೆಳಗ್ಗೆ 11ಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2022-23ನೇ ಸಾಲಿನ 90ನೇ ಸರ್ವಸದಸ್ಯರ ಮಹಾಸಭೆ ಜರುಗಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ತಿಳಿಸಿದ್ದಾರೆ. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿಗಳನ್ನು ಓದಿ ಅನುಮೋದಿಸಲಾಗುವುದು. 2022-23ನೇ ಸಾಲಿನ ವಾರ್ಷಿಕ ವರದಿ ಮಂಡನೆ ಹಾಗೂ ಅನುಮೋದನೆ ನೀಡಲಾಗುವುದು. 2022-23ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನಾ ವರದಿ ಮಂಡನೆ ಮಾಡಿ ಅನುಮೋದನೆ ನಡೆಯಲಾಗುತ್ತಿದೆ. ಕರ್ನಾಟಕ ಯುನಿಯನ್ ವರ್ಕಿಂಗ್ ಜರ್ನಲಿಸ್ಟ್ ಎಂಬ ಹೆಸರನ್ನು ಆಡಳಿತ ಭಾಷೆಯಾದ ಕನ್ನಡದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಎಂದು ಬೈಲಾದ ಶಿರೋನಾಮೆಯಲ್ಲಿ ತಿದ್ದುಪಡಿ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧ್ಯಕ್ಷ ಆರ್.ಗುರುನಾಥ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಪಾಷಾ ಹಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.            

ಕಾಡ್ಲೂರಲ್ಲಿ ಶ್ರೀ ಹನುಮದವ್ರತ ಅಂಗವಾಗಿ ಲಕ್ಷ ಪುಷ್ಪಾರ್ಚನೆ.

Image
  ಕಾಡ್ಲೂರಲ್ಲಿ ಶ್ರೀ ಹನುಮದವ್ರತ ಅಂಗವಾಗಿ ಲಕ್ಷ ಪುಷ್ಪಾರ್ಚನೆ.                  ರಾಯಚೂರು,ಡಿ.24- ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ಶ್ರೀ ವನವಾಸಿ ರಾಮದೇವರ ಹಾಗೂ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ಸನ್ನಿದಾನದಲ್ಲಿ ಶ್ರೀ ಹನುಮದವ್ರತ ಅಂಗವಾಗಿ ಪ್ರಾಣದೇವರಿಗೆ ಲಕ್ಷ ಪುಷ್ಪಾರ್ಚನೆ ನೆರವೇರಿತು.     ಬೆಳಿಗ್ಗೆ ನೀರ್ಮಾಲ್ಯ, ಸುಪ್ರಭಾತ, ಪಂಚಾಮೃತ ಅಭಿಷೇಕ, ಶ್ರೀ ಹನುಮದವ್ರತ ಕಥೆ, ನೈವೇದ್ಯ,ಮಹಾ ಮಂಗಳಾರತಿ , ತೀರ್ಥ ಪ್ರಸಾದ ವಿನಿಯೋಗ ನಡೆಯಿತು.                                                 ಸಾಯಂಕಾಲ ಚೀಕಲಪರವಿ ಶ್ರೀ ವಿಜಯದಾಸರ ವಂಶಸ್ಥರಿಂದ ನಾಮಸಂಕೀರ್ತನೆ, ಭಜನೆ, ಪಲ್ಲಕ್ಕಿ ಉತ್ಸವ, ಮಂಗಳಾರತಿ, ದೀಪೋತ್ಸವ,ಕೃಷ್ಣಾ ನದಿ ಆರತಿ (ಕೃಷ್ಣಾರತಿ), ತೆಪ್ಪೋತ್ಸವ, ಬಾಣ ಬಿರುಸು ನಡೆಯಿತು.       ಈ ಸಂದರ್ಭದಲ್ಲಿ ಜಗನ್ನಾಥ ದಾಸ, ಪ್ರಶಾಂತ್ ದಾಸ, ವೆಂಕೋಬಾಚಾರ್ ಪುರೋಹಿತ, ದಾಮೋದರಾಚಾರ್ ಪುರೋಹಿತ, ಅನಂತಆಚಾರ್ ಕೊಪ್ಪರ, ಯಂಕೋಬಾಚಾರ್  ಮಾಳಗಿ, ಪ್ರಹಲ್ಲಾದ ಆಚಾರ್ಯ ಜೋಷಿ, ನಾರಾಯಣರಾವ್ ಕುಲಕರ್ಣಿ, ರಂಗರಾವ ದೇಸಾಯಿ, ಜಯಕುಮಾರ ದೇಸಾಯಿ, ವಿಜಯಕುಮಾರ್ ದೇಸಾಯಿ,ಡಾ. ವಾಸುದೇವ ಜಹಾಗೀರದಾರ್, ಕೃಷ್ಣಮೂರ್ತಿ ಹೆಬಸೂರು,ಅಭಿಷೇಕ ದೇಸಾಯಿ,ತಾರಾನಾಥ್ ಜೇಗರಕಲ್, ಭೀಮಸೇನ ಕುಲಕರ್ಣಿ, ಗುರುಪ್ರಸಾದ್ ಕುಲಕರ್ಣಿ, ಸುಧನ್ವ, ಅನಿಲ್, ಆನಂದ ಆಲೂರು, ವೆಂಕಟೇಶ, ರಘುಮಾನ್ಯ, ಸುವರ್ಣಾ ಬಾಯಿ ದೇಸಾಯಿ,

ಭಗವದ್ಗೀತಾ ಸಮರ್ಪಣ ಕಾರ್ಯಕ್ರಮ : ಶ್ರೀ ಭಗವದ್ಗೀತೆ ಬಹು ಅಮೂಲ್ಯ ಗ್ರಂಥವಾಗಿದೆ-ಶ್ರೀ ನಿಜಾನಂದ ಮಹಾಸ್ವಾಮಿಗಳು

Image
  ಭಗವದ್ಗೀತಾ ಸಮರ್ಪಣ ಕಾರ್ಯಕ್ರಮ :                              ಶ್ರೀ ಭಗವದ್ಗೀತೆ ಬಹು ಅಮೂಲ್ಯ ಗ್ರಂಥವಾಗಿದೆ-  ಶ್ರೀ ನಿಜಾನಂದ ಮಹಾಸ್ವಾಮಿಗಳು   ರಾಯಚೂರು, ಡಿ.24-ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಸ್ವರ್ಣವಲ್ಲಿ ಮಠ ಸೋಂದ ಶಿರಸಿ ಇವರ ಮಾರ್ಗದರ್ಶನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಭಗವದ್ಗೀತಾ ಸಮರ್ಪಣ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಶ್ರೀ ಶಂಕರ ಮಠ ರಾಯಚೂರಿನಲ್ಲಿ ಸಂಪನ್ನಗೊಂಡಿತು. ದಿವ್ಯ ಸಾನಿಧ್ಯ ವನ್ನು ಮಿಟ್ಟಿ ಮಲ್ಕಾಪುರ ಶಾಂತಾಶ್ರಮದ ಪರಮಪೂಜ್ಯ ಶ್ರೀ ಶ್ರೋ. ಬ್ರ.ಶ್ರೀ ನಿಜಾನಂದ ಮಹಾಸ್ವಾಮಿಗಳು ಶ್ರೀ ಭಗವದ್ಗೀತೆ ಬಹು ಅಮೂಲ್ಯ ಗ್ರಂಥವಾಗಿದೆ ಈ ಗ್ರಂಥದ ಪಠಣ ಮನನ ಬಾಲ್ಯದಿಂದಲೇ ಆರಂಭವಾಗಬೇಕಾಗಿದೆ. ಜೀವನದಲ್ಲಿ ಬರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಈ ಗೀತೆಯಲ್ಲಿದೆ. ಜೀವನ ಆನಂದಮಯವಾಗಿ ಇರಬೇಕಾದರೆ ಭಗವದ್ಗೀತೆ ಅತ್ಯಂತ ಸಹಕಾರಿಯಾಗಿದೆ. ಶ್ರೀ ಕೃಷ್ಣ ಅರ್ಜುನನ ನಿಮಿತ್ತ ಮಾಡಿ ನಮ್ಮೆಲ್ಲರಿಗೂ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಿದರು. ಗೀತಾ ಭಕ್ತರು ಅತ್ಯಂತ ಶ್ರದ್ಧೆಯಿಂದ ಸುಶ್ರಾವ್ಯವಾಗಿ ಭಗವದ್ಗೀತೆಯ ಹತ್ತನೇ ಅಧ್ಯಾಯ ವಿಭೂತಿ ಯೋಗವನ್ನು ಸಮರ್ಪಣೆ ಮಾಡಿದರು. ಮುಂಚಿತವಾಗಿ ನಡೆದ ಭಗವದ್ಗೀತೆ ಕುರಿ ತಾ ದ ಕಂಠ ಪಾಠ ಸ್ಪರ್ಧೆ ಭಾಷ ನ ಸ್ಪರ್ಧೆ ರಸಪ್ರಶ್ನೆ ರಂಗೋಲಿ ಸ್ಪರ್ಧೆ ಮತ್ತು ಭಗವದ್ಗೀತೆಯಲ್ಲಿ ಬರುವ ಪಾತ್ರಗಳ ಚಿತ್ರಗಳ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಮ

ಕಾಡ್ಲೂರಲ್ಲಿ ಡಿ.24 ರಿಂದ 26 ರವರೆಗೆ ಶ್ರೀ ಹನುಮದ ವ್ರತ ಕಾರ್ಯಕ್ರಮ : ನಾಳೆ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರಿಗೆ ಲಕ್ಷ ಪುಷ್ಪಾರ್ಚನೆ

Image
    ಕಾಡ್ಲೂರಲ್ಲಿ ಡಿ.24 ರಿಂದ 26 ರವರೆಗೆ ಶ್ರೀ ಹನುಮದ ವ್ರತ ಕಾರ್ಯಕ್ರಮ:      ನಾಳೆ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರಿಗೆ ಲಕ್ಷ ಪುಷ್ಪಾರ್ಚನೆ                                                          ರಾಯಚೂರು,ಡಿ. 23-ಶ್ರೀ ವನವಾಸಿ ರಾಮ ದೇವರ,  ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಮುಖ್ಯಪ್ರಾಣ ದೇವರ ಹಾಗೂ ಶ್ರೀ ಸ್ವಯಂಭೂ ರುದ್ರ ದೇವರ ಸನ್ನಿಧಾನ, ಕೃಷ್ಣ ನದಿ ತೀರ, ಕಾಡ್ಲೂರಲ್ಲಿ ಡಿ.24 ರಿಂದ 26ರವರೆಗೆ ಶ್ರೀ ಹನುಮದ್ ವ್ರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಅಂದರೆ ಶ್ರೀ ಶೋಭನಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ದ್ವಾದಶಿ/ತ್ರಯೋದಶಿ ರವಿವಾರ, ದಿ.24, ದಿ.25 ಚತುರ್ದಶಿ ಸೋಮವಾರ ದಂದು ಹಾಗೂ ದಿನ.26 ಹುಣ್ಣಿಮೆ ಮಂಗಳವಾರ ದಂದು ಕಾಡ್ಲೂರು ಸಂಸ್ಥಾನ ದ ವತಿಯಿಂದ ಶ್ರೀ ಹನುಮದ್ ವ್ರತ ಕಾರ್ಯಕ್ರಮನ್ನು ಆಚರಿಸಲಾಗುತ್ತಿದೆ. ಕಾರ್ಯಕ್ರಮಗಳ ವಿವರ : ದ್ವಾದಶಿ/ತ್ರಯೋದಶಿ (ರವಿವಾರ, ದಿ. 24.12.2023), ಶ್ರೀ ಹನುಮದ್ ವ್ರತ ಬೆಳಿಗ್ಗೆ 5:30 ಕ್ಕೆ ಧ್ವಜಾರೋಹಣ ⁠5:45 ಕ್ಕೆ ನಿರ್ಮಾಲ್ಯ  ⁠6 ಕ್ಕೆ ಪಂಚಾಮೃತ ಅಭಿಷೇಕ, ವಾಯುಸ್ತುತಿ, ಅಷ್ಟೋತ್ತರ  ⁠7 ಕ್ಕೆ ಶ್ರೀ ಮುಖ್ಯಪ್ರಾಣ ದೇವರಿಗೆ ಲಕ್ಷ ಪುಷ್ಪಾರ್ಚನೆ 8 ಕ್ಕೆ ಹನುಮದ್ ವ್ರತ ಪೂಜೆ, ಕಥೆ 8:30 ಕ್ಕೆ ರಜತ ಕವಚ ಅಲಂಕಾರ, ಮಹಾಮಂಗಳಾರತಿ  ⁠9 ಕ್ಕೆ ತೀರ್ಥಪ್ರಸಾದ ನಂತರ ಸಾಯಂಕಾಲ 5:30 ಕ್

ಡಿ.24 ರಂದು ಎಕೆಬಿಎಂಎಸ್ ಕ್ಯಾಲೆಂಡರ್ ಬಿಡುಗಡೆ ಹಾಗೂ ವಿಪ್ರ ಸಾಧಕರಿಗೆ ಸನ್ಮಾನ.

Image
  ಡಿ.24 ರಂದು ಎಕೆಬಿಎಂಎಸ್ ಕ್ಯಾಲೆಂಡರ್ ಬಿಡುಗಡೆ ಹಾಗೂ ವಿಪ್ರ ಸಾಧಕರಿಗೆ ಸನ್ಮಾನ .            ರಾಯಚೂರು,ಡಿ.22- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 2024ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಹಾಗು ವಿಪ್ರ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಡಿ.24 ರಂದು ಆಯೋಜಿಸಲಾಗಿದೆ.                                 ಅಂದು ಸಂಜೆ 5.30ಕ್ಕೆ ಬೊಳಮಾನದೊಡ್ಡಿ ರಸ್ತೆಯ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮ ಉದ್ಘಾಟನೆಯನ್ನು ಮಂತ್ರಾಲಯ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ಡಾ.ಎನ್.ವಾದಿರಾಜಾಚಾರ್ಯ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಎಕೆಬಿಎಂಎಸ್ ಹಿರಿಯ ರಾಜ್ಯ ಪರಿಷತ್ ಸದಸ್ಯ ನರಸಿಂಗರಾವ್ ದೇಶಪಾಂಡೆ, ಎಕೆಬಿಎಂಎಸ್ ರಾಜ್ಯ ಉಪಾಧ್ಯಕ್ಷ ಡಾ.ಆನಂದತೀರ್ಥ ಫಡ್ನೀಸ್ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಎಕೆಬಿಎಂಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಜಿಲ್ಲಾ ಪ್ರಧಾನ ಸಂಚಾಲಕ ಡಿ.ಕೆ.ಮುರಳೀಧರ್ ವಹಿಸಲಿದ್ದಾರೆ.                           ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರಾದ ಕಿಶನರಾವ್ ಜಾಲಿಹಾಳ, ದಾಸ ಸಾಹಿತ್ಯ ವಿದುಷಿ ಗಳಾದ ಡಾ.ಸುಧಾ ದೇಶಪಾಂಡೆ ರವರಿಗೆ ಸನ್ಮಾನ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿಪ್ರರು ಪಾಲ್ಗೊಳ್ಳುವಂತೆ ಕೋರಲಾಗಿದೆ.