Posts

Showing posts from December, 2025
Image
  ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭ :                                                  ಮಾಧ್ಯಮ ಕೈಗೊಂಬೆಯಾಗಿರುವುದು ಕಳವಳಕಾರಿ- ಬೋಸರಾಜು   ಜಯ ಧ್ವಜ ನ್ಯೂಸ್,  ರಾಯಚೂರು, ಡಿ.28- ದೇಶದ ಕೆಲವೇ ಉದ್ಯಮಿಗಳ ಕೈಯಲ್ಲಿ ಮಾಧ್ಯಮ ಕೈಗೊಂಬೆಯಾಗಿದೆ. ಇದರಿಂದ ಇಂದು ಮಾಧ್ಯಮ ಕ್ಷೇತ್ರ ಕವಲುದಾರಿ ಹಿಡಿಯುವಂತಾಗಿದೆ ಎಂದು ರಾಜ್ಯ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ  ಸಚಿವರಾದ ಎನ್ ಎಸ್ ಬೋಸರಾಜು ಅವರು ಕಳವಳ ವ್ಯಕ್ತಪಡಿಸಿದರು . ಅವರಿಂದು ನಗರದ ರಾಯಚೂರು ರಿಪೋರ್ಟರ್ ಗಿಲ್ಡ್ ಸಭಾಂಗಣದಲ್ಲಿ ರಾಯಚೂರು ರಿಪೋರ್ಟರ್ಸ್  ಗಿಲ್ಡ್,ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  ಲಾಭಕ್ಕಾಗಿ ಪತ್ರಿಕೋದ್ಯಮವನ್ನು ನಿರ್ವಹಿಸುವುದು ಅತ್ಯಂತ ಅಪಾಯಕಾರಿ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಕೆಲವೇ ವ್ಯಕ್ತಿಗಳು ಇದನ್ನು ನಿಯಂತ್ರಿಸಿದರೆ, ಮುಕ್ತ ಚರ್ಚೆ ಮತ್ತು ಮಾಹಿತಿಯಿಂದ ಜನ ವಂಚಿತಗೊಳ್ಳುತ್ತಾರೆ ಎಂ...
Image
  ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು 16 ನಗರ ಸಾರಿಗೆ ಹೊಸ ಬಸ್‌ಗಳಿಗೆ ಚಾಲನೆ- ಶಾಸಕ ಡಾ.ಶಿವರಾಜ  ಪಾಟೀಲ್ ಜಯ ಧ್ವಜ ನ್ಯೂಸ್ ರಾಯಚೂರು ಡಿ.26 -   ನಗರದ ವಿವಿಧೆಡೆ ನಿತ್ಯ ತೆರಳುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 16 ನಗರ ಹೊಸ ಬಸ್‌ಗಳಿಗೆ ಚಾಲನೆ ನೀಡಲಾಗುತ್ತಿದ್ದು, ಇದರಿಂದ ಸಾರ್ವಜನಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ. ಶಿವರಾಜ ಎಸ್. ಪಾಟೀಲ್ ಅವರು ಹೇಳಿದರು. ಅವರಿಂದು ನಗರದ ಕೆ.ಕೆ.ಆರ್.ಟಿ.ಸಿ ಮೂರನೇ ಘಟಕದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ 16  ನಗರ ಸಾರಿಗೆ ಬಸ್ಸುಗಳಿಗೆ ಪೂಜಾ ಕಾರ್ಯಕ್ರಮಕ್ಕೆ  ನೆರವೇರಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ನಗರ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲು  ಟಾಟಾ ಮೋಟಾರ್ಸ ತಯಾರಿಕೆಯ ಹೊಸ ನಗರ ಸಾರಿಗೆ ಬಸ್ಸುಗಳನ್ನು ಸೇರ್ಪಡೆಗೊಳಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ.   ಈ ಬಸ್‌ಗಳಿಗೆ 187 ಎಚ್.ಪಿ. ಸಾಮರ್ಥ್ಯದ ಬಿಎಸ್-6 ಎಂಜಿನ್‌ಗಳನ್ನು ಅಳವಡಿಸಲಾಗಿದ್ದು, ಈ ಬಸ್‌ಗಳನ್ನು ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್- ಎಐಎಸ್-052 ಬಸ್ ಕೋಡ್ ನಂತೆ ನಿರ್ಮಿಸಲಾಗಿದೆ. ಈ ಬಸ್ ಗಳು 40 ಪ್ರಯಾಣಿಕ ಆಸನಗಳನ್ನು ಹೊಂದಿದ್ದು, ಎಲ್‌ಇಡಿ ಟ್ಯೂಬ್ ಲೈಟ್ ಅಳವಡಿಸುವುದರೊಂದಿಗೆ ಒಳಾಂಗಣವನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ ಎಂದರು. ಈ ಬಸ್...
Image
  ದ್ವೇಷ ಭಾಷಣ ವಿಧೇಯಕ ವಿರೋಧಿಸಿ ಬಿಜೆಪಿ ಪ್ರತಿಭಟನೆ                                         ಜಯಧ್ವಜ ನ್ಯೂಸ್, ರಾಯಚೂರು,ಡಿ.26- ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಲು ಮುಂದಾಗಿರುವ ದ್ವೇಷ ಭಾಷಣ ವಿಧೇಯಕವನ್ನು ವಿರೋಧಿಸಿ ಬಿಜೆಪಿ ರಾಯಚೂರು ನಗರ ಘಟಕದಿಂದ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು. ರಾಜ್ಯ ಸರ್ಕಾರ ಸಂವಿಧಾನದಲ್ಲಿ ಅಡಕವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಲು ಹೊರಟಿದೆ ಸರ್ಕಾರದ ಲೋಪ ದೋಷಗಳನ್ನು ಜನರಿಗೆ ತಿಳಿಸುವುದನ್ನು ಈ ವಿಧೇಯಕದ ಮೂಲಕ ಹತ್ತಿಕ್ಕಲು ಹೊರಟಿದೆ ವಿಧೇಯಕದಲ್ಲಿ ಯಾವುದೇ ಸ್ಪಷ್ಟತೆಯಿಲ್ಲ ವೆಂದು ಆರೋಪಿಸಿರುವ ಬಿಜೆಪಿ ಕೂಡಲೆ ವಿಧೇಯಕ ಹಿಂಪಡೆಯಲು ಆಗ್ರಹಿಸಿದರು. ಈ ಸಂದರ್ಭದಲ್ಲಿ  ಬಿಜೆಪಿ ಜಿಲ್ಲಾ ಅಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ್, ನಗರ ಶಾಸಕ ಡಾ. ಶಿವರಾಜ್ ಪಾಟೀಲ್ , ಮಾಜಿ ಎಂಎಲ್ಸಿ ಎನ್. ಶಂಕ್ರಪ್ಪ , ಉಟ್ಕೂರು ರಾಘವೇಂದ್ರ,ಸಂತೋಷ್ ರಾಜಗುರು, ಕಡಗೋಳ ಅಂಜಿನೇಯ್ಯ, ರಾಜಕುಮಾರ, ರವಿ ಜಲ್ದಾರ್  ಕಡಗೋಳ್ ರಾಮಚಂದ್ರ, ವಿಜಯಕುಮಾರ್, ಬಂಡೇಶ್ ,  ಶಶಿರಾಜ್, ಬಂಗಿ ನರಸರೆಡ್ಡಿ, ವಿ ನಾಗರಾಜ್  ಭೀಮಣ್ಣ ಮಂಚಾಲ್ ವಿನಾಯಕ್ ಶಿವಕುಮಾರ್  ಪಾಟೀಲ್ ವಿ. ಪಿ. ರೆಡ್ಡಿ ನಾಗರಾಜ್ ಬಾಲ್ಕಿ ವಿರೇಶ್ ತಲ್ವಾರ್ ಸಿದ್ದನ್...
Image
  ರಾಜಕಾರಣ ನನಗೆ ಇಷ್ಟವಿಲ್ಲ; ಸಿನಿಮಾದಲ್ಲಿಯೇ ಮುಂದುವರೆಯುತ್ತೇನೆ – ನಟ ಝೈದ್ ಖಾನ್ ಜಯ‌ ಧ್ವಜ ನ್ಯೂಸ್ , ರಾಯಚೂರು, ಡಿ.25 - ರಾಜಕಾರಣ ಕೇವಲ ಭಾಷಣಕ್ಕೆ, ಆಶ್ವಾಸನೆಗೆ ಸೀಮಿತ, ನಾನು ರಾಜಕಾರಣಕ್ಕೆ ಬರಲ್ಲ, ಸಿನಿಮಾದಲ್ಲಿಯೇ ಮುಂದುವರೆಯುತ್ತೇನೆ ಎಂದು ಚಿತ್ರನಟ ಝೈದ್ ಖಾನ್ ತಿಳಿಸಿದರು. ಅವರು ಕಲ್ಟ್ ಚಿತ್ರದ ಪ್ರಮೋಷನ್ ವಿಚಾರವಾಗಿ ರಾಯಚೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಚಿತ್ರರಂಗಕ್ಕೆ ಕಾಲಿಟ್ಟಿದೇನೆ ರಾಜಕೀಯ ಕ್ಷೇತ್ರ ಇಷ್ಟವಿಲ್ಲಣ ನಮ್ಮ ತಂದೆ ಮಾತ್ರ ರಾಜಕೀಯದಲ್ಲಿ ಇದ್ದಾರೆ, ನಮ್ಮ ತಂದೆ ಕುಟುಂಬಕ್ಕೆ ಸಮಯ ಕೊಡದೇ ಕೆಲಸ ಮಾಡುವುದನ್ನು ನೋಡಿ ನಾನು ರಾಜಕಾರಣದಿಂದ‌ ದೂರ ಇರಲು ನಿಶ್ಚಯಿಸಿದ್ದೇನೆ ಎಂದರು. ಪರಭಾಷೆಗೆ ಹೋಲಿಸಿದರೆ ಕನ್ನಡ ಚಿತ್ರರಂಗ ಚಿಕ್ಕದು, ಇಲ್ಲಿ ಸಿನಿಮಾ ಟಾಕೀಸ್‌ ಕಡಿಮೆ ಇವೆ ಪೈಪೋಟಿ ಮಾಡಲು ಕಷ್ಟ, ಅನೇಕರು ಕೇವಲ‌ಹಣ ಮಾಡಬೇಕು, ಲಾಭ‌ಗಳಿಸುವತ್ತ ಗಮನಹರಿಸುತ್ತಿದ್ದಾರೆ ವಿನಃ ಪ್ರಯೋಗಾತ್ಮಕ ಚಿತ್ರ, ಸವಾಲುಗಳನ್ನು ಎದುರಿಸಲು ಸಿದ್ಧರಿಲ್ಲ ಲಾಭ ನಷ್ಟದ ವಿಚಾರದಲ್ಲಿ ನಿರ್ಮಾಪಕರಿಗೆ ಮೋಸ, ನಷ್ಟವಾಗಬಾರದು ಎಂದು ಸಿನಿಮಾ ತಯಾರಾಗುತ್ತಿವೆ‌ ಒಳ್ಳೆಯ ಚಿತ್ರಗಳಿಗೆ ಪ್ರೇಕ್ಷಕರು ಕೈಹಿಡಿಯಬೇಕು‌‌ಕನ್ನಡ ಚಿತ್ರಗಳನ್ನು ವೀಕ್ಷಿಸಿ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು. ಕಲ್ಟ್ ಫಿಲಂ ಮೂಲಕ ಯುವಕರಿಗೆ ಸಂದೇಶ   ಇಂದಿನ ಯುವ ಪೀಳಿಗೆ ಎದುರಿಸುತ್ತಿರುವ ಸವಾಲುಗಳು,...
Image
  ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರಿಗೆ ಟಿಟಿಡಿ ಯಿಂದ ಜ.17 ರಂದು  ಪುರಂದರೋತ್ಸವ ಪ್ರಶಸ್ತಿ ಪ್ರದಾನ  ಜಯ ಧ್ವಜ ನ್ಯೂಸ್, ರಾಯಚೂರು,ಡಿ.25-   ತಿರುಮಲ ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ 2025-2026ನೇ ಸಾಲಿನ ಪುರಂದರೋತ್ಸವ  ಪ್ರಶಸ್ತಿಯನ್ನು ಈ ಬಾರಿ ನಾಡಿನ ದಾಸಸಾಹಿತ್ಯ ವಿದ್ವಾಂಸರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರತರಾದ ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದು  ಟಿ.ಟಿ.ಡಿ ದಾಸಸಾಹಿತ್ಯ ಪ್ರಾಜೆಕ್ಟ್ ನ ವಿಶೇಷ ಅಧಿಕಾರಿಗಳಾದ ವೇದಮೂರ್ತಿ ಪಂಡಿತ್ ಆನಂದ ತೀರ್ಥಾಚಾರ ಪಗಡಾಲ ಅವರು ತಿಳಿಸಿದ್ದಾರೆ.     ಇದೇ ಜ.17ರಂದು ತಿರುಮಲದಲ್ಲಿ ನಡೆಯುತ್ತಿರುವ ಪುರಂದರ ದಾಸರ ಆರಾಧನೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತಿದ್ದು   ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರು ದಾಸ ಸಾಹಿತ್ಯದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದ್ದಾರೆ. ಶ್ರೀ ನರಸಿಂಹ ವಿಠಲ  ಅಂಕಿತದಿಂದ 200 ಕ್ಕೂ ಹೆಚ್ಚು ಸಂಕೀರ್ತನೆಗಳನು  ರಚಿಸಿದ್ದಾರೆ. ಹತ್ತಕ್ಕೂ ಹೆಚ್ಚು ಮೌಲ್ಯಯುಕ್ತ ಗ್ರಂಥಗಳನ್ನು ರಚಿಸಿದ್ದಾರೆ. ಉಗಾ- ಬೋಗ, ಸುಳಾದಿಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಇವರು ಅತ್ಯುತ್ತಮ ವಾಗ್ಮಿ ಗಳಾಗಿದ್ದು ಹಲವಾರು ಸಂಘ ಸಂಸ್ಥೆಗಳಿಗೆ ಪದಾಧಿಕಾರಿಗಳಾಗಿದ್ದಾರೆ.    ...
Image
  ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ: ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಡತೆ- ಪುರುರಾಜ ಸಿಂಗ್ ಸೋಲಂಕಿ.          ಜಯ ಧ್ವಜ ನ್ಯೂಸ್ ,ರಾಯಚೂರು,ಡಿ.25 - ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಡತೆ ಸಾಧ್ಯವೆಂದು ಪ್ರೋಬೆಷನರಿ ಐಎಎಸ್ ಅಧಿಕಾರಿ ಪುರುರಾಜ ಸಿಂಗ್ ಸೋಲಂಕಿ ಹೇಳಿದರು. ಅವರಿಂದು ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಯಚೂರು ರಿಪೋರ್ಟ್ಸ್ ಗಿಲ್ಡ್ ಹಾಗು ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ ಪ್ರತಿಯೊಬ್ಬರು ತಮ್ಮ ದಿನ ನಿತ್ಯದ ಯಾಂತ್ರಿಕ ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ  ಸದೃಢತೆ ಸಾಧಿಸಲು ಕ್ರೀಡೆ ಅತ್ಯಂತ ಸಹಕಾರಿಯಾಗಿದ್ದು ನಾವೆಲ್ಲರೂ ನಮ್ಮ ಬಿಡುವಿನ ಸಮಯದಲ್ಲಿ ಕ್ರೀಡೆಗಳಲ್ಲಿ ತೊಡಗಬೇಕೆಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಾಹಿತಿ ಆಯೋಗದ ಕಲಬುರ್ಗಿ ಪೀಠದ ಆಯುಕ್ತರಾದ ಬಿ.ವೆಂಕಟಸಿಂಗ್ ಮಾತನಾಡಿ ಕ್ರೀಡೆ ನಮ್ಮ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಪತ್ರಕರ್ತರು ತಮ್ಮ ದಿನ ನಿತ್ಯದ ಸುದ್ದಿ ಸಂಗ್ರಹ ಜಂಜಾಟದಲ್ಲಿ ತೊಡಗಿರುತ್ತಾರೆ ಅವರು ಒತ್ತಡ ಜೀವನದಿಂದ ಹೊರಬರಲು ಕ್ರೀಡೆ ಅತಿಮುಖ್ಯವೆಂದು ಅಭಿಪ್ರಾಯಪಟ್ಟ ಅವರು ನಾನು ಸ...
Image
  ವಾರ್ಡ್ ನಂ.17ರಲ್ಲಿ ಮಿತಿ ಮೀರಿದ ಪುಂಡರ ಹಾವಳಿ ಪೊಲೀಸ್ ಇಲಾಖೆ ನಿಷ್ಕ್ರೀಯ ಆರೋಪ.                                                         ಜಯ ಧ್ವಜ ನ್ಯೂಸ್, ರಾಯಚೂರು,ಡಿ.24- ನಗರದ ವಾರ್ಡ್ ನಂ.17 ರ ಚೌಡಮ್ಮಕಟ್ಟೆ ಬಳಿಯ ಓಣಿಗಳಲ್ಲಿ ಪುಂಡರ ಹಾವಳಿ ಮಿತಿ ಮೀರಿದ್ದು ಹಗಲು ರಾತ್ರಿಯನ್ನದೆ ದಳವಾಯಿ ಮನೆ ಕಟ್ಟೆ ಮೇಲೆ  ಪುಂಡರು ಗುಂಪು ಕುಳಿತುಕೊಂಡು ಪಕ್ಕದ ಓಣಿಯಲ್ಲಿ ಹಾವಳಿ ಹಾಕುತ್ತಿದ್ದು ಬಹುತೇಕ ಅಪ್ರಾಪ್ತ ಬಾಲಕರು ಪುಂಡತನಕ್ಕಿಳಿಯುತ್ತಿದ್ದು ಓಣಿಯಲ್ಲಿ ಪ್ರಶ್ನಿಸುವವರ ಮೇಲೆಯೆ ದಬ್ಬಾಳಿಕೆ ಮಾಡುತ್ತಾ ರಸ್ತೆಯ ಮಧ್ಯದಲ್ಲೆ ಜನ್ಮದಿನ ಪಾರ್ಟಿ ಮಾಡಿ ಕೇಕ್ ಕತ್ತರಿಸಿ ದಾರಿಯಲ್ಲಿ ಹೋಗುವ ಯುವತಿಯರಿಗೆ ,ಮಹಿಳೆಯರಿಗೆ ಚುಡಾಯಿಸುತ್ತ  ,ಕೂಗಾಡುತ್ತಾ ಅಸಭ್ಯ ವರ್ತನೆ ತೋರುತ್ತಿದ್ದಾರೆ. ಅಲ್ಲದೆ ಮನೆಯೊಂದರ ಕಿಟಕಿ ಗಾಜು ಪುಡಿಗಟ್ಟಿದ್ದಾರೆ ಈ ಹಿಂದೆಯೂ ಇದೇ ರೀತಿ ಮನೆಯ ಗಾಜು ಒಡೆದಿದ್ದರು ಅದು ಈಗ ಮರುಕಳಿಸಿದ್ದು ಪೊಲೀಸ್ ಇಲಾಖೆಯ ನಿಷ್ಕ್ರೀಯತಯೇ ಇದಕ್ಕೆಲ್ಲ ಕಾರಣವೆಂಬುದು ನಿವಾಸಿಗಳ ಆರೋಪವಾಗಿದೆ ಮಧ್ಯಾಹ್ನ, ಸಾಯಿಂಕಾಲ ಮತ್ತು ರಾತ್ರಿ ಪೊಲೀಸರು ಗಸ್ತು ತಿರುಗಿದರೆ ಇದಕ್ಕೆ ಕಡಿವಾಣ ಹಾಕಬಹುದಾಗಿದೆ ಇತ್ತೀಚೆಗೆ ಅನೇಕ ಪ...
Image
ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಮಂತ್ರಾಲಯಕ್ಕೆ ಭೇಟಿ .                                                                                                              ಜಯ ಧ್ವಜ ನ್ಯೂಸ್ ರಾಯಚೂರು, ಡಿ.24- ಕಾಂತಾರ ಖ್ಯಾತಿಯ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಟುಂಬ ಸಮೇತರಾಗಿ ಮಂತ್ರಾಲಯಕ್ಕಾಗಮಿಸಿ ರಾಯರ ಮೂಲ ಬೃಂದಾವನ ದರ್ಶನ ಪಡೆದುಕೊಂಡು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ ಫಲ ಮಂತ್ರಾಕ್ಷತೆ, ರಾಯರ ಸ್ಮರಣಿಕೆ ,ಶೇಷವಸ್ತ್ರ ಆಶೀರ್ವಾದ ಪಡೆದುಕೊಂಡರು.
Image
  ನಾಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೂತನ ಜಿಲ್ಲಾ ಮಟ್ಟದ ಪತ್ರಕರ್ತರ ಸಂಘದ ಪದಗ್ರಹಣ ಸಮಾರಂಭ :      ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಪ್ರ.ಕಾರ್ಯದರ್ಶಿ ಲೋಕೇಶ ಭಾಗಿ. ಜಯ ಧ್ವಜ ನ್ಯೂಸ್ , ರಾಯಚೂರು ,ಡಿ.24- ಕರ್ನಾಟಕ ಕಾರ್ಯನಿರತ ಪರ್ತ್ರಕರ್ತರ ಸಂಘದ ೨೦೨೫-೨೦೨೮ನೇ ಸಾಲಿನ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನಗರದ ಕನ್ನಡ ಭವನದಲ್ಲಿ ಡಿ.25ರ ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಾರ್ಯಕ್ರಮ ಉದ್ಘಾಟಿಸುವರು. ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ ಜಿಲ್ಲಾ ಮತ್ತು ತಾಲೂಕು ಘಟಕಗಳ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧನೆ ಮಾಡುವರು. ರಾಜ್ಯ ಸಮಿತಿ ಸದಸ್ಯ ಬಸವರಾಜ ನಾಗಡದಿನ್ನಿ, ನಿಕಟಪೂರ್ವ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಪಾಷಾ ಹಟ್ಟಿ ಸೇರಿದಂತೆ ಇತರರು ಪಾಲ್ಗೊಳ್ಳುವರು. ಜಿಲ್ಲಾಧ್ಯಕ್ಷ ಆರ್.ಗುರುನಾಥ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದ ಬಳಿಕ ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ರಾಯಚೂರಿನಲ್ಲಿ ಜರುಗಲಿರುವ ಪತ್ರಕರ್ತರ ರಾಜ್ಯ ಸಮ್ಮೇಳನದ ಕುರಿತು ಪೂರ್ವಭಾವಿ ಸಭೆ ಜರುಗಲಿದೆ. ಸಂಘದ ಎಲ್ಲ ಸದಸ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ಜಿಲ್ಲಾ ಪ್ರಧಾನ ಕ...
Image
  ಡಿ.28 ರಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ :      ರಘುನಾಥ ರೆಡ್ಡಿ ಮನ್ಸಲಾಪೂರುರವರಿಗೆ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿ - ವಿಜಯ್.                                                                                                                                      ಜಯ ಧ್ವಜ ನ್ಯೂಸ್ , ರಾಯಚೂರು , ಡಿ.24- ರಾಯಚೂರು ರಿಪೋರ್ಟರ್ಸ್‌ ಗಿಲ್ಡ್  , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಯಚೂರು  ಕರ್ನಾಟಕ ಸರಕಾರ ಹಾಗೂ ಜಿಲ್ಲಾ ಮತ್ತು ಪ್ರಾಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘ ರಾಯಚೂರು ಜಿಲ್ಲಾಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಡಿ.28 ರಂದು ಬೆಳಿಗ್ಗೆ 11ಕ್ಕೆ ಪತ್ರಿಕಾ ಭವನದ ಸಭಾಂಗಣದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಿಕೊಳ್ಳಲಾಗಿದೆ ಎಂದು ರಾ...
Image
  ಡಿ.28 ರಂದು ಯರಗೇರಾ ಹಜರತ್ ಬಡೇಸಾಹೇಬ್ 127ನೇ ವರ್ಷದ ಉರುಸ್.                                                                          ಜಯಧ್ವಜ ನ್ಯೂಸ್, ರಾಯಚೂರು, ಡಿ.23- ತಾಲೂಕಿನ ಯರಗೇರಾದಲ್ಲಿ ಡಿ.28 ಹಜರತ್ ಬಡೆಸಾಹೇಬ್ ಉರುಸ್  ಹಮ್ಮಿಕೊಳ್ಳಲಾಗಿದೆ ಎಂದು ದರ್ಗಾ ಕಮಿಟಿ ಪ್ರಧಾನ ಕಾರ್ಯದರ್ಶಿ ಡಾ.ನಿಜಾಮುದ್ದೀನ್ ಪಟೇಲ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಸರ್ವ ಧರ್ಮಗಳ ಸಮನ್ವಯದ ಸಂಕೇತವಾದ ಉರುಸ್ ಅಂಗವಾಗಿ ಡಿ.27 ರಂದು ಸಂದಲ್ ಷರೀಫ್, ಡಿ.28 ರಂದು ಉರುಸ್ ಷರೀಫ್ ಹಾಗೂ 29ರಂದು ಜಿಯಾರತ್ ನಡೆಯಲಿದ್ದು ರಾಜ್ಯ ಮತ್ತು ನೆರೆಯ ರಾಜ್ಯಗಳಿಂದಲೂ ಸಹಸ್ರಾರು ಸಂಖ್ಯೆಯ ಜನರು ಭಾಗವಹಿಸಲಿದ್ದಾರೆ ಗ್ರಾ.ಪಂ, ಪೊಲೀಸ್ ಇಲಾಖೆ ಹಾಗೂ ಜೆಸ್ಕಾಂ ಸಕಲ ಸಿದ್ಧತೆ ಮಾಡಿಕೊಂಡಿದ್ದು ವಿದ್ಯುತ್ ವ್ಯತ್ಯಯವಾಗದಂತೆ  ಕ್ರಮ ವಹಿಸಲಿದೆ ಎಂದರು. ಕಳೆದ ಬಾರಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು ಸುಮಾರು 31 ಜನರು ರಕ್ತದಾನಗೈದಿದ್ದರು ಎಂದು ಹೇಳಿದ ಅವರು ಯರಗೇರಿ ಪ್ರೌಡಶಾಲೆಯ ಅತಿಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ ದರ್ಗಾ ಕಮಿಟಿ 11 ಸಾವಿರ ರೂ. ಬಹುಮಾ...
Image
  ಜಿಲ್ಲಾ ಮಟ್ಟದ  ಪೆಂಕಾಕ್ ಪಂದ್ಯಾವಳಿಗೆ ಚಾಲನೆ:  ಜಿಲ್ಲಾ ಪೆಂಕಾಕ್ ಸಂಸ್ಥೆಯ ಅಧ್ಯಕ್ಷೆ ಮಾಸ್ಟರ್ ಲಕ್ಷ್ಮೀ ನೇತೃತ್ವ  ಜಯ ಧ್ವಜ ನ್ಯೂಸ್ , ರಾಯಚೂರು,ಡಿ.23-  ಪೆನ್‌ಕಾಕ್ ಸಿಲಾಟ್  ಆಗ್ನೇಯ ಏಷ್ಯಾದ ಸಾಂಪ್ರದಾಯಿಕ ಸಮರ ಕಲೆ, ಇದು ಕೇವಲ ಆತ್ಮರಕ್ಷಣೆಗಷ್ಟೇ ಸೀಮಿತವಾಗಿಲ್ಲ, ಬದಲಿಗೆ ದೈಹಿಕ ಸಾಮರ್ಥ್ಯ, ಮಾನಸಿಕ ಶಿಸ್ತು, ಆಧ್ಯಾತ್ಮಿಕ ಸಮತೋಲನ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡಿದೆ ಎಂದು ಕೆಪಿಸಿಎಲ್ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರಾದ ಮಹೇಶ್ ಪೊಲೀಸ್ ಪಾಟೀಲ್ ಹೇಳಿದರು. ಅವರಿಂದು ರಾಯಚೂರು ಜಿಲ್ಲಾ ಶಕ್ತಿನಗರ ಬಸವ ಕಲ್ಯಾಣ ಮಂಟಪದಲ್ಲಿ ಪೆಂಕಾಕ್ ಸಿಲತ್ ಸ್ಪೋರ್ಟ್ ಅಸೋಸಿಯೇಷನ ಸಂಸ್ಥೆ  ಅಧ್ಯಕ್ಷರಾದ ಮಾಸ್ಟರ್ ಲಕ್ಷ್ಮೀ ಅವರ ನೇತೃತ್ವದಲ್ಲಿ ರಾಯಚೂರು ಜಿಲ್ಲಾ ಮಟ್ಟದ  ಪೆಂಕಾಕ್ ಪಂದ್ಯಾವಳಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿ ಪೆನ್‌ಕಾಕ್ ಸಿಲಾಟ್‌ನ ಮುಖ್ಯವಾಗಿ ಇದು  ನೈಸರ್ಗಿಕ ದೇಹದ ಚಲನೆಗಳನ್ನು ಬಳಸುತ್ತದೆ, ಸಮತೋಲನ ಮತ್ತು ಚಲನೆಯನ್ನು ಸುಧಾರಿಸುತ್ತದೆ  ಇದು ಇಂಡೋನೇಷ್ಯಾ ಮತ್ತು ಮಲೇಷಿಯಾದಿಂದ ಬಂದಿದ್ದು, ಸಂಸ್ಕೃತಿ ಮತ್ತು ಜೀವನ ತತ್ವಗಳನ್ನು ಒಳಗೊಂಡಿದೆ. ಇದು ಶಿಸ್ತು, ಗೌರವ ಮತ್ತು ಜವಾಬ್ದಾರಿ ಕಲಿಸುತ್ತದೆ ಇದನ್ನು ಕ್ರೀಡೆಯಾಗಿ ಏಷ್ಯನ್ ಗೇಮ್ಸ್‌ಗಳಂತಹ ದೊಡ್ಡ ಪಂದ್ಯಾವಳಿಗಳಲ್ಲಿ ಸೇರಿಸಲಾಗಿದೆ ಮತ್ತು ರಾಷ್ಟ್ರೀಯ ಹಾಗೂ ಅಂತರರಾಷ...
Image
  ರಾಯಚೂರಿನಲ್ಲಿ ಜಿಲ್ಲಾ ಉತ್ಸವ ಆಯೋಜನೆ: ಶೃತಿ ಸಾಹಿತ್ಯ ಮೇಳ ಸ್ವಾಗತ ಜಯ ಧ್ವಜ ನ್ಯೂಸ್ , ರಾಯಚೂರು ,ಡಿ.23 - ಜನವರಿ 29,30, 31ಕ್ಕೆ ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾ ಆಡಳಿತದಿಂದ ರಾಯಚೂರು ಜಿಲ್ಲಾ ಉತ್ಸವ- 2026 ಹಮ್ಮಿಕೊಂಡಿರುವುದು ಹರ್ಷದಾಯಕ ಮತ್ತು ಸ್ವಾಗತಾರ್ಹ ವಾಗಿದೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿಯವರು ತಿಳಿಸಿದ್ದಾರೆ.    ರಾಯಚೂರು ಉತ್ಸವ ಜರುಗಬೇಕೆಂಬುದು, ಸಾಹಿತ್ಯಾಸಕ್ತರ ಮತ್ತು ಕಲಾವಿದರ ಬಹು ದಿನಗಳ ಕನಸಾಗಿತ್ತು. ಈ ಉತ್ಸವವನ್ನು ಆಯೋಜಿಸುವಂತೆ ಶ್ರುತಿ ಸಾಹಿತ್ಯ  ಮೇಳ ಮತ್ತು ಹಲವಾರು ಸಂಘಟನೆಗಳು ಸೇರಿ ರಾಯಚೂರು ಉತ್ಸವ ಆಚರಿಸಬೇಕೆಂದು ಹಲವಾರು ಬಾರಿ ಬೇಡಿಕೆಯನ್ನು ಸಲ್ಲಿಸಲಾಗಿತ್ತು.   ಬಹು ವರ್ಷಗಳ ನಂತರ ಜಿಲ್ಲೆಯಲ್ಲಿ ಮೂರು ದಿನಗಳ ವರೆಗೆ ರಾಯಚೂರು ಉತ್ಸವ ನಿಗದಿಯಾಗಿ  ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ  ಜಿಲ್ಲಾಡಳಿತವು  ಪ್ರಥಮ ಸಭೆ ನಡೆಸಿರುವುದು  ಸಂತೋಷದ ವಿಷಯವಾಗಿದೆ.     ರಾಯಚೂರು ಜಿಲ್ಲೆ ಸಾಹಿತ್ಯ ಸಂಸ್ಕೃತಿ ,ಕಲೆ, ಇತಿಹಾಸ, ಇವುಗಳಿಗೆ ಅತ್ಯಂತ ಶ್ರೀಮಂತವಾಗಿರುವ ಪ್ರದೇಶವಾಗಿದೆ.  ರಾಜ್ಯ ಸರ್ಕಾರದಿಂದ ಹಂಪಿ ಉತ್ಸವ, ಕದಂಬ ಉತ್ಸವ, ಮೈಸೂರು ಉತ್ಸವ, ಕರಾವಳಿ ಉತ್ಸವ, ಪಟ್ಟದಕಲ್ಲು ಉತ್ಸವ, ಮುಂತಾದ ಜಿಲ್ಲೆಗಳಲ್ಲಿ ಉತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ರಾಯಚೂರು...
Image
  ಡಿ. 23 ರಂದು ಆಕಾಶವಾಣಿ ಕೇಂದ್ರದಲ್ಲಿ    ಕವಿಗೋಷ್ಠಿ .                                                                                                                    ಜಯ ಧ್ವಜ ನ್ಯೂಸ್ ,ರಾಯಚೂರು, ಡಿ.22- ಆಕಾಶವಾಣಿ ರಾಯಚೂರು ವತಿಯಿಂದ ಬಾನುಲಿ ಕವಿ ಗೋಷ್ಠಿ ಡಿ.23 ರಂದು  ಸಂಜೆ 4 ಗಂಟೆಗೆ ರಾಯಚೂರು ಆಕಾಶವಾಣಿ ಕೇಂದ್ರದಲ್ಲಿ ನಡೆಯಲಿದೆ. ಈ ಕವಿಗೋಷ್ಠಿ ಕಾರ್ಯಕ್ರಮದ ಉದ್ಘಾಟನೆಯನ್ನು ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಸಾಹಿತಿಗಳಾದ ಡಾ. ರಮೇಶ್  ಅರೋಲಿ ಅವರು ಉದ್ಘಾಟಿಸಲ್ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧಾರವಾಡದ ಸಾಹಿತಿಗಳಾದ ಟಿ ಎಸ್ ಗೊರವರ, ಸಿಂಧನೂರಿನ ಕಥೆಗಾರರಾದ ಅಮರೇಶ್ ಗಿಣೆವಾರ ಅವರು  ಭಾಗವಹಿಸಲಿದ್ದಾರೆ.ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಯಚೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ವೆಂಕಟೇಶ್ ಬೇವಿನಬೆಂಚಿ ವಹಿಸಲಿದ್ದಾರೆ. ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕವಿಗಳ...