Posts

Showing posts from January, 2024

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅಧಿಕಾರ ಸ್ವೀಕಾರ

Image
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ರಾಯಚೂರು ಗ್ರಾಮೀಣ ಕ್ಷೇತ್ರದ  ಶಾಸಕರಾದ   ಬಸನಗೌಡ ದದ್ದಲ್   ಅಧಿಕಾರ ಸ್ವೀಕಾರ                                     ರಾಯಚೂರು,ಜ.31- ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ರಾಯಚೂರು ಗ್ರಾಮೀಣ ಕ್ಷೇತ್ರದ  ಶಾಸಕರಾದ   ಬಸನಗೌಡ ದದ್ದಲ್   ಅಧಿಕಾರ ಸ್ವೀಕರಿಸಿದರು.  ಇಂದು ಬೆಂಗಳೂರಿನ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ  ಅಧಿಕಾರ ಸ್ವೀಕರಿಸಿ ಮಾತನಾಡಿದ ಶಾಸಕರು ಪರಿಶಿಷ್ಟ ಪಂಗಡಗಳ ನಿಗಮದ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿತ್ತೇನೆ, ಇಲಾಖೆಯ ಪ್ರತಿಯೊಂದು ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ ಎಂದರು.  ನನಗೆ ಹುದ್ದೆ ದೊರೆಯಲು ಮುಖ್ಯ ಕಾರಣೀಭೂತರಾದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆರವರಿಗೆ, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ  ರವರಿಗೆ ಮತ್ತು ರಾಜ್ಯದ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ರವರಿಗೆ ಮತ್ತು   ಸಚಿವರಾದ ಪ್ರಿಯಾಂಕ ಖರ್ಗೆ ರವರಿಗೆ ಮತ್ತು ಸಚಿವರಾದ ಸತೀಶ ಜಾರಕಿಹೊಳಿ  ರವರಿಗೆ ಮತ್ತು ಇಲಾಖೆಯ ಸಚಿವರಾದ ಬಿ ನಾಗೇಂದ್ರ ರವರಿಗೆ ಮತ್ತು ರಾಯಚೂರು ಜಿಲ್ಲಾ ಉಸ್ತು

ಬಸನಗೌಡ ದದ್ದಲ್ ರಿಂದ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ್ ಹಾಗೂ ಪ್ರೀಯಾಂಕ್ ಖರ್ಗೆ ಭೇಟಿ

Image
  ಬಸನಗೌಡ ದದ್ದಲ್ ರಿಂದ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ್ ಹಾಗೂ  ಪ್ರಿಯಾಂಕ್ ಖರ್ಗೆ ಭೇಟಿ                               ರಾಯಚೂರು,ಜ.31-ರಾಜ್ಯ ಸರಕಾರದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ರವರು  ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ್ ಹಾಗೂ ಸಚಿವರಾದ ಪ್ರಿಯಾಂಕ್ ಖರ್ಗೆ ಯವರನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಿದರು.                                                               ಈ ಸಂದರ್ಭದಲ್ಲಿ ಶಾಸಕರಾದ ಹಂಪನಗೌಡ ಬಾದರ್ಲಿ, ಶರತ ಬಚ್ಚೆಗೌಡ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಪಾಟೀಲ್ ಇಟಗಿ, ಎ.ವಸಂತಕುಮಾರ, ಡಾ.ರಝಾಕ ಉಸ್ತಾದ, ಅಬ್ದುಲ‌ ಕರೀಮ ಹಾಗೂ ಇತರರು ಉಪಸ್ಥಿತರಿದ್ದರು.

ಮೋದಿ ಹೆಸರಿನಿಂದ ಓಟು ಬರುತ್ತಿರುವುದರಿಂದ ಕಾಂಗ್ರೆಸ್ ಗೆ ಆತಂಕ: ಸಿದ್ದು, ಡಿಕೆಶಿಗೆ ರಾಮ, ಹನುಮ, ಕೇಸರಿ ಕಂಡರೆ ಭಯವೇಕೆ- ಈಶ್ವರಪ್ಪ.

Image
                                            ಮೋದಿ ಹೆಸರಿನಿಂದ ಓಟು ಬರುತ್ತಿರುವುದರಿಂದ ಕಾಂಗ್ರೆಸ್ ಗೆ ಆತಂಕ:                                                ಸಿದ್ದು, ಡಿಕೆಶಿಗೆ ರಾಮ, ಹನುಮ, ಕೇಸರಿ ಕಂಡರೆ ಭಯವೇಕೆ- ಈಶ್ವರಪ್ಪ.                             ರಾಯಚೂರು,ಜ.31- ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಗೆ ರಾಮ, ಹನುಮ ಮತ್ತು ಕೇಸರಿ ಕಂಡರೆ ಅಷ್ಟೊಂದು ಭಯವೇಕೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು .                                      ಅವರಿಂದು ನಗರದಲ್ಲಿ ಸುದ್ಜಿಗಾರರೊಂದಿಗೆ ಮಾತನಾಡಿ ಮಂಡ್ಯ ಜಿಲ್ಲೆಯ ಕೆರೆಗೋಡು ಧ್ವಜ ಸ್ತಂಭ ವಿವಾದ ಕುರಿತು ಕಾಂಗ್ರೆಸ್ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ  ಕೆರೆಗೋಡು ಗ್ರಾ.ಪಂ ಸಭೆಯಲ್ಲಿ  ಹನುಮ ಧ್ವಜ    ಹಾರಿಸಲು ನಿರ್ಣಯ ಕೈಗೊಳ್ಳಲಾಗಿದೆ ಈಗ ನಡಾವಳಿ ಪುಸ್ತಕವೇ ನಾಪತ್ತೆಯಾಗಿದೆ ಎಂದರು.                                                         ಅಯೋಧ್ಯೆ ಶ್ರೀ ರಾಮಮಂದಿರ ಬಗ್ಗೆ ಹಗುರವಾಗಿ ಮಾತನಾಡಿ  ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ನೆಲೆ ಕಳೆದುಕೊಂಡಿದೆ ಮುಂದಿನ ದಿನಗಳಲ್ಲಿ ದೇಶದಲ್ಲೂ ನೆಲಕ್ಕಚ್ಚುತ್ತದೆ ಎಂದರು. ಕಾಶಿ ವಿಶ್ವನಾಥ ಮಂದಿರದ ಮೇಲೆ ಮಸೀದಿ ಕಟ್ಟಿರುವ ಬಗ್ಗೆ ಪುರಾತತ್ವ ಇಲಾಖೆ ವರದಿ ಅನ್ವಯ ಜಿಲ್ಲಾ ನ್ಯಾಯಾಲಯ ಹಿಂದೂಗಳು ಪೂಜೆ ಮಾಡಲು ಅನುಮತಿಸಿ ತೀರ್ಪು ನೀಡಿದ್ದು ಸ್ವಾಗತಾರ್ಹವೆಂದ ಅವರು

ಕೇಂದ್ರ ಮಧ್ಯಂತರ ಬಜೆಟ್- ಗರಿಗೆದರಿದ ಏಮ್ಸ್ ಬೇಡಿಕೆ: 629 ದಿನಗಳ‌ ಹೋರಾಟಕ್ಕೆ ನ್ಯಾಯ ದೊರಕಿಸುವರೇ ನಿರ್ಮಲಾ ಸೀತಾರಾಮನ್ ?

Image
  ಕೇಂದ್ರ ಮಧ್ಯಂತರ  ಬಜೆಟ್- ಗರಿಗೆದರಿದ ಏಮ್ಸ್ ಬೇಡಿಕೆ:                                                        629 ದಿನಗಳ‌ ಹೋರಾಟಕ್ಕೆ  ನ್ಯಾಯ    ದೊರಕಿಸುವರೇ  ನಿರ್ಮಲಾ ಸೀತಾರಾಮನ್   ?             ರಾಯಚೂರು,ಜ.31- ರಾಜ್ಯದ ಇತಿಹಾಸದಲ್ಲೆ ಸುಧೀರ್ಘ ಹೋರಾಟಗಳ ಸಾಲಿನಲ್ಲಿ ಸೇರ್ಪಡೆಯಾದ 629 ದಿನಗಳ ಏಮ್ಸ್ ಹೋರಾಟಕ್ಕೆ ಕೇಂದ್ರ ಮಧ್ಯಂತರ ಬಜೆಟ್ ನಲ್ಲಿ ನ್ಯಾಯ ದೊರಕುವುದೇ ಎಂಬ ಕುತೂಹಲ ಗರಿಗೆದರಿದೆ.                                               ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಸ್ಥಾಪಿಸುವಂತೆ ನಗರದ ಜಿಲ್ಲಾ ಕ್ರೀಡಾಂಗಣ ಬಳಿ ಮಹಾತ್ಮ ಗಾಂಧಿಜಿ ಪುತ್ಥಳಿ ಮುಂಭಾಗದಲ್ಲಿ ನಡೆಸುತ್ತಿರುವ ಧರಣಿ ಎರೆಡು ವರ್ಷ ಸಮಿಪಿಸುತ್ತಿದ್ದು ಹೋರಾಟಗಾರರ ಸಹನೆಯ ಕಟ್ಟೆ ಒಡೆಯುವ ಮುನ್ನವೆ ನಾಳೆಯ ಕೇಂದ್ರ ಮಧ್ಯಂತರ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜಿಲ್ಲೆಗೆ ಸಿಹಿ ಸುದ್ದಿ ನೀಡುವರೆ ಎಂಬ ಕುತೂಹಲ ಮನೆ ಮಾಡಿದೆ. ಈ ಹಿಂದೆ ಐಐಟಿ ಮಂಜೂರು ಮಾಡುವಂತೆ ಸುಧೀರ್ಘ ಹೋರಾಟ ನಡೆದಿತ್ತು ಆದರೆ ಅದನ್ನು ಧಾರವಾಡಕ್ಕೆ ಕೊಂಡೊಯ್ಯಲಾಯಿತು ಐಐಟಿ ವಂಚಿತ ಜಿಲ್ಲೆ ಏಮ್ಸ್ ನೀಡುವ ಮುಖಾಂತರ ಜಿಲ್ಲೆಗೆ ಆದ ಅನ್ಯಾಯವನ್ನು ಕೇಂದ್ರ ಸರ್ಕಾರ ಸರಿಪಡಿಸಬೇಕು ಎಂಬ ಬೇಡಿಕೆ ಏಮ್ಸ್ ಹೋರಾಟಗಾರರು ಮತ್ತು ಜಿಲ್ಲೆಯ ಜನರಿದ್ದಾಗಿದೆ. ಏಮ್ಸ್ ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿದೆ ಮಂತ್ರಾಲಯ ಶ್ರೀ

ಮಧ್ಯಂತರ ಬಜೆಟ್ ನಲ್ಲಿ ರಾಯಚೂರಿಗೆ ಏಮ್ಸ್ ಘೋಷಿಸಲು ಹಣಕಾಸು ಸಚಿವರಿಗೆ ಸಂಸದ ರಾಜಾ ಅಮರೇಶ್ವರ ನಾಯಕ ಪತ್ರ

Image
  ಮಧ್ಯಂತರ ಬಜೆಟ್ ನಲ್ಲಿ  ರಾಯಚೂರಿಗೆ ಏಮ್ಸ್ ಘೋಷಿಸಲು ಹಣಕಾಸು ಸಚಿವರಿಗೆ ಸಂಸದ ರಾಜಾ ಅಮರೇಶ್ವರ ನಾಯಕ  ಪತ್ರ ರಾಯಚೂರು,ಜ.31- ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ್ ರವರು ಜ. 19 ರಂದು ಕೇಂದ್ರ ಹಣಕಾಸು ಸಚಿವರಾದ   ನಿರ್ಮಲಾ ಸೀತಾರಾಮನ್ ರವರಿಗೆ ರಾಯಚೂರಿಗೆ ಏಮ್ಸ್ ಮಂಜೂರು ಮಾಡಲು ವಿನಂತಿಸಿ ಪತ್ರ ಬರೆದಿದ್ದಾರೆ.  ಈ ಕುರಿತು ಅವರು ತಮ್ಮ ಸುಧೀರ್ಘ ಪತ್ರದಲ್ಲಿ ತಾವು ಸಂಸದರಾಗಿ ಆಯ್ಕೆಯಾದ ನಂತರ ನಿರಂತರವಾಗಿ 2019 ರಿಂದ ಸನ್ಮಾನ್ಯ ಪ್ರಧಾನ ಮಂತ್ರಿಗಳವರಿಗೆ ,  ಶ್ರೀ ಮನಸುಕ್ ಮಾoಡವಿಯಾ ಮಾನ್ಯ ಕೇಂದ್ರ ಆರೋಗ್ಯ ಸಚಿವರಿಗೆ ಹಾಗೂ ಕರ್ನಾಟಕ ಸರ್ಕಾರದಿಂದ ಪ್ರಸ್ತಾವನೆಯನ್ನು ಕಳಿಸಲು ಸನ್ಮಾನ್ಯ ಮುಖ್ಯಮಂತ್ರಿಗಳವರಿಗೆ ಸುಮಾರು ಮೂರು ಸಾರಿ ಹಾಗೂ ಪಾರ್ಲಿಮೆಂಟಿನಲ್ಲಿ ಪ್ರಶ್ನೋತ್ತರಗಳ ವೇಳೆ ರೂಲ್ 377ರ ಅಡಿಯಲ್ಲಿ  ರಾಯಚೂರಿಗೆ ಏಮ್ಸ್ ಮಂಜೂರು ಮಾಡಲು ವಿನಂತಿಸಲಾಗಿದೆ. ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಜನಾಂಗದವರು ವಾಸಿಸುತಿದ್ದು ಇವರುಗಳು ತಮ್ಮ ದೈನಂದಿನ ಜೀವನ ಸಾಗಿಸಲು ಕಷ್ಟಪಡುವ ಇವರುಗಳು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಉತ್ತಮ ಆರೋಗ್ಯ ನೀಡಲು ವಿಫಲರಾಗಿದ್ದಾರೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಕರ್ನಾಟಕದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆಗಳಾಗಿದ್ದು ಇವು ಕೇಂದ್ರ ಸರ್ಕಾರದ 371ನೇ ವಿದಿ ಅಡಿಯಲ್ಲಿ ಬರುತ್ತಿದ್ದು ಹಾಗೂ ಕೇಂ

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಂದ ಲೋಕಾರ್ಪಣೆ ಪಿಎಂ ನರೇಂದ್ರ ಮೋದಿ ಕುರಿತ ಚಿತ್ರಣವುಳ್ಳ ಪುಸ್ತಕ :ಅಂಧರಿಗಾಗಿ ಪ್ರಾಮೀಸ್ಡ್ ನೇಷನ್ ಪುಸ್ತಕ ಬಿಡುಗಡೆ

Image
  ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಂದ ಲೋಕಾರ್ಪಣೆ  ಪಿಎಂ ನರೇಂದ್ರ ಮೋದಿ ಕುರಿತ ಚಿತ್ರಣವುಳ್ಳ ಪುಸ್ತಕ: ಅಂಧರಿಗಾಗಿ ಪ್ರಾಮೀಸ್ಡ್ ನೇಷನ್ ಪುಸ್ತಕ ಬಿಡುಗಡೆ ನವದೆಹಲಿ,ಜ.30- ದೇಶದ ಏಳು ಕೋಟಿ ಅಂಧರು, ದೃಷ್ಟಿದೋಷ ಇರುವವರು ಪ್ರಧಾನಿ ನರೇಂದ್ರ ಮೋದಿಯವರ ಜೀವನ, ಕಾರ್ಯ ಮತ್ತು ನಾಯಕತ್ವದ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಹುಬ್ಬಳ್ಳಿ ಮೂಲದ ಟೀಮ್ ಸೆನ್ಸ್ ಎಸೆನ್ಸ್ ಸಂಸ್ಥೆಯು ಬ್ರೈಲ್ ಲಿಪಿಯಲ್ಲಿ ಸಿದ್ಧಪಡಿಸಿದ ‘ಎ ಪ್ರಾಮೀಸ್ಡ್ ನೇಷನ್ ಹಾನರೇಬಲ್ ಶ್ರೀ ನರೇಂದ್ರ ಮೋದಿ- ದ ಮೇಕರ್ ಆ್ ನ್ಯೂ ಇಂಡಿಯಾ’ ಎಂಬ ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಲೋಕಾರ್ಪಣೆಗೊಳಿಸಿದರು. ವಿಆರ್‌ಎಲ್ ಸಮೂಹ ಸಂಸ್ಥೆಯ ಸಹಯೋಗ ಮತ್ತು ಪ್ರಾಯೋಜಕತ್ವದಲ್ಲಿ ಈ ಪುಸ್ತಕ ಹೊರತರಲಾಗಿದೆ. ದೆಹಲಿಯ ನಾರ್ತ್ ಬ್ಲಾಕ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಆನಂದ ಸಂಕೇಶ್ವರ ಮತ್ತು ಟೀಮ್ ಸೆನ್ಸ್ ಎಸೆನ್ಸ್ ಸಂಸ್ಥೆಯ ಸಂಸ್ಥಾಪಕಿಯರಾದ ರುಷಾಲಿ ದೋಶಿ ಮತ್ತು ಯಶ್ವಿ ಭಂಡಾರಿ ಉಪಸ್ಥಿತಿಯಲ್ಲಿ ಕೇಂದ್ರ ಸಚಿವ ಅಮಿತ್ ಷಾ ಪುಸ್ತಕ ಬಿಡುಗಡೆಗೊಳಿಸಿದರು. ‘ದೇಶದ ಎರಡೂವರೆ ಲಕ್ಷ ಅಂಧ ಮಕ್ಕಳು ಹಾಗೂ ಕಣ್ಣಿನ ಸಮಸ್ಯೆ ಎದುರಿಸುತ್ತಿರುವ 7 ಕೋಟಿ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಈ ಪುಸ್ತಕದಿಂದ ಸಾಕಷ್ಟು ಮಾಹಿತಿ ಪಡೆದುಕೊಳ್ಳಬಹುದು. ಇದು ನಿಜಕ್ಕೂ ಸಾಹಸಮಯ ಕೆಲಸ. ವಿಆರ್‌ಎಲ್ ಸಂಸ್ಥೆ ಮತ್ತು

ಇಡಪನೂರ, ತಲಮಾರಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದದ್ದಲ್ ರಿಂದ ಭೂಮಿ ಪೂಜೆ ಮತ್ತು ಉದ್ಘಾಟನೆ

Image
  ಇಡಪನೂರ, ತಲಮಾರಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ  ಶಾಸಕ ದದ್ದಲ್  ರಿಂದ ಭೂಮಿ ಪೂಜೆ ಮತ್ತು  ಉದ್ಘಾಟನೆ    ರಾಯಚೂರು,ಜ.30- ಗ್ರಾಮೀಣ ಕ್ಷೇತ್ರದ  ಶಾಸಕರಾದ  ಬಸನಗೌಡ ದದ್ದಲ್ ರವರು   ಇಂದು ಇಡಪನೂರ, ತಲಮಾರಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ  ಭೂಮಿ ಪೂಜೆ ಮತ್ತು ಉದ್ಘಾಟನೆಯನ್ನು ನೆರವೇರಿಸಿದರು. ಇಡಪನೂರ ಗ್ರಾಮದಲ್ಲಿ ನೂತನವಾಗಿ ಆಯುಷ್ ಆಸ್ಪತ್ರೆ ಕಟ್ಟಡ ಭೂಮಿ ಪೂಜೆ ಹಿಂದುಳಿದ ವರ್ಗಗಳು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಕಟ್ಟಡ* ಭೂಮಿ ಪೂಜೆ ಆರಾಧನಾ ಯೋಜನೆಯಡಿಯಲ್ಲಿ ಭೀಮರಾಯ ಗುಡಿ ಅಭಿವೃದ್ಧಿ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ 06 ಕೊಠಡಿಗಳ ಉದ್ಘಾಟನೆ ನೆರವೇರಿಸಿದರು ಹಾಗೂ ತಲಮಾರಿ  ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ  ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಊರಿನ ಹಿರಿಯ ಮುಖಂಡರುಗಳು, ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ ನಲ್ಲಿ ಏಮ್ಸ್ ಘೋಷಣೆಗೆ ನಿರ್ಮಲಾ ಸೀತಾರಾಮನ್ ಗೆ ಸಿಎಂ ಪತ್ರ.

Image
  ಕೇಂದ್ರ ಬಜೆಟ್ ನಲ್ಲಿ ಏಮ್ಸ್ ಘೋಷಣೆಗೆ ನಿರ್ಮಲಾ ಸೀತಾರಾಮನ್ ಗೆ ಸಿಎಂ ಪತ್ರ.                ರಾಯಚೂರು,ಜ.30- ಕೇಂದ್ರ ಬಜೆಟ್ ನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಘೋಷಿಸಬೇಕೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದು ಒತ್ತಾಯಿಸಿದ್ದಾರೆ.                                 ಈ ಹಿಂದೆ ರಾಜ್ಯ ಸರ್ಕಾರದಿಂದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನಸುಕ ಮಾಂಡವೀಯ ರವರಿಗೆ ಬರೆದ ಪತ್ರವನ್ನು ಲಗತ್ತಿಸಲಾಗಿದ್ದು ಈ ಬಗ್ಗೆ ಸಚಿವ ಎನ್.ಎಸ್. ಬೋಸರಾಜುರವರೊಂದಿಗೆ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ ಸಂಪರ್ಕ ಮಾಡಿದ್ದು ಅವರ ಮೂಲಕ ಮಾಹಿತಿ ದೊರೆತಿದ್ದು ಕೇಂದ್ರ ಬಜೆಟ್ ನಲ್ಲಿ ರಾಯಚೂರಿಗೆ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿದ್ದಾರೆ.

ಶೀಘ್ರದಲ್ಲೆ ಜಿಲ್ಲಾ ಕಾಂಗ್ರೆಸ್ ಗೆ ನೂತನ ಸಾರಥಿ: ಬಿ.ವೈ.ವಿಜಯೇಂದ್ರ ಬುದ್ಧಿ ಹೀನ ರಾಜ್ಯಾಧ್ಯಕ್ಷ -ವಸಂತ ಕುಮಾರ್.

Image
  ಶೀಘ್ರದಲ್ಲೆ ಜಿಲ್ಲಾ ಕಾಂಗ್ರೆಸ್ ಗೆ ನೂತನ ಸಾರಥಿ:                        ಬಿ.ವೈ.ವಿಜಯೇಂದ್ರ ಬುದ್ಧಿ ಹೀನ ರಾಜ್ಯಾಧ್ಯಕ್ಷ -ವಸಂತ ಕುಮಾರ್ .                                                                  ರಾಯಚೂರು,ಜ.30- ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಸುಳ್ಳು ಮಾಹಿತಿ ನೀಡಿದ ಬಿ.ವೈ.ವಿಜಯೇಂದ್ರ ಬುದ್ಧಿ ಹೀನ ರಾಜ್ಯಾಧ್ಯಕ್ಷರೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದ 5 ಗ್ಯಾರಂಟಿಗಳ ಜಿಲ್ಲಾ ಮಟ್ಟದ ಅಂಕಿ ಅಂಶಗಳ ಮಾಹಿತಿ‌ನೀಡಿ ಮಾತನಾಡಿ  ಇತ್ತೀಚೆಗೆ ನಗರಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜನರಿಗೆ ಸರ್ಕಾರದ ಬಗ್ಗೆ ತಪ್ಪು ಮಾಹಿತಿ‌ ನೀಡಿ ಗೊಂದಲ ಮತ್ತು ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆಂದ ಅವರು ಐದು ಗ್ಯಾರಂಟಿಗಳ ಜಿಲ್ಲಾ ಮಟ್ಟದ ಅಂಕಿ ಅಂಶಗಳನ್ನು ತಾಲೂಕು ವಾರು ಸಾಧನೆ ಬಿಡಿಸಿಟ್ಟರು. ಬಿ.ವೈ.ವಿಜಯೇಂದ್ರ ತಮ್ಮ ಕಾರಿನ ಚಾಲಕರಿಗೆ,ಮನೆಯ ಭಧ್ರತಾ ಸಿಬ್ಬಂದಿಗಳಿಗೆ , ಪಕ್ಷದ ಬಡ ಕಾರ್ಯಕರ್ತರಿಗೆ ಕೇಳಿ ತಿಳಿದುಕೊಂಡರೆ ಗ್ಯಾರಂಟಿ ಜಾರಿ ಬಗ್ಗೆ ವಾಸ್ತವಾಂಶ ತಿಳಿಯುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.                           ಶಕ್ತಿ , ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಅನ್ನ ಭಾಗ್ಯ ಉತ್ತಮ ಪ್ರಗತಿಕಂಡಿವೆ ಕಳೆದು ತಿಂಗಳು ಜಾರಿಗೆ ಬಂದ ಯುವ ನಿಧಿ ಕೊಂಚ ನ್ಯೂನ್ಯತೆಯಿಂದ ಕೂಡಿದೆ ಸರ

ಕಾಡ್ಲೂರಲ್ಲಿ ಅಕ್ರಮ ಮರಳುಗಾರಿಕೆ: ನದಿಯಿಂದ ಮರಳು ಬಗೆದು ಶೇಖರಣೆ.

Image
  ಕಾಡ್ಲೂರಲ್ಲಿ ಅಕ್ರಮ ಮರಳುಗಾರಿಕೆ:    ನದಿಯಿಂದ  ಮರಳು ಬಗೆದು ಶೇಖರಣೆ.                              ರಾಯಚೂರು,ಜ.30-ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ಸಾಗುತ್ತಿದೆ .                ನದಿ ತೀರದ ಐತಿಹಾಸಿಕ ಪ್ರಸಿದ್ಧ ಶ್ರೀ ವನವಾಸಿ ರಾಮದೇವರ ಹಾಗೂ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನ ಸಮೀಪದಲ್ಲೆ ಅಕ್ರಮ ಮರಳು ಶೇಖರಣೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.                                       ಜೆಸಿಬಿ ಮೂಲಕ ನದಿಯ ಒಡಲನ್ನು ಬಗೆದು ಟ್ರಾಕ್ಟರ್ ಮತ್ತು ಬೃಹತ್ ಟಿಪ್ಪರ್ ಮೂಲಕ ಮರಳು ಲೂಟಿ ನಡೆದಿದೆ ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಪೊಲೀಸ್ ಇಲಾಖೆ  ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯವಾಗಿದೆ. 

ಧರ್ಮಾಚರಣೆಯಿಂದ ನುಣಿಚಿಕೊಳ್ಳಬೇಡಿ-ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು.

Image
  ಧರ್ಮಾಚರಣೆಯಿಂದ ನುಣಿಚಿಕೊಳ್ಳಬೇಡಿ-ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು.  ರಾಯಚೂರು,ಜ.29- ಧರ್ಮಾಚರಣೆಯಿಂದ ನುಣಿಚಿಕೊಳ್ಳಬೇಡಿ ಎಂದು  ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು ನುಡಿದರು.                 ಅವರಿಂದು ನಗರದ ಕೋಟೆಯ ಶ್ರೀ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಶ್ರೀ ಗೋಪಾಲದಾಸರ, ಶ್ರೀ ಪುರಂದರ ದಾಸರ ಹಾಗೂ ಶ್ರೀ ಮಧ್ವ ನವರಾತ್ರಿ ಉತ್ಸವ ಅಂಗವಾಗಿ ನಡೆದ ಜ್ಞಾನಸತ್ರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.                                  ಸಂಧ್ಯಾವಂದನೆ,  ದೇವರ ಪೂಜೆ  ಮಾಡುವುದು ಕರ್ತವ್ಯ ದೀಕ್ಷೆ ಬಗ್ಗೆ ನಮ್ಮ ಸಂಕಲ್ಪ ವಿರಬೇಕು ಮಂತ್ರ ಪಠಿಸಿ ಭಗವಂತನಲ್ಲಿ ಜ್ಞಾನ ಭಕ್ತಿ ವೈರಾಗ್ಯ ಕರುಣಿಸೆಂದು ಕೋರಬೇಕು ಕಾಮ್ಯ ಕರ್ಮ ಬಿಡಬೇಕು ನಿಷ್ಕಾಮ ಭಕ್ತಿ ಬೇಕೆಂದರು.      ಮೋಕ್ಷ ಸಾಧನೆಗೆ ಏನು ಬೇಕು ಅದನ್ನು ಮಾಡಬೇಕೆಂದರು. ಅನ್ಯರಿಗೆ ಕೆಡಕಾಗಲಿ , ಮುಖಭಂಗವಾಗಲಿ ಎಂದು ದೇವರನ್ನು ಪೂಜಿಸಿದರೆ ಅದು ಸಫಲವಾಗುವುದಿಲ್ಲ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.                      ಶ್ರೀ ಮಧ್ವಾಚಾರ್ಯರ ಆದರ್ಶ ಪಾಲಿಸೋಣ ದಿನದಿಂದ ದಿನಕ್ಕೆ ನಮ್ಮಲ್ಲಿ ಪರಿವರ್ತನೆಯಾಗಬೇಕೆಂದರು.                ದಾಸರು ದಕ್ಷಿಣೆಯ ದಾಕ್ಷಿಣ್ಯಕ್ಕೆ ಬೀಳದೆ  ಅಧರ್ಮಿಗಳನ್ನು ಜರೆದು ಸತ್ಯ ಧರ್ಮ ಪಾಲಿಸುವವರನ್ನು ಅನುಗ್ರಹಿಸಿದರು ಎಂದರು. ಆಯೋಜಕರು ಮತ್ತು ದೇವಸ್ಥಾನ ಸಮಿತಿಯಿಂದ ಶ್ರೀ ಪ

ಕೃಷ್ಣ ನದಿಯಿಂದ ಗಣೇಕಲ್ ಏತ ನೀರಾವರಿ ಯೋಜನೆಯ (ಬಂಗಾರಪ್ಪ ಕೆರೆ) ಕಾಮಗಾರಿ ವೀಕ್ಷಣೆ ಮಾಡಿದ ಶಾಸಕ ಬಸನಗೌಡ ದದ್ದಲ್: ಸಿಎಂ-ಡಿಸಿಎಂ ರಿಂದ ಉದ್ಘಾಟನೆಗೆ ಶೀಘ್ರ ದಿನಾಂಕ ನಿಗದಿ

Image
  ಕೃಷ್ಣ ನದಿಯಿಂದ ಗಣೇಕಲ್ ಏತ ನೀರಾವರಿ ಯೋಜನೆಯ (ಬಂಗಾರಪ್ಪ ಕೆರೆ) ಕಾಮಗಾರಿ ವೀಕ್ಷಣೆ  ಮಾಡಿದ ಶಾಸಕ ಬಸನಗೌಡ ದದ್ದಲ್:                ಸಿಎಂ-ಡಿಸಿಎಂ ರಿಂದ ಉದ್ಘಾಟನೆಗೆ ಶೀಘ್ರ ದಿನಾಂಕ ನಿಗದಿ ರಾಯಚೂರು,ಜ.29- ಜಿಲ್ಲೆಯ ಬಹುನಿರೀಕ್ಷಿತ ಕುಡಿಯುವ ನೀರು ಹಾಗೂ ರೈತರಿಗೆ ಜಮೀನುಗಳಿಗೆ,ಯೋಜನೆ ಕೃಷ್ಣ ನದಿಯಿಂದ ಬಂಗಾರಪ್ಪ ಕೆರೆಗೆ ನೀರುಣಿಸುವ ಯೋಜನೆಯ ಕಾಮಗಾರಿಯನ್ನು  ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ  ಶಾಸಕ ಶ್ರೀ ಬಸನಗೌಡ ದದ್ದಲ್ ವೀಕ್ಷಿಸಿದರು ನಂತರ  ಮಾತನಾಡಿದ ಶಾಸಕರು ಗಣೇಕಲ್ (ಬಂಗಾರಪ್ಪ ಕೆರೆ) ತುಂಬುವ ಯೋಜನೆಯೂ ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 211 ಕೋಟಿ ರೂಪಾಯಿ ಮೊತ್ತದ ಕಾಮಗಾರಿ ಟೆಂಡರ್ ಆಗಿತ್ತು, ಈಗ ಕೆಲಸ ಸಂಪೂರ್ಣವಾಗಿ ಮುಗಿಯುವ ಹಂತದಲ್ಲಿದೆ ಶೀಘ್ರದಲ್ಲೇ ಉದ್ಘಾಟನೆ ಗೊಳ್ಳಲಿದೆ ಎಂದರು. ನನ್ನ ರೈತರು ಮುಖಂಡರುಗಳು ಜನಪ್ರತಿನಿಧಿಗಳು ಪಕ್ಷದ ಮುಖಂಡರುಗಳು ಅಧಿಕಾರಿಗಳು ಬಂಗಾರಪ್ಪ ಕೆರೆಯನ್ನು ಕೃಷ್ಣಾ ನದಿಯವರೆಗೆ ಸಂಪೂರ್ಣವಾಗಿ ವೀಕ್ಷಣೆ ಮಾಡಿಕೊಂಡು ಬರಲಾಗಿದೆ ಇನ್ನು ಸಣ್ಣ ಪುಟ್ಟ ಕೆಲಸಗಳು ಬಾಕಿವೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಮೂಲಕ ಇದನ್ನು ಶೀಘ್ರದಲ್ಲೇ ಉದ್ಘಾಟನೆ ಮಾಡಲಾಗುತ್ತದೆ ಎಂದರು. ರಾಯಚೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಮತ್ತು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ  ಈ ಯೋಜನೆಯನ್ನು ಬಳಸಿಕೊಳ್ಳಲಾಗುತ್ತದೆ ಎಂದರು. ಈ ಹಿಂದೆ ಶಾಸಕರಾ

ಕಲ್ಯಾಣ- ಕರ್ನಾಟಕದಲ್ಲಿ ಕೌಶಲ್ಯ ಹೊಂದಿದ ಪ್ಯಾರಾಮೆಡಿಕಲ್ ವೃತ್ತಿಪರ ಸೇವೆ ಶ್ಲಾಘನೀಯ – ಜಿ.ಕುಮಾರ ನಾಯಕ

Image
  ಕಲ್ಯಾಣ- ಕರ್ನಾಟಕದಲ್ಲಿ ಕೌಶಲ್ಯ ಹೊಂದಿದ ಪ್ಯಾರಾಮೆಡಿಕಲ್ ವೃತ್ತಿಪರ ಸೇವೆ ಶ್ಲಾಘನೀಯ – ಜಿ.ಕುಮಾರ ನಾಯಕ ರಾಯಚೂರು,ಜ .28- ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯ ಯುವಕ-ಯುವತಿಯರಿಗೆ ಪ್ಯಾರಾಮೆಡಿಕಲ್ ಶಿಕ್ಷಣವನ್ನು ಕೌಶಲ್ಯದೊಂದಿಗೆ ನೀಡಿ ಅವರಿಗೆ ಸ್ವಾವಲಂಬಿ ಬದುಕು ನೀಡುತ್ತಿರುವ ಎಸ್.ಕೆ.ಇ.ಎಸ್. ಪ್ಯಾರಾಮೆಡಿಕಲ್ ಕಾಲೇಜಿನ ಕಾರ್ಯ ಅತ್ಯಂತ ಶ್ಲಾಘನೀಯ ಹಾಗೂ ತೃಪ್ತಿ ತಂದಿದೆ ಎಂದು ಹಿರಿಯ ಐಎಎಸ್ ಅಧಿಕಾರಿ ಹಾಗೂ ನಿವೃತ್ತ ಅಪರ ಪ್ರದಾನ ಕಾರ್ಯದರ್ಶಿ ಕರ್ನಾಟಕ ಸರಕಾರದ ಜಿ.ಕುಮಾರ ನಾಯಕ ಹೇಳಿದರು. ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಎಸ್‌ಕೆ ಇ ಪ್ಯಾರಾಮೆಡಿಕಲ್ ಕಾಲೇಜಿನ ೧೭ನೇ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ರಾಯಚೂರು ಭೌತಿಕ ಬದಲಾಗಿದೆ ಆದರೆ, ಶಿಕ್ಷಣ, ಆರೋಗ್ಯ, ಬಡ-ಜನರ, ರೈತರ, ಕೂಲಿ ಕಾರ್ಮಿಕರ ಯುವಕರಿಗೆ ಹೊಸ-ಹೊಸ ಯೋಜನೆ ಪ್ರಯತ್ನದ ಮುಖಂತರ ನಾವು ಮುಂದೆ ಬರಬೇಕಾಗಿದೆ, ಕೇರಳ ಹೇಗೆ ನರ್ಸಿಂಗ್ ಕ್ಷೇತ್ರದಲ್ಲಿ ಶ್ರೇಷ್ಠವಾಗಿದೆಯೋ ಹಾಗೆ ರಾಯಚೂರು ಜಿಲ್ಲೆ ಕರ್ನಾಟಕದಲ್ಲಿ ಪ್ಯಾರಾಮೆಡಿಕಲ್ ಹೆಸರು ಮಾಡಲಿ ಎಂದು ಶುಭ ಹಾರೈಸಿದರು. ತಾವು ೨೫ ವರ್ಷ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸದಾಗಿನಿಂದ ಸತತ ಪ್ರಯತ್ನದಿಂದ ರಾಯಚೂರು ಜಿಲ್ಲೆಗೆ ಅಭಿವೃದ್ಧಿಗೆ ಶ್ರಮಿಸಿದ್ದೇನೆ, ಸದ್ಯ ನಿವೃತ್ತಿಯಾದರೂ ಕೂಡ ಜಿಲ್ಲೆಯ ಜನರ ಪ್ರೀತಿ, ಅಭಿಮಾನ ಹಾಗೂ ಪ್ರೋತ್ಸಾಹಕ್ಕೆ ಚಿರಋಣಿಯಾಗಿ, ಮುಂದಿನ ದಿನಗಳ ರಾ

ಜೆಡಿಎಸ್ ಗ್ರಾಮೀಣ ವತಿಯಿಂದ ಬಿ.ವೈ.ವಿಜಯೇಂದ್ರರವರಿಗೆ ಸನ್ಮಾನ.

Image
  ಜೆಡಿಎಸ್ ಗ್ರಾಮೀಣ ವತಿಯಿಂದ ಬಿ.ವೈ.ವಿಜಯೇಂದ್ರರವರಿಗೆ ಸನ್ಮಾನ.                                  ರಾಯಚೂರು,ಜ.28-ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರವರಿಗೆ ಜೆಡಿಎಸ್ ಗ್ರಾಮೀಣದಿಂದ ಸನ್ಮಾನಿಸಲಾಯಿತು. ಮಂತ್ರಾಲಯದಿಂದ ರಾಯಚೂರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಅವರಿಗೆ ಸನ್ಮಾನಿಸಿ ಜೆಡಿಎಸ್ ಪಕ್ಷದಿಂದ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಲಾಯಿತು.                                              ಈ ಸಂದರ್ಭದಲ್ಲಿ ಜೆಡಿಎಸ್ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮೊಹಮ್ಮದ್ ನಿಜಾಮುದ್ದೀನ್,ಬಿಜೆಪಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಮೆಹಬೂಬ್ ಪಟೇಲ್, ಮುಖಂಡರಾದ ಬಸವರಾಜ ಹೂಗಾರ್, ಬಿಜೆಪಿ ಯುವ ಮುಖಂಡ ಜಿ.ವಿದ್ಯಾನಂದರೆಡ್ಡಿ,ರವಿತಾತಾ, ಶರಣ ಬಸವರಾಜ ಗೌಡ,ಜಗದೀಶ್ ರೆಡ್ಡಿ, ಶ್ರೀ ನಿವಾಸ ರೆಡ್ಡಿ,ಗುಜ್ಜರ್ ತಾಯಪ್ಪ,ಮೊಹಮ್ಮದ್ ರಫಿ, ದಳಪತಿ ವೆಂಕಟೇಶ ಇನ್ನಿತರರು ಇದ್ದರು.

ಕಲೆ ದೈವ ದತ್ತವಾದದ್ದು- ಡಾ. ಧರಣೀ ದೇವಿ ಮಾಲಗತ್ತಿ

Image
ಕಲೆ ದೈವ ದತ್ತವಾದದ್ದು- ಡಾ. ಧರಣೀ ದೇವಿ ಮಾಲಗತ್ತಿ ರಾಯಚೂರು,ಜ.28-ಕಲೆಯ ಎಲ್ಲಾ ಪ್ರಕಾರಗಳು ದೈವಿಕವಾದದ್ದು ಪ್ರತಿಭೆ ಮತ್ತು ಪರಿಶ್ರಮ ಎರಡೂ ಇದ್ದಾಗ ಮಾತ್ರ ಆ ಕಲೆ ಒಲಿಯುವುದು  ಪ್ರಯತ್ನ ಪಟ್ಟರೂ ಪ್ರತಿಭೆಯ ಮೂಲ ವ್ಯಕ್ತಿಯಲ್ಲಿಲ್ಲದಿದ್ದರೆ, ಸಾಧ್ಯವಾಗದೇ ಹೋಗಬಹುದು. ಆದರೆ ಪರಿಶ್ರಮದಿಂದ ವಿದ್ಯೆಯನ್ನು ಒಲಿಸಿಕೊಂಡವರು ತುಂಬಾ ಜನರಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಧರಣೀ ದೇವಿ ಮಾಲಗತ್ತಿಯವರು ಹೇಳಿದರು.                      ಭಾರತ ಸಾಂಸ್ಕೃತಿಕ ಕಲಾ ಕೇಂದ್ರವು ತನ್ನ ಆವರಣದಲ್ಲಿ ಡಾ. ಪಂಡಿತ್ ನರಸಿಂಹಲು ವಡವಾಟಿಯವರ ಜನುಮ ದಿನದ ಅಂಗವಾಗಿ ಏರ್ಪಡಿಸಿದ್ದ ಕಲಾವಿದರ ದಿನ ಹಾಗೂ ಸುಗ್ಗಿಯ ಸೊಬಗಲ್ಲಿ ಸಂಗೀತ ಸಂಜೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು. ಕಲೆ ನಮ್ಮನ್ನು ಸಂಸ್ಕರಿಸುತ್ತದೆ. ಹಾಗೆಯೇ ವ್ಯಕ್ತಿತ್ವವನ್ನು ಮೇಲಕ್ಕೇರಿಸಬೇಕು. ಆ ಕೆಲಸವನ್ನ ಸದಭಿರುಚಿಯ ಸಂಗೀತ, ಸಾಹಿತ್ಯ ಹಾಗೂ ಎಲ್ಲಾ ಪ್ರಕಾರದ ಕಲೆಗಳು ನಮ್ಮ ವ್ಯಕ್ತಿತ್ವವನ್ನು ಎತ್ತರಿಸುತ್ತವೆ. ಈ ಕಲೆಗಳು ಕೇವಲ ತಮ್ಮ ಆತ್ಮಾನಂದಕ್ಕಾಗಿ ಅಲ್ಲ, ಅದರಿಂದ ಇತರರು ಆನಂದವನ್ನು ಪಡೆಯುತ್ತಾರೆ. ಹಾಗೆಯೇ ಅವರನ್ನು ತಲೆ ಮೇಲಕೆತ್ತರಿಸುತ್ತದೆ. ಕಾರಯತ್ರಿ ಪ್ರತಿಭೆ, ಭಾವಯತ್ರೀ ಪ್ರತಿಭೆ ಎಂಬ ಎರಡು ಪ್ರತಿಭೆಗಳಿವೆ. ಕಾರಯತ್ರಿ ಪ್ರತಿಭೆ ಪ್ರದರ್ಶನ ನೀಡುವವರದಾದರೆ, ಭಾವಯತ್ರಿ ಪ್ರತಿಭೆ ನೋಡುಗರು ಹಾಗೂ ಕ

ನಗರಸಭೆಯಿಂದ ವಾರಕ್ಕೊಂದು ವಾರ್ಡ್ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ: ವಾರ್ಡ್ ನಂ 17ರಲ್ಲಿ ರವಿ ಬೋಸರಾಜುರಿಂದ ಸ್ವಚ್ಚತೆ ಬಗ್ಗೆ ಜಾಗೃತಿ .

Image
  ನಗರಸಭೆಯಿಂದ ವಾರಕ್ಕೊಂದು ವಾರ್ಡ್ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ:                                    ವಾರ್ಡ್ ನಂ 17ರಲ್ಲಿ  ರವಿ ಬೋಸರಾಜುರಿಂದ ಸ್ವಚ್ಚತೆ ಬಗ್ಗೆ ಜಾಗೃತಿ . ರಾಯಚೂರು,ಜ.28-ರಾಯಚೂರಿನ ಸ್ವಚ್ಚತೆ ಮತ್ತು ಸುಂದರಕ್ಕಾಗಿ ನಗರಸಭೆ ವಿಶೇಷ ಪ್ರಯತ್ನವಾದ ವಾರಕ್ಕೆ ಒಂದರಂತೆ ವಾರ್ಡ್ ಸ್ವಚ್ಚತೆಯಲ್ಲಿ ನಾವೆಲ್ಲರು ಸಹಕರಿಸಿ ನಗರಸಭೆಯೊಂದಿಗೆ  ಕೈಜೋಡಿಸಬೇಕೆಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಿದರು ಮಾತನಾಡಿ ದರು.  ಅವರಿಂದು ನಗರಸಭೆಯಿಂದ ವಾರಕ್ಕೆ ಒಂದು ವಾರ್ಡನಂತೆ ವಾರ್ಡ್ ನಂ 17 ರಲ್ಲಿ ನಡೆದ ಸ್ವಚ್ಚತಾ ಕಾರ್ಯವನ್ನು ಪರಿಶೀಲಿಸಿದರು. ಸ್ವಚ್ಚ ಮತ್ತು ಸುಂದರ ನಗರವನ್ನಾಗಿ ಮಾಡುವ ಜವಾಬ್ದಾರಿ‌ ನಮ್ಮ ಮೇಲಿದೆ ಅದಕ್ಕಾಗಿ ಎಲ್ಲಂದರಲ್ಲಿ ಕಸವನ್ನು ಬಿಸಾಕಬಾರದು ನಗರಸಭೆಯಿಂದ ಬರುವ ಕಸ ವಿಲೇವಾರಿ ವಾಹನಗಳಿಗೆ ಮನೆಯಲ್ಲಿ ಶೇಖರಿಸಿದ ಹಸಿ-ಒಣ ಕಸಗಳನ್ನು ನೀಡಬೇಕೆಂದು  ಸಾರ್ವಜನಿಕರಿಗೆ ಮನವಿ ಮಾಡಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮೊಹ್ಮದ್ ಶಾಲಂ, ನಗರಸಭೆ ಸದಸ್ಯರಾದ ಜಿಂದಪ್ಪ, ತಿಮ್ಮಾರಡ್ಡಿ, ನರಸಿಂಹಲು ಮಾಡಗಿರಿ, , ಪ್ರತಾಪ ರಡ್ಡಿ, ಅಬ್ದುಲ್ ವಾಹಿದ್, ಅರುಣ ದೋತರಬಂಡಿ, ವಸಂತ ಅರೋಲಿ, ವಿನೋದ್ ಕುಮಾರ್, ಮೊಹ್ಮದ್ ಶೈಭಾಜ್, ಚೇತನ್ ಕಡಗೋಲ್, ಗೋಪಾಲ್ ಸೇರಿದಂತೆ, ನಗರಸಭೆ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರ

ಶ್ರೀ ಗೋಪಾಲದಾಸರ ಮತ್ತು ಶ್ರೀ ಪುರಂದರ ದಾಸರ ಪುಣ್ಯತಿಥಿ ಹಾಗೂ ಶ್ರೀಮನ್‌ ಮಧ್ವನವರಾತ್ರಿ ಉತ್ಸವ ಜ್ಞಾನಸತ್ರ ಉದ್ಘಾಟನೆ : ಭವಬಂಧನವನ್ನು ಕಳೆದು ಮೋಕ್ಷವನ್ನೀಯುವುದೇ ಭಾಗವತ- ರಾಮವಿಠ್ಠಲಾಚಾರ್ಯ

Image
  ಶ್ರೀ ಗೋಪಾಲದಾಸರ ಮತ್ತು ಶ್ರೀ  ಪುರಂದರ ದಾಸರ ಪುಣ್ಯತಿಥಿ ಹಾಗೂ ಶ್ರೀಮನ್‌ ಮಧ್ವನವರಾತ್ರಿ ಉತ್ಸವ ಜ್ಞಾನಸತ್ರ  ಉದ್ಘಾಟನೆ :                      ಭವಬಂಧನವನ್ನು ಕಳೆದು  ಮೋಕ್ಷವನ್ನೀಯುವುದೇ ಭಾಗವತ- ರಾಮವಿಠ್ಠಲಾಚಾರ್ಯ ರಾಯಚೂರು,ಜ.28- ನಗರದ ಕೋಟೆ ಬಡಾವಣೆಯ ಶ್ರೀ ಮುಂಗ್ಲಿ ಮುಖ್ಯಪ್ರಾಣ ಸೇವಾ ಸಮಿತಿ ಹಾಗೂ ಸಮಸ್ತ ಯುವಕ ಮಂಡಳಿ ಕೋಟೆ ಇವರ ಸಂಯುಕ್ತಾಶ್ರಯದಲ್ಲಿ ರಾಯಚೂರಿನ ಶ್ರೀ ಮುಂಗಲಿ ಮುಖ್ಯಪ್ರಾಣದೇವರ ದೇವಸ್ಥಾನದಲ್ಲಿ   ಜ.27 ರಿಂದ ಫೆ. 25 ರವರೆಗೆ ಮೂವತ್ತು ದಿನಗಳ ಕಾಲ ನಡೆಯುವ 56 ನೇ ವಷ೯ದ ಸುವಣ೯ಮಹೋತ್ಸವದ ಮಹಾನ್‌ ಜ್ಞಾನಸತ್ರ ಕಾಯ೯ಕ್ರಮವನ್ನು ಬೆಂಗಳೂರಿನ ಪೂಣ೯ಪ್ರಜ್ಞ ವಿದ್ಯಾಪೀಠದ ಹಿರಿಯ ಅಧ್ಯಾಪಕರಾದ ಪಂಡಿತ  ಶ್ರೀ ರಾಮವಿಠ್ಠಲಾಚಾಯ೯ರು ಶನಿವಾರ ಸಂಜೆ ಉದ್ಘಾಟಿಸಿದರು .                                                ನಂತರ ಶ್ರೀಮದ್‌ ಭಾಗವತ ವಿಷಯದ ಪ್ರಥಮ ಸ್ಕಂದದ ಕುರಿತು ಪ್ರವಚನ ನೀಡಿದ ಅವರು”ಪಿಭತಂ ಭಾಗವತಂ ರಸಮಾಲಯಂ” ಎನ್ನುವಂತೆ ಭಗವಂತನ ಮಹಿಮೆ ತಿಳಿಸುವುದೇ ಭಾಗವತ. ಬ್ರಹ್ಮದೇವರಿಂದ ನಾರದರಿಗೆ ಉಪದೇಶವಾದ,ಬದರಿಯ ಅಲಕನಂದಾ ತೀರದ ಶಮ್ಯಾಪ್ರಾಸ ಎಂಬ ಆಶ್ರಮದಲ್ಲಿ ನಾರದರು ತಮ್ಮ ತಂದೆಯಾದ  ಬ್ರಹ್ಮದೇವರಿಂದ ಪಡೆದ ಸಂಕ್ಷಿಪ್ತ ನಾಲ್ಕು ಶ್ಲೋಕಗಳನ್ನು ವೇದವ್ಯಾಸರಿಗೆ ಒಪ್ಪಿಸಿ ಲೋಕದ ಎಲ್ಲಾ ಸಜ್ಜನರಿಗೆ ವಿಸ್ತಾರವಾಗಿ ತಿಳಿಸುವಂತೆ ಕೋರಿದಾಗ ಶ್ರೀ ವೇದವ್ಯಾಸರು ಮೂಲದಲ್ಲಿ ಸಂಕ್ಷಿಪ್ತವಾದ ನಾಲ್

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮದೆ ಗೆಲುವು: ಅಲ್ಪಸಂಖ್ಯಾತರ ಓಲೈಕೆಯಲ್ಲಿ ಕಾಂಗ್ರೆಸ್ ಸರ್ಕಾರ- ಬಿ.ವೈ.ವಿಜಯೇಂದ್ರ.

Image
  ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮದೆ ಗೆಲುವು:              ಅಲ್ಪಸಂಖ್ಯಾತರ ಓಲೈಕೆಯಲ್ಲಿ ಕಾಂಗ್ರೆಸ್ ಸರ್ಕಾರ- ಬಿ.ವೈ.ವಿಜಯೇಂದ್ರ.                            ರಾಯಚೂರು,ಜ.28- ಅಯೋಧ್ಯೆ  ರಾಮಮಂದಿರ ಬಿಜೆಪಿ ಕಾರ್ಯಕ್ರಮವೆಂದು ಬಿಂಬಿಸಿ  ಅದರಲ್ಲಿ ತಾವು ಭಾಗವಹಿಸಿದರೆ ಅಲ್ಪಸಂಖ್ಯಾತರು ಬೇಸರ ವ್ಯಕ್ತಪಡಿಸಬಹುದೆಂಬ  ಕ್ಷುಲ್ಲಕ ಓಲೈಕೆ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.            ಅವರಿಂದು ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ  ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ ಕಾಂಗ್ರೆಸಿಗರು ಅದನ್ನು ಬಿಜೆಪಿ ಕಾರ್ಯಕ್ರಮವೆಂದು ಬಿಂಬಿಸಿ ತಾವು ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಹೋದರೆ ಅಲ್ಪ ಸಂಖ್ಯಾತರು ಬೇಸರ ಮಾಡಿಕೊಳ್ಳಬಹುದು ಎಂಬ ಕ್ಷುಲ್ಲಕ  ಓಲೈಕೆ  ರಾಜಕಾರಣ  ಮಾಡುತ್ತಿದ್ದಾರೆ ಎಂದರು.                             ಹಿಂದು ವಿರೋಧಿ ನೀತಿ ಅನುಸರಿಸುತ್ತ ಕಾಂಗ್ರೆಸ್ ನಾಯಕರು ಕಾನೂನು ಸುವ್ಯವಸ್ಥೆ  ಹದಗೆಡಿಸುತ್ತಿದ್ದಾರೆ ಎಂದರು.  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.               ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಶಕ್ತಿ ನಿಮ್ಮಲ್ಲಿದೆ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸುವ ಪಣ ಕಾರ್ಯಕರ್ತರು ತೊಡಬೇಕ

ರಾಜ್ಯ ಸರ್ಕಾರ ಗ್ಯಾರಂಟಿಗಳ ಈಡೇರಿಕೆಯಲ್ಲಿ ವಿಫಲ: ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಜಗದೀಶ್ ಶೆಟ್ಟರ್ ಮರಳಿ ಬಂದಿದ್ದಾರೆ -ಬಿ.ವೈ. ವಿಜಯೇಂದ್ರ

Image
  ರಾಜ್ಯ  ಸರ್ಕಾರ ಗ್ಯಾರಂಟಿಗಳ ಈಡೇರಿಕೆಯಲ್ಲಿ ವಿಫಲ:  ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಜಗದೀಶ್ ಶೆಟ್ಟರ್ ಮರಳಿ ಬಂದಿದ್ದಾರೆ -ಬಿ.ವೈ. ವಿಜಯೇಂದ್ರ                           ರಾಯಚೂರು,ಜ.28-ರಾಜ್ಯ ಸರ್ಕಾರದಿಂದ 5 ಗ್ಯಾರಂಟಿಗಳು ಸಮರ್ಪಕ ಜಾರಿಯಾಗಿಲ್ಲ ರಾಜ್ಯ  ಸರ್ಕಾರ ಗ್ಯಾರಂಟಿಗಳ ಈಡೇರಿಕೆಯಲ್ಲಿ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.                           ಅವರಿಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ  ಮಾತನಾಡಿ ಕೇಂದ್ರ ಸರ್ಕಾರ ಅನೇಕ ರಾಜ್ಯ ಸರ್ಕಾರಗಳಿಗೆ ನೈಸರ್ಗಿಕ ವಿಕೋಪ ಬೆಳೆ ನಷ್ಟದ  ಪರಿಹಾರ ನೀಡಬೇಕಿದೆ ಸ್ವಲ್ಪ  ವಿಳಂಬ ಮಾಡಬಹುದು ಆದರೂ ಪರಿಹಾರ ನೀಡುತ್ತದೆ ಎಂದು ಅವರು ರಾಜ್ಯ ಸರ್ಕಾರ ಎಲ್ಲದಕ್ಕೂ ಕೇಂದ್ರದ ಮೇಲೆ ಗೊಬೆ ಕೂರಿಸುತ್ತ ಕಾಲಹರಣ ಮಾಡುತ್ತಿದೆ ಸರ್ಕಾರದಲ್ಲಿರುವ ಕಂದಾಯ ಸಚಿವರು ಎಸಿ ರೂಂ ನಲ್ಲಿ ಕುಳಿತು ಕೇವಲ ಸಭೆ ಮಾಡುತ್ತಾರೆ ಎಂದು ಆರೋಪಿಸಿದ ಅವರು ಅನೇಕ ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗೆ ಹೋಗದೆ ನಿಷ್ಕ್ರಿಯರಾಗಿದ್ದಾರೆಂದರು. ಸರ್ಕಾರ  7 ತಾಸು ವಿದ್ಯುತ್ ನೀಡದೆ  ಬರೆ ಎಳೆದಿದ್ದು ರೈತರು ಕಂಗಾಲಾಗಿದ್ದಾರೆ ಎಂದರು. ಎಸ್ ಸಿಪಿಟಿಎಸ್ಪಿ ಹಣವನ್ನು ಸರ್ಕಾರ ಬೇರೆಡೆ ವಿನಿಯೋಗ ಮಾಡಿದೆ ಯುವನಿಧಿ ನೋಂದಣಿ ಕೇವಲ 60 ಸಾವಿರ ನೋಂದಣೆಯಾಗಿದೆ ಲಕ್ಷಾಂತರ ನಿರುದ್ಯೋಗಿಗಳಿದ್ದಾರೆ ಪ್ರತಿಯೊಂದು ಗ್ಯಾರಂಟಿ ಯಲ್ಲಿ ಕಾಂಗ್ರೆಸ್

ಮಂತ್ರಾಲಯಕ್ಕೆ ಬಿ.ವೈ.ವಿಜಯೇಂದ್ರ ಭೇಟಿ.

Image
ಮಂತ್ರಾಲಯಕ್ಕೆ ಬಿ.ವೈ.ವಿಜಯೇಂದ್ರ ಭೇಟಿ.                                      ರಾಯಚೂರು,ಜ.28- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗಮಿಸಿ ರಾಘವೇಂದ್ರ ಸ್ವಾಮಿಗಳ ಬೃಂದಾವನ ದರ್ಶನ ಪಡೆದು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರಿಂದ ಆಶೀರ್ವಾದ ಪಡೆದರು.                    ಪ್ರಾರಂಭದಲ್ಲಿ ಶ್ರೀಮಠದಿಂದ ಸ್ವಾಗತಿಸಲಾಯಿತು.  ಮಂಚಾಲಮ್ಮ ದೇವಿಯ ದರ್ಶನ ಪಡೆದ ಅವರು ಮಠದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕಿ ರಾಯರ ಬೃಂದಾವನ ದರ್ಶನ ಪಡೆದರು.                        ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರಿದ್ದರು .

ಕೇಂದ್ರ ಬಜೆಟ್ ನಲ್ಲಿ ಏಮ್ಸ್ ಮಂಜೂರುಗಾಗಿ ಹಣಕಾಸು ಸಚಿವೆ ಸಿರ್ಮಲಾ ಸೀತಾರಾಮನ್ ಗೆ ಒತ್ತಡ ಮಾಡಲು ಸಿಎಂರಿಗೆ ರವಿ ಬೋಸರಾಜು ಮನವಿ.

Image
  ಕೇಂದ್ರ ಬಜೆಟ್ ನಲ್ಲಿ ಏಮ್ಸ್ ಮಂಜೂರುಗಾಗಿ - ಹಣಕಾಸು ಸಚಿವೆ ಸಿರ್ಮಲಾ ಸೀತಾರಾಮನ್ ಗೆ ಒತ್ತಡ ಮಾಡಲು ಸಿಎಂರಿಗೆ  ರವಿ ಬೋಸರಾಜು ಮನವಿ. ರಾಯಚೂರು,ಜ.27-ಮುಂಬರುವ ಕೇಂದ್ರ  ಬಜೆಟ್ ನಲ್ಲಿ ರಾಯಚೂರಿಗೆ ಏಮ್ಸ್   ಘೋಷಿಸಲು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತರಾಮನ್ ಅವರಿಗೆ ಒತ್ತಡ ಮಾಡುವಂತೆ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು. ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತನಾಡಿ, ಜಿಲ್ಲೆಯಲ್ಲಿ ಏಮ್ಸ್ ಹೋರಾಟ ಸಮಿತಿ ಸುಮಾರು 625 ದಿನಗಳಿಂದ  ಅಮರಣಾಂತರ ಸತ್ಯಾಗ್ರಹವನ್ನು ನಡೆಸುತ್ತಿದೆ. ಅಲ್ಲದೆ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವಂತೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಮನಸುಖ್ ಎಲ್ ಮಂಡವೀಯ ಅವರನ್ನು ಭೇಟಿ ಮಾಡಿ ಮಾತನಾಡಲಾಗಿತ್ತು. ಈ ಕುರಿತು ಹಣದ ಕೊರತೆಯಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಬಾರಿಯ ಬಜೆಟ್ ನಲ್ಲಿ ಜಿಲ್ಲೆಗೆ ಏಮ್ಸ್ ಘೋಷಿಸಬೇಕೆಂದು ಒತ್ತಡ ಹೇರುವಂತೆ ಆಗ್ರಹಿಸಿದ್ದಾರೆ. ರಾಯಚೂರು ಜಿಲ್ಲೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಜಿಲ್ಲೆಯಾಗಿದೆ ಅಲ್ಲದೆ ಭಾರತೀಯ ಸಂವಿಧಾನದ 371 (ಜೆ) ವಿಶೇಷ ನಿಬಂಧನೆಯ ಅಡಿಯಲ್ಲಿಯೂ ಸಹ ಒಳಗೊಂಡಿದೆ. ಹಿಂದುಳಿದ ಜಿಲ್ಲೆಯಾಗಿರುವ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ಮೂಲಕ ಆರೋಗ್ಯ, ಉದ್ಯೋಗ, ವೈದ್ಯಕೀಯ ಶಿಕ್ಷಣದ ಬಲವರ್ಧನೆಗಾಗಿ

ಮಂತ್ರಾಲಯ: ಸಿರುಗುಪ್ಪ ಆರ್ಯವೈಶ್ಯ ಪಾದಯಾತ್ರೆ ಮಂಡಳಿಯಿಂದ ಅದ್ದೂರಿ ಗುರುವಂದನಾ ಕಾರ್ಯಕ್ರಮ.

Image
  ಮಂತ್ರಾಲಯ:   ಸಿರುಗುಪ್ಪ ಆರ್ಯವೈಶ್ಯ ಪಾದಯಾತ್ರೆ ಮಂಡಳಿಯಿಂದ ಅದ್ದೂರಿ ಗುರುವಂದನಾ ಕಾರ್ಯಕ್ರಮ.                                                             ರಾಯಚೂರು,ಜ.27- ಆರ್ಯವೈಶ್ಯ ಪಾದಯಾತ್ರೆ ಮಂಡಳಿ‌ ಸಿರುಗುಪ್ಪ ವತಿಯಿಂದ ಮಂತ್ರಾಲಯದಲ್ಲಿ ಅದ್ದೂರಿ  ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಭವ್ಯ ಶೋಭಾಯಾತ್ರೆ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀಪಾದಂಗಳವರಿಗೆ ತುಲಾಭಾರ ಹಾಗೂ ಪುಷ್ಪ ವೃಷ್ಟಿ  ನೆರವೇರಿತು. ಇದೆ ಸಂದರ್ಭದಲ್ಲಿ ಪಂಡಿತ ಕೇಸರಿ ಮಹಾಮಹೋಪಾಧ್ಯಾಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶ್ರೀ ರಾಜಾ ಎಸ್.ಗಿರಿಯಾಚಾರ್ಯರಿಗೆ ಸನ್ಮಾನಿಸಲಾಯಿತು.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಬಿಜೆಪಿ ಜಿಲ್ಲಾ ಉಸ್ತುವಾರಿಯಾಗಿ ದೊಡ್ಡನಗೌಡ ಹೆಚ್ ಪಾಟೀಲ್ ನೇಮಕ

Image
  ಬಿಜೆಪಿ ಜಿಲ್ಲಾ ಉಸ್ತುವಾರಿಯಾಗಿ ದೊಡ್ಡನಗೌಡ ಹೆಚ್ ಪಾಟೀಲ್ ನೇಮಕ   ರಾಯಚೂರು,ಜ.27- ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಪಕ್ಷ ಭರ್ಜರಿ ಸಿದ್ಧತೆ ಕೈಗೊಂಡಿದೆ, ಮೊದಲ ಹಂತದ ಸಿದ್ಧತೆಯ ಭಾಗವಾಗಿ 28 ಕ್ಷೇತ್ರಗಳಿಗೆ ಉಸ್ತುವಾರಿ ಹಾಗೂ ಸಂಚಾಲಕರನ್ನು ನೇಮಕ ಮಾಡಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಈ ಬಾರಿ ಲೋಕಸಭಾ ಚುನಾವಣೆ ಕುತೂಹಲ ಕೆರಳಿಸಿದೆ ಬಿಜೆಪಿ ಪಕ್ಷದಿಂದ ಹಾಲಿ ಸಂಸದರಾದ ರಾಜ ಅಮರೇಶ್ ನಾಯಕ್ ಮಾಜಿ ಸಂಸದ ಬಿ ವಿ ನಾಯಕ್,  ಹಾಗೂ ಮಾಜಿ ಶಾಸಕರಾದ ತಿಪ್ಪರಾಜ್ ಹವಾಲ್ದಾರ್ ಪೈಪೋಟಿಯಲ್ಲಿದ್ದಾರೆ, ಕಾಂಗ್ರೆಸ್ ಪಕ್ಷದಿಂದ ಕುಮಾರ್ ನಾಯಕ್, ರವಿ ಪಾಟೀಲ್ ಹಾಗೂ ದೇವಣ್ಣ ನಾಯಕ್ ಹೆಸರು ಕೇಳಿಬರುತ್ತಿದೆ, ಈ ಹಿನ್ನಲೆಯಲ್ಲಿ  ಕಾಂಗ್ರೆಸ್ ಪಕ್ಷದಿಂದ ಈಗಾಗಲೇ ಜಿಲ್ಲೆಯ ಉಸ್ತುವಾರಿಯನ್ನು ನೇಮಕ ಮಾಡಿದ್ದಾರೆ, ಈಗ ಭಾರತೀಯ ಜನತಾ ಪಾರ್ಟಿ ತಮ್ಮ ಪಕ್ಷದ ಹಿರಿಯ ಮುಖಂಡರಾದ ದೊಡ್ಡನಗೌಡ ಪಾಟೀಲ್ ಅವರನ್ನು ರಾಯಚೂರು ಲೋಕಸಭಾ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ದೊಡ್ಡನಗೌಡ ಪಾಟೀಲ್ ಅವರು ಪಕ್ಕದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಾಲಿ ಶಾಸಕರು ಹಾಗೂ ಕೊಪ್ಪಳ ಜಿಲ್ಲೆಯ ಬಿಜೆಪಿ  ಮಾಜಿ    ಜಿಲ್ಲಾಧ್ಯಕ್ಷರು ಹಾಗೂ ಹಾಲಿ ವಿರೋಧ ಪಕ್ಷದ ಮುಖ್ಯ ಸಚೇತಕರು ವಿಧಾನಸಭೆಯಾಗಿದ್ದಾರೆ, ಮೂರನೇ ಭಾರಿ ಶಾಸಕರಾಗಿ ಆಯ್ಕೆಯಾಗಿರುವ ಇವರು ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಇಪ್ಪತ್ತು ವರ್ಷಗಳಿಂದ ಬಿ