ಸೆ.03 ರಂದು ರಾಯಚೂರು ಜಿಲ್ಲೆಗೆ ಕೇಂದ್ರ ಸಚಿವ ವಿ.ಸೋಮಣ್ಣ ರಾಯಚೂರು,ಆ.31,ಭಾರತ ಸರ್ಕಾರದ ರೈಲ್ವೆ ಸಚಿವಾಲಯ ಮತ್ತು ಜಲ ಶಕ್ತಿ ಸಚಿವಾಲಯದಲ್ಲಿ ಕೇಂದ್ರ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ಇದೇ ಸೆ.03ರಂದು ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅವರು ಸೆ.03ರ ಮಂಗಳವಾರ ಬೆಳಿಗ್ಗೆ 10ಗಂಟೆಗೆ ಜಿಲ್ಲೆಯ ನಿಲಗಲ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಐಸಿಡಿಎಸ್ ಕಾರ್ಯಕ್ರಮದಲ್ಲಿ ಭಾಗಿ, 10.15ರಿಂದ 11ಗಂಟೆಗೆ ನಿಲಗಲ್ ನಿಂದ ಜಕ್ಕಲದಿನ್ನಿಗೆ ಪ್ರಯಾಣ, 11.30ರಿಂದ 12ಗಂಟೆಯವರೆಗೆ ಸಿರವಾರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12ರಿಂದ 12.15ಗಂಟೆಗೆ ಸಿರವಾರದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 1ಗಂಟೆಗೆ ಎಂ.ಸಿ.ಎಚ್ ಆಸ್ಪತ್ರೆಗೆ ಭೇಟಿ, 1.30ಗಂಟೆಗೆ ರಾಯಚೂರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಸಚಿವರ ಕಚೇರಿಯ ಪ್ರಕಟಣೆ ತಿಳಿಸಿದೆ.
Posts
Showing posts from August, 2024
- Get link
- Other Apps
ಮೌಲಾನಾ ಆಜಾದ್ ಭವನ ನಿರ್ಮಾಣಕ್ಕೆ ಎ.ವಸಂತಕುಮಾರ ಮನವಿ. ರಾಯಚೂರು,ಆ.31- ಜಿಲ್ಲೆಯಲ್ಲಿ ಮೌಲಾನಾ ಆಜಾದ್ ಭವನ ನಿರ್ಮಾಣ ಮಾಡುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ರವರಿಗೆ ವಿಧಾನಪರಿಷತ್ ಸದಸ್ಯ ಎ.ವಸಂತಕುಮಾರ ಮನವಿ ಮಾಡಿದರು. ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಜಿಲ್ಲಾ ಕಛೇರಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾ ಕಛೇರಿ ಮತ್ತು ಜಿಲ್ಲಾ ವಕ್ಫ್ ಕಛೇರಿ ಒಂದೆ ಸೂರಿನಡಿ ಬರುವಂತೆ ಮೌಲಾನಾ ಆಜಾದ್ ಭವನ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿ ಕಾಲಮಿತಿಯಲ್ಲಿ ಜಾರಿ ಮಾಡುವಂತೆ ಅವರು ಕೋರಿದರು.
- Get link
- Other Apps
ಸೋಮವಾರ ಪೇಟೆ ಮಠಕ್ಕೆ ಸಚಿವ ಎನ್ಎಸ್ ಬೋಸರಾಜು ಭೇಟಿ: ಸ್ವಾಮಿಗಳಿಂದ ಆಶೀರ್ವಾದ ರಾಯಚೂರು,ಆ.30- ನಗರದ ಸೋಮವಾರ ಪೇಟೆ ಹಿರೇಮಠಕ್ಕೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ಭೇಟಿ ನೀಡಿ ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾ ಸ್ವಾಮಿಗಳಿಗೆ ಸನ್ಮಾನಿಸಿ ಆಶೀರ್ವಾದ ಪಡೆದರು. ಶ್ರೀಗಳು ಸಚಿವರಾದ ಎನ್ ಎಸ್ ಬೋಸರಾಜು ಸನ್ಮಾನಿಸಿ ಅವರಿಗೆ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ. ಶಾಂತಪ್ಪ, ರುದ್ರಪ್ಪ ಅಂಗಡಿ, ಮಲ್ಲಿಕಾರ್ಜುನ್ ದೋತರಬಂಡಿ, ಯುವ ಕಾಂಗ್ರೆಸ್ ಜಿಲ್ಲಾದ್ಯಕ್ಷರಾದ ಅರುಣ ದೋತರಬಂಡಿ, ಈರಣ್ಣ ಚಿತ್ರಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು .
- Get link
- Other Apps
ಮತ್ತೊಮ್ಮೆ ಜಲಾವೃತವಾದ ಕಾಡ್ಲೂರು ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನ ರಾಯಚೂರು, ಆ.29- ತಾಲೂಕಿನ ಕಾಡ್ಲೂರು ಕೃಷ್ಣಾ ನದಿ ತೀರದ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಶ್ರೀ ಪ್ರಾಣದೇವರ ದೇವಸ್ಥಾನ ಮತ್ತೊಮ್ಮೆ ಜಲಾವೃತವಾಗಿದೆ. ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು ನಾರಾಯಣಪೂರು ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಡಲಾಗಿದೆ ಅಲ್ಲದೆ ರಾಜ್ಯದೆಲ್ಲಡೆ ಮಳೆಯಾಗುತ್ತಿದ್ದು ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಿದೆ. ಕಳೆದ ಒಂದು ತಿಂಗಳ ಹಿಂದೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದರಿಂದ ದೇವಸ್ಥಾನ ಮುಳುಗಡೆಯಾಗಿತ್ತು ಇದೀಗ ಮತ್ತೊಮ್ಮೆ ಮುಳುಗಡೆಯಾಗಿದ್ದು ಭಕ್ತರಿಗೆ ಶ್ರಾವಣಮಾಸದ ಕೊನೆಯಲ್ಲಿ ದೇವಸ್ಥಾನಕ್ಕೆ ತೆರಳುವುದು ಅಸಾಧ್ಯವಾಗಿದೆ. ನದಿಯಲ್ಲಿ ನೀರಿನ ಹರಿವು ಮತ್ತುಷ್ಟು ಏರುವ ಸಾಧ್ಯತೆಯಿದ್ದು ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗಿದೆ.
- Get link
- Other Apps
ಪವನ್ ಕಿಶೋರ್ ಪಾಟೀಲ್ ಅಧ್ಯಕ್ಷತೆಯಲ್ಲಿ ಆ.30 ರಂದು ತಾಲೂಕಾ ಪಂಚ ಗ್ಯಾರಂಟಿ ಯೋಜನೆ ಸಭೆ. ರಾಯಚೂರು,ಆ.29- ನಗರದ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಆ.30 ರಂದು ತಾಲೂಕಾ ಪಂಚ ಗ್ಯಾರಂಟಿ ಯೋಜನೆ ಸಭೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10.30ಕ್ಕೆ ತಾ.ಪಂ ಕಾರ್ಯಾಲಯದಲ್ಲಿ ತಾಲೂಕಾ ಮಟ್ಟದ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಪವನ್ ಕಿಶೋರ್ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಪಂಚ ಗ್ಯಾರಂಟಿಗಳಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಜರಿರಲು ಸೂಚಿಸಲಾಗಿದೆ.
- Get link
- Other Apps
ಎಸ್.ಕೆ.ಇ.ಎಸ್ ಪ್ಯಾರಾ ಮೆಡಿಕಲ್ ಕಾಲೇಜು ವತಿಯಿಂದ ಅಭಿನಂದನಾ ಸಮಾರಂಭ: ಜಿಲ್ಲೆಗೆ ಏಮ್ಸ್ ಶತಸಿದ್ಧ- ಜಿ. ಕುಮಾರ್ ನಾಯಕ. ರಾಯಚೂರು,ಆ.29- ಜಿಲ್ಲೆಗೆ ಏಮ್ಸ್ ಶತಸಿದ್ಧವೆಂದು ಲೋಕಸಭಾ ಸದಸ್ಯರಾದ ಜಿ.ಕುಮಾರ ನಾಯಕ ಹೇಳಿದರು. ಅವರಿಂದು ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಎಸ್.ಕೆ.ಇ.ಎಸ್ ಪ್ಯಾರಾ ಮೆಡಿಕಲ್ ಕಾಲೇಜು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜಿಲ್ಲೆ ವಿವಿಧ ಕ್ಷೇತ್ರದಲ್ಲಿ ತನ್ನ ಸಾಧನೆ ಮೆರೆದಿದೆ ಇಲ್ಲಿರುವ ಸುಸಂಸ್ಕೃತ ಜನರು ಸಹೃದಯರಾಗಿದ್ದಾರೆ ನಾನು ಇಲ್ಲಿ ಸೇವೆ ಮಾಡಿದ್ದು ಈಗ ಸಂಸದನನ್ನಾಗಿ ನೀವು ದೆಹಲಿಗೆ ಕಳುಹಿಸಿದ್ದು ನಿಮ್ಮ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇನೆಂದ ಅವರು ಬಸವರಾಜ ಕಳಸ ನೇತೃತ್ವದಲ್ಲಿ ಸುಮಾರು ಎರೆಡು ವರ್ಷಕ್ಕೂ ಮೇಲ್ಪಟ್ಟ ದಿನಗಳಿಂದ ಸುಧೀರ್ಘ ಹೋರಾಟ ನಡೆಯುತ್ತಿದೆ ಏಮ್ಸ್ ನಮ್ಮೆಲ್ಲರ ಹಕ್ಕು ಅದನ್ನು ಪಡೆಯುವುದು ಶತಸಿದ್ಧವೆಂದರು. ಬಾಬುರಾವ್ ಶೇಗುಣಸಿ ತಮ್ಮ ಸಂಸ್ಥೆಯ ಮೂಲಕ ಅನೇಕ ವಿದ್ಯಾರ್ಥಿಗಳ ಬಾಳಿಗೆ ಭರವಸೆ ಮೂಡಿಸಿದ್ದಾರೆ ಅದೇ ರೀತಿ ಥಾಮಸ್ ಮತ್ತು ಯುವಕರಾದ ಆದಿಲ್ ತಮ್ಮ ಶಿಕ್ಷಣ ಸಂಸ್ಥೆಯಿಂದ ಶೈಕ್ಷಣಿಕ ಪ್ರಗತಿ ಮಾಡುತ್ತಿದ್ದಾರೆಂದರು. ಸಾನಿಧ್ಯ ವಹಿಸಿದ್ದ ಸೋಮವಾರಪೇಟೆ
- Get link
- Other Apps
ಪಕ್ಷಬೇಧ ಮೆರೆತು ನಗರಸಭೆ ಆಡಳಿತ ಸುಧಾರಣೆ- ಸಚಿವ ಬೋಸರಾಜು. ರಾಯಚೂರು,ಆ.28- ಕಾಂಗ್ರೆಸ್ ಪಕ್ಷ ನಗರಸಭೆಯಲ್ಲಿ ಅಧಿಕಾರ ಹಿಡಿದಿದ್ದು ಪಕ್ಷಬೇಧ ಮರೆತು ಎಲ್ಲರ ಸಹಕಾರದಿಂದ ನಗರಸಭೆ ಆಡಳಿತ ಸುಧಾರಣೆ ಮಾಡಲಾಗುತ್ತದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು. ಅವರಿಂದು ನಗರಸಭೆ ಕಛೇರಿ ಸಭಾಂಗಣದಲ್ಲಿ ಅಧ್ಯಕ್ಷ ,ಉಪಾಧ್ಯಕ್ಷರ ಚುನಾವಣೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸುಮಾರು 13 ತಿಂಗಳ ಅವಧಿಗೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಸರ್ವೋಚ್ಚ ನ್ಯಾಯಾಲಯ ಮೀಸಲಾತಿ ಅನ್ವಯವಾಗಿದೆ ಮುಂದಿನ ದಿನಗಳಲ್ಲಿ ನಗರಸಭೆಯಲ್ಲಿ ಬದಲಾವಣೆ ತರಲಾಗುತ್ತದೆ ಎಂದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಅನುದಾನ ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ಸದಸ್ಯರನ್ನು ಮತ್ತು ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ನೂತನ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ ಹಾಗೂ ಉಪಾಧ್ಯಕ್ಷ ಸಾಜಿದ್ ಸಮೀರ್ ಕಾರ್ಯನಿರ್ವಹಿಸುತ್ತಾರೆ ಎಂದರು. ನಗರದಲ್ಲಿ ಸಮರ್ಪಕ ಮೂಲಭೂತ ಸೌಕರ್ಯ ದೊರೆಯುವಂತೆ ಮಾಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಸಂಸದ ಜಿ.ಕುಮಾರ ನಾಯಕ, ನರಸಮ್ಮ ಮಾಡಗಿರಿ, ಸಾಜಿದ್ ಸಮೀರ್, ಕೆ.ಶಾಂತಪ್ಪ, ಜಯಣ್ಣ, ಬಷೀರುದ್ದೀನ್, ಜಿಂದಪ್ಪ, ಎಂ.ಪವನ್ ಕುಮಾ
- Get link
- Other Apps
ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್: ಸರ್ಕಾರದ ಹಸ್ತಕ್ಷೇಪವಿಲ್ಲ- ಸಚಿವ ಬೋಸರಾಜು ರಾಯಚೂರು, ಆ.28- ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಪ್ರಕ್ರಿಯೆಯಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಪೊಲೀಸರು ಮತ್ತು ಜೈಲು ಅಧಿಕಾರಿಗಳ ನಿರ್ಣಯದಂತೆ ಮತ್ತು ನ್ಯಾಯಾಲಯ ಅನುಮತಿ ಪಡೆದು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ ಇದರಲ್ಲಿ ಯಾವುದೆ ಸಚಿವರು ಮತ್ತು ಸರ್ಕಾರದ ಹಸ್ತಕ್ಷೇಪವಿಲ್ಲವೆಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು. ಅವರಿಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರವರು ಅಕ್ರಮವಾಗಿ ಯಾವುದೆ ಭೂಮಿ ಪಡೆದಿಲ್ಲ ಬಿಜೆಪಿ ಆರೋಪದಲ್ಲಿ ಹುರುಳಿಲ್ಲವೆಂದರು. ಮೂಡಾ ಪ್ರಕರಣದಲ್ಲಿ ಸಿಎಂ ಪಾತ್ರವಿಲ್ಲದಿದ್ದರೂ ಬಿಜೆಪಿ ಮತ್ತು ಜೆಡಿಎಸ್ ಕ್ಷುಲ್ಲಕ ರಾಜಕೀಯ ಮಾಡುತ್ತಿವೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಿಟ್ ಆಂಡ್ ರನ್ ಮಾಡುತ್ತಾರೆ ಯಾವುದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಿಲ್ಲವೆಂದರು. ಸರ್ಕಾರ ಸುಭದ್ರವಾಗಿದ್ದು ವಿರೋಧ ಪಕ್ಷಗಳು ವಾಮ ಮಾರ್ಗದಿಂದ ಕೇ
- Get link
- Other Apps
ನಗರಸಭೆ ಗದ್ದುಗೆ ಏರಿದ ಕಾಂಗ್ರೆಸ್: ಅಧ್ಯಕ್ಷರಾಗಿ ನರಸಮ್ಮ ನರಸಿಂಹಲು ಮಾಡಗಿರಿ , ಉಪಾಧ್ಯಕ್ಷರಾಗಿ ಸಾಜಿದ್ ಸಮೀರ್ ಅವಿರೋಧ ಆಯ್ಕೆ. ರಾಯಚೂರು,ಆ.28- ನಗರಸಭೆ ಗದ್ದುಗೆ ಏರುವಲ್ಲಿ ಕಾಂಗ್ರೆಸ್ ಪಕ್ಷ ಸಫಲವಾಗಿದೆ. ಇಂದು ನಡೆದ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ನಗರಸಭೆ ಅಧ್ಯಕ್ಷರಾಗಿ ನರಸಮ್ಮ ನರಸಿಂಹಲು ಮಾಡಗಿರಿ , ಉಪಾಧ್ಯಕ್ಷರಾಗಿ ಸಾಜಿದ್ ಸಮೀರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮತ್ತು ಸಹಾಯಕ ಆಯುಕ್ತರಾದ ಮೆಹೆಬೂಬಿ ಘೋಷಿಸಿದರು. ನರಸಮ್ಮ ನರಸಿಂಹಲು ಮಾಡಗಿರಿ ಮಾತನಾಡಿ ನಗರದಲ್ಲಿ ಕುಡಿಯುವ ನೀರು, ಬೀದಿ ದೀಪ ಮುಂತಾದ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಉಪಾಧ್ಯಕ್ಷ ಸಾಜಿದ್ ಸಮೀರ್ ಮಾತನಾಡಿ ನನಗೆ ಪಕ್ಷ ಉಪಾಧ್ಯಕ್ಷ ಸ್ಥಾನ ನೀಡಿದೆ ನಗರದ ಜನತೆಯ ಆಶೀರ್ವಾದದೊಂದಿಗೆ ಎಲ್ಲರ ವಿಶ್ವಾಸ ಪಡೆದು ಸ್ವಚ್ಚ ನಗರಕ್ಕೆ ಸಂಕಲ್ಪಿಸುವುದಾಗಿ ಹೇಳಿದರು. ಕ್ರೇನ್ ಮೂಲಕ ಭಾರಿ ಹಾರ ಮಾಲಾರ್ಪಣೆ: ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯಲ್ಲಿ ತೆರೆಮರೆಯಲ್ಲಿ ಕಸರತ್ತು ಮಾಡ
- Get link
- Other Apps
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ: ಬಹುತೇಕ ಕಾಂಗ್ರೆಸ್ ತೆಕ್ಕೆಗೆ ನಗರಸಭೆ- ಅಧ್ಯಕ್ಷ ಸ್ಥಾನಕ್ಕೆ ನರಸಮ್ಮ ನರಸಿಂಹಲು ಮಾಡಗಿರಿ, ಉಪಾಧ್ಯಕ್ಷ ಸ್ಥಾನಕ್ಕೆ ಸಾಜಿದ್ ಸಮೀರ್ ನಾಮಪತ್ರ ಸಲ್ಲಿಕೆ. ರಾಯಚೂರು,ಆ.28- ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ನರಸಮ್ಮ ನರಸಿಂಹಲು ಮಾಡಗಿರಿ, ಉಪಾಧ್ಯಕ್ಷ ಸ್ಥಾನಕ್ಕೆ ಸಾಜಿದ್ ಸಮೀರ್ ನಾಮಪತ್ರ ಸಲ್ಲಿಸಿದ್ದಾರೆ. ಬೆಳಿಗ್ಗೆ ನಗರಸಭೆ ಕಚೇರಿಯಲ್ಲಿ ಸಹಾಯಕ ಆಯುಕ್ತರು ಮತ್ತು ಚುನಾವಣಾಧಿಕಾರಿಗಳಾದ ಮೆಹೆಬೂಬಿ ರವರಿಗೆ ನಾಮಪತ್ರ ಸಲ್ಲಿಸಲಾಯಿತು. ಪೌರಾಯುಕ್ತ ಗುರು ಸಿದ್ದಯ್ಯ, ನಗರಸಭೆ ಸದಸ್ಯರಾದ ದರೂರು ಬಸವರಾಜ, ಜಿಂದಪ್ಪ , ಎಂ.ಪವನ್ ಕುಮಾರ್,ಬಿ.ರಮೇಶ್ ಉಪಸ್ಥಿತರಿದ್ದರು. ಬಹುತೇಕ ಅವಿರೋಧ ಆಯ್ಕೆ ಸಾಧ್ಯತೆ: ಬಹುತೇಕ ಅವಿರೋಧ ಆಯ್ಕೆ ನಡೆಯಲಿದೆ ಎನ್ನಲಾಗುತ್ತಿದೆ. ಕಳೆದ ಅವಧಿಗೆ ಉಪಾಧ್ಯಕ್ಷರಾಗಿದ್ದ ನರಸಮ್ಮ ಮಾಡಗಿರಿಗೆ ಮುಂದಿನ 15 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆ ದಟ್ಟವಾಗಿದೆ. ಅನೇಕ ದಿನಗಳಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದಿರಲಿಲ್ಲ ಈಗ ಚುನಾವಣೆ ನಡೆಯುತ್ತಿದೆ.
- Get link
- Other Apps
ಆ.29 ರಂದು ಸಂಸದ ಕುಮಾರ್ ನಾಯಕರಿಗೆ ಬೃಹತ್ ಅಭಿನಂದನಾ ಸಮಾರಂಭ- ಬಾಬುರಾವ್ ರಾಯಚೂರು,ಆ.27- ನೂತನ ಲೋಕಸಭಾ ಸದಸ್ಯರಾದ ಜಿ.ಕುಮಾರ ನಾಯಕ ರವರಿಗೆ ಆ.29 ರಂದು ಬೃಹತ್ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಎಸ್ ಕೆ.ಇ.ಎಸ್ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಬಾಬು ರಾವ ಶೇಗುಣಸಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ 9.30ಕ್ಕೆ ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮ ಉದ್ಘಾಟನೆಯನ್ನು ರಾಯಚೂರು ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ಹರೀಶ ರಾಮಸ್ವಾಮಿ ಮಾಡಲಿದ್ದು ಸಾನಿಧ್ಯವನ್ನು ಅಭಿನವ ರಾಚೋಟಿ ವೀರಶಿವಾಚಾರ್ಯ ಶ್ರೀ ಗಳು ,ತಬಲಿಜ ಜಮಾತ್ ಮೌಲಾನಾ ನಿಜಾಮುದ್ದೀನ್ ರಶಾದಿ ಹಾಗೂ ರೆ.ಜಾನ್ ವೆಸ್ಲಿ ಡೇವಿಡ್ ಆಗಮಿಸಲಿದ್ದಾರೆ ಎಂದರು. ಗೌರವಾಧ್ಯಕ್ಷತೆಯನ್ನು ಏಮ್ಸ್ ಹೋರಾಟ ಸಮಿತಿಯ ಬಸವರಾಜ ಕಳಸ ವಹಿಸಲಿದ್ದು, ಅತಿಥಿಗಳಾಗಿ ಪ್ರೋ.ಪರಮೇಶ್ವರ ಸಾಲಿಮಠ,ರಾಮಚಂದ್ರ ಪ್ರಭು, ಕೇಶವರೆಡ್ಡಿ, ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಥಾಮಸ್ ಬೆಂಜಮಿನ್, ಆದಿಲ್,ಶರಣಪ್ಪ ನಂದಿಹಾಳ, ಭೀಮರೆಡ್ಡಿ ಇದ್ದರು.
- Get link
- Other Apps
ಐದು ಜಿಲ್ಲೆಗಳ ಅಂಗನವಾಡಿ ಕೇಂದ್ರಗಳ ಮೂಲಭೂತ ಸಮಸ್ಯೆಗಳ ಕುರಿತು ಅಧ್ಯಯನ: ಅಂಗನವಾಡಿ ಕೇಂದ್ರಗಳ ಆಹಾರ ಸ್ಥಳೀಯವಾಗಿ ತಯಾರಿಕೆಗೆ ಸರ್ಕಾರ ಆದೇಶಿಸಲಿ- ರವೀಂದ್ರ ಜನೇಕಲ್. ರಾಯಚೂರು,ಆ.27- ಅಂಗನವಾಡಿ ಕೇಂದ್ರಗಳಿಗೆ ವಿತರಿಸುವ ಆಹಾರವನ್ನು ಈ ಮೊದಲಿನಂತೆ ಸ್ಥಳೀಯವಾಗಿ ತಯಾರಿಸಲು ಸರ್ಕಾರ ಆದೇಶಿಸಬೇಕೆಂದು ಸಾಮಾಜಿಕ ಸುರಕ್ಷಾ ಜನ ವೇದಿಕೆ ಮಾನ್ವಿ ಘಟಕದ ರವೀಂದ್ರ ಜಾನೇಕಲ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂಗನವಾಡಿ ಕೇಂದ್ರಗಳ ಬಗ್ಗೆ ನಮ್ಮ ಸಂಸ್ಥೆಯಿಂದ ಅಧ್ಯಯನ ಮಾಡಿದ್ದು ಅಂಗನವಾಡಿ ಕೇಂದ್ರಗಳ ಮೂಲಭೂತ ಸಮಸ್ಯೆಗಳ ನಿವಾರಣೆ ಮತ್ತು ಮಕ್ಕಳಿಗೆ ಆಹಾರ ಗುಣಮಟ್ಟ ಹೆಚ್ಚಿಸುವಂತೆ ಹಕ್ಕೊತ್ತಾಯ ಮಾಡಲಾಗಿದೆ ಎಂದರು. ಮಕ್ಕಳಿಗೆ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕೆ ಕೇಂದ್ರಗಳಿಂದ ಕಳುಹಿಸುವ ಆಹಾರ ಸಾಮಗ್ರಿಗಳು ಗುಣಮಟ್ಟದ ಬಗ್ಗೆ ಅನುಮಾನವಿದ್ದು ಮಿಲೆಟ್ ಲಡ್ಡು ಹಾಗೂ ರವೆಯಿಂದ ಮಾಡಿದ ಆಹಾರ ಸೇವಿಸಿದ ಮಕ್ಕಳಿಗೆ ಹೊಟ್ಟೆನೋವು ಮತ್ತು ಬೇಧಿಯಾಗಿದೆ ಆದ್ದರಿಂದ ಸರ್ಕಾರ ಈ ಬಗ್ಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಂಡು ಅಂಗನವಾಡಿಗಳ ಬಲವರ್ಧನೆಗೆ ಮುಂದಾಗಬೇಕೆಂದರು. ಈ ಸಂದರ್ಭದಲ್ಲಿ ಚಾರ್ಲಿ, ಸದಾನಂದ,ಕಾಸಿಂ,ಈಶಮ್ಮ, ಗಂಗಮ್ಮ ಇನ್ನಿತರರು ಇದ್ದರು.
- Get link
- Other Apps
ಆ.29 ಮತ್ತು 30 ರಂದು ರಾಜ್ಯಮಟ್ಟದ ಹೊನಲು ಬೆಳಕಿನ ಹಾಕಿ ಪಂದ್ಯಾವಳಿ: ಪುರುಷರು ಮತ್ತು ಮಹಿಳೆಯರ 24 ತಂಡಗಳು ಭಾಗಿ- ಜಯ ಪ್ರಕಾಶ್ ರೆಡ್ಡಿ. ರಾಯಚೂರು,ಆ.27- ಹಾಕಿ ಮಾಂತ್ರಿಕ ಧ್ಯಾನ ಚಂದರವರ 119ನೆ ಹುಟ್ಟು ಹಬ್ಬದ ಪ್ರಯುಕ್ತ ಆ.29 ಮತ್ತು 30 ರಂದು ಹೊನಲು ಬೆಳಕಿನ ಹಾಕಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹಾಕಿ ರಾಯಚೂರು ಸಂಸ್ಥೆಯ ಉಪಾಧ್ಯಕ್ಷ ಜಯಪ್ರಕಾಶ್ ರೆಡ್ಡಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಷ್ಟ್ರೀಯ ಹಾಕಿ ದಿನಾಚರಣೆ ಪ್ರಯುಕ್ತ ಹಾಕಿ ರಾಯಚೂರು ಮತ್ತು ಹಾಕಿ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ಆ.29 ರಂದು ಮಧ್ಯಾಹ್ನ 3.30ಕ್ಕೆ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದ ಬಾಸ್ಕೇಟ್ ಬಾಲ್ ಕೋರ್ಟ್ ನಲ್ಲಿ ಆಯೋಜಿಸಲಾಗಿದ್ದು ಉದ್ಘಾಟನೆಯನ್ನು ಶಾಸಕ ಡಾ.ಶಿವರಾಜ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಎ. ವಸಂತ್ ಕುಮಾರ್ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಆರ್ ಡಿ ಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ರವಿ ಫೌಂಡೇಶನ್ ಅಧ್ಯಕ್ಷ ರವಿ ಪಾಟೀಲ್ ಆಗಮಿಸಲಿದ್ದಾರೆಂದು. ಆ.30 ರಂದು ರಾತ್ರಿ 9.30 ನಡೆಯುವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ
- Get link
- Other Apps
ಗಣೇಶ ಚತುರ್ಥಿ ಪ್ರಯುಕ್ತ ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲು- ಬಾಬುರಾವ್ ರಾಯಚೂರು,ಆ.27- ಗಣೇಶ ಚತುರ್ಥಿ ಹಬ್ಬದ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸಲು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಮತ್ತು ಕಲಬುರಗಿ ನಡುವೆ ಸೆಪ್ಟೆಂಬರ್ 5, 6 ಮತ್ತು 7ರಂದು ಒನ್ ಟ್ರಿಪ್ (ಒಂದು ಬಾರಿ) ವಿಶೇಷ ರೈಲು ಸಂಚರಿಸಲಿದೆ ಎಂದು ರೈಲ್ವೆ ಬೋರ್ಡ್ ಸಲಹಾ ಸಮಿತಿ ಮಾಜಿ ಸದಸ್ಯ ಡಾ.ಬಾಬುರಾವ್ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, 06589 ಸಂಖ್ಯೆಯ ರೈಲು ಸೆ. 5, 6 ಹಾಗೂ 7ರಂದು ಎಸ್ಎಂವಿಟಿಯಿಂದ ರಾತ್ರಿ 09.15 ಕ್ಕೆ ಹೊರಟು ಸೆ.6, 7 ಮತ್ತು 8ರಂದು ಬೆಳಿಗ್ಗೆ 7.40ಕ್ಕೆ ಕಲಬುರಗಿ ನಿಲ್ದಾಣ ತಲುಪಲಿದೆ. 06590 ಸಂಖ್ಯೆಯ ರೈಲು ಸೆ.6, 7 ಹಾಗೂ 8ರಂದು ಬೆಳಿಗ್ಗೆ 9.35ಕ್ಕೆ ಕಲಬುರಗಿಯಿಂದ ಹೊರಟು ಅದೇ ದಿನಗಳ ರಾತ್ರಿ 8ಕ್ಕೆ ಎಸ್ಎಂವಿಟಿ ನಿಲ್ದಾಣ ತಲುಪಲಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಿಂದ ಹೊರಡುವ ರೈಲ್ವೆ ರಾಯಚೂರಿಗೆ ಬೆಳಿಗ್ಗೆ 4.03 ನಿಮಿಷಕ್ಕೆ ಅದೇರೀತಿ ಕಲಬುರಗಿಯಿಂದ ಹೊರಡುವ ರೈಲು 11.53 ಕ್ಕೆ ರಾಯಚೂರು ತಲುಪಲಿದೆ ಎಂದು ತಿಳಿಸಿದ್ದಾರೆ. ಈ ವಿಶೇಷ ರೈಲು ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರೋಡ್, ಯಾದಗಿರಿ ಹಾಗೂ ಶಹಾಬಾದ್ನಲ್ಲಿ ನಿಲುಗಡೆಯಾಗಲಿದೆ. ಮುಂಗಡ ಬುಕ್ಕಿಂಗ್ ಮತ್ತು ವೇಳಾಪಟ್ಟಿ ಮಾಹಿತಿಗಾಗಿ www.enquiry.indian
- Get link
- Other Apps
ನಗರದೆಲ್ಲಡೆ ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ. ರಾಯಚೂರು,ಆ.26- ದೇವಕಿ ನಂದನ, ವಾಸುದೇವ ಸುತ, ಗೋಪಾಲ, ಶ್ರೀ ಕೃಷ್ಣ... ಹೀಗೆ ಅನೇಕ ನಾಮಗಳಿಂದ ಸ್ತುತಿಸುವ ಲೋಕೋಧ್ಧಾರಕನಾದ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದೆಲ್ಲೆಡೆ ಕೃಷ್ಣ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಜವಾಹರ್ ನಗರ ಶ್ರೀ ವಿಠಲ ಕೃಷ್ಣ ಮಂದಿರ, ಆರ್ಯ ವೈಶ್ಯ ಗೀತಾ ಮಂದಿರ, ಯಾದವ್ ಸಂಘದ ಕೃಷ್ಣ ದೇವಾಲಯ, ಇಸ್ಕಾನ್ ಮುಂತಾದೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಶ್ರೀ ಕೃಷ್ಣನ ಮೂರ್ತಿಗೆ ಭವ್ಯ ಅಲಂಕಾರ ಮಾಡಲಾಗಿತ್ತು. ವೇದಿಕೆ ಕಾರ್ಯಕ್ರಮದಲ್ಲಿ ಭರತನಾಟ್ಯ, ದಾಸವಾಣಿ, ಕೃಷ್ಣನ ವೇಷ ಭೂಷಣ ತೊಟ್ಟ ಚಿಣ್ಣರ ಕಲರವ ಕೃಷ್ಣನೆ ಧರೆಗಿಳಿದು ಬಂದಂತೆ ಭಾಸವಾಯಿತು. ಕಣ್ಮನ ಸೆಳೆದ ಕೃಷ್ಣ ವೇಷಧಾರಿ : ಸರ್ವಶ್ರೀ ಎಂಬ ಮುದ್ದು ಬಾಲಕಿ ಕೃಷ್ಣವೇಷಧಾರಿಯಾಗಿ ಕೊಳಲನ್ನು ಹಿಡಿದು ಗಮನ ಸೆಳೆದಳು .
- Get link
- Other Apps
ಜಿಲ್ಲಾಡಳಿತದಿಂದ ಅರ್ಥಪೂರ್ಣ ಶ್ರೀಕೃಷ್ಣ ಜಯಂತಿ ಆಚರಣೆ, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ : ಶ್ರೀಕೃಷ್ಣನ ಆದರ್ಶ ಪಾಲನೆ ಮಾಡಬೇಕಾಗಿದೆ- ಎ.ವಸಂತ ಕುಮಾರ ರಾಯಚೂರು,ಆ.26 ಶ್ರೀಕೃಷ್ಣ ಜೀವನೋತ್ಸಾಹದ ಸಂಕೇತ ಶ್ರೀಕೃಷ್ಣನ ಪ್ರಬುದ್ಧತೆ, ಮುತ್ಸದ್ದಿತನ ಇಂದಿನ ಕಾಲಘಟ್ಟಕ್ಕೂ ಮಾದರಿಯಾಗಿ ನಿಲ್ಲುತ್ತದೆ ಯುದ್ಧ ಕಾಲದಲ್ಲಿ ನೀಡಿದ ಶ್ರೀಕೃಷ್ಣ ಭೋದನೆ ಸಹ ಗಮನ ಸೆಳೆಯುತ್ತದೆ ಆದ್ದರಿಂದ ನಾವೆಲ್ಲರೂ ಶ್ರೀಕೃಷ್ಣನ ಆದರ್ಶ ಪಾಲನೆ ಮಾಡಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಎ.ವಸಂತ ಕುಮಾರ ಅವರು ಹೇಳಿದರು. ಅವರಿಂದು ನಗರದ ಯಾದವ ಸಂಘದ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭಗವದ್ಗೀತೆ ಅರಿತುಕೊಂಡವರು ಜೀವನ ಮೌಲ್ಯ ಮತ್ತು ಬದುಕಿನ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳತ್ತಾರೆ. ಭಗವದ್ಗೀತೆಯ ಸಾರವನ್ನು ಮಾತ್ರವೇ ಶ್ರೀಕೃಷ್ಣನು ಭೋದಿಸದೆ ತಮ್ಮ ಜೀವನದಿಂದಲೂ ಮಾನವ ಅರಿತುಕೊಳ್ಳಬೇಕಾದ ಅಂಶಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದರು. ಭಗವಾನ್ ವಿಷ್ಣುವಿನ ಎಂಟನೆಯ ಅವತಾರವಾಗಿರುವ ಶ್ರೀಕೃಷ್ಣನು, ದುಷ್ಟರನ್ನು ಶಿಕ್ಷಿಸುವುದಕ್ಕೆ ಮತ್ತು ಧರ್ಮದಸ್ಥಾಪನೆಗಾಗಿ ಅವತಾರವೆತ್ತಿದ್ದಾನೆ. ತನ್ನ ಅವತಾರದ ಮಹತ್ವ ಮತ್ತು ಧರ್ಮ ಸಂಸ್ಥಾಪನೆಯ ಉದ್ದೇಶವನ್ನು ಕೃಷ್ಣನು ಅರ್ಜುನನಿಗೆ ಮಹಾಭಾರತ ಯುದ್ಧ
- Get link
- Other Apps
ರಾಯಚೂರಿನಲ್ಲಿ ಟೊಯೋಟಾ ಎಬಿಸಿಡಿ ಕಾರ್ಯಕ್ರಮಕ್ಕೆ ಸಿಎಸ್ಆರ್ ಟೈಮ್ಸ್ ಪ್ರಶಸ್ತಿ ರಾಯಚೂರು,ಆರ್.26-ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ವಿಚಾರದಲ್ಲಿ ಬದ್ಧತೆ ಮೆರೆಯುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) “ಸ್ವಚ್ಛ ಭಾರತ” ವಿಭಾಗದಡಿಯಲ್ಲಿ ಸಿಎಸ್ಆರ್ ಟೈಮ್ಸ್ ಅವಾರ್ಡ್ 2024 ಪುರಸ್ಕಾರಕ್ಕೆ ಪಾತ್ರವಾಗಿದೆ. ಕರ್ನಾಟಕದ ಅಭಿವೃದ್ಧಿಶೀಲ ಜಿಲ್ಲೆ ಆಗಿರುವ ರಾಯಚೂರಿನಲ್ಲಿ ತನ್ನ ಸಾಮಾಜಿಕ ಪರಿಣಾಮ ಬೀರುವ ಕಾರ್ಯಕ್ರಮವಾದ ಎಬಿಸಿಡಿ (ಎ ಬಿಹೇವಿಯರಲ್ ಚೇಂಜ್ ಡೆಮಾನ್ಸ್ಟ್ರೇಶನ್) ಮೂಲಕ ನೈರ್ಮಲ್ಯ, ಆರೋಗ್ಯ ಹೆಚ್ಚಿಸುವ ನಿಟ್ಟಿನಲ್ಲಿ ಟಿಕೆಎಂ ಸಂಸ್ಥೆಯು ನಡೆಸಿದ ಮಹತ್ವದ ಕೆಲಸವನ್ನು ಗುರುತಿಸಿರುವ ನೀತಿ ಆಯೋಗವು ಈ ಪ್ರಶಸ್ತಿ ಪುರಸ್ಕಾರಕ್ಕೆ ಟಿಕೆಎಂ ಸಂಸ್ಥೆಯನ್ನು ಆಯ್ಕೆ ಮಾಡಿದೆ. ಗೋವಾದ ರಾಜಭವನದ ದರ್ಬಾರ್ ಹಾಲ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ರಾಜ್ಯ ಸಚಿವ ಶ್ರೀಪಾದ್ ನಾಯಕ್, ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಪುನೀತ್ ಕುಮಾರ್ ಗೋಯೆಲ್ ಉಪಸ್ಥಿತರಿದ್ದರು. ಸಿಎಸ್ಆರ್ ಟೈಮ್ಸ್ ಪ್ರಶಸ್ತಿಯು ಅತ್ಯುತ್ತಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಕೆಲಸಗಳನ್ನು ಮಾಡುವ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ಗೌರವಾನ್ವಿತ ಪುರಸ್ಕಾರವಾಗಿದೆ. 2013ರಲ್ಲಿ ಇದನ್ನು ಆರ
- Get link
- Other Apps
ಮಂತ್ರಾಲಯದಲ್ಲಿ ಅಂತರಾಷ್ಟ್ರೀಯ ದಾಖಲೆಗಾಗಿ ಏಕಕಾಲದಲ್ಲಿ 350 ನೃತ್ಯ ಕಲಾವಿದರಿಂದ ನಾಮ ರಾಮ ನಾಮ ನೃತ್ಯ ಪ್ರದರ್ಶನ ರಾಯಚೂರು,ಆ.26- ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಮಂತ್ರಾಲಯ ಹಾಗೂ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಚನ್ನರಾಯಪಟ್ಟಣ ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಗುರುಗಳ ಆಶೀರ್ವಾದದೊಂದಿಗೆ ಆಗಸ್ಟ್ 25ರಂದು ಭಾನುವಾರ ಸಂಜೆ 5:00 ಗಂಟೆಗೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಮುಂಭಾಗದಲ್ಲಿರುವ ಕಾರಿಡಾರ್ ನಲ್ಲಿ ವಿಶ್ವದಾದ್ಯಂತ 350ಕ್ಕೂ ಹೆಚ್ಚು ನೃತ್ಯ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ 15 ನಿಮಿಷಗಳ ಕಾಲ ಶ್ರೀ ನಾಮ ರಾಮ ನಾಮ ಗೀತೆಗೆ ಪಕ್ಕ ವಾದ್ಯದೊಂದಿಗೆ ಏಕಕಾಲದಲ್ಲಿ ನೃತ್ಯ ಮಾಡುವ ಮೂಲಕ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಅಕಾಡೆಮಿ ಮತ್ತು ಮಕ್ಕಳು ಹಾಗೂ ಮಠದ ಹೆಸರನ್ನು ಸೇರಿಸುವ ಹಿನ್ನೆಲೆಯಲ್ಲಿ ಜಪಾನ್ ಜರ್ಮನ್ ಇಂಡೋನೇಷಿಯಾ ಸೇರಿದಂತೆ ಭಾರತ ದೇಶದ ಹಲವಾರು ಭಾಗಗಳಿಂದ ಆಗಮಿಸಿದ ವೃಕ್ಷ ಕಲಾವಿದರಿಗೆ ರಾಯರ ದರ್ಶನ ಮಾಡಿಸುವ ಮೂಲಕ ದೃಶ್ಯ ಸಂಭ್ರಮವನ್ನು ರಾಯರ ಪಾದದಲ್ಲಿ ಸಮರ್ಪಣೆ ಮಾಡುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು . ರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಉದ್ಘಾಟನೆ ಮಾಡಿದರು. ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಮುಖ್ಯ ವ್ಯವಸ್ಥಾಪಕರಾದ
- Get link
- Other Apps
ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ನಡೆ ವಿರೋಧಿಸಿ ಆ.27 ರಂದು ಬೆಂಗಳೂರಲ್ಲಿ ಪ್ರತಿಭಟನೆ: ಮೂಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಪಾತ್ರವಿಲ್ಲ- ಕೆ.ಶಾಂತಪ್ಪ. ರಾಯಚೂರು,ಆ.25- ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ನಡೆ ವಿರೋಧಿಸಿ ಆ.27 ರಂದು ಬೆಂಗಳೂರಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದುಳಿದ ವರ್ಗಗಳ ಒಕ್ಕೂಟ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೂಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಸಿದ್ದರಾಮಯ್ಯ ಏಳ್ಗೆ ಸಹಿಸದೆ ಅವರ ಜನಪ್ರಿಯತೆ ಮತ್ತು ಪಂಚ ಗ್ಯಾರಂಟಿಗಳ ಯಶಸ್ಸು ಕಂಡು ಹತಾಶರಾಗಿದ್ದಾರೆ ಎಂದು ಹೇಳಿದರು. ಬಡವರ, ಶೋಷಿತರ ಪರ ಕಾಂಗ್ರೆಸ್ ಪಕ್ಷ ಇರುವ ಕಾರಣ ಜನರು ನಮಗೆ ಆಶೀರ್ವದಿಸಿದ್ದರಿಂದ ಬಿಜೆಪಿ ಜೆಡಿಎಸ್ ವಾಮ ಮಾರ್ಗದಿಂದ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಮಾಡುತ್ತಿವೆ ಅದಕ್ಕೆ ಕೇಂದ್ರ ಬಿಜೆಪಿ ನಾಯಕರು ಸಹ ಕೈಜೋಡಿಸಿದ್ದಾರೆ ಎಂದರು. ರಾಜ್ಯಪಾಲರು ಸಂವಿಧಾನ ವಿರೋಧಿ ನಡೆ ಅನುಸರಿಸಿದ್ದು ಯಾವುದೇ ಆಯೋಗ, ತನಿಖಾ ಸಂಸ್ಥೆ ವರದಿ ನೀಡದಿದ್ದರು ಪ್ರಾಸಿಕ್ಯೂಷನ್ ಗೆ ಅನುಮತಿ ಸಿದ್ದಾರೆ ಎಂದ ಅವರು ಲೋಕಾಯುಕ್ತ ಸಂಸ್ಥೆ ಹೆಚ್.ಡಿ.ಕುಮಾರ ಸ್ವಾಮಿ ಇನ್ನಿತರರ ವಿರುದ್ಧ ಅಭಿಯೋಜನೆಗೆ ಕೋರಿದ್ದರು ರಾಜ್ಯಪಾಲರು ಅನುಮತ
- Get link
- Other Apps
ಆ.25 ರಂದು ಮಂತ್ರಾಲಯದಲ್ಲಿ ಅಂತರಾಷ್ಟ್ರೀಯ ದಾಖಲೆಗಾಗಿ ಏಕಕಾಲದಲ್ಲಿ 300 ನೃತ್ಯ ಕಲಾವಿದರಿಂದ ನಾಮ ರಾಮಾಯಣಂ ನೃತ್ಯ ಪ್ರದರ್ಶನ ರಾಯಚೂರು,ಆ.24- ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಮಂತ್ರಾಲಯ ಹಾಗೂ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಚನ್ನರಾಯಪಟ್ಟಣ ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸುಬುಧೇ೦ದ್ರ ತೀಥ೯ ಶ್ರೀಪಾದ೦ಗಳವರ ಆಶೀರ್ವಾದದೊಂದಿಗೆ ಆಗಸ್ಟ್ 25ರಂದು ಭಾನುವಾರ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಮುಂಭಾಗದಲ್ಲಿರುವ ಕಾರಿಡಾರ್ ನಲ್ಲಿ ವಿಶ್ವದಾದ್ಯಂತ ಕಡೆಯಿಂದ ಆಗಮಿಸುತ್ತಿರುವ ನೃತ್ಯ ಗುರುಗಳು ಮತ್ತು ನೃತ್ಯ ಕಲಾವಿದರು ಸೇರಿ 300ಕ್ಕೂ ಹೆಚ್ಚು ನೃತ್ಯಪಟುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ 15 ನಿಮಿಷಗಳ ಕಾಲ ಶ್ರೀ ನಾಮ ರಾಮಾಯಣಂ ಗೀತಗೆ ಪಕ್ಕ ವಾದ್ಯದೊಂದಿಗೆ ಏಕಕಾಲದಲ್ಲಿ ನೃತ್ಯ ಮಾಡುವ ಮೂಲಕ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಅಕಾಡೆಮಿ ಮತ್ತು ಮಕ್ಕಳು ಹಾಗೂ ಮಠದ ಹೆಸರನ್ನು ಸೇರಿಸುವ ಹಿನ್ನೆಲೆಯಲ್ಲಿ ಜಪಾನ್ ,ಜರ್ಮನಿ ಇಂಡೋನೇಷಿಯಾ, ದೇಶ ಸೇರದಂತೆ ಭಾರತ ದೇಶದ ಹಲವಾರು ರಾಜ್ಯದ ಭಾಗಗಳಿಂದ ಆಗಮಿಸುತ್ತಿರುವ ಕಲಾವಿದರಿಗೆ ರಾಯರ ದರ್ಶನ ಮಾಡಿಸುವ ಮೂಲಕ ಈ ನೃತ್ಯೋತ್ಸವ ಸಂಭ್ರಮವನ್ನು ರಾಯರ ಪಾದದಲ್ಲಿ ಸಮರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಆ ದಿನ ಸಂಜೆ 5 ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಬುಧೇ೦ದ್ರ ತೀಥ೯ ಶ್ರೀಪಾದ೦ಗಳ
- Get link
- Other Apps
ರಾಯಚೂರು ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಮಹತ್ವದ ಸಭೆ ರಾಯಚೂರು ಆ. 23- ರಾಯಚೂರು ವಿಮಾನ ನಿಲ್ದಾಣ ಸ್ಥಾಪನೆ ಕುರಿತಂತೆ ಇಂದು ವಿಧಾನ ಸೌಧದಲ್ಲಿ ಮಹತ್ವದ ಸಭೆಯನ್ನು ನಡೆಸಲಾಯಿತು. ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಲಾಯಿತು. ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಅನುಮತಿ ಪಡೆಯಲು ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ. ಬಿ. ಪಾಟೀಲ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು, ರಾಯಚೂರು ಸಂಸದರಾದ ಕುಮಾರ ನಾಯಕ್, ಮೂಲಭೂತ ಸೌಕರ್ಯ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ರಾದ ಖುಷ್ಬೂ ಚೌಧರಿ, ರಾಯಚೂರು ಜಿಲ್ಲಾಧಿಕಾರಿ ನಿತೀಶ್.ಕೆ ಉಪಸ್ಥಿತರಿದ್ದರು.
- Get link
- Other Apps
ಬಾಬು ಜಗಜೀವನರಾಮ್ ಸಮುದಾಯ ಭವನ ನಿರ್ಮಾಣಕ್ಕೆ ಎ.ವಸಂತ್ ಕುಮಾರ್ ಮನವಿ . ರಾಯಚೂರು,ಆ.23- ನಗರದಲ್ಲಿ ಸಮುದಾಯ ಭವನ ನಿರ್ಮಾಣ ಮಾಡುವಂತೆ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹಾದೇವಪ್ಪರವರಿಗೆ ವಿಧಾನ ಪರಿಷತ್ ಸದಸ್ಯ ಎ.ವಸಂತ್ ಕುಮಾರ್ ಮನವಿ ಮಾಡಿದರು. ನಗರದ ಹರಿಜನವಾಡದ ಎನ್.ಜಿ.ಓ ಕಾಲೋನಿಯಲ್ಲಿ ಬಾಬು ಜಗಜೀವನರಾಮ್ ಸಮುದಾಯ ಭವನ ನಿರ್ಮಾಣ ಮಾಡುವಂತೆ ಕೋರಿದರು . ಎಸ್ಸಿ ಎಸ್ಟಿ ಜನಾಂಗಕ್ಕೆ ಸಭೆ, ಸಮಾರಂಭ ಮಾಡಿಕೊಳ್ಳಲು ಸಮುದಾಯ ಭವನ ಅವಶ್ಯಕತೆಯಿದ್ದು ತಮ್ಮ ಇಲಾಖೆಯಿಂದ 5 ಕೋಟಿ ರೂ. ಮಂಜೂರು ಮಾಡುವಂತೆ ಕೋರಿದರು.
- Get link
- Other Apps
ಮಂತ್ರಾಲಯದಲ್ಲಿ ರಾಯರ ಉತ್ತರಾರಾಧನೆ ಮಹಾರಥೋತ್ಸವಕ್ಕೆ ಹೆಲಿಕಾಪ್ಟರ್ ನಿಂದ ಪುಷ್ಪ ವೃಷ್ಟಿ : ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ರಾಯಚೂರು,ಆ.22- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ 353ನೇ ಉತ್ತರಾರಾಧನೆ ಅಂಗವಾಗಿ ಶ್ರೀ ಪ್ರಹ್ಲಾದ ರಾಜರ ಮಹಾರಥೋತ್ಸವ ಅದ್ದೂರಿಯಾಗಿ ನೆರವೇರಿತು. ಬೆಳಿಗ್ಗೆ ಶ್ರೀ ಪ್ರಹಲ್ಲಾದರಾಜರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ನಂತರ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಮಹಾರಥೋತ್ಸಕ್ಕೆ ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದರು. ಬಾನಂಗಳಿಂದ ಹೆಲಿಕಾಪ್ಟರ್ ಮೂಲಕ ರಥೋತ್ಸವಕ್ಕೆ ಪುಷ್ಪ ವೃಷ್ಟಿ ನೆರವೇರಿತು. ಇದಕ್ಕೂ ಪೂರ್ವ ಶ್ರೀಮಠದಲ್ಲಿ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಮೈಸೂರು ಕೊಡಗು ಸಂಸದರು ಹಾಗೂ ಮೈಸೂರು ಮಹಾರಾಜರಾದ ಶ್ರೀ ಯದುವೀರ ಶ್ರೀ ಕೃಷ್ಣದತ್ತ ಒಡೆಯರ್ ರವರಿಗೆ ಪೀಠಾಧಿಪತಿಗಳು ಪ್ರದಾನ ಮಾಡಿದರು. ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಮಾತನಾಡಿ ಮೈಸೂರು ಮತ್ತು ಮಂತ್ರಾಲಯಕ್ಕೆ ಮೂರು ಶತಮಾನಗಳ ಸಂಬಂಧವಿದೆ ಜಯಚಾಮರಾಜೇಂದ್ರ ಒಡೆಯರ್ ಶ್ರೀ ಮಠದ ಭಕ್ತರಾಗಿದ್ದರು ಅವರು ಶ್ರೀ ಮಠಕ್ಕೆ ಭಕ್ತಿ ಸಮರ್ಪಿಸಿ