Posts

Showing posts from June, 2025
Image
  ಹಿರಿಯ ರಂಗಭೂಮಿ ಕಲಾವಿದೆ ಮಾಲತಿ ಸುಧೀರ್, ಖ್ಯಾತ ನಟಿ ಸೊನಾಲ್ ರನ್ನು ಭೇಟಿಯಾದ ಕರ್ನಾಟಕ ದಿನಪತ್ರಿಕೆಗಳ ಸಂಘದ ಪದಾಧಿಕಾರಿಗಳು  ಜಯ‌ ಧ್ವಜ ನ್ಯೂಸ್, ರಾಯಚೂರು,ಜೂ.29- ಕರ್ನಾಟಕ ದಿನಪತ್ರಿಕೆಗಳ ಸಂಘದ ರಾಜ್ಯ ಸಮಿತಿ ಪದಾಧಿಕಾರಿಗಳು ಇಂದು  ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರಾದ  ಮಾಲತಿ ಸುಧೀರ್ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ಸನ್ಮಾನಿಸಿ ಗೌರವಿಸಿದರು . ಕರ್ನಾಟಕ ದಿನಪತ್ರಿಕೆಗಳ ಸಂಘದ ರಾಜ್ಯಾಧ್ಯಕ್ಷರಾದ  ಜಿ.ವೈ.ಪದ್ಮ ನಾಗರಾಜ್, ಉಪಾಧ್ಯಕ್ಷರಾದ ಅನೂಪ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾದ ಚನ್ನಬಸವ, ಖಜಾಂಚಿ ಖಾನ್ ಸಾಬ್ ಮೋಮಿನ್ ಹಾಗೂ ಬೆಂಗಳೂರು ವಿವಿ ಪ್ರೊಫೆಸರ್ ಸಮತಾ ದೇಶ ಮಾನೆ ಅವರೊಂದಿಗೆ ಮಾಲತಿ ಸುಧೀರ್ ಅವರು ತಮ್ಮ ವೃತ್ತಿ ರಂಗಭೂಮಿ ಕುರಿತು ನೆನಪುಗಳನ್ನು ಹಂಚಿಕೊಂಡರು.   ನಾಟಕ ಕಂಪನಿ ಕಟ್ಟಿ ನಡೆಸಿಕೊಂಡು ಬಂದಿರುವ ಪರಿಯನ್ನು ಹಾಗೂ ಕಲಾವಿದರಾಗಿ ಎದುರಿಸಿರುವ ಅನುಭವಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ  ಮಾಲತಿ ಸುಧೀರ್,  ಖ್ಯಾತ ಚಲನಚಿತ್ರ ನಟಿ ಸೊನಾಲ್ ಅವರು ಕೂಡ ಕರ್ನಾಟಕ ದಿನಪತ್ರಿಕೆಗಳ ಸಂಘದ ಪದಾಧಿಕಾರಿಗಳೊಂದಿಗೆ ಮಾತನಾಡಿ ಮಾದೇವ ಚಲನಚಿತ್ರ ಯಶಸ್ವಿಯಾಗಿ ಪ್ರದರ್ಶನ ಗೊಳ್ಳುತ್ತಿರುವ ಕುರಿತು ಸಂತಸ ಹಂಚಿಕೊಂಡರು.
Image
  ಒತ್ತಡ ಜೀವನಕ್ಕೆ ಧ್ಯಾನವೇ ಪರಿಹಾರ-  ರಾಜ ಯೋಗಿನಿ ಶಿವರಶ್ಮಿ ಅಕ್ಕ ಜಯ ಧ್ವಜ ನ್ಯೂಸ್, ರಾಯಚೂರು, ಜೂ.29-   ಋಣಾತ್ಮಕ ಆಲೋಚನೆ ಮತ್ತು ಒತ್ತಡದ  ಜೀವನ ಅನಾರೋಗ್ಯಕ್ಕೆ ಕಾರಣ ಎನ್ನುವ ಎಚ್ಚರಿಕೆಯೊಂದಿಗೆ ಪ್ರತಿಯೊಬ್ಬರೂ ತಮ್ಮ ವೃತ್ತಿಯ ಒತ್ತಡ ನಿವಾರಣೆಗೆ ಧ್ಯಾನ ಮತ್ತು ಧನಾತ್ಮಕ ಅಂಶಗಳ ಆಲೋಚನೆಗೆ ಆದ್ಯತೆ ನೀಡಬೇಕೆಂದು ಚಿತ್ರದುರ್ಗದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ  ಮುಖ್ಯಸ್ಥರಾದ ರಾಜ ಯೋಗಿನಿ ಶಿವರಶ್ಮಿ ಅಕ್ಕ  ಹೇಳಿದರು. ಅವರಿಂದು ನಗರದ ಈಶ್ವರಿ ವಿಶ್ವವಿದ್ಯಾಲಯ ಆವರಣದಲ್ಲಿ ಪತ್ರಿಕ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ ಹಾಗೂ ವೈದ್ಯರಿಗೆ, ಇಂಜಿನಿಯರಗಳಿಗೆ, ಲೆಕ್ಕಪರಿಶೋಧಕರಿಗೆ ಹಮ್ಮಿಕೊಂಡ ಒತ್ತಡ ನಿವಾರಣಾ ಕಾರ್ಯಗಾರದಲ್ಲಿ ಮಾತನಾಡಿದರು. ಸಮಾಜದ ನಿತ್ಯ ಕೆಲಸ ಕಾರ್ಯಗಳು ಒತ್ತಡದಲ್ಲಿ ಆರೋಗ್ಯ ರಕ್ಷಣೆ ನಿರ್ಲಕ್ಷ್ಯ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುವದೊರೊಂದಿಗೆ ಆರೋಗ್ಯದತ್ತ ಹೆಚ್ಚಿನ ಗಮನ ನೀಡುವುದು ನಮ್ಮ ಆದ್ಯ ಕರ್ತವವಾಗಿದೆ ಕಚೇರಿಗೆ ತೆರಳುವ ಪೂರ್ವ ಮನೆಯಲ್ಲಿಯ ಒಂದು ನಿಮಿಷ ಧ್ಯಾನ  ಮಾಡಿ ಧನಾತ್ಮಕ ಆಲೋಚನೆ ಮೂಲಕ ಕಚೇರಿಗೆ ತೆರಳುವುದು ಹಾಗೂ ಕೆಲಸದ ಒತ್ತಡಕ್ಕೆ ಗುರಿ ಆಗದೆ ಅತ್ಯಂತ ಆಸಕ್ತಿಯಿಂದ ಮತ್ತು ಸರಳವಾಗಿ ಕೆಲಸ ನಿರ್ವಹಿಸುವತ್ತ ಗಮನ ಹರಿಸಬೇಕಾಗಿದೆ ಎಂದರು. ವೈದ್ಯರು, ಪತ್ರಕರ್ತರು, ಅಭಿ...
Image
  ಕಾಡ್ಲೂರು ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣ ದೇವರ ದೇವಸ್ಥಾನ ಜಲಾವೃತ.                                                ಜಯ ಧ್ವಜ ನ್ಯೂಸ್, ರಾಯಚೂರು, ಜೂ.29- ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಶ್ರೀ ಪ್ರಾಣದೇವರ ದೇವಸ್ಥಾನ ಜಲಾವೃತವಾಗಿದೆ.     ನಾರಾಯಣಪೂರು ಜಲಾಶಯದಿಂದ ಸುಮಾರು 1.10ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿ ಬಿಟ್ಟಿದ್ದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದ್ದು ನದಿ ದಡದಲ್ಲಿರುವ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಜಲಾಶಯದ ಒಳ ಹರಿವು ಹೆಚ್ಚಳವಾದಲ್ಲಿ ನದಿಗೆ ಅಧಿಕ  ನೀರು ಬಿಟ್ಟ ಸಂದರ್ಭದಲ್ಲಿ  ದೇವಸ್ಥಾನ  ಮುಳುಗುವ ಸಂಭವವಿದೆ.
Image
ರಾಯಚೂರು ರಿಪೋರ್ಟರ್ಸ್ ಗಿಲ್ಡ್  ಅಧ್ಯಕ್ಷರಾಗಿ ವಿಜಯ ಜಾಗಟಗಲ್, ಪ್ರಧಾನ ಕಾರ್ಯದರ್ಶಿಯಾಗಿ ವೆಂಕಟೇಶ ಹೂಗಾರ ಅವಿರೋಧ ಆಯ್ಕೆ ಜಯ ಧ್ವಜ ನ್ಯೂಸ್, ರಾಯಚೂರು,ಜೂ.29- ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಗೆ 2025-2027 ನೇ ಸಾಲಿನ  ಅಧ್ಯಕ್ಷರಾಗಿ ಪಬ್ಲಿಕ್ ಟಿವಿ ವರದಿಗಾರ ವಿಜಯ ಕುಮಾರ ಜಾಗಟಗಲ್ , ಪ್ರಧಾನ ಕಾರ್ಯದರ್ಶಿಯಾಗಿ ಸುದ್ದಿಮೂಲ ವರದಿಗಾರ ವೆಂಕಟೇಶ ಹೂಗಾರ ಅವಿರೋಧ ಆಯ್ಕೆಯಾಗಿದ್ದಾರೆ. ಇಂದು ನಾಮಪತ್ರಗಳ ಪರಿಶೀಲನೆ ಬಳಿಕ ಚುನಾವಣಾಧಿಕಾರಿ ಶ್ರೀನಿವಾಸ ವಕೀಲರು ಅವಿರೋಧ ಆಯ್ಕೆ ಪಟ್ಟಿ ಪ್ರಕಟಿಸಿದರು. ಉಪಾಧ್ಯಕ್ಷರಾಗಿ ರಾಯಚೂರು ವಾಣಿ ವರದಿಗಾರ ಎಂ.ಜಯರಾಮ್  ಮತ್ತು ಖಜಾಂಚಿಯಾಗಿ ಜನಬಲ ಟೈಮ್ಸ್ ವರದಿಗಾರ ಕೆ.ಸಣ್ಣ ಈರಣ್ಣ ಅವಿರೋಧ ಆಯ್ಕೆಯಾಗಿದ್ದಾರೆ. ಐವರು ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ ಸುದ್ದಿಮೂಲ ಪ್ರಧಾನ ವರದಿಗಾರ ಹಾಗೂ ಹಿರಿಯ ಪತ್ರಕರ್ತ  ಬಿ.ವೆಂಕಟಸಿಂಗ್, ಪ್ರಜಾವಾಣಿ  ಹಿರಿಯ ವರದಿಗಾರ ಚಂದ್ರಕಾಂತ ಮಸಾನೆ, ನ್ಯೂಸ್ ಫಸ್ಟ್ ವರದಿಗಾರ ಶ್ರೀಕಾಂತ ಸಾವೂರ್ ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನೂ ಎರಡು ಕಾರ್ಯಕಾರಿ ಸಮಿತಿ  ಸದಸ್ಯ ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಚುನಾವಣಾಧಿಕಾರಿ ಶ್ರೀನಿವಾಸ ವಕೀಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Image
  ನಗರದಲ್ಲಿ ವಿಜೃಂಭಣೆಯಿಂದ ಜರುಗಿದ ಜಗನ್ನಾಥ ರಥಯಾತ್ರೆ ಜಯ‌ ಧ್ವಜ ನ್ಯೂಸ್, ರಾಯಚೂರು, ಜೂ.28- ನಿನ್ನೆ ನಗರದಲ್ಲಿ ವಿಜೃಂಭಣೆಯಿಂದ ಜಗನ್ನಾಥ ರಥಯಾತ್ರೆ ನಡೆಯಿತು. ಟೀಮ್ ನ್ಯೂ ವೃಂದಾವನ್ ಲ್ಯಾಂಡ್ ಸಂಘಟನೆಯಿಂದ ಆಯೋಜನೆಯಾದ ಈ ಪವಿತ್ರ ರಥ ಯಾತ್ರೆ ಬಸವನ ಭಾವಿ ವೃತ್ತದಿಂದ ಪ್ರಾರಂಭವಾಗಿ ಪಟೇಲ್ ರಸ್ತೆ, ಸರಾಫ್  ಬಜಾರ್,  ಕ್ಲಾತ್ ಬಜಾರ್ ಮಾರ್ಗವಾಗಿ ಮಹಾಬಲೇಶ್ವರ ವೃತ್ತದವರೆಗೆ ಸಾಗಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ರಥ ಎಳೆದು ಪ್ರಸಾದ್ ಸ್ವೀಕರಿಸಿದರು. ಯಾತ್ರೆಯ ಸಮಯದಲ್ಲಿ ಭಕ್ತರು ಭಜನೆ ಹಾಡುತ್ತಾ, ನೃತ್ಯ ಮಾಡುತ್ತಾ, ಭಕ್ತಿ ಭಾವದಲ್ಲಿ ತಲ್ಲೀನರಾಗಿ ಹೆಜ್ಜೆ ಇಟ್ಟರು. ರಥದೊಂದಿಗೆ ಸಾಗಿದ ಭಕ್ತರ ಜತೆ ಜತೆ ಯಾತ್ರೆಯ ಶ್ರದ್ಧಾಭಕ್ತಿಯಿಂದ ಪೂರಿತ ವಾತಾವರಣವು ನಗರದ ಬೀದಿಗಳಲ್ಲಿ ವಿಶಿಷ್ಟ ಚೈತನ್ಯವನ್ನು ಮೂಡಿಸಿತು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಭಕ್ತಿಭಾವದಿಂದ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎ. ಪಾಪಾರೆಡ್ಡಿ,  ಯುವ ಮುಖಂಡರಾದ ರವಿ ಬೋಸರಾಜು, ಮಂಚಾಲ್ ರವಿ,, ಪಾಲಿಕೆ ಸದಸ್ಯ ಶ್ರೀನಿವಾಸ್ ರೆಡ್ಡಿ, ಮಲ್ಲಿಕಾರ್ಜುನ ಪಾಟೀಲ್, ವಿಜಯ್ ರಾಜ್ ಇನ್ನಿತರರು ಉಪಸ್ಥಿತರಿದ್ದರು. ಈ ಎಲ್ಲಾ ಕಾರ್ಯಕ್ರಮವನ್ನು ಟೀಮ್ ನ್ಯೂ ವೃಂದಾವನ್ ಲ್ಯಾಂಡ್‌ನ ಅಧ್ಯಕ್ಷರಾದ ಎಚ್.ಜಿ. ಜಯತೀರ್ಥ ದಾಸ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಶಿಸ್ತುಬದ್ಧ ಕಾರ್ಯಕ್ರಮ ...
Image
  ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಪಾಲನೆ ಮಾಡಲು ಬಿಇಓ ಈರಣ್ಣ ಸಲಹೆ ಜಯ ಧ್ವಜ ನ್ಯೂಸ್ ರಾಯಚೂರು ಜೂನ್ 27 - ಇಂದಿನ   ಪೀಳಿಗೆ ಯುವಕರು ನಾಡಪ್ರಭು ಕೆಂಪೇಗೌಡರು ಹಾಕಿಕೊಟ್ಟಿರುವ ಹಾದಿಯಲ್ಲೇ ನಡೆದು, ಅವರ ಆದರ್ಶಗಳನ್ನು ಪಾಲನೆ ಮಾಡಬೇಕೆಂದು ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿ ಈರಣ್ಣ ಕೋಸಗಿ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.  ಅವರಿಂದು ನಗರದ ಪಂಡಿತ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ  ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  ನಾಡಪ್ರಭು ಕೆಂಪೇಗೌಡರ ಜನ್ಮದಿನವು ಕನ್ನಡ ನಾಡಿನ ಪಾಲಿಗೆ ಒಂದು ಶುಭದಿನ. ಬೆಂಗಳೂರಿನಂಥ ಮಹಾ ನಗರಕ್ಕೆ ತಳಪಾಯ ಹಾಕಿದ ನಾಡಪ್ರಭುಗಳ ಜನ್ಮದಿನವಿದು. ಇದನ್ನು ಸರ್ಕಾರವು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಈ ಮೂಲಕ ಬೆಂಗಳೂರಿನ ಜನಕನ್ನು ಸ್ಮರಿಸುತ್ತಿದೆ. ಈ ಮೂಲಕ, ಕೆಂಪೇಗೌಡರ ವೈಭವದ ಪರಂಪರೆಯನ್ನು ಹೊಸ ತಲೆಮಾರುಗಳಿಗೆ ವರ್ಗಾಯಿಸುವ ಕೆಲಸವೂ ಆಗುತ್ತಿದೆ ಎಂದರು. ಈ ವೇಳೆ ಉಪನ್ಯಾಸಕರಾಗಿ ರಾಯಚೂರಿನ ಹಿರಿಯ ಸಾಹಿತಿ ವೀರಹನುಮಾನ್ ಅವರು ಮಾತನಾಡಿ, ಬೆಂಗಳೂರು ಇಂದು ಬಹುದೊಡ್ಡ ಶಿಕ್ಷಣ ತಾಣವಾಗಿದೆ. ಸಾವಿರಾರು ಜನರ ಪಾಲಿಗೆ ಸೂರಾಗಿದೆ. ವಿದೇಶೀಯರ ಪಾಲಿಗೆ ಅಚ್ಚುಮ...
Image
  ಏಮ್ಸ್ ಹೋರಾಟಗಾರರಿಗೆ  ಶಾಸಕ  ಡಾ. ಶಿವರಾಜ ಪಾಟೀಲ್ ಬೆದರಿಕೆ;  ಕಾನೂನು ಕ್ರಮ ಜರುಗಿಸುವಂತೆ ಕಳಸ ಮನವಿ ಜಯ ಧ್ವಜ ನ್ಯೂಸ್, ರಾಯಚೂರು,ಜೂ.27- ನಗರ ಶಾಸಕರಾದ ಡಾ. ಶಿವರಾಜ್ ಪಾಟೀಲ್ ರವರು ಜೂ.25 ರಂದು ತಮ್ಮ ಕಾರ್ಯಾಲಯದಲ್ಲಿ ತಮ್ಮ ಪಕ್ಷದ ಮುಖಂಡರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ "ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ ಕಳಸ ಮತ್ತು ಸಂಚಾಲಕ ಅಶೋಕ್ ಕುಮಾರ್ ಜೈನ್ ರವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ," ನೀವು ಕಾಂಗ್ರೆಸ್ ಪಕ್ಷದ ಏಜೆಂಟರು ನಿಮಗೆಲ್ಲಾ ಅಕೌಂಟಿಗೆ ದುಡ್ಡು ಬರುತ್ತದೆ ನಿಮ್ಮ ಯೋಗ್ಯತೆ ಏನು ಎಂದು ಗೊತ್ತಿದೆ ನನ್ನ ಬಗ್ಗೆ ಅವಹೇಳನ ಮಾಡಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಬಗ್ಗೆ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿರುವಿರಿ ನಾನು ಕೊಡುವ ಎಚ್ಚರಿಕೆಗೆ ಗಮನ ಹರಿಸದಿದ್ದಲ್ಲಿ ಕ್ಷಮೆ ಕೇಳದಿದ್ದಲ್ಲಿ ಮುಂದೆ ನಿಮಗೆ ಆ ದೇವರೇ ಗತಿ ನಾನು ಪೊಲೀಸರಿಗೆ ವಿನಂತಿ ಮಾಡುತ್ತೇನೆ ತಕ್ಷಣವೇ ಕಾರ್ಯ ಪ್ರವರ್ತರಾಗಿರಿ ಇಲ್ಲದಿದ್ದಲ್ಲಿ ಯಾವುದೇ ಅನಾಹುತ ಆದಲ್ಲಿ ನಾನು ಜವಾಬ್ದಾರನಲ್ಲ ನನ್ನನ್ನು ಬ್ಲೇಮ್ ಮಾಡಬೇಡಿರಿ ನನ್ನ ಕಾರ್ಯಕರ್ತರು ಏನು ಮಾಡುತ್ತಾರೋ ಗೊತ್ತಿಲ್ಲ" ಎನ್ನುವ ವಿಡಿಯೋ ಬಹಿರಂಗಗೊಂಡಿದೆ. ಏಮ್ಸ್ ಹೋರಾಟಗಾರರಿಗೆ ಬಹಿರಂಗವಾಗಿ ಜೀವ ಬೆದರಿಕೆ ಹಾಕಿದ ಇವರ ಬಗ್ಗೆ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಮತ್ತು ಏಮ್ಸ್ ಹೋರಾಟ ವೇದಿಕೆಗೆ ಭದ್ರತೆ ಮ...
Image
ಏಮ್ಸ್ ಹೋರಾಟಗಾರರ ಮೇಲೆ ಪ್ರಕರಣ ದಾಖಲು:    ಹಳಿ ತಪ್ಪಿತೆ ಏಮ್ಸ್ ಹೋರಾಟ?.                                     ಜಯ ಧ್ವಜ ನ್ಯೂಸ್, ರಾಯಚೂರು,ಜೂ.26-              ಸುಮಾರು ಮೂರು ವರ್ಷದಿಂದ ಶಾಂತಿಯುತವಾಗಿ ನಡೆದುಕೊಂಡು ಬಂದಿದ್ದ ಏಮ್ಸ್ ಹೋರಾಟ ಹಳಿ ತಪ್ಪಿತೆ? ಎಂಬ ಭಾವನೆ ಜನರಲ್ಲಿ ಮೂಡಿದೆ.                                 ಜಿಲ್ಲೆಗೆ ರಾಷ್ಟ್ರ ಮಟ್ಟದ ಸಂಸ್ಥೆಯಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನೀಡಬೇಕೆಂದು ನಗರದ ಜಿಲ್ಲಾ ಕ್ರೀಡಾಂಗಣ ಬಳಿಯ ಮಹಾತ್ಮಾ ಗಾಂಧಿ ಪುತ್ಥಳಿ ಬಳಿ  1140 ದಿನಗಳಿಂದ ನಡೆದುಕೊಂಡು ಬರುತ್ತಿದ್ದ ಹೋರಾಟಕ್ಕೆ ನಿನ್ನೆ ಅನಿರೀಕ್ಷಿತವಾಗಿ ವಿಘ್ಞವೊಂದು ಎದುರಾಗಿದೆ ಅದೇನೆಂದರೆ ಇತ್ತೀಚೆಗೆ ನಗರಕ್ಕಾಗಿಮಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಏಮ್ಸ್ ನೀಡುವುದು ತಜ್ಞರ ಸಮಿತಿ ತೀರ್ಮಾನಿಸುತ್ತದೆ ಎಂಬ ಹೇಳಿಕೆ ಏಮ್ಸ್ ಹೋರಾಟಗಾರರಲ್ಲಿ ಕಿಚ್ಚು ಹೆಚ್ಚಿತು ಇದಕ್ಕೆ ಪ್ರತಿಯಾಗಿ ಏಮ್ಸ್ ಹೋರಾಟಗಾರರು ಸುದ್ದಿಗೋಷ್ಟಿ ನಡೆಸಿ ಕೇ...
Image
  ರಾಜ್ಯದಲ್ಲೇ ಮೊಟ್ಟಮೊದಲ ಅತ್ಯಾಧುನಿಕ ವೈದ್ಯಕೀಯ ಯಂತ್ರ ಬೆಟ್ಟದೂರು ಆಸ್ಪತ್ರೆಯಲ್ಲಿ ಪರಿಚಯ- ಡಾ.ಜಯ ಪ್ರಕಾಶ್ ಪಾಟೀಲ್.                                                              ಜಯ ಧ್ವಜ ನ್ಯೂಸ್, ರಾಯಚೂರು,ಜೂ.26 -                    ರಾಜ್ಯದಲ್ಲೆ ಪ್ರಪ್ರಥಮವಾಗಿ ನಗರದ ಬೆಟ್ಟದೂರು ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಯಂತ್ರದ ಮೂಲಕ ಸ್ತನ ಗಡ್ಡೆ ನಿವಾರಣೆ ಶಸ್ತ್ರ ಚಿಕೆತ್ಸೆ ಮಾಡುವುದನ್ನು ಪರಿಚಯಿಸಲಾಗುತ್ತಿದೆ ಎಂದು ಬೆಟ್ಟದೂರು ಆಸ್ಪತ್ರೆ ಮುಖ್ಯಸ್ಥರಾದ ಡಾ.ಜಯ ಪ್ರಕಾಶ್ ಪಾಟೀಲ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಹಿಳೆಯರಲ್ಲಿ ಸ್ತನ ಗಡ್ಡೆ ಅತೀವ ವೇದನೆ ನೀಡುವ ಆರೋಗ್ಯ ಸಮಸ್ಯೆಯಾಗಿದ್ದು ಇದು ಅನೇಕ ಶಾರೀರಿಕ ದುಷ್ಪರಿಣಾಮಗಳಿಗೆ ಎಡೆಮಾಡಿಕೊಡುತ್ತದೆ ಆದ್ದರಿಂದ ನಮ್ಮ ಆಸ್ಪತ್ರೆಯಲ್ಲಿ ರಾಜ್ಯದಲ್ಲೆ ನವೀನ ತಂತ್ರಜ್ಞಾನದ ಯಂತ್ರವನ್ನು ಮೊಟ್ಟ ಮೊದಲ ಬಾರಿಗೆ ಪರಿಚಯಿಸುತ್ತಿದ್ದು ಹೈದ್ರಾಬಾದ್, ಮುಂಬೈ ಮುಂತಾದ ಮಹಾನಗರ ಹೊರತುಪಡಿಸಿ ಕರ್ನಾಟಕ ರಾಜ್ಯದಲ್ಲಿ ನಮ್ಮ ಆಸ್ಪತ್ರೆಯಲ್ಲಿ ಮೊದಲು ಪರಿಚಯಿಸುತ್ತಿರುವ ಹೆಗ್ಗಳಿಕ...
Image
  ಮಾದಕ ವಸ್ತುಗಳ ಸೇವನೆಯಿಂದ  ದೇಹ ಮತ್ತು ಮನಸ್ಸಿನ ಆರೋಗ್ಯ ಹಾಳಾಗುತ್ತದೆ ಮನೋಹರ್ ಪತ್ತಾರ್ ಜಯ ಧ್ವಜ ನ್ಯೂಸ್, ರಾಯಚೂರು,ಜೂ.26 - ಇಂದಿನ ಯುವಕರು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದು,  ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.  ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣೆಕೆ ಕಾನೂನ ಬಾಹಿರ ಚಟುವಟಿಕೆಯೆಂದು ತಿಳಿದಿದ್ದರೂ ಇದರಲ್ಲಿ ತೊಡಗಿಸಿಕೊಳ್ಳುವವರ  ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಮಾದಕ ವ್ಯಸನ ಮತ್ತು ಕಳ್ಳ ಸಾಗಾಣಿಕೆಯಂತಹ ಚಟುವಟಿಕೆಗಳಿಂದ ಜನರನ್ನು ರಕ್ಷಿಸಲು ಹಾಗೂ ಈ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಪ್ರತಿ ವರ್ಷ ಜೂನ್​ 26ರಂದು ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ ಎಂದು ರಾಯಚೂರಿನ ಮಾನೋರೋಗ ತಜ್ಞರಾದ ಡಾ. ಮನೋಹರ್ ವೈ ಪತ್ತಾರ್ ಹೇಳಿದರು. ಆಕಾಶವಾಣಿಯಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಸೇವನೆ ವಿರೋಧಿ ದಿನದ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ ಹಿನ್ನೆಲೆ ಬಗ್ಗೆ ಹೇಳುವುದಾದರೆ 1986ರ ಜೂನ್ 26ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ’ವನ್ನು ಆರಂಭಿಸಲಾಯಿತು. ಆದಾದ ಬಳಿಕ ವಿಶ್ವಸಂಸ್ಥೆಯು 1997ರಲ್ಲ...
Image
  ಬಹುಕೋಟಿ ವಂಚನೆ ಪ್ರಕರಣ : ವಿನಿವಿಂಕ್ ಶಾಸ್ತ್ರಿ ಸೇರಿ ನಾಲ್ವರು ದೋಷಮುಕ್ತ   ಜಯ ಧ್ವಜ ನ್ಯೂಸ್,ರಾಯಚೂರು ಜೂ.25_   ಬಹುಕೋಟಿ ವಂಚನೆ ಪ್ರಕರಣದ ಆರೋಪಿಯಾಗಿದ್ದ ವಿನಿವಿಂಕ್ ಶಾಸ್ತ್ರಿ ಅಲಿಯಾಸ್ ಕೆ.ಎನ್.ಶ್ರೀನಿವಾಸ್ ಶಾಸ್ತ್ರಿ ಸೇರಿದಂತೆ ನಾಲ್ವರನ್ನು ದೋಷಮುಕ್ತಗೊಳಿಸಿ ಎರಡನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಧೀಶರಾದ ಶ್ರೀ ಅನೀಲ್ ಶೇಖನವರ್ ತೀರ್ಪು ನೀಡಿದ್ದಾರೆ.  ವಿನಿವಿಂಕ್ ಶಾಸ್ತ್ರಿ ಅಲಿಯಾಸ್ ಕೆ.ಎನ್..ಶ್ರೀನಿವಾಸ್ ಶಾಸ್ತ್ರಿ, ಜಿ.ಲೋಕೇಶ್, ಶ್ರೀರಂಗ ಮತ್ತು ಯಧುನಾಥ ಕೋಲಾರ್ ದೋಷಮುಕ್ತಗೊಂಡ ಆರೋಪಿತರಾಗಿದ್ದಾರೆ. ರಾಯಚೂರಿನ ಸಾರ್ವಜನಿಕರೊಬ್ಬರು ಸಲ್ಲಿಸಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಂತರ ವಂಚನೆ ಪತ್ತೆ ವಿಚಕ್ಷಣದ ಸಿಓಡಿ ತಂಡ ಬೆಂಗಳೂರಿನ ಡಿವೈಎಸ್‌ಪಿ ಎಸ್.ಎಲ್.ಸಿಂಗದ್  ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಧೀಶ ಅನೀಲ್ ಶೇಖನವರ್ ಸಾಕ್ಷಧಾರಗಳ ಕೊರತೆ ಹಿನ್ನೆಲೆಯಲ್ಲಿ ಆರೋಪಿಗಳನ್ನು ದೋಷ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಹೆಚ್ಚಿನ ಬಡ್ಡಿ ನೀಡುವ ಆಮೀಷ ತೋರಿಸಿ ಹಣ ಹೂಡಿಕೆ ಮಾಡಿಕೊಂಡು ನಂತರ ವಂಚಿಸಿದ್ದಾರೆ ಎಂಬ ದೂರಿನಡಿ ನಡೆದ ತನಿಖೆಯಲ್ಲಿ ವಿನಿವಿಂಕ್ ಸೇರಿದಂತೆ 13 ಅಂಗ ಸಂಸ್ಥೆಗಳಲ್ಲಿನ ಹಣ ಹೂಡಿಕೆ ಸಂಬಂಧಿಸಿದಂತೆ 2005 ರಲ್ಲಿ ನಡ...
Image
  ಏಮ್ಸ್ ಹೋರಾಟಗಾರರಿಂದ ಕೇಂದ್ರ ಸಚಿವರ ವಿರುದ್ಧ ನಿಂದನೆ ಆರೋಪ ಐವರ ವಿರುದ್ಧ  ಎಫ್ ಐ ಆರ್ ದಾಖಲು .                                                          ಜಯ ಧ್ವಜ ನ್ಯೂಸ್, ರಾಯಚೂರು,ಜೂ.25-                ಏಮ್ಸ್  ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ   ಹೇಳಿಕೆ ಖಂಡಿಸಿ ಅವರ ವಿರುದ್ಧ ಏಮ್ಸ್ ಹೋರಾಟಗಾರರಿಂದ ನಿಂದನೆ ಆರೋಪ ಹಿನ್ನಲೆಯಲ್ಲಿ ಇಂದು ನಗರದ ಪಶ್ಚಿಮ‌ ಠಾಣೆಯಲ್ಲಿ ಐವರು ಮೇಲೆ ಪ್ರಕರಣ ದಾಖಲಾಗಿದೆ.                                                         ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ ದೂರಿನ ಮೇರೆಗೆ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ, ಅಶೋಕ್ ಕುಮಾರ್ ಜೈನ್, ಎಸ್.ಮಾರೆಪ್ಪ, ಶ್ರೀನಿವಾಸ್ ಎಂ.ಆರ್.ಬೇರಿ ಇನ್ನಿತರರ ಮೇಲೆ ಪ್ರಕರಣ ದಾಖಲಾಗಿದೆ.            ...
Image
  ತುರ್ತು ಪರಿಸ್ಥಿತಿಗೆ 50 ವರ್ಷ ...ಯುವ ಜನಾಂಗ ಅರಿಯಬೇಕು. ಅದು 1975 ಜೂನ್ 25ರ ದಿನ. ಐವತ್ತು ವರ್ಷದ ಹಿಂದೆ, ತುರ್ತು ಪರಿಸ್ಥಿತಿಯ ಹೆಸರಲ್ಲಿ ಪ್ರಜಾಪ್ರಭುತ್ವದ ಮೇಲಿನ ದೌರ್ಜನ್ಯಕ್ಕೆ ಚಾಲನೆ ಸಿಕ್ಕ ದಿನ. ದೇಶವೊಂದರ ಪ್ರಧಾನಿಯು ಸರ್ವಾ ಧಿಕಾರಿಯಾದರೆ ಏನೆಲ್ಲಾ ಅನಾಹುತಗಳನ್ನು ಮಾಡ ಬಹುದು, ಇತಿಹಾಸದ ಪುಟಗಳಲ್ಲಿ ಏನೆಲ್ಲಾ ಕರಾಳತೆ ದಾಖಲಾಗಬಹುದು ಎಂಬುದನ್ನು ಪರಿಚಯಿಸಿದ ದಿನ.. ಸ್ವತಂತ್ರ ಭಾರತದ ಇತಿಹಾಸದಲ್ಲಿ ಕರಾಳವಾದ ಅಧ್ಯಾಯ, ಕರಾಳ ಅಧ್ಯಾಯದ ಆ ದಿನಗಳು,  ಆ ಪರಿಸ್ಥಿತಿ ದೇಶಕ್ಕೆ ಮತ್ತೆಂದೂ ಬರಬಾರದು ಅಂದಿನ ಅನಾಚಾರಗಳನ್ನು ಯುವಜನತೆಗೆ  ನೆನಪು ಮಾಡಿಕೊಡಬೇಕು..  ತುರ್ತು ಪರಿಸ್ಥಿತಿ ಬಂದು ಹೋಗಿ 50 ವರ್ಷ ಆಯ್ತು. ಇದನ್ನು ಇವತ್ತಿನ ಯುವ ಜನಾಂಗ ಅರ್ಥ ಮಾಡಿಕೊಳ್ಳಬೇಕು. ಇದು ಎಂದೂ ಈ ದೇಶಕ್ಕೆ ಮತ್ತೆ ಬರಬಾರದು. ಅವತ್ತಿನ ಘಟನೆಗಳನ್ನು ಯುವ ಜನತೆಗೆ ತಿಳಿಸೋಣ. ಇದರ ಅರಿವು ಇದ್ದಂತೆ ಇಲ್ಲ. ಇದರ ಅರಿವು ಅಗತ್ಯವಾಗಿ ಇರಲೇಬೇಕು. ಇದರ ಜೊತೆಗೆ ತುರ್ತುಸ್ಥಿತಿಗೆ ಕಾರಣರು ಯಾರು ಎಂಬ ಬಗ್ಗೆ ಚರ್ಚೆ ಅಗತ್ಯ. ತಪ್ಪು ಮಾಡಿದವರು ಯಾರು? ಯಾಕಾಯ್ತು ಈ ಬಗ್ಗೆ ಚರ್ಚೆ ಅಗತ್ಯ. ಇದರ ಹಿಂದೆ ಏನಿತ್ತು ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅವತ್ತು ಈ ದೇಶ ಆಳುತ್ತಿದ್ದು ಕಾಂಗ್ರೆಸ್ ಪಕ್ಷ, ಇಂದಿರಾಗಾಂಧಿ ಸರ್ಕಾರ. ಏನೇ ಆಗಲಿ ಅಧಿಕಾರ ಬಿಡುವುದಿಲ್ಲ. ಈ ದೇಶ ಹಾಳಾದರೂ ಪರವಾಗಿಲ್ಲ. ದೇಶದ ಒಳ್ಳೆಯ ಸಂಸ್ಕೃತಿ,...
Image
  ಜಿಲ್ಲೆಯಾದ್ಯಂತ ಸಂಭ್ರಮದಿಂದ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ.                                                                                  ಜಯ ಧ್ವಜ ನ್ಯೂಸ್, ರಾಯಚೂರು,ಜೂ.25-                ನಗರ ಸೇರಿ ಜಿಲ್ಲೆಯಾದ್ಯಂತ ಮಣ್ಣೆತ್ತಿನ ಅಮಾವಾಸ್ಯೆವನ್ನು ಸಂಭ್ರಮದಿಂದ ಆಚರಿಸಲಾಯಿತು. ಕೃಷಿಯಲ್ಲಿ ಪ್ರಾಧಾನ್ಯತೆ ವಹಿಸುವ ಎತ್ತುಗಳನ್ನು ಪೂಜಿಸಿ ಮಳೆ ಬೆಳೆ ಸಮೃದ್ಧವಾಗಿ ಸುಭಿಕ್ಷೆ ನೆಲೆಸಲಿ ಎಂದು ಕೋರಿ ಮಣ್ಣೆತ್ತಿನ ಅಮಾವಾಸ್ಯೆ ಭಕ್ತಿಯಿಂದ ಪೂಜಿಸುವ ಈ ವಿಶೇಷ ಆಚರಣೆ ಪ್ರಚಲಿತದಲ್ಲಿದೆ.                      ಮಣ್ಣೆತ್ತು ಖರೀದಿ ಭರಾಟೆ:      ನಗರದ ಕುಂಬಾರ ಓಣಿಯಲ್ಲಿ ಮತ್ತು  ಆಂಧ್ರದ ಕೋಸಗಿಯಿಂದ ಬಂದು ಮಣ್ಣೆತ್ತು ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ ನಗರದ ಕರ್ನಾಟಕ ಸಂಘ ಮುಂಭಾಗದಲ್ಲಿ ಮಣ್ಣೆತ್ತು ಖರೀದಿ ಭರಾಟೆ ಜೋರಾಗಿತ್ತು ಗ್ರಾಹಕರು ಗಂಟೆಗಳವರೆಗೆ ಕಾದು ಮಣ್ಣೆತ್ತು ಖರೀದಿಸಿದರು. ಒಂದು ಜೋಡ...
Image
  ಏಮ್ಸ್ ಕುರಿತಂತೆ ಬಹಿರಂಗ ಚರ್ಚೆಗೆ ನಗರ ಶಾಸಕರಿಗೆ ಆಹ್ವಾನ:                                                               ಏಮ್ಸ್ ಹೋರಾಟ ಸಮಿತಿ ಸಂಚಾಲಕರಿಗೆ ಧಮಕಿ ಸಹಿಸುವುದಿಲ್ಲ- ಮಾರೆಪ್ಪ .                                                                                                              ಜಯ ಧ್ವಜ ನ್ಯೂಸ್, ರಾಯಚೂರು,ಜೂ.24-              ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ ರವರಿಗೆ ಶಾಸಕ ಡಾ.ಶಿವರಾಜ ಪಾಟೀಲ್ ಬೆಂಬಲಿಗರು ಧಮಕಿ ಹಾಕುವುದನ್ನು ಸಹಿಸುವುದಿಲ್ಲವೆಂದು ಹೋರಾಟಗಾರ ಎಸ್.ಮಾರೆಪ್ಪ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಇತ್ತೀಚೆಗೆ ನಗರಕ್ಕಾಗ...
Image
    ಪತ್ರಕರ್ತನ ಮೇಲೆ ಹಲ್ಲೆಗೆ ಯತ್ನಿಸಿದ ಸಿಂಧನೂರು ವೃತ್ತದ ಡಿವೈಎಸ್‌ಪಿ ಬಿ.ಎಸ್.ತಳವಾರ ವಿರುದ್ಧ ಕ್ರಮಕ್ಕೆ ಆಗ್ರಹ  ಜಯಧ್ವಜ ,ನ್ಯೂಸ್, ರಾಯಚೂರು , ಜೂ. 24-  ಯರಗೇರಾದ ಮಹರ್ಷಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಜೂ.23 ರಂದು ಸಿಎಂ  ಕಾರ್ಯಕ್ರಮದಲ್ಲಿ ಸುದ್ದಿ ಮಾಡಲು ತೆರಳಿದ್ದ ಬೆಂಕಿ ಬೆಳಕು ಪತ್ರಿಕೆ ವರದಿಗಾರ ಮುತ್ತಣ್ಣ ಹೆಳವರ್‌ಗೆ ಸಿಂಧನೂರು ವೃತ್ತದ ಡಿವೈಎಸ್‌ಪಿ ಬಿ.ಎಸ್.ತಳವಾರ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿರುವುದು ತೀವ್ರ ಖಂಡನೀಯವಾಗಿದ್ದು ಅವರು ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯರವರಿಗೆ ಇಂದು ಮನವಿಪತ್ರ ಸಲ್ಲಿಸಲಾಯಿತು. ವಿಶ್ವವಿದ್ಯಾಲಯದ ಮುಖ್ಯದ್ವಾರದ ಬಳಿಯಲ್ಲಿ ಸಿಎಂ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸುವುದನ್ನು ವರದಿಗಾರ ಮುತ್ತಣ್ಣ ಹೆಳವರ್ ಫೋಟೊ ತೆಗೆಯಲು ನಿಂತಿದ್ದಾಗ ಡಿವೈಎಸ್‌ಪಿ ಬಿ.ಎಸ್.ತಳವಾರ್ ಆಗಮಿಸಿ ಏಕಾಏಕಿ  ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಾರ್ಯಕ್ರಮದ ವರದಿ ಮಾಡಲು ಜಿಲ್ಲಾಡಳಿತದಿಂದ ಪತ್ರಕರ್ತರಿಗೆ ನೀಡಲಾದ ಪಾಸ್‌ನ್ನು ತೋರಿಸಿದರೂ ಡಿವೈಎಸ್‌ಪಿ ಬಿ.ಎಸ್.ತಳವಾರ್ ಪಕ್ಕದಲ್ಲಿದ್ದ ಸಿಬ್ಬಂದಿಗಳಿಗೆ ಇತನನ್ನು ಒದ್ದು ಒಳಗೆ ಹಾಕಿ ಎಂದು ಹೇಳಿ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ. ವರದಿಗೆ ತೆರಳಿದ ಪತ್ರಕರ್ತನ ಮೇಲೆ ಪೊಲೀಸ್ ಅಧಿಕಾರಿ ದೌರ್ಜನ್ಯ ತೋರಿರುವುದು ಅತ್ಯಂತ ...
Image
  ಪ್ರಹ್ಲಾದ್ ಜೋಷಿಗೆ ನಮ್ಮ ಸರ್ಕಾರದ ಬಗ್ಗೆ ಟೀಕಿಸುವ ನೈತಿಕತೆಯಿಲ್ಲ-ಸಿದ್ಧರಾಮಯ್ಯ.                                    ಜಯ ಧ್ವಜ ನ್ಯೂಸ್, ರಾಯಚೂರು,ಜೂ.23-                       ಪ್ರಹ್ಲಾದ್ ಜೋಷಿಗೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಟೀಕಿಸುವ ನೈತಿಕತೆ ಇಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.                 ಅವರಿಂದು ತಾಲೂಕಿನ ಯರಗೇರಿ ಬಳಿಯ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾಲಯದ ಹೆಲಿಪ್ಯಾಡ್ ನಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ ಜಿಲ್ಲೆಗೆ ಏಮ್ಸ್ ನೀಡುವ ಬಗ್ಗೆ ತಜ್ಞರು ಸಮಿತಿ ನಿರ್ಧರಿಸುತ್ತದೆ ಎಂಬ ಜೋಷಿ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಜೋಷಿಯವರಿಗೆ ಯಾವ ನೈತಿಕತೆಯಿಲ್ಲ ಅವರಿಗೆ ರಾಜ್ಯದ ಬಗ್ಗೆ ಕಾಳಜಿಯಿಲ್ಲ ಕೇಂದ್ರದಿಂದ ಬರಬೇಕಾದ ಅನುದಾನ ಕಡಿತದ ಬಗ್ಗೆ ಅವರು ಎಂದಾದರು ಮೋದಿಯವರನ್ನು ಕೇಳಿದ್ದಾರೆ ಎಂದು ಪ್ರಶ್ನಿಸಿದರು.                                          ...
Image
  ಯರಗೇರಿಯಲ್ಲಿ ಸಿಎಂರಿಂದ ವಿವಿಧ ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನೆ ಕಾರ್ಯಕ್ರಮ:          ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ‌ವಾದರೂ  ಬಿಜೆಪಿ ಎಂಪಿಗಳು ಗಪ್ ಚುಪ್- ಸಿದ್ಧರಾಮಯ್ಯ.                                                                               ಜಯ ಧ್ವಜ ನ್ಯೂಸ್, ರಾಯಚೂರು,ಜೂ.23-                      ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹಣಕಾಸು ಹಂಚಿಕೆ ವಿಚಾರದಲ್ಲಿ ಅನ್ಯಾಯವಾಗುತ್ತಿದ್ದರೂ ರಾಜ್ಯದಲ್ಲಿರುವ ಬಿಜೆಪಿ ಲೋಕಸಭಾ ಸದಸ್ಯರು ಗಪ್ ಚುಪ್ ಆಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕೆ ಮಾಡಿದರು. ಅವರಿಂದು ತಾಲೂಕಿನ ಯರಗೇರಿಯಲ್ಲಿ ಜಿಲ್ಲಾಡಳಿತ, ಜಿ.ಪಂ , ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 936 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ,ಬುಡಕಟ್ಟು ಉತ್ಸವ , 371(ಜೆ) ದಶಮಾನೋತ್ಸವ ಹಾಗೂ ಮಹರ್ಷಿ ವಾಲ್ಮೀಕಿ ವಿವಿ ನಾಮಫಲಕ ಅನಾವರಣ...
Image
  ಜೂ.27 ರಂದು ದೇವದುರ್ಗಕ್ಕೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಆಗಮನ:                                          ಚಿಕ್ಕಹೊನ್ನಕುಣಿಯಲ್ಲಿ ದೇವೇಗೌಡರ ಪುತ್ಥಳಿ ಅನಾವರಣ - ವಿರುಪಾಕ್ಷಿ                                                                        ಜಯ ಧ್ವಜ ನ್ಯೂಸ್, ರಾಯಚೂರು,ಜೂ.22-                         ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರು ಹಾಗೂ ಯುವ ನಾಯಕ ನಿಖಿಲ್ ಕುಮಾರಸ್ವಾಮಿರವರು ಜೂ.27 ರಂದು ದೇವದುರ್ಗಕ್ಕೆ ಆಗಮಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜೆಡಿಎಸ್ ಪಕ್ಷವನ್ನು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಪಣತೊಟ್ಟಿರುವ ದೇವೇಗೌಡರು ತಮ್ಮ 94 ನೇ ವರ್ಷದ ಇಳಿವಯಸ್ಸಿನಲ್ಲಿಯೂ ಪಕ್ಷ ಸಂಘ...
Image
  ನಾಳೆ ಯರಗೇರಿಗೆ  ಸಿಎಂ, ಡಿಸಿಎಂ, ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಸೇರಿದಂತೆ ಸಚಿವರ ದಂಡು:            ವೇದಿಕೆ ಸೇರಿದಂತೆ ಸಕಲ ಸಿದ್ದತೆ ಪೂರ್ಣ ; 40 ಸಾವಿರ ಜನ ಸೇರುವ ನಿರೀಕ್ಷೆ - ದದ್ದಲ್ .                                                                                                         ಜಯ ಧ್ವಜ ನ್ಯೂಸ್, ರಾಯಚೂರು,ಜೂ.22- ನಾಳೆ ತಾಲೂಕಿನ ಯರಗೇರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯ ಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸಚಿವರ ದಂಡು ಆಗಮಿಸಲಿದೆ ಎಂದು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಬಸನಗೌಡ ದದ್ದಲ್ ಹೇಳಿದರು. ಅವರಿಂದು ಯರಗೇರಿ ರಂಗನಾಥ ಸ್ವಾಮಿ ದೇವಸ್ಥಾನ ಬಳಿ ಕಾರ್ಯಕ್ರಮ ವೇದಿಕೆ ಹಾಗೂ ಸಕಲ ಸಿದ್ಧತೆ ವೀಕ್ಷಿಸಿ ನಂತರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲಾಡಳಿತ, ಜಿ.ಪಂ ,ವಿವಿಧ ಇಲ...