Posts

Showing posts from March, 2023

ಕಾಡ್ಲೂರಲ್ಲಿ ಭಕ್ತಿಯಿಂದ ಶ್ರೀರಾಮೋತ್ಸವ ಆಚರಣೆ

Image
ಕಾಡ್ಲೂರಲ್ಲಿ ಭಕ್ತಿಯಿಂದ ಶ್ರೀರಾಮೋತ್ಸವ ಆಚರಣೆ   ರಾಯಚೂರು,ಮಾ.31- ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ವನವಾಸಿ ಶ್ರೀ ರಾಮದೇವರ ಹಾಗೂ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ಸನ್ನಿದಾನದಲ್ಲಿ ಶ್ರೀರಾಮನವಮಿಯನ್ನು ಭಕ್ತಿಯಿಂದ ಆಚರಿಸಲಾಯಿತು. ಬೆಳಿಗ್ಗೆ ಸುಪ್ರಭಾತ,  ನಿರ್ಮಾಲ್ಯ ವಿಸರ್ಜನೆ,            ಧ್ವಜಾರೋಹಣ,  ಶ್ರೀ ರಾಮಾಷ್ಠಕ ಸ್ತೋತ್ರ, ವಾಯುಸ್ತುತಿ, ಅಷ್ಟೋತ್ತರ ಪಾರಾಯಣ. ಶ್ರೀರಾಮದೇವರಿಗೆ, ಶ್ರೀಪ್ರಾಣದೇವರಿಗೆ ಅಭಿಷೇಕ, ಅಲಂಕಾರ, ಶ್ರೀ ರಾಮದೇವರ ತೊಟ್ಟಿಲು ಮಹೋತ್ಸವ, ದಾಮೋದರ್ ಆಚಾರ್ ಪುರೋಹಿತ ಇವರಿಂದ ಶ್ರೀರಾಮದೇವರ ಕಥೆ  ನಂತರ ನೈವೇದ್ಯ, ಮಹಾ ಮಂಗಳಾರತಿ, ಪಾನಕ, ಹಣ್ಣು ವಿತರಣೆ  ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.         ಈ ಸಂದರ್ಭದಲ್ಲಿ ಕಾಡ್ಲೂರು ಸಂಸ್ಥಾನದ ರಂಗರಾವ್ ದೇಸಾಯಿ, ಜಯಕುಮಾರ ದೇಸಾಯಿ, ವಿಜಯಕುಮಾರ ದೇಸಾಯಿ , ಕೃಷ್ಣ ಸಂಗಮ, ವಿಜಯಕುಮಾರ ಜೋಷಿ,  ಕೃಷ್ಣಮೂರ್ತಿ ಹೆಬಸೂರು, ವಿಪ್ರಶ್ರೀ ವೆಂಕಟೇಶ ರಾವ್, ಚಂದ್ರಕಾಂತ ವೈದ್ಯ, ಆನಂದ ಆಲೂರು, ರಾಘವೇಂದ್ರ, ಸತ್ಯನಾರಯಣ , ಸುವರ್ಣ ಬಾಯಿ ದೇಸಾಯಿ, ಅಶ್ವಿನಿ ದೇಸಾಯಿ ,ಲಕ್ಷ್ಮಿ ಇತರರು ಇದ್ದರು.

ಮಹಿಮೆಯ ತಾಣ ;ಕಾಡ್ಲೂರು ವನವಾಸಿ ಶ್ರೀ ರಾಮದೇವರ ದೇವಸ್ಥಾನ

Image
ನದಿಯ ಮಧ್ಯೆ ಭಾಗದಲ್ಲಿ ಶ್ರೀರಾಮದೇವರ ಪಾದ ಮೂಡಿರುವ ಪ್ರತೀತಿ: ಮಹಿಮೆಯ ತಾಣ  ಕಾಡ್ಲೂರು ವನವಾಸಿ  ಶ್ರೀ ರಾಮದೇವರ ದೇವಸ್ಥಾನ                     ರಾಯಚೂರು,ಜ.21- ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾನದಿ ತೀರದಲ್ಲಿ ವನವಾಸಿ ಶ್ರೀರಾಮದೇವರ ಹಾಗೂ ಶ್ರೀಉಪೇಂದ್ರ ತೀರ್ಥ ಕರಾರ್ಚಿತ ಶ್ರೀಪ್ರಾಣದೇವರ ಸನ್ನಿದಾನವಿದೆ.       ಶಕ್ತಿನಗರದಿಂದ ಸುಮಾರು 10 ಕಿ.ಮಿ ಅಂತರದಲ್ಲಿ ಕಾಡ್ಲೂರು ಗ್ರಾಮವಿದ್ದು ಈ ಸ್ಥಳಕ್ಕೆ ಪುರಾತನ ಇತಿಹಾಸವುಳ್ಳ ಹಿನ್ನೆಲೆಯಿದೆ. ತ್ರೇತಾಯುಗದಲ್ಲಿ ಶ್ರೀರಾಮನು ಸೀತಾನ್ವೇಷಣೆ ಮಾಡುವ ಸಂದರ್ಭದಲ್ಲಿ ಇಲ್ಲಿ ಸಂಚರಿಸುತ್ತಾ ಹೊರಟಾಗ ನದಿ ತೀರದಲ್ಲಿ ಋಷಿ, ಮುನಿಗಳು ಯಜ್ಙ, ಯಾಗ ಮಾಡುವ ಸಂದರ್ಭದಲ್ಲಿ ಲವಣಾಸುರನೆಂಬ ರಾಕ್ಷಸ ದೇವತಾ ಕಾರ್ಯಗಳಿಗೆ ಭಗ್ನ ಉಂಟುಮಾಡುತ್ತಿದ್ದನ್ನು ಕಂಡ ಶ್ರೀರಾಮನು ಆತನನ್ನು ಸಂಹರಿಸಿದನೆಂಬ ಪ್ರತೀತಿ ಇದೆ . ಶ್ರೀರಾಮನು ಇಲ್ಲಿ ನಡೆದಾಡಿದನೆಂಬುದಕ್ಕೆ ಪೂರಕವೆಂಬಂತೆ ಇಲ್ಲಿ ಭೃಹತ ಶಿಲೆಯ ಮೇಲೆ ಶ್ರೀರಾಮನ ಪಾದದ ಗುರುತು, ಶ್ರೀಚಕ್ರನಾರಾಯಣನ ಮೂರ್ತಿಯು ಶಿಲೆಯಲ್ಲಿ ಮೂಡಿದೆ ಇದಕ್ಕೆ ಧಕ್ಕೆ ಉಂಟಾಗಬಾರದೆಂದು ಕಾಡ್ಲೂರ ಸಂಸ್ಥಾನದವರು ಚೌಕಾಕಾರದ ರಕ್ಷಣೆ ಕಟ್ಟೆ ಕಟ್ಟಿಸಿದ್ದಾರೆ. ಸುಮಾರು 190 ರಿಂದ 200 ವರ್ಷಗಳ ಹಿಂದೆ ಸಂಚಾರಾರ್ಥವಾಗಿ ಹೊರಟ ಶ್ರೀರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯ ಪೀಠಾಧಿಪತಿಗಳಾದ ಹಾಗೂ ಶ್ರೀರಾಘವೇಂದ್ರ ಸ್ವಾಮಿಗಳ ನಂತರ ನಾಲ್ಕನೆ ಪೀಠಾಧಿಪತಿಗಳಾದ ಶ್ರೀಉಪೆಂದ್ರತ

ಮೇ. 10 ರಂದು ವಿಧಾನಸಭೆ ಚುನಾವಣೆ ಮತದಾನ ,13 ರಂದು ಮತ ಎಣಿಕೆ: ವಿಧಾನಸಭೆ ಚುನಾವಣೆಗೆ ಸಕಲ ಸಿದ್ದತೆ- ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ

Image
ಮೇ. 10 ರಂದು ವಿಧಾನಸಭೆ ಚುನಾವಣೆ ಮತದಾನ ,13 ರಂದು ಮತ ಎಣಿಕೆ:                    ವಿಧಾನಸಭೆ ಚುನಾವಣೆಗೆ ಸಕಲ ಸಿದ್ದತೆ- ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ರಾಯಚೂರು,ಮಾ.30:- ವಿಧಾನಸಭೆ ಚುನಾವಣೆ-2023ಕ್ಕೆ ಸಂಬ0ಧಿಸಿದ0ತೆ ಮಾ.29ರಿಂದ ನೀತಿ ಸಂಹಿತೆ ಜಾರಿಯಾಗಿದ್ದು, ನೀತಿ ಸಂಹಿತೆ ಉಲ್ಲಂಘನೆಯಾಗದ0ತೆ, ನೀತಿ ಸಂಹಿತೆ ಉಲ್ಲಂಘನೆಯಾದರೆ ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ಹಾಗೂ ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಹೇಳಿದರು.  ಅವರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.  ಮೇ. 10 ರಂದು ವಿಧಾನಸಭೆ ಚುನಾವಣೆ ಮತದಾನ ,ಮೇ 13 ರಂದು ಮತ ಎಣಿಕೆ ನಡೆಯಲಿದೆ ಎಂದ ಅವರು ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದ್ದು ,ಏ.20 ನಾಮಪತ್ರ ಸಲ್ಲಿಕೆ ಕೊನೆ ದಿನ ,ಏ.21 ನಾಮಪತ್ರ ಪರಿಶೀಲನೆ, ಏ.24 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ ಎಂದು ತಿಳಿಸಿದರು.                                                 ಜಿಲ್ಲೆಯ ರಾಯಚೂರು ನಗರ, ರಾಯಚೂರು ಗ್ರಾಮೀಣ, ಮಾನವಿ, ದೇವದುರ್ಗ, ಲಿಂಗಸುಗೂರು, ಸಿಂಧನೂರು ಹಾಗೂ ಮಸ್ಕಿ ಸೇರಿದಂತೆ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು  1840ಮತಗಟ್ಟೆಗಳಿದ್ದು ಎಲ್ಲಾ ಮತಗಟ್ಟೆ

ಕಾಡ್ಲೂರಲ್ಲಿ ಮಾ.30 ರಂದು ಶ್ರೀರಾಮನವಮಿ ಉತ್ಸವ

Image
  ಕಾಡ್ಲೂರಲ್ಲಿ ಮಾ.30 ರಂದು  ಶ್ರೀರಾಮನವಮಿ ಉತ್ಸವ  ರಾಯಚೂರು,ಮಾ.29- ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ನವವಾಸಿ ಶ್ರೀ ರಾಮದೇವರ ಹಾಗೂ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ಸನ್ನಿದಾನದಲ್ಲಿ ಮಾ.30 ಗುರುವಾರದಂದು ಶ್ರೀರಾಮನವಮಿ ಅಂಗವಾಗಿ   ಶ್ರೀರಾಮೋತ್ಸವ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ಸುಪ್ರಭಾತ,  ನಿರ್ಮಾಲ್ಯ ವಿಸರ್ಜನೆ,            ಧ್ವಜಾರೋಹಣ,  ಶ್ರೀ ರಾಮಾಷ್ಠಕ ಸ್ತೋತ್ರ, ವಾಯುಸ್ತುತಿ, ಅಷ್ಟೋತ್ತರ ಪಾರಾಯಣ. ಶ್ರೀರಾಮದೇವರಿಗೆ, ಶ್ರೀಪ್ರಾಣದೇವರಿಗೆ ಅಭಿಷೇಕ, ಅಲಂಕಾರ,ಶ್ರೀ ಗೋತಗಿ ಗುರುರಾಜ ಆಚಾರ್ ಜೋಷಿ ಇವರಿಂದ ದೊಡ್ಡ ದೇವರ ಪ್ರತಿಮಾ ಪೂಜೆ, ಶ್ರೀ ರಾಮದೇವರ ತೊಟ್ಟಿಲು ಮಹೋತ್ಸವ, ದಾಮೋದರ್ ಆಚಾರ್ ಪುರೋಹಿತ ಇವರಿಂದ ಶ್ರೀರಾಮದೇವರ ಕಥೆ  ನಂತರ ನೈವೇದ್ಯ, ಮಹಾ ಮಂಗಳಾರತಿ, ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಕಾಡ್ಲೂರು ಸಂಸ್ಥಾನದ ರಂಗರಾವ್ ದೇಸಾಯಿ, ಜಯಕುಮಾರ ದೇಸಾಯಿ, ವಿಜಯಕುಮಾರ ದೇಸಾಯಿ ಹಾಗೂ ಗ್ರಾಮಸ್ಥರು ವಿನಂತಿಸಿಕೊಳ್ಳುತ್ತಾರೆ.

ವಿದ್ಯಾರ್ಥಿ ವಿನಯ್ ಕುಂಚದಲ್ಲಿ ಅರಳಿದ ಮರ್ಯಾದಾ ಪುರುಷತ್ತಮ ಶ್ರೀರಾಮ

Image
ವಿದ್ಯಾರ್ಥಿ ವಿನಯ್  ಕುಂಚದಲ್ಲಿ ಅರಳಿದ ಮರ್ಯಾದಾ ಪುರುಷತ್ತಮ ಶ್ರೀರಾಮ                      ರಾಯಚೂರು,ಮಾ.28- ನಗರದ ರಾಯಚೂರು ಪ್ರಭ ಪತ್ರಿಕೆ    ಡಿಟಿಪಿ ಆಪರೇಟರ್  ವೇಣುಗೋಪಾಲ   ಅವರ ಮಗ  ವಿನಯಕುಮಾರ ಶ್ರೀರಾಮ ನವಮಿ ಅಂಗವಾಗಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮನನ್ನು ತಮ್ಮ ಕುಂಚದಲ್ಲಿ ಅರಳಿಸಿದ್ದಾರೆ  . ಅವರು  ಕನ್ಯಾಕಾ ಪರಮೇಶ್ವರಿ ಶಾಲೆ  ಆಂಗ್ಲ ಮಾದ್ಯಮದಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ .

ನಿಯಮ ಬಾಹಿರವಾಗಿ 10ಕೋಟಿ ರೂ. 74 ಕಾಮಗಾರಿಗಳ ನಿರ್ವಹಣೆ ಆದೇಶ: ಪ್ರಾದೇಶಿಕ ಆಯುಕ್ತರಿಗೆ ಮತ್ತು ರಾಜೀವ ಗಾಂಧಿ ವಸತಿ ನಿಗಮ ಎಂ.ಡಿ ಗೆ ದೂರು- ಬಷೀರುದ್ದೀನ್

Image
  ನಿಯಮ ಬಾಹಿರವಾಗಿ 10 ಕೋಟಿ ರೂ. 74 ಕಾಮಗಾರಿಗಳ ನಿರ್ವಹಣೆ ಆದೇಶ: ಪ್ರಾದೇಶಿಕ ಆಯುಕ್ತರಿಗೆ ಮತ್ತು ರಾಜೀವ ಗಾಂಧಿ ವಸತಿ ನಿಗಮ ಎಂ.ಡಿ ಗೆ ದೂರು- ಬಷೀರುದ್ದೀನ್ ರಾಯಚೂರು,ಮಾ.೨೮-ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬ್ರಷ್ಟಾಚಾರ ತಾಂಡವವಾಡುತ್ತಿರುವಾಗಲೆ ಜಿಲ್ಲೆಯಲ್ಲಿ ನಿಮಯ ಬಾಹಿರವಾಗಿ ಕಾಮಗಾರಿಗಳ ನಿರ್ವಹಣೆ ಆದೇಶವನ್ನು ಜಿಲ್ಲಾಡಳಿತ ಮಾಡಿದ್ದು ಈ ಕೂಡಲೆ ರದ್ದು ಪಡಿಸಬೇಕೆಂದು ಕಲಬುರ್ಗಿ ಪ್ರಾದೇಶಿಕ ಆಯುಕ್ತರು ಮತ್ತು ರಾಜೀವಗಾಂಧಿ ವಸತಿ ನಿಗಮಕ್ಕೆ ದೂರು ನೀಡಲಾಗುತ್ತದೆ ಎಂದು ಜಿ.ಪಂ ಮಾಜಿ ಸದಸ್ಯ ಬಷೀರುದ್ದೀನ್ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಗರ ಕ್ಷೇತ್ರದಲ್ಲಿ ಸುಮಾರು ೭೪ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ ವಾಸ್ತವದಲ್ಲಿ ಕಟ್ಟಡ ಕಾಮಗಾರಿಗಳನ್ನು ಮಾತ್ರ ನಿರ್ಮಿತಿ ಕೇಂದ್ರ ಮತ್ತು ಕ್ಯಾಷೋಟೆಕ್ ಗೆ ನೀಡಬೇಕು ಆದರೆ ನಗರಾಭಿವೃದ್ದಿ ಪ್ರಾಧಿಕಾರ ನಿಯಮ ಉಲ್ಲಂಘಿಸಿ ಕಟ್ಟಡ ಕಾಮಗಾರಿಗಳಲ್ಲದೆ ಉಳಿದ ಕಾಮಗಾರಿಗಳಾದ ಗ್ರಿಲ್ ಅಳವಡಿಕೆ, ಹೈ ಮಾಸ್ ಲೈಟ್ ಇನ್ನಿತರ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದು ಇದರಲ್ಲಿ ಭಾರಿ ಅಕ್ರಮದ ಅನುಮಾನ ಮೂಡುತ್ತಿದ್ದು ಟೆಂಡರ್ ಕರೆಯದೆನೆ ಕಾಮಗಾರಿಗಳನ್ನು ನೀಡಲಾಗಿದ್ದು ಇದರಿಂದ ಬ್ರಷ್ಟಾಚಾರವಾದಂತಾಗುತ್ತದೆ ಈ  ಅದೇಶ ಹಿಂಪಡೆಯಬೇಕೆAದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಏನು ಕ್ರಮವಾಗದ ಕಾರಣ ಕಲಬುರ್ಗೀ ಪ್ರದೇಶಿಕ ಆಯುಕ್ತರು ಮತ್ತು ರಾಜೀವ

ಮುಖ್ಯಮಂತ್ರಿಗಳಿಂದ ಇಂದು ರಾಯಚೂರು ವಿಶ್ವವಿದ್ಯಾಲಯ ಉದ್ಘಾಟನೆ ಖಂಡನೀಯ- ಉಸ್ತಾದ

Image
  ಮುಖ್ಯಮಂತ್ರಿಗಳಿಂದ ಇಂದು ರಾಯಚೂರು ವಿಶ್ವವಿದ್ಯಾಲಯ ಉದ್ಘಾಟನೆ ಖಂಡನೀಯ- ಉಸ್ತಾದ . ರಾಯಚೂರು,ಮಾ.28-  ರಾಯಚೂರು ವಿಶ್ವವಿದ್ಯಾಲಯ ಪ್ರಾರಂಭವಾಗಿ ಎರಡು ವರ್ಷದ ನಂತರ ರಾಜ್ಯದ ಮುಖ್ಯ ಮಂತ್ರಿ ಇಂದು  ಉದ್ಘಾಟನೆ ಮಾಡುತ್ತಿರುವದು ಆಶ್ಚರ್ಯಕರ ಮತ್ತು ಖಂಡನೀಯವಾದದ್ದು ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ವಕ್ತಾರರಾದ ಡಾ.ರಝಾಕ ಉಸ್ತಾದ್ ಹೇಳಿದ್ದಾರೆ. ವಿಶ್ವವಿದ್ಯಾಲಯ ಪ್ರಾರಂಭವಾಗಿ ಎರಡು ವರ್ಷವಾದರೂ ನಯಾ ಪೈಸೆ ಅನುದಾನ ನೀಡದ ಸರಕಾರ ಯಾವ ಮುಖವನ್ನಿಟ್ಟುಕೊಂಡು ಇಂದು ಉದ್ಘಾಟನೆ ಮಾಡುತ್ತಿದ್ದಾರೆ ಎಂದು      ಪ್ರಶ್ನಿಸುವಂತಾಗಿದೆ. ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಸುಮಾರು 500 ಕೋ.ರೂ ಅನುದಾನದ ಬೇಡಿಕೆ ಇದ್ದರೂ ಇಲ್ಲಿಯವರೆಗೆ ಒಂದೇ ಒಂದು ನಯಾ ಪೈಸೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಿಲ್ಲ, ಇಂತಹ ಸಂದರ್ಭದಲ್ಲಿ ಚುನಾವಣೆ ದೃಷ್ಟಿಯಿಂದ ಉದ್ಘಾಟನೆ ಮಾಡುತ್ತಿರುವದು ಹಾಸ್ಯಾಸ್ಪದವಾಗಿದೆ.     ರಾಯಚೂರು ವಿಶ್ವವಿದ್ಯಾಲಯದ ಬೆಳವಣಿಗೆಗೆ ಸರಕಾರದ ಪಾತ್ರವೇನು? ಪೂರ್ಣ ಪ್ರಮಾಣದ ಹುದ್ದೆಗಳ ಮಂಜೂರಿ ಇಲ್ಲ, ಯಾವುದೇ ಹೊಸ ಕಟ್ಟಡ ಕಟ್ಟಲು ಅನುದಾನ ನೀಡಿಲ್ಲ, ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯ ನೀಡಿಲ್ಲ, ಮೂಲಭೂತ ಸೌಕರ್ಯಗಳ ಕೊರತೆ ಇದ್ದರೂ ಉದ್ಘಾಟನೆ ಗೆ ಮುಂದಾಗಿರುವದು ಚುನಾವಣಾ ಗಿಮಿಕ್ ಬಿಟ್ಟರೆ ಬೇರೇನೂ ಇಲ್ಲ. ಸುಮಾರು 250 ಎಕರೆ ಜಮೀನು ಇರುವ ರಾಯಚೂರು ವಿಶ್ವವಿದ್ಯಾಲಯದ  23 ಸ್ನಾತಕೋತ್ತರ ಕೋರ್ಸಗಳಿದ್ದು ಸುಮಾರು ಎರಡು

ಗಬ್ಬೂರಿನಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ: ಕಾಂಗ್ರೆಸ್ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿತ್ತು-ಅಮಿತ್ ಶಾ

Image
  ಗಬ್ಬೂರಿನಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ: ಕಾಂಗ್ರೆಸ್ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿತ್ತು-ಅಮಿತ್ ಶಾ ರಾಯಚೂರು,ಮಾ.೨೬- ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿತ್ತು ಎಂದು ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ ಆರೋಪಿಸಿದರು. ಅವರಿಂದು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ಆಯೋಜಿಸಿದ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿ ಕೊಪ್ಪರ ನರಸಿಂಹದೇವರು, ಬೂದಿ ಬಸವೇಶ್ವರರು ಮತ್ತು ಇಲ್ಲಿನ ಸಮಸ್ತ ಪುಣ್ಯ ಪು ರುಷರಿಗೆ ವಂದಿಸುತ್ತ ಇಂದು ರಾಯಚೂರು ಜಿಲ್ಲೆಯಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ನೆರವೇರುತ್ತಿದ್ದು ಸುಮಾರು ೪೨೮೩ ಕೋಟಿ ರೂಗಳ ೨೨೦ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗಿದ್ದು ಬಿಜೆಪಿ ಸರ್ಕಾರ ಅಭಿವೃದ್ದಿ ಪರ ಎಂಬುದನ್ನು ಸಾಬೀತು ಮಾಡಿದೆ ಎಂದರು. ಕಾ0ಗ್ರೆಸ್ ಪಕ್ಷ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿತ್ತು ಇಲ್ಲಿ ಬ್ರಷ್ಟಾಚಾರ ಮಾಡಿ ಹಣ ದೋಚಿ ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕರಿಗೆ ನೀಡುತ್ತಿತು ಆದರೆ ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಬ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದ್ದು ಅಭೀವೃದ್ದಿ ಪರ್ವ ಪ್ರಾರಂಭವಾಗಿದೆ ಎಂದರು. ರಾಹುಲ್ ಅವಧಿಯಲ್ಲಿ ಕಾಂಗ್ರೆಸ್ ಸಮಾಪ್ತಿ ಕಂಡಿದೆ ಇತ್ತಿಚೆಗೆ ನಡೆದ ಪೂವೋತ್ತರ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲುಂಡಿದ್ದು ಎನ್ ಡಿ

ಕುಂದಾಪುರ ವೈದ್ಯರ ಸಾಮಾಜಿಕ ಕಳಕಳಿಗೆ ಸಾರ್ವಜನಿಕರಿಂದ ಪ್ರಶಂಸೆ

Image
  ಕುಂದಾಪುರ ವೈದ್ಯರ ಸಾಮಾಜಿಕ ಕಳಕಳಿಗೆ ಸಾರ್ವಜನಿಕರಿಂದ ಪ್ರಶಂಸೆ ರಾಯಚೂರು,ಮಾ.25- ವಿಶ್ವದ ಅಗ್ಗದ ಮತ್ತು ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯಲ್ಲಿ ಭಾರತವು ಅಗ್ರ ಐದು ದೇಶಗಳಲ್ಲಿ ಒಂದು.                                   ವೈದ್ಯರು  ತಮ್ಮ  ಆದಾಯವಾಗಿರುವ ವೃತ್ತಿಯಲ್ಲಿಯೇ ಹಲವರಿಗೆ  ಉಚಿತ ಸೇವೆ  ನೀಡುವುದರ ಜೊತೆಗೆ ವಿವಿಧ ದತ್ತಿ ಸಂಸ್ಥೆಗಳ ಮೂಲಕ ವಿವಿಧ ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕುಂದಾಪುರದ ವೈದ್ಯರು  ಅನುದಿನದ ಸೇವಾ ಚಟುವಟಿಕೆಗಳ ಜೊತೆಗೆ,  ಸಮಾಜದಲ್ಲಿ  ಸಕಾರಾತ್ಮಕ ಬದಲಾವಣೆಗಳನ್ನು ತರಲು , ದೇಶದಲ್ಲಿ ಮೊದಲ ಬಾರಿಗೆ ಒಂದು ವಿನೂತನ ಸೇವಾ ಚಟುವಟಿಕೆಯನ್ನು ನಡೆಸುತ್ತಿದ್ದಾರೆ.  ಸಮಾಜದಲ್ಲಿ  ಧನನಾತ್ಮಕ ಬದಲಾವಣೆಗಾಗಿ ತಮ್ಮ ತನು ಮನ ಧನವನ್ನು ಅರ್ಪಿಸಿರುವ ಹಾಗೂ ಆರ್ಥಿಕವಾಗಿ ಕಷ್ಟದಲ್ಲಿರುವ  ಸಾಮಾಜಿಕ ಕಾರ್ಯಕರ್ತರಿಗೆ  ಬೆಂಬಲ ನೀಡುವ  "ಆರೋಗ್ಯ ಸೇವಾ ಕಾರ್ಡ್" ಅನ್ನು ಕುಂದಾಪುರದ ವೈದ್ಯರು ನೀಡಿದ್ದಾರೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಸುಮಾರು 150 ಜನರು ಆರೋಗ್ಯ ಕಾರ್ಡ್ ನ ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ ಹಾಗೂ ಇದನ್ನು ಒಂದು ವರ್ಷದವರೆಗೆ ಬಳಸಬಹುದು. ಈ  ಆರೋಗ್ಯ ಕಾರ್ಡ ನ ಉಪಲಬ್ದತೆ  ಹಾಗೂ ಉಪಯೋಗಕ್ಕೆ  ತಗಲುಬಹುದಾದ  ವೆಚ್ಚವನ್ನು ವೈದ್ಯರು ಮತ್ತು ಆಸ್ಪತ್ರೆಗಳು  ಭರಿಸಲಿದ್ದಾರೆ  .  ವೈದ್ಯ ಸಂಘಗಳ , ವೈದ್ಯರ , ಆಸ್ಪತ್ರೆಗಳ ಈ ನಿಸ್ವಾರ್ಥ ಸೇವ

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಮಹಿಳಾ ಸಮಾವೇಶ ಕಾರ್ಯಕ್ರಮ: ನಮ್ಮೆಲ್ಲರ ಸಂರಕ್ಷಣೆಗೆ ಬಿಜೆಪಿ ವಿರುದ್ಧ ಮಹಿಳೆಯರು ಕಚ್ಚೆ ಕಟ್ಟಬೇಕಾಗಿದೆ- ದನಸಾರಿ ಸೀತಕ್ಕ.

Image
  ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಮಹಿಳಾ ಸಮಾವೇಶ ಕಾರ್ಯಕ್ರಮ: ನಮ್ಮೆಲ್ಲರ ಸಂರಕ್ಷಣೆಗೆ ಬಿಜೆಪಿ ವಿರುದ್ಧ ಮಹಿಳೆಯರು ಕಚ್ಚೆ ಕಟ್ಟಬೇಕಾಗಿದೆ- ದನಸಾರಿ ಸೀತಕ್ಕ. ರಾಯಚೂರು,ಮಾ.25- ಬಿಜೆಪಿ ಸರ್ಕಾರ ಬಡ ಜನರನ್ನು ಮರೆತು ಬಂಡವಾಳ ಶಾಹಿಗಳ ಕೈಗೊಂಬೆಯಾಗಿ ಪ್ರಜಾ ಪ್ರಜಾಭುತ್ವವನ್ನು ಕಗ್ಗೊಲೆ ಮಾಡುತ್ತಿದೆ. ದೇಶದಲ್ಲಿ  ನಿರಂತರ ವಾಗಿ  ಬೆಲೆ ಏರಿಕೆಯಿಂದ ಬಡವರ ಬದುಕು ಬೀದಿಪಾಲಾಗುತ್ತಿದೆ. ಈ ದೇಶದಲ್ಲಿ ಯಾರು ಮಾತನಾಡದಂತೆ ಬಿಜೆಪಿ ಸರ್ಕಾರ ಸರ್ವಾಧಿಕಾರ ನಡೆಸುತ್ತಿದೆ ನಮ್ಮೆಲ್ಲರ ರಕ್ಷಣೆಗಾಗಿ ಮಹಿಳೆಯರು ಬಿಜೆಪಿ ವಿರುದ್ಧ ಕಚ್ಚೆ ಕಟ್ಟಿ ಹೋರಾಡಬೇಕಾಗಿದೆ ಎಂದು ತೆಲಂಗಾಣ ಶಾಸಕಿ, ಎಐಸಿಸಿ ಮಹಿಳಾ ಕಾರ್ಯದರ್ಶಿಗಳಾದ    ದನಸಾರಿ ಸೀತಕ್ಕ ಸಂದೇಶ ನೀಡಿದರು‌. ಸಮೀಪದ ಬೋಳಮಾನ್ ದೊಡ್ಡಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಗ್ಯಾರಂಟಿ‌ ಕಾರ್ಡ್ ವಿತರಣೆ ಕಾರ್ಯಕ್ರಮ ಹಾಗೂ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ತೆಲಂಗಾಣ ಶಾಸಕಿ, ಹೋರಾಟಗಾರ್ತಿ ದನಸಾರಿ ಸೀತಕ್ಕ ಅವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ವತಂತ್ರ್ಯ ಪೂರ್ವದಿಂದಲೂ ಬಡತನ ನಿರ್ಮೂಲನೆ, ಸಮಾನತೆ, ರಾಷ್ಟ್ರೀಯತೆ, ಸರ್ವಾಂಗೀಣ ಅಭಿವೃದ್ದಿ ಕಾಂಗ್ರೆಸ್ ನಿಂದ ಮಾತ್ರ ಸಾದ್ಯವಾಗಿದೆ.   ದೇಶಕ್ಕೆ ಬಿಜೆಪಿ ಅವರ ಕೊಡುಗೆ ಶೂನ್ಯವಾಗಿದೆ ಮುಂಬರುವ ಚುನಾವಣೆಯಲ್ಲಿ ಈ ಸುಳ್ಳಿನ ಬಿಜೆಪಿಯನ್ನು ಸೋಲಿಸಿ ಕೈ‌ಜೊತೆ ಕೈಜೋಡಿಸಬೇಕೆಂದು  ಮನವಿ‌ಮ

ಮುಸ್ಲಿಂರ ಮೀಸಲಾತಿ ರದ್ದು ಮಾಡಿದ ಬೊಮ್ಮಾಯಿ ಕ್ರಮ ಖಂಡನೀಯ-ರಜಾಕ ಉಸ್ತಾದ

Image
  ಮುಸ್ಲಿಂರ ಮೀಸಲಾತಿ ರದ್ದು ಮಾಡಿದ ಬೊಮ್ಮಾಯಿ ಕ್ರಮ ಖಂಡನೀಯ-ರಜಾಕ ಉಸ್ತಾದ ರಾಯಚೂರು,ಮಾ.೨೫-ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮ ಖಂಡನೀಯವೆ0ದು ಅಂಜುಮನ್ ಎ ರಾಯಚೂರು ಸಂಚಾಲಕ ರಜಾಕ ಉಸ್ತಾದ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ  ಮಾತನಾಡಿ ರಾಜ್ಯ ಸರ್ಕಾರ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನ್ಯ ಸಮುದಾಯಕ್ಕೆ ಮೀಸಲಾತಿ ನೀಡುವ ಭರದಲ್ಲಿ ಸಂವಿದಾನದತ್ತವಾದ ಮು ಸ್ಲಿಂ  ಸಮಾಜದ ಮೀಸಲಾತಿ ಕಿತ್ತುಕೊಂಡಿದ್ದಾರೆ0ದ ಅವರು ಬೇರೆ ಸಮುದಾಯಕ್ಕೆ ಮೀಸಲಾತಿ ನೀಡಲು ನಮ್ಮ ವಿರೋಧವಿಲ್ಲ ಆದರೆ ನಮಗೆ ಇದ್ದ ಮೀಸಲಾತಿ ಕಸೆದು ಅನ್ಯ ಸಮಾಜಕ್ಕೆ ನೀಡಿದ್ದು ಎಸ್ಟು ಸರಿ ಎಂದು ಪ್ರಶ್ನಿಸಿದರು. ಮುಸ್ಲಿಂ ಸಮುದಾಯಕ್ಕೆ ಇದ್ದ ಶೇ.೪ ರಷ್ಟು ಮೀಸಲಾತಿ ಕಡಿತವಾಗಿದ್ದು ನಮ್ಮ ಸಮುದಾಯದ ಬಡ ಜನರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದ ಅಮಾನವೀಯ ಮುಖ್ಯಮಂತ್ರಿ ಎಂದು ದೂರಿದ ಅವರು ನಮ್ಮ ಸಮುದಾಯದ ಹಿರಿಯರು ಈ ಬಗ್ಗೆ ಸಭೆ ಸೇರಿ ಕಾನೂನಾತ್ಮಕವಾಗಿ ಇದನ್ನು ನಿಭಾಯಿಸುವ ಬಗ್ಗೆ ಚಿಂತಿಸಲಾಗುತ್ತದೆ ಎಂದರು. ದೇಶದಲ್ಲಿ ಮತ್ತು ರಾಜ್ಯದಲ್ಲಿ ಅನೇಕ ಅಯೋಗ ಗ ಳು, ಸಮಿತಿಗಳು ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ವರದಿ ನೀಡಿವೆ ರಾಜೇಂದ್ರ ಸಚಾರ್ ಸಮಿತಿ, ರಾಜ್ಯದಲ್ಲಿ ಕೆ.ರಹಮಾನ್ ಖಾನ್ ನೇತೃತ್ವದಲ್ಲಿ ಹೈ ಪವರ್ ಕಮಿಟಿ ರಚಿಸಲಾಗಿತ್ತು ಸಂವಿದಾನದಲ್ಲಿ ಮೀಸಲಾತಿ ತಗೆಯಿರಿ ಎಂದು ಹೇಳಿಲ್ಲ ಆದರೂ ರಾಜ್ಯ ಸರ್ಕ

ದೇವದುರ್ಗದಲ್ಲಿ ದುರಾಡಳಿತ ತೊಡೆದು ಹಾಕಲು ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದೆ-ಆದರ್ಶ ನಾಯಕ

Image
  ದೇವದುರ್ಗದಲ್ಲಿ ದುರಾಡಳಿತ ತೊಡೆದು ಹಾಕಲು ಚುನಾವಣೆಯಲ್ಲಿ  ಪಕ್ಷೇತ ರ  ಅಭ್ಯರ್ಥಿಯಾಗಿ ಸ್ಪರ್ದೆ-ಆದರ್ಶ ನಾಯಕ ರಾಯಚೂರು,ಮಾ.೨೫-ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ದುರಾಡಳಿತವಿದ್ದು ಅದನ್ನು ತೊಡೆದು ಹಾಕಲು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ದಿಸುತ್ತೇನೆಂದು ಆದರ್ಶ ನಾಯಕ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಏಷ್ಯಾ ಖಂಡದಲ್ಲೆ ಅತ್ಯಂತ ಹಿಂದುಳಿದ ಪ್ರದೇಶವೆಂಬ ಹಣೆ ಪಟ್ಟಿ ಹೊತ್ತಿರುವ ದೇವದುರ್ಗಕ್ಕೆ ಅತಿ ಹೆಚ್ಚು ಅನುದಾನ ಬರುತ್ತದೆ ಆದರೆ ಅದು ಸಮರ್ಪಕವಾಗಿ ವಿನಿಯೋಗವಾಗುತ್ತಿಲ್ಲ ಅದನ್ನು ಶಾಸಕರು ಸಮರ್ಪವಾಗಿ ತಾಲೂಕಿನ ಅಭಿವೃದ್ದಿ ಮಾಡದೆ ಮತದಾರರಿಗೆ ವಂಚಿಸಿದ್ದಾರೆ ಎಂದು ದೂರಿದರು. ತಾಲೂಕಿನಲ್ಲಿ ಬ್ರಷ್ಟಾಚಾರ,ಇಸ್ಪೀಟು ಇನ್ನಿತರ ಕಾನೂನು ಬಾಹಿರ ಚಟುವಟಿಕೆ ಮಿತಿ ಮೀರಿದ್ದು ಅದನ್ನು ಮಟ್ಟ ಹಾಕಲು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಆದ್ದರಿಂದ ತಾವು ಈ ಬಾರಿ ಪಕ್ಷೇತರರಾಗಿ ಕಣಕ್ಕಿಳೀಯಲಿದ್ದು ಕೆಲವು ಪಕ್ಷಗಳಿಗೆ ಸ್ಪರ್ದಿಸಲು ಕೋರಿದ್ದೇನೆ ಅಲ್ಲಿ ಅವಕಾಶ ಸಿಗದಿದ್ದಲ್ಲಿ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ದಿಸುತ್ತೇನೆಂದರು. ಈ ಸಂದರ್ಭದಲ್ಲಿ ಶಿವಕುಮಾರ್,ಆಂಜಿನೇಯ್ಯ,ಲಕ್ಷಿö್ಮÃಕಾ0ತ,ಲಿ0ಗರೆಡ್ಡಿ ಇದ್ದರು.

ಮತದಾರ ಪ್ರಭು ಬಯಸಿದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ: ಮೂರು ಪಕ್ಷಗಳಿಂದ ಕುಟುಂಬ ರಾಜಕಾರಣ-ಮುಖ್ಯಮಂತ್ರಿ ಚಂದ್ರು

Image
  ಮತದಾರ ಪ್ರಭು ಬಯಸಿದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ: ಮೂರು ಪಕ್ಷಗಳಿಂದ ಕುಟುಂಬ ರಾಜಕಾರಣ- ಮುಖ್ಯಮಂತ್ರಿ ಚಂದ್ರು ರಾಯಚೂರು,ಮಾ.೨೫-ಮತದಾರ ಪ್ರಭು ಬಯಸಿದಲ್ಲಿ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿ ರಾಜ್ಯ ಸಂಚಾಲಕ ಮುಖ್ಯಮಂತ್ರಿ ಚಂದ್ರು ಹೇಳಿದರು. ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ದೇಶದಲ್ಲಿ ಆಮ್ ಆದ್ಮಿ ಪಕ್ಷ ಬದಲಾವಣೆಯ ರಾಜಕಾರಣ ಮಾಡುತ್ತಿದೆ ದೆಹಲಿ ಮುಖ್ಯ ಮಂತ್ರಿ ಅರವಿಂದ ಕೇಜ್ರಿವಾಲ್ ಸತತ ಎರಡೆನೆ ಬಾರಿಗೆ ಮುಖ್ಯಮಂತ್ರಿಯಾಗಿದ್ದು ಪಂಜಾಬದಲ್ಲಿಯೂ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ ಅಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತ ಭಗವಂತ ಮಾನ್ ಸಿಎಂ ಆಗಿದ್ದಾರೆ ಮತದಾರನೆ ಪ್ರಭುವಾಗಿದ್ದು ಆತ ಬಯಸಿದಲ್ಲಿ ರಾಜ್ಯದಲ್ಲಿಯೂ ಅಧಿಕಾರಕ್ಕೆ ಬರುತ್ತೇವೆ ಎಂಬ ಆಶಾಭಾವನೆಯಿದೆ ಎಂದರು. ಆಮ್ ಆದ್ಮಿ ಪಕ್ಷದ ಸರ್ಕಾರವಿರುವ ದೆಹಲಿಯಲ್ಲಿ ಕೇಜ್ರಿವಾಲ್ ಜನರಿಗೆ ಸರ್ಕಾರದಿಂದ ಉಚಿತವಾಗಿ ಅನೇಕ ಕೊಡುಗೆ ನೀಡಿದ್ದಾರೆ ಆದರೂ ಅವರು ಕೊರತೆ ಬಜೆಟ್ ಎದುರಿಸಿಲ್ಲ ದೂರ ದೃಷ್ಟಿ ಮತ್ತು ಭ್ರಷ್ಟಾಚಾರ ರಹಿತ ಆಡಳಿತದಿಂದ ಜನರಿಗೆ ಸೌಲಭ್ಯ ಸಮರ್ಪಕವಾಗಿ ದೊರಕಿಸಿಕೊಡಬಹುದೆಂದು ತೋರಿಸಿದ್ದಾರೆಂದ ಅವರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ದೇಶದ ಜನರನ್ನು ಸಾಲಗಾರರನ್ನಾಗಿ ಮಾಡುತ್ತಿದೆ ಪ್ರತಿಯೊಬ್ಬ ಪ್ರಜೆಯ ತಲೆ ಮೇಲೆಯೂ ಬಡ್ಡಿ ಇದೆ ನಾವೆಲ್ಲರು ಬಡ್ಡಿ ಮಕ್ಕಳು ಎಂದು ಹಾಸ್ಯ ಚ

ಏಮ್ಸ್ ಗಾಗಿ ನನ್ನಿಂದ ಸೋಮವಾರದಿಂದ ಉಪವಾಸ ಸತ್ಯಾಗ್ರಹ - ರವಿ ಬೋಸರಾಜು

Image
  ಏಮ್ಸ್ ಗಾಗಿ ನನ್ನಿಂದ ಸೋಮವಾರದಿಂದ  ಉಪವಾಸ ಸತ್ಯಾಗ್ರಹ  - ರವಿ ಬೋಸರಾಜು .            ರಾಯಚೂರು,ಮಾ.24-  ರಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚುವರಿ ಬೆಡ್ ಗಳಿಲ್ಲದೆ ರೋಗಿಗಳು ನರಳಾಡುತ್ತಿದ್ದಾರೆ ರಾಯಚೂರು ಜಿಲ್ಲೆಯನ್ನು ಕೇಂದ್ರ, ರಾಜ್ಯ ಸರ‍ಕಾರ ಸಂಪೂರ್ಣ ನಿರ್ಲ ಕ್ಷಿಸುತ್ತಿವೆ, ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿ ಈ ಭಾಗದ ಕಲ್ಯಾಣವನ್ನೆ ಮರೆತಿದ್ದಾರೆ. ನಾನು ಸೋಮವಾರ ಏಮ್ಸ್ ಗಾಗಿ ಉಪವಾಸ ಸತ್ಯಾಗ್ರಹ ಕೂರುವೆ  ಎಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ತಿಳಿಸಿದರು‌. ಏಮ್ಸ್ ಹೋರಾಟ ಸಮೀತಿ ನಡೆಸುತ್ತಿರುವ ೩೧೮ ದಿನಗಳ ನಿರಂತರ ಹೋರಾಟ ಹಾಗೂ ಉಪವಾಸ ಸತ್ಯಾಗ್ರಹ ಮೂಲಕ ಮಾಡುತ್ತಿರುವ ರಾಯಚೂರು ಬಂದ್ ಗೆ ಬೆಂಬಲಿಸಿ ಮಾತನಾಡಿ, ರಾಯಚೂರಿನಲ್ಲಿ  ಎರೆಡು ನದಿಗಳು ಹರಿಯುತ್ತವೆ, ವಿಶಾಲವಾದ ಭೂಮಿಯಿದೆ, ಉದ್ಯತ್ ಉತ್ಪಾದನೆ ಇದೆ, ರಾಜ್ಯಕ್ಕೆ ಅನ್ನ, ಚಿನ್ನ ನೀಡುತ್ತದೆ. ಜಿಲ್ಲೆಯಲ್ಲಿ ಏಮ್ಸ್ ಮಂಜೂರಾತಿಗಾಗಿ ಸುಮಾರು ೩೧೬ ದಿನದಿಂದ ನಡೆದ ಹೋರಾಟವನ್ನು ರ‍್ಕಾರ ನಿರ‍್ಲಕ್ಷ ಮಾಡುತ್ತಿದೆ, ರಾಯಚೂರು ಬಂದ್ ಸತ್ಯಾಗ್ರಹವನ್ನು ನಿರ್ಲಕ್ಷ ಮಾಡಿದರೆ ಸರಕಾರಕ್ಕೆ ತಕ್ಕ ಪಾಠ ಕಲಿಸಲಾಗುವದು ಎಂದು ಎಚ್ಚರಿಕೆ ನೀಡಿದರು. ಜಿಲ್ಲೆಯಲ್ಲಿನ ವೈದ್ಯಕೀಯ ಅವ್ಯವಸ್ತೆಯಿಂದ ಜನ ಸಾಮಾನ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು, ಹೈದ್ರಾಬಾದ್ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಸಂಕಷ್ಟ ಅನುಭವಿಸುವದನ್ನು ನಿತ್ಯ ನೋಡುತ್ತಿದ್ದೇವೆ ಎಂದ

ಗಬ್ಬೂರಿಗೆ ಮಾ.26 ರಂದು ಅಮಿತ ಶಾ ಭೇಟಿ ಸಕಲ ಸಿದ್ಧತೆ; ಎರೆಡು ಲಕ್ಷ ಜನ ಸೇರುವ ನಿರೀಕ್ಷೆ: 4283 ಕೋಟಿ ರೂ.ಗಳ 220 ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನೆ- ಶಿವನಗೌಡ ನಾಯಕ

Image
  ಗಬ್ಬೂರಿಗೆ ಮಾ.26 ರಂದು ಅಮಿತ ಶಾ ಭೇಟಿ ಸಕಲ ಸಿದ್ಧತೆ; ಎರೆಡು ಲಕ್ಷ ಜನ ಸೇರುವ ನಿರೀಕ್ಷೆ:  4283 ಕೋಟಿ ರೂ.ಗಳ 220 ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನೆ- ಶಿವನಗೌಡ ನಾಯಕ ರಾಯಚೂರು,ಮಾ.೨೪-ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮಕ್ಕೆ ಮಾ.26 ರಂದು ಕೇಂದ್ರ ಗೃಹ ಸಚಿವ ಆಮಿತ್ ಶಾ ಹಾಗೂ ರಾಜ್ಯದ ಸಿಎಂ, ಮಾಜಿ ಸಿಎಂ ಸೇರಿದಂತೆ ಕೇಂದ್ರದ ಮತ್ತು ರಾಜ್ಯದ ಸಚಿವರು ಆಗಮಿಸುತ್ತಿದ್ದು 4283 ಕೋಟಿ ರೂ.ಗಳ 220 ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನೆ ನೆರವೇರಿಸಲಾಗುತ್ತಿದೆ ಎಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು. ಅವರಿಂದು ಗಬ್ಬೂರಿನಲ್ಲಿ ಕಾರ್ಯಕ್ರಮ ಸಿದ್ದತೆ ಪರಿಶೀಲನೆ ನಂತರ ಸುದ್ದಿಗೋಷ್ಟಿಯಲ್ಲಿ  ಕಾಮಗಾರಿ ಪಟ್ಟಿಯಿರುವ "ನಿಮ್ಮ ಒಂದು ಮತದಿಂದ" ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ ಅರ್ಜುನನ ಮಗ ಬಬ್ರುವಾಹನ ನಡೆದಾಡಿದ ಪುಣ್ಯ ಭೂಮಿಯಾದ ಗಬ್ಬೂರಿನಲ್ಲಿ ದೇಶದ ಗೃಹ ಮಂತ್ರಿ ಅಮಿತ್ ಶಾ ರವರು ಅಂದು ಮಧ್ಯಾಹ್ನ ಆಗಮಿಸಲಿದ್ದು ಅವರೊಂದಿಗೆ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ, ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ಸಚಿವ ಪ್ರಹ್ಲಾದ ಜೋಷಿ, ಸಚಿವ ವಿ.ಸೋಮಣ್ಣ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆಂದರು. ಏಷ್ಯಾ ಖಂಡದಲ್ಲೆ ಅತ್ಯಂತ ಹಿಂದುಳಿದ ತಾಲೂಕು ಎಂಬ ಕುಖ್ಯಾತಿಗೆ ಗುರಿಯಾಗಿದ್ದ ದೇವದುರ್ಗ ತಾಲೂಕಿನ ಸಮಗ್ರ ಅಭಿವೃದ್ದಿಗೆ ನಾನು ಪಣತೊಟ್ಟಿದ್ದು ಸ

ಹಣಮಂತ ಜೋಗಿ ನಿಧನ

Image
  ಹಣಮಂತ ಜೋಗಿ ನಿಧನ ರಾಯಚೂರು,ಮಾ.23- ತಾಲ್ಲೂಕಿನ ಗುಂಜಹಳ್ಳಿ ಗ್ರಾಮದ ನಿವಾಸಿ ಹಣಮಂತ ಜೋಗಿ (60) ಬುಧವಾರ ನಿಧನರಾದರು.‌‌  ಮೃತರು ಪತ್ನಿ, ಒಬ್ಬ ಪುತ್ರ‍ ಮೂವರು ಪುತ್ರಿಯರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  ಗುಂಜಹಳ್ಳಿ ಗ್ರಾಮದ ರುದ್ರಭೂಮಿಯಲ್ಲಿ‌ ಗುರುವಾರ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.‌

ಮಾ.25 ರಂದು ಶ್ರೀರಾಮೋತ್ಸವ ಅಂಗವಾಗಿ ಬೃಹತ್ ಶೋಭಾ ಯಾತ್ರೆ-ಶರಣಬಸವ

Image
  ಮಾ.25 ರಂದು ಶ್ರೀರಾಮೋತ್ಸವ ಅಂಗವಾಗಿ ಬೃಹತ್ ಶೋಭಾ ಯಾತ್ರೆ-ಶರಣಬಸವ ರಾಯಚೂರು,ಮಾ.೨೩-ಶ್ರೀರಾಮೋತ್ಸವ ಅಂಗವಾಗಿ ನಗರದಲ್ಲಿ ಮಾ.೨೫ ರಂದು ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಜರಂಗದಳ ನಗರ ಸಂಚಾಲಕ ಶರಣಬಸವ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ವಿಶ್ವ ಹಿಂದೂ ಪರಿಷದ್ ಹಾಘೂ ಬಜರಂಗದಳ ಸಂಯುಕ್ತಾಶ್ರಯದಲ್ಲಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದ್ದು ಅಂದು ಬೆಳಿಗ್ಗೆ ೧೦ ಗಂಟೆಗೆ ಚಂದ್ರಮೌಳೇಶ್ವರ ವೃತ್ತದಿಂದ ಪ್ರಾರಂಭವಾಗಿ ನಗರ ಪ್ರಮುಖ ವೃತ್ತಗಳಾದ ಸರ್ದಾರ್ ವಲ್ಲಭಭಾಯ್ ವೃತ್ತ, ಪಟೇಲ ವೃತ್ತ, ನೇತಾಜಿ ವೃತ್ತ, ಕಲ್ಲಾನೆ ವೃತ್ತ, ಭಗತಸಿಂಗ ವೃತ್ತ, ಮಾರ್ಗವಾಗಿ ಕೋಟೆಯ ಮುಂಗ್ಲಿ ಪ್ರಾಣದೇವರ ದೇವಸ್ಥಾನಕ್ಕೆ ತಲುಪಲಿದ್ದು ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಕಿಲ್ಲೆ ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಶ್ರೀಗಳು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಬಜರಂಗದಳ ಜಿಲ್ಲಾ ಸಂಯೋಜಕ ಮಲ್ಲಿಕಾರ್ಜುನ ಹೆಚ್.ಕೆ, ವಿಹೆಚ್‌ಪಿ ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ್ ಹೂಗಾರ್, ಬಜರಂಗದಳ ಜಿಲ್ಲಾ ಸಹ ಸಂಯೋಜಕ ರವಿ ಕುಮಾರ್ ಆಗಮಿಸಲಿದ್ದಾರೆಂದರು. ಶೋಭಾಯಾತ್ರೆಯುದ್ದಕ್ಕು ಡಿಜೆ ಸಂಗೀತ ಮೊಳಗಲಿದ್ದು ಯಾವುದೆ ಅಹಿತಕರ ಘಟನೆಗೆ ಅಸ್ಪದ ನೀಡದಂತೆ ಕಾರ್ಯಕ್ರಮ ಅಯೋಜಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ನಾಗರಾಜ, ಶ್ರೀಕಾಂತ್,ಶಿವರಾಜ ಇದ್ದರು.

ಏ.14 ರಂದು ರಾಜ್ಯಾದ್ಯಂತ ಖ್ಯಾತ ನಟ ಸೋನು ಸೂದ್ ಅಭಿನಯದ ಶ್ರೀಮಂತ ಚಿತ್ರ ಬಿಡುಗಡೆ-ಶಿವು

Image
ಏ.14  ರಂದು  ರಾಜ್ಯಾದ್ಯಂತ ಖ್ಯಾತ ನಟ ಸೋನು ಸೂದ್ ಅಭಿನಯದ ಶ್ರೀಮಂತ ಚಿತ್ರ ಬಿಡುಗಡೆ-ಶಿವು ರಾಯಚೂರು,ಮಾ.೨೩- ಖ್ಯಾತ ನಟ ಸೋನು ಸೂದ್ ಅಭಿನಯದ ಶ್ರೀಮಂತ ಚಿತ್ರವು ಏ.14 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಸಹ ನಿರ್ದೇಶಕ  ಶಿವು  ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಗೋಲ್ಡನ್ ರೇನ್ ಮೂವಿಸ್ ಬ್ಯಾನರ್ ಅಡಿಯಲ್ಲಿ ರೈತನ ಸಮಸ್ಯೆಯನ್ನೆ ಮುಖ್ಯ ವಿಷಯವಾಗಿಟ್ಟುಕೊಂಡು ಚಿತ್ರವನ್ನು ನಿರ್ಮಾಣ ಮಾಡಲಾಗಿದ್ದು ಮುಖ್ಯ ಭೂಮಿಕೆಯಲ್ಲಿ ಹಿಂದಿ ಚಿತ್ರ ನಟ ಸೋನು ಸೂದ್ ನಟಿಸಲಿದ್ದು ಚಿತ್ರದಲ್ಲಿ ಕ್ರಾಂತಿಯವರು ನಟಸಿದ್ದು ಚಿತ್ರದ ನಾಯಕಿಯರಾಗಿ ಮುಂಬೈ ಬೆಡಗಿ ವೈಷ್ಣವಿ ಪಟವರ್ಧನ್, ವೈಷ್ಣವಿ ಚಂದ್ರನ್ ಮೆನನ್ ಸೇರಿದಂತೆ ಹಿರಿಯ ನಟ ರಮೇಶ ಭಟ್, ಚರಣರಾಜ್,ಕಲ್ಯಾಣಿ, ರಾಜು ತಾಳಿಕೋಟಿ,ಬ್ಯಾಂಕ್ ಮಂಜಣ್ಣ ಮತ್ತಿತರರು ನಟಿಸಿದ್ದಾರೆಂದರು. ಡಾ.ಹ0ಸಲೇಖ ಸಂಗೀತ ಸಾಹಿತ್ಯ ಚಿತ್ರಕ್ಕಿದ್ದು ಟಿ.ಕೆ.ರಮೇಶ, ಜಿ.ನಾರಾಯಣಪ್ಪ, ವಿ.ಸಂಜಯಬಾಬು ನಿರ್ಮಾಪಕರಾಗಿದ್ದಾರೆಂದ ಅವರು ಚಿತ್ರವು ದೊಡ್ಡ ಬಜೆಟ್‌ನಲ್ಲಿ ನಿರ್ಮೀಸಲಾಗಿದ್ದು ಬಹುತಾರಾಗಣ ಹೊಂದಿದ್ದು ಚಿತ್ರಕ್ಕೆ ನಾಡಿನ ಪ್ರೇಕ್ಷಕರು ಪ್ರೋತ್ಸಹಿಸಬೇಕೆಂದರು. ಈ ಸಂದರ್ಭದಲ್ಲಿ ಚಿತ್ರ ತಂಡದ ಸತೀಶ ಪಾಟೀಲ, ಮಹೇಶ, ರುಕ್ಮಂಗದ,  ಇತರರು ಇದ್ದರು.

ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ: ನಗರ ಸೇರಿದಂತೆ ವಿವಿಧೆಡೆ ಅಪಾರ ಮೊತ್ತದ ಅಕ್ರಮ ಆಸ್ತಿ ಸಂಪಾದನೆ- ಎಂ.ವಿರುಪಾಕ್ಷಿ

Image
  ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ: ನಗರ ಸೇರಿದಂತೆ ವಿವಿಧೆಡೆ    ಅಪಾರ ಮೊತ್ತದ ಅಕ್ರಮ ಆಸ್ತಿ ಸಂಪಾದನೆ- ಎಂ.ವಿರುಪಾಕ್ಷಿ ರಾಯಚೂರು,ಮಾ.೨೩-ನಗರ ಸೇರಿದಂತೆ   ವಿವಿಧೆಡೆ  ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕರು ಅಪಾರ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿದ್ದು ಅವರ ವಿರುದ್ಧ ಲೋಕಾಯುಕ್ತ ದೂರು ಮತ್ತು ಜನಪ್ರತಿನಿಧಿ ನ್ಯಾಯಾಲಯದಲ್ಲಿ ಪ್ರಕರಣ ಹೂಡಲಾಗುತ್ತದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಗಂಭೀರ ಅರೋಪ ಮಾಡಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ನಾನು ಬ್ರಷ್ಠಾಚಾರಕ್ಕೆ ಆಸ್ಪದ ನೀಡುವುದಿಲ್ಲವೆಂದ ಹೇಳುತ್ತಾರೆ ಆದರೆ ಅವರ ಪಕ್ಷದ ಶಾಸಕರು ಇಲ್ಲಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಸಂಪಾದಿಸಿದ್ದು ಅವರ ಮೇಲೆ ಏನು ಕ್ರಮ ವಾಗಿದೆ ಎಂದು ಕೇಳಿದ ಅವರು ಗಬ್ಬೂರಿಗೆ ಕೇಂದ್ರ ಗೃಹ ಸಚಿವ ಅಮಿತ ಶಾ ಬರುತ್ತಿದ್ದಾರೆ ಅವರು ಇದಕ್ಕೆ ಉತ್ತರಿಸಬೇಕೆಂದರು. ನಮ್ಮ ದೇಶದ ಸಂಪತ್ತನ್ನು ಮೋದಿಯವರು ಅದಾನಿಗೆ ಅರ್ಪಿಸಿದ್ದಾರೆಂದ ಅರೋಪಿಸಿದ ಅವರು ಇತ್ತ ಶಿವನಗೌಡ ನಾಯಕರು ಬ್ರಷ್ಟಾಚಾರ ಮಾಡಿ ಕೋಟ್ಯಾಂತರ ಸಂಪತ್ತು ಗಳಿಸಿದ್ದು ಅವರು ತಾ.ಪಂ ಸದಸ್ಯರಾಗಿದ್ದಾಗಿನ ಆಸ್ತಿ ಮತ್ತು ಈಗಿನ ಆಸ್ತಿ ತುಲನೆ ಮಾಡಿದರೆ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ ಎಂದರು. ಕೆ.ಶಿವನಗೌಡ ನಾಯಕರು ಬನಹಟ್ಟಿಯಲ್ಲಿ ವಿಶ್ವನಾಥ ಬನಹಟ್ಟಿ ಹೆಸರಲ್ಲಿ ಸಂಗಯ್ಯ ಮುತ್ಯ ಶುಗರ‍್ಸ್  ಹೆಸರಲ್

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ: ಮಹಿಳೆಯರು ಸಮಾಜದಲ್ಲಿ ಇನ್ನು ಹೆಚ್ಚಿನ ಯಶಸ್ಸು ಕಾಣಲಿ- ಶಾಸಕ ಡಾ.ಎಸ್.ಶಿವರಾಜ ಪಾಟೀಲ್

Image
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ: ಮಹಿಳೆಯರು ಸಮಾಜದಲ್ಲಿ ಹೆಚ್ಚಿನ ಯಶಸ್ಸು ಕಾಣಲಿ- ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ರಾಯಚೂರು,ಮಾ.೨೧- ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಎಲ್ಲಾ ವಲಯಗಳಲ್ಲೂ ಕಾರ್ಯ ನಿರ್ವಹಿಸುತ್ತಾ ಯಶಸ್ವಿ ಬದುಕನ್ನು ನಡೆಸುತ್ತಿದ್ದು, ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆಯರ ಪಾತ್ರ ಅಪಾರವಾದದ್ದು ಎಂದು ನಗರ ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಅವರು ಹೇಳಿದರು. ಅವರಿಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ  ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಸಿ ಮಾತನಾಡಿದರು. ಕೋವಿಡ್ ಸಂದರ್ಭದಲ್ಲಿ ರಾಜ್ಯದ ಅನೇಕ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ ಜೀವವನ್ನು ಲೆಕ್ಕಿಸದೇ ಕಾರ್ಯ ನಿರ್ವಹಿಸಿದ್ದಾರೆ. ಅಂತಹ ದಿಟ್ಟತನ ಹಾಗೂ ದೈರ್ಯ ಕೇವಲ ಮಹಿಳೆಯರಿಗೆ ಮಾತ್ರ ಬರಲು ಸಾಧ್ಯ ಎಂದರು.  ಮಹಿಳೆಯರು ಸ್ವಾವಲಂಬಿ ಜೀವನವನ್ನು ನಡೆಸುವ ನಿಟ್ಟಿನಲ್ಲಿ ಸರ್ಕಾರದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಮಹೀಲೆಯರ ಸ್ವಸಹಾಯ ಗುಮ ಗುಂಪುಗಳಿಗೆ ಧನಸಹಾಯವನ್ನು ಮಾಡಿದೆ. ಇದರಿಂದ ಎಷ್ಟೋ ಮಹಿಳೆಯರು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಅನುಕೂಲವಾಗಿದೆ. ಇದೇ ವೇಳೆ ನಗರಸಭೆ ಅಧ್

ಪೂರ್ಣಿಮಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಉದ್ಘಾಟನೆ: ವೈದ್ಯಕೀಯ ಚಿಕಿತ್ಸೆಯ ಮೂಲ ಆಯುರ್ವೇದ- ಶ್ರೀ ಸುಬುಧೇಂದ್ರತೀರ್ಥರು.

Image
  ಪೂರ್ಣಿಮಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಉದ್ಘಾಟನೆ:                             ವೈದ್ಯಕೀಯ ಚಿಕಿತ್ಸೆಯ ಮೂಲ ಆಯುರ್ವೇದ- ಶ್ರೀ ಸುಬುಧೇಂದ್ರತೀರ್ಥರು . ರಾಯಚೂರು,ಮಾ. 21-ವೈದ್ಯಕೀಯ ಚಿಕಿತ್ಸೆಯ ಮೂಲ ಆಯುರ್ವೇವೆಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ  ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರು ಹೇಳಿದರು.  ಅವರು ಸೋಮವಾರ ಪೂರ್ಣಿಮಾ ಶಿಕ್ಷಣ ಸಂಸ್ಥೆಯಿಂದ ಸಂಚಾಲಿತ, ಪೂರ್ಣಿಮಾ ಆಯುರ್ವೇದ ಮೆಡಿಕಲ್ ಆಸ್ಪತ್ರೆ ಮತ್ತು ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಇವತ್ತು ವೈದ್ಯಕೀಯ ಪ್ರಪಂಚದಲ್ಲಿ ಅನೇಕ ಬಗೆಯ ವೈದ್ಯಕೀಯ ವಿಭಾಗಗಳು ಇವೆ ಆಂಗ್ಲ ಮಾಧ್ಯಮದ ಅಲೋಪತಿ ಮೆಡಿಸಿನ್,  ಯುನಾನಿ, ಹೋಮಿಯೋಪತಿ ಇತ್ಯಾದಿಗಳೆಲ್ಲವೂ ಇದ್ದಾವೆ. ಆದರೆ ಇವಕ್ಕೆಲ್ಲ ಮೂಲ ಆಯುರ್ವೇದ. ಇಂದಿನ ಆಧುನಿಕ ಯುಗದಲ್ಲಿ ಯಂತ್ರಗಳ ಮೇಲೆ ತುಂಬಾ ಅವಲಂಬಿತವಾಗಿದ್ದಾರೆ. ಆದರೆ ಹಿಂದಿನ ಕಾಲದಲ್ಲಿ ಆಯುರ್ವೇದ ಅಧ್ಯಯನ ಮಾಡುವ ಬಹು ಮುಖ್ಯವಾದ ಗ್ರಂಥಗಳೆಂದರೆ ಮಾಧವ ನಿಧಾನ ಅಂದರೆ ರೋಗಗಳನ್ನು  ಕಂಡುಹಿಡಿಯುವುದು,  ಸೂತ್ರ ಸ್ಥಾನ ಇದು ಪ್ರಥಮ ಭಾಗವಾಗಿದ್ದು ವಾಗ್ಭಟರಿಂದ ರಚಿತವಾಗಿತ್ತು, ಶುಶ್ರೂತ ಸಂಹಿತೆ ದೇಹದ ಭಾಗಗಳನ್ನು ಅಧ್ಯಯನ ಮಾಡುವುದು ಮತ್ತು ಚರಕ ಸಂಹಿತೆ ಚಿಕಿತ್ಸೆಯನ್ನು ನೀಡುವುದು ಇತ್ಯಾದಿಗಳಿಂದ ಆಯುರ್ವೇದವನ್ನು ಮಧ್ಯಾಹ್ನ ಮಾಡಬಹುದಾಗಿದೆ. ಹೀಗೆ ಇವುಗಳನ್ನೆಲ್ಲ ಉತ್ತಮ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ರಾಮಾಂತರ ಕ್ಷೇತ್ರದ ಸಮಗ್ರ ನೀರಾವರಿ - ಬಿ.ವೈ.ವಿಜಯೇಂದ್ರ

Image
  ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ರಾಮಾಂತರ ಕ್ಷೇತ್ರಕ್ಕೆ ಸಮಗ್ರ ನೀರಾವರಿ - ಬಿ.ವೈ.ವಿಜಯೇಂದ್ರ ರಾಯಚೂರು,ಮಾ.20-  ಭಾರತೀಯ ಜನತಾ ಪಾರ್ಟಿ 2023ರ ವಿಧಾನಸಭೆ ಚುನಾವಣೆಯಲ್ಲಿ  ಅಧಿಕಾರಕ್ಕೆ ಬಂದರೆ ರಾಯಚೂರು ಗ್ರಾಮಾಂತರದ ಕ್ಷೇತ್ರದ ಸಮಗ್ರ ನೀರಾವರಿ ಮಾಡುವ ಗುರಿಯನ್ನು ಹೊಂದಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಭರವಸೆಯನ್ನು ನೀಡಿದರು. ಅವರಿಂದು ರಾಯಚೂರು ಗ್ರಾಮೀಣ ಕ್ಷೇತ್ರಕ  ಮಟಮಾರಿ ಗ್ರಾಮದಲ್ಲಿ ಎಸ್.ಸಿ ಮೋರ್ಚಾದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ತಮಟೆ ಬಾರಿಸೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.     ಬಿಜೆಪಿ ಎಂದು ದಲಿತ ವಿರೋಧಿಯಲ್ಲ ಈ ಸಮುದಾಯಕ್ಕೆ ಅಧಿಕವಾಗಿ ಸ್ಥಾನಮಾನವನ್ನು ಒದಗಿಸಿದ್ದು ಬಿಜೆಪಿ ಮಾತ್ರ ಕಾಂಗ್ರೆಸ್ ಕೇವಲ ಮತಬ್ಯಾಂಕ್ ಆಗಿ ಸಮುದಾಯವನ್ನು ಬಳಸಿಕೊಂಡಿದೆ ಹೊರತು ಅಭಿವೃದ್ಧಿಯನ್ನೇ ಮಾಡದೆ ನಿರ್ಲಕ್ಷ್ಯವಹಿಸಿದೆ ಎಂದರು.  ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ವಿಶೇಷ ಪ್ರೀತಿಯನ್ನು ಹೊಂದಿದ್ದು ಅಪಾರ ಕಾಳಜಿಯನ್ನು ಹೊಂದಿದ್ದರು ಎಂದರು‌.  ಎಸ್.ಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಚಲುವಾದಿ ನಾರಾಯಣಸ್ವಾಮಿಯವರು ಕಾಂಗ್ರೆಸ್ ನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷದ ಅಸ್ಥಿತ್ವವೇ ಗ್ಯಾರಂಟಿ ಇಲ್ಲ. ಇನ್ನು ಜನಕ್ಕೇನು ಗ್ಯಾರಂಟಿ  ಕಾಡ್೯ ಕೊಡ್ತಾರೋ ಎಂದು ಲೇವಡಿ ಮಾಡಿದರು‌. ಈ ವೇಳೆ ಮಾತನಾಡಿದ ತಿಪ್ಪರಾಜ್ ಹವಾಲ್ದಾರ್ ಅವರು ಕಳ