Posts

Showing posts from November, 2022

ಶೀಘ್ರವೇ ರೈಲ್ವೇ ನಿಲ್ದಾಣ ಮೇಲ್ದರ್ಜೆಗೆ: ನಗರದ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್ ಉದ್ಘಾಟನೆ

Image
ಶೀಘ್ರವೇ ರೈಲ್ವೇ ನಿಲ್ದಾಣ ಮೇಲ್ದರ್ಜೆಗೆ:                         ನಗರದ  ರೈಲ್ವೇ ನಿಲ್ದಾಣದಲ್ಲಿ  ಲಿಫ್ಟ್ ಉದ್ಘಾಟನೆ ರಾಯಚೂರು,ನ.30- ನಗರದ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಡೆದಿದ್ದು ಸದ್ಯ ಲಿಫ್ಟ್ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಸಂಸದರಾದ ರಾಜಾ ಅಮರೇಶ್ವರ ನಾಯಕ  ಹೇಳಿದರು.             ಅವರಿಂದು ನಗರದ ರೇಲ್ವೆ ನಿಲ್ದಾಣದಲ್ಲಿ ನೂತನ ಲಿಫ್ಟ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ನಗರದ ರೇಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಈಗಾಗಲೇ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಲಿಫ್ಟ್ ಈ ಮುಂಚೆಯೇ ಉದ್ಘಾಟನೆಗೊಳ್ಳಬೇಕಿತ್ತು ಕರೋನಾ ಸೇರಿದಂತೆ ನಾನಾ ಕಾರಣಗಳಿಂದ ಮುಂದೂಡುತ್ತ ಬರಲಾಗಿತ್ತು ಈಗ ಬಹುದಿನಗಳ ಬೇಡಿಕೆ ಈಡೇರಿದಂತಾಗಿದ್ದು, ವಿಕಲಚೇತನರು, ಅಶಕ್ತರು, ವೃದ್ಧರಿಗೆ ಇದರಿಂದ ಅನುಕೂಲವಾಗಲಿದೆ ಎಂದ ಅವರು ಈ ಹಿಂದೆ ವೃದ್ಧರಿಗೆ ಪ್ಲಾಟ್ ಫಾರಂ ನಲ್ಲಿ ಸಂಚರಿಸಲು  ಬ್ಯಾಟರಿ ಚಾಲಿತ ಬಹು ಆಸನಗಳ ಲಘವಾಹನ ವ್ಯವಸ್ಥೆ ಮಾಡಲಾಗಿದ್ದು ಎಲ್ಲರ  ಗಮನ ಸೆಳೆದಿದ್ದು ಮಾತ್ರವಲ್ಲದೆ ಅನೇಕರಿಂದ ಪ್ರಶಂಸೆಯ ಮಾತುಗಳು ಕೇಳಿ ಬಂದಿವೆ ಎಂದರು.  ರೇಲ್ವೆ ನಿಲ್ದಾಣದ ಮುಖ್ಯದ್ವಾರವನ್ನು 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು. ರೈಲ್ವೆ ನಿಲ್ದಾಣ ಹಳೆಯದಾಗಿದ್ದು ಇದನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಕೇಂದ್ರ ರೈಲ್ವೆ ಸಚಿವರಿಗೆ ಸಲ್ಲಿಸಲಿದ್ದೇವೆ   ಎಂದು  ಹೇಳಿದರು.ರೈಲ್ವೆ ಸಚಿವರು

ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ(ದಿಶಾ) ಸಭೆ: ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ- ರಾಜಾ ಅಮರೇಶ್ವರ ನಾಯಕ

Image
  ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ(ದಿಶಾ) ಸಭೆ:   ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ- ರಾಜಾ ಅಮರೇಶ್ವರ ನಾಯಕ ರಾಯಚೂರು,ನ.೩೦- ಕೇಂದ್ರದ ಪುರಸ್ಕೃತ ಯೋಜನೆಯಡಿ ಜನಸಾಮಾನ್ಯಮರಿಗೆ ದೊರೆಯುವಂತಹ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ಒದಗಿಸಿ ಹಾಗೂ ಜನಸಾಮಾನ್ಯರಿಗೆ ಯೋಜನೆಗಳ ಸೌಲಭ್ಯಗಳು ಸಮರ್ಪಕವಾಗಿ ದೊರೆಯುವಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷರೂ ಹಾಗೂ ಸಂಸದರಾದ ರಾಜಾ ಅಮರೇಶ್ವರ ನಾಯಕ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅವರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳ ಕುರಿತು ಜನಸಾಮಾನ್ಯರಿಗೆ ಸಮರ್ಪಕವಾದ ಮಾಹಿಒತಿಯ ಅವಶ್ಯಕತೆಯಿದ್ದು, ಜನರಿಗೆ ಸೂಕ್ತ ಮಾಹಿತಿ ಒದಗಿಸಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಕೇಂದ್ರ ಸರ್ಕಾರಗಳ ಯೋಜನೆಗಳನ್ನು ಅನುಷ್ಟಾನಗೊಳಿಸುವಲ್ಲಿ ಅಧಿಕಾರಿಗಳು ಹೆಚ್ಚಿನ ಪ್ರಗತಿ ಸಾಧಿಸುವಂತೆ ತಿಳಿಸಿದರು. ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯನ್ನು ಎಲ್ಲಾ ಗ್ರಾಮೀಣ ಭಾಗಗಳಲ್ಲಿ ಅನುಷ್ಟಾನಗೊಳಿಸಿ ನೀರಿನ ಸಮಸ್ಯೆಯಾಗದಂತೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ ಶೇ.೧೦೦ರಷ್ಟು ಪ್ರಗತಿ ಸಾಧಿಸುವಂತೆ ಸೂಚನೆ

ಸಾಯಿಬಾಬಾರವರು ಉಡುಗೊರೆಯಾಗಿ ನೀಡಿದ್ದ ಒಂಬತ್ತು ರಜತ ನಾಣ್ಯಗಳು ನಗರಕ್ಕೆ: ಡಿ.8 ರಂದು ಓಂ ಸಾಯಿ ಧ್ಯಾನ ಮಂದಿರದಲ್ಲಿ ನಾಣ್ಯಗಳ ದರ್ಶನ - ಸಾಯಿ ಕಿರಣ ಆದೋನಿ

Image
 ಸಾಯಿಬಾಬಾರವರು ಉಡುಗೊರೆಯಾಗಿ ನೀಡಿದ್ದ ಒಂಬತ್ತು ನಾಣ್ಯಗಳು ನಗರಕ್ಕೆ: ಡಿ.8 ರಂದು ಓಂ ಸಾಯಿ ಧ್ಯಾನ ಮಂದಿರದಲ್ಲಿ ನಾಣ್ಯಗಳ ದರ್ಶನ - ಸಾಯಿ ಕಿರಣ ಆದೋನಿ ರಾಯಚೂರು,ನ.೩೦-ಸಾಯಿಬಾಬಾರವರಿಗೆ ಸುಮಾರು ೩೫ ವರ್ಷಗಳ ಕಾಲ ಮಾತೃ ಹೃದಯದಿಂದ ಊಟ ನೀಡಿ ಆಶ್ರಯ ನೀಡಿದ್ದರ ಪ್ರತಿಯಾಗಿ ಸಾಯಿಬಾಬಾರವರು ಸೇವೆಯನ್ನು ಮೆಚ್ಚಿ ಲಕ್ಷಿö್ಮ ಬಾಯಿ ಶಿಂಧೆಯವರಿಗೆ ನೀಡಿದ್ದ  ರ ಜ ತ  ನಾಣ್ಯಗಳು ಪ್ರಪ್ರಥಮ ಬಾರಿಗೆ ಡಿ.8ಕ್ಕೆ ನಗರಕ್ಕೆ ಬರಲಿವೆ ಎಂದು ಓಂ ಸಾಯಿ ಧ್ಯಾನ ಮಂದಿರದ ಸಾಯಿ ಕಿರಣ ಆದೋನಿ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಗರದ ರಂಗಮ0ದಿರ ಹಿಂಭಾಗದಲ್ಲಿರುವ ಓಂ ಸಾಯಿ ಧ್ಯಾನ ಮಂದಿರದಲ್ಲಿ ಡಿ.8 ರಂದು ಶಿರಡಿಯಿಂದ ಸಾಯಿ ಬಾಬಾರವರು ತಮ್ಮ ಸೇವೆಗೈದ ಭಕ್ತೆಗೆ ಉಡುಗೊರೆಯಾಗಿ ನೀಡಿದ್ದ ಒಂಬತ್ತು ನಾಣ್ಯಗಳ ನಗರಕ್ಕೆ ಆಗಮಿಸಲಿದ್ದು ಅಂದು ಬೆಳಿಗ್ಗೆ 6 ಗಂಟೆಯಿ0ದ ರಾತ್ರಿ 9 ರವರಗೆ ಓಂ ಸಾಯಿ ಧ್ಯಾನ ಮಂದಿರದಲ್ಲಿ ದರ್ಶನಕ್ಕಾಗಿ ಇರಿಸಲಿದ್ದು  ಭಕ್ತರು, ಸಾರ್ವಜನಿಕರು ದರ್ಶನ ಪಡಯಬಹುದೆಂದರು. ಲಕ್ಷಿö್ಮÃ ಬಾಯಿಯವರ ಐದನೆ ತಲಮಾರು ಈ ನಾಣ್ಯಗಳನ್ನು ಸಂರಕ್ಷಿಸಿಕೊ0ಡು ಬಂದಿದ್ದು ಅನೇಕರು ವಿದೇಶದಲ್ಲಿರುವವರು ಕೋಟ್ಯಾಂತರ ರೂ. ನೀಡುವುದಾಗಿ ಹೇಳಿದರು ಇದನ್ನು ಮಾರಾಟ ಮಾಡದೆ ಈ ನಾಣ್ಯಗಳನ್ನು ಭಕ್ತರ ದರ್ಶನಕ್ಕಾಗಿ ಮೀಸಲಿಡಲಾಗಿದೆ ಮುಂದಿನ ದಿನದಲ್ಲಿ ಶಿರಡಿಯಲ್ಲಿ ದೇವಸ್ಥಾನ ನಿರ್ಮಿಸಿ ಶಾಶ್ವತವಾಗಿ ಇಡಲಾಗುತ್ತಿದ್ದು ನಗರದ ಭಕ್ತರಿಗೆ ಇದೊ

ಪತ್ರಕರ್ತರು ವೃತ್ತಿಯ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು- ಬಿ.ವಿ.ಮಲ್ಲಿಕಾರ್ಜುನಯ್ಯ

Image
ರಾಷ್ಟ್ರೀಯ ಪತ್ರಿಕಾ ದಿನಾಚರಣೆ  ಮತ್ತು ಸಂವಿಧಾನ ಓದು ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟನೆ   :                    ಪತ್ರಕರ್ತರು ವೃತ್ತಿಯ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು- ಬಿ.ವಿ.ಮಲ್ಲಿಕಾರ್ಜುನಯ್ಯ ರಾಯಚೂರು,ನ.26- ಪತ್ರಕರ್ತರು ಇಂದಿನ ಆಧುನಿಕ ಜಗತ್ತಿನಲ್ಲಿ ಕೆಲಸ ಮಾಡುವಾಗ ಅನೇಕ ಸವಾಲುಗಳನ್ನು ಎದುರಿಸುವುದರ ಜೊತೆಗೆ   ವೃತ್ತಿಯ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು ಎಂದು ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಬಿ.ಮಲ್ಲಿಕಾರ್ಜುನಯ್ಯ  ಸಲಹೆ ನೀಡಿದರು. ಅವರಿಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘ ಹಾಗೂ ರಾಯಚೂರು ರಿಪೋರ್ಟರ್ಸ್‌ ಗಿಲ್ಡ್‌ನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ  ಮತ್ತು ಸಂವಿಧಾನ ಓದು ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರಾಗಬೇಕು ಎಂಬುವುದು ಇತ್ತೀಚೆಗೆ ಫ್ಯಾಶನ್ ಆಗಿದೆ. ಯಾವ ಕೆಲಸ ಮಾಡದವರು ಪತ್ರಕರ್ತರಾಗಲು ಸುಲಭ ಎಂಬ ಧೋರಣೆ ಇದೆ. ಪತ್ರಿಕಾವೃತ್ತಿ ಪವಿತ್ರ ವೃತ್ತಿಯಾಗಿದೆ. ವೃತ್ತಿಯ ಪಾವಿತ್ರ್ಯತೆ ಇಂದು ಹಾಳು ಮಾಡುವ ಘಟನೆ ನಡೆಯುತ್ತಿದೆ. ಇದನ್ನು ತಡೆಯಬೇಕು, ಇಲ್ಲದಿದ್ದರೆ ಮುಂದೆ ಮತ್ತಷ್ಟು ಕಲುಷಿತವಾಗಬಹುದು ಎಂದು ಎಚ್ಚರಿಸಿದರು. ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ್ ನಾಯಕ ಮಾತನಾಡಿ, ಪತ್ರಿಕೋದ್ಯ

ನಾಳೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಸನ್ಮಾನ ಸಮಾರಂಭ ಹಾಗೂ ಸಂವಿಧಾನ ಓದು ದಿನಾಚರಣೆ.

Image
  ನಾಳೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಸನ್ಮಾನ ಸಮಾರಂಭ ಹಾಗೂ ಸಂವಿಧಾನ ಓದು ದಿನಾಚರಣೆ.            ರಾಯಚೂರು,ನ.25- ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ  ಸಂಘ, ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಸಂಯುಕ್ತಾಶ್ರಯದಲ್ಲಿ  ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಸನ್ಮಾನ ಸಮಾರಂಭ ಹಾಗೂ ಸಂವಿಧಾನ ಓದು ದಿನಾಚರಣೆ ಹಮ್ಮಿಕೊಳ್ಳಲಾಗಿದೆ.                                  ನ.26 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಪತ್ರಕರ್ತರು ಹಾಗೂ ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ವಿ.ಮಲ್ಲಿಕಾರ್ಜುನಯ್ಯ ನೆರವೇರಿಸಲಿದ್ದು ಅತಿಥಿಗಳಾಗಿ ಕಲಬುರ್ಗಿಯ ಹಿರಿಯ ಪತ್ರಕರ್ತರಾದ ಟಿ.ವಿ.ಶಿವಾನಂದ, ಜಿಲ್ಲಾಧಿಕಾರಿಗಳಾದ ಎಲ್.ಚಂದ್ರಶೇಖರ ನಾಯಕ, ಜಿ.ಪಂ ಸಿಇಓ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್.ಬಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶಿವಮೂರ್ತಿ ಹೀರೆಮಠ, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ವೀರಾರೆಡ್ಡಿ,ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಸಮಿತಿ ಸದಸ್ಯ ಅರವಿಂದ ಕುಲಕರ್ಣಿ ಮುಂತಾದವರು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದಿ ಹಿಂದೂ ಪತ್ರಿಕೆ ನಿವೃತ್ತ ಹಿರಿಯ ವ

ಮತದಾರರ ಗುಪ್ತ ಮಾಹಿತಿ ಕಳ್ಳತನ ಆರೋಪ: ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್ ನಿಯೋಗ.

Image
  ಮತದಾರರ ಗುಪ್ತ ಮಾಹಿತಿ ಕಳ್ಳತನ ಆರೋಪ:  ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್ ನಿಯೋಗ . ರಾಯಚೂರು,ನ.24- ಮತದಾರರ ಗುರುತಿನ ಚೀಟಿಯ ಗುಪ್ತ ಮಾಹಿತಿ ಕಳ್ಳತನ   ಆರೋಪ ಹಿನ್ನಲೆ ತಪ್ಪಿತಸ್ತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲ, ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ, ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಬೋಸರಾಜು ನೇತೃತ್ವದ ನಿಯೋಗ ದೆಹಲಿಯಲ್ಲಿರುವ ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.  ದೆಹಲಿಯಲ್ಲಿ ಚುನಾವಣಾ ಆಯುಕ್ತರಿಗೆ ದೂರು ನೀಡಿ, ಕರ್ನಾಟಕದಲ್ಲಿ ಚುನಾವಣಾ ದತ್ತಾಂಶ ಕಳ್ಳತನ, ಮತದಾರರ ಮಾಹಿತಿನ್ನು ಬಹಿರಂಗಪಡಿಸಿ ಗುಪ್ತ ಮಾಹಿತಿಯನ್ನು ಕಾನೂನು ಬಾಹಿರವಾಗಿ ಪಡೆದಿದ್ದಾರೆ ಇದರಲ್ಲಿ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಮತದಾರರ ಹೆಸರುಗಳನ್ನು ಸೇರಿಸಲು ಅಥವಾ ತೆಗೆದುಹಾಕಲು ಮತದಾರರ ಪಟ್ಟಿಯಿಂದ 'ಫಾರ್ಮ್ 7' ಕಡ್ಡಾಯವಾಗಿದ್ದರೂ, ಯಾವುದೇ ಕಡ್ಡಾಯ ಕಾರ್ಯವಿಧಾನವನ್ನು ಅನುಸರಿಸದೆ 27 ಲಕ್ಷ ಹೆಸರುಗಳನ್ನು ತೆಗೆದುಹಾಕಿರುವುದರಲ್ಲಿ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿ ಈ ಅರ್ಜಿಗಳಿಗೆ ಸಹಿ ಹಾಕಿ ಅಧಿಕಾರ ನೀಡಿದ ಅಧಿಕಾರಿ ಯಾರು ಎಂದು ಪ್ರಶ್ನಿಸಿದ್ದಾರೆ.  ಈ ಸಂದರ್ಭದಲ್ಲಿ ಮಾಜಿ ಸಚಿವ ಎಂ ಬಿ ಪಾಟೀಲ್, ನಜೀರ್ ಅಹಮದ್, ಪ್ರಿಯಾಂಕ ಖರ್ಗೆ, ನಾಸೀರ್ ಹುಸೀನ್ ಉಪಸ್ಥಿತರಿದ್ದರು.

ಶ್ರೀ ವಿಠಲ ಕೃಷ್ಣ ದೇವಸ್ಥಾನ: ಕಾರ್ತಿಕ ದೀಪೋತ್ಸವ

Image
 ಶ್ರೀ ವಿಠಲ ಕೃಷ್ಣ ದೇವಸ್ಥಾನ: ಕಾರ್ತಿಕ ದೀಪೋತ್ಸವ   ರಾಯಚೂರು,ನ.23- ನಗರದ  ಶ್ರೀ ವಿಠಲ ಕೃಷ್ಣ ದೇವಸ್ಥಾನದಲ್ಲಿ ಶ್ರೀ ಯಾಜ್ಞವಲ್ಕ್ಯ ಸೇವಾಸಂಘದ ವತಿಯಿಂದ ಕಾರ್ತಿಕ ದೀಪೋತ್ಸವ ಆಯೋಜಿಸಲಾಗಿತ್ತು  .                ವೇ .ಮೂ .ಭೀಮಸೇನಾಚಾರ ಶಿರಗುಂಪಿ ಅವರಿಂದ ಪ್ರವಚನ ಮಂಗಳ ನಂತರ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು .         ಈ ಸಂದರ್ಭದಲ್ಲಿ ಸತ್ಯನಾರಾಯಣ ಜೋಷಿ, ತಿರುಪತಿ ಜೋಷಿ, ತಿರುಮಲರಾವ್ ಗಾಣದಾಳ ,ನರಸಿಂಗರಾವ್ ಗಧಾರ, ಪ್ರಸನ್ನ ಆಲಂಪಲ್ಲಿ,ರಮಾಕಾಂತ ಹುಲಿಯಾಪುರ, ಸುಧಾಕರ ರಾವ್ ಗಣದಿನ್ನಿ, ಅರ್ಚಕರಾದ  ವಾಮನಾಚಾರ್, ಮಾರುತಿ ಜೋಷಿ, ಜಯಕುಮಾರ ದೇಸಾಯಿ ಕಾಡ್ಲೂರು, ಆನಂದಮೂರ್ತಿ  ಇನ್ನೂ ಅನೇಕ ಭಕ್ತಾದಿಗಳು ,ಮಹಿಳೆಯರು ಭಾಗವಹಿಸಿ ಯಶಸ್ವಿಗೊಳಿಸಿದರು.

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿಯೋಗದಿಂದ ರಾಜ್ಯಪಾಲರ ಭೇಟಿ

Image
ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿಯೋಗದಿಂದ ರಾಜ್ಯಪಾಲರ ಭೇಟಿ  ರಾಯಚೂರು,ನ.23-  ಸರ್ವೋಚ್ಚ ನ್ಯಾಯಾಲಯವು ಆರ್ಥಿಕವಾಗಿ  ದುರ್ಬಲರಾದ ಮೇಲ್ವರ್ಗದ ಸಮುದಾಯಗಳಿಗೆ ಮೀಸಲಾತಿ ಅನ್ವಯ 103ನೇ ತಿದ್ದುಪಡಿಯನ್ನು ಎತ್ತಿ ಹಿಡಿದಿದ್ದು ಈ ಕುರಿತು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಈ ತೀರ್ಪನ್ನು ಸ್ವಾಗತಿಸಿರುತ್ತಾರೆ, ಸದರಿ ಮೀಸಲಾತಿಯನ್ನು ಅನೇಕ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತಂದಿದ್ದು, ಈ ಮೀಸಲಾತಿಯನ್ನು ಕರ್ನಾಟಕ ರಾಜ್ಯದಲ್ಲಿಯೂ ಸಹ ಜಾರಿಗೆ ತರುವಂತೆ ಮಾನ್ಯ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿಲು ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್‌ ಚಂದ್‌ ಗೆಹ್ಲೋಟ್‌ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ,  ನಿರ್ದೇಶಕರಾದ ಸುಬ್ಬರಾಯ ಎಂ ಹೆಗಡೆ. ಶ್ರೀ ಪವನ್ ಕುಮಾರ್.  ಜಗನ್ನಾಥ ಕುಲಕರ್ಣಿ.  ವತ್ಸಲ ನಾಗೇಶ್.  ಜಗದೀಶ ಹುನಗುಂದ. ಹಾಗೂ ವಿಶ್ವ ವಿಪ್ರತ್ರಯ ಪರಿಷತ್ ಅಧ್ಯಕ್ಷರಾದ ರಘುನಾಥ್ ರವರು, ವಿಪ್ರ ಮುಖಂಡರಾದ ಡಾ|| ಎ.ವಿ.ಪ್ರಸನ್ನ, ಸತ್ಯಪ್ರಕಾಶ್, ವಿ.ಮಂಜುನಾಥ್, ದಿಲೀಪ್ ಸತ್ಯಾ,  ಕುಮಾರ್,  ನಾಗೇಶ್ ಹಾಗೂ ಶರತ್ ರವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪ್ರಯುಕ್ತ ಚೆಸ್, ಕೇರಂ ಕ್ರೀಡಾಕೂಟ: ಪತ್ರಕರ್ತರಲ್ಲಿ ಕ್ರೀಡಾಸ್ಫೂರ್ತಿ ನಿರಂತರವಾಗಿರಲಿ-ಸುಶಿಲೇಂದ್ರ ಸೋದೆಗಾರ

Image
  ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪ್ರಯುಕ್ತ ಚೆಸ್, ಕೇರಂ ಕ್ರೀಡಾಕೂಟ:                                 ಪತ್ರಕರ್ತರಲ್ಲಿ ಕ್ರೀಡಾಸ್ಫೂರ್ತಿ ನಿರಂತರವಾಗಿರಲಿ-ಸುಶಿಲೇಂದ್ರ ಸೋದೆಗಾರ  ರಾಯಚೂರು,ನ.22- ಪತ್ರಕರ್ತರಲ್ಲೂ ಸಾಕಷ್ಟು ಕ್ರೀಡಾಸ್ಫೂರ್ತಿಯಿದ್ದು, ಅದು ಕೇವಲ ಒಂದೆರಡು ದಿನಗಳಿಗೆ ಸೀಮಿತವಾಗಿರದೆ ನಿರಂತರವಾಗಿರಲಿ ಎಂದು   ರಾಯಚೂರು ಪ್ರಭ ಹಿರಿಯ ಸಂಪಾದಕ ಸುಶಿಲೇಂದ್ರ ಸೋದೆಗಾರ ತಿಳಿಸಿದರು.  ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪ್ರಯುಕ್ತ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಚೆಸ್, ಕೇರಂ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರನ್ನು ಇನ್ನಷ್ಟು ಲವಲವಿಕೆಯಿಂದ ಇರುವಂತೆ ಮಾಡಲು ಕ್ರೀಡೆಗಳು ಬಹಳ ಮಹತ್ವದ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಕ್ರೀಡಾ ಸಮಿತಿ ರಚಿಸಿ ನಿರಂತರ ಕ್ರೀಡೆಗಳನ್ನು ಆಯೋಜಿಸುವ ಕೆಲಸವಾಗಲಿ ಎಂದರು.                   ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಗುರುನಾಥ್ ಮಾತನಾಡಿ ಪತ್ರಕರ್ತರು ಕ್ರೀಡಾ ಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ಸುದ್ದಿ ಜಂಜಾಟದಲ್ಲಿ ಸದಾ ಮಗ್ನರಾಗಿರುವ ಪತ್ರಕರ್ತರು ಬ್ಯಾಡಮೆಂಟನ್, ಕ್ರೀಕೆಟ್ ಮುಂತಾದ ಆಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ಸಂತಸ ತಂದಿದೆ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂ

ಶೃಂಗೇರಿ ಶಂಕರ ಮಠದಲ್ಲಿ ಬುತ್ತಿಪೂಜೆ.

Image
  ಶೃಂಗೇರಿ ಶಂಕರ ಮಠದಲ್ಲಿ ಬುತ್ತಿಪೂಜೆ.                      ರಾಯಚೂರು.ನ.22- ನಗರದ ಗಾಜಗಾರಪೇಟೆಯ ಶ್ರೀ ಶೃಂಗೇರಿ ಶಂಕರಮಠದಲ್ಲಿ ಕಾರ್ತಿಕ ಮಾಸದ ಕೊನೆಯ ಸೋಮವಾರ   ನಿಮಿತ್ಯ  ಶ್ರೀ ಆನಂದೀಶ್ವರನಿಗೆ  ರುದ್ರಾಭಿಷೇಕ , ಬುತ್ತಿ ಪೂಜೆ,ಎಲೆ ಪೂಜೆ ಮತ್ತು ದೀಪೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪಲ್ಲಕ್ಕಿ ಸೇವೆ, ಮಹಾಮಂಗಳಾರತಿ ನೆರವೇರಿತು.   ಭಕ್ತರಿಗೆ ತೀರ್ಥ  ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ  ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು . ಶಂಕರ ಮಠದ ಆಡಳಿತ ಮಂಡಳಿ ಸದಸ್ಯರು, ಅರ್ಚಕರು ಉಪಸ್ಥಿತರಿದ್ದರು.

ಮಾಜಿ ರಾಜ್ಯ ಸಭಾ ಸದಸ್ಯರಾದ ಅಬ್ದುಲ್ ಸಮದ್ ಸಿದ್ದೀಖಿ (87) ನಿಧನ

Image
  ಮಾಜಿ ರಾಜ್ಯ ಸಭಾ ಸದಸ್ಯರಾದ ಅಬ್ದುಲ್ ಸಮದ್ ಸಿದ್ದೀಖಿ (87)   ನಿಧನ .                              ರಾಯಚೂರು,ನ.21- ನಗರದ ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ರಾಜ್ಯ ಸಭಾ ಸದಸ್ಯರಾದ ಅಬ್ದುಲ್ ಸಮದ್ ಸಿದ್ದೀಖಿ (87)  ಇವರು ನಿಧನರಾಗಿದ್ದಾರೆ. ಬಹುದಿನಗಳಿಂದ ವಯೋಸಹಜ  ಕಾಯಿಲೆಯಿಂದ ಬಳಲುತ್ತಿದ್ದ ಇವರು ಇಂದು  ಇಹಲೋಕ ತ್ಯಜಿಸಿದ್ದಾರೆ. ಅಬ್ದುಲ್ ಸಮದ್ ಸಿದ್ದೀಖಿ ಇವರು ರಾಯಚೂರು ನಗರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡವರ ಶಿಕ್ಷಣಕ್ಕೆ ಕಾರಣೀಭೂತರಾಗಿದ್ದರು, ಅದರಲ್ಲಿ ನ್ಯೂ ಏಜುಕೇಶನ್ ಸೋಸೈಟಿ(ರಿ) ಅಡಿಯಲ್ಲಿ ವಿಶೇಷವಾಗಿ ಪ್ರಾಥಮಿಕ, ಪ್ರೌಡ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳನ್ನು ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಾರಣೀಭೂತರಾಗಿದ್ದರು. ಅಲ್ಲದೇ ರಾಯಚೂರಿನಲ್ಲಿ ಸಫೀಯಾ  ಸಂಸ್ಥೆ ಸ್ಥಾಪಿಸಿ ಮಹಿಳೆಯರಿಗೆ ಡಿ.ಎಡ್. ಕಾಲೇಜು ಸ್ಥಾಪಿಸಿದರು.                                   ರಾಜಕೀಯ ಕುಟುಂಬದಿಂದ ಬಂದಿದ್ದ ಅಬ್ದುಲ್ ಸಮದ್ ಸಿದ್ದೀಖಿ ಇವರು ರಾಯಚೂರು ನಗರ ವಿಧಾನಸಭಾ  ಕ್ಷೇತ್ರದ ಮೊದಲ ಶಾಸಕರಾದ ಸೈಯದ ಮೂಸಾ ಇವರ ಮೊಮ್ಮಗ ರಾದ ಅಬ್ದುಲ್ ಸಮಸದ್ ಸಿದ್ದೀಖಿ ಇವರು ರಾಯಚೂರು ನಗರಸಭೆಯ  ಸದಸ್ಯರಾಗಿ ಆಯ್ಕೆಯಾಗಿದ್ದರು, ನಂತರ ಜನತಾದಳದಿಂದ 1988 ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿ 1994 ರ ವರೆಗೆ ಕಾರ್ಯನಿರ್ವಹಿಸಿದ್ದರು.                                ಅವರು ಪತ್

ಸಮ್ಮೇಳನ ಲಾಂಛನ ಬಿಡುಗಡೆ- ಸರ್ವಾನುಮತದಿಂದ ಸರ್ವಾಧ್ಯಕ್ಷರಾಗಿ ವೀರ ಹನುಮಾನ ಆಯ್ಕೆ: ಡಿ.೧೦ ಮತ್ತು ೧೧ ರಂದು ಲಿಂಗಸ್ಗೂರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ-ಅಳ್ಳುಂಡಿ

Image
  ಸಮ್ಮೇಳನ ಲಾಂಛನ ಬಿಡುಗಡೆ-ಸರ್ವಾನುಮತದಿಂದ ಸರ್ವಾಧ್ಯಕ್ಷರಾಗಿ ವೀರ ಹನುಮಾನ ಆಯ್ಕೆ  ಡಿ.೧೦ ಮತ್ತು ೧೧ ರಂದು ಲಿಂಗಸ್ಗೂರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ-ಅಳ್ಳುಂಡಿ ರಾಯಚೂರು,ನ.೨೧-ಮು0ದಿನ ತಿಂಗಳು ಡಿ.೧೦ ಮತ್ತು ೧೧ ರಂದು ಲಿಂಗಸ್ಗೂರಿನಲ್ಲಿ ೧೧ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು ಸರ್ವಾನುಮತದಿಂದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವೀರ ಹನುಮಾನ್‌ರವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸಮ್ಮೇಳನ ಲಾಂಛನ ಬಿಡುಗಡೆ ಮಾಡುತ್ತಿದ್ದು ಲಿಂಗಸ್ಗೂರಿನ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಎರೆಡು ದಿನಗಳ ಕಾ ಲ  ಸಮೇಳನ ಆಯೋಜಿಸಲಾಗಿದ್ದು ಸಮ್ಮೇಳನದಲ್ಲಿ ಕವಿ ಗೋಷ್ಟಿ, ಮಕ್ಕಳ ಗೋಷ್ಟಿ ಸೇರಿದಂತೆ ಅನೇಕ ಗೋಷ್ಟಿ ಆಯೋಜಿಸಲಾಗಿದ್ದು ಕಾರ್ಯಕ್ರಮದ ಲ್ಲಿ   ಸ್ಮರಣ ಸಂಚಿಕೆ ಮತ್ತು ಗಜಲ್ ಕವನ ಸಂಕಲನ ಬಿಡುಗಡೆ ಮಾಡಲಾಗುತ್ತದೆ ಎಂದರು. ಲಿ0ಗಸ್ಗೂರು ಶಾಸಕ ಡಿ.ಎಸ್.ಹೂಲಗೇರಿ ಮತ್ತು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ ಸೇರಿದಂತೆ ಎಲ್ಲರ ಸಹಕಾರವಿದ್ದು ಯಾವುದೆ ಅಸಮಾಧಾನವಿಲ್ಲವೆಂದ ಅವರು ಸರ್ವಾಧ್ಯಕ್ಷರ ನೇಮಕದಲ್ಲಿ ಯಾವುದೆ ಅಪಸ್ವರವಿಲ್ಲವೆಂದ ಅವರು ಕಾರ್ಯಕಾರಿ ಸಮಿತಿಯಲ್ಲಿ ಕೈಗೊಂಡ ನಿರ್ಣಯದಂತೆ ವೀರ ಹನುಮಾನರವರನ್ನು ಸರ್ವಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದರು. ಈ ಹಿಂದೆ ಸಮ್

ಉತ್ತಮ ಸಮಾಜಕ್ಕೆ ಪತ್ರಕರ್ತರ ಮಾರ್ಗದರ್ಶನ ಅಗತ್ಯ-ಬೋಸರಾಜು

Image
ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ:                                ಉತ್ತಮ ಸಮಾಜಕ್ಕೆ ಪತ್ರಕರ್ತರ ಮಾರ್ಗದರ್ಶನ ಅಗತ್ಯ-ಬೋಸರಾಜು                                            ರಾಯಚೂರು.ನ.20- ಉತ್ತಮ ಸಮಾಜ ನಿರ್ಮಾಣಕ್ಕೆ ಪತ್ರಕರ್ತರ ಮಾರ್ಗದರ್ಶನ ಬಹಳ ಮುಖ್ಯ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಬೋಸರಾಜ್ ತಿಳಿಸಿದರು.  ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪ್ರಯುಕ್ತ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಿಪೋರ್ಟರ್ ಗೀಲ್ಡ್ ಸಹಯೋಗದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.  ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಅನೇಕ ಪತ್ರಕರ್ತರನ್ನು ಕಂಡಿದ್ದೇನೆ . ಉತ್ತಮ ಸಮಾಜಕ್ಕಾಗಿ ಪತ್ರಕರ್ತರು ಹಗಲಿರಳು ಶ್ರಮಿಸುತ್ತಿದ್ದಾರೆ. ಜನಪ್ರತಿನಿಧಿಗಳನ್ನು ತಮ್ಮ ವರದಿಗಳ ಮೂಲಕ ಸದಾ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ಬದುಕನ್ನು ಲೆಕ್ಕಿಸದೆ ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಸದಾ ಒತ್ತಡದ ಮಧ್ಯ ಕೆಲಸ ಮಾಡುವ ಪತ್ರಕರ್ತರಿಗೆ ಇಂಥ ಕ್ರೀಡೆಗಳು ಮತ್ತಷ್ಟು ಉತ್ಸಾಹ ನೀಡಲಿವೆ ಎಂದರು. ನಗರಸಭೆ ಹಿರಿಯ ಸದಸ್ಯ ಜಯಣ್ಣ ಮಾತನಾಡಿ, ಪತ್ರಕರ್ತರು 24/7 ರೀತಿ ಬಿಡುವಿಲ್ಲದೇ ಕೆಲಸ ಮಾಡುತ್ತಾರೆ. ಅವರಿಗೆ ವೈಯಕ್ತಿಕ ಜೀವನಕ್ಕೆ ಸಮಯ ಕೊಡಲು ಆಗುವುದ

ಜೋಡು ವೀರಾಂಜಿನೇಯ ದೇವಸ್ಥಾನ: ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಭೇಟಿ.

Image
ಜೋಡು ವೀರಾಂಜಿನೇಯ ದೇವಸ್ಥಾನ: ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಭೇಟಿ.                     ರಾಯಚೂರು,ನ.19. ನಗರದ ಸಾವಿತ್ರಿ ಕಾಲೋನಿಯ ಜೋಡು  ವೀರಾಂಜಿನೇಯ ದೇವಸ್ಥಾನಕ್ಕೆ  ನಗರಸಭೆ  ಅಧ್ಯಕ್ಷೆ ಲಲಿತಾ ಕಡಗೋಲ ಆಂಜಿನೇಯ ಭೇಟಿ ನೀಡಿದರು.                                          ತಮ್ಮ ಹುಟ್ಟು ಹಬ್ಬದಂಗವಾಗಿ  ದೇವಸ್ಥಾನಕ್ಕೆ ಭೇಟಿ ನೀಡಿ ಜೋಡು ಹನುಮಂತ ದೇವರ ದರ್ಶನ ಪಡೆದು ಆಶೀರ್ವಾದ ಪಡೆದರು.                            ದೇವಸ್ಥಾನ ಸಮಿತಿಯಿಂದ ಹುಟ್ಟು ಹಬ್ಬದ ಶುಭಾಶಯ ಕೋರಿ ಸನ್ಮಾನಿಸಲಾಯಿತು.       ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭದ ಆಮಂತ್ರಣ ಪತ್ರ ಅನಾವರಣಗೊಳಿಸಿದರು.        ಈ ಸಂದರ್ಭದಲ್ಲಿ ಕಡಗೋಲ ಆಂಜಿನೇಯ, ದಾನಪ್ಪ ಯಾದವ , ಪ್ರಮೋದ ಕುಮಾರ, ವೇಣುಗೋಪಾಲ ಆಚಾರ ಇನಾಂದಾರ್, ವಿಷ್ಣುತೀರ್ಥ, ವೆಂಕಟೇಶ ನವಲಿ,ಗುರುರಾಜ ಕುಲಕರ್ಣಿ ಲಕ್ಷ್ಮಣಾಚಾರ ಕುರ್ಡಿ, ಜಯಕುಮಾರ ದೇಸಾಯಿ ಕಾಡ್ಲೂರು ಇತರರು ಇದ್ದರು .

ಬನ್ನಿಕಟ್ಟೆ ಶ್ರೀ ಬನಶಂಕರಿ ದೇವಸ್ಥಾನ :ಕಾರ್ತಿಕ ದೀಪೋತ್ಸವ .

Image
 ಬನ್ನಿಕಟ್ಟೆ ಶ್ರೀ ಬನಶಂಕರಿ ದೇವಸ್ಥಾನ : ಕಾರ್ತಿಕ ದೀಪೋತ್ಸವ  .                              ರಾಯಚೂರು,ನ.19- ನಗರದ ಮಾಣಿಕ ಪ್ರಭು  ಬಡಾವಣೆಯ ಬನ್ನಿಕಟ್ಟೆ ಶ್ರೀ ಬನಶಂಕರಿ ದೇವಸ್ಥಾನ ದಲ್ಲಿ ಕಾರ್ತಿಕ ದೀಪೋತ್ಸವ ಆಯೋಜಿಸಲಾಗಿತ್ತು.                           ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಹೆಬಸೂರು, ಉದಯ ಶಂಕರ ದೇಸಾಯಿ, ಚಂದ್ರಕಾಂತ ವೈದ್ಯ, ಪ್ರಸನ್ನ ಆಲಂಪಲ್ಲಿ ಸೇರಿದಂತೆ   ಅನೇಕ ಭಕ್ತರಿದ್ದರು.

ಪತ್ರಕರ್ತರು ಕ್ರೀಡೆಗಳಲ್ಲಿ ಕೇವಲ ಒಂದೇ ದಿನಕ್ಕೆ ಸೀಮಿತವಾಗದೆ ಪ್ರತಿನಿತ್ಯ ತೊಡಗಿಸಿಕೊಳ್ಳಬೇಕು- ಬಸವರಾಜ ಸ್ವಾಮಿ

Image
  ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಕ್ರೀಡಾಕೂಟಕ್ಕೆ ಚಾಲನೆ:     ಪತ್ರಕರ್ತರು ಕ್ರೀಡೆಗಳಲ್ಲಿ ಕೇವಲ ಒಂದೇ ದಿನಕ್ಕೆ ಸೀಮಿತವಾಗದೆ ಪ್ರತಿನಿತ್ಯ ತೊಡಗಿಸಿಕೊಳ್ಳಬೇಕು- ಬಸವರಾಜ್ ಸ್ವಾಮಿ ರಾಯಚೂರು, ನ.19: ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟ್‌ರ್ಸ್ ಗಿಲ್ಡ್ ಪತ್ರಕರ್ತರಿಗಾಗಿ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ನ.19 ರಂದು ಆಯೋಜಿಸಿದ್ದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು. ಎರಡು ದಿನಗಳ ಕ್ರೀಡಾಕೂಟಕ್ಕೆ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಸತೀಶ್ ಹಾಗೂ ಸುದ್ದಿಮೂಲ ದಿನಪತ್ರಿಕೆ ಸಂಪಾದಕ ಬಸವರಾಜ್ ಸ್ವಾಮಿ ಜಂಟಿಯಾಗಿ ಬ್ಯಾಡ್ಮಿಂಟನ್ ಆಡುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸುದ್ದಿಮೂಲ ದಿನಪತ್ರಿಕೆ ಸಂಪಾದಕ ಬಸವರಾಜ್ ಸ್ವಾಮಿ ಕ್ರೀಡೆಗಳು ಕೇವಲ ಒಂದೇ ದಿನಕ್ಕೆ ಸೀಮಿತವಾಗದೆ ಪ್ರತಿನಿತ್ಯ ತೊಡಗಿಸಿಕೊಳ್ಳಬೇಕು. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಯಾಗುತ್ತದೆ. ಪತ್ರಕರ್ತರರು ತಮ್ಮ ದಿನನಿತ್ಯದ ಕೆಲಸದ ಒತ್ತಡದ ನಡುವೆಯೂ ಕ್ರೀಡೆಗಳಿಗಾಗಿ ಸಮಯ ಮೀಸಲಿಡಬೇಕು. ಪತ್ರಕರ್ತರಿಗಾಗಿ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ಬ್ಯಾಡ್ಮಿಂಟನ್ ಆಟಗಾರರ ಸತೀಶ್ ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಕ್ರೀಡಾಕೂಟವನ್ನ ಉದ್

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವೀರ ಹನುಮಾನ ಆಯ್ಕೆ: ಶ್ರುತಿ ಸಾಹಿತ್ಯ ಮೇಳದಿಂದ ಅಭಿನಂದನೆ

Image
  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ  ವೀರ ಹನುಮಾನ   ಆಯ್ಕೆ : ಶ್ರುತಿ ಸಾಹಿತ್ಯ ಮೇಳದಿಂದ ಅಭಿನಂದನೆ     ರಾಯಚೂರು,ನ.18-  ಡಿಸೆಂಬರ್ 10 ಮತ್ತು 11ರಂದು ಲಿಂಗಸುಗೂರು ಪಟ್ಟಣದಲ್ಲಿ ಜರುಗುತ್ತಿರುವ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ನಗರದ ಸಾಹಿತಿ ವೀರ ಹನುಮಾನ್ ಅವರಿಗೆ ಸಾಂಸ್ಕೃತಿಕ, ಸಾಹಿತಿಕ ಸಂಘಟನೆಯಾದ ಶ್ರುತಿ ಸಾಹಿತ್ಯ ಮೇಳ  ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದೆ. ವೀರ ಹನುಮಾನವರು ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಸೇವೆಯನ್ನು ಸಲ್ಲಿಸಿದ್ದಾರೆ.ಇವರು ಒಂಬತ್ತು ಹಯ್ಕುಗಳು ಒಂದು ಕವನ ಸಂಕಲನ ಹಲವಾರು ಕಥಾ ಸಂಕಲನ ಜೊತೆಗೆ ದಮ್ಮ ಎಂಬ ಬೃಹತ್ ಗ್ರಂಥವನ್ನು ರಚಿಸಿದ್ದಾರೆ ಈ ಕೃತಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಗುಲ್ಬರ್ಗದಿಂದ ಉತ್ತಮ ಕೃತಿ ಪ್ರಶಸ್ತಿ ಲಭಿಸಿದೆ. ಚೆಲುವೆ ಎಂಬ ಇವರ ಕಥೆ ದೂರದರ್ಶನದಲ್ಲಿ ಪ್ರಸಾರವಾಗಿದೆ. ಹಲವಾರು ಕನ್ನಡ ಪರ ,ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ಪದಾಧಿಕಾರಿಗಳಾಗಿರುವ ಇವರು ಕ್ರಿಯಾಶೀಲ ಸಾಹಿತಿಗಳಾಗಿದ್ದಾರೆ.       ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಸ್ಥಾನ ಶ್ರೀ ವೀರ ಹನಮಾನವರಿಗೆ ಲಭಿಸಿದ್ದು ತುಂಬಾ ಸಂತೋಷವಾಗಿದೆ. ಸಾಧನೆಗೆ ಸಂದ ಗೌರವವೆಂದು, ಶ್ರುತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರಾದ ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರು, ಅಧ್ಯಕ್ಷರಾದ ಮುರಳಿಧರ ಕುಲಕರ್ಣಿ, ಉಪಾಧ್ಯಕ್ಷ ಗಾಯಕ ಡಾ. ರಾಯಚೂರು ಶೇಷಗಿರಿ ದಾಸ್, ಕ

ನಗರಕ್ಕೆ ಶ್ರೀ ಶೈಲ ಜಗದ್ಗುರುಗಳ ಪಾದಯಾತ್ರೆ ಪ್ರವೇಶ: ವೀರಶೈವ ಲಿಂಗಾಯಿತ ಹಿಂದೂ ಹೊರತಾದ ಪ್ರತ್ಯೇಕ ಧರ್ಮವಲ್ಲ- ಡಾ.ಶ್ರೀ ಚನ್ನಸಿದ್ಧರಾಮ ಶ್ರೀಗಳು

Image
 ನಗರಕ್ಕೆ ಶ್ರೀ ಶೈಲ ಜಗದ್ಗುರುಗಳ ಪಾದಯಾತ್ರೆ ಪ್ರವೇಶ: ವೀರಶೈವ ಲಿಂಗಾಯಿತ ಹಿಂದೂ ಹೊರತಾದ ಪ್ರತ್ಯೇಕ ಧರ್ಮವಲ್ಲ-ಡಾ.ಶ್ರೀ ಚನ್ನಸಿದ್ಧರಾಮ ಶ್ರೀಗಳು ರಾಯಚೂರು,ನ.೧೮-ವೀರಶೈವ ಲಿಂಗಾಯಿತ ಹಿಂದೂ ಹೊರತಾದ ಪ್ರತ್ಯೇಕ ಧರ್ಮವಲ್ಲವೆಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಅವರಿಂದು ನಗರದಲ್ಲಿ ಪಾದಯಾತ್ರೆ ಪ್ರಾರಂಭಿಸುವ ಮುನ್ನ ನಗರದ ಹೊರವಲಯದ ಹರ್ಷಿತಾ ಗಾರ್ಡ್ನಲ್ಲಿ  ಸುದ್ದಿಗೋಷ್ಟಿಯಲ್ಲಿ ಮಾತನಾಡಿ ವೀರಶೈವ ಮತ್ತು ಲಿಂಗಾಯಿತ ಹಿಂದೂ  ಧರ್ಮ ದ  ಭಾಗವೆ ಆಗಿದ್ದಾರೆ ನಮ್ಮ ಆಚರಣೆ ವಿಶಿಷ್ಟವಾಗಿದ್ದು ನಾವೆಲ್ಲರೂ ಹಿಂದೂ ಧರ್ಮದಲ್ಲಿದ್ದೇವೆಂದರು. ಕೆಲವು ಮಠಾಧೀಶರ ಹೇಳಿಕೆ ಅವರ ವಯಕ್ತಿಕ ಹೇಳಿಕೆಯಂದ ಅವರು ಅನೇಕ ವಿರಕ್ತ ಮಠಗಳು ವೈದಿಕ ಸಂಪ್ರದಾಯಗಳನ್ನು ಒಪ್ಪದವರು ಸಹ ನಮ್ಮ ಪಾದಯಾತ್ರೆಯಲ್ಲಿ ಪಾಲ್ಗೊಂಡು ಲಕ್ಷಾಂತರ ರೂ. ದೇಣೀಗೆ ನೀಡಿದ್ದಾರೆ ಈ ಐತಿಹಾಸಿಕ ಪಾದಯಾತ್ರೆ ಬೆಳಗಾವಿ ಜಿಲ್ಲೆಯಿಂದ ಅ.೨೧ ರಂದು ಪ್ರಾರಂಭವಾಗಿದ್ದು ದೇಶದ ೧೨ ಜೋತಿರ್ಲಿಂಗಗಳ ಪೈಕಿ ಒಂದಾದ ಶ್ರೀಶೈಲ ಮಲ್ಲಿಕಾರ್ಜುನನ ಸನ್ನಿಧಾನದವರೆಗೆ ಪಾದಯಾತ್ರೆ ನಡೆಯಲಿದ್ದು  ಅನೇಕ ಜಿಲ್ಲೆಗಳ ಮೂಲಕ ಹಾದು ಇಂದು ರಾಯಚೂರು ಪ್ರವೇಶಿಸಿದ್ದು ಈ  ಪಾ ದಯಾತ್ರೆ ಜಾತ್ಯಾತೀತವಾಗಿ ಎಲ್ಲರು ಪಾಲ್ಗೊಂಡಿದ್ದು ಪಾದಯಾತ್ರೆ ಉದ್ದೇಶ ವ್ಯಸನ ಮುಕ್ತ ಸಮಾಜ ಮತ್ತು ಧರ್ಮ ಜಾಗೃತಿ ಹಾಗೂ ಪರಿಸರ ಸಂರಕ್ಷಣೆ ಮಾಡುವು ಪ್ರಮುಖ ಉದ್ದೇಶ ಹೊಂ

ಪತ್ರಿಕಾ ರಂಗ ಕ್ಷೇತ್ರದಲ್ಲಿ ಕೆ.ಸತ್ಯನಾರಾಯಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ: ನ.೨೦ ರಂದು ಮಹಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ- ಗೋನಾಳ

Image
 ಪತ್ರಿಕಾ ರಂಗ ಕ್ಷೇತ್ರದಲ್ಲಿ ಕೆ.ಸತ್ಯನಾರಾಯಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ: ನ.೨೦ ರಂದು ಮಹಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ-ಗೋನಾಳ ರಾಯಚೂರು,ನ.೧೭-ಮಾತೋಶ್ರೀ ಮಹಾಂತಮ್ಮ ಶಿವಬಸಪ್ಪ ಗೋನಾಳ ಪ್ರತಿಷ್ಠಾನ ಅರ್ಪಿಸುವ ಪ್ರತಿಭಾ ಸುಗಮ ಸಂಗೀತ ಸಂಸ್ಥೆಯ ೧೩ನೇ ವಾರ್ಷಿಕೋತ್ಸವ ಅಂಗವಾಗಿ ನ.೨೦ ರಂದು ಮಹಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಮತ್ತೆ ಹಾಡಿತು ಕೋಗಿಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶರಣಪ್ಪ ಗೋನಾಳ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ ೧೦.೩೦ಕ್ಕೆ ಸಿದ್ದರಾಮ ಜಂಬಲದಿನ್ನಿ ರಂಗಮAದಿರದಲ್ಲಿ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಇಲಕಲ್ ಚಿತ್ತರಗಿ ಸಂಸ್ಥಾನ ಮಠ ಗುರು ಮಹಾಂತಸ್ವಾಮಿಗಳು , ಚೌಕಿ ಮಠ ಚಿಕ್ಕಸೂಗೂರು ಮಠದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಲಿದ್ದು ಉದ್ಘಾಟನೆಯನ್ನು ಶಾಸಕ ಡಾ.ಶಿವರಾಜ ಪಾಟೀಲ ಮಾಡಲಿದ್ದು ಅಧ್ಯಕ್ಷತೆಯನ್ನು ಗ್ರಾಮೀಣ ಶಾಸಕ ದದ್ದಲ ಬಸನಗೌಡ ವಹಿಸಲಿದ್ದು ಪ್ರಶಸ್ತಿ ಪ್ರದಾನವನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಸಂಸದ ರಾಜ ಅಮರೇಶ್ವರ ನಾಯಕ, ಅರ್ ಡಿ ಎ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಸೇರಿದಂತೆ ಅನೇಕ ಮುಖಂಡರು ಗಣ್ಯರು ಭಾಗವಹಿಸಲಿದ್ದಾರೆಂದರು. ಈ ಬಾರಿಯ ವಿಜಯ ಮಹಾಂತ ಅನುಗ್ರಹ ಪ್ರಶಸ್ತಿಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ

ತುರುಕನಡೋಣಿಯಲ್ಲಿ ಜೋಡೆತ್ತುಗಳ ಪರಿಶ್ರಮಕ್ಕೆ ಭವ್ಯ ಮೆರವಣಿಗೆ: ಒಂಬತ್ತು ಗಂಟೆ ೨೦ ನಿಮಿಷದಲ್ಲಿ ೧೬ ಎಕರೆ ಹೊಲ ಹರಗಿದ ಎತ್ತುಗಳು

Image
  ತುರುಕನಡೋಣಿಯಲ್ಲಿ ಜೋಡೆತ್ತುಗಳ ಪರಿಶ್ರಮಕ್ಕೆ ಭವ್ಯ ಮೆರವಣಿಗೆ:  ಒಂಬತ್ತು ಗಂಟೆ ೨೦ ನಿಮಿಷದಲ್ಲಿ ೧೬ ಎಕರೆ ಹೊಲ ಹರಗಿದ ಎತ್ತುಗಳು ರಾಯಚೂರು,ನ.17- ತಾಲೂಕಿನ ತುರುಕನಡೋಣಿಯಲ್ಲಿ ಜೋಡೆತ್ತುಗಳು ಒಂಬತ್ತು ಗಂಟೆ ೨೦ ನಿಮಿಷದಲ್ಲಿ ೧೬ ಎಕರೆ ಹೊಲ ಕುಂಟೆ ಹೊಡೆದಿದ್ದರಿಂದ ಗ್ರಾಮದಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು. ಗ್ರಾಮದ  ಯುವ ರೈತ ಅಬ್ರಾಹಂ ತಂದೆ ಸ್ವಾಮಿದಾಸ್ ಅವರ ಎತ್ತುಗಳು ಇಂದು ಬೆಳಿಗಿನ ಜಾವಾ ಅದೇ ಗ್ರಾಮದ ದೊಡ್ಡ ಯಲ್ಲಪ್ಪ ಎನ್ನುವವರ ಲೀಜ್ ಪಡೆದ ೧೬ ಎಕರೆ ಹತ್ತಿ ಹೊಲದಲ್ಲಿ ಪೈರಿಗೆ ಹಾನಿಯಾಗದಂತೆ ಕೇವಲ ೯ ತಾಸು ೨೦ ನಿಮಿಷದಲ್ಲಿ ಹರಗಿದ ಎತ್ತುಗಳ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾನ್ಯವಾಗಿ ದಿನಕ್ಕೆ ೨ರಿಂದ ೩ ಎಕರೆ ಹತ್ತಿ ಹೊಲ ಹರಗುವುದು ವಾಡಿಕೆ. ಆದರೆ, ಅಬ್ರಾಹಂ ತನ್ನ ಎತ್ತುಗಳ ಮೂಲಕ ೧೬ ಎಕರೆ ಹೊಲ ಕುಂಟೆ ಹರಗಿ ಭಲೆ ಎನ್ನಿಸಿಕೊಂಡಿದ್ದಾರೆ. ಜಮೀನು ಅರಗಿ ಊರಿಗೆ ಬಂದಾಗ ಗ್ರಾಮದಲ್ಲಿ ರೈತರು ಅಬ್ರಾಹಂ ಮತ್ತು ಅವರ ಎತ್ತುಗಳಿಗೆ ಹೂವಿನ ಹಾರ ಹಾಕಿ ಮೆರವಣಿಗೆಯಲ್ಲಿ ಮನೆಗೆ  ತಲುಪಿಸಿ ರೈತ ಮತ್ತು ಎತ್ತುಗಳ ಪರಿಶ್ರಮಕ್ಕೆ ಗೌರವ ಸಲ್ಲಿಸಿದ್ದಾರೆ. ನೋಡಲು ಸೊಣಕಲಾಗಿರುವ ಎತ್ತುಗಳು ಒಂಬತ್ತು ತಾಸಿನಲ್ಲಿ ೧೬ ಎಕರೆ ಹತ್ತಿ ಹೊಲ ಕುಂಟೆ ಅರಗಿದ್ದು ಅಚ್ಚರಿ ಮೂಡಿಸಿದೆ. ಬಯಲು ಭೂಮಿ ಅರಗುವುದು ಸುಲಭ, ಹತ್ತಿಘಿ, ಬೆಳೆ ಇದ್ದ ಭೂಮಿ ಅರಗುವುದು ಸುಲಭವಲ್ಲ ಎಂದು ಹೊಲದ ಗುತ್ತಿಗೆದಾರ ದೊಡ್ಡ ಯಲ್ಲಪ್ಪ , ಸು

ನಗರದಲ್ಲಿ ಕನ್ನಡ ಹಬ್ಬ ಕಾರ್ಯಕ್ರಮ: ಕನ್ನಡತನವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು: ಏಮ್ಸ್ ಗಾಗಿ ಬೆಂಗಳೂರುವರೆಗೆ ಪಾದಯಾತ್ರೆಗೂ ಸಿದ್ಧ-ಶಿವನಗೌಡ ನಾಯಕ

Image
 ನಗರದಲ್ಲಿ ಕನ್ನಡ ಹಬ್ಬ ಕಾರ್ಯಕ್ರಮ: ಕನ್ನಡತನವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು: ಏಮ್ಸ್ ಗಾಗಿ ಬೆಂಗಳೂರುವರೆಗೆ ಪಾದ ಯಾ ತ್ರೆಗೂ ಸಿದ್ಧ-ಶಿವನಗೌಡ ನಾಯಕ ರಾಯಚೂರು,ನ.೧೭-ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಸ್ಥಾಪನೆಗಾಗಿ ಯಾವುದೆ ರಾಜಿ ಮಾಡಿಕೊಳ್ಳ ದೆ  ಬೆಂಗಳೂರು ವರೆಗೂ ಪಾದ ಯಾ ತ್ರೆ ಮಾಡಲು ಸಿದ್ದವೆಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ರವರು ಹೇಳಿದರು. ಅವರಿಂದು ನಗರದ ರಂಗಮ0ದಿರದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ  ವಿಜಯ ಕರ್ನಾಟಕ ಪತ್ರಿಕೆ ವತಿಯಿಂದ ಆಯೋಜಿಸಿದ ಕನ್ನಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ನಗರದಲ್ಲಿ ಕಳೆದ ಆರು ತಿಂಗಳಿನಿ0ದ ಏಮ್ಸ್ ಗಾಗಿ ನಿರಂತರ ಧರಣಿ ಸತ್ಯಾಗ್ರಹ ನಡೆದಿದ್ದು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದನೆ ದೊರಕದಿದ್ದರೆ ಯಾವುದೆ ಮುಲಾಜಿಗೂ ಒಳಗಾಗದೆ , ಪಕ್ಷ ಹಾಗೂ ಸರ್ಕಾರ  ದೊ0ದಿಗೆ  ರಾಜೀಗೂ ಒಳಗಾಗದೆ ಬೆಂಗಳೂರುವರೆಗೂ ಪಾದಯಾತ್ರೆ ಮಾಡುವುದಾಗಿ ಹೇಳಿದರು. ನನ್ನನ್ನು ಪಕ್ಷದಿಂದ ತೆಗೆದುಹಾಕಿದರೂ ಸರಿ ನಾನು ಏಮ್ಸ್ ಪಡೆದೆ ತೀರುವ ಸಂಕಲ್ಪ ಮಾಡಿದ್ದು ಜಿಲ್ಲೆಗೆ ಏಮ್ಸ್ ದೊರಕುತ್ತದೆ ಎಂದು ಆಶಾಭಾವನೆ ಯಿದ್ದು ಮುಖ್ಯಮಂತ್ರಿಗಳಿಗೂ ನಾನು ಮತ್ತೊಮೆ ವಿನಂತಿಸುತ್ತೇನೆ0ದ ಅವರು ಜಿಲ್ಲೆಗೆ ಏಮ್ಸ್ ದೊರೆತರೆ ಈ ಭಾಗಕ್ಕೆ ಆರೋಗ್ಯ ಭಾಗ್ಯ ಸಿಕ್ಕಂತಾಗುತ್ತದೆ ಎಂದರು. ಜನಪ್ರತಿನಿಧಿಗಳಿಗೆ ಬದ್ದತೆಯಿರಬೇಕು ನಾವು ಗೆದ್ದಾಗ ಬೀಗದೆ ಸೋತಾಗ ಕುಗ್ಗದೆ ಸಮಚಿತ್ತರಾಗಿ ಕ್ಷೇತ್ರದ

ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ ಸುಧಾಮೂರ್ತಿ ಭೇಟಿ.

Image
ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ ಸುಧಾಮೂರ್ತಿ ಭೇಟಿ.                                ರಾಯಚೂರು,ನ.17- ಇನ್ಫೋಸಿಸ್ ಸಂಸ್ಥಾಪಕರಾದ ಸುಧಾ ನಾರಾಯಣ ಮೂರ್ತಿ ಯವರು ಬುಧವಾರ ಜಿಲ್ಲೆಯ  ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು.      ದೇವದುರ್ಗ ತಾಲೂಕಿನ ಗಬ್ಬೂರಿನ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಇತಿಹಾಸ ತಿಳಿದುಕೊಂಡು ದೇವಸ್ಥಾನ ಅಭಿವೃದ್ದಿಗೆ ಕೈ ಜೋಡಿಸುವುದಾಗಿ ತಿಳಿಸಿದರು.                                                       ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಅರ್ಚಕರು ಇದ್ದರು.           ಅದೇ ರೀತಿ ಮಾನ್ವಿಯ ಜಗನ್ನಾಥ ದಾಸರ ದೇವಸ್ಥಾನಕ್ಕೆ ಭೇಟಿ ನೀಡಿ ಜಗನ್ನಾಥ ದಾಸರ ದರ್ಶನ ಪಡೆದು ದೇವಸ್ಥಾನದ ಬಗ್ಗೆ ತಿಳಿದುಕೊಂಡರು . 

ನಾಳೆ ನಗರಕ್ಕೆ ಶ್ರೀಶೈಲ ಜಗದ್ಗುರು ಡಾ.ಚನ್ನ ಸಿದ್ಧರಾಮ ಶ್ರೀಗಳ ಪಾದಯಾತ್ರೆ- ಮಿರ್ಜಾಪೂರು

Image
  ನಾಳೆ ನಗರಕ್ಕೆ ಶ್ರೀಶೈಲ ಜಗದ್ಗುರು ಡಾ.ಚನ್ನ ಸಿದ್ಧರಾಮ ಶ್ರೀಗಳ ಪಾದಯಾತ್ರೆ- ಮಿರ್ಜಾಪೂರು ರಾಯಚೂರು,ನ.೧೬-ಶ್ರೀ ಶೈಲ ಜಗದ್ಗುರುಗಳಾದ ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಪಾದಯಾತ್ರೆ ನಗರಕ್ಕೆ ನ.೧೭ ಕ್ಕೆ ಆಗಮಿಸಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪೂರು ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪೂಜ್ಯ ಸ್ವಾಮಿಗಳು ಪಾದಯಾತ್ರೆ ಮೂಲಕ ನಗರಕ್ಕೆ ನ.೧೭ ಸಂಜೆ ಆಗಮಿಸಲಿದ್ದು ಅಂದು ಹರ್ಷಿತಾ ಗಾರ್ಡ್ನ್ ನಲ್ಲಿ ಧರ್ಮ ಸಭೆ , ಪ್ರಸಾದ ವಿನಿಯೋಗ ನಡೆಯಲಿದೆ ಎಂದ ಅವರು ನ.೧೮ ರಂದು ಬೆಳಿಗ್ಗೆ ಹರ್ಷಿತಾ ಗಾರ್ಡ್ನ್ ನಿಂದ ಪಾದಯಾತ್ರೆ ಪ್ರಾರಂಬಗೊಳ್ಳಲಿದ್ದು ನಗರದ ವೀರಶೈವ ಕಲ್ಯಾಣ ಮಂಟಪಕ್ಕೆ ಆಗಮಿಸುವ ಸ್ವಾಮಿಗಳು ಅಲ್ಲಿ ಧರ್ಮ ಸಭೆ ,ಪೂಜೆ, ಪ್ರಸಾದ ಸಂಜೆ ವಿಶೇಷ ಪ್ರವಚನ ನೀಡಲಿದ್ದು ನಂತರ ಬಿಜನಗೇರಾ ಗ್ರಾಮಕ್ಕೆ ಪಾದಯಾತ್ರೆ ಸಾಗಲಿದೆ ಎಂದ ಅವರು  ಸುಮಾರು ೧೦  ಸಾವಿರ ಜನರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು. ಬಿಚ್ಚಾಲಿ ಮಟಮಾರಿ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಶ್ರೀಗಳು ಮಾತನಾಡಿ ಪಾದಯಾತ್ರೆ ಉದ್ದೇಶ ಧರ್ಮ ಜಾಗೃತಿ ಮತ್ತು ಭಕ್ತರಲ್ಲಿ ಆಧ್ಯಾತ್ಮ ಜ್ಯೋತಿ ಬೆಳಗಿಸಿ ಅವರಲ್ಲಿರುವ ರೋಗ ನಿವಾರಣೆ ಮಾಡಿ ಅಧ್ಯಾತ್ಮದ ಮೂಲಕ ಸುಖ ಶಾಂತಿ ನೆಲೆಸುವ ಪ್ರಯತ್ನವಾಗಿದೆ ಎಂದರು. ಈ ಸಂದರ್ಭದಲ್ಲಿ ಸೋಮವಾರಪೇಟೆ ಹಿರೇಮಠದ

ನರೇಗಾ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನಾ ಸಭೆ: ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ- ವೇಣುಗೋಪಾಲ

Image
  ನರೇಗಾ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನಾ ಸಭೆ:            ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ- ವೇಣುಗೋಪಾಲ ರಾಯಚೂರು,ನ.16- ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆಯಡಿ ಅನುಷ್ಟಾನಗೊಳ್ಳುತ್ತಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಯೋಜನೆಯಲ್ಲಿ ಪ್ರಗತಿ ಸಾಧಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯಚರಣೆ ಅಧಿಕಾರಿ ಪಿ.ಜಿ.ವೇಣುಗೋಪಾಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ನ.16ರ(ಬುಧವಾರ) ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹತ್ಮಾ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳು ಬಾಕಿ ಇದ್ದು, ಡಿಸೆಂಬರ್ ತಿಂಗಳ ಅಂತ್ಯದೊಳಗಾಗಿ ನರೇಗಾ ಯೋಜನೆಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗರಿಷ್ಠ ಗುರಿ ತಲುಪಿ ಪ್ರಗತಿ ಸಾಧಿಸುವಂತೆ ಸೂಚಿಸಿದರು. 2019-20ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ ಒಟ್ಟು 1,60,498 ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೊಳ್ಳಲಾಗಿದ್ದು, ಇದರಲ್ಲಿ 1,60,476 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಉಳಿದ 22 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೇ.99.99 ರಷ್ಟು ಪ್ರಗತಿಯನ್ನು ಸಾಧಿಸಲಾಗಿದ್ದು, ಕೂಡಲೇ ಬ