ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದಿಂದ ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ಉದ್ಘಾಟನೆ : ದೇಶದ ಅಭಿವೃದ್ಧಿಗೆ ಬ್ರಾಹ್ಮಣ ಸಮಾಜದ ಕೊಡುಗೆ ಅಪಾರ -ಎ.ವಸಂತಕುಮಾರ ರಾಯಚೂರು,ಜೂ.30- ದೇಶದ ಅಭಿವೃದ್ಧಿಗೆ ಬ್ರಾಹ್ಮಣ ಸಮಾಜ ಅಪಾರ ಕೊಡುಗೆಯನ್ನು ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರಿಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇಶದಲ್ಲಿ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಸಮಾಜದವಾಗಿದೆ. ಆದರೂ ಎಲ್ಲ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ್ದಾರೆ ಎಂದ ಅವರು ದೇವರಿಗೆ ಸಮೀಪ ಇರುವ ಬ್ರಾಹ್ಮಣ ಸಮಾಜವಾಗಿದೆ ಎಂದರು. ಸಮಾಜದಲ್ಲಿ ಬ್ರಾಹ್ಮಣ ಸಮಾಜ ಉನ್ನತ ಸ್ಥಾನ ಹೊಂದಿದೆ. ದೇಶದಲ್ಲಿ ಅನೇಕ ಉನ್ನತ ಮಟ್ಟದಲ್ಲಿ ಬ್ರಾಹ್ಮಣ ಸಮಾಜದವರೇ ಹೆಚ್ಚಾಗಿ ಕಂಡುಬರುತ್ತಾರೆ ಒಂದು ಸುಸಂಸ್ಕೃತವಾಗಿರುವ ಸಮಾಜವಾಗಿದೆ ಎಂದು ಹೇಳಿದರು. ದೇಶದ ಅಭಿವೃದ್ಧಿಗಾಗಿ ನೇರವಾಗಿ ಭಾಗಿಯಾಗದೇ ಇದ್ದರೂ ಪರೋಕ್ಷವಾಗಿ ಸಮಾಜದ ಪಾಲು ಇರುತ್ತದೆ. ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದು ಅವಶ
Posts
Showing posts from June, 2024
- Get link
- Other Apps
ಜೂ.30 ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದಿಂದ ಪ್ರತಿಭಾ ಪುರಸ್ಕಾರ ಹಾಗೂ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ: ವಿದ್ಯಾ ನಿಧಿ ಯೋಜನೆ ಮೂಲಕ ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ- ಡಿ.ಕೆ.ಮುರಳೀಧರ ರಾಯಚೂರು,ಜೂ.29-ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಜೂನ್ 30ರಂದು ಬೆಳಿಗ್ಗೆ 10ಕ್ಕೆ ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾನಿಧಿ ವಿತರಣಾ ಸಮಾರಂಭ ಆಯೋಜಿಸಲಾಗಿದೆ ಎಂದು ಎಕೆಬಿಎಂಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಕೆ ಮುರಳೀಧರ್ ಹೇಳಿದರು. ಬ್ರಾಹ್ಮಣ ಸಮಾಜದ ಎಸ್ಎಸ್ ಎಲ್ ಸಿ, ಪಿಯುಸಿಯಲ್ಲಿ ಶೇ.80 ರ ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಗುತ್ತಿದ್ದು. ಇದೇ ವೇಳೆ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಯೋಜನೆಯಡಿಯಲ್ಲಿ ವಿದ್ಯಾರ್ಥಿವೇತನ ನೀಡಲಾಗುವುದು. ಈ ಬಾರಿಯ ‘ವಿಪ್ರಶ್ರೀ’ ಪ್ರಶಸ್ತಿಯನ್ನು ಡಾ.ವಿ.ಜಿ ಕುಲಕರ್ಣಿ ಹಾಗೂ ದಾಸ ಸಾಹಿತಿ ತ್ರಿವೇಣಿಬಾಯಿ ಆಶ್ರಿತ್ ಅವರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಹಾರನಹಳ್ಳಿ ಉದ್ಘಾಟಿಸಲಿದ್ದು, ವಿದ್ಯಾನಿಧಿಯೋಜನೆ ಉದ್ಘಾಟನೆಯನ್ನು ಸಚಿವ ಎನ್.ಎಸ್. ಬೋಸ
- Get link
- Other Apps
ಜೂ.30 ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದಿಂದ ಪ್ರತಿಭಾ ಪುರಸ್ಕಾರ ಹಾಗೂ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ: ವಿದ್ಯಾ ನಿಧಿ ಯೋಜನೆ ಮೂಲಕ ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ- ಡಿ.ಕೆ.ಮುರಳೀಧರ ರಾಯಚೂರು,ಜೂ.29-ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಜೂನ್ 30ರಂದು ಬೆಳಿಗ್ಗೆ 10ಕ್ಕೆ ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾನಿಧಿ ವಿತರಣಾ ಸಮಾರಂಭ ಆಯೋಜಿಸಲಾಗಿದೆ ಎಂದು ಎಕೆಬಿಎಂಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಕೆ ಮುರಳೀಧರ್ ಹೇಳಿದರು. ಬ್ರಾಹ್ಮಣ ಸಮಾಜದ ಎಸ್ಎಸ್ ಎಲ್ ಸಿ, ಪಿಯುಸಿಯಲ್ಲಿ ಶೇ.80 ರ ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಗುತ್ತಿದ್ದು. ಇದೇ ವೇಳೆ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಯೋಜನೆಯಡಿಯಲ್ಲಿ ವಿದ್ಯಾರ್ಥಿವೇತನ ನೀಡಲಾಗುವುದು. ಈ ಬಾರಿಯ ‘ವಿಪ್ರಶ್ರೀ’ ಪ್ರಶಸ್ತಿಯನ್ನು ಡಾ.ವಿ.ಜಿ ಕುಲಕರ್ಣಿ ಹಾಗೂ ದಾಸ ಸಾಹಿತಿ ತ್ರಿವೇಣಿಬಾಯಿ ಆಶ್ರಿತ್ ಅವರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಹಾರನಹಳ್ಳಿ ಉದ್ಘಾಟಿಸಲಿದ್ದು, ವಿದ್ಯಾನಿಧಿಯೋಜನೆ ಉದ್ಘಾಟನೆಯನ್ನು ಸಚಿವ ಎನ್.ಎಸ್. ಬೋಸರ
- Get link
- Other Apps
ಮಂತ್ರಾಲಯ: ಶ್ರೀ ಜಯತೀರ್ಥರ ಮಹಿಮೋತ್ಸವ ಆಚರಣೆ. ರಾಯಚೂರು,ಜೂ.25- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಜಯತೀರ್ಥರ ಮಹಿಮೋತ್ಸವ(ಶ್ರೀ ಮನ್ ನ್ಯಾಯ ಸುಧಾ ಸಂಸ್ಮರಣೋತ್ಸವ) ನೆರವೇರಿತು. ಬೆಳಿಗ್ಗೆ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಜಯತೀರ್ಥರ ರಥೋತ್ಸವಕ್ಕೆ ಚಾಲನೆ ನೀಡಿದರು . ಶ್ರೀ ಜಯತೀರ್ಥರ ಜೀವನ ಮತ್ತು ಅವರ ಕೊಡುಗೆ ಬಗ್ಗೆ ಪಾಠ ಪ್ರವಚನ ನೆರವೇರಿದವು. ಈ ದಿನ ಶ್ರೀ ಮನ್ ನ್ಯಾಯ ಸುಧಾ ಗ್ರಂಥವನ್ನು ಶ್ರೀ ಪದ್ಮನಾಭ ತೀರ್ಥರಿಗೆ ಸಮರ್ಪಣೆ ಮಾಡಿದ ದಿನವಾಗಿ ಆಚರಿಸಲಾಗುತ್ತದೆ ಎಂದು ತಿಳಿಸಲಾಯಿತು. ಪೀಠಾಧಿಪತಿಗಳು ಅನುಗ್ರಹ ಸಂದೇಶ ನೀಡಿದರು ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು .
- Get link
- Other Apps
ನೂತನ ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ್ ರಿಂದ ಪ್ರಮಾಣ ವಚನ ಸ್ವೀಕಾರ. ರಾಯಚೂರು,ಜೂ.24- ನೂತನ ವಿಧಾನ ಪರಿಷತ್ ಸದಸ್ಯರಾದ ಎ.ವಸಂತ ಕುಮಾರ್ ರವರು ಇಂದು ಬೆಂಗಳೂರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಕಾನೂನು ಮತ್ತು ಸಂಸದೀಯ ಸಚಿವರಾದ ಹೆಚ್.ಕೆ.ಪಾಟೀಲ್ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಪಕ್ಷದ ಕಾರ್ಯಕರ್ತರು, ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಇದ್ದರು.
- Get link
- Other Apps
ಮುಂಗಾರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮನ ಸೆಳೆದ ಮುರಳಿಧರ ಕುಲಕರ್ಣಿ ಯವರ ನಿರೂಪಣೆ ರಾಯಚೂರು , ಜೂ.24-ಮುನ್ನೂರು ಕಾಪು ಸಮಾಜದ ವತಿಯಿಂದ ರಾಯಚೂರು ನಗರದಲ್ಲಿ ದಿನಾಂಕ 21 ರಿಂದ 23ರ ವರೆಗೆ ಪ್ರತಿದಿನ ಸಂಜೆ ಹಮ್ಮಿಕೊಂಡ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಕಾರ್ಯಕ್ರಮದಲ್ಲಿ ಖ್ಯಾತ ನಿರೂಪಕ ಮುರಳಿಧರ ಕುಲಕರ್ಣಿಯವರ ಸೊಗಸಾದ ನಿರೂಪಣೆ ಎಲ್ಲರ ಮನ ಸೆಳೆಯಿತು. ಬೃಹತ್ ವೇದಿಕೆ, ಬಣ್ಣ ಬಣ್ಣದ ಬೆಳಕಿನ ವ್ಯವಸ್ಥೆಯಲ್ಲಿ ನಡೆದ ಪ್ರತಿಭಾನ್ವಿತ ಕಲಾವಿದರ ಆಕರ್ಷಣೀಯ ನೃತ್ಯ ಕಾರ್ಯಕ್ರಮ ದಲ್ಲಿ ಮುರಳಿಧರ ಕುಲಕರ್ಣಿಯವರ ನಿರೂಪಣೆ ಎಲ್ಲರ ಮೆಚ್ಚುಗೆ ಗಳಿಸಿತು. ತುಮಕೂರು, ಧಾರವಾಡ, ಮೈಸೂರ, ನಿಂದ ಬಂದಂತ ಕಲಾವಿದರು ಸುಗ್ಗಿ ಹಾಡುಗಳಿಗೆ ಜಾನಪದ ಗೀತೆಗಳಿಗೆ, ಭಾವಗೀತೆಗಳಿಗೆ ಮನಮೋಹಕವಾಗಿ ನೃತ್ಯವನ್ನು ಮಾಡಿದರು. ಪ್ರತಿಯೊಂದು ನೃತ್ಯದ ವಿವರಣೆಯನ್ನು ಹಾಗೂ ಅದರ ತಾತ್ಪರ್ಯಗಳನ್ನು ಅವರ ಸಾಧನೆಗಳನ್ನು ಮುರಳಿಧರ ಕುಲಕರ್ಣಿ ತಮ್ಮ ನಿರೂಪಣೆಯಲ್ಲಿ ಅರ್ಥಪೂರ್ಣವಾಗಿ ಪ್ರಸ್ತುತಪಡಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಯಿತು. ಇದರ ಜೊತೆಗೆ ರಾಯಚೂರು ನಗರದ ವಿವಿಧ ಕಾಲೇಜುಗಳ ನೃತ್ಯ ಸ್ಪರ್ಧೆಯನ್ನು ಸಹ ಏರ್ಪಡಿಸಲಾಗಿತ್ತು. ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ ಸಹ ಎಲ್ಲರ ಮನಸ್ಸನ್ನು ಸೂರೆಗೊಂಡವು. ಕಾಲೇಜ ವಿದ್ಯಾರ್ಥಿಗಳು ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಇವರ ನಿರೂಪಣೆಯು ಅವ
- Get link
- Other Apps
ಮೂರು ದಿನಗಳ ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಅದ್ದೂರಿ ತೆರೆ: ಗಜ ಗಾತ್ರದ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ದೆ ವೀಕ್ಷಿಸಲು ಜನಜಂಗುಳಿ. ರಾಯಚೂರು,ಜೂ.23- ಮುನ್ನೂರು ಕಾಪು ಸಮಾಜ ಹಾಗೂ ಎಪಿಎಂಸಿ ಸಹಯೋಗದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದ ಮುಂಗಾರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಇಂದು ತೆರೆ ಬೀಳಲಿದೆ. ಮೊದಲ ದಿನ ಒಂದು ಟನ್, ನಂತರ ಎರಡನೆ ದಿನ ಕ್ರಮವಾಗಿ ಎರೆಡು ಟನ್, ಮೂರನೆ ದಿನ ಎರೆಡುವರೆ ಟನ್ ಭಾರವಾದ ಕಲ್ಲುಗಳನ್ನು ಎತ್ತುಗಳು ಎಳೆದವು ವಿವಿಧ ರಾಜ್ಯಗಳ ಎತ್ತುಗಳು ಸ್ಪರ್ದೆಯಲ್ಲಿ ಭಾಗವಹಿಸಿ ತಮ್ಮ ಮಾಲೀಕರಿಗೆ ಬಹುಮಾನ ತಂದುಕೊಟ್ಟವು. ಸಾಯಂಕಾಲ ವಿವಿಧ ರಾಜ್ಯಗಳಿಂದ ಆಗಮಿಸಿದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ನಿನ್ನೆ ಕಾರಹುಣ್ಣಿಮೆ ಅಂಗವಾಗಿ ಶ್ರೀ ಲಕ್ಷ್ಮಮ್ಮ ದೇವಿ ಮೆರವಣಿಗೆ, ಕಲಾ ತಂಡಗಳ ಪ್ರತಿಭೆ ಪ್ರದರ್ಶನ ಮತ್ತು ಆಲಂಕೃತ ಎತ್ತುಗಳ ಮೆರವಣಿಗೆ ನಡೆಯಿತು. ಮೆರವಣಿಗೆ ಸಾನಿಧ್ಯವನ್ನು ಹರಿಹರಪುರ ಶ್ರೀಗಳು ವಹಿಸಿದ್ದರು ಶ್ರೀ ಲಕ್ಷ್ಮಮ್ಮ ದೇವಸ್ಥಾನ ಅರ್ಚಕರು ಪಾಲ್ಗೊಂಡಿದ್ದರು. ಕೊನೆ ದಿನವಾದ ಇಂದು ಕಲ್ಲು ಗುಂಡು ಎತ್ತುವ ಸ್ಪರ್ಧೆ, ಕುಸ್ತಿಪಂದ್ಯಾವಳಿ ಪಡೆಯಲಿದೆ. ಮುಂಗಾರು ಸಾಂಸ್ಕೃತಿಕ ಹಬ್ಬದ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎ.ಪಾಪಾರೆಡ್ಡಿ ಮತ್ತು ಸಮಾಜದ ಅಧ್ಯಕ್ಷ ಬೆಲ್ಲಂ ನರಸ
- Get link
- Other Apps
ಕೇಂದ್ರ ಮಂತ್ರಿಗಳಾದ ಹೆಚ್ ಡಿ ಕೆ ಯಿಂದ ತರಾತುರಿಯಲ್ಲಿ ಅನುಮತಿ ಏಕೆ: ರಾಜ್ಯದ ಎರೆಡು ಗಣಿ ಕಂಪನಿಗಳಿಗೆ ಅನುಮತಿ ನೀಡಬಾರದು- ಎಸ್.ಆರ್.ಹಿರೇಮಠ ರಾಯಚೂರು,ಜೂ.22- ರಾಜ್ಯದಲ್ಲಿರುವ ಎರೆಡು ವಿವಾದಿತ ಗಣಿ ಕಂಪನಿಗಳಾದ ಕೆಐಓಸಿಎಲ್ ಮತ್ತು ವಿಐಎಸ್ಎಲ್ ಗೆ ಕೇಂದ್ರ ಮಂತ್ರಿಗಳಾದ ತತಕ್ಷಣ ತರಾತುರಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅನುಮತಿ ನೀಡಿರುವುದು ಏಕೆ ಎಂದು ಸಮಾಜ ಪರಿವರ್ತನಾ ಸಮುದಾಯದ ಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ ಪ್ರಶ್ನಿಸಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿರುವ ಜೀವ ವೈವಿಧ್ಯ ನಾಶ ಪಡಿಸಿ ಗಣಿಗಾರಿಕೆ ಮಾಡುವುದು ಎಷ್ಟು ಸರಿ ಎಂದ ಅವರು ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಮಂತ್ರಿಗಳು ತರಾತುರಿಯಲ್ಲಿ ಏಕೆ ನಿರ್ಧಾರ ಮಾಡಿದ್ದಾರೆಂಬುದು ತಿಳಿಯುತ್ತಿಲ್ಲ ಅವರು ಯಾವ ಆಸೆ ಆಮೀಷಗಳಿಗೆ ಮಣಿದು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ತಿಳಿಯುತ್ತಿಲ್ಲ ವೆಂದರು ಸಿಎಂ ಸಿದ್ದರಾಮಯ್ಯ ತಾವು ಈ ಬಗ್ಗೆ ಅಂತಿಮ ನಿರ್ಣಯ ಕೈಗೊಂಡಿಲ್ಲವೆಂದು ಹೇಳಿದ್ದು ಆಶಾಭಾವನೆ ಮೂಡಿಸಿದ್ದು ರಾಜ್ಯದ ಜನರ ಆರೋಗ್ಯ ಮತ್ತು ಸಸ್ಯ ಪ್ರಾಣಿ ಸಂಪತ್ತು ರಕ್ಷಣೆ ಅತ್ಯವಶಕವಾಗಿದೆ ಎಂದರು. ನಟ ದರ್ಶನ್ ತಪ್ಪಿತಸ್ಥರಾಗಿದ್ದರೆ ಕಾನೂನು ತನ್ನ ಕ್ರಮ ಕೈಗೊಳ್ಳಲೇ ಬೇಕೆಂದ ಅವರು ದರ್ಶನ್ ಅಭಿಮಾನಿಗಳು ಹುಚ್ಚು ಅಭಿಮಾನ ವ್ಯಕ್ತಪಡಿಸದೆ ಕಾನೂನಿಗೆ ಗೌರವ ನೀ
- Get link
- Other Apps
ಭಾರತ ಜಗತ್ತಿನ ಆರೋಗ್ಯಕ್ಕೆ ನೀಡಿದ ವಿಶೇಷ ಕೊಡುಗೆ ಯೋಗ: ತೇಜಸ್ ವಿಶ್ವಸ್ಥ ಮಂಡಲಿಯಿಂದ ವಿಶ್ವ ಯೋಗ ದಿನ ಆಚರಣೆ. ರಾಯಚೂರು,ಜೂ.22- ಪತಂಜಲಿ ಮುನಿಗಳ ಅಷ್ಟಾಂಗ ಯೋಗ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯಪೂರ್ಣ ಹಾಗು ಸಂತೃಪ್ತ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಸ್ವಾಮಿ ವಿವೇಕಾನಂದ ಸಮಗ್ರ ಆರೋಗ್ಯ ಕೇಂದ್ರದ ಟ್ರಸ್ಟಿಗಳಾದ ಡಾ. ಕಿರಣ್ ಖೇಣೇದ್ ಅವರು ನುಡಿದರು. ರಾಯಚೂರು ನಗರದ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ತೇಜಸ್ ವಿಶ್ವಸ್ಥ ಮಂಡಲಿ ಹಾಗು ಸ್ವಾಮಿ ವಿವೇಕಾನಂದ ಸಮಗ್ರ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಜೂ 21 ರಂದು ಆಯೋಜಿಸಿದ್ದ 10 ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗ ಎಂದರೆ, ಕೇವಲ ಆಸನ, ಪ್ರಾಣಾಯಾಮ, ಧ್ಯಾನ ಮಾಡುವುದಷ್ಟೇ ಅಲ್ಲ, ಯೋಗ ಎಂದರೆ, ಎಲ್ಲರನ್ನೂ, ಎಲ್ಲವನ್ನೂ ಜೋಡಿಸುವುದು ಅದೊಂದು ಜೀವನ ಕಲೆ. ಪತಂಜಲಿ ಮುನಿ ಅವರೊಬ್ಬ ದಾರ್ಶನಿಕರು. ಭಾರತದ ಯೋಗ ಇಂದು ಜಗತ್ತನ್ನು ಒಂದುಗೂಡಿಸುತ್ತಿದೆ. ನಾವೆಲ್ಲರೂ ಪರಸ್ಪರರ ಭಾವನೆಗಳನ್ನು ಗೌರವಿಸುತ್ತಾ, ಸಾಮರಸ್ಯದ ಬದುಕನ್ನು ನಡೆಸುತ್ತಾ ಸಮಾಜಯೋಗಿಗಳಾಗೋಣ ಎಂದು ಕರೆನೀಡಿದರು. ಸ್ವಾಮಿ ವಿವೇಕಾನಂದ ಸಮಗ್ರ ಆರೋಗ್ಯ ಕೇಂದ್ರದ ಅನುಭವಿ ಯೋಗ ಚಿಕಿತ್ಸಕರಾದ ರಾಘವೇಂದ್ರ ಗುರುಮಿಟಕಲ್ ಅವರು ವಿವಿಧ ಯೋಗಾಭ್ಯಾಸಗಳನ್ನು ಮಾಡಿಸಿ, ಅದರಿಂದಾ
- Get link
- Other Apps
ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ: ಅಧಿಕಾರಿಗಳು ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ- ಡಾ.ಶರಣ ಪ್ರಕಾಶ್ ಪಾಟೀಲ್. ರಾಯಚೂರು,ಜೂ.21- ಅಧಿಕಾರಿಗಳು ಶಿಸ್ತುಬಧ್ಧರಾಗಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು. ಅವರಿಂದು ನಗರದ ಜಿ.ಪಂ ಸಭಾಂಗಣದಲ್ಲಿ ಕುಡಿಯುವ ನೀರು , ಬೀಜ ಮತ್ತು ಗೊಬ್ಬರ ದಾಸ್ತಾನು ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಡಿಯುವ ನೀರು ಸರಬರಾಜು ಬಗ್ಗೆ ನಗರ ಸೇರಿದಂತೆ ತಾಲೂಕುವಾರು ಮಾಹಿತಿ ಪಡೆದ ಅವರು ನಗರದಲ್ಲಿ ಜಲ ಶುದ್ಧಿಕರಣ ಘಟಕ ಕಾರ್ಯನಿರ್ವಹಣೆ ಬಗ್ಗೆ ಅಧಿಕಾರಿಗಳಿಗೆ ಚಾಟಿ ಬೀಸಿದರು. ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ್ ಮಾತನಾಡಿ ದೇವಸ್ಗೂರಿನಲ್ಲಿ ನಿಜಾಮರ ಕಾಲದ ನೀರು ಶುದ್ಧೀಕರಣ ಸಂಗ್ರಹಗಾರ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ತರಾಟೆ ತೆಗೆದುಕೊಂಡು ಅದು ಈಗ ಅನಧಿಕೃತ ವ್ಯಕ್ತಿಗಳ ಪಾಲಾಗಿದ್ದು ಅದರ ಬಗ್ಗೆ ಗಮನ ಹರಿಸಿ ಎಂದ ಅವರು ನಗರದಲ್ಲಿ ಜಲ ಶುದ್ಧಿಕರಣ ಘಟಕಗಳಲ್ಲಿ ಲ್ಯಾಬ್ ಟೆಕ್ನಿಷಿಯನ್ ಇಲ್ಲದೆ ಸಮರ್ಪಕವಾಗಿ ಜಲ ಶುದ್ಧೀಕರಣ ವಾಗುತ್ತಿಲ್ಲವೆಂದರು. ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ
- Get link
- Other Apps
ನಟ ದರ್ಶನ್ ಪ್ರಕರಣದಲ್ಲಿ ಯಾವುದೆ ಸಚಿವರ ಹಸ್ತಕ್ಷೇಪವಿಲ್ಲ: ನೀಟ್ ಪರೀಕ್ಷೆ ಹಗರಣ ಮೋದಿ ವಿಫಲತೆ ಕಾರಣ- ಡಾ.ಶರಣಪ್ರಕಾಶ ಪಾಟೀಲ್. ರಾಯಚೂರು,ಜೂ.21- ನಟ ದರ್ಶನ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಯಾವ ಸಚಿವರು ಹಸ್ತಕ್ಷೇಪ ಮಾಡಿಲ್ಲವೆಂದು ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು. ಅವರಿಂದು ನಗರದಲ್ಲಿ ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ ಕಾನೂನು ತನ್ನ ಕಾರ್ಯ ಮಾಡುತ್ತಿದೆ ನಮ್ಮ ಸರ್ಕಾರದ ಯಾವೊಬ್ಬ ಮಂತ್ರಿಯೂ ದರ್ಶನ ಪ್ರಕರಣದಲ್ಲಿ ತನಿಖಾಧಿಕಾರಿಗೆ ಒತ್ತಡ ಹೇರಿಲ್ಲ ಅಥವಾ ಅವರ ಬದಲಾವಣೆಗೆ ಪ್ರಯತ್ನಿಸಿಲ್ಲ ವೆಂದ ಅವರು ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಕಾನೂನು ಎಲ್ಲರಿಗೂ ಒಂದೆ ಎಂದರು. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕೆ ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿಫಲತೆ ತೋರಿಸುತ್ತದೆ ಎಂದ ಅವರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ ಈ ಬಗ್ಗೆ ಮೋದಿಯವರು ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದ ಅವರು ನೀಟ್ ರದ್ದತಿ ರಾಜ್ಯ ಸರ್ಕಾರ ಮಾಡಲು ಬರುವುದಿಲ್ಲ ಅದು ಮಾಡಬೇಕಾದರೆ ಸಂಸತ್ತಿನಲ್ಲಿ ನಿಯಮ ತಿದ್ದುಪಡಿಮಾಡಬೇಕಾಗುತ್ತದೆ
- Get link
- Other Apps
ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಅದ್ದೂರಿ ಚಾಲನೆ: ರೈತರಿಗೆ ಉತ್ತೇಜನ ನೀಡುವ ಕಾರ್ಯ ಶ್ಲಾಘನೀಯ . ರಾಯಚೂರು,ಜೂ.21- ಕಾರಹುಣ್ಣಿಮೆ ಅಂಗವಾಗಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಆಯೋಜಿಸಲಾಗುತ್ತಿರುವುದು ಶ್ಲಾಘನೀಯ ಕಾರ್ಯವೆಂದು ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು. ಅವರಿಂದು ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಮುನ್ನೂರು ಕಾಪು ಸಮಾಜ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಮ್ಮಿಕೊಂಡಿರುವ 24 ನೇ ವರ್ಷದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಮೊದಲ ದಿನ ಎತ್ತುಗಳಿಂದ ಒಂದು ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಇದೊಂದು ವಿಶಿಷ್ಟ ಬಗೆಯ ಹಬ್ಬ ಭಾರತ ದೇಶ ಕೃಷಿ ಪ್ರಧಾನ ದೇಶ ರೈತರು ದೇಶದ ಬೆನ್ನೆಲುಬು ಅವರು ಬೆಳೆದರೆ ಮಾತ್ರ ದೇಶಕ್ಕೆ ಆಹಾರ ಸಿಗುತ್ತದೆ ಅವರಿಗೆ ಉತ್ತೇಜನ ನೀಡಲು ಪ್ರತಿ ವರ್ಷ ಈ ಕಾರ್ಯಕ್ರಮ ಆಯೋಜಿಸಿತ್ತಿರುವ ಮಾಜಿ ಶಾಸಕರಾದ ಪಾಪರೆಡ್ಡಿ ಮತ್ತು ಮುನ್ನೂರು ಕಾಪು ಸಮಾಜದ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ ,ಸಮಾಜ ಬಾಂಧವರಿಗೆ ಮತ್ತು ರೈತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸಾನಿಧ್ಯವನ್ನು ವಿವಿಧ ಮಠಾಧೀಶರು ವಹಿಸಿದ್ದರು. ಈ
- Get link
- Other Apps
ಎಸ್ಟಿ ಅಭಿವೃದ್ಧಿ ನಿಗಮ ಅವ್ಯವಹಾರ ಸಿಬಿಐ ತನಿಖೆಗೆ ವಹಿಸಿ: ಶಾಸಕ ದದ್ದಲ್ ರಾಜೀನಾಮೆ ನೀಡಬೇಕು- ಎಂ.ವಿರುಪಾಕ್ಷಿ. ರಾಯಚೂರು,ಜೂ.20- ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ ತನಿಖೆ ಸಿಬಿಐ ವಹಿಸಬೇಕು ಹಾಗು ನೈತಿಕ ಹೊಣೆ ಹೊತ್ತು ನಿಗಮದ ಅಧ್ಯಕ್ಷ ಶಾಸಕ ದದ್ದಲ್ ಬಸನಗೌಡ ರಾಜೀನಾಮೆ ನೀಡಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಹುಕೋಟಿ ಅವ್ಯವಹಾರವಾಗಿದೆ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಲ್ಲದೆ ಇದ್ದಕ್ಕೆ ಸಂಬಂಧಿಸಿದ ಖಾತೆ ನಿಭಾಯಿಸುತ್ತಿದ್ದ ಸಚಿವ ನಾಗೇಂದ್ರ ಸಹ ರಾಜೀನಾಮೆ ನೀಡಿದ್ದಾರೆ ಆದರೆ ನಿಗಮದ ಅಧ್ಯಕ್ಷ ಶಾಸಕ ದದ್ದಲ್ ಬಸನಗೌಡ ಸಹ ಇದರಲ್ಲಿ ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಕಾಣುತ್ತಿದೆ ಮತ್ತು ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಬರುವ ಮುಂಚೆಯೇ ಕೋಟ್ಯಾಂತರ ರುಪಾಯಿ ವಿವಿಧ ಖಾತೆಗಳಿಗೆ ಜಮಾವಣೆಯಾಗಿದ್ದು ನಿಗಮದ ಅಧ್ಯಕ್ಷರ ಗಮನಕ್ಕಿರದೆ ಇದು ಅಸಾಧ್ಯವೆಂದು ಆರೋಪಿಸಿದ ಅವರು ಕೂಡಲೆ ರಾಜೀನಾಮೆ ನೀಡಬೇಕೆಂದರು. ಈ ಸಂದರ್ಭದಲ್ಲಿ ಸಣ್ಣ ನರಸಿಂಹ ನಾಯಕ, ಹಂಪಯ್ಯ ನಾಯಕ, ನಾಗರಾಜ್ , ಭೀಮರೆಡ್ಡಿ ಇನ್ನಿತರರು ಇದ್ದರು.
- Get link
- Other Apps
ಬೆಂಗಳೂರಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ: ರಾಯಚೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಚುರುಕುಗೊಳಿಸಿ- ಸಚಿವ ಎನ್. ಎಸ್ ಬೋಸರಾಜು - ರಾಯಚೂರು, ಜೂ.19- ರಾಯಚೂರು ಜಿಲ್ಲೆಗೆ ಸಂಭಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್. ಎಸ್ ಭೋಸರಾಜು ಹಾಗೂ ರಾಯಚೂರು ಸಂಸದರಾದ ಜಿ. ಕುಮಾರ್ ನಾಯಕ್ ಅವರ ಸಮಕ್ಷಮದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೊಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಯಿತು. ಸೂರತ್ - ಚೆನ್ನೈ, ಹುನಗುಂದ - ರಾಯಚೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿಯ ಬಗ್ಗೆ ಮಾಹಿತಿಯನ್ನು ಪಡದುಕೊಂಡರು. ಹುನಗುಂದ - ರಾಯಚೂರು ಆರ್ಥಿಕ ಕಾರಿಡಾರ್ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ ಅದನ್ನ ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಿದರು. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಇರುವಂತಹ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳುವಂತೆ ನಿರ್ದೇಶನ ನೀಡಿದರು. ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಶಿಥಿಲವಾಗಿದೆ. ಭಾರೀ ಗಾತ್ರದ ವಾಹನಗಳು ಓಡಾಟದಿಂದ ತೊಂದರೆ ಆಗುವ ಸಾಧ್ಯತ
- Get link
- Other Apps
ರಿಮ್ಸ್ ನಲ್ಲಿ ಬೈಲಾ ನಿಯಮ ಪಾಲಿಸದೆ ನೇಮಕಾತಿ ಹಾಗೂ ಭ್ರಷ್ಟಾಚಾರ- ರಾಜು ಪಟ್ಟಿ. ರಾಯಚೂರು,ಜೂ.19- ರಾಯಚೂರು ವೈದ್ಯಕೀಯ ವಿಜ್ಞಾನ ಕೇಂದ್ರದಲ್ಲಿ ಬೈಲಾ ನಿಯಮ ಪಾಲಿಸುತ್ತಿಲ್ಲ ಹಾಗೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾ ಅಧ್ಯಕ್ಷ ರಾಜು ಪಟ್ಟಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಿಮ್ಸ್ ನಲ್ಲಿ ಅಲ್ಲಾ ಬಕ್ಷ ಎಂಬ ಸಿಎಂಓ ಅಧಿಕಾರಿ ಉನ್ನತ ವ್ಯಾಸಂಗಕ್ಕಾಗಿ ಪೂರ್ವಾನುಮತಿಯಿಲ್ಲದೆ ತೆರಳಿರುತ್ತಾರೆ ಮೂರು ವರ್ಷ ನಂತರ ಅವರನ್ನು ಮರಳಿ ಅದೆ ಹುದ್ದೆಯಲ್ಲಿ ಅಂದಿನ ನಿರ್ದೆಶಕ ಬಸವರಾಜ ಪೀರಾಪೂರು ಮುಂದೆವರಿಸಿರುತ್ತಾರೆ ಎಂದರು. ಶಾಮಣ್ಣ ಮಾಚನೂರು ರವರನ್ನು ಸ್ಥಾನಿಕ ವೈದ್ಯಾಧಿಕಾರಿಯಾಗಿ ನೇಮಿಸಲಾಗಿದ್ದು ಕಾನೂನು ಬಾಹಿರ ಏಕೆಂದರೆ ಸರ್ಕಾರ ಈ ಹುದ್ದೆ ಸೃಜನೆ ಮಾಡಿರುವುದಿಲ್ಲವೆಂದ ಅವರು ವೈದ್ಯಕೀಯ ಅಧೀಕ್ಷಕ ಹುದ್ದೆಗೆ ಬಿಡಿಎಸ್ ಅಮರ್ ವರ್ಮಾ ನೇಮಿಸಲಾಗಿದ್ದು ಇದು ಸಹ ನಿಯಮಾವಳಿ ಉಲ್ಲಂಘನೆ ಎಂದು ದೂರಿದರು.ಎಸ್ಟೇಟ್ ಅಧಿಕಾರಿಯನ್ನಾಗಿ ಬಸವರಾಜ್ .ಎಂ ಎಂಬುವ ರನ್ನು ನೇಮಕ ಮಾಡಿಕೊಂಡಿರುತ್ತಾರೆ ಅದು ಕಾನೂನು ಬಾಹಿರ ಏಕೆಂದರೆ ಈ ಹುದ್ದೆಗೆ ಲೋಕೋಪಯೋಗಿ ಇಲಾಖೆಯಲ್ಲಿ ಕನಿಷ್ಟ ಹತ್ತು ವರ್ಷ ಸೇವೆ ಗೈದು ನಿವೃತ್ತರಾದವರು ಅರ್ಹರು ಆದರೆ ವಿದ್ಯಾರ್ಹತೆಯ ಇಲ್ಲದವರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು ರಿಮ್ಸ್ ರಕ್ತ ನಿಧಿಯಲ್ಲಿ ಖಾಸಗಿ ಆಸ್ಪತ
- Get link
- Other Apps
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜೂ.21 ರಂದು ಬಿಜೆಪಿಯಿಂದ ರಸ್ತೆ ತಡೆ ಪ್ರತಿಭಟನೆ : ಗ್ಯಾರಂಟಿ ಭಾಗ್ಯಗಳೊಂದಿಗೆ ಕಾಂಗ್ರೆಸ್ ನಿಂದ ಬೆಲೆ ಏರಿಕೆ ಭಾಗ್ಯ- ಡಾ.ಶಿವರಾಜ ಪಾಟೀಲ್. ರಾಯಚೂರು,ಜೂ.19- ರಾಜ್ಯ ಸರ್ಕಾರದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜೂ.21 ರಂದು ಜಿಲ್ಲೆಯಾದ್ಯಂತ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಹಾಗೂ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು. ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರ ಏಕಾಏಕಿ ಲೋಕಸಭಾ ಚುನಾವಣೆ ಮುಕ್ತಾಯವಾದ ನಂತರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿದ್ದು ಜನ ಸಾಮಾನ್ಯರ ಮೇಲೆ ಹೊರೆ ಹಾಕಿದೆ ಎಂದರು. ಸಿಎಂ ಸಿದ್ದರಾಮಯ್ಯ ಹಣಕಾಸು ಖಾತೆ ಸಹ ನಿಭಾಯಿಸುತ್ತಿದ್ದು 15 ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಅವರು ರಾಜ್ಯದ ಆರ್ಥಿಕ ಸ್ಥಿತಿಗತಿ ಅರಿಯದೆ ಐದು ಗ್ಯಾರಂಟಿಗಳನ್ನು ಉಚಿತವಾಗಿ ನೀಡಿ ಅವುಗಳಿಗೆ ಬೇಕಾಗುವ ಹಣಕಾಸು ವ್ಯವಸ್ಥೆ ಮಾಡಲು ಆಗದೆ ತೈಲ ಬೆಲೆ ಏರಿಕೆ ಮಾಡಿ ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಜನರ ಜೇಬಿಗೆ ಕತ್ತರಿ ಹಾಕಿದಂತಾಗಿದೆ ಎಂದರು. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಅನುದಾನ ಮತ್ತು ಪರಿಹಾರ ನ್ಯಾಯಯುತವಾಗಿ ನೀಡಿದೆ ಅಲ್ಲದೆ ಜಾಗತಿಕ ಮಟ
- Get link
- Other Apps
ಜೂ.21 ರಿಂದ 23 ರವರೆಗೆ ನಗರದಲ್ಲಿ ಮೈಸೂರು ದಸರಾ ಮಾದರಿಯಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ: ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ದೆ, ಲಕ್ಷ್ಮಮ್ಮದೇವಿ ಮೂರ್ತಿ ಅಂಬಾರಿ ಮೆರವಣಿಗೆ, ನೃತ್ಯರೂಪಕ, ಕುಸ್ತಿ ಮುಂತಾದ ವೈವಿಧ್ಯಮಯ ಕಾರ್ಯಕ್ರಮ - ಪಾಪಾರೆಡ್ಡಿ. ರಾಯಚೂರು,ಜೂ.18- ನಗರದಲ್ಲಿ ಜೂ.21 ರಿಂದ 23ರವರೆಗೆ ಮೂರು ದಿನಗಳ ಕಾಲ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಆಯೋಜಿಸಲಾಗುತ್ತಿದೆ ಎಂದು ಮಾಜಿ ಶಾಸಕರು ಹಾಗು ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಧ್ಯಕ್ಷರಾದ ಎ.ಪಾಪಾರೆಡ್ಡಿ ಹೇಳಿದರು. ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸತತ 24 ವರ್ಷಗಳಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಆಯೋಜಿಸಲಾಗುತ್ತಿದ್ದು ಈ ವರ್ಷವು ಮುನ್ನೂರು ಕಾಪು ಸಮಾಜದ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಂಯುಕ್ತ ಸಹಕಾರದೊಂದಿಗೆ ಜೂ.21 ರಂದು ನಗರದ ರಾಜೇಂದ್ರ ಗಂಜ್ ಅವರಣದಲ್ಲಿ ಬೆಳಿಗ್ಗೆ 8ಕ್ಕೆ ನಡೆಯುವ ಉದ್ಘಾಟನಾ ಸಮಾರಂಭ ಸಾನಿಧ್ಯವನ್ನು ವಿವಿಧ ಮಠಾಧೀಶರು ವಹಿಸಲಿದ್ದು ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ನೆರವೇರಿಸಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಶಾಸಕರು , ವಿಧಾನಪರಿಷತ್ ಸದಸ್ಯರು,ವಿವಿಧ ಸಮಾಜದ ಅಧ್ಯಕ್ಷರು,ಗಣ್ಯರು ಭಾಗವಹಿಸಲಿದ್ದು ಅಂದು ಕ
ಸ್ಟಾರ್ ವಾಸವಿ ಕ್ಲಬ್ ವತಿಯಿಂದ ಡಾನ್ ಟು ಡಸ್ಕ್ ಕಾರ್ಯಕ್ರಮ
- Get link
- Other Apps
ಸ್ಟಾರ್ ವಾಸವಿ ಕ್ಲಬ್ ವತಿಯಿಂದ ಡಾನ್ ಟು ಡಸ್ಕ್ ಕಾರ್ಯಕ್ರಮ ರಾಯಚೂರು,ಜೂ.17- ಸ್ಟಾರ್ ವಾಸವಿ ಕ್ಲಬ್ ವತಿಯಿಂದ ಡಾನ್ ಟು ಡಸ್ಕ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ವಿಶೇಷವಾಗಿ ಅಂದ ಮಕ್ಕಳಿಗೆ ಬ್ಲೈಂಡ್ ಸ್ಟಿಕ್ ಕೊಡಲಾಯಿತು ಹಾಗೂ ನಗರದ ಟ್ರಾಫಿಕ್ ಪೊಲೀಸ್ ರಿಗೆ ಸನ್ಮಾನಿಸಿ ಫ್ಲೋರೋ ಸೆಟ್ ಜಾಕೆಟ್ ಮತ್ತು ಮಾಸ್ಕ್ ಟ್ರಾವೆಲ್ ಕೊಡಲಾಗಿದೆ ಹಾಗೂ ಬಿಜನಗೇರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 200 ವಿದ್ಯಾರ್ಥಿಗಳಿಗೆ ನೋಟ್ಬುಕ್ ಮತ್ತು ಪೆನ್ನು ಪೆನ್ಸಿಲ್ ಮತ್ತು ಸಾವಿರ ಲೀಟರ್ ನೀರಿನ ವಾಟರ್ ಟ್ಯಾಂಕ್ ಕೊಡಲಾಗಿದೆ, ಕ್ಲಬ್ಬಿನ ಆರು ಜನ ಸದಸ್ಯರು ನೇತ್ರದಾನ ಮಾಡುವುದಾಗಿ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ವಾಸವಿ ಕ್ಲಬ್ಬಿನ ಅತಿಥಿಗಳಾದ ತಿರುಪತಿ ನಿವಾಸಿ ರಚ್ಚಪಲ್ಲಿ ಬಾಲಾಜಿ, ಮೆಹೆಬೂಬುನಗರ ವಾಸವಿ ಕ್ಲಬ್ಬಿನ ಆರ್ ಸಿ ಚಂದ್ರಶೇಖರ್ ,ವಾಸವಿ ಕ್ಲಬ್ಬಿನ ಗವರ್ನರ್ ಬಿ ಜಗದೀಶ್ ಗುಪ್ತ, ಅಧ್ಯಕ್ಷರಾದ ಗಾಣದಾಳ್ ತಿಪ್ಪಯ್ಯ ಶೆಟ್ಟಿ ,ಕಾರ್ಯದರ್ಶಿ ಡಿ ಮಂಜುನಾಥ್, ಮತ್ತು ಬಿ ಪ್ರದೀಪ್ ಕುಮಾರ್, ಕೊಂಪಲ್ ಪ್ರಶಾಂತ್, ಸಾವಿತ್ರಿ ಶ್ರೀ ಕಾರ್ ನಾಗ್, ಎಂ ಆರ್ ಬಾಬು, ಶ್ರೀ ಹರ್ಷ, ನೀಲಕಂಠ, ಮನಸಾನಿ ಸತ್ಯನಾರಾಯಣ, ಜೋನ್ ಚೇರ್ಮನ್ ಸಂತೋಷಿ ಅರಾಲಿ, ಚಾಗಿ ವಿನೋದ್, ನಂದನ್ ಗುರು , ವೀರಂ ವಿಜಯ್, ಕೆ ಪಿ ವೀರೇಶ್, ಬಿ ಟಿ ಹನುಮಂತಯ್ಯ, ಮತ್ತು ವಾಸವಿ ಕ್ಲಬ್ಬಿನ ಸದಸ್ಯರು ಭಾಗವಹಿಸಿದ್ದರು.