Posts

Showing posts from May, 2024

ಜೂ.4 ರಂದು ಲೋಕಸಭಾ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ಧತೆ: 161 ಸುತ್ತುಗಳಲ್ಲಿ ಮತ ಎಣಿಕೆ- ಜಿಲ್ಲಾ ಚುನಾವಣಾಧಿಕಾರಿ.

Image
  ಜೂ.4 ರಂದು ಲೋಕಸಭಾ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ಧತೆ:                                             161 ಸುತ್ತುಗಳಲ್ಲಿ ಮತ ಎಣಿಕೆ - ಜಿಲ್ಲಾ ಚುನಾವಣಾಧಿಕಾರಿ.                    ರಾಯಚೂರು,ಮೇ.31- ರಾಯಚೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಯನ್ನು ಜೂ.4 ರಂದು ನಡೆಸಲಾಗುತ್ತಿದ್ದು ಎಂಟು ವಿಧಾನಸಭಾ ಕ್ಷೇತ್ರಗಳ ಒಟ್ಟು 161 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಎಲ್.ಚಂದ್ರ ಶೇಖರ ನಾಯಕ ಹೇಳಿದರು.                           ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಅಂದು ನಗರದ ಎಸ್ಆರ್ ಪಿಎಸ್ ಪಿಯು ಕಾಲೇಜಿನಲ್ಲಿ ಬೆಳಿಗ್ಗೆ 7ಕ್ಕೆ ಮತಯಂತ್ರಗಳ ಭದ್ರತಾ ಕೊಠಡಿ ತೆರೆಯಲಾಗುತ್ತದೆ ನಂತರ 8 ಗಂಟೆಯಿಂದ ಮತಯಂತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.                             ಸುರಪುರ, ಶಹಾಪುರ,ಯಾದಗಿರಿ ಮತ್ತು ದೇವದುರ್ಗ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ಎಲ್ ವಿ ಡಿ ಕಾಲೇಜಿನಲ್ಲಿ ಮಾಡಲಾಗುತ್ತಿದೆ ಉಳಿದಂತೆ ರಾಯಚೂರು, ರಾಯಚೂರು ಗ್ರಾಮೀಣ, ಮಾನ್ವಿ, ಲಿಂಗಸ್ಗೂರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ಎಸ್ ಆರ್ ಪಿ ಎಸ್ ಪಿಯು ಕಾಲೇಜಿನಲ್ಲಿ ಮಾಡಲಾಗುತ್ತಿದೆ ಎಂದರು.                        ಒಂದು ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 14 ಟೇಬಲ್ ಗಳು ವ್ಯವಸ್ಥೆ ಮಾಡಲಾಗಿದೆ ಎಂದರು.ಇಟಿಪಿಬಿಎಸ

ಎಪಿಎಂಸಿ ಹಣ್ಣಿನ ಮಾರುಕಟ್ಟೆಗೆ ಹಣ್ಣಿನ ಮಂಡಿ ಸ್ಥಳಾಂತರಕ್ಕೆ ಅಂಬಾಜಿರಾವ್ ಒತ್ತಾಯ

Image
  ಎಪಿಎಂಸಿ ಹಣ್ಣಿನ ಮಾರುಕಟ್ಟೆಗೆ ಹಣ್ಣಿನ ಮಂಡಿ ಸ್ಥಳಾಂತರಕ್ಕೆ ಅಂಬಾಜಿರಾವ್ ಒತ್ತಾಯ                     ರಾಯಚೂರು,ಮೇ.31- ನಗರದ ತೀನ್ ಕಂದಿಲ್ ಹತ್ತಿರದ ಮಚ್ಚಿ ಬಜಾರ್‌ನಲ್ಲಿ ಹಲವಾರು ಹಣ್ಣಿನ ಮಂಡಿಗಳು ಇದ್ದು, ತೀನ್‌ಕಂದಿಲ್ ರಾಯಚೂರು ಹೃದಯಭಾಗವಾಗಿದ್ದು ನಿರಂತರ ಜನ ಜಂಗುಳಿಯಿಂದ ಕೂಡಿದ ಪ್ರದೇಶವಾಗಿರುತ್ತದೆ. ಈ ಹಣ್ಣಿನ ಮಂಡಿಗಳಿಗೆ ಈಗಾಗಲೇ ದಿನಾಂಕ ೨೯-೦೧-೨೦೨೩ ರಂದು ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಹಣ್ಣಿನ ಮಂಡಿಗಳಿಗಾಗಿಯೇ ಪ್ರತ್ಯೇಕವಾಗಿ ೧೬ ಮಳಿಗೆಗಳನ್ನು ನೀಡಿ, ಎ.ಪಿ.ಎಂ.ಸಿ. ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಮಾನ್ಯ ಶಾಸಕರು ರಾಯಚೂರು ನಗರ ಹಾಗೂ ಜನಪ್ರತಿನಿಧಿಗಳು, ಹಣ್ಣಿನ ಮಂಡಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಎ.ಪಿ.ಎಂ.ಸಿ. ನಿಗಧಿಪಡಿಸಿದ ಬ್ಲಾಕ್ ನಂ-ಡಿ ಹತ್ತಿ ಮಾರುಕಟ್ಟೆ ಪ್ರಾಂಗಣದಲ್ಲಿ ಮಳಿಗೆಗಳನ್ನು ಉದ್ಘಾಟನೆ ಮಾಡಲಾಗಿರುತ್ತದೆ ಹಾಗೂ ಹಣ್ಣಿನ ಮಂಡಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸ್ವ-ಇಚ್ಛೆಯಿಂದ ಹಣ್ಣಿನ ಮಂಡಿಗಳನ್ನು ಸ್ಥಳಾಂತರ ಮಾಡಲು ಒಪ್ಪಿಕೊಂಡಿರುತ್ತಾರೆ. ಆದರೆರೆಯ ಇಂದಿನವರೆಗೂ ಮಂಡಿಗಳು ಸ್ಥಳಾಂತರ ಆಗಿರುವುದಿಲ್ಲ. ಈ ಮಂಡಿಗಳು ಸ್ಥಳಾಂತರ ಆಗದೇ ಇರುವ ಕಾರಣ ಅಂಬುಲೆನ್ಸ್ ಹಾಗೂ ಆಸ್ಪತ್ರೆಗಳಿಗೆ ಸಾರ್ವಜನಿಕರು ತಿರುಗಾಡಲು, ವಿದ್ಯಾರ್ಥಿಗಳಿಗೆ ತಿರುಗಾಡಲು, ಸಿಟಿ ಬಸ್‌ಗಳು ಈ ಮಾರ್ಗದಿಂದ ತಿರುಗಾಡುವುದಕ್ಕೆ ತುಂಬಾ   ತೊಂದರೆ ಉಂಟಾಗಿರುತ್ತದೆ.   ಶಾಲಾ ಕಾಲೇಜುಗಳ

ಅಕೌಂಟ್ ಸೂಪರಿಂಟೆಂಡೆಂಟ ದಿ. ಚಂದ್ರಶೇಖರ ರವರ ನಿವಾಸಕ್ಕೆ ಗೃಹ ಸಚಿವ ಡಾ. ಪರಮೇಶ್ವರ್ ಹಾಗೂ ಶಾಸಕ ದದ್ದಲ್ ಭೇಟಿ

Image
ಅಕೌಂಟ್ ಸೂಪರಿಂಟೆಂಡೆಂಟ ದಿ. ಚಂದ್ರಶೇಖರ ರವರ ನಿವಾಸಕ್ಕೆ ಗೃಹ ಸಚಿವ ಡಾ. ಪರಮೇಶ್ವರ್  ಹಾಗೂ ಶಾಸಕ ದದ್ದಲ್  ಭೇಟಿ                                ರಾಯಚೂರು,ಮೇ.30- ಶಿವಮೊಗ್ಗ ದಲ್ಲಿ ಕರ್ನಾಟಕ ಸರ್ಕಾರದ ಗೃಹ ಸಚಿವರಾದ  ಡಾ ಪರಮೇಶ್ವರ್  ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ  ಬಸನಗೌಡ ದದ್ದಲ್ ರವರು ಇತ್ತೀಚೆಗೆ ನಿಧಾನರಾಧ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟ್ ಸೂಪರಿಂಟೆಂಡೆಂಟ ದಿವಂಗತ ಚಂದ್ರಶೇಖರ ರವರ ನಿವಾಸಕ್ಕೆ  ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ತಿಳಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು, ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.

ಆಟೋ ಚಾಲಕನಿಂದ ಸಂಚಾರಿ ಅರವಟಿಗೆ: ಕಾಯಕದೊಂದಿಗೆ ನೀರಿನ ದಾಹ ತೀರಿಸುವ ಫಿರೋಜ್

Image
  ಆಟೋ ಚಾಲಕನಿಂದ ಸಂಚಾರಿ ಅರವಟಿಗೆ:              ಕಾಯಕದೊಂದಿಗೆ ನೀರಿನ ದಾಹ ತೀರಿಸುವ ಫಿರೋಜ್ ರಾಯಚೂರು,ಮೇ.28- ಬಿರುಬಿಸಿಲಿನ ಬೇಸಿಗೆ ಶುರುವಾದರೆ ನಗರ, ಪಟ್ಟಣ ಪ್ರದೇಶದಲ್ಲಿ ಸಂಘ-ಸಂಸ್ಥೆಗಳು ಜನನೀಬಿಡ ಪ್ರದೇಶದಲ್ಲಿ ನೀರಿನ ಅರವಟ್ಟಿಗೆ ಸ್ಥಾಪಿಸುವ ಬಾಯಿರಿಕೆಯಾದವರಿಗೆ ನೀರಿನ ದಾಹ ತಿರಿಸುವುದುನ್ನು ನಾವು ನೋಡಿದ್ದೇವೆ.  ಆದರೆ ರಾಯಚೂರಿನ ಆಟೋ ಡ್ರೈವರ್ ತನ್ನ ನಿತ್ಯ ದುಡಿಮೆಯೊಂದಿಗೆ ಸ್ವಂತ ದುಡ್ಡಿನಲ್ಲಿ ನೀರಿನ ದಾಹವನ್ನು ತೀರಿಸುತ್ತಿದ್ದಾನೆ. ನಗರದಲ್ಲಿ ಆಟೋ ಡ್ರೈವರ್ ಒಬ್ಬರು ನಿತ್ಯ ದುಡಿಮೆಗಾಗಿ ನಗರದಲ್ಲಿ ಪ್ರಯಾಣಿಕರನ್ನು ಅವರ ಸ್ಥಳಕ್ಕೆ ಕರೆದುಕೊಂಡು ಹೋಗುವುದು ಬರುವುದು ಮಾಡುತ್ತ ಈ ಸಮಯದಲ್ಲಿ ಪ್ರಯಾಣಿಕರಿಗೆ ಕಾಯುತ್ತಿರುವಾಗ ರಸ್ತೆಯಲ್ಲಿ ಓಡಾಡುವ ಜನರಿಗೆ ಕೆಲವೊಂದು ಪ್ರದೇಶ ಉಚಿತವಾಗಿ ನೀರು ಸಿಗುವುದಿಲ್ಲ, ಅಂಗಡಿಯಲ್ಲಿ ಖರೀದಿಸಿ ಸೇವಿಸಬೇಕಾಗುತ್ತದೆ. ಆದರೆ  ತಾನು ನಿಂತ ಜಾಗದಲ್ಲಿ ನೀರಿನ ದಾಹವಾದವರಿಗೆ ನೀರಿನ ಸೇವೆ ಒದಗಿಸಬೇಕು ಎಂದು ಸಾವಿರಾರು ವ್ಯಯ ಮಾಡಿ, ಆಟೋಕ್ಕೆ ನೀರಿನ ಕ್ಯಾನ್ ಆಳವಡಿಸಿ, ಫಿಲ್ಟರ್ ನೀರನ್ನು ತುಂಬಿ ನೀರಿನ ದಾಹವಾದರಿಗೆ ನೀರು ಸೇವನೆ ಅವಕಾಶ ಮಾಡಿಕೊಟ್ಟಿದ್ದಾನೆ. ಹೌದು, ನಗರದ ಟಿಪ್ಪುಸುಲ್ತಾನ್ ರಸ್ತೆ ಹತ್ತಿರ ಬರುವ ಲಾಲ್ ಪಹಾಡಿ ನಿವಾಸಿಯಾಗಿರುವ ಎಂ.ಡಿ.ಫಿರೋಜ್ ಬೇಸಿಗೆ ಆರಂಭವಾದಾಗಿನಿಂದ ನೀರಿನ ಸೇವೆ ಮಾಡುತ್ತಿದ್ದಾನೆ. ಆಟೋ ಓಡಿಸಿ ಬದುಕು ನಡೆಸುವ ಈತ ದಿನಂಪ್ರತಿ ನಗರದಲ್ಲಿ ಸ

ಪಂಡಿತ ತಾರಾನಾಥ ಸಾಂಸ್ಕೃತಿಕ ವೇದಿಕೆ(ರಿ) ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಶನ್ (ಎಐಡಿಎಸ್‌ಒ) : ಮಕ್ಕಳ ಬೇಸಿಗೆ ಶಿಬಿರ ಸಮಾರೋಪ

Image
ಪಂಡಿತ ತಾರಾನಾಥ ಸಾಂಸ್ಕೃತಿಕ ವೇದಿಕೆ(ರಿ) ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಶನ್ (ಎಐಡಿಎಸ್‌ಒ) : ಮಕ್ಕಳ ಬೇಸಿಗೆ ಶಿಬಿರ ಸಮಾರೋಪ     ರಾಯಚೂರು,ಮೇ.28- ಪಂಡಿತ ತಾರಾನಾಥ ಸಾಂಸ್ಕೃತಿಕ ವೇದಿಕೆ(ರಿ) ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಶನ್ (ಎಐಡಿಎಸ್‌ಒ) ಸಹಕಾರದಲ್ಲಿ ತಾಲೂಕ ಆರೋಗ್ಯಾಧಿಕಾರಿಗಳ ಭದ್ರಾ ಸಭಾಂಗಣದಲ್ಲಿ ಹಮ್ಮಿಕೊಂಡ  ಮೂರು ದಿನಗಳ ಮಕ್ಕಳ ಬೇಸಿಗೆ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿತು.   ಸಮಾರೋಪ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಶಿಕ್ಷಕರಾದ ಅರುಣಾಬಾಯಿ ಅವರು ಮಾತನಾಡಿ, ಮಕ್ಕಳು ಶಿಬಿರದಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಭಾಗವಹಿಸಿದ್ದಾರೆ. ಅವರಲ್ಲಿ ವಿಭಿನ್ನವಾದ ಆಸಕ್ತಿ ಪ್ರತಿಭೆಗಳಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಂಬಲಿಸಬೇಕು ಎಂದರು. ಅತಿಥಿಗಳಾಗಿ ಭಾಗವಹಿಸಿದ ಇನ್ನೋರ್ವ ಶಿಕ್ಷಕರಾದ ಮುರಳಿಧರ ರೆಡ್ಡಿ ಅವರು ಮಾತನಾಡಿ, ಮಕ್ಕಳು ಬಿಳಿ ಕಾಗದದ ಹಾಳೆಗಳಂತೆ. ನಾವು ಆ ಕಾಗದದ ಮೇಲೆ ಏನು ಬರೆಯುತ್ತೇವೆಯೋ ಅದರಂತೆ ಅದು ಮಕ್ಕಳ  ಮನಸ್ಸಿನ ಮೇಲೆ ಮೂಡುತ್ತದೆ. ಆದ್ದರಿಂದ ನಾವು ಮಕ್ಕಳಲ್ಲಿ ಉತ್ತಮ ವಿಚಾರ, ಆದರ್ಶ, ಆಸಕ್ತಿಗಳನ್ನು ಬೆಳೆಸಬೇಕು ಎಂದರು. ಹಾಗಾದಾಗ ಮಾತ್ರ ಅವರಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು. ಎಐಡಿಎಸೊ ಜಿಲ್ಲಾಧ್ಯಕ್ಷರಾದ ಹಯ್ಯಾಳಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಮಕ್ಕಳ ಶಿಬಿರಕ್ಕೆ ರಾಯಚೂರಿನ ಜನರು

ನಗರದಲ್ಲಿ ಭಾರಿ ಅಗ್ನಿ ಅವಘಡ.

Image
  ನಗರದಲ್ಲಿ ಭಾರಿ ಅಗ್ನಿ ಅವಘಡ.          ರಾಯಚೂರು,ಮೇ.27- ನಗರದಲ್ಲಿ ಬಾರಿ ಅಗ್ನಿ ಅವಘಡ ಸಂಭವಿಸಿದೆ.                    ಜನನೀಬೀಡ ಮಹಾವೀರ ವೃತ್ತದಲ್ಲಿರುವ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಜರುಗಿದ್ದು ಬೆಂಕಿಗೆ ಇಡಿ ಕಟ್ಟಡ ಆಹುತಿಯಾಗಿದೆ . ಅಗ್ನಿ ದುರಂತದಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಅಗ್ನಿ ನಂದಿಸಿದರು.    ಅಗ್ನಿ ದುರಂತಕ್ಕೆ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಪೋಟ ಕಾರಣ ಎನ್ನಲಾಗುತ್ತಿದೆ.

ಎಐಸಿಸಿ ಕಚೇರಿಯಲ್ಲಿ ನಡೆದ ಪಂಡಿತ್ ಜವಾಹರಲಾಲ್ ನೆಹರು ಪುಣ್ಯತಿಥಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಭಾಗಿ

Image
ಎಐಸಿಸಿ ಕಚೇರಿಯಲ್ಲಿ ನಡೆದ ಪಂಡಿತ್ ಜವಾಹರಲಾಲ್ ನೆಹರು ಪುಣ್ಯತಿಥಿ ಕಾರ್ಯಕ್ರಮದಲ್ಲಿ  ಜಿಲ್ಲೆಯ ಕಾಂಗ್ರೆಸ್ ನಾಯಕರು ಭಾಗಿ                                        ರಾಯಚೂರು,ಮೇ.27- ದೆಹಲಿಯ ಎಐಸಿಸಿ ಕಛೇರಿಯಲ್ಲಿ ಮಾಜಿ  ಪ್ರಧಾನಿ ಪಂಡಿತ ಜವಾಹರಲಾಲ್ ನೆಹರುರವರ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರು  ಭಾಗವಹಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎ.ವಸಂತಕುಮಾರ, ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ, ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಮುಖಂಡರಾದ  ಡಾ.ರಝಾಕ ಉಸ್ತಾದ, ಪಾಮಯ್ಯ ಮುರಾರಿ, ಅಸ್ಲಂ ಪಾಶಾ ಇನ್ನಿತರರು ಉಪಸ್ಥಿತರಿದ್ದರು.

ಸರ್ಕಾರದಿಂದ ಯಾವುದೇ ಅನುದಾನ ನಿರೀಕ್ಷಿಸಿಲ್ಲ: ಜೂನ್ 21 ರಿಂದ 23ರವರೆಗೆ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ- ಪಾಪಾರೆಡ್ಡಿ.

Image
  ಸರ್ಕಾರದಿಂದ ಯಾವುದೇ ಅನುದಾನ ನಿರೀಕ್ಷಿಸಿಲ್ಲ:            ಜೂನ್ 21 ರಿಂದ 23 ರವರೆಗೆ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ- ಪಾಪಾರೆಡ್ಡಿ .                                                            ರಾಯಚೂರು,ಮೇ.27- ಪ್ರತಿ ವರ್ಷದಂತೆ ಈ ವರ್ಷವು ಜೂ.21 ರಿಂದ 23 ರವರೆಗೆ ಮುಂಗಾರು ಸಾಂಸ್ಕ್ರತಿಕ ರಾಯಚೂರು ಹಬ್ಬ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕರು ಹಾಗೂ ಮುಂಗಾರು ಸಾಂಸ್ಕ್ರತಿಕ ರಾಯಚೂರು ಹಬ್ಬದ ಅಧ್ಯಕ್ಷರಾದ ಎ.ಪಾಪಾರೆಡ್ಡಿ ಹೇಳಿದರು. ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ 24 ವರ್ಷಗಳಿಂದ ಈ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಬರಲಾಗಿದೆ ಎಂದ ಅವರು ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಜೂ.21 ರಂದು ಬೆಳಿಗ್ಗೆ 8 ಗಂಟೆಗೆ ಕರ್ನಾಟಕ ರಾಜ್ಯದ ಎತ್ತುಗಳಿಂದ 1.5 ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ದೆ ನಡೆಯಲಿದ್ದು ಈ ಬಾರಿಯ ವಿಶೇಷವೆಂದರೆ ಏಳನೇ ಬಹುಮಾನ ನೀಡಲಾಗುತ್ತಿದೆ ಎಂದರು. ಜೂ.22 ರಂದು ಅಖಿಲ ಭಾರತ‌ ಮುಕ್ತ ಸ್ಪರ್ದೆ ನಡೆಯಲಿದ್ದು  ದೇಶದ ಯಾವುದೆ ರಾಜ್ಯಗಳಿಂದ ಎತ್ತುಗಳು ಭಾಗವಹಿಸಬಹುದಾಗಿದ್ದು 2 ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ದೆ ನಡೆಯಲಿದೆ ಎಂದ ಅವರು ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ವಿವಿಧ ಕಲಾ ತಂಡಗಳಿಂದ ಎತ್ತುಗಳ ಮೆರವಣಿಗೆ ನಡೆಯಲಿದೆ ಎಂದರು. ಜೂ.23 ರಂದು ಹಿರಿಯರ ವಿಭಾಗದಲ್ಲಿ ಅಖಿಲ ಭಾರತ ಮುಕ್ತ ಸ್ಪರ್ದೆ 2.5 ಟನ್ ಭಾರವಾದ ಕಲ್ಲುಗಳ ಎಳೆಯುವ ಸ್ಪರ್ದೆ ನಡೆ

ಜೂ.12 ರಂದು ನಗರಕ್ಕೆ ಪೇಜಾವರ ಶ್ರೀ: ಮೇ.26 ರಂದು ಪೂರ್ವಭಾವಿ ಸಭೆ ಆಯೋಜನೆ

Image
  ಜೂ.12 ರಂದು ನಗರಕ್ಕೆ ಪೇಜಾವರ ಶ್ರೀಗಳು : ನಾಳೆ  ಪೂರ್ವಭಾವಿ ಸಭೆ ಆಯೋಜನೆ                          ರಾಯಚೂರು,ಮೇ.25- ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಅಯೋಧ್ಯ ಶ್ರೀರಾಮಚಂದ್ರ ದೇವರ ಪ್ರಾಣಪ್ರತಿಷ್ಠಾಪನೆಯ ನಂತರ ಮೊಟ್ಟ ಮೊದಲ ಬಾರಿಗೆ  ಜೂನ್.12 ರಂದು ರಾಯಚೂರು ನಗರಕ್ಕೆ ಆಗಮಿಸುತ್ತಿರುವ ಕಾರಣ  ನಾಳೆ  ಭಾನುವಾರ ಮೇ. 26 ರಂದು  ಸಂಜೆ 4.30ಕ್ಕೆ ಜವಾಹರ ನಗರ ಬಯಲು ಪ್ಯಾಟಿ ಆಂಜನೇಯ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದ್ದು ದಯವಿಟ್ಟು ಸಮಸ್ತ ಹಿರಿಯರು, ಯುವಕರು, ಮಹಿಳೆಯರು ಆಗಮಿಸಬೇಕಾಗಿ ಕೋರಲಾಗಿದೆ.

ಮಂತ್ರಾಲಯಕ್ಕೆ ಅಣ್ಣಾಮಲೈ ಭೇಟಿ.

Image
  ಮಂತ್ರಾಲಯಕ್ಕೆ ಅಣ್ಣಾಮಲೈ ಭೇಟಿ.                                        ರಾಯಚೂರು,ಮೇ.25- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ತಮಿಳನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಭೇಟಿ ನೀಡಿ ರಾಯರ ಬೃಂದಾವನ ದರ್ಶನ ಪಡೆದರು ನಂತರ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಫಲ ಮಂತ್ರಾಕ್ಷತೆ , ಶೇಷವಸ್ತ್ರ, ಸ್ಮರಣಿಕೆ ನೀಡಿ ಆಶೀರ್ವದಿಸಿದರು.

ಗಂಜಳ್ಳಿ ಕೃಷ್ಣಾ ನದಿಯಲ್ಲಿ ಬಾಲಕನನ್ನು ಎಳೆದೊಯ್ದ ಮೊಸಳೆ.

Image
  ಗಂಜಳ್ಳಿ ಕೃಷ್ಣಾ ನದಿಯಲ್ಲಿ ಬಾಲಕನನ್ನು ಎಳೆದೊಯ್ದ ಮೊಸಳೆ.                                                    ರಾಯಚೂರು,ಮೇ.24- ತಾಲೂಕಿನ ಗಂಜಳ್ಳಿ ಗ್ರಾಮದ ಕೃಷ್ಣಾ ನದಿಯಲ್ಲಿ ಬಾಲಕನೋರ್ವನನ್ನು ಮೊಸಳೆ ಎಳೆದೊಯ್ದಿದೆ. ಮಧ್ಯಾಹ್ನ ಕುರಿಗಳಿಗೆ ನೀರು ಕುಡಿಸಲು ಹೋದ ವೇಳೆ ಈ ದುರ್ಘಟನೆ ನಡೆದಿದ್ದು ಮೃತ ಬಾಲಕನನ್ನು ವಿಶ್ವ (10) ಎಂದು ಗುರುತಿಸಲಾಗಿದೆ.                                                 ನದಿ ದಡದಲ್ಲಿ ಕುರಿಗೆ ನೀರು ಕುಡಿಸುವ ವೇಳೆ ಮೊಸಳೆ ಬಲಕನನ್ನು ಎಳೆದೊಯ್ದಿದೆ ಎನ್ನಲಾಗಿದೆ. ಘಟನೆ ಸುದ್ದಿ ತಿಳಿದು ಗ್ರಾಮೀಣ ಠಾಣೆ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ನದಿಯಲ್ಲಿ ಬಾಲಕನ ಶವಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ .        ಬೃಹತ್ ಮೊಸಳೆಗಳು : ಕೃಷ್ಣಾ ನದಿಯಲ್ಲಿ ಬೃಹತ್ ಗಾತ್ರದ ಮೊಸಳೆಗಳಿದ್ದು ಜಾನುವಾರುಗಳನ್ನು ಎಳೆದೊಯ್ದ ಘಟನೆ ನೆಡೆದಿದ್ದವು ಆದರೆ ಇತ್ತೀಚೆಗೆ ಮನುಷ್ಯನ ರಕ್ತದ ರುಚಿ ಕಂಡಿರುವ ಮೊಸಳೆಗಳು ಜನರ ಮೇಲೆಯೂ ದಾಳಿ ನಡೆಸುತ್ತಿದ್ದು ಅರಣ್ಯ ಇಲಾಖೆ ಮೊಸಳೆಗಳ ಹಾವಳಿ ತಡೆಯಲು ಮುಂದಾಗಬೇಕೆನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.

ನಗರದಲ್ಲಿ ಖೋಟಾ ನೋಟು ಪತ್ತೆ : ಚಲಾವಣೆ ಶಂಕೆ.

Image
  ನಗರದಲ್ಲಿ ಖೋಟಾ ನೋಟು ಪತ್ತೆ :  ಚಲಾವಣೆ ಶಂಕೆ.                       ರಾಯಚೂರು,ಮೇ.24- ನಗರದಲ್ಲಿ ಖೋಟಾ ನೋಟು ಪತ್ತೆಯಾಗಿದ್ದು ಖೋಟಾ ನೋಟು ಚಲಾವಣೆ ಶಂಕೆ ಮೂಡಿಸಿದೆ.                              ನಗರದ ಸ್ಟೇಷನ್ ರಸ್ತೆಯ ಐಡಿಬಿಐ ಬ್ಯಾಂಕ್ ನಲ್ಲಿ ಗ್ರಾಹಕರೊಬ್ಬರು ಬ್ಯಾಂಕ್ ಗೆ ಹಣ ಸಂದಾಯ ಮಾಡುವ ವೇಳೆ ಹಣ ಎಣಿಕೆ ಯಂತ್ರದಲ್ಲಿ  ಐದು ನೂರು ರೂಪಾಯಿ ಮುಖ ಬೆಲೆಯ ಒಂದು ಖೋಟಾ ನೋಟು ಎಂಬುದು ಖಾತರಿಯಾಗಿದ್ದು ಬ್ಯಾಂಕ್ ಸಿಬ್ಬಂದಿ ಈ ಬಗ್ಗೆ ಗ್ರಾಹಕರಿಗೆ ಅದನ್ನು ತಿಳಿಸಿದ್ದಾರೆ ಇದರಿಂದ ವಿಚಲಿತರಾದ ಗ್ರಾಹಕ ಆತಂಕಗೊಂಡಿದ್ದಾರೆ.                                    ಐದು ನೂರು ಮುಖ ಬೆಲೆಯುಳ್ಳ ಖೋಟಾ ನೋಟು ಚಲಾವಣೆಗೆ ಬಂದಿರುವ ಶಂಕೆ ವ್ಯಕ್ತವಾಗಿದೆ .                                            ಎಲ್ಲೆಡೆ ನಗದು ರೂಪದಲ್ಲಿ ಐದು ನೂರು ಮುಖ ಬೆಲೆಯ ನೋಟು ಹೆಚ್ಚು  ಕಾಣಲಾಗುತ್ತಿದ್ದು ಐದು ನೂರು ರೂಪಾಯಿ ಖೋಟಾ ನೋಟು ಪತ್ತೆಯಾಗಿದ್ದು ಆರ್ಥಿಕ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಲಿದ್ದು  ಪೊಲೀಸ್ ಇಲಾಖೆ ಹಾಗೂ ಬ್ಯಾಂಕ್ ಗಳು ಈ ಬಗ್ಗೆ ತತಕ್ಷಣ ಕಾರ್ಯ ತತ್ಪರರಾಗಿ ಖೋಟಾ ನೋಟು ಜಾಲಕ್ಕೆ ಕಡಿವಾಣ ಹಾಕಬೇಕೆಂಬುದು ನಾಗರೀಕರ ಒತ್ತಾಯವಾಗಿದೆ ಇಲ್ಲದಿದ್ದರೆ ಅಕ್ಷರ ಅರಿಯದ ಅಮಾಯಕರು ಖೋಟಾ ನೋಟು ಮತ್ತು ನೈಜ ನೋಟಿನ ವ್ಯತ್ಯಾಸ ಅರಿಯದೆ ಮೋಸ ಹೋಗುವುದು ಗ್ಯಾರಂಟಿ.                        

ದಿನ್ನಿ: ಶ್ರೀ ವೆಂಕಟೇಶ್ವರ ರಥೋತ್ಸವದಲ್ಲಿ ಶಾಸಕ ದದ್ದಲ್ ಭಾಗಿ

Image
  ದಿನ್ನಿ: ಶ್ರೀ ವೆಂಕಟೇಶ್ವರ ರಥೋತ್ಸವದಲ್ಲಿ ಶಾಸಕ ದದ್ದಲ್ ಭಾಗಿ                                            ರಾಯಚೂರು,ಮೇ.23-  ದಿನ್ನಿ ಗ್ರಾಮದಲ್ಲಿ ವೆಂಕಟೇಶ್ವರ ಜಾತ್ರಾ ರಥೋತ್ಸವ ಸಮಾರಂಭದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ  ಬಸನಗೌಡ ದದ್ದಲ್ ರವರು  ಭಾಗವಹಿಸಿ ಭಗವಂತನ ಆರ್ಶಿವಾದವನ್ನು ಪಡೆದರು.       ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರುಗಳು ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು ಭಕ್ತಾದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

ಕೋಟೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಶಾಸಕ ಡಾ.ಶಿವರಾಜ ಪಾಟೀಲ್ ಭೇಟಿ.

Image
  ಕೋಟೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಶಾಸಕ ಡಾ.ಶಿವರಾಜ ಪಾಟೀಲ್ ಭೇಟಿ.            ರಾಯಚೂರು,ಮೇ.22- ಕೋಟೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಭೇಟಿ ನೀಡಿದರು.                                                                               ಶ್ರೀ ನರಸಿಂಹ ಜಯಂತಿ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು ನವಗ್ರಹ ಪ್ರತಿಷ್ಟಾಪನೆ , ಪಂಚಾಮೃತ ಅಭಿಷೇಕ, ರಥೋತ್ಸವ ,  ಮಹಾಮಂಗಳಾರತಿ ನೆರವೇರಿದವು.                                                    ಸಾಯಿಂಕಾಲ ಅಕ್ಕಿ ರಾಘವೇಂದ್ರ ಆಚಾರ್ ರವರಿಂದ ಪ್ರವಚನ ನಡೆಯಿತು ಶಾಸಕರಿಗೆ ದೇವಸ್ಥಾನ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೋಟೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಬಡಾವಣೆಯ ಭಕ್ತರು, ಮಹಿಳೆಯರು ಇದ್ದರು.

ವಾಸವಿ ಕ್ಲಬ್: ರಿಮ್ಸ್ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಣೆ

Image
  ವಾಸವಿ ಕ್ಲಬ್ : ರಿಮ್ಸ್ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಣೆ                                  ರಾಯಚೂರು,ಮೇ.20-  ವಾಸವಿ ಜಯಂತಿ ಅಂಗವಾಗಿ  ವಾಸವಿ ಕ್ಲಬ್ ವತಿಯಿಂದ ರಾಯಚೂರು ರಿಮ್ಸ್  ಆಸ್ಪತ್ರೆಯ 350 ಕೂ ಹೆಚ್ಚು ರೋಗಿಗಳಿಗೆ ಬ್ರೆಡ್, ಹಣ್ಣುಗಳು ಹಾಗೂ ಬಿಸ್ಕೆಟ್ ವಿತರಣೆ ಮಾಡಿದರು.  ಈ ಸಂದರ್ಭದಲ್ಲಿ ವಾಸವಿ ಕ್ಲಬ್‌ನ ಅಧ್ಯಕ್ಷರಾದ ಗಾಣದಾಳ  ತಿಪ್ಪಯ್ಯ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಡಿ ಪ್ರದೀಪ್ ಕುಮಾರ್ ,ಸಂತೋಷ್ ಅರೋಲಿ ,ಸಾವಿತ್ರಿ ಶ್ರೀಕರನಾಗ್, ಬಾಪುರ ತಿರುಮಲ, ಚಾಗಿ ವಿನೋದ್ , ಶ್ರೀಕಾಂತ್ , ಗೋಪಿನಾಥ್ ನಾಗಲಾಪುರ್ ,ಕೋಳೂರು ಹನುಮೇಶ್, ಆಲ್ಕೋಡ ಸುನಿಲ್, ಬಾದಲ್ ದಿನ್ನಿ ರಮೇಶ್, ಮೈಲಾಪುರ್ ವೇಣು, ವೀರಂ ವಿಜಯ, ಇಲ್ಲುರು  ಸಂತೋಷ್, ಆರ್. ಪಿ. ಬಂಗಾರ ರಾಜು, ರಾಜಲಬಂಡಿ ಪ್ರವೀಣ್, ಪ್ರಾಜೆಕ್ಟ್ ಚೇರ್ಮನ್ ಲಗ್ಗೆ ಶೆಟ್ಟಿ ಜಯಕುಮಾರ್, ಕೋ ಪ್ರಜೆಕ್ಟ್ ಚೇರ್ಮನ್  ಎ. ರಾಘವೇಂದ್ರ ಉಪಸ್ಥಿತಿ ಇದ್ದರು

ಶ್ರೀ ಸೂಗುರೇಶ್ವರ ಸ್ವಾಮಿಯ ದರ್ಶನ ಪಡೆದ ಶಾಸಕ ದದ್ದಲ್

Image
ಶ್ರೀ ಸೂಗುರೇಶ್ವರ ಸ್ವಾಮಿಯ ದರ್ಶನ ಪಡೆದ ಶಾಸಕ ದದ್ದಲ್                                                                     ರಾಯಚೂರು,ಮೇ.20- ದೇವಸೂಗೂರು ಗ್ರಾಮದಲ್ಲಿರುವ ಆರಾಧ್ಯ ದೈವ ಕ್ಷೇತ್ರಾಧಿಪತಿ ಶ್ರೀ ಸೂಗುರೇಶ್ವರಸ್ವಾಮಿಯ ಸನ್ನಿಧಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ  ಶಾಸಕರಾದ  ಬಸನಗೌಡ ದದ್ದಲ್, ಸರಸ್ವತಿ ಬಸನಗೌಡ ದದ್ದಲ್ ರವರು ಭಾಗವಹಿಸಿ ಆಶೀರ್ವಾದವನ್ನು ಪಡೆದರು.                             ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರುಗಳು ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು ಭಕ್ತಾದಿಗಳು ಉಪಸ್ಥಿತರಿದ್ದರು.

ಕರುಳಿನ ಕೂಗು.

Image
  ಕರುಳಿನ ಕೂಗು.                                                    ಬಿಸಿಲಿದೆ  ಎಂದು  ಬರಿ  ಗೊಣಗುತಿಯಲ್ಲ ಕಟ್ಟಿಗೆ  ಕಡಿಯುವ   ಬಡ ಹೆಣ್ಣು  ಎಷ್ಟು  ಶ್ರಮ  ಪಡುತಿಹಳಲ್ಲ ನಾಳಿನ  ಚಿಂತೆಯು  ಕಾಡಿದೆಯಲ್ಲ   ಚಿಂತೆಯ  ಸಂತೆಯೇ   ಮನ ತುಂಬಿದಂತಿದೆಯಲ್ಲ ಮನೆ  ಕಡೆ  ಗಮನ   ಹೋದಂತಿದೆಯಲ್ಲ   ಅವಸರದಲಿ  ಮಕ್ಕಳಿಗೆ  ನಾ ಕಟ್ಟಿಗೆಗೆ  ಹೋಗುವ   ಸುದ್ದಿ  ತಿಳಿಸಲೇ  ಇಲ್ಲ ಪಾಪ ಊಟ ಮಾಡದೇ   ನನ್ನ ಮಕ್ಕಳು  ಕುಳಿತಿರಬಹುದಲ್ಲ  ಕಟ್ಟಿಗೆ  ಕಾಸು   ನಾಳೆ ಹೊಟ್ಟೆಗೆ   ಹಿಟ್ಟಾದಿತಲ್ಲ   ಸುಮ್ಮನೆ  ನಾ ಕೂತರೆ   ನನ್ನ ಕೆಲಸ  ಕೆಟ್ಟಿತಲ್ಲ   ಆಲೋಚನೆಯ  ಬಿಟ್ಟು  ಬಿಡು  ಮನ  ಎಂದಿತಲ್ಲ  ನಾ ಉಣ್ಣದಿದ್ದರೆ   ಪರವಾಗಿಲ್ಲ ಆದರೆ   ನನ್ನ  ಮಕ್ಕಳು ಹಸಿವಿನಿಂದ ಬಳಲೋದು ಬಳಲುವದ  ನಾ  ಎಂದಿಗೂ ಸಹಿಸುವಳಲ್ಲ   ಪೋನಾಯಿಸುವೆನೆಂದರೆ ಚಾರ್ಜ್ ಇಲ್ಲವೇ  ಇಲ್ಲ  ಮನ ಮಕ್ಕಳ ನೆನೆಯುವುದರಲ್ಲಿ   ಕಾಡಿಗೆ  ಬಂದೆ  ಬಿಟ್ಟವಲ್ಲ  ಅವ್ವ ನಮಗೆ ಬೇಸಿಗೆ  ರಜೆ   ಇದೆ ನೀ  ಮರೆತಂತಿದೆಯಲ್ಲ  ಕರೆದರೆ  ನಾವು  ನಿನ್ನೊಡನೆ  ಬರುತ್ತಿದ್ದೆವಲ್ಲ  ನೀನೊಬ್ಬಳೇ ಶ್ರಮ   ಪಡುವುದು ಹೇಗೆ?  ನೋಡುವುದವ್ವ .. ಕರುಳಿನ  ಕೂಗು ಕಾಡಿನ ಆಚೆ  ಊರಿನ  ಮಕ್ಕಳಿಗೆ  ಕೇಳಿತಲ್ಲ  ಮೊಬೈಲ್ಗಿಂತ  ಬೇಗ ಸಂಬಂಧದ  ನೆಟ್ವಕ೯  ಕನೆಕ್ಟ  ಆಯಿತಲ್ಲ ಅಲ್ಲವೇ? ಬುತ್ತಿಯ   ತಂದ ಮಕ್ಕಳು   ಹಂಚಿ  ತಾಯಿಗೆ ತಿನಿಸುತ  ತಾವು  ತಿಂದರಲ್ಲ   ಬೇಗದಿ ಕಟ್ಟಿಗೆ  ಒಟ್ಟಿಗೆ  ಗೂಡ

ಸಾಂಸ್ಕೃತಿಕ ಮತ್ತು ಸಾಹಿತ್ಯ ಸೇವೆ: ಮುರಳಿಧರ ಕುಲಕರ್ಣಿಗೆ ಸನ್ಮಾನ

Image
  ಸಾಂಸ್ಕೃತಿಕ ಮತ್ತು ಸಾಹಿತ್ಯ  ಸೇವೆ: ಮುರಳಿಧರ ಕುಲಕರ್ಣಿಗೆ ಸನ್ಮಾನ    ರಾಯಚೂರು ,ಮೇ.18- ನಗರದ ಸತ್ಯನಾಥ ಕಾಲೋನಿ ಶ್ರೀ ಪ್ರಾಣದೇವರ ದೇವಸ್ಥಾನದಲ್ಲಿ ಶ್ರೀ ಶಾಮ ಸುಂದರ ದಾಸರ ಪ್ರತಿಷ್ಠಾನ  ನಿನ್ನೆ ಹಮ್ಮಿಕೊಂಡ ಶ್ಯಾಮ ಸುಂದರ ದಾಸರ ಆರಾಧನೆಯ ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.       ಮುರಳಿಧರ ಕುಲಕರ್ಣಿಯವರು ನಗರದಲ್ಲಿ ನಿರಂತರ ಸಾಂಸ್ಕೃತಿಕ ಮತ್ತು ದಾಸ ಸಾಹಿತ್ಯ ಸೇವೆಯನ್ನು ಮಾಡುತ್ತಿದ್ದಾರೆ.  ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಪ್ರತಿ ಹರಿದಾಸರ ಆರಾಧನೆಯನ್ನು ಹಮ್ಮಿಕೊಳ್ಳುವುದರ ಮೂಲಕ ದಾಸ ಸಾಹಿತ್ಯದ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ.      ಈಗಾಗಲೇ ಹಲವಾರು ದಾಸ ಸಾಹಿತ್ಯದ ಬೃಹತ್ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಮತ್ತು ಆಕರ್ಷಣೀಯ ನಿರೂಪಣೆಯೊಂದಿಗೆ ಜನ ಮೆಚ್ಚುಗೆ ಗಳಿಸಿದ್ದಾರೆ.   ಇವರು ಬೆಂಗಳೂರು, ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ, ಗುಲ್ಬರ್ಗ,  ಮೈಸೂರು ಮಂತ್ರಾಲಯ ತಿರುಪತಿ ಯಲ್ಲಿ ನಡೆದ ಬೃಹತ್ ವೇದಿಕೆಗಳ ಹರಿದಾಸ ಹಬ್ಬ ಕಾರ್ಯಕ್ರಮದಲ್ಲಿ ಸುಂದರವಾಗಿ ನಿರೂಪಣೆಯನ್ನು ಮಾಡಿದ್ದಾರೆ.   ನಗರದಲ್ಲಿ ಪ್ರತಿವರ್ಷ ಅಸ್ಕಿಹಾಳ ಗೋವಿಂದ  ದಾಸರ ಸ್ಮರಣೋತ್ಸವದ ಅಂಗವಾಗಿ ಗೋವಿಂದ ಗಾನ ಎಂಬ ಕಾರ್ಯಕ್ರಮವನ್ನು ಖ್ಯಾತ ಗಾಯಕ ಡಾ. ರಾಯಚೂರು ಶೇಷಗಿರಿ ದಾಸ್ ಇವರ ಜೊತೆಗ ನಗರದ ರಂಗಮಂದಿರದಲ

ಹರಿದಾಸ ಪರಂಪರೆಯನ್ನು ಬೆಳೆಸಿದ ಮಹನೀಯರು ಶ್ರೀ ಶಾಮಸುಂದರದಾಸರು- ಮುರಳಿದರ ಕುಲಕರ್ಣಿ

Image
  ಹರಿದಾಸ ಪರಂಪರೆಯನ್ನು ಬೆಳೆಸಿದ ಮಹನೀಯರು ಶ್ರೀ ಶಾಮಸುಂದರದಾಸರು- ಮುರಳಿದರ ಕುಲಕರ್ಣಿ   ರಾಯಚೂರು, ಮೇ.17- ದಾಸ ಸಾಹಿತ್ಯದ ಪರಂಪರೆಯನ್ನು ಬೆಳೆಸಿದ ಮಹನೀಯರಲ್ಲಿ ಶ್ರೀ ಶಾಮ ಸುಂದರ ದಾಸರು ಅಗ್ರಗಣ್ಯರಾಗಿ ನಿಲ್ಲುತ್ತಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷರಾದ ಮುರಳಿಧರ ಕುಲಕರ್ಣಿ  ಹೇಳಿದರು          ಅವರು ಇಂದು ನಗರದ ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಆಯೋಜಿಸಿದ ಶ್ರೀ ಶಾಮ ಸುಂದರ ದಾಸರ ಮಧ್ಯರಾಧನೆಯ ನಿಮಿತ್ಯ ಹಮ್ಮಿಕೊಂಡ ಜ್ಞಾನ ಸತ್ರ ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ನೀಡುತ್ತಾ ಮಾತನಾಡಿದರು.  ಶ್ರೀ ವಿಜಯದಾಸರು, ಶ್ರೀ ಗೋಪಾಲ ದಾಸರು, ಶ್ರೀ ಜಗನ್ನಾಥದಾಸರ ದಾಸರು, ಶ್ರೀ ಪ್ರಾಣೇಶ ದಾಸರು ಮತ್ತಿತರ ದಾಸರಂತೆ ದಾಸ ಸಾಹಿತ್ಯದ ಪರಂಪರೆಯನ್ನು ಬೆಳೆಸಿದ ಮಹನೀಯರಲ್ಲಿ ಶ್ರೀ ಶಾಮ ಸುಂದರ ದಾಸರು ಅಗ್ರಗಣ್ಯರಾಗಿ ನಿಲ್ಲುತ್ತಾರೆ  ಎಂದ ಅವರು ಶ್ರೀ ಶಾಮ ಸುಂದರ ದಾಸರು ವರ ಕವಿಗಳು, ಅವರು ಹಲವಾರು ಸುಳಾದಿಗಳನ್ನು, ಉಗಾಭೋಗಗಳನ್ನು ವಿಶೇಷವಾಗಿ ತಾರತಮ್ಯುಕ್ತವಾದ  ನೂರಾರು ಸಂಕೀರ್ತಿನೆಗಳನ್ನು ರಚಿಸಿದ್ದಾರೆ ಎಂದರು. ಶ್ರೀ ಅಸ್ಕಿ ಹಾಳ ಗೋವಿಂದ ದಾಸರ ಶಿಷ್ಯರಾಗಿ ಶ್ರೀ ಜಗನ್ನಾಥಸರ ಅನುಗ್ರಹದಿಂದ ಶ್ರೀ ಶ್ಯಾಮ ಸುಂದರ ವಿಠಲ ಎಂಬ ಸ್ವಪ್ನಾoಕಿತವನ್ನು ಪಡೆದು ದಾಸ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆಯನ್ನು ನೀಡಿದ ದಾಸ ವರೇಣ್ಯರು ಎಂದರು. ಉಪಲಿ ಕುಪ್ಪೆರಾಯರು, ವರದೇಂದ್ರರು, ರಾಘವೇಂದ್ರರಾ ಚಾರ್ಯ ಕುರ್ಡಿ ಇವರಿಗೆ ದಾಸ

ಅಂಜಲಿ ಅಂಬಿಗೇರ ಕೊಲೆ ಆರೋಪಿಗೆ ಕಠಿಣ ಶಿಕ್ಷೆಗೆ ಕಡಗೋಲು ರಾಮಚಂದ್ರ ಒತ್ತಾಯ

Image
  ಅಂಜಲಿ ಅಂಬಿಗೇರ ಕೊಲೆ  ಆರೋಪಿಗೆ ಕಠಿಣ ಶಿಕ್ಷೆಗೆ  ಕಡಗೋಲು ರಾಮಚಂದ್ರ ಒತ್ತಾಯ    ರಾಯಚೂರು,ಮೇ.16-ಹುಬ್ಬಳ್ಳಿಯ ವೀರಾಪೂರ ಓಣಿಯ ಅಂಜಲಿ ಅಂಬಿಗೇರ ಎನ್ನುವ ಯುವತಿಯನ್ನು ಕೊಲೆ ಮಾಡಿ ಹೋಗಿರುವ ಆರೋಪಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಗಂಗಾಮತ ಸಮಾಜದ  ಜಿಲ್ಲಾ ಯುವ ಅಧ್ಯಕ್ಷರಾದ ಕಡಗೋಲು ರಾಮಚಂದ್ರ  ಒತ್ತಾಯಿಸಿದ್ದಾರೆ.  ನೇಹಾ ಹತ್ಯೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಪ್ರೀತಿ ನಿರಾಕರಿಸಿದಕ್ಕೆ ಮತ್ತೊಮ್ಮೆ ಗಂಗಾಮತ ಸಮಾಜದ ಯುವತಿ ಕೊಲೆ ನಡೆದಿದೆ. ಹುಬ್ಬಳ್ಳಿ ನಗರದ ವೀರಾಪುರ ಓಣಿ ಗುಡಿಓಣಿ ನಿವಾಸಿಯಾದ ಅಂಜಲಿ ಅಂಬಿಗೇರ (20) ಎಂಬಾಕೆಯೇ ಸಾವಿಗೀಡಾದ ಯುವತಿಯಾಗಿದ್ದಾಳೆ. ಈಕೆಗೆ ಅದೇ ಏರಿಯಾದ  ಗಿರೀಶ್ ಸಾವಂತ (21) ಎಂಬ ಯುವಕ ಚಾಕುವಿನಿಂದ ಚುಚ್ಚಿ ಕೊಲೆಮಾಡಿದ್ದಾನೆ. ಗಿರೀಶ್ ಸಾವಂತ ಎಂಬಾತ ಕಳೆದ ಹಲವಾರು ದಿನಗಳಿಂದ ಅಂಜಲಿಗೆ ಪ್ರೀತಿಸು ಎಂದು ಪೀಡಿಸುತ್ತಿದ್ದನಂತೆ, ಆದರೆ ಅಂಜಲಿ ಪ್ರೀತಿ ನಿರಾಕರಿಸಿದಕ್ಕೆ ಬುಧವಾರ ಬೆಳಂಬೆಳ್ಳಿಗ್ಗೆ ಗುಡಿ ಓಣಿಯಲ್ಲಿನ ಅಂಜಲಿ ನಿವಾಸಕ್ಕೆ ನುಗ್ಗಿದ್ದಾನೆ. ಮನೆಯ ಬಾಗಿಲು ಬಡಿದು ಏಕಾಏಕಿ ಅಂಜಲಿ ಹೊಟ್ಟೆಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಕೃತ್ಯದಿಂದ ಸಮಾಜವೇ ತಲೆ ಬಾಗಿಸುವಂತೆ ಆಗಿದೆ. ಅಷ್ಟೆ ಅಲ್ಲದೆ ತಂದೆ, ತಾಯಿಯನ್ನು ಕಳೆದುಕೊಂಡಿದ್ದ ಅಂಜಲಿ ಅಜ್ಜಿಯ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಳು. ಅಂಜಲಿಗೆ ಇಬ್ಬರು ಸಹೋದರಿಯರು ಇದ್ದಿದ್ದು, ಅಂಜಲಿಯೇ ಕುಟುಂಬ ನಡೆಸುತ

ಹರಿದಾಸ ಶ್ರೇಷ್ಠರು ಮೊದಲಕಲ್ಲು ಶ್ರೀ ಶೇಷ ದಾಸರು- ಮುರಳಿಧರ ಕುಲಕರ್ಣಿ

Image
  ಹರಿದಾಸ ಶ್ರೇಷ್ಠರು ಮೊದಲಕಲ್ಲು ಶ್ರೀ ಶೇಷ ದಾಸರು- ಮುರಳಿಧರ ಕುಲಕರ್ಣಿ ರಾಯಚೂರು,ಮೇ.15- ಹರಿದಾಸ ಪರಂಪರೆಯಲ್ಲಿ ಮೊದಲಕಲ್ಲು  ಶ್ರೀ ಶೇಷ ದಾಸರು ಹರಿದಾಸ ಶ್ರೇಷ್ಠರಾಗಿದ್ದಾರೆ ಎಂದು ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಹೇಳಿದರು.    ಅವರು ಇಂದು ಸಂಜೆ ಜವಾಹರ ನಗರ ಬಯಲು ಆಂಜನೇಯ ದೇವಸ್ಥಾನದಲ್ಲಿ ಜರುಗಿದ  ಮೊದಲಕಲ್ಲು ಶೇಷ ದಾಸರ ಮಧ್ಯರಾದನೆಯ ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ನೀಡುತ್ತಾ ಹೇಳಿದರು. ಹರಿದಾಸ ಸಾಹಿತ್ಯದಲ್ಲಿ ಶ್ರೀ ಶೇಷ ದಾಸರ ಕೃತಿಗಳೆಲ್ಲವೂ ಶ್ರೇಷ್ಠವಾದವುತಮ್ಮ ಅನುಭವದ ಮಾತುಗಳನ್ನು ತಮ್ಮ ಕೃತಿಗಳಲ್ಲಿ ಶ್ರೀಹರಿಯ ಮತ್ತು ವಾಯುದೇವರ ಮಹಿಮೆಯನ್ನು ಕೊಂಡಾಡಿದ್ದಾರೆ ಎಂದರು.  ಅವರು ಮುಂದುವರೆದು ಮಾತನಾಡುತ್ತಾ,ಮೊದಲ ಕಲ್ಲು ಶೇಷದಾಸರು ಕ್ರಿ.ಶ.1817 ರಿಂದ  1885 ರವರೆಗೆ ಇದ್ದಂತಹ ಮಹಾನುಭಾವರು ಇವರು ಶಾನುಭೋಗರ ವೃತ್ತಿಯನ್ನು ಮಾಡುತ್ತಿದ್ದ ಸಂದರ್ಭದಲ್ಲಿ ರಾಜ ಸಭೆಯಲ್ಲಿ ಅವಮಾನವಾದ ಪ್ರಯುಕ್ತ ಆತ್ಮಹತ್ಯೆ ಮಾಡಿಕೊಳ್ಳಲು ಹೋದಾಗ ಅವರಿಗೆ ಚಿಂತರವೇಲಿ ವಾಯುದೇವರ ಅನುಗ್ರಹವಾಗಿ ಶ್ರೀ ವಿಜಯದಾಸರ ಸಪ್ನಾoಕಿತದಿಂದ  ಗುರು ವಿಜಯ ವಿಠಲ ಅಂಕಿತ ವಾಗಿ ನೂರಾರು ಸುಳಾದಿಗಳು,ಉಗಾ ಭೋಗಳನ್ನು, ಸಂಕೀರ್ತನೆಗಳನ್ನು ರಚಿಸಿದ್ದಾರೆ ಇವರ ಸುಳಾದಿಗಳಲ್ಲಿ ಜ್ಞಾನ ಯಜ್ಞ ಸುಳಾದಿ  ಮೇರು ಕೃತಿಯಾಗಿದೆ ಎಂದು ಹೇಳಿದರು.    ಪತ್ರಕರ್ತ ಜಯ ಕುಮಾರ ದೇಸಾಯಿ ಕಾಡ್ಲೂರು ಮಾತನಾಡಿ ಮೊದಲಕಲ್ಲು ಶೇಷ ದಾಸರು ಹರಿಭಕ್ತಿ

ದೇವನಪಲ್ಲಿ ಹಾಗೂ ಗಧಾರ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ

Image
ದೇವನಪಲ್ಲಿ ಹಾಗೂ  ಗಧಾರ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ   ರಾಯಚೂರು,ಮೇ.14- ತಾಲೂಕಿನ ದೇವನಪಲ್ಲಿ ಗ್ರಾಮದಲ್ಲಿ ಗಂಗಾಸಪ್ತಮಿ ಅಂಗವಾಗಿ ಶ್ರೀ ಮಹರ್ಷಿ ಭಗೀರಥ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು. ಶ್ರೀ ಮಹರ್ಷಿ ಭಗೀರಥ ಭಾವಚಿತ್ರಕ್ಕೆ ಪೂಜೆ ಮಾಡುವು ಮೂಲಕ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಸಮಾಜದ ಬಾಂಧವರು ಭಾಗವಹಿಸಿದ್ದರು ಹಾಗೂ ಭಗೀರಥ ಗ್ರಾಮ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು ,ಕಾರ್ಯದರ್ಶಿಗಳು ಹಾಗೂ ಸರ್ವಸದಸ್ಯರು ಹಾಗೂ  ಸಮಾಜದ ಹಿರಿಯರು ಭಾಗವಹಿಸಿದ್ದರು.   ಗಧಾರ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ :   ತಾಲೂಕಿನ ಗಧಾರ ಗ್ರಾಮದಲ್ಲಿ ಗಂಗಾಸಪ್ತಮಿ ಅಂಗವಾಗಿ ಶ್ರೀ ಮಹರ್ಷಿ ಭಗೀರಥ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು.  ಭಗೀರಥ ಭಾವಚಿತ್ರಕ್ಕೆ ಪೂಜೆ ಮಾಡುವು ಮೂಲಕ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಲಾಯಿತು.                      ಈ ಸಂದರ್ಭದಲ್ಲಿ ಗಧಾರ ಗ್ರಾಮದ  ಸಮಾಜದ ಬಾಂಧವರು  ಹಾಗೂ  ಭಗೀರಥ ಸಮಾಜದ ಗ್ರಾಮ ಘಟಕದ ಸದಸ್ಯರು ಊರಿನ ಹಿರಿಯರು ಯುವಕರು ಗ್ರಾಮದ ಎಲ್ಲಾ ಸಮಾಜದ ಪದಾಧಿಕಾರಿಗಳು ಭಾಗವಹಿಸಿದ್ದರು .

ವರುಣನ ಕೃಪೆ

Image
        ವರುಣನ ಕೃಪೆ.                                                                                                                                     ಊರು ಊರು  ನಮ್ಮೂರು   ರಾಯಚೂರಿನಲ್ಲಿ     ಬಿ ಸಿಲಿನ ಝಳವು ಬಲು ಜೋರು ಜೋರು ಅಪರಾತ್ರಿ ಎನ್ನದೇ ಬಂದ ವರುಣನು  ತೋರುತ ಅತಿ ಆರ್ಭಟವನು ಸಿಡಿಲು ಮಿಂಚಿನ ಸಂಚಿನಲಿ  ಗುಡುಗುತ ಸಿಡಿಯುತ ಅತೀ ಸಿಟ್ಟಿನಲ್ಲಿ  ಗಟ್ಟಿ ರಾಯಚೂರಿನ ಜನತೆಗೆ ಕೊಟ್ಟೆ ಬಿಟ್ಟ  ವರುಣ ಕೃಪೆ ತೋರಿ ವರ್ಷ ಧಾರೆ ಹರ್ಷದೋರಿ                                ಬಿಸಿಲಿನ ತಾಪಕ್ಕೆ ಕಂಗಾಲಾದ ಜನತೆಗೆ ತಂಪನ್ನು ಬೀರಿ ತಾಳ್ಮೆಯಿಂದಿದ್ದರೆ ತಲ್ಲಣವು                               ಮಳೆಯ ಝಲ್ಲಣವು ಗುಡುಗು ಮಿಂಚಿನ ಸಮ್ಮೇಳನವು ಪರಿಶುದ್ಧ ಗೊಂಡ ವಸುಧೆಯು                          ಪರಿಶುಭ್ರ ವಾತಾವರಣವು                                    ವರುಣನ ಆಗಮನವು ನಿನಗೆ ನಮ್ಮೆಲ್ಲರ ನೆಚ್ಚಿನ ಸ್ವಾಗತವು ಹಿತ ನೀಡಿದ ನಿನಗೆ ಅಭಿನಂದನೆಯು ಅಭಿನಂದನೆಯು.                                                  ಆಹಾ ಮಳೆಯೇ!                                          ಮಳೆಯೇ ನೀನು ಸಣ್ಣ ಗೆಜ್ಜೆ ಕಟ್ಟಿ ಕುಣಿದಂತಿದೆ         ಮನ ತಣಿಸುವ ಮೆಲ್ಲನೆ ಕಚಗುಳಿಯಿಟ್ಟಂತಿದೆ           ಮುತ್ತು ಕೊಟ್ಟಂತಿದೆ ರವಿಗೆ ವಿರಾಮ ತಂದಂತಿದೆ           ನಿನ್ನ ತನನವು ಮಧ