Posts

Showing posts from September, 2024
Image
  ಸೆ.21 ಮತ್ತು 22 ರಂದು ಗೋವಿಂದ ಗಾನ  ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮ:                      ದಾಸರು ಇಡಿ ಮನುಕುಲಕ್ಕೆ ಸೀಮಿತ- ಶೇಷಗಿರಿ ದಾಸ್.                          ರಾಯಚೂರು,ಸೆ.16- ಹರಿದಾಸ ಸೇವಾ ಇಂಟರ್ ನ್ಯಾಷನಲ್ ಹಾಗೂ ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ಸಂಯುಕ್ತಾಶ್ರಯದಲ್ಲಿ ಸೆ.21 ಮತ್ತು 22 ರಂದು ಗೋವಿಂದ ಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಖ್ಯಾತ ಗಾಯಕ ಹಾಗೂ ಗೋವಿಂದ ಗಾನ ಅಧ್ಯಕ್ಷರಾದ ಶೇಷಗಿರಿ ದಾಸ್ ಹೇಳಿದರು.                     ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದಾಸರ ತವರೂರು, ದಾಸರ ತೊಟ್ಠಿಲು ಎಂದು ಕರೆಸಿಕೊಳ್ಳುವ ರಾಯಚೂರು ಜಿಲ್ಲೆಯಲ್ಲಿ ಅನೇಕ ದಾಸರು ಜನ್ಮ ತಾಳಿದ್ದಾರೆ ಅಂತಹವರಲ್ಲಿ ಅಸ್ಕಿಹಾಳ ಗೋವಿಂದ ದಾಸರು ಸಹ ಒಬ್ಬರು ಅವರು ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಇಡಿ ಮನುಕುಲಕ್ಕೆ ಮೀಸಲಿದ್ದವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ದಾಸ ದೀಕ್ಷೆ ನೀಡಿ ಉದ್ಧರಿಸಿದವರು ಎಂದರು. ಅಸ್ಕಿಹಾಳ ಗೋವಿಂದ ದಾಸರ ಸಂಸ್ಮರಣೆ ಗೋವಿಂದ ಗಾನ ಕಳೆದ ಹತ್ತು ವರ್ಷದಿಂದ ನಡೆಯುತ್ತಿದ್ದು ಕಳೆದ ಎರೆಡು ವರ್ಷ ಕೋವಿಡ್ ಮತ್ತು ಇನ್ನಿತರ ಕಾರಣಕ್ಕೆ ಗೋವಿಂದ ಗಾನ ಆಯೋಜಿಸರಲಿಲ್ಲ ಇದೀಗ ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆಂದರು.       ಸೆ.21 ರಂದು ಸಂಜೆ 5.30ಕ್ಕೆ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುವ ಕಾರ್ಯಕ
Image
  ಮಧ್ಯಾಹ್ನದವರೆಗೂ ಮುಂದುವರೆದ ಗಣೇಶ ವಿಸರ್ಜನೆ:                                         ಖಾಸ ಬಾವಿಯಲ್ಲಿ ಗಣಪತಿಗೆ ಬೀಳ್ಕೊಡುಗೆ.            ರಾಯಚೂರು,ಸೆ.16- ನಗರದಲ್ಲಿ ಪ್ರತಿಷ್ಟಾಪನೆ ಮಾಡಿರುವ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ  ಭವ್ಯ ರೀತಿಯಲ್ಲಿ ಭಾರಿ ಸಂಭ್ರಮ ಸಡಗರದಿಂದ ನೆರವೇರಿತು. ನಿನ್ನೆ ತಡರಾತ್ರಿಯಿಂದ ಆರಂಭವಾದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಮಧ್ಯಾಹ್ನದವರೆಗೂ ಮುಂದುವರೆಯಿತು. ನಗರದ ಮಾವಿನ ಕೆರೆ ಬಳಿಯ ಐತಿಹಾಸಿಕ ಖಾಸ ಬಾವಿ ಬಳಿ ಗಣೇಶ ಮೂರ್ತಿಗಳು ವಿಸರ್ಜನೆಗೆ ಸಾಲುಗಟ್ಟಿದ್ದವು. ಎರೆಡು ಬೃಹತ್ ಕ್ರೇನ್ ಗಳು ಗಣೇಶ ಮೂರ್ತಿಗಳನ್ನು ಬಾವಿಯಲ್ಲಿ ವಿಸರ್ಜನೆ ಮಾಡಲು ನಿಯೋಜನೆಗೊಂಡಿದ್ದವು. ಜಿಲ್ಲಾಡಳಿತ ಮತ್ತು ನಗರಸಭೆಯಿಂದ ಗಣೇಶ ವಿಸರ್ಜನೆಗೆ ಸಕಲ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು .ಸ್ಥಳದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬಾವಿ ಬಳಿ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದರು. ನಗರದ ಪ್ರಮುಖ  ಬೀದಿಗಳು ಕೇಸರಿ ಬಣ್ಣ ಮತ್ತು  ಗುಲಾಲುಗಳಿಂದ ವರ್ಣಮಯವಾಗಿತ್ತು. ಖಾಸ ಬಾವಿ ಬಳಿ ಅಪಾರ ಸಂಖ್ಯೆಯಲ್ಲಿ ಜನರು ನೆರೆದು ಗಣೇಶನಿಗೆ ವಿದಾಯ ಹೇಳಿ ಮುಂದಿನ ವರ್ಷ ಮರಳಿ ಬರುವಂತೆ ಭಕ್ತಿಯಿಂದ ಪ್ರಾರ್ಥಿಸಿದರು. ಒಟ್ಟಾರೆ ಗಣೇಶ ವಿಸರ್ಜನೆ ಶಾಂತಿಯುತವಾಗಿ ನೆರವೇರಿತು.
Image
  ಒಂಬತ್ತನೆ ದಿನದ ಗಣೇಶ ವಿಸರ್ಜನೆಗೆ ಅಣಿಯಾಗುತ್ತಿರುವ ನಗರ : ಕಿವಿ ಗಡಚಿಕ್ಕುವ ಸಂಗೀತದಲ್ಲಿ ಯುವಕರ ಕುಣಿತ.                  ರಾಯಚೂರು,ಸೆ.15- ನಗರದೆಲ್ಲೆಡೆ ಒಂಬತ್ತನೆ ದಿನದ ಸಾರ್ವಜನಿಕ ಗಣೇಶೋತ್ಸವ ವಿಸರ್ಜನೆಗೆ ಅಣಿಯಾಗುತ್ತಿದೆ. ನಗರದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಗೆ ಕ್ಷಣಗಣನೆ ಪ್ರಾರಂಭವಾಗಿದೆ ತೀನ್ ಕಂದೀಲ್, ಮಹಾಬಳೇಶ್ವರ ವೃತ್ತದಲ್ಲಿ ಕೇಂದ್ರೀಯ ಗಜಾನನ ಸಮಿತಿಗಳು ಗಣೇಶ ಸಮಿತಿಗಳ ಪದಾಧಿಕಾರಿಗಳಿಗೆ ಸನ್ಮಾನಿಸಿ ಗಣೇಶನಿಗೆ ಬೀಳ್ಕೊಡುತ್ತಿದ್ದಾರೆ. ಬೃಹತ್ ಹೂವಿನ ಹಾರ ಕ್ರೇನ್ ಮೂಲಕ ಗಣೇಶನಿಗೆ ಸಮರ್ಪಣೆ ಮಾಡಲಾಯಿತು. ಬಾಣ ಬಿರಿಸು, ಕಿವಿಗಡಚಿಕ್ಕುವ ಸಂಗೀತದಲ್ಲಿ ಯುವಕರು ಕುಣಿತ ಸಂಭ್ರಮ ಸಡಗರಕ್ಕೆ ಸಾಕ್ಷಿಯಾಗಿದೆ. ವಿಸರ್ಜನಾ ಮೆರವಣಿಗೆ ವೀಕ್ಷಿಸಲು ಮಹಿಳೆಯರು, ಮಕ್ಕಳು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಶಸ್ತ್ರ ಮೀಸಲು ಪಡೆ ತುಕಡಿ ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟ ಮಾದಯ್ಯ ನಗರದೆಲ್ಲಡೆ ಸಂಚರಿಸಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನಿಗವಹಿಸಿದ್ದಾರೆ.
Image
ನಗರದಲ್ಲಿ ‌ವಿಜೃಂಭಣೆಯಿಂದ ಕೋಳಂಕಿ ಪರ್ವ:                        ಧರ್ಮ‌ ರಕ್ಷಣೆ ಮಾಡಿದವರು ಕೋಳಂಕಿ ಶ್ರೀ  ಗುರು ಪಾದೇಶ್ವರರು- ದದ್ದಲ್.                                                        ರಾಯಚೂರು ಸೆ.೧೫.   ಸಮಾಜದಲ್ಲಿ ದರ್ಮ‌ ರಕ್ಷಣೆ ಮಾಡಿದ ಕೋಳಂಕಿ ಗುರು ಪಾದೇಶ್ವರರು ಎಂದು ಗ್ರಾಮೀಣ         ಶಾಸಕರಾದ ಬಸನ ಗೌಡ ದದ್ದಲ್ ಮತ್ತು ಕಿಲ್ಲೆ ಬ್ರಹನ್ಠದ ಮಠಾಧೀಶರಾದ ಶಾಂತ ಮಲ್ಲ ಶಿವಾ ಚಾರ್ಯ ಮಹಾಸ್ವಾ ಮಿಗಳು ಮಾತಾನಾಡಿದರು. ಇಂದು ೧೦೮ ಸಾವಿರ ದೇವರು ಜೀವೈಕ್ಯ ಕೋಳಂಕಿ ಗು ರುಪಾದ ಶಿವಯೋಗಿ ಶಿವಾಚಾರ್ಯ ಮಹ ಸ್ವಾಮಿಗಳವರ ೯೭೩ ವರ್ಷದ ಜಯಂತಿ ಪರ್ವ ಮತ್ತು ೧೮ ನೆ ವರ್ಷದ ಸದ್ಬಾವನ       ಪಾದಯಾತ್ರೆಯನ್ನು ಗ್ರಾಮೀಣ ಶಾಸಕರ ಬಸನ ಗೌಡ ದದ್ದಲ್ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ  ಮಾತನಾಡಿದರು. ಮಾಜಿ ವಿದಾನ ಪರಿಷತ್ತು ಸದಸ್ಯ ಶಂಕರಪ್ಪ ಮಾತಾ ನಾಡಿ ದಾರ್ಮಿಕ ವಿಧಿ ಗಳಿಗೆ ಭಕ್ತರ ಅಕ ರ್ಷ ಣೀಯ ಕೇಂದ್ರ ಕಿಲ್ಲೆ ಬ್ರಹ್ಮನಠ ಎಂದು ಕರೆಯಲ್ಪಡುವ ಕ್ಷೇತ್ರ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಸೋಮವಾರ ಪೇಟೆ ಹಿರೆಮಠ ಫೀಠಾದಿಪತಿ ಅಬಿನವ ರಾಚೋಟಿ  ಶಿವಾಚಾರ್ಯ ಮಹಾಸ್ವಾಮಿಗ ಳು ಅಶೀ ರ್ವಚನ ನೀಡಿದರು. ಭಾವೈಕ್ಯತ ಯಿಂದ ಕಿಲ್ಲೆ ಬ್ರಹನ್ಮಠ,ಮತ್ತು ಸೋಮವಾರ ಹಿರೆಮ ಠಗಳು ನಗರಕ್ಕೆ ಧರ್ಮದ‌ ಎರಡು ಕಣ್ಣುಗ ಳು ಇದ್ದಂತೆ ರಂಬಾ ಪುರ ಜಗದ್ಗುರುಗುಳ ಸಂದೇಶವನ್ನು ಸಾರಿದರು . .ಅನಂತರ ಜೀವೈಕ್ಯ ಕೋಳಂಕಿ ಗುರುಪಾದ ಶಿವ
Image
  ನಾಳೆ ಗೋವಿಂದ ಗಾನ ಪೂರ್ವಭಾವಿ ಸಭೆ ರಾಯಚೂರು,ಸೆ.15-  ನಗರದ ಜವಾಹರ್ ನಗರ ಶ್ರೀ ಬಯಲು ಆಂಜನೇಯ ದೇವಸ್ಥಾನದಲ್ಲಿ ಸೆ.16 ರಂದು  ಶ್ರೀ ಅಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡ ಗೋವಿಂದ ಗಾನ ಕಾರ್ಯಕ್ರಮದ ಬಗ್ಗೆ  ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.               ಸಂಜೆ 5:30ಕ್ಕೆ ಸಭೆ ಹಮ್ಮಿಕೊಳ್ಳಲಾಗಿದ್ದು ದಯವಿಟ್ಟು ಸಭೆಗೆ ಎಲ್ಲಾ ಭಜನಾ ಮಂಡಳಿಗಳು, ದಾಸಸಾಹಿತ್ಯದ ಬಂಧುಗಳು, ಭಗವಧ್ಭಕ್ತರು  ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ. ಪೂರ್ವಭಾವಿ ಸಭೆಯಲ್ಲಿ  ಖ್ಯಾತಗಾಯಕ   ರಾಯಚೂರು ಶೇಷಗಿರಿ ದಾಸ್ ಅವರು ಭಾಗವಹಿಸಲಿದ್ದಾರೆ ಎಂದು ಆಯೋಜಕರಾದ ಮುರಳಿಧರ ಕುಲಕರ್ಣಿ ತಿಳಿಸಿದ್ದಾರೆ.       
Image
ಯರಗೇರಾ ತಾಲೂಕಾ ರಚನೆ ಪೂರ್ವಭಾವಿ ಸಭೆ : ಹೋರಾಟ ರೂಪುರೇಷೆ  ನಿರ್ಣಯಗಳ ಅಂಗೀಕಾರ     ರಾಯಚೂರು,ಸೆ.15- ತಾಲೂಕಿನ ಯರಗೇರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾಯಾ೯ಲಯದಲ್ಲಿ  ಯರಗೇರಾ  ತಾಲೂಕ ಕೇಂದ್ರವನ್ನಾಗಿ ಘೋಷಣೆ ಮಾಡುವುದರ ಸಲುವಾಗಿ ಮುಂದಿನ ಹೋರಾಟದ ರೂಪುರೇಷೆ ತಯಾರಿಸಲು ಪೂರ್ವಭಾವಿ ಸಿದ್ಧತೆ ವಿಶೇಷ ಸಭೆ ನಡೆದು ಈ ಕೆಳಗಿನ ನಿಣ೯ಯಗಳು ಸವಾ೯ನುಮತದಿಂದ ಕೈಗೊಳ್ಳಲಾಯಿತು.  ಬಸನಗೌಡ ದದ್ದಲ್ ಶಾಸಕರು ರಾಯಚೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಇವರ ನೇತೃತ್ವದಲ್ಲಿ ಮಾನ್ಯ  ಮುಖ್ಯಮಂತ್ರಿಯವರಿಗೆ  ಯರಗೇರಾ ಗ್ರಾಮವನ್ನು ತಾಲೂಕ ಕೇಂದ್ರವನ್ನಾಗಿ ಘೋಷಣೆ ಮಾಡಲು ಜಿಲ್ಲೆಯ ಉಭಯ  ಸಚಿವರು, ಮಾಜಿ ಶಾಸಕರು,  ಹಾಲಿ ಹಾಗೂ ಮಾಜಿ ಲೋಕಸಭಾ ಸದಸ್ಯರು,  ಹಾಲಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರು, ಹಾಗೂ ಗಿಲೇಸೂಗೂರ್, ತಲಮಾರಿ, ಯರಗೇರಾ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಮತ್ತು ಕಲಮಲಾ ಜಿಲ್ಲಾ ಪಂಚಾಯತ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೆಲ ಗ್ರಾಮಗಳ  ಸವ೯ ಪಕ್ಷಗಳ ಮುಖಂಡರ ನಿಯೋಗದೊಂದಿಗೆ ಖುದ್ದಾಗಿ ಭೇಟಿ ನೀಡಿ ಒತ್ತಾಯ ಪಡಿಸುವುದು. ಅಂದಾಜು ೩೨೬ ಎಕರೆ ಸರಕಾರಿ ಜಮೀನು ಅಭಿವೃದ್ಧಿ ಪಡಿಸಲು ಲಭ್ಯವಿರುತ್ತದೆ. ಮುಂದಿನ ವಾರದಿಂದ ಹಂತ ಹಂತವಾಗಿ ವಿವಿಧ ರೀತಿಯ ಹೋರಾಟ ಅಂದರೆ  ಬೃಹತ್ ರಸ್ತೆ ತಡೆ ಚಳವಳಿ,  ನಿರಂತರ ಅನಿಧಿ೯ಷ್ಟ  ಉಗ್ರ  ಪ್ರತಿಭಟನೆ, ಇನ್ನಿತರ  ಹೋರಾಟಕ್ಕೆ ಅಣಿಗೊಳ್ಳಲು ನಿಣ೯ಯಿಸ
Image
ಮನೆಗೆ ಕನ್ನ ಹಾಕಿದ ಖದೀಮರು:     ಲಕ್ಷಾಂತರ  ಮೌಲ್ಯದ ನಗದು ಚಿನ್ನಾಭರಣ ಲೂಟಿ- ಪೂರ್ವ ನಿಯೋಜಿತ ಕೃತ್ಯ ಶಂಕೆ          ರಾಯಚೂರು,ಸೆ.15- ನಗರದ ಹೊರವಲಯದ ಆಶಾಪುರ ರಸ್ತೆಯ ಲಕ್ಷ್ಮೀ ನರಸಿಂಹ ಲೇಔಟ್ ಮನೆಯಲ್ಲಿ ದರೋಡೆ ನಡೆದಿದೆ. ನಿನ್ನೆ ರಾತ್ರಿ ಬಸನಗೌಡ ಮಟಮಾರಿ ಎಂಬುವವರ  ಮನೆಗೆ ನುಗ್ಗಿದ ಆಗುಂತಕರು ಚಿನ್ನಾಭರಣ,ನಗದು ದೋಚಿ ಪರಾರಿಯಾಗಿದ್ದಾರೆ.  ಮುಸುಕು ಧರಿಸಿ ಮನೆಗೆ  ನುಗ್ಗಿದ ಮೂವರು ಕಳ್ಳರು ಮಾರಕಾಸ್ತ್ರ ತೋರಿಸಿ ದರೋಡೆ ಮಾಡಿದ್ದಾರೆ. ಮನೆಯಲ್ಲಿದ್ದ 22 ತೊಲೆ ಚಿನ್ನ,2 ಲಕ್ಷ ನಗದು ಹಣ ಮತ್ತು 2 ಕೆಜಿ ಬೆಳ್ಳಿ ಪೂಜಾ ಸಾಮಾನು ಕಳ್ಳತನವಾಗಿದೆ ಎನ್ನಲಾಗಿದೆ . ಸ್ಥಳಕ್ಕೆ ಪಶ್ಚಿಮ ಠಾಣೆ ಸಿಪಿಐ , ಪಿಎಸ್ಐ , ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ತೆರಳಿ ಕಳ್ಳತನ ನಡೆದ ಬಗ್ಗೆ ಮನೆಯ ಮಾಲೀಕರಿಂದ ಮಾಹಿತಿ ಪಡೆದಿದ್ದಾರೆ ಜಿಲ್ಲಾಪೊಲೀಸ ವರಿಷ್ಟಾಧಿಕಾರಿ ಪುಟ್ಟಮಾದಯ್ಯ ಅಧಿಕಾರಿಗಳ ತಂಡ ರಚಿಸಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ. ಅಪರಾಧ ಪ್ರಕರಣಕ್ಕೆ ಇಲ್ಲ ಕಡಿವಾಣ : ದಿನೆ ದಿನೆ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಪೊಲೀಸರು ಅಪರಾಧ ತಡೆಗೆ ಮುಂದಾಗಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
Image
  ಪ್ರಜಾಪ್ರಭುತ್ವ ದಿನಾಚರಣೆ; ಜಿಲ್ಲೆಯಲ್ಲಿ ದಾಖಲೆಯ ಮಾನವ ಸರಪಳಿ ನಿರ್ಮಾಣ: ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿ- ಶಾಸಕಿ ಕರೆಮ್ಮ. ಜಿ. ನಾಯಕ ರಾಯಚೂರು,ಸೆ.15- ಪ್ರಜಾಪ್ರಭುತ್ವವು ಜನಸಾಮಾನ್ಯರಿಗೆ ಬಲ ತುಂಬುವ ವ್ಯವಸ್ಥೆಯಾಗಿದೆ. ಸಾರ್ವಜನಿಕರಿಗೆ ಪ್ರಜಾಪ್ರಭುತ್ವ ಬಗ್ಗೆ ಜಾಗೃತ ಮೂಡಿಸುವ ಸಲುವಾಗಿ ಈ ಮಾನವ ಸರಪಳಿ ಕಾರ್ಯಕ್ರಮ ಜರುಗಿದ್ದು, ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಸಂಕಲ್ಪ ಮಾಡಿಬೇಕು ಎಂದು ದೇವದುರ್ಗ ಕ್ಷೇತ್ರದ ಶಾಸಕರಾದ ಕರೆಮ್ಮ ಜಿ.ನಾಯಕ ಅವರು ಹೇಳಿದರು.   ಅವರಿಂದು ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದ ಅಲ್ಲಮಪ್ರಭು ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟಿçÃಯ ಪ್ರಜಾಪ್ರಭುತ್ವದ ದಿನಾಚರಣೆ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.  ದೇಶಕ್ಕೆ ಅರ್ಥಪೂರ್ಣವಾದ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ ನೀಡಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಿ, ಇದರ ಆಶೆ ಪೂರೈಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ 2500ಕಿ.ಮೀ ವರೆಗೆ ಮಾನವ ಸರಪಳಿ ಮಾಡಿ, ಪ್ರಜಾಪ್ರಭುತ್
Image
  ಕರ್ನಾಟಕ ಟಾಕ್ವಾಂಡೋ ಅಕಾಡೆಮಿ ಅಂತರ ಶಾಲಾ  ಸ್ಪರ್ದೆ :                      ರಘುಮಾನ್ಯ ದೇಸಾಯಿಗೆ ಕಂಚಿನ ಪದಕ.            ರಾಯಚೂರು,ಸೆ.15-    ಬೆಂಗಳೂರು ನಗರದಲ್ಲಿ ಕರ್ನಾಟಕ ಟಾಕ್ವಾಂಡೋ ಅಕಾಡೆಮಿ ವತಿಯಿಂದ ನಡೆದ ಅಂತರಶಾಲಾ ಟಾಕ್ವಾಂಡೋ ಸ್ಪರ್ಧೆಯಲ್ಲಿ ರಾಜರಾಜೇಶ್ವರಿ ನಗರದ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ 3 ನೇ ತರಗತಿ ವಿದ್ಯಾರ್ಥಿ ರಘುಮಾನ್ಯ ರಂಗರಾವ್ ದೇಸಾಯಿ ಕಂಚಿನ ಪದಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.                    ಬೆಂಗಳೂರು ನಗರದ ಅನೇಕ ಶಾಲೆಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು ವಿದ್ಯಾರ್ಥಿಗೆ ಕಂಚಿನ ಪದಕ ಲಭಿಸಿದ್ದಕ್ಕಾಗಿ ಶಾಲಾ ಆಡಳಿತ ಮಂಡಳಿ  ಹಾಗೂ ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.
Image
  ಕಾಡ್ಲೂರು: ರೈತರ 25ಕ್ಕೂ ಹೆಚ್ಚು ಪಂಪ್ ಸೆಟ್ ಗಳ ಕೇಬಲ್ ಕಳುವು.                    ರಾಯಚೂರು,ಸೆ.14- ತಾಲೂಕಿನ ಕಾಡ್ಲೂರು ಗ್ರಾಮದ ನದಿ ದಡದಲ್ಲಿ ಅಳವಡಿಸಲಾದ ಪಂಪ್ ಸೆಟ್ ಗಳ ಕೇಬಲ್ ಕಳುವು ಮಾಡಿರುವ ಘಟನೆ ನಡೆದಿದೆ.                                        ನಿನ್ನೆ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ರೈತರು ಇಂದು ಬೆಳಿಗ್ಗೆ ಜಮೀನುಗಳಿಗೆ ನೀರು ಹರಿಸಲು ಪಂಪ್ ಸೆಟ್ ಹಚ್ಚಲು ಹೋದ ವೇಳೆ ಕಳುವಾದ ಬಗ್ಗೆ ಗಮನಕ್ಕೆ ಬಂದಿದ್ದು ಸುಮಾರು 25 ಕ್ಕೂ ಹೆಚ್ಚು ಪಂಪ್ ಸೆಟ್ ಗಳ ಕೇಬಲ್ ಕಳುವು ಮಾಡಲಾಗಿದ್ದು ಅಂದಾಜು 80 ಸಾವಿರ ಬೆಲೆ ಬಾಳುವ ಕೇಬಲ್ ಗಳನ್ನು ಕಳ್ಳರು ಕದ್ದಿದ್ದಾರೆ ಎಂದು ಗ್ರಾಮದ ವಿಜಯ ಕುಮಾರ್ ಜೋಷಿ ತಿಳಿಸಿದ್ದು ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ .
Image
ದೇವಸ್ಗೂರು : ಗಜಾನನ ಯುವಕ ಮಂಡಳಿಯಿಂದ ಗಜಾನನೋತ್ಸವ ರಾಯಚೂರು,ಸೆ.14- ಗಜಾನನ ಯುವಕ ಮಂಡಳಿ ವತಿಯಿಂದ 9 ದಿನ ಗಣೇಶನನ್ನು ಸ್ಥಾಪನೆ ಮಾಡಲಾಯಿತು. ಸಿ ಟೈಪ್  ದೇವಸೂಗುರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಕ್ತಿ ನಗರದಲ್ಲಿ ಶನಿವಾರರಂದು ಗಣೇಶನ ಪ್ರಸಾದ್ ವನ್ನು ಮಧ್ಯಾಹ್ನ 12 ಗಂಟೆಯಿಂದ ಪ್ರಾರಂಭ ಮಾಡಲಾಯಿತು. ಸತತ 9 ದಿನಗಳ  ಕಾರ್ಯಕ್ರಮ ನೆರವೇರಿತು ಬೆಳಗ್ಗೆ ಮಂಗಳಾರತಿ ಸಾಯಂಕಾಲ ಮಂಗಳಾರತಿ ಶಕ್ತಿನಗರದ ಎಲ್ಲಾ ಮಹಿಳೆಯರು ಮಕ್ಕಳು ಯುವಕರು  ಅಣ್ಣ ತಮ್ಮಂದಿರು ಎಲ್ಲರೂ ಸೇರಿ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಆಚರಣೆ ಮಾಡಲಾಯಿತು.  ನಾಳೆ ಭಾನುವಾರ ರಂದು ಸಾಯಂಕಾಲ 6 ಗಂಟೆಗೆ ಲಡ್ಡು ಹರಾಜು ಕಾರ್ಯಕ್ರಮ ಇರುತ್ತದೆ ಜೊತೆಗೆ ಗಣೇಶಗೆ ಬೀಳ್ಕೊಡುಗೆ ಸಮಾರಂಭ ಮೆರವಣಿಗೆ ಕೃಷ್ಣ ನದಿಗೆ ವಿಸರ್ಜನ ಕಾರ್ಯಕ್ರಮ ಇರುತ್ತದೆ ಎಂದು ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರಾದ ಶಶಿಕಲಾ ಭೀಮರಾಯ ಮಹೇಶ್ ಬಡಿಗೇರ .ಲಕ್ಷ್ಮಣರೆಡ್ಡಿ. ಶಿವಮೂರ್ತಿ. ವಿಶಾಲ್ ರೆಡ್ಡಿ. ವಿನಯ್. ವಿನಯ್. ಸೂಗನಗೌಡ. ಮಾರೆಪ್ಪ ಮಹೆಬೂಬ್ .ಪ್ರಶಾಂತ್. ಅಂಬರೀಶ್.ಮಾರಪ್ಪ . ಡೆನಿಸ್ ರೋನಿ. ಅರುಣ್. ಶಶಾಂಕ್. ಮೈಬೂಬ ಅಲಿ. ಬಸವರಾಜ್ ಭರ್ಮಣ್ಣ. ಸಂಪತ್ತು. ಸುನಿಲ್ ಜಾನಿ. ವಿಜಯ್ ಪವನ್  ನಾಗರಾಜ್ ಇನ್ನಿತರರು ಇದ್ದರು.
Image
  ಗೋವಿಂದ ಗಾನ:  ಕರಪತ್ರ ಬಿಡುಗಡೆ ರಾಯಚೂರು,ಸೆ.14-  ನಗರದಲ್ಲಿ ಇದೇ ತಿಂಗಳು 21 ಮತ್ತು 22 ಶನಿವಾರ ಮತ್ತು ಭಾನುವಾರದಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡ ಶ್ರೀ ಅಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವದ ಅಂಗವಾಗಿ  ಜರಗಲಿರುವ ಗೋವಿಂದ ಗಾನ ಕಾರ್ಯಕ್ರಮದ ಕರಪತ್ರವನ್ನು ನಿನ್ನೆ ಸಂಜೆ  ಜವಾಹರ್ ನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಬಿಡುಗಡೆಗೊಳಿಸಲಾಯಿತು.   ಶ್ರೀ ಮಠದ ಸಂಸ್ಕೃತ ವಿದ್ಯಾಪೀಠದ ಅಧ್ಯಾಪಕರಾದ ಶ್ರೀ ಆನಂದ್ ದಿವಾನಜಿ ಯವರು ಕರ ಪತ್ರವನ್ನು ಬಿಡುಗಡೆಗೊಳಿಸಿ ಇದೊಂದು ರಾಯಚೂರಿನಲ್ಲಿ ಖ್ಯಾತ ಗಾಯಕ ಡಾ. ರಾಯಚೂರು ಶೇಷಗಿರಿ ದಾಸ ಇವರ ನೇತೃತ್ವದಲ್ಲಿನಡೆಯುತ್ತಿರುವ ದಾಸ ಸಾಹಿತ್ಯ ಸುಂದರವಾದ ಕಾರ್ಯಕ್ರಮ ವಾಗಿದ್ದು, ಇದರಲ್ಲಿ ಎಲ್ಲರೂ ಭಾಗವಹಿಸಬೇಕೆಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.     ಈ ಬಿಡುಗಡೆಯ ಸಮಾರಂಭದಲ್ಲಿ ಶ್ರೀ ಮುರಳಿಧರ ಕುಲಕರ್ಣಿ ಅವರು ಮಾತನಾಡಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಎಲ್ಲಾ ಆಸಕ್ತ ಬಂಧುಗಳು ಭಾಗವಹಿಸಬಹುದಾಗಿದೆ ಎಂದು ಹೇಳಿದರು.  ಶ್ರೀ ಪ್ರಸನ್ನ ಆಲಂಪಲ್ಲಿ, ವಾಸುದೇವ ಪಟವಾರಿ, ನರಸಿಂಹಮೂರ್ತಿ ಕುಲಕರ್ಣಿ, ವೇಣುಗೋಪಾಲ್ ವರಪ್ಪ,  ಪತ್ರಕರ್ತ ಜಯಕುಮಾರ ದೇಸಾಯಿ ಕಾಡ್ಲೂರು, ರಮೇಶ್,
Image
  ಶ್ರೀ ಜೋಡು ವೀರಾಂಜನೇಯ ದೇವಸ್ಥಾನ  ಗಣೇಶೋತ್ಸವ ಲಡ್ಡು ಹರಾಜು : ಹನುಮೇಶ ಸರಾಫ್ ಗೆ ಲಭಿಸಿದ ಲಡ್ಡು  ರಾಯಚೂರು,ಸೆ.11- ನಗರದ ಸಾವಿತ್ರಿ ಕಾಲೋನಿ ಶ್ರೀ ಜೋಡು ವೀರಾಂಜನೇಯ ದೇವಸ್ಥಾನ ಯುವಕ ಮಂಡಳಿ ಯವರು ಪ್ರತಿ ವರ್ಷ ದಂತೆ ಈ ವರ್ಷವು ಕೂಡ ಶ್ರೀ ಗಣೇಶ ಉತ್ಸವ ವಿಜೃಂಭಣೆ ಇಂದ ಪ್ರತಿಷ್ಠಾಪನೆ ಮಾಡಿ ಮೂರನೇ ದಿನದ ವಿಸರ್ಜನೆ ಕಾರ್ಯಕ್ರಮಕ್ಕೂ ಮೊದಲು ಈ ಬಾರಿ ಪ್ರಥಮ ಬಾರಿಗೆ ಲಡ್ಡು ಹರಾಜು ನಡೆಸಿದರು.            ನಗರದ ಅನೇಕ ಭಕ್ತರು ಪಾಲ್ಗೊಂಡು ಹರಾಜು ಪ್ರಕ್ರಿಯೆ ಅತೀ ಉತ್ಸಾಹ ದಿಂದ ನಡೆದು 10 ಸಾವಿರ ರೂಪಾಯಿಗೆ  ನಗರ ಬ್ರಾಹ್ಮಣ ಸಮಾಜ ಮುಖಂಡರು,ಬಿಜೆಪಿಯ ಮುಖಂಡರು, ಲಕ್ಷ್ಮೀ ವೆಂಕಟೇಶ್ವರ  ಎಲೆಕ್ಟ್ರಿಕಲ್ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆ ದಾರರು  ಆಗಿರುವ ಹನುಮೇಶ್ ಸರಾಫ್ ಹರಾಜಿನಲ್ಲಿ ಭಾಗವಹಿಸಿ ಲಡ್ಡು ಪ್ರಸಾದ  ಪಡೆದು ಗಣೇಶನ ಅನುಗ್ರಹಕ್ಕೆ ಪಾತ್ರರಾದರು. ಜೋಡು ವೀರಾಂಜನೇಯ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ದಾನಪ್ಪ ಯಾದವ್, ಕಾರ್ಯಧ್ಯಕ್ಷ ವೇಣುಗೋಪಾಲ್ ಇನಾಂದಾರ್, ಪಾಂಡುರಂಗ ಜೆ.ಇ,ನರಸಿಂಗ ರಾವ್ ದೇಶ ಪಾಂಡೆ,ಯುವ ಪಡೆಯ ಅಧ್ಯಕ್ಷ ಪ್ರಲಾದ್ ಕುಲಕರ್ಣಿ ಸೇರಿದಂತೆ ಸಾವಿತ್ರಿ ಕಾಲೋನಿಯ ಭಕ್ತರು, ಯುವಕರು ಉಪಸ್ಥಿತರಿದ್ದರು .
Image
ಗೋವಿಂದ ಗಾನ ಕಾರ್ಯಕ್ರಮ ಅಂಗವಾಗಿ  ಸೆ.18 ರಂದು ಗಾಯಕ ಶೇಷಗಿರಿ ದಾಸರಿಂದ ಸಮೂಹ ಗಾಯನದ ತರಬೇತಿ   ರಾಯಚೂರು,ಸೆ.11- ನಗರದಲ್ಲಿ ಇದೇ ತಿಂಗಳು ದಿನಾಂಕ 21, 22, ರಂದು  ಸಂಜೆ  ರಂಗಮಂದಿರದಲ್ಲಿ  ಶ್ರೀ ಅಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡ ಗೋವಿಂದ ಗಾನ ಕಾರ್ಯಕ್ರಮದಲ್ಲಿ ಸಮೂಹ ಗಾಯನವನ್ನು ಪ್ರಸ್ತುತಪಡಿಸಲಾಗುತ್ತಿದೆ.    ದಿನಾಂಕ 22 ರಂದು ನಡೆಯುವ ಶ್ರೀವಾರಿ ಉಂಜಾಲ ಸೇವಾ ಸಂದರ್ಭದಲ್ಲಿ ಮಹಿಳಾ ಭಜನಾ ಮಂಡಳಿಗಳಿಂದ , ಹಾಗೂ  ಆಸಕ್ತ ಮಹಿಳೆಯರಿಂದ ಎರಡು ಗೀತೆಗಳನ್ನು ಕಾರ್ಯಕ್ರಮದಲ್ಲಿ ಸಮೂಹ ಗಾಯನವನ್ನು ಮಾಡಿಸಲಾಗುತ್ತದೆ.  ಇದೇ ದಿನಾಂಕ 18 ರಂದು ಜವಾಹರ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಸಂಜೆ 5:30 ರಿಂದ ಖ್ಯಾತ ಗಾಯಕ ಡಾ. ರಾಯಚೂರು ಶೇಷಗಿರಿ ದಾಸ್ ಇವರಿಂದ  ಸಮೂಹ ಗಾಯನದ ತರಬೇತಿಯನ್ನು ನೀಡಲಾಗುವುದು.   ಆಸಕ್ತ ಮಹಿಳೆಯರು ಮತ್ತು ಭಜನಾ ಮಂಡಳಿಯ ಸದಸ್ಯರು ಇದರಲ್ಲಿ ಭಾಗವಹಿಸಬೇಕೆಂದು ಗೋವಿಂದ ಗಾನ ಕಾರ್ಯಕ್ರಮ ಆಯೋಜಕರಾದ ಮುರಳಿಧರ ಕುಲಕರಣಿ  ಕೋರಿದ್ದಾರೆ.
Image
  ಜಿಲ್ಲಾ ವಾಲ್ಮೀಕಿ ಭವನ ಕಟ್ಟಡ ಕಾಯಕಲ್ಪಕ್ಕೆ ಸೆ.15 ರಂದು ಪೂರ್ವಭಾವಿ ಸಭೆ- ವೆಂಕಟೇಶ ನಾಯಕ.                                                                                                                    ರಾಯಚೂರು,ಸೆ.11- ನಗರದ ಆಶಾಪೂರು ರಸ್ತೆಯ ಜಿಲ್ಲಾ ವಾಲ್ಮೀಕಿ ಕಟ್ಟಡದ ಕಾಯಕಲ್ಪಕ್ಕೆ ಸರ್ಕಾರಕ್ಕೆ ಒತ್ತಾಯಿಸಲು ಸೆ.15 ರಂದು ಬೆಳಿಗ್ಗೆ 10.30ಕ್ಕೆ  ಜಿಲ್ಲಾ ವಾಲ್ಮೀಕಿ  ಭವನದಲ್ಲಿ ಜಿಲ್ಲಾ ವಾಲ್ಮೀಕಿ ಸಮಾಜದಿಂದ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದು ವೆಂಕಟೇಶ ನಾಯಕ ಅಸ್ಕಿಹಾಳ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಗರದಲ್ಲಿ ನಿರ್ಮಾಣವಾಗಿರುವ ಜಿಲ್ಲಾ ವಾಲ್ಮೀಕಿ ಭವನ ಕಟ್ಟಡದಲ್ಲಿ ಮೂಲಭೂತ ಸೌಲಭ್ಯದ ಕೊರತೆಯಿದ್ದು ವಾಲ್ಮೀಕಿ ಜಯಂತಿ ಅಚ್ಚುಕಟ್ಟಾಗಿ ನಡೆಸುವ  ಬಗ್ಗೆ ಸರ್ಕಾರಕ್ಕೆ ಒತ್ತಾಯಿಸಲು ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದ ಅವರು ಪ್ರತಿ ವರ್ಷ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತದೆ ಆದರೆ ವಾಲ್ಮೀಕಿ ಭವನ ನಿರ್ಮಾಣವಾಗಿದ್ದರೂ ಅಸ್ತಿತ್ವವಿಲ್ಲದ ರೀತಿಯಲ್ಲಿದೆ ಆದ್ದರಿಂದ ಈ ಸಭೆ ಎಲ್ಲಾ ತಾಲೂಕುಗಳಿಂದ ಸಮಾಜದ ಜನ ಪ್ರತಿನಿಧಿಗಳು ರಾಜಕಾರಣಿಗಳು, ಸರ್ಕಾರಿ ನೌಕರರು, ನಿವೃತ್ತ ನೌಕರರು, ನ್ಯಾಯವಾದಿಗಳು, ವಿದ್ಯಾರ್ಥಿಗಳು ಯುವಕರು , ಸಂಘ ಸಂಸ್ಥೆಗಳ, ಮಹಿಳಾ ಸಂಘಗಳ ಪ್ರತಿನಿಧಿಗಳು ಭಾಗವಹಿಸುವಂತೆ ಕೋರಿದರು. ಈ ಸಂದರ್ಭದಲ್ಲಿ ಬುಡ್ಡಪ್ಪ ನಾಯಕ,ಶರಣಪ್ಪ, ಚಿದ
Image
ಕನಿಷ್ಟ ಬೆಂಬಲ ಬೆಲೆ ಕಾನೂನು ಕಟ್ಟು ನಿಟ್ಟಾಗಿ ಜಾರಿಗೊಳಿಸಿ - ಶರಣಪ್ಪ ಮರಳಿ .                                                                                              ರಾಯಚೂರು,ಸೆ.11- ರಾಜ್ಯ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ವರ್ತಕರು ಕನಿಷ್ಟ ಬೆಂಬಲ ಬೆಲೆಗಿಂತ ಕಡಿಮೆ ದರ ನಮೂದಿಸದಂತೆ ಕಟ್ಟು ನಿಟ್ಟಿನ ಕಾನೂನು ಜಾರಿಗೊಳಿಸಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಪ್ರತಿ ಒಂದು ವಸ್ತುವಿಗೂ ಗರಿಷ್ಟ ಮಾರಾಟ ದರವಿದೆ ಆದರೆ ದೇಶದ ಬೆನ್ನೆಲುಬಾದ ರೈತನು ಬೆಳೆವ ಬೆಳೆಗೆ ನಿಗದಿತ ದರವಿಲ್ಲ ದರ ಕುಸಿತ ವೇಳೆ ಸರ್ಕಾರ ನಿಗದಿಪಡಿಸಿರುವ ಕನಿಷ್ಟ ಬೆಂಬಲ ಬೆಲೆ ಪಾಲನೆಯಾಗದೆ ರೈತರಿಗೆ ಮೋಸವಾಗುತ್ತಿದೆ ಸರ್ಕಾರ ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿಗೋಳಿಸಬೇಕು ಎಂದರು.                    ಜಿಲ್ಲಾ ಕೃಷಿ ಇಲಾಖೆಗಳಲ್ಲಿ ವಿವಿಧ ತಾಲೂಕುಗಳಲ್ಲಿ  ಒಟ್ಟು 62 ಸಹಾಯಕ ಹುದ್ದೆಗಳಲ್ಲಿ 42 ಹುದ್ದೆಗಳು ಖಾಲಿಯಾಗಿವೆ ಅವುಗಳನ್ನು ಕೂಡಲೆ ಭರ್ತಿ ಮಾಡಬೇಕೇಂದ ಅವರು ಹಗರಣಗಳಲ್ಲಿ ಮುಳುಗಿದ ಸರ್ಕಾರ ರೈತರ ಕಷ್ಟ ಆಲಿಸಬೇಕೆಂದ ಆಗ್ರಹಿಸಿದರು.                                                                                ಈ ಸಂದರ್ಭದಲ್ಲಿ ವೆಂಕಟೇಶ, ಗೋವರ್ಧನ ರೆಡ್ಡಿ, ತಿಮ್ಮಣ್ಣ ಭೋವಿ,ರಾಮಯ್ಯ, ನರಸಪ್ಪ
Image
ಕಲ್ಯಾಣ ಕರ್ನಾಟಕದ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳಿಗೆ ಪ್ರತಿ‌ ತಿಂಗಳು ಎರೆಡು ಪುಟ ಜಾಹಿರಾತು ನೀಡುವ ಯೋಜನೆ ಸರ್ಕಾರ ಜಾರಿಗೊಳಿಸಲಿ- ಹದ್ದಿನಾಳ .                       ರಾಯಚೂರು,ಸೆ.11- ಕಲ್ಯಾಣ ಕರ್ನಾಟಕ ಭಾಗದ ಜಿಲ್ಲಾ ಮತ್ತು ಪ್ರಾದೇಶಿಕ ದಿನ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರೆಡು ಪುಟ ವಿಶೇಷ ಜಾಹಿರಾತು ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಬೇಕೆಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರು ಸಂಘದ ರಾಜ್ಯ ಉಪಾಧ್ಯಕ್ಷ ಭೀಮರಾಯ ಹದ್ದಿನಾಳ ಕೋರಿದರು. ಅವರಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ವಾರ್ತಾ ಇಲಾಖೆ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರೆಡು ಪುಟ ಜಾಹಿರಾತು ನೀಡಬೇಕೆಂದು ಕೋರಿದ ಅವರು 371ಜೆ ಅಡಿ ಈ ಭಾಗದ ಏಳು ಜಿಲ್ಲೆಗಳ ಪತ್ರಿಕೆಗಳಿಗೆ ಕೆಕೆಆರ್ ಡಿಬಿ ಅನುದಾನದಡಿ ಜಾಹಿರಾತು ನೀಡಲು ಅವಕಾಶವಿದ್ದು ಪತ್ರಿಕೆಗಳ ಉತ್ತೇಜನಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದ ಅವರು 371ಜೆ ಲಭ್ಯವಾಗಲು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ದಿನಪತ್ರಿಕೆಗಳ ಪಾತ್ರ ಪ್ರಮುಖವಾಗಿದ್ದು ಪತ್ರಿಕೆಗಳನ್ನು ಅವಲಂಬಿಸಿ ಅನೇಕ ಕುಟುಂಬಗಳು ಇದ್ದು ಈ ಬಗ್ಗೆ ಸೆ.17 ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನ ಕಲಬುರ್ಗಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಕೋರಿದರು.                                     
Image
  ಉಪ್ಪಾರವಾಡಿ ಗಣೇಶೋತ್ಸವ: ಮಹಿಳೆಯರಿಗೆ ಅಡುಗೆ ಸ್ಪರ್ಧೆ                                                                    ರಾಯಚೂರು,ಸೆ.10- ನಗರದ ಉಪ್ಪಾರವಾಡಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ 30ನೇ ವರ್ಷದ ಗಣೇಶ ಪ್ರತಿಷ್ಠಾಪನೆ ಅಂಗವಾಗಿ ಇಂದು ದೇವಸ್ಥಾನ ಆವರಣದಲ್ಲಿ ಮಹಿಳೆಯರಿಗೆ ಬೆಂಕಿ ರಹಿತ ಅಡುಗೆ  ಸ್ಪರ್ಧೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.                                                                        ಈ ಸಂದರ್ಭದಲ್ಲಿ ದೇವಸ್ಥಾನದ ಪದಾಧಿಕಾರಿಗಳು ಬಡಾವಣೆ ನಿವಾಸಿಗಳು ಯುವಕರು, ಮಹಿಳೆಯರು ಉಪಸ್ಥಿತರಿದ್ದರು.
Image
  ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಒಂದು ವಾರದಲ್ಲಿ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸದಿದ್ದರೆ ಹೆದ್ದಾರಿ ತಡೆ ಪ್ರತಿಭಟನೆ- ನಿಜಾಮುದ್ದೀನ್.                                                                      ರಾಯಚೂರು,ಸೆ.10- ಗ್ರಾಮೀಣ ಭಾಗದಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಶಾಲಾ ,ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದ್ದು ಒಂದು ವಾರದಲ್ಲಿ ಬಸ್ ಗಳ  ಸೌಲಭ್ಯ ಕಲ್ಪಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಪ್ರತಿಭಟನೆ ಮಾಡಲಾಗುತ್ತದೆ ಎಂದು ಗ್ರಾಮಾಂತರ ಜೆಡಿಎಸ್ ಮಾಜಿ ಅಧ್ಯಕ್ಷ ಮಹ್ಮದ್ ನಿಜಾಮುದ್ದೀನ್ ತಿಳಿಸಿದ್ದಾರೆ.               ಯರಗೇರಾ  ಸುತ್ತಮುತ್ತಲಿನ ಮಾರ್ಗದಲ್ಲಿ ಸರಿಯಾದ ಬಸ್ ಸೌಕರ್ಯವಿಲ್ಲದ ಕಾರಣ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ತೆರಳಲು ಆಗುತ್ತಿಲ್ಲ ಸಾಯಿಂಕಾಲ ಬಸ್ ಗಳು ಇಲ್ಲದ ಕಾರಣ ವಿದ್ಯಾರ್ಥಿಗಳು ಇನ್ನಿತರ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿಯಿದ್ದು ಈ ಕೂಡಲೆ ಜಿಲ್ಲಾಧಿಕಾರಿಗಳು ಹಾಗೂ ಕೆಕೆಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಈ ಬಗ್ಗೆ  ಗಮನ ಹರಿಸಿ ಬಸ್ ಗಳ ವ್ಯವಸ್ಥೆ ಮಾಡುವಂತೆ  ತಿಳಿಸಿದ್ದಾರೆ.
Image
  ಮಹಾರಾಷ್ಟ್ರ ಚುನಾವಣೆ: ಎಐಸಿಸಿ ವೀಕ್ಷಕರಾಗಿ ಎ.ವಸಂತಕುಮಾರ ನೇಮಕ .                                          ರಾಯಚೂರು,ಸೆ.9- ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಲಾತೂರು ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ವಿಧಾನಸಭಾ ಕ್ಷೇತ್ರಗಳ ಎಐಸಿಸಿ ವೀಕ್ಷಕರಾಗಿ ವಿಧಾನಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎ.ವಸಂತಕುಮಾರ ನೇಮಕವಾಗಿದ್ದಾರೆ.               ಪಕ್ಷಕ್ಕೆ ಯಶಸ್ಸು ಸಿಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ತಿಳಿಸಿದ್ದಾರೆ.
Image
  ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ -ಸಚಿವ ಎನ್ ಎಸ್ ಬೋಸರಾಜು. ರಾಯಚೂರು. ಸೆ 8-ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ  ಹಿಂದುಳಿದ ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಈಗಾಗಲೇ ರಾಜ್ಯ ಸರ್ಕಾರ  ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ  ಸಚಿವರಾದ ಎನ್ಎಸ್ ಬೋಸರಾಜು ಹೇಳಿದರು.  ಅವರು ಇಂದು ರಾಯಚೂರು ನಗರದ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ ಕಲಾ  ಸಂಕುಲ ಸಂಸ್ಥೆ ನಿರಂತರವಾಗಿ ಕಲೆ ಸಾಹಿತ್ಯಕ ಸಾಮಾಜಿಕ ಸಾಂಸ್ಕೃತಿಕ ಜೊತೆಯಲ್ಲಿ ಇವತ್ತು ಶಿಕ್ಷಕರನ್ನು ಗೌರವಿಸುವಂತಹ ಅದ್ಭುತವಾದ ಕಾರ್ಯಕ್ರಮವನ್ನು ಮಾಡಿದ್ದಾರೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದಿರುವ ಅತ್ಯುತ್ತಮ ಆದರ್ಶ ಶಿಕ್ಷಕರಿಗೆ ಸನ್ಮಾನಿಸುವುದು ಈ ಸಂಸ್ಥೆಯ ಉತ್ತಮ ಕೆಲಸವಾಗಿದೆ ಎಂದು ಶ್ಲಾಘಿಸಿದರು.  ಕಾರ್ಯಕ್ರಮದ ಮೊದಲಿಗೆ ಕಪಗಲ್ ಹತ್ತಿರ ಮೃತಪಟ್ಟ ಮಕ್ಕಳಿಗೆ ಸಂತಾಪ ಸೂಚನೆ ಮಾಡಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸರ್ವಪಲ್ಲಿ ರಾಧಾಕೃಷ್ಣ ಭಾವಚಿತ್ರಕ್ಕೆ ಪೂಜಿ ಸಲ್ಲಿಸಲಾಯಿತು.   ಅಕ್ಷರ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೆಕಳ ಹಜ್ಜಬ್ಬ ಮಾತನಾಡಿ ಸರ್ಕಾರಿ ಶಾಲೆ ಉಳಿಸಲು ಎಲ್ಲರೂ ಪಣ ತೊಡಬೇಕು ನಿಮ್ಮೂರಿನ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸಬೇ
Image
  ರಿಮ್ಸ್ ಆಸ್ಪತ್ರೆಯಲ್ಲಿ    ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ  ಯೋಗಕ್ಷೇಮ ವಿಚಾರಿಸಿದ ಸಚಿವರು : ಹೆಚ್ಚಿನ ಪರಿಹಾರಕ್ಕಾಗಿ ಸಿಎಂ ಸಿದ್ದರಾಮಯ್ಯರೊಂದಿಗೆ ಮಾತನಾಡಿದ್ದೇನೆ- ಸಚಿವ ಎನ್ಎಸ್ ಬೋಸರಾಜು ರಾಯಚೂರು,ಸೆ.8-ಮಾನ್ವಿ ಲಯೋಲಾ ಶಾಲೆಯ ಬಸ್‌ ಹಾಗೂ ಸರಕಾರಿ ಬಸ್‌ ನಡುವೆ ಕಪಗಲ್ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಹಲವಾರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡು ರಿಮ್ಸ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವದರಿಂದ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ ಸಚಿವರಾದ ಬೋಸರಾಜು ಅವರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ, ಯೋಗಕ್ಷೇಮವನ್ನು ವಿಚಾರಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬ ಮಕ್ಕಳನ್ನು ಸಚಿವರು ಮಾತನಾಡಿಸಿ ಕುಷಲೋಪರಿ ವಿಚಾರಿಸಿದರು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸಾ ಸೌಲಭ್ಯವಿರುವ ಆಸ್ಪತ್ರೆಗಳಿಗೆ ಮಕ್ಕಳನ್ನ ವರ್ಗಾಯಿಸುವಂತೆ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿದರು. ಮಕ್ಕಳನ್ನು ಜಾಗರೂಕತೆಯಿಂದ ವೈದ್ಯರು ಚಿಕಿತ್ಸೆಯನ್ನು ನೀಡಬೇಕೆಂದು ಅಧಿಕಾರಿಗಳಿಗೆ ಹಾಗೂ ವೈದ್ಯರಿಗೆ ತಿಳಿಸಿದರು. ಈಗಾಗಾಗಲೆ ಕೆಎಸ್ ಆರ್ ಟಿಸಿ ಯಿಂದ  ಅಪಘಾತದಲ್ಲಿ ಮೃತಪಟ್ಟ ಮಕ್ಕಳಿಗೆ ತಲಾ 5 ಲಕ್ಷ ಪರಿಹಾರ ನೀಡಲಾಗಿದೆ. ಸರ್ಕಾರದಿಂದ ಇನ್ನು ಹೆಚ್ಚಿನ ಪರಿಹಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೇನೆ. ಗಾಯಗೊಂಡ ಮಕ್ಕಳಿಗೆ ಸಂಪೂ
Image
  ವಿವಿಧ ಗಜಾನನ ಮಂಡಳಿಗಳಿಗೆ ರವಿ ಭೋಸರಾಜು ಭೇಟಿ:      ಪ್ರತಿಷ್ಠಾಪನೆಯಲ್ಲಿ ಭಾಗಿ ಶ್ರೀ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಕೆ. ರಾಯಚೂರು,ಸೆ.7-ನಗರದ  ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ ವಿಘ್ನವಿನಾಯಕ ಮಂಡಳಿಗಳಿಗೆ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಭೇಟಿ ನೀಡಿ ಶ್ರೀ ಗಜಾನನ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿ ವಿಶೇಷ ಪೂಜೆ, ಮಹಾ ಮಂಗಳಾರತಿ ಮಾಡಿ  ನಾಡಿನ ಸಮಸ್ತ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು. ವಿವಿಧ ಬಡಾವಣೆಗಳಾದ  ಗಣೇಶ ಕಟ್ಟೆ, ಗಂಜ್ ವೃತ್ತ, ತೀನ್ ಕಂದಿಲ್, ಏಕ್‌ಮಿನಾರ್, ಚಂದ್ರಮೌಳೆಶ್ವರ ವೃತ್ತ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ ಶ್ರೀ ಗಜಾನನ ಮಂಡಳಿಗಳಿಗೆ ಕಾಂಗ್ರೆಸ್ ಮುಖಂಡರೊಂದಿಗೆ ಭೇಟಿ ನೀಡಿ. ಗಜಾನನ ಮೆರವಣಿಗೆಯಲ್ಲಿ ಭಾಗಿಯಾದರು.   ಪ್ರತಿಷ್ಠಾಪನೆಯ ನಂತರ ಶ್ರೀ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ಗಜಾನನು ನಾಡಿನ ಸಮಸ್ತ ಜನರ ಸಂಕಷ್ಟಗಳನ್ನ ದೂರ ಮಾಡಿ, ಆರೋಗ್ಯ ಸುಖ ಶಾಂತಿ, ಸಮೃದ್ಧಿ ಕರುಣಿಸಲಿ ಎಂದು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಗಣೇಶ ಮೂರ್ತಿ ಪ್ರತಿಷ್ಟಾಪನೆಯ ಮೆರವಣಿಗೆಯಲ್ಲಿ ರವಿ ಬೋಸರಾಜು ಅವರು ಹೆಜ್ಜೆಹಾಕಿದರು.  ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮೊಹ್ಮದ್ ಶಾಲಂ, ನರಸಿಂಹಲು‌ ಮಾಡಗಿರಿ, ತಿಮ್ಮಾರಡ್ಡಿ, ಗೋವಿಂದ ರಡ್ಡಿ, ಶ್ರೀನಿವಾಸ ರಡ್ಡಿ, ಪ್ರವೀಣ ಪೋಗಲ್, ಪ್ರತಾಪರಡ್ಡಿ,    ಅರುಣದೋತರಬಂಡಿ ಸೇರಿದಂತೆ ಅನೇಕರು ಉಪಸ್ಥಿತರ
Image
  ಗಣಪತಿ ಕಲಾವಿದರಾದ ಆನಂದ ಕುಲಕರ್ಣಿಯವರಿಗೆ ಕಣ್ವ ಮಠದಿಂದ ಆಶೀರ್ವಾದ                      ರಾಯಚೂರು,ಸೆ.6- ನಗರದ ಶ್ರೀ ಆನಂದ ಕುಲಕರ್ಣಿ ಯವರು ಹವ್ಯಾಸಿ ಕಲಾವಿದರು ನಿವೃತ್ತ ಬ್ಯಾಂಕ ಉದ್ಯೋಗಿಯಾಗಿದ್ದು ಕಳೆದ 30-35 ವರ್ಷಗಳಿಂದ ಪ್ರತಿವರ್ಷ 50 ರಿಂದ ಮಣ್ಣಿನ ಗಣಪತಿ ಮೂರ್ತಿ ಗಳನ್ನು ಸ್ವತಃ ತಯಾರಿಸಿ ಸಹೋದ್ಯೋಗಿಗಳು,ಬಂಧುಮಿತ್ರರು ಹಾಗೂ ಅಪೇಕ್ಷಿತರಿಗೆ  ಕೊಟ್ಟು ಉತ್ಕಷ್ಟ ವಾದ ಪರಿಸರ ಕಾಳಜಿ ಹಾಗೂ ಜಾಗೃತಿ ಯನ್ನು ಮೂಡಿಸುತ್ತಿದ್ದಾರೆ ಇತ್ತೀಚೆಗೆ ಶಂಕರ ಮಠ ದದಲ್ಲಿ ಆಯೋಜಿಸಿದ ಮಕ್ಕಳಿಗೆ ಮಣ್ಣಿನ ಗಣಪತಿ ತಯಾರಿಸುವ ಕಾರ್ಯಾಗಾರ ದಲ್ಲಿ ಸುಮಾರು 50 ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ರಕ್ತಗತವಾದ ಕಲೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಕಾರ್ಯಶ್ಲಾಘನೀಯ ಶ್ರೀ ಯುತರ ಪರಿಸರ ಕಾಳಜಿಯನ್ನು ಶ್ರೀ ಕಣ್ವ ಮಠಾಧೀಶರಾದ ಶ್ರೀ ವಿದ್ಯಾಕಣ್ವ ವಿರಾಜ ತೀರ್ಥರು ಶೇಷವಸ್ತ್ರ ಚಾತುರ್ಮಾಸ ಫಲವನ್ನು ಕಳುಹಿಸಿ ಆಶಿರ್ವದಿಸಿದ್ದಾರೆ ಎಂದು ಶ್ರೀ ಮಠದ ಟ್ರಸ್ಟಿಗಳಾದ ಶ್ರೀ ಪ್ರಸನ್ನ ಆಲಂಪಲ್ಲಿ ತಿಳಿಸಿದ್ದಾರೆ.