
ಹೊಸಪೇಟೆ ಗ್ರಾಮದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿನೆ: ಹೊಸಪೇಟೆ ಕೆಂಪಿನ ಮಠದ ಗತವೈಭವ ಮರುಕಳಿಸಿದೆ- ಕಿಲ್ಲೆ ಬೃಹನ್ಮಠ ಶ್ರೀಗಳು ರಾಯಚೂರು,ನ.30- ಹೊಸಪೇಟೆಯ ಕೆಂಪಿನ ಮಠದಲ್ಲಿ ಗತವೈಭವ ಮರುಕಳಿಸಿದೆ ವ್ಯಕ್ತಿಗೆ ಸಾವಿದೆ ಮಠ ಮಾನ್ಯಗಳಿಗಿಲ್ಲ ಭಕ್ತರು ಈ ಮಠವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಶ್ರೀ ಗಳು ಕರೆ ನೀಡಿದರು. ತಾಲೂಕಿನ ಹೊಸಪೇಟೆ ಗ್ರಾಮದ ಕೆಂಪಿನ ಮಠದಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಅನೇಕ ವರ್ಷಗಳ ಇತಿಹಾಸ ಈ ಮಠಕ್ಕಿದೆ. ನಾವು ಯಾರು ಮಾಡದ ಕಾರ್ಯವನ್ನು ಹಿಂದಿನವರು ಮಾಡಿ ಹೋಗಿದ್ದಾರೆ. ಅಂದಿನ ಕಾಲದಲ್ಲಿ ಇಷ್ಟು ಗಟ್ಟಿಮುಟ್ಟಾದ ಮಠ ಕಟ್ಟಿರುವುದು ಸಣ್ಣ ವಿಚಾರವಲ್ಲ. ಇಂದು ಆರ್ಸಿಸಿ ಕಟ್ಟಡ ಕಟ್ಟಬೇಕಾದರೆ ನಾನಾ ಪಡಿಪಾಡಲು ಪಡಬೇಕಿದೆ. ಆದರೆ, ಹಿಂದಿನ ಕಾಲದವರು ಕಲ್ಲಿನಲ್ಲಿಯೇ ಇಷ್ಟೊಂದು ಸದೃಢ ಮಠಗಳನ್ನು ಕಟ್ಟಿ ಹೋಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು. ಕಾಲಗರ್ಭದಲ್ಲಿ ಎಷ್ಟೊ ಘಟನೆಗಳು ನಡೆಯುತ್ತಿರುತ್ತವೆ. ಶಕುನಿಯಿಂದ ಮಹಾಭಾರತಕ್ಕೆ ಮಹತ್ವ ಸಿಕ್ಕರೆ, ರಾಮಾಯಣದಲ್ಲಿ ರಾವಣ ಪ್ರವೇಶದಿಂದ ಪ್ರಾಮುಖ್ಯತೆ ಬಂತು. ಕೊಂಡಿ ಮಂಚಣ್ಣ ಬಸವಣ್ಣನ ವಚನಗಳ ಮಂಥನವಾದಾಗಲೇ ಅದಕ್ಕೆ ನಿಜವಾದ ಅರ್ಥ ಸಿಕ್ಕಿತು. ಹಾಗೆಯೇ ಕೆಟ್ಟದ್ದಾಗಿದ...