Posts

Showing posts from February, 2024

ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 13ನೇ ಘಟಿಕೋತ್ಸವ: ಕೃಷಿ ಕ್ಷೇತ್ರ ದೇಶದ ಆಧಾರ ಸ್ತಂಭ -ರಾಜ್ಯಪಾಲರು.

Image
ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 13ನೇ ಘಟಿಕೋತ್ಸವ:                    ಕೃಷಿ ಕ್ಷೇತ್ರ ದೇಶದ ಆಧಾರ ಸ್ತಂಭ -ರಾಜ್ಯಪಾಲರು.                                                                        ರಾಯಚೂರು,ಫೆ.29- ಕೃಷಿ ಕ್ಷೇತ್ರ ಭಾರತದ ಆಧಾರ ಸ್ತಂಭವಾಗಿದೆ ಎಂದು ಘನತವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಅವರಿಂದು ಕೃಷಿ ವಿವಿ ಪ್ರೇಕ್ಷಾಗೃಹದಲ್ಲಿ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು. ಜಿಡಿಪಿ ಬೆಳವಣಿಯಲ್ಲಿ ಕೃಷಿ ಕ್ಷೇತ್ರ ಮಹತ್ತರ ಪಾತ್ರ ವಹಿಸುತ್ತದೆ ಎಂದ ಅವರು ಕೃಷಿ ಕ್ಷೇತ್ರದಲ್ಲಿ ಹೊಸ ವಿಕಾಸ್ ತರಲು ವಿಶ್ವವಿದ್ಯಾಲಯ ಪಾತ್ರ ಹಿರಿದಾಗಿದೆ ಎಂದರು.  ಸಿರಿಧಾನ್ಯಕ್ಕೆ ಉತ್ತೇಜನ ನೀಡಲು ಸುಮಾರು 25 ಕೋಟಿ  ರೂ ವೆಚ್ಚದಲ್ಲಿ ಸಿರಿಧಾನ್ಯ ಪಾರ್ಕ್ ಸ್ಥಾಪನೆಗೆ ಮುಂದಾಗಿದೆ ಎಂದರು. ಪದವಿ ಸ್ನಾತಕೋತ್ತರ ಪದವಿ, ಪಿಹೆಚ್ ಡಿ ಪಡೆದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಲಿ ಎಂದರು .ಆತ್ಮ ನಿರ್ಭರ ಭಾರತಕ್ಕೆ ಕೃಷಿ ಕ್ಷೇತ್ರ ಸಹಕಾರಿಯಾಗಲಿದೆ ಎಂದ ಅವರು ನಮ್ಮ ದೇಶ ಸದೃಡವಾಗಲು ಶಿಕ್ಷಣದಿಂದ ಮಾತ್ರ ಸಾಧ್ಯವೆಂದರು. ಕೃಷಿಯಲ್ಲಿ ಮಹಿಳೆಯರು ತೊಡಗಿಸಿಕೊಂಡು ಸ್ವಾವಲಂಬಿಯಾಗಿ ದ್ದಾರೆ ಎಂದರು. ಕೃಷಿ ಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆ ರೂಪಿಸಿವೆ ಎಂದರು.ಕೃಷಿ ವಿಜ್ಞಾನಿಗಳು ರೈ

ಮಾರ್ಚ್ 1ರಿಂದ ಕೃಷ್ಣ ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ಅವಕಾಶ- ಸಂಸದ

Image
  ಮಾರ್ಚ್ 1ರಿಂದ ಕೃಷ್ಣ ಸೇತುವೆ  ಮೇಲೆ ವಾಹನಗಳ ಸಂಚಾರಕ್ಕೆ ಅವಕಾಶ- ಸಂಸದ    ರಾಯಚೂರು ,ಫೆ.27- ಶಕ್ತಿನಗರದಿoದ ತೆಲಂಗಾಣ ರಾಜ್ಯಕ್ಕೆ ಸಂಪರ್ಕಿಸುವ  ಕೃಷ್ಣ ನದಿಗೆ ನಿಜಾಮರ ಕಾಲ 1943ರಲ್ಲಿ ಒಟ್ಟು 750 ಮೀಟರ್ ಉದ್ದ ನಿರ್ಮಿಸಲಾದ  80 ವರ್ಷಗಳ ಹಳೆಯದಾದ ಸೇತುವೆ ಮೇಲಿನ  ರಾಷ್ಟ್ರೀಯ ಹೆದ್ದಾರಿ-167 ರಸ್ತೆಯನ್ನು  ಈ ಹಿಂದೆ ಹಾಕಲಾದ ವೇರಿಂಗ್ ಕೋಟ್ ಹಾಳಾಗಿರುವ ಪ್ರಯುಕ್ತ ದುರಸ್ತಿಗಾಗಿ ಸುಮಾರು 45 ದಿನಗಳಿಂದ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತದ ನಿರ್ದೇಶನದಂತೆ ಸಂಪೂರ್ಣ ನಿಷೇಧ ಮಾಡಲಾಗಿತ್ತು.  ಸದರಿ ಸೇತುವೆ ಮೇಲಿನ ಹಿಂದೆ ಹಾಕಲಾದ ಹಳೆಯ ಕಾಂಕ್ರೀಟ್ ವೇರಿಂಗ್ ಕೋಟ್ ನ್ನು ಸಂಪೂರ್ಣವಾಗಿ ತೆಗೆದುಹಾಕಿ ಹೊಸ ಕಾಂಕ್ರೀಟ್ ವೇರಿಂಗ್ ಕೋಟನ್ನು ಸೇತುವೆಯ ಉದ್ದ ಮತ್ತು ಅಗಲ ರಸ್ತೆ ಕಾಮಗಾರಿಯನ್ನು ಹೊಸ ಸೇತುವೆ ನಿರ್ಮಾಣದ ಗುತ್ತಿಗೆದಾರರಿoದ ನಿರ್ಮಿಸಲಾಗಿದ್ದು, ದುರಸ್ತಿ ಕಾರ್ಯವು ಸಂಪೂರ್ಣವಾಗಿ ಮುಗಿದಿರುತ್ತದೆ.    ಈ ರಸ್ತೆಯನ್ನು ಮಾ.1 ರಂದು ಬೆಳಿಗ್ಗೆಯಿಂದ ವಾಹನಗಳ ಸಂಚಾರಕ್ಕೆ ಸಾರ್ವಜನಿಕರಿಗೆ ಮುಕ್ತ  ಮಾಡಲಾಗುತಿದ್ದು ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೊಸ ಸೇತುವೆ ನಿರ್ಮಾಣ ಆಗುವವರೆಗೂ ಈ ಹಳೇ ಸೇತುವೆ ಮೇಲೆ  ಅಧಿಕ ಭಾರ ಹೊತ್ತ ಬೂದಿ ತುಂಬಿದ ವಾಹನಗಳನ್ನು ನಿರ್ಬಂಧಿಸಲು ಜಿಲ್ಲಾಡಳಿತವು ನಿರ್ಧರಿಸಬೇಕು ಬೂದಿ ತುಂಬಿದ ಭಾರಿ ವಾಹನ ಸಂಚಾರ ಮುಕ್ತವಾದರೆ ಸೇತುವೆಯನ್ನು ಅನೇ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ : ಮಾ.3 ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಜಿಲ್ಲಾ ಮಹಿಳಾ ಘಟಕದಿಂದ ಪ್ರಥಮ ಮಹಿಳಾ ಸಮಾವೇಶ- ಮಿರ್ಜಾಪೂರು.

Image
  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ :        ಮಾ.3 ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಜಿಲ್ಲಾ ಮಹಿಳಾ ಘಟಕದಿಂದ   ಪ್ರಥಮ ಮಹಿಳಾ ಸಮಾವೇಶ- ಮಿರ್ಜಾಪೂರು .                                                                            ರಾಯಚೂರು,ಫೆ.27- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಜಿಲ್ಲಾ ಮಹಿಳಾ ಘಟಕದಿಂದ ಜಿಲ್ಲಾ ಮಟ್ಟದ ಪ್ರಥಮ ಮಹಿಳಾ ಸಮಾವೇಶ ಮತ್ತು ಸಾಧಕರಿಗೆ ಅಕ್ಕ ಪ್ರಶಸ್ತಿ ಪ್ರದಾನ ಹಾಗೂ ತಾಲೂಕ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಮಾ.3 ರಂದು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ  ಮಿರ್ಜಾಪೂರು ಹೇಳಿದರು.                  ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ 10.30ಕ್ಕೆ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮ ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಶ್ರೀಗಳು, ಸೋಮವಾರಪೇಟೆ ಹಿರೇಮಠದ ಶ್ರೀ ಅಭಿನವ ರಾಚೋಟಿ ವೀರಶಿವಾಚಾರ್ಯ ಶ್ರೀ ಗಳು ವಹಿಸಲಿದ್ದು ,ಉದ್ಘಾಟನೆಯನ್ನು ಮುಕ್ತಾಂಬ ಬಸವರಾಜ ಮಾಡಲಿದ್ದು, ಪ್ರಶಸ್ತಿ ಪ್ರದಾನವನ್ನು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾಡಲಿದ್ದು, ಬಹುಮಾನ ವಿತರಣೆಯನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋ

ದುಬೈ ಗೆ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಕೃಷಿ ವಿವಿ ವಿಜ್ಞಾನಿಗಳು ತೆರಳಿದ್ದಾರೆ: ಫೆ.29 ರಂದು ಕೃಷಿ ವಿವಿ 13ನೇ ಘಟಿಕೋತ್ಸವ- ಡಾ.ಎಂ.ಹನುಮಂತಪ್ಪ

Image
  ದುಬೈ ಗೆ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು  ಕೃಷಿ ವಿವಿ ವಿಜ್ಞಾನಿಗಳು ತೆರಳಿದ್ದಾರೆ:                                                             ಫೆ.29 ರಂದು ಕೃಷಿ ವಿವಿ 13ನೇ ಘಟಿಕೋತ್ಸವ- ಡಾ.ಎಂ.ಹನುಮಂತಪ್ಪ                        ರಾಯಚೂರು,ಫೆ.27- ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಫೆ.29 ರಂದು ನಡೆಯಲಿದೆ ಎಂದು ಕೃಷಿ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಹೇಳಿದರು.       ಅವರಿಂದು ಕೃಷಿ ವಿವಿ ಅಂತರಾಷ್ಟ್ರೀಯ ಅತಿಥಿ ಗೃಹದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಫೆ.29 ರಂದು ಬೆಳಿಗ್ಗೆ 11ಕ್ಕೆ ನಗರದ ಕೃಷಿ ವಿವಿ ಪ್ರೇಕ್ಷಾಗೃಹದಲ್ಲಿ ನಡೆಯುವ ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಪಾಲರು ಮತ್ತು ಕೃಷಿ ವಿವಿ ಕುಲಾಧಿಪತಿಗಳಾದ ಥಾವರ ಚಂದ್ ಗೆಹ್ಲೋಟ್ ವಹಿಸಲಿದ್ದು , ಮುಖ್ಯ ಅತಿಥಿಗಳಾಗಿ ನವದೆಹಲಿ ಐಸಿಎಆರ್ ಉಪ ಮಹಾನಿರ್ದೇಶಕ ಡಾ.ಎಸ್.ಎನ್.ಝಾ ಆಗಮಿಸಲಿದ್ದು, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಉಪಸ್ಥಿತರಿರಲಿದ್ದಾರೆ ಎಂದರು.                                                          ಈ ಬಾರಿಯ ಘಟಿಕೋತ್ಸವದಲ್ಲಿ 363 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿಗಳನ್ನು, 127 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ 26 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿಗಳನ್ನು ಪ್ರಧಾನ ಮಾಡಲಾಗುತ್ತಿದೆ ಎಂದರು. ಸ್ನಾತಕ ಪದವಿಯಲ್ಲಿ 23 ಚಿನ್ನದ ಪದಕ, ಇಬ್ಬರಿಗೆ ನಗದು

ಸಚಿವ ಎನ್‌ ಎಸ್‌ ಭೋಸರಾಜು ಸಮಕ್ಷಮದಲ್ಲಿ ನಗರಾಭಿವೃದ್ದಿ ಇಲಾಖೆ ಅಧಿಕಾರಿಗಳ ಸಭೆ: ರಾಯಚೂರು ನಗರದ ಸಮಗ್ರ ಅಭಿವೃದ್ದಿಗೆ ವಿಷನ್‌ 2035 ಸಮಗ್ರ ಕ್ರಿಯಾ ಯೋಜನೆ ತಯಾರಿಸಲು ನಿರ್ಧಾರ

Image
ಸಚಿವ ಎನ್‌ ಎಸ್‌ ಭೋಸರಾಜು ಸಮಕ್ಷಮದಲ್ಲಿ ನಗರಾಭಿವೃದ್ದಿ ಇಲಾಖೆ ಅಧಿಕಾರಿಗಳ ಸಭೆ:        ರಾಯಚೂರು ನಗರದ ಸಮಗ್ರ ಅಭಿವೃದ್ದಿಗೆ ವಿಷನ್‌ 2035 ಸಮಗ್ರ ಕ್ರಿಯಾ ಯೋಜನೆ ತಯಾರಿಸಲು ನಿರ್ಧಾರ   ರಾಯಚೂರು ,ಫೆ 26- ರಾಯಚೂರು ನಗರದ ಅಭಿವೃದ್ದಿಗಾಗಿ ರಾಯಚೂರು ವಿಷನ್‌ 2035 ಎಂಬ ದೂರದೃಷ್ಟಿಯೊಂದಿಗೆ ಸಮಗ್ರ ಕ್ರಿಯಾ ಯೋಜನೆ ಸಿದ್ದಪಡಿಸಿ ಜಾರಿ ಮಾಡಿ ಹೊಸ ನಗರ ನಿರ್ಮಾಣ ದಿಸೆಯಲ್ಲಿ ಅಗತ್ಯ ಯೋಜನಾ ವರದಿ ಸಿದ್ದಪಡಿಸಲು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಸಮಕ್ಷಮ ನಡೆದ ನಗರಾಭವೃದ್ದಿ ಇಲಾಖೆಯ ಸಭೆಯಲ್ಲಿ ನಿರ್ಧರಿಸಲಾಯಿತು.  ಇಂದು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ನಗರಾಭಿವೃದ್ದಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ರಾಯಚೂರು ನಗರ ಸಂಪೂರ್ಣ ಹಳೆಯದಾಗಿದ್ದು ಬರುವ ದಿನಗಳಲ್ಲಿ ಸುಂದರ ಮತ್ತು ಯೋಜನಾಬದ್ದ ನಗರವನ್ನಾಗಿ ವಿಸ್ತರಿಸಲು ಈಗಿರುವ ಮಾಸ್ಟರ್‌ ಪ್ಲಾನ್‌ ಪರಿಷ್ಕರಿಸಿ ನೂತನ ಮಾಸ್ಟರ್‌ ಪ್ಲಾನ್‌ ಸಿದ್ದಪಡಿಸುವ ಮೂಲಕ ನಗರವನ್ನು ಯೋಜನಬದ್ದವಾಗಿ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ಸಿದ್ದಪಡಿಸಲು ನಗರಾಭಿವೃದ್ದಿ ಅಧಿಕಾರಿಗಳಿಗೆ ಸಚಿವ ಎನ್‌ ಎಸ್‌ ಭೋಸರಾಜು ಸೂಚನೆ ನೀಡಿದರು.  ರಾಯಚೂರು ನಗರದ ಸಂಚಾರದ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಿಂಗ್‌ ರಸ್ತೆಯನ್ನು ಯೋಜಿಸಲಾಗಿದೆ. ಇದರ ವಿಸ್ತ್ರುತ ಯೋಜನಾ

ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರಧಾನಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಪತ್ರ

Image
      ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರಧಾನಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಪತ್ರ                                                                                         ರಾಯಚೂರು,ಫೆ.26- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ನಡೆಸುತ್ತಿರುವ ಸುಧೀರ್ಘ ಹೋರಾಟವನ್ನು ಪರಿಗಣಿಸಿ ಮುಖ್ಯಮಂತ್ರಿಗಳ ಶಿಫಾರಸ್ಸು ಪತ್ರಗಳಿಗೆ ಗೌರವಿಸಿ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸುವಂತೆ ಆಗ್ರಹಿಸಿ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಪತ್ರಗಳನ್ನು ಸಲ್ಲಿಸಲಾಯಿತು. ನವ ದೆಹಲಿಯ ಜಂತರ್ ಮಂತರ್ ನಲ್ಲಿ ಏಮ್ಸ್ ಹೋರಾಟ ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲು ನವ ದೆಹಲಿಯ ಡಿಸಿಪಿ ( ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ) ಅವರಿಗೆ ಫೆಬ್ರವರಿ 20 ರಂದೇ ಮನವಿ ಪತ್ರ ಸಲ್ಲಿಸಲಾಗಿತ್ತು.  ಆದರೆ ದೆಹಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ಶಾಂತಿ ಸುವ್ಯವಸ್ಥೆ ಕಾಪಾಡಲು ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ, ಯಾವುದೇ ಧರಣಿ ಮೆರವಣಿಗೆ ಹೋರಾಟಗಳನ್ನು ನಿಷೇಧಿಸಲಾಗಿದೆ ಎಂದು ಡಿಸಿಪಿ ನವ ದೆಹಲಿ ಯವರು ಹೋರಾಟ ಸಮಿತಿಗೆ ಪತ್ರ ನೀಡಿ ಧರಣಿ ಸತ್ಯಾಗ್ರಹ ನಡೆಸುವ ಕೋರಿಕೆಯನ್ನು ತಿರಸ್ಕರಿಸಿದ್ದಾರೆ. ದೆಹಲಿಯ ಪರಿಸ್ಥಿತಿಯನ್ನು ಪರಿಗಣಿಸಿ ಉದ್ದೇಶಿತ  ಧರಣಿ ಸತ್ಯಾಗ್ರಹದ

ಪ್ರಧಾನಿ ನರೇಂದ್ರ ಮೋದಿಯವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನಗರದ ರೈಲ್ವೇ ನಿಲ್ದಾಣ ಪುನಾರಾಭಿವೃದ್ಧಿಗೆ ಚಾಲನೆ: ಅಮೃತ ಭಾರತ್ ರೈಲ್ವೆ ನಿಲ್ದಾಣ ಪುನಾರಾಭಿವೃದ್ಧಿ ದೇಶದ ಅಭಿವೃದ್ಧಿಯ ಪ್ರತೀಕ - ಸಂಸದ ರಾಜಾ ಅಮರೇಶ್ವರ ನಾಯಕ

Image
  ಪ್ರಧಾನಿ ನರೇಂದ್ರ ಮೋದಿಯವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನಗರದ ರೈಲ್ವೆ ನಿಲ್ದಾಣ ಪುನಾರಾಭಿವೃದ್ಧಿಗೆ ಚಾಲನೆ:                                            ಅಮೃತ ಭಾರತ್ ರೈಲ್ವೆ ನಿಲ್ದಾಣ ಪುನಾರಾಭಿವೃದ್ಧಿ ದೇಶದ ಅಭಿವೃದ್ಧಿಯ ಪ್ರತೀಕ - ಸಂಸದ ರಾಜಾ ಅಮರೇಶ್ವರ ನಾಯಕ ರಾಯಚೂರು,ಫೆ.26-ಅಮೃತ ಭಾರತ್ ಯೋಜನೆಯಡಿ 21 ಕೋಟಿ ವೆಚ್ಚದಲ್ಲಿ ರಾಯಚೂರು ರೈಲ್ವೆ ನಿಲ್ದಾಣ ಮತ್ತು 17 ಕೋಟಿ ವೆಚ್ಚದಲ್ಲಿ ಯಾದಗಿರಿ ರೈಲು ನಿಲ್ದಾಣ ಪುನರಾ ಭಿವೃದ್ಧಿಗೆ ಕೇಂದ್ರ ರೈಲ್ವೆ ಇಲಾಖೆ ಮಹತ್ತರ ನಿರ್ಧಾರದ ಹಿಂದೆ ದೇಶದ ಸಮಗ್ರ ಅಭಿವೃದ್ಧಿಯ ಚಿಂತನೆ ಮೋದಿಯವರದ್ದಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು. ಅವರಿಂದು ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ 554 ಹೊಸ ರೈಲ್ವೆ ನಿಲ್ದಾಣ ಉದ್ಘಾಟನೆ ಹಾಗೂ ಸುಮಾರು 1500ಕ್ಕೂ ಅಧಿಕ ಸೇತುವೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ದೇಶದ ಅಭಿವೃದ್ಧಿ ಚಿಂತಕ ಪ್ರಧಾನಿ ನರೇಂದ್ರ ಮೋದಿ ಅವರು ಅಮೃತ ಭಾರತ ಯೋಜನೆ ಮೂಲಕ ರೈಲ್ವೆ ನಿಲ್ದಾಣಗಳನ್ನು ಪುನಾರಭಿವೃದ್ದಿ ಮಾಡುತ್ತಿರುವದು ರೈಲ್ವೇ ಇಲಾಖೆಗೆ ಹೊಸ ರೂಪ ತಂದಿದೆ ಎಂದರು.   ದೇಶದಲ್ಲೆ ರೈಲ್ವೆ ಸ್ಟೇಷನ್ ಕಾಮಗಾರಿ, ಭೂಮಿ ಪೂಜೆ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿದ್ದು, 554 ರೈಲ್ವೆ ನಿಲ್ದಾಣ ಜೊತೆಯಲ್ಲಿ ರಾಯಚೂರು ಹಾಗೂ ಯಾದಗಿರಿ ರೈಲ್

ರಾಜಾವೆಂಕಟಪ್ಪ ನಾಯಕ ನಿಧನಕ್ಕೆ ಸಚಿವರಿಂದ ಸಂತಾಪ : ಪಕ್ಷಕ್ಕೆ ಹಾಗೂ ಕಲ್ಯಾಣ ಕರ್ನಾಟಕಕ್ಕೆ ತುಂಬಲಾರದ ನಷ್ಟ- ಎನ್.ಎಸ್. ಬೋಸರಾಜು

Image
  ರಾಜಾವೆಂಕಟಪ್ಪ ನಾಯಕ ನಿಧನಕ್ಕೆ ಸಚಿವರಿಂದ ಸಂತಾಪ : ಪಕ್ಷಕ್ಕೆ ಹಾಗೂ ಕಲ್ಯಾಣ ಕರ್ನಾಟಕಕ್ಕೆ ತುಂಬಲಾರದ ನಷ್ಟ- ಎನ್.ಎಸ್ ಬೋಸರಾಜು ರಾಯಚೂರು,ಫೆ.25- ಸುರಪುರದ ಶಾಸಕರು ಹಾಗೂ ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷರಾದ ರಾಜಾ ವೆಂಕಟಪ್ಪ ನಾಯಕ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿದು ಅತೀವ ನೋವುಂಟು ಮಾಡಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ ಸಚಿವರಾದ ಎನ್ಎಸ್ ಬೋಸರಾಜು ಅವರು ಸಂತಾ ಸೂಚಿಸಿ ಅವರ ಕುಟುಂಬ ಹಾಗೂ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಬಹುಕಾಲದ ನನ್ನ ಹಿರಿಯ ಒಡನಾಡಿ ರಾಜಾ ವೆಂಕಟಪ್ಪ‌ ನಾಯಕರು 1999 ರಲ್ಲಿ ಎರಡನೆ ಬಾರಿಗೆ ಶಾಸಕರಾಗಿದ್ದರು ನಾನು ಮೊದಲ ಬಾರಿ ಶಾಸಕನಾಗಿ ಅವರೊಂದಿಗೆ ವಿಧಾನಸಭೆ ಪ್ರವೇಶಿಸಿದ್ದೆ. ಅಂದು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಅನೇಕ ವಿಷಯಗಳನ್ನು ವಿಧಾನಸೌಧದಲ್ಲಿ ಜಂಟಿಯಾಗಿ ಮಾತನಾಡಿದ್ದೆವು. ಅವರ ಅಗಲಿಕೆ ಪಕ್ಷಸಂಘಟನೆಗೆ, ಕಲ್ಯಾಣ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅವರ ಜೊತೆಗಿನ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ. ಹಿರಿಯರಾದ ವೆಂಕಟಪ್ಪ ನಾಯಕ ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ‌.

ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ: ಸಂಸದ ರಾಜಾ ಅಮರೇಶ್ವರ ನಾಯಕ್ ಅವರು ಸಂತಾಪ

Image
    ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ:   ಸಂಸದ ರಾಜಾ ಅಮರೇಶ್ವರ ನಾಯಕ್ ಅವರು ಸಂತಾಪ    ರಾಯಚೂರು,ಫೆ.25- ಸುರಪುರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ (67) ನಿಧನಕ್ಕೆ ಸಂಸದ ರಾಜಾ ಅಮರೇಶ್ ನಾಯಕ್ ಅವರು ಸಂತಾಪ ಸೂಚಿಸಿದ್ದಾರೆ . ಮೊನ್ನೆಯಷ್ಟೇ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.  ಅವರ ಆತ್ಮಕ್ಕೆ ಚಿರ ಶಾಂತಿ ದೊರಕಲಿ ಮತ್ತು ದೇವರು ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ ಎಂದು ಕೋರಿದ್ದಾರೆ.

ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನಕ್ಕೆ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಸಂತಾಪ

Image
  ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನಕ್ಕೆ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಸಂತಾಪ  ರಾಯಚೂರು ಫೆ. 25 - ಯಾದಗಿರಿ ಜಿಲ್ಲೆ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರ ಹಠಾತ್ ನಿಧನಕ್ಕೆ ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ದಿ, ಜೀವನೋಪಾಯ ಇಲಾಖೆ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ತೀವ್ರ ಕಂಬನಿ ಮಿಡಿದಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ಅವರ ನಿಧನ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ,ಸುರಪುರ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೆಯಾದ ಕನಸು ಕಂಡಿದ್ದರು.ಅವರ ಕಂಡ ಕನಸು ಈಡೇರುವ ಮೊದಲೇ ಇಹಲೋಕ ತ್ಯಜಿಸಿದ್ದು,ವೈಯಕ್ತಿಕವಾಗಿ ನನಗೆ ನಮ್ಮ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಷ್ಟೇ ನೋವು ಉಂಟಾಗಿದೆ ಎಂದು ಹೇಳಿದ್ದಾರೆ. ಕಲಬುರಗಿ- ಯಾದಗಿರಿ ಅವಳಿ  ಜಿಲ್ಲೆಯ ಅಭಿವೃದ್ಧಿಯಲ್ಲಿ ತಮ್ಮದೇಯಾದ ಸೇವೆಯನ್ನು ಸಲ್ಲಿಸಿದ್ದ ಅವರು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಾಗಬೇಕು ಎಂಬ ಕನಸು ಕಂಡಿದ್ದರು. ಆದರೆ, ನಾನೊಂದು ಬಯಸಿದರೆ, ದೇವರು ಇನ್ನೊಂದು ಬಗೆದ ಎಂಬಂತಾಗಿದೆ ಎಂದು ಪಾಟೀಲ್ ಆಘಾತ ವ್ಯಕ್ತಪಡಿಸಿದ್ದಾರೆ. ಅವರ ಪಕ್ಷ ನಿಷ್ಠೆ, ಹಿರಿತನವನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷ ಇತ್ತೀಚೆಗಷ್ಟೆ ಅವರನ್ನು ಉಗ್ರಾಣ ನಿಗಮದ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಆದರೆ, ಅ

ಪುಷ್ಕರಣಿಯಲ್ಲಿ ಮೇಲಿಂದ ಜಿಗಿದು ಈಜಾಡಿದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು.

Image
  ಪುಷ್ಕರಣಿಯಲ್ಲಿ ಮೇಲಿಂದ ಜಿಗಿದು ಈಜಾಡಿದ  ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು .                            ರಾಯಚೂರು,ಫೆ.25- ನಗರದ ಜವಾಹರ್ ನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿರುವ ಪುಷ್ಕರಣಿಯಲ್ಲಿ  ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಕೆಲ ಹೊತ್ತು ಈಜಾಡಿದರು.                    ಪುರಾತನವಾದ ಪುಷ್ಕರಣಿಯಲ್ಲಿ ಸುಮಾರು 15 ಅಡಿಗಳ ಮೇಲಿಂದ ನೀರಿನಲ್ಲಿ ಜಿಗಿದು ಈಜಾಡಿದರು. ಬಾಲ್ಯದಿಂದಲೆ ನದಿ ಕೊಳಗಳಲ್ಲಿ ಈಜಾಡಿದ ಉತ್ತಮ ಈಜುಪಟುಗಳಾದ ಶ್ರೀ ಪಾದಂಗಳವರು   ಬಿಸಿಲಿನ ತಾಪ ಏರುತ್ತಿರುದ್ದು  ಶ್ರೀ ಪಾದಂಗಳವರು ಪುಷ್ಕರಣಿಯಲ್ಲಿ ಈಜಾಡಿದರು. ಅನೇಕ ಯುವಕರು ಶ್ರೀ ಪಾದಂಗಳವರೊಂದಿಗೆ ಈಜಾಡಿದರು.  ಶ್ರೀಮಠದ ಶಿಷ್ಯರು, ಭಕ್ತರು ಇದ್ದರು.

ವಾರ್ಡ್ ನಂ. 9 ರಲ್ಲಿ ಸ್ವಚ್ಚತಾ ಅಭಿಯಾನ: ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ರವಿ ಬೋಸರಾಜು

Image
ವಾರ್ಡ್ ನಂ. 9 ರಲ್ಲಿ  ಸ್ವಚ್ಚತಾ ಅಭಿಯಾನ: ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ರವಿ ಬೋಸರಾಜು ರಾಯಚೂರು,ಫೆ.25- ನಗರದ ವಾರ್ಡ್ ನಂ  9 ರಲ್ಲಿ ನಗರಸಭೆ  ವತಿಯಿಂದ ನಡೆಯುತ್ತಿರುವ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಭಾಗವಹಿಸಿ ಕುಡಿಯುವ ನೀರು ಸರಬರಾಜು, ಚರಂಡಿ, ರಸ್ತೆ ವ್ಯವಸ್ಥೆ ಪರಿಶೀಲಿಸಿ ಜನರ ಮೂಲಭೂತ ಸಮಸ್ಯೆಗಳನ್ನು ಆಲಿಸಿ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು. ನಂತರ ಸಾರ್ವಜನಿಕರೊಂದಿಗೆ ರವಿ  ಬೋಸರಾಜು ಮಾತನಾಡಿ ನಗರದ ಸಂಪೂರ್ಣ ಸ್ವಚ್ಛತೆಗಾಗಿ ನಗರಸಭೆಯ ಪೌರಕಾರ್ಮಿಕರು ಹಾಗೂ ಸ್ವಚ್ಛತೆಗಾಗಿ ನೀಡಿ ಆಡಳಿತಾತ್ಮಕ ನಿರ್ದೇಶನಗಳಿಗೆ ಜನರು ಸಹಕರಿಸಿ, ಬಡಾವಣೆಗೆ ಬರುವ ನಗರಸಭೆಯ ತ್ಯಾಜ್ಯವಿಲೇವಾರಿ ವಾಹನಗಳಿಗೆ ಕಸವನ್ನು ಬೇರ್ಪಡಿಸಿ ನೀಡಿ ಸ್ವಚ್ಚತೆಯಿಂದ ಕಾಪಾಡಬೇಕಾದ ಜವಾಬ್ದಾರಿ‌ನಮ್ಮೆಲ್ಲರ ಮೇಲಿದೆ ಎಂದು ಮನವಿ ಮಾಡಿದರು. ಕುಡಿಯುವ ನೀರು, ಚರಂಡಿ, ರಸ್ತೆ, ಶೌಚಾಲಯ ಸೇರಿ ಅನೇಕ‌ ಮೂಲಭೂತ ಸಮಸ್ಯೆಗಳ‌ ನಿವಾರಣೆ ಬಗ್ಗೆ ಮಹಿಳೆಯರು ರವಿ ಬೋಸರಾಜು ಅವರಿಗೆ ಮನವಿ‌ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ‌ ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್ ಶಾಲಂ, ನಗರಸಭೆ ಸದಸ್ಯರಾದ ದರೂರು ಬಸವರಾಜ ಸಾಜೀದ್ ಸಮೀರ್,  ನರಸಿಂಹಲು ಮಾಡಗಿರಿ, ನಗರಸಭೆ ಸದಸ್ಯರಾದ ವಾಹಿದ್, ಪ್ರಸಾದ್ ಕುಮಾರ್,‌ ಕಡಗೋಲ್ ಚೇತನ್, ಮುನಿರಡ್ಡಿ ಸೇರಿದಂತೆ‌ ಅನೇಕರು ಉಪಸ್ಥಿತರಿದ್ದರು .

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ 34960 ಕೋಟಿ ರೂ. ಅನುದಾನ: ನನಗೆ ಮತ್ತೊಮ್ಮೆ ಸ್ಪರ್ದಿಸುವ ಅವಕಾಶ ನೀಡಿ- ರಾಜಾ ಅಮರೇಶ್ವರ ನಾಯಕ.

Image
  ರಾಯಚೂರು ಲೋಕಸಭಾ ಕ್ಷೇತ್ರಕ್ಕೆ  34960 ಕೋಟಿ ರೂ. ಅನುದಾನ :                                                              ನನಗೆ ಮತ್ತೊಮ್ಮೆ ಸ್ಪರ್ದಿಸುವ ಅವಕಾಶ ನೀಡಿ- ರಾಜಾ ಅಮರೇಶ್ವರ ನಾಯಕ .                                    ರಾಯಚೂರು,ಫೆ.24- ಪ್ರಧಾನಿ  ಮೋದಿಯವರ ನೇತೃತ್ವದ ಕೇಂದ್ರ  ಸರ್ಕಾರ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸುಮಾರು 34960 ಕೋಟಿ ರೂ.ಗಳ ಅನುದಾನ ನೀಡಿದೆ ಹೀಗಾಗಿ ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ ನನಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ದಿಸುವ ಅವಕಾಶ ಬಿಜೆಪಿ ವರಿಷ್ಟರು ನೀಡಬೇಕೆಂದು ಸಂಸದ ಅಮರೇಶ್ವರ ನಾಯಕ ಹೇಳಿದರು.                                            ಅವರಿಂದು ಸುದ್ದಿಗೋಷ್ಠಿಯಲ್ಲಿ ತಮ್ಮ ಐದು ವರ್ಷದ ಅವಧಿಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಮತ್ತು  ಕೇಂದ್ರ ಸರ್ಕಾರ ನೀಡಿರುವ ಅನುದಾನ  ಕುರಿತು ಮಾಹಿತಿ ನೀಡಿ ಮಾತನಾಡಿದರು.                                          ಜಿಲ್ಲೆಗೆ ಏಮ್ಸ್ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆಂದ ಅವರು ಕೇಂದ್ರ ಆರೋಗ್ಯ ಸಚಿವರನ್ನು ಸಂಸದ ಕರಡಿ ಸಂಗಣ್ಣ ಜೊತೆಗೂಡಿ ಭೇಟಿಯಾದಾಗ ಏಮ್ಸ್ ಮಂಜೂರಿ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿ ಜಿಲ್ಲೆಗೆ ಕೇಂದ್ರದ ತಂಡ ಕಳುಹಿಸಿಕೊಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಹೇಳಿದ ಅವರು ನಾನು ಸಂಸತ್ ನಲ್ಲಿ ಏಮ್ಸ್ ಕುರಿತು ಅನೇಕ ಬಾರಿ ಧ್ವನಿ ಎತ್ತಿದ್ದ

ನಗರದ ಎನ್ ಜಿ ಓ ಕಾಲೋನಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಸುಶಮೀಂದ್ರತೀರ್ಥರ ಮೃತ್ತಿಕಾ ಬೃಂದಾವನ ಪ್ರತಿಷ್ಟಾಪನೆ: ಶ್ರೀ ಸುಶಮೀಂದ್ರತೀರ್ಥರು ಅಕ್ಷರಶಃ ನಡೆದಾಡುವ ರಾಯರು-ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು.

Image
  ನಗರದ ಎನ್ ಜಿ ಓ ಕಾಲೋನಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಸುಶಮೀಂದ್ರತೀರ್ಥರ ಮೃತ್ತಿಕಾ ಬೃಂದಾವನ ಪ್ರತಿಷ್ಟಾಪನೆ:                                                                    ಶ್ರೀ ಸುಶಮೀಂದ್ರತೀರ್ಥರು ಅಕ್ಷರಶಃ ನಡೆದಾಡುವ ರಾಯರು-ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು .                                                                                                      ರಾಯಚೂರು,ಫೆ.23- ಶ್ರೀ ಸುಶಮೀಂದ್ರತೀರ್ಥರು ಅಕ್ಷರಷ ನಡೆದಾಡುವ ರಾಯರೆ ಆಗಿದ್ದರು ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ಹೇಳಿದರು.                                          ಅವರಿಂದು ನಗರದ  ಎನ್ ಜಿ ಓ ಕಾಲೋನಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಸುಶಮೀಂದ್ರತೀರ್ಥರ ಮೃತ್ತಿಕಾ ಬೃಂದಾವನ ಪ್ರತಿಷ್ಟಾಪನೆ ಕಾರ್ಯ ನೆರವೇರಿಸಿ ಆಶೀರ್ವಚನ ನೀಡಿದರು.                                                     ಶ್ರೀ ಸುಶಮೀಂದ್ರ ತೀರ್ಥರಿಗೆ ನವ ಮಂತ್ರಾಲಯ ನಿರ್ಮಾತೃಗಳಾದ ಶ್ರೀ ಸುಜಯೀಂದ್ರತೀರ್ಥ ಶ್ರೀ ಪಾದಂಗಳವರು 1985 ರಲ್ಲಿ ಬಿಚ್ಚಾಲಿ ನದಿ ತಟದಲ್ಲಿ ಸನ್ಯಾಸತ್ವ ನೀಡಿ ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಂಡಿದ್ದರು ಶ್ರೀ ಸುಜಯೀಂದ್ರತೀರ್ಥ ಶ್ರೀ ಪಾದಂಗಳವರು ಕಾಲವಾದ ನಂತರ ಸುಮಾರು ಎರೆಡು ದಶಕಗಳ ಕ

ಟೆಂಡರ್ ಅವಧಿ ಮುಗಿದ ಹಿನ್ನೆಲೆಯಲ್ಲಿ ನಗರಸಭೆ ಮಳಿಗೆಗಳಿಗೆ ಬೀಗ ಜಡಿದ ಸಿಬ್ಬಂದಿ: ನಗರಸಭೆ ಸಿಬ್ಬಂದಿ ಮತ್ತು ಬಾಡಿಗೆದಾರರು ನಡುವೆ ವಾಗ್ವಾದ

Image
  ಟೆಂಡರ್ ಅವಧಿ ಮುಗಿದ ಹಿನ್ನೆಲೆಯಲ್ಲಿ  ನಗರಸಭೆ ಮಳಿಗೆಗಳಿಗೆ ಬೀಗ ಜಡಿದ ಸಿಬ್ಬಂದಿ :                                              ನಗರಸಭೆ ಸಿಬ್ಬಂದಿ ಮತ್ತು ಬಾಡಿಗೆದಾರರು ನಡುವೆ ವಾಗ್ವಾದ      ರಾಯಚೂರು,ಫೆ.23- ನಗರಸಭೆ  ಮಳಿಗೆಗಳ ಟೆಂಡರ್ ಅವಧಿ ಮುಗಿದ ಹಿನ್ನೆಲೆಯಲ್ಲಿ ನಗರಸಭೆ ವಶಕ್ಕೆ ಪಡೆಯಲು ಮುಂದಾದಾಗ ನಗರಸಭೆಯ ಸಿಬ್ಬಂದಿಗೆ ಬಾಡಿಗೆದಾರರು ಅಡ್ಡಿಪಡಿಸಿದ ಘಟನೆ ಬೆಳಿಗ್ಗೆ ನಡೆದಿದೆ. ನಗರದ ಮಹಿಳಾ ಸಮಾಜದ ಬಳಿಯ ನಗರಸಭೆ ವ್ಯಾಪ್ತಿಯ ಮಳಿಗೆಗಳ ಟೆಂಡರ್ ಗಳು  ಅವಧಿ ಕಳೆದ ಸೆಪ್ಟಂಬರ್ ತಿಂಗಳಲ್ಲಿ  ಮುಕ್ತಾಯವಾಗಿದ್ದು, ಬಾಕಿ ಇರುವ ಬಾಡಿಗೆ ಪಾವತಿಸಿ ಮಳಿಗೆ ಖಾಲಿ ಮಾಡಬೇಕು ಆನಂತರ ನಗರಸಭೆಯಿಂದ ನಡೆಯುವ ಬಹಿರಂಗ ಹರಾಜಿನಲ್ಲಿ ಷರತ್ತಿಗೆ ಅನುಗುಣವಾಗಿ ಭಾಗವಹಿಸಬಹುದು ಎಂದು ನಗರಸಭೆ ಅಧಿಕಾರಿಗಳು ತಮ್ಮ ಸಿಬ್ಬಂದಿ ಸಮೇತ ಆಗಮಿಸಿ ತಿಳಿಸಿದ್ದಾರೆ.                                 ಆದರೆ ಇಲ್ಲಿನ ಕೆಲ ಬಾಡಿಗೆದಾರರು ಮಳಿಗೆ ಖಾಲಿ ಮಾಡಲು ನಿರಾಕರಿಸಿ ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಈಗಾಗಲೇ ಬಾಕಿ ಇರುವ ಬಾಡಿಗೆ ಪಾವತಿಸಿ ಮಳಿಗೆ ಖಾಲಿ ಮಾಡುವಂತೆ ನೋಟೀಸ್ ನೀಡಿದರೂ ಖಾಲಿ ಮಾಡುತ್ತಿಲ್ಲ ಎಂದು ಆರೋಪಿಸಿ ನಗರಸಭೆ ಸಿಬ್ಬಂದಿ ಮಳಿಗೆಗಳಿಗೆ ಬೀಗ ಹಾಕಲು ಮುಂದಾದಾಗ ಇದಕ್ಕೆ ಅಡ್ಡಿಪಡಿಸಿದ  ಎಳನೀರು ಅಂಗಡಿ  ಬಾಡಿಗೆದಾರ ಎಳೆನೀರು   ಕತ್ತರಿಸುವ  ಮಚ್ಚು ಕೈಯಲ್ಲಿ ಹಿಡಿದುಕೊಂಡು ಜಗಳಕ್ಕೆ ಇಳಿದಿದ್ದಾನೆ

ರಸ್ತೆ - ಫುಟ್ ಪಾತ್ ಅತಿಕ್ರಮಿಸಿ ವ್ಯಾಪಾರ: ಸಂಚಾರಿ ಪೊಲೀಸರಿಂದ ತೆರವು ಕಾರ್ಯಚರಣೆ.

Image
ರಸ್ತೆ - ಫುಟ್ ಪಾತ್ ಅತಿಕ್ರಮಿಸಿ ವ್ಯಾಪಾರ:                                          ಸಂಚಾರಿ ಪೊಲೀಸರಿಂದ ತೆರವು ಕಾರ್ಯಚರಣೆ.                ರಾಯಚೂರು,ಫೆ.22-ನಗರದ  ಮಾರುಕಟ್ಟೆ ಸ್ಥಳದಲ್ಲಿ  ವಾಹನ ಮತ್ತು ಪಾದಚಾರಿಗಳು   ಸುಗಮವಾಗಿ ಸಂಚರಿಸುವುದುಕ್ಕೆ ಅಡತಡೆಯಾದ ರಸ್ತೆ ಮತ್ತು  ಫುಟ್ ಪಾತ್  ಅತಿಕ್ರಮಣವನ್ನು ಸಂಚಾರಿ ಪೊಲೀಸರು ಇಂದು ಸಂಜೆ ತೆರವುಗೊಳಿಸಿದರು .                      ನಗರದ ಜನನಿಬಿಡ ತೀನ್ ಕಂದೀಲ್ ಬಳಿ ರಸ್ತೆ ಮತ್ತು ಪಾದಚಾರಿ ಮಾರ್ಗದಲ್ಲಿ  ಅಂಗಡಿಗಳ ಮಾಲೀಕರು ತಮ್ಮ  ಸರಕು, ಉತ್ಪನ್ನಗಳನ್ನು ರಸ್ತೆ ಇಕ್ಕೆಲಗಳಲ್ಲಿ  ಇಟ್ಟು ವ್ಯಾಪಾರ ಮಾಡುತ್ತಾ ವಾಹನ ಸಂಚಾರಕ್ಕೆ ಮತ್ತು ನಡೆದುಕೊಂಡು ಹೋಗುವ ಜನರಿಗೆ ಕಿರಿಕಿರಿಯಾಗುವುದನ್ನು ತಪ್ಪಿಸಲು ಇಂದು ಟ್ರಾಫಿಕ್ ಪೊಲೀಸರು ಫೀಲ್ಡಿಗಿಳಿದು ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ತಮ್ಮ ಸಾಮಗ್ರಿಗಳನ್ನು ರಸ್ತೆ, ಪಾದಚಾರಿ ಮಾರ್ಗ ಅತಿಕ್ರಮಿಸಿ ಇಟ್ಟಿರುವುದನ್ನು ತೆಗೆಸಿದರು.                                                      ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ವೆಂಕಟೇಶ ನಾಯಕ ಹಾಗೂ  ಸಂಚಾರಿ ಪೊಲೀಸ್ ಸಿಬ್ಬಂದಿಗಳು ಇದ್ದರು .              ಟ್ರಾಫಿಕ್ ಈಸ್ ಡ್ರೈವ್ ನಿರಂತರವಾಗಿರಲಿ:   ಪೊಲೀಸರು ಈ ತೆರವು ಕಾರ್ಯವನ್ನು ಒಂದೆ ದಿನಕ್ಕೆ ಸೀಮಿತಗೊಳಿಸದೆ  ನಿರಂತರವಾಗಿ ರಸ್ತೆ-ಫುಟ್ ಪಾತ್  ಅತಿಕ್ರಮಣಕಾರರಿಗೆ ಕಟ್ಟ

ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಸಾಮೂಹಿಕ ಉಪನಯನ: ಬ್ರಾಹ್ಮಣರು ತಮ್ಮ ಬುದ್ಧಿ ಶಕ್ತಿಯಿಂದ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕು- ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು

Image
 ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಸಾಮೂಹಿಕ ಉಪನಯನ:                                                                        ಬ್ರಾಹ್ಮಣರು ತಮ್ಮ ಬುದ್ಧಿ ಶಕ್ತಿಯಿಂದ ಸಮಾಜದಲ್ಲಿ ಉನ್ನತ ಸ್ಥಾನ  ಪಡೆಯಬೇಕು-  ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು                                  ರಾಯಚೂರು,ಫೆ.22- ಬ್ರಾಹ್ಮಣರು ತಮ್ಮ ಬುದ್ಧಿ ಶಕ್ತಿಯಿಂದ ಸಮಾಜದಲ್ಲಿ ಉನ್ನತ ಸ್ಥಾನ  ಪಡೆಯಬೇಕು ಎಂದು ಮಂತ್ರಾಲಯ  ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ಹೇಳಿದರು.                  ಅವರಿಂದು ನಗರದ ಜವಾಹರ್ ನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಯೋಜಿಸಿದ  ಸಾಮೂಹಿಕ ಉಪನಯನದಲ್ಲಿ ನೂತನ ವಟುಗಳಿಗೆ ಬ್ರಹ್ಮೋಪದೇಶ ಮತ್ತು ಆಶೀರ್ವಾದ ನೀಡಿ ಮಾತನಾಡಿದರು. ಉಪನಯನ ದಿಂದ ವ್ಯಕ್ತಿಗೆ ಉತ್ತಮ ಸಂಸ್ಕಾರಯುಕ್ತ ವ್ಯಕ್ತಿಯಾಗಲು ಪ್ರೇರೇಪಿಸುತ್ತದೆ ಅಲ್ಲದೆ ಉಪನೀತನಾದ ವ್ಯಕ್ತಿಗೆ ಮಾತ್ರ ಹೋಮ ಹವನ ನೆರವೇರಿಸಲು ಬರುತ್ತದೆ ಎಂದು ಅವರು ಸಾಮೂಹಿಕ ಉಪನಯನದಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಇಂದು ಮನೆಯಲ್ಲಿ ಉಪನಯನ ಮಾಡಲು ಆಗುವುದಿಲ್ಲ ಏಕೆಂದರೆ ಚಿಕ್ಕ ಮನೆಗಳು ಇರುತ್ತವೆ ಮತ್ತು ಕಲ್ಯಾಣ ಮಂಟಪದಲ್ಲಿ ಮಾಡಿದರೆ ಲಕ್ಷಾಂತರ ಹಣ ವ್ಯಯಿಸಿ ಬೇಕು  ಆದ್ದರಿಂದ ಕೀಳರಿಮೆ ಬಿಟ್ಟು ಸಾಮೂಹಿಕ ಉಪನಯನದಲ್ಲಿ ತಮ್ಮ ಮಕ್ಕಳ ಉಪನಯನ ಮಾಡಿ ಎಂದರು. ಬ್ರಾಹ್ಮಣರಿ

ಪಶ್ಚಿಮ ಬಂಗಾಳದಲ್ಲಿ ರಿಪಬ್ಲಿಕ್ ಟಿವಿ ವರದಿಗಾರ ಸಂತುಪನ್ ಬಂಧನ ಖಂಡಿಸಿ ಪ್ರತಿಭಟನೆ

Image
  ಪಶ್ಚಿಮ ಬಂಗಾಳದಲ್ಲಿ ರಿಪಬ್ಲಿಕ್ ಟಿವಿ ವರದಿಗಾರ ಸಂತುಪನ್  ಬಂಧನ ಖಂಡಿಸಿ ಪ್ರತಿಭಟನೆ ರಾಯಚೂರು,ಫೆ.21- ಪಶ್ಚಿಮ ಬಂಗಾಳದ ಸಂದೇಶ್ ಕಾಲಿಯಲ್ಲಿ ರಿಪಬ್ಲಿಕ್ ಟಿವಿ ವರದಿಗಾರ ಸಂತುಪನ್ ಅವರ ಬಂಧನ ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ವತಿಯಿಂದ ಪತ್ರಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆನಂತರ ಜಿಲ್ಲಾಡಳಿತದ ಮೂಲಕ ಪಶ್ಚಿಮ ಬಂಗಾಳದ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಪಶ್ಚಿಮ ಬಂಗಾಳದಲ್ಲಿ ಅತ್ಯಾಚಾರ ಪ್ರಕರಣ ಹಾಗೂ ಹಿಂಸಾಚಾರದ ಕುರಿತು ವರದಿ ಮಾಡಲು ತೆರಳಿದ ಪತ್ರಕರ್ತನ ಮೇಲೆ ದೌರ್ಜನ್ಯ ನಡೆಸಿ ಬಂಧಿಸಿರುವುದು ಖಂಡನೀಯ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳಿಗೆ ತನ್ನದೆ ಆದ ಸ್ವಾತಂತ್ರ್ಯವಿದೆ.  ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಕರ್ತವ್ಯ ನಿರತ ಪತ್ರಕರ್ತನನ್ನು ಬಂಧನ ಮಾಡುವ ಮೂಲಕ ಮಾಧ್ಯಮ ಸ್ವಾತಂತ್ರ್ಯ ಹರಣ ಮಾಡಲು ಹೊರಟಿದೆ ಎಂದು ದೂರಿದರು.  ಕೂಡಲೇ ಬಂಧಿತ ಪತ್ರಕರ್ತನನ್ನು ಬಿಡುಗಡೆ ಮಾಡಬೇಕು ಮತ್ತು ಅವರ ಮೇಲೆ ಹಾಕಿರುವ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ  ಆರ್. ಗುರುನಾಥ ಮಾತನಾಡಿ, ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ‍ಪತ್ರಕರ್ತರು ಅನೇಕ ಸಮಸ್ಯೆ ಎದುರಿಸುತ್ತಿದ್ದು, ಕುಂದು ಕೊರತೆ ಆಲಿಸಬೇಕಿರುವ ಜಿಲ್ಲಾಧಿಕಾರಿ ನಿರ್ಲಕ್ಷಿಸಿದ್ದಾ

ಬೆಂಗಳೂರು ಅರಮನೆ ಮೈದಾನದಲ್ಲಿ ಫೆ.26 ಮತ್ತು 27 ರಂದು ಬೃಹತ್ ಉದ್ಯೋಗ ಮೇಳ- ಸಚಿವ ಡಾ. ಶರಣಪ್ರಕಾಶ ಪಾಟೀಲ್

Image
  ಬೆಂಗಳೂರು ಅರಮನೆ ಮೈದಾನದಲ್ಲಿ ಫೆ.26 ಮತ್ತು 27 ರಂದು ಬೃಹತ್ ಉದ್ಯೋಗ ಮೇಳ- ಸಚಿವ ಡಾ. ಶರಣಪ್ರಕಾಶ ಪಾಟೀಲ್ ರಾಯಚೂರು, ಫೆ.21- ಯುವಜನರು ಸೇರಿದಂತೆ ಪದವಿ, ಇಂಜನಿಯರಿಂಗ್, ಡಿಪ್ಲೊಮಾ ಹಾಗೂ ವೃತ್ತಿಪರ ಕೋರ್ಸ್‌ಗಳನ್ನು ಪೂರ್ಣಗೊಳಿಸಿರುವವರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಬೃಹತ್ ಯುವ ಸಮೃದ್ಧಿ ಸಮ್ಮೇಳ ಇದೇ ತಿಂಗಳ 26 ಮತ್ತು 27   ಎರಡು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ವೈದ್ಯಕೀಯ ಶಿಕ್ಷಣ ಕೌಶಲ್ಯಾಭಿವೃದ್ದಿ  ಹಾಗೂ ಜೀವನೋಪಾಯ ಇಲಾಖೆ ಸಚಿವ  ಡಾ. ಶರಣ ಪ್ರಕಾಶ್ ಪಾಟೀಲ್ ಹಾಗೂ ಐಟಿ- ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು. ಅವರಿಂದು  ವಿಧಾನಸೌಧದ ಸಮ್ಮೇಳನದ ಸಭಾಂಗಣದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ  ಮಾಹಿತಿ ನೀಡಿದರು .  ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಇದೇ ತಿಂಗಳ 26 ಮತ್ತು 27ರಂದು ಬೆಂಗಳೂರಿನ ಅರಮನೆಯಲ್ಲಿ ಯುವ ಸಮೃದ್ಧಿ ಸಮ್ಮೇಳನ ಎಂಬ ಹೆಸರಿನಡಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಪದವಿ, ಎಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‍ಗಳನ್ನು ಮುಗಿಸಿರುವ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಒದಗಿಸಿಕೊಡುವ ಮೇಳ ಇದಾಗಿದೆ ಎಂದು  ಹೇಳಿದರು.  ಈಗಾಗಲೇ ಈ ಮೇಳಕ್ಕೆ ರಾಜ್ಯಾದ್ಯಂತ ಒಟ್ಟು 31 ಸಾವಿರ ಅರ್ಹ ಅಭ್ಯರ್ಥಿಗಳು ಆನ್‍ಲೈನ್ ರಿಜಿಸ್ಟರ್ ಮೂಲಕ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿ

ಜವಾಹರ್ ನಗರ ರಾಯರ ಮಠದಲ್ಲಿ ಫೆ.21 ರಿಂದ 26 ರವರೆಗೆ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಶತಮಾನೋತ್ಸವ ಹಾಗೂ ರಾಯಚೂರು ಸಂಸ್ಕೃತ ವಿದ್ಯಾಪೀಠದ ಪಂಚಮ ವಾರ್ಷಿಕೋತ್ಸವ - ಡಾ.ಎನ್.ವಾದಿರಾಜಾಚಾರ್ಯ.

Image
  ಜವಾಹರ್ ನಗರ ರಾಯರ ಮಠದಲ್ಲಿ  ಫೆ.21 ರಿಂದ 26 ರವರೆಗೆ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಶತಮಾನೋತ್ಸವ ಹಾಗೂ ರಾಯಚೂರು ಸಂಸ್ಕೃತ ವಿದ್ಯಾಪೀಠದ ಪಂಚಮ ವಾರ್ಷಿಕೋತ್ಸವ - ಡಾ.ಎನ್.ವಾದಿರಾಜಾಚಾರ್ಯ.              ರಾಯಚೂರು,ಫೆ.20- ಜವಾಹರ್ ನಗರ ರಾಯರ ಮಠದಲ್ಲಿ  ಫೆ.21 ರಿಂದ 26 ರವರೆಗೆ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಶತಮಾನೋತ್ಸವ ಹಾಗೂ ರಾಯಚೂರು ಸಂಸ್ಕೃತ ವಿದ್ಯಾಪೀಠದ ಪಂಚಮ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲರಾದ ಡಾ.ಎನ್.ವಾದಿರಾಜಾಚಾರ್ಯ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಂತ್ರಾಲಯದಲ್ಲಿ 1924ಇಸ್ವಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಅಂದಿನ ಪೀಠಾಧಿಪತಿಗಳಾದ ಶ್ರೀ ಸುಶೀಲೇಂದ್ರ ತೀರ್ಥ ಶ್ರೀಪಾದಂಗಳವರು ಪರಿಮಳ ಎಂಬ ಪಾಠಶಾಲೆಯನ್ನು ಸ್ಥಾಪಿಸಿದರು. ನಂತರ ಪೀಠಾಧಿಪತಿಗಳಾದ ಶ್ರೀ ಸುಜಯೀಂದ್ರತೀರ್ಥ ಶ್ರೀ ಪಾದಂಗಳವರು ಶ್ರೀ ಗುರುಸಾರ್ವಭೌಮ ವಿದ್ಯಾಪೀಠ ಎಂದು ನಾಮಾಂತರ ಮಾಡಿದರು ಎಂದರು. ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಐದು ವರ್ಷದ ಹಿಂದೆ ರಾಯಚೂರು ನಗರದ ಜವಾಹರ್ ನಗರ ರಾಯರ ಮಠದಲ್ಲಿ ಸಂಸ್ಕೃತ ವಿದ್ಯಾಪೀಠ ಸ್ಥಾಪಿಸಿದರು ಎಂದರು. ಫೆ.21 ರಂದು ಜವಾಹರ್ ನಗರ ರಾಯರ ಮಠದಲ್ಲಿ ಬೆಳಿಗ್ಗೆ 6.15ಕ್ಕೆ ಶ್ರೀ ರಾಮ ಷಡಕ್ಷರಿ ಮಹಾಮಂತ್ರ ಹೋಮ ಪೂರ್ಣಾಹುತಿ ನಂತರ ಭ

ಪ್ರಜಾ ಸಾಕ್ಷಿ ಸಂಪಾದಕ ರಮೇಶ್ ಗೋರೆಬಾಳ್ ನಿಧನಕ್ಕೆ ಪತ್ರಕರ್ತರಿಂದ ಶ್ರದ್ಧಾಂಜಲಿ ಸಭೆ

Image
ಪ್ರಜಾ ಸಾಕ್ಷಿ ದಿನಪತ್ರಿಕೆ ಸಂಪಾದಕ ರಮೇಶ್ ಗೋರೆಬಾಳ್ ನಿಧನಕ್ಕೆ ಪತ್ರಕರ್ತರಿಂದ ಶ್ರದ್ಧಾಂಜಲಿ ಸಲ್ಲಿಕೆ.                                                            ರಾಯಚೂರು,ಫೆ.19- ಇತ್ತೀಚೆಗೆ ನಿಧನರಾದ ಪ್ರಜಾ ಸಾಕ್ಷಿ ದಿನ ಪತ್ರಿಕೆ ಸಂಪಾದಕ ರಮೇಶ್ ಗೋರೆಬಾಳ್ ನಿಧನಕ್ಕೆ ಪತ್ರಿಕಾ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.                                          ಕರ್ನಾಟಕ  ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಮಾತನಾಡಿ ರಮೇಶ್ ರವರ ಅಕಾಲಿಕ ಸಾವು ನಮ್ಮೆಲ್ಲರಿಗೂ ಅತೀವ ದುಃಖ ತಂದಿದೆ ಅವರು ಕಠಿಣ ಪರಿಶ್ರಮ ಮಾಡಿ ಪತ್ರಿಕೆ ನಡೆಸುತ್ತಿದ್ದರು ಸದಾ ಕ್ರಿಯಾಶೀಲರಾಗಿದ್ದರು ಎಂದರು. ಕೆಯುಡ್ಬ್ಲೂಜೆ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹೀರೆಮಠ ಮಾತನಾಡಿ ರಮೇಶ ರವರು ತಮ್ಮ ಸಣ್ಣ ವಯಸ್ಸಿನಲ್ಲೇ ಮೃತರಾಗಿದ್ದು ಅವರು ತಮ್ಮ ಮೇಲೆ ಎಲ್ಲಾ ಜವಾಬ್ದಾರಿ ವಹಿಸಿಕೊಂಡು ಪತ್ರಿಕೆ ಮುನ್ನೆಡಿಸಿಕೊಂಡು ಹೋಗುತ್ತಿದ್ದರು ಪತ್ರಕರ್ತರು ವೃತ್ತಿಯ ಜೊತೆಗೆ ತಮ್ಮ ಮತ್ತು ತಮ್ಮ ಕುಟುಂಬದ ಯೋಗಕ್ಷೇಮದ ಬಗ್ಗೆಯೂ ಕಾಳಜಿವಹಿಸಬೇಕೆಂದರು. ಪತ್ರಕರ್ತರಾದ ಸಿದ್ದು ಬಿರಾದಾರ್, ಆನಂದ ಸ್ವಾಮಿ, ಜಯ ಕುಮಾರ್ ದೇಸಾಯಿ ಕಾಡ್ಲೂರು, ಲಕ್ಷ್ಮಣ ಕಪಗಲ್, ಅಂಬಣ್ಣ ಅರೋಲಿ ಮುಂತಾದವರು ಮಾತನಾಡಿ ಶ್ರದ್ಧಾಂಜಲಿ ಸಲ್ಲಿಸಿದರು.           ಶ್ರದ್ಧಾಂಜಲಿ ಸಭೆಯಲ್ಲಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದ ಹಿರಿಯ ಕಿರಿಯ ಪತ

ಉದ್ಯೋಗವಕಾಶ, ಕಲಿಕಾ ಕೇಂದ್ರದ ಸದುಪಯೋಗ ಪಡೆದುಕೊಳ್ಳಿ- ಎಲ್.ಚಂದ್ರಶೇಖರ ನಾಯಕ

Image
ಉದ್ಯೋಗವಕಾಶ, ಕಲಿಕಾ ಕೇಂದ್ರದ ಸದುಪಯೋಗ ಪಡೆದುಕೊಳ್ಳಿ- ಎಲ್.ಚಂದ್ರಶೇಖರ ನಾಯಕ ರಾಯಚೂರು,ಫೆ.19- ಜಿಲ್ಲೆಯ ಯುವಕ ಯುವತಿಯರಿಗೆ, ಪದವಿಧರರಿಗೆ ಹಾಗೂ ನಿರುದ್ಯೋಗಿ  ಯುವಕ ಯುವತಿಯರಿಗೆ ತಮ್ಮ ಮುಂದಿನ ಜೀವನದಲ್ಲಿ ಬೇಕಾದ ವೃತ್ತಿ ಮಾರ್ಗದರ್ಶನ ಹಾಗೂ ಕೌಶಲ್ಯಾಭಿವೃದ್ಧಿಗಾಗಿ ಉದ್ಯೋಗ, ಅವಕಾಶ ಮತ್ತು ಕಲಿಕಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಯುವ ಜನತೆ ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಹೇಳಿದರು. ಅವರಿಂದು ನಗರದ ಮಹತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದ ಯುವ ಸಬಲೀಕರಣ ಮತ್ತು ಕ್ರೀಡಾ ಇಳಾಖೆಯ ಕಚೇರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಸೆಂಟರ್ ಫಾರ್ ಎಂಪ್ಲಾಯಿಮೆಂಟ್, ಅಪಾರ‍್ಚುನಿಟಿ  ಆ್ಯಂಡ್ ಲರ‍್ನಿಂಗ್ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿರುವ ಯುವಕರು, ನಿರುದ್ಯೋಗಿಗಳಿಗೆ ವೃತ್ತ ಮಾರ್ಗದರ್ಶನ, ತರಬೇತಿ ಹಾಗೂ ಉದಯೋಗ ಅವಕಾಶಗಳ ಬಗ್ಗೆ ತಿಳಿದುಕೊಳ್ಳಲು ನಗರದಲ್ಲಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇದರಿಂದ ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕರು ತಮ್ಮ ಕೌಶಲ್ಯ ಅಭಿವೃದ್ಧಿಯ ಜಿತೆಗೆ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದೆಂದು ತಿಳಿಸಿದರು.  ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ ನಾಯಕ, ಹೆಡ್ ಹೆಲ್ಡ್

ಫೆ.26 ರಂದು ಏಮ್ಸ್ ಗಾಗಿ ದೆಹಲಿಯಲ್ಲಿ ಪ್ರತಿಭಟನೆ : ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಮನ್ನಣೆ ನೀಡಬೇಕು- ಕಳಸ

Image
  ಫೆ.26 ರಂದು  ಏಮ್ಸ್ ಗಾಗಿ ದೆಹಲಿಯಲ್ಲಿ ಪ್ರತಿಭಟನೆ :                 ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಮನ್ನಣೆ ನೀಡಬೇಕು- ಕಳಸ .                                                                                              ರಾಯಚೂರು,ಫೆ.19- ಏಮ್ಸ್ ಸ್ಥಾಪನೆ ಮಾಡಲು ಆಗ್ರಹಿಸಿ ಫೆ.26 ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ ಹೇಳಿದರು.                                          ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ 648 ದಿನಗಳಿಂದ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ಧರಣಿ ನಡೆಸಲಾಗುತ್ತಿದೆ ಜಿಲ್ಲೆಯ ಏಕೈಕ ಹೆಸರನ್ನು ಸಿಎಂ ಅಧಿಕೃತವಾಗಿ ಕೇಂದ್ರದ ಆರೋಗ್ಯ ಸಚಿವರಿಗೆ ಕಳುಹಿಸಿದ್ದರು ಅದಕ್ಕೆ ಮನ್ನಣೆ ನೀಡದೆ ನಿರ್ಲಕ್ಷಿಸಲಾಗುತ್ತಿದೆ ಆದ್ದರಿಂದ ನಾವು ಇಂದು ದೆಹಲಿಗೆ ತೆರಳಿ ಪ್ರಧಾನಿ ಮತ್ತು ಗೃಹ ಸಚಿವರ ಭೇಟಿಗಾಗಿ ಮನವಿ ಮಾಡುತ್ತೇವೆ ನಮಗೆ ಅಲ್ಲಿ ಸ್ಪಂದನೆ ದೊರೆಯದಿದ್ದರೆ ಫೆ.26 ರಂದು ಜಂತರ್ ಮಂತರ್ ಬಳಿ ಧರಣಿ ನಡೆಸುತ್ತೇವೆ ಎಂದರು. ಧರಣಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸುವಂತೆ ಕೋರಿದ್ದೇವೆ ಎಂದು ಅವರು ಲೋಕಸಭಾ ಚುನಾವಣೆ ಘೋಷಣೆ ಮುನ್ನ ಏಮ್ಸ್ ಘೋಷಣೆಯಾಗಬೇಕೆಂದರು.          ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಏಮ್ಸ್ ಸ್ಥಾಪನೆ ಬಗ್ಗೆ ಭರವಸೆ ನೀಡಿದ್ದರು ಅದು ಈಡೇರುತ್