Posts

Showing posts from October, 2023

ಕರ್ನಾಟಕ ರಾಜ್ಯೋತ್ಸವ ದಿನಾಚರಣೆ: ನಾಲ್ವರು ಮಹನಿಯರಿಗೆ ಎಡೆದೊರೆ ಸಾಧನಾ ಪುರಸ್ಕಾರ

Image
ಕರ್ನಾಟಕ ರಾಜ್ಯೋತ್ಸವ ದಿನಾಚರಣೆ:                          ನಾಲ್ವರು ಮಹನಿಯರಿಗೆ   ಎಡೆದೊರೆ ಸಾಧನಾ ಪುರಸ್ಕಾರ ರಾಯಚೂರು ಅ.31- ಕರ್ನಾಟಕ ರಾಜ್ಯೋತ್ಸವ ದಿನಾಚರಣೆ 2023ರ ಅಂಗವಾಗಿ ರಾಯಚೂರು ಜಿಲ್ಲೆಯ ನಾಲ್ವರು ಮಹನಿಯರಿಗೆ ಜಿಲ್ಲಾ ಎಡೆ ದೊರೆ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದು  ಕರ್ನಾಟಕ ರಾಜ್ಯೋತ್ಸವ ಆಚರಣಾ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಚಂದ್ರಶೇಖರ ನಾಯಕ ಎಲ್ ಅವರು ತಿಳಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ನರಸಿಂಹರಾವ್ ಸರ್ಕೀಲ್ (ಪತ್ರಿಕೋದ್ಯಮ), ಬುರ್ ಕಥಾ ಅಯ್ಯಮ್ಮ (ಜನಪದ), ಸೂಲಗಿತ್ತಿ ಮಲ್ಲಮ್ಮ (ಸಮಾಜ ಸೇವೆ) ಮತ್ತು ಅಮರೇಶ್ ಯತಗಲ್ (ಸಾಹಿತ್ಯ) ಈ ಮಹನಿಯರು 2023ನೇ ಸಾಲಿನ ಎಡೆ ದೊರೆ ಸಾಧನಾ ಪುರಸ್ಕಾರ ಪಡೆದುಕೊಂಡಿದ್ದಾರೆಂದು ಹೇಳಲು ಜಿಲ್ಲಾಡಳಿತ ಹರ್ಷಿಸುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ವೇದಿಕೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ: ನವೆಂಬರ್‌ 01ರಂದು ಬೆಳಗ್ಗೆ 9 ಗಂಟೆಗೆ ನಗರದ ಮಹಾತ್ಮಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ನಡೆಯುವ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಎಡೆದೊರೆ ಸಾಧನಾ ಪುರಸ್ಕಾರವನ್ನು ಮಹನಿಯರಿಗೆ  ನೀಡಿ ಗೌರವಿಸಲಿದ್ದಾರೆ.

೬೮ ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಜಿಲ್ಲೆಯ ರಾಮಣ್ಣ ಹವಳೆ, ಕಾಳಪ್ಪ ವಿಶ್ವಕರ್ಮರವರಿಗೆ ಒಲಿದ ಪ್ರಶಸ್ತಿ.

Image
  ೬೮ ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ:                          ಜಿಲ್ಲೆಯ ರಾಮಣ್ಣ ಹವಳೆ, ಕಾಳಪ್ಪ ವಿಶ್ವಕರ್ಮರವರಿಗೆ ಒಲಿದ ಪ್ರಶಸ್ತಿ.    ರಾಯಚೂರು,ಅ.31- ರಾಜ್ಯ ಸರ್ಕಾರ 2023 ನೇ ಸಾಲಿನ ೬೮ ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು ಜಿಲ್ಲೆಯ ಇಬ್ಬರು ಸಾಧಕರಿಗೆ ಪ್ರಶಸ್ತಿ ಒಲಿದಿದೆ.                                                   ಶಿಕ್ಷಣ ಕ್ಷೇತ್ರದಲ್ಲಿ ರಾಮಣ್ಣ ಹವಳೆ, ಶಿಲ್ಪಕಲೆ ಕ್ಷೇತ್ರದಲ್ಲಿ ಕಾಳಪ್ಪ  ವಿಶ್ವಕರ್ಮರವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.          

ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಇಂದಿರಾಗಾಂಧಿ ಪುಣ್ಯದಿನ, ಸರ್ದಾರ್ ವಲ್ಲಭಭಾಯಿ ಪಟೇಲ್‌ ಜನ್ಮದಿನ ಆಚರಣೆ

Image
  ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಇಂದಿರಾಗಾಂಧಿ ಪುಣ್ಯದಿನ, ಸರ್ದಾರ್ ವಲ್ಲಭಭಾಯಿ ಪಟೇಲ್‌ ಜನ್ಮದಿನ ಆಚರಣೆ  ರಾಯಚೂರು, ಅ.31- ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರದಂದು ನಗರದ ಪಕ್ಷದ ಕಾರ್ಯಾಲಯದಲ್ಲಿ  ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ದಿ.ಶ್ರೀಮತಿ ಇಂದಿರಾಗಾಂಧಿ ಯವರ ಪುಣ್ಯತಿಥಿ ಹಾಗೂ ಮಾಜಿ ಕೇಂದ್ರ ಗೃಹ ಸಚಿವ ದಿ. ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.   ಮೊದಲಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಈ ಇಬ್ಬರು ಮಹನೀಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು .    ಈ ಸಂದರ್ಭದಲ್ಲಿ ಪಾರಸಮಲ್ ಸುಖಾಣಿ, ಬಸವರಾಜ ಪಾಟೀಲ್ ಇಟಗಿ, ಎ.ವಸಂತಕುಮಾರ, ಜಿ.ಬಸವರಾಜರೆಡ್ಡಿ, ಕೆ.ಶಾಂತಪ್ಪ, ಅಮರೇಗೌಡ ಹಂಚಿನಾಳ, ತಾಯಣ್ಣ ನಾಯಕ, ಜಿ.ಶಿವಮೂರ್ತಿ, ರುದ್ರಪ್ಪ ಅಂಗಡಿ, ಆಂಜನೇಯ ಕುರುಬದೊಡ್ಡಿ, ರಾಮಕೃಷ್ಣ ನಾಯಕ, ಜಿ.ಸುರೇಶ, ರವಿ ಪಾಟೀಲ್, ಸುಧೀಂದ್ರ ಜಾಗೀರದಾರ, ಭೀಮನಗೌಡ ನಾಗಡದಿನ್ನಿ, ಸಿದ್ದಪ್ಪ, ಭಂಡಾರಿ, ರಮೇಶ ಯಾದವ, ಶರಣಪ್ಪ ಪೂಜಾರಿ, ದರೂರು ಬಸವರಾಜ ಪಾಟೀಲ್, ಎಂ.ಕೆ.ಬಾಬರ್, ಸುಧಾಮ, ನಜೀರ್ ಪಾಟೀಲ್, ರಾಣಿ ರಿಚರ್ಡ್‌, ಮಂಜುಳಾ ಅಮರೇಶ, ಶಶಿಕಲಾ ಭೀಮರಾಯ, ಮಾಲಾ ಭಜಂತ್ರಿ, ಕಾಶಿಂಬೀ ಭಾರತಿ, ರಜಿಯಾ ಪಟೇಲ್, ಪೋತಗಲ್‌ ಶ್ರೀನಿವಾಸ, ಕೆ.ಇ.ಕುಮಾರ, ವೈ.ಎಸ್.ಯಲ್ಲಪ್ಪ, ನರಸಿಂಹ ನಾಯಕ, ತಿಮ್ಮಪ್ಪ ಸ್ವಾಮಿ, ಪಾಗುಂಟಪ್ಪ ಮಿರ್ಜಾಪುರ, ಚೇತನ  ಕಡಗೋಳ, ಮಲ್ಲೇ

ನವೆಂಬರ್ 1ರಂದು ರಾಜ್ಯೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳು

Image
  ನವೆಂಬರ್ 1ರಂದು ರಾಜ್ಯೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳು ರಾಯಚೂರು,ಅ.31- ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದ್ದು ನಾಳೆ ನವೆಂಬರ್ 01ರಂದು ರಾಜ್ಯೋತ್ಸವ ವೇದಿಕೆ ಕಾರ್ಯಕ್ರಮದ ಜೊತೆಗೆ ನಡೆಯಲಿರುವ  ಇನ್ನೀತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ .  ನವೆಂಬರ್ 01ರಂದು ಜಿಲ್ಲೆಯ ಎಲ್ಲಾ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಗಳನ್ನು ಬಿಡಿಸಿ ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಘೋಷವಾಕ್ಯ ಬರೆಯುವುದು.  ನವೆಂಬರ್ 1ರಂದು ಬೆಳಿಗ್ಗೆ 9 ಗಂಟೆಗೆ ಎಲ್ಲಾ ಆಕಾಶವಾಣಿ ಕೇಂದ್ರಗಳಲ್ಲಿ (ರೇಡಿಯೋ) ನಾಡಗೀತೆ ಪ್ರಸಾರ. ನವೆಂಬರ್ 1 ರ ಸಂಜೆ 5 ಗಂಟೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳ ಮೈದಾನಗಳಲ್ಲಿ ಕೆಂಪು ಹಳದಿ ಬಣ್ಣದ ಗಾಳಿಪಟಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಸುವರ್ಣ ಸಂಭ್ರಮ ಗಾಳಿಪಟ ಉತ್ಸವ.  ನವೆಂಬರ್ 1ರ ಸಂಜೆ 7 ಗಂಟೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳ ಹಾಗೂ ನಗರ ಪ್ರದೇಶಗಳ ಮನೆಗಳ ಮುಂದೆ, ಕಚೇರಿಗಳ ಮುಂದೆ ಹಾಗೂ ಅಂಗಡಿ-ಮಳಿಗೆಗಳ ಮುಂದೆ ಹಣತೆ (ದೀಪ) ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇಂದು ರಾಹುಗ್ರಸ್ತ ಚಂದ್ರ ಗ್ರಹಣ

Image
ಇಂದು ರಾಹುಗ್ರಸ್ತ ಚಂದ್ರ ಗ್ರಹಣ  ರಾಯಚೂರು ,ಅದು.28- ಇಂದು ರಾಹುಗ್ರಸ್ತ ಚಂದ್ರ ಗ್ರಹಣ ಸಂಭವಿಸಲಿದೆ ಭಾರತದಲ್ಲಿ  ಗ್ರಹಣ ಗೋಚರಿಸಲಿದೆ.                            ಗ್ರಹಣ ಸ್ಪರ್ಶ -ಮಧ್ಯರಾತ್ರಿ 1-02, ಗ್ರಹಣ ಮಧ್ಯ -ಮಧ್ಯರಾತ್ರಿ 1-45,ಗ್ರಹಣ ಮೋಕ್ಷ - ಮಧ್ಯ ರಾತ್ರಿ 2-10. ಗ್ರಹಣ ಆದ್ಯಂತ ಪುಣ್ಯಕಾಲ -1-09 ಇರಲಿದೆ ವೇದ ವಿಚಾರ : ಈ ಚಂದ್ರ ಗ್ರಹಣ ಮಧ್ಯ ರಾತ್ರಿ ಮೂರನೇ ಯಾಮದಲ್ಲಿ ಆಗುತ್ತಿರುವದರಿಂದ ಗ್ರಹಣ ಸ್ಪರ್ಶ ಕ್ಕಿಂತ ಮೂರು ಯಾಮ ಮೊದಲು ಅಂದರೆ ಸಾಯಂಕಾಲ 4-02ರಿಂದ ವೇದವು ಪ್ರಾರಂಭ ವಾಗುವುದು. ಸಾಯಂಕಾಲ 4-00 ಒಳಗೆ  ಭೋಜನ ಮುಗಿಸಬೇಕು. ಗ್ರಹಣ ಫಲ: ಅಶ್ವಿನಿ ನಕ್ಷತ್ರ ಮೇಷ ರಾಶಿ ಯಲ್ಲಿ ಈ ಗ್ರಹಣವಾಗುತ್ತಿರುವದಿಂದ ಈ ರಾಶಿ ಯವರಿಗೆ ವಿಶೇಷ ದೋಷವು ಇದೆ ಎನ್ನಲಾಗಿದೆ. ನಕ್ಷತ್ರ ದೋಷ ಅಶ್ವಿನಿ,ಭರಣಿ, ರೋಹಿಣಿ, ಮೃಗಶಿರಾ, ಪುಷ್ಯ, ಆಶ್ಲೇಷಾ,ಮಘ, ಉತ್ತರ, ಚಿತ್ರ, ಸ್ವಾತಿ, ವಿಶಾಖ, ಅನುರಾಧ,ಮೂಲ, ಪೂರ್ವಾಷಾಡ, ಶ್ರವಣ, ಧನಿಷ್ಠ, ಉತ್ತರಾಭಾದ್ರ, ರೇವತಿ. ಜನ್ಮರಾಶಿಯಿಂದ ಗ್ರಹಣ ದೋಷ ಶುಭಫಲ: ಮಿಥುನ,ಕರ್ಕ, ವೃಶ್ಚಿಕ ಕುಂಭ  ಮಿಶ್ರ ಫಲ: ಸಿಂಹ, ತುಲಾ,ಧನು, ಮೀನ ಅಶುಭ ಫಲ: ಮೇಷ, ವೃಷಭ, ಕನ್ಯಾ,ಮಕರ

ಜಿಲ್ಲಾಡಳಿತದಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ: ಮಹರ್ಷಿ ವಾಲ್ಮೀಕಿ ಅವರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ- ಬಸನಗೌಡ ದದ್ದಲ್

Image
  ಜಿಲ್ಲಾಡಳಿತದಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ: ಮಹರ್ಷಿ ವಾಲ್ಮೀಕಿ ರವರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ-  ಬಸನಗೌಡ ದದ್ದಲ್ ರಾಯಚೂರು,ಅ.28 ಮಹರ್ಷಿ ವಾಲ್ಮೀಕಿ ಅವರು ಕೇವಲ ಒಂದು ಸಮಾಜಕ್ಕೆ ಸೀಮಿತರಾದವರಲ್ಲ ಅವರು ಮನುಕುಲಕ್ಕೆ ಆಸ್ತಿಯಿದ್ದಂತೆ ಆದ್ದರಿಂದ ಅಂತಹ ಮಹಾನ್ ವ್ಯಕ್ತಿಯ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಹೇಳಿದರು. ಅವರಿಂದು ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ಅವರು ಸಮಾಜಕ್ಕೆ ನೀಡಿದ ಉತ್ತಮ ಜೀವನ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವಾಲ್ಮೀಕಿ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಆದ್ದರಿಂದ ವಾಲ್ಮೀಕಿ ಮಹರ್ಷಿಗಳು ನೀಡಿದ ಸಿದ್ದಾಂತಗಳನ್ನು ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಬೇಕು ಎಂದು ತಿಳಿಸಿದರು.  ಸಮಾಜ ಅಭಿವೃದ್ಧಿ ಹೊಂದಲು ಸಮಾಜದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕು ಮತ್ತು ಉತ್ತಮ ಶಿಕ್ಷಣವನ್ನು ನೀಡವುದು ಪೋಷಕರು ಹಾಗೂ ಜನಪ್ರತಿನಿಧಿಗಳ ಮುಖ್ಯ ಕರ್ತವ್ಯವಾಗ

ಪಿ.ಎಂ ಸ್ವನಿಧಿ ಮತ್ತು ಪಿ.ಎಂ ವಿಶ್ವಕರ್ಮ ಯೋಜನೆಗಳ ಅನುಷ್ಠಾನ ಕುರಿತು ಮಾಜಿ ಸಚಿವ ಎಸ್.ಎ.ರಾಮದಾಸ್ ಅವರ ನೇತೃತ್ವದಲ್ಲಿ ಸಭೆ.

Image
ಪಿ.ಎಂ ಸ್ವನಿಧಿ ಮತ್ತು ಪಿ.ಎಂ ವಿಶ್ವಕರ್ಮ ಯೋಜನೆಗಳ ಅನುಷ್ಠಾನ ಕುರಿತು ಮಾಜಿ ಸಚಿವ ಎಸ್.ಎ.ರಾಮದಾಸ್ ಅವರ ನೇತೃತ್ವದಲ್ಲಿ ಸಭೆ.   ರಾಯಚೂರು,ಅ.28- ಪಿ.ಎಂ ಸ್ವನಿಧಿ ಮತ್ತು ಪಿ.ಎಂ ವಿಶ್ವಕರ್ಮ ಯೋಜನೆಗಳ ಅನುಷ್ಠಾನ ಕುರಿತು ಮಾಜಿ ಸಚಿವರು ಹಾಗೂ ಸದರಿ ಯೋಜನೆಗಳ ಅನುಷ್ಠಾನದ ರಾಜ್ಯ ಉಸ್ತುವಾರಿಗಳಾದ ಶ್ರೀ ಎಸ್.ಎ. ರಾಮದಾಸ್ ರವರು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾಮಟ್ಟದ ಅವಲೋಕನ ಸಭೆಯನ್ನು ನಡೆಸಿ ಅಧಿಕಾರಿಗಳ ಜೊತೆಗೆ ಮಾಹಿತಿ ತಗೊಂಡು ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿಸ್ತೃತವಾದ ಸಭೆಯನ್ನು ಮಾಡಿ ಪಿ.ಎಂ.ಸ್ವಾನಿಧಿ ಯಿಂದ ಸಮೃದ್ಧಿಯವರಿಗೆ ಈ ಏಳು ಯೋಜನೆಗಳು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಲು ಹೇಳಿದರು. ನಂತರ ಪಕ್ಷದ ಕಾರ್ಯಕರ್ತರ ಜೊತೆಗೆ ಈ ಯೋಜನೆಗಳ ಮಾಹಿತಿ ಉಪಯೋಗ,ಪ್ರಚಾರ, ಸಾರ್ವಜನಿಕರಿಗೆ ಯಾವ ರೀತಿಯಲ್ಲಿ ಈ ಯೋಜನೆಗಳನ್ನು ತಲುಪಿಸಬೇಕು ಎಂಬ ಮಾಹಿತಿ ತಿಳಿಸಿದರು.  ಇದೆ ಸಂದರ್ಭದಲ್ಲಿ ರಾಯಚೂರು ನಗದ ಗೋಶಾಲೆ ರಸ್ತೆಯಲ್ಲಿ  ಕಟಿಗೆ ಪೀಠೋಪಕರಣದ  ಕೆಲಸ ಮಾಡುವ ಕಾರ್ಖಾನೆಗೆ ಬೇಟಿ ನೀಡಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.  ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಶಂಕ್ರಪ್ಪ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಂಕರ್ ರೆಡ್ಡಿ,ಜಿಲ್ಲಾ ಉಪಾಧ್ಯಕ್ಷರಾದ ಕೆ.ಎಂ.ಪಾಟೀಲ್, ರಾಜಕುಮಾರ, ಡಿ, ಶರಣಪ್ಪಗೌಡ ನಕ್ಕುಂದಿ, ಯೈ.ಗೋಪಲ ರೆಡ್ಡಿ, ಬಿ.ಗೋವಿಂದ, ಶಂಕರ್ ಗ

ಅ.28 ರಂದು ಕಲ್ಮಲಾ ಶ್ರೀ ಲಕ್ಷ್ಮಿವೆಂಕಟೇಶ್ವರ ರಥೋತ್ಸವ

Image
ಅ.28 ರಂದು ಕಲ್ಮಲಾ  ಶ್ರೀ  ಲಕ್ಷ್ಮಿವೆಂಕಟೇಶ್ವರ ರಥೋತ್ಸವ ರಾಯಚೂರು,ಅ.27-  ಶ್ರೀ ನರಹರಿ ತೀರ್ಥರಿಂದ ಪ್ರತಿಷ್ಠಾಪಿತವಾದ ಮೊದಲಕಲ್ ಶೇಷ ದಾಸರಿಂದ ಪುನ: ಪ್ರತಿಷ್ಠಾಪಿತ ಶ್ರೀ ಭೂ ಸಮೇತ ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನ ಕಲ್ಮಲಾದಲ್ಲಿ ಅ.28 ರಂದು ಬೆಳಿಗ್ಗೆ 10 ಗಂಟೆಗೆ ರಥೋತ್ಸವ ಅದಕ್ಕೂ ಮುಂಚೆ ಪಂಡಿತ್ ಶ್ರೀಹರಿ ಆಚಾರ್ ಪೂಜಾರ್ ಮಾದನೂರು ಇವರಿಂದ ಪ್ರವಚನ ನಂತರ ಪಂಡಿತ್ ಮುಕುಂದಾಚಾರ್ ಜೋಶಿ ಇವರಿಂದ ವೆಂಕಟೇಶ ಮಹಾತ್ಮೆ ಮಂಗಳ ಮಹೋತ್ಸವ ಗ್ರಹಣದ ಪ್ರಯುಕ್ತ ಸರಿಯಾದ ಸಮಯಕ್ಕೆ ರಥೋತ್ಸವ ಜರುಗಲಿದ್ದು ಭಕ್ತಾದಿಗಳು ಆಗಮಿಸಿ ತನು ಮನದಿಂದ ಸೇವೆ ಗೈದುಶ್ರೀ ವೆಂಕಟೇಶ್ವರ ಕೃಪೆಗೆ ಪಾತ್ರರಾಗ ಬೇಕೆಂದು  ಅರ್ಚಕರಾದ ಕೊಪ್ರೇಶ ಆಚಾರ ಜೋಷಿ , ವೆಂಕಟೇಶ್ ಆಚಾರ ಜೋಷಿ ಕಲಮಲಾ ರವರು  ಕೋರಿದ್ದಾರೆ.

ಅ.28 ರಂದು ಯಶವಂತಪುರ ಬೀದರ್ ನಡುವೆ ವಿಶೇಷ ರೈಲು

Image
ಅ.28 ರಂದು  ಯಶವಂತಪುರ ಬೀದರ್ ನಡುವೆ ವಿಶೇಷ ರೈಲು                                                                      ರಾಯಚೂರು,ಅ. 27- ಪ್ರಯಾಣಿಕರ ಒತ್ತಡ ಕಡಮೆ ಮಾಡಲು ಯಶವಂತಪುರ ಬೀದರ ನಡುವೆ ದಿ. 28 ರಂದು ವಿಶೇಷ ರೈಲು  06523 ಓಡಿಸಲಾಗುತ್ತಿದೆ ಎಂದು ರೈಲ್ವೆ ಬೋರ್ಡ್ ಸದಸ್ಯರಾದ ಬಾಬುರಾವ್ ತಿಳಿಸಿದ್ದಾರೆ.                ಈ ರೈಲು ಅಂದು ರಾತ್ರಿ 11.15.ಗೆ ಯಶವಂತಪುರ ಬಿಟ್ಟು  ದಿ. 29 ರಂದು ಮಧ್ಯಾಹ್ನ 1 ಗಂಟಗೆ ಬೀದರ ತಲುಪುತ್ತದೆ.                                        ಈ ರೈಲು ಧರ್ಮಾವರಂ, ಗುಂತಕಲ್, ಮಂತ್ರಾಲಯಂ ಮೂಲಕ ರಾಯಚೂರಿಗೆ ದಿ. 29 ರಂದು ಬೆಳಿಗ್ಗೆ 7.35 ಕ್ಕೆ  ಬರುತ್ತದ ನಂತರ ವಾಡಿ ಕಲ್ಬುರ್ಗಿ ಮೂಲಕ ಬೀದರ್ ಗೆ ತೆರಳುತ್ತದೆ ಪ್ರಯಾಣಿಕರು ಇದರ ಲಾಭ ಪಡೆಯಲು ಕೋರಿದ್ದಾರೆ.

ನಗರದಲ್ಲಿ ಉಜ್ಜೀವನ್‌ ಎಸ್‌ಎಫ್‌ಬಿ ಬ್ಯಾಂಕ್‌ ಶಾಖೆ ಆರಂಭ: ವೈವಿಧ್ಯಮಯ ಮತ್ತು ಸ್ಥಿರ ಗ್ರಾಹಕ ನೆಲೆಯನ್ನು ನಿರ್ಮಿಸುವ ಉದ್ದೇಶವನ್ನು ಬ್ಯಾಂಕ್‌ ಹೊಂದಿದೆ- ಸಂದೀಪ್‌. ಬಿ

Image
ನಗರದಲ್ಲಿ ಉಜ್ಜೀವನ್‌ ಎಸ್‌ಎಫ್‌ಬಿ ಬ್ಯಾಂಕ್‌ ಶಾಖೆ ಆರಂಭ:                      ವೈವಿಧ್ಯಮಯ ಮತ್ತು ಸ್ಥಿರ ಗ್ರಾಹಕ ನೆಲೆಯನ್ನು ನಿರ್ಮಿಸುವ ಉದ್ದೇಶವನ್ನು ಬ್ಯಾಂಕ್‌ ಹೊಂದಿದೆ- ಸಂದೀಪ್‌. ಬಿ ರಾಯಚೂರು,ಅ.26-  ನಗರದಲ್ಲಿ  ಉಜ್ಜೀವನ್‌ ಎಸ್‌ಎಫ್‌ಬಿ ಶಾಖೆ ಪ್ರಾರಂಭದೊಂದಿಗೆ  ಕರ್ನಾಟಕದಲ್ಲಿ ಒಟ್ಟು 92 ಶಾಖೆಗಳನ್ನು ಹೊಂದಿದಂತಾಗಿದ್ದು, 10.5 ಲಕ್ಷ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ ವೈವಿಧ್ಯಮಯ ಮತ್ತು ಸ್ಥಿರ ಗ್ರಾಹಕ ನೆಲೆಯನ್ನು ನಿರ್ಮಿಸುವ ಉದ್ದೇಶವನ್ನು ಬ್ಯಾಂಕ್‌ ಹೊಂದಿದೆ ಎಂದು  ಬ್ಯಾಂಕಿನ ಹಿರಿಯ ಪ್ರಾದೇಶಿಕ ಮುಖ್ಯಸ್ಥರಾದ ಸಂದೀಪ್‌ ಬಿ. ದೀಪ ಹೇಳಿದರು . ಅವರು ನಗರದಲ್ಲಿ  ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಲಿಮಿಟೆಡ್‌ (ಉಜ್ಜೀವನ್‌ ಎಸ್‌ಎಫ್‌ಬಿ) ರಾಯಚೂರಿನಲ್ಲಿ ತನ್ನ ನೂತನ ಶಾಖೆಯನ್ನು  ಸ್ಟೇಷನ್‌ ರಸ್ತೆಯಲ್ಲಿರುವ ರಜಪೂತ್‌ ಬಿಲ್ಡಿಂಗ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು. ಉಜ್ಜೀವನ್‌ ಎಸ್‌ಎಫ್‌ಬಿ ನಿಶ್ಚಿತ ಠೇವಣಿಗಳ ಮೇಲೆ ಆಕರ್ಷಕ ಬಡ್ಡಿ ದರ ನೀಡುತ್ತಿದ್ದು, ಶೇ 8.25ರಷ್ಟು ಬಡ್ಡಿಯನ್ನು 12 ತಿಂಗಳ ಮತ್ತು 80 ವಾರಗಳ (560) ಎಫ್‌ಡಿ ಮೇಲೆ ನೀಡುತ್ತಿದೆ. ಹಿರಿಯ ನಾಗಕರಿಗೆ ಇದು ಶೇ 8.75ರಷ್ಟಿದೆ. ಮ್ಯಾಕ್ಸಿಮಾ ಮತ್ತು ಪ್ರಿವಿಲೇಜ್‌ ಉಳಿತಾಯ ಖಾತೆಗಳ ಮೇಲೆಯೂ ಉಜ್ಜೀವನ್‌ ಎಸ್‌ಎಫ್‌ಬಿ ವಾರ್ಷಿಕ ಶೇ 7.5ರವರೆಗೆ ಬಡ್ಡಿಯನ್ನು ನೀಡುತ್ತಿದೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ 1

ದೇವಸೂಗುರಿನಲ್ಲಿ ಸಂಭ್ರಮದ ದಸರಾ ಆಚರಣೆ: ಸೂಗುರೇಶ್ವರ ಬಡಾವಣೆ ನಿವಾಸಿಗಳಿಂದ ಬನ್ನಿ ವಿನಿಮಯ

Image
  ದೇವಸೂಗುರಿನಲ್ಲಿ ಸಂಭ್ರಮದ ದಸರಾ ಆಚರಣೆ: ಸೂಗುರೇಶ್ವರ ಬಡಾವಣೆ ನಿವಾಸಿಗಳಿಂದ ಬನ್ನಿ ವಿನಿಮಯ   ರಾಯಚೂರು: ಅ:25: ತಾಲೂಕಿನ ದೇವಸೂಗುರಿನಲ್ಲಿ ನಾಡ ಹಬ್ಬ ವಿಜಯದಶಮಿ ಹಬ್ಬವನ್ನು ಮ೦ಗಳವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.         ಸ್ಥಳೀಯ ಸೂಗುರೇಶ್ವರ ಮತ್ತು ಶ್ರೀಶೈಲ ಮಲ್ಲಿಕಾರ್ಜುನ ಬಡಾವಣೆ ನಿವಾಸಿಗಳಿಂದ ಬನ್ನಿ ಮಂಟಪ ದವರೆಗೆ ಮೆರವಣಿಗೆ ತೆರಳಿ ಪಂಪಯ್ಯ ಸ್ವಾಮೀಜಿಗಳ ಸಮ್ಮುಖದಲ್ಲಿ ಬನ್ನಿಮರಕ್ಕೆ ಪೂಜೆ ಸಲ್ಲಿಸಿ  ಸಾಂಪ್ರದಾಯಿಕ ಆಯುಧದಿಂದ ಬನ್ನಿ ಕತ್ತರಿಸುವ ಮೂಲಕ ವಿಜಯದಶಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶರಣಗೌಡ, ಸುನೀಲಗೌಡ, ಮಹಾಂತೇಶ ಅಂಗಡಿ,ನಾಗೇಶ ಕಾಂಟ್ರಾಕ್ಟರ್, ಬಸವರಾಜ ಬನಶಂಕರಿ,ಸೂಗುರೇಶ ಮಾಸ್ಟರ್ ಗುಡೇಬಲ್ಲೂರು, ಸೋಮಶೇಖರ ಹಿರೇಮಠ, ವಿರೇಶ ಆಟೋಮೊಬೈಲ್,ಗಂಗಾಧರ ಶೆಟ್ಟಿ, ಈರಣ್ಣ,ಲಿಂಗಪ್ಪ,ಸೇರಿದಂತೆ ವಿವಿಧ ಸಮಾಜದ ಮುಖಂಡರು, ಗಣ್ಯರು ಅಪಾರ ಸಂಖ್ಯೆಯ ಮಹಿಳೆಯರು ಪರಸ್ಪರ ಬನ್ನಿ ವಿತರಣೆ ಮಾಡಿ ಶುಭಾಶಯ ಕೋರಿದರು.

ಮಂತ್ರಾಲಯ : ದುರ್ಗಾಷ್ಟಮಿ ಅಂಗವಾಗಿ ಮಂಚಾಲಮ್ಮ ದೇವಿಗೆ ವಿಶೇಷ ಪೂಜೆ.

Image
ಮಂತ್ರಾಲಯ : ದುರ್ಗಾಷ್ಟಮಿ ಅಂಗವಾಗಿ ಮಂಚಾಲಮ್ಮ ದೇವಿಗೆ ವಿಶೇಷ ಪೂಜೆ.                         ರಾಯಚೂರು,ಅ.22- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದುರ್ಗಾಷ್ಟಮಿ ಅಂಗವಾಗಿ ಮಂಚಾಲಮ್ಮ ದೇವಿಗೆ ವಿಶೇಷ ಪೂಜೆಯನ್ನು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ನೆರವೇರಿಸಿದರು .                    ಗ್ರಾಮದೇವತೆಯಾದ  ಶ್ರೀ ಮಂಚಾಲಮ್ಮ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮಧ್ವಮಾರ್ಗದಲ್ಲಿ ಪ್ರದಕ್ಷಿಣೆ ಮಾಡಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಮಮದಾಪುರ ಶ್ರೀ ಮಾತಾ ಗಧಾರ ಮಾರಿಕಾಂಬಾ ದೇವಸ್ಥಾನ: ಭಕ್ತಿ ಸಿಂಚನ ಭಕ್ತಿ ಗೀತೆಗಳ ಸಂಗೀತ ಕಾರ್ಯಕ್ರಮ

Image
ಮಮದಾಪುರ ಶ್ರೀ ಮಾತಾ ಗಧಾರ ಮಾರಿಕಾಂಬಾ ದೇವಸ್ಥಾನ:          ಭಕ್ತಿ ಸಿಂಚನ ಭಕ್ತಿ ಗೀತೆಗಳ ಸಂಗೀತ ಕಾರ್ಯಕ್ರಮ                                      ರಾಯಚೂರು,ಅ.22- ತಾಲೂಕಿನ ಸುಕ್ಷೇತ್ರ ಮಮದಾಪುರ ಶ್ರೀ ಮಾತಾ ಗಧಾರ ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ 10ನೇ ವರ್ಷದ ವೈಭವದ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಶನಿವಾರದಂದು ಸಾಯಂಕಾಲ 6.30  ಭಕ್ತಿ ಸಿಂಚನ ಭಕ್ತಿ ಗೀತೆಗಳ ಸಂಗೀತ ಕಾರ್ಯಕ್ರಮ ಗಾಯಕರು  ಶ್ರೀಮತಿ ಮಹಾಲಕ್ಷ್ಮಿ ರಾಯಚೂರು  ಹಾಗೂ ಶ್ರೀಮತಿ ಮಂಜುಳಾ ಹಟ್ಟಿ ಚಿನ್ನದಗಣಿ ಹಾಗೂ ಶ್ರೀ ಹುಸೇನ್ ಸಾಬ್ ಲಿಂಗಸೂಗೂರು ಹೃದಯಸಂಗಮ ರೆಕಾರ್ಡಿಂಗ್ ಸಂಸ್ಥೆಯ ಸಂಸ್ಥಾಪಕರು ಈ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.

ಮಮದಾಪುರ ಶ್ರೀ ಮಾತಾ ಗಧಾರ ಮಾರಿಕಾಂಬಾ ದೇವಸ್ಥಾನ : ದುರ್ಗಾಷ್ಟಮಿ ಅಂಗವಾಗಿ ಚಂಡಿಹೋಮ

Image
  ಮಮದಾಪುರ ಶ್ರೀ ಮಾತಾ ಗಧಾರ ಮಾರಿಕಾಂಬಾ ದೇವಸ್ಥಾನ : ದುರ್ಗಾಷ್ಟಮಿ ಅಂಗವಾಗಿ ಚಂಡಿಹೋಮ                       ರಾಯಚೂರು,ಅ.22- ತಾಲೂಕಿನ ಸುಕ್ಷೇತ್ರ ಮಮದಾಪುರ ಶ್ರೀ ಮಾತಾ ಗಧಾರ ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ 10ನೇ ವರ್ಷದ ವೈಭವದ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ  ಇಂದು ದುರ್ಗಾಷ್ಟಮಿ ದಿನದಂದು ಬೆಳಿಗ್ಗೆ 6 :00 ಗಂಟೆಗೆ ದೇವಸ್ಥಾನದ ಯುವ ಬಳಗದ ಅಚ್ಚುಮೆಚ್ಚಿನ ವೈದಿಕ ರತ್ನ ಶ್ರೀ   ಬಸವರಾಜ ಸ್ವಾಮಿ ಹಿರೇಮಠ ಮನ್ಸಲಾಪುರ ಹಾಗೂ  ಶ್ರೀ  ಚನ್ನಬಸಯ್ಯ ಶಾಸ್ತ್ರಿಗಳು ಕೆಂಗಲ್ ಹಿರೇಮಠ, ಮಾಡ ಶಿರವಾರ ಇವರ ನೇತೃತ್ವದಲ್ಲಿ ಚಂಡಿಹೋಮ ಕಾರ್ಯಕ್ರಮ ಜರಗಿತು.             ದಿವ್ಯಸಾನಿದ್ಯವನ್ನು  ಶ ಬ್ರ ಶ್ರೀ ಶಾಂತಮಲ್ಲ ಶಿವಚಾರ್ಯ ಮಹಾಸ್ವಾಮಿಗಳು 108 ಸಾವಿರ ದೇವರ ಸಂಸ್ಥಾನ ಕಿಲ್ಲೇಬ್ರಹನ್ಮಠ ರಾಯಚೂರು ಹಾಗೂ ಸಾನಿದ್ಯ  ವೇ ಮೂ॥ ಪರಮ ಪೂಜ್ಯ ಶ್ರೀ ಡಾ. ಕ್ಷೀರಲಿಂಗ ಮಹಾಸ್ವಾಮಿಗಳು ಸುಕ್ಷೇತ್ರ ಚೇಗುಂಟ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

"ನವರಾತ್ರಿ ಕವನ"

Image
              "ನವರಾತ್ರಿ ಕವನ"                                         ನವ ರಂಗದ ಸೀರಿ  ಮ್ಯಾಲ್ ನನ್ನ  ಕಣ್ಣು   ಸೀರೆ  ಅಂದ್ರ  ಸಾಕು ಇಷ್ಟಪಡುತ್ತಾಳೆ ಹೆಣ್ಣು  ಹಳದಿ ಅಂದ್ರ ಹರದೇರು  ಶೈಲಪುತ್ರಿ  ನೆನೆಯುತ್ತಾ  ಧಾತ್ರಿಯನ್ನು ಪೂಜಿಸುತ್ತಾ  ಉಟ್ಟೆಬಿಟ್ಟಾರು    ಬೆಡಗಿಯರೆಲ್ಲಾ  ಸೇರಿ  ಬೆಲ್ಲದಾರುತಿ  ಮಾಡಿ   ಬಿಳಿಯ  ಸೀರೆಯನ್ನುಟ್ಟು ಬ್ರಹ್ಮಚಾರಣಿ ಪೂಜಿಸಿದ   ತರುಣಿಯರು  ಚಂದ್ರನಂತೆ  ಹೊಳೆಯುವ  ಚಕೋರಿಯರು  ಚಂದ್ರಘಂಟಾ  ನೆನೆಯುತಾ  ಚಂದ್ರಾಕೃತಿ   ತಿಲಕ  ಧರಿಸಿ ಕೆಂಪು  ಸೀರೆ  ಧರಿಸಿ  ಮಿಂಚುವರು    ಕನ್ಯೆಯರು  ಕೂಷ್ಮಾಂಡಳ  ಭಜಿಸುತಾ ನೀಲಿಯ  ಸೀರೆಯುಟ್ಟ   ನೀರೆಯರು  ನಲಿದಾಡುವರು  ಸ್ಕಂದಮಾತೆಯ  ಆನಂದದಿ  ಪೂಜಿಸುತ  ಸಂತ್ರಾ ಬಣ್ಣದ  ಸೀರೆಯಲ್ಲಿ ಸುರ ಸುಂದರಿಯರು ಸೊಬಗು  ತೋರುವರು   ಕಾತ್ಯಾಯಿನಿ  ಮಾತೆ ಯ ಕಂದಳೆನಿಸಿದ  ಹೆಂಗಳೆಯರು ಹಸಿರ ಸೀರೆಯುಟ್ಟ  ಬಾಳು  ಹಸನ ಗೊಳಿಸು  ಎನ್ನುವರು ಕಾಳರಾತ್ರಿ  ಆರಾಧಿಸುತ ಬೂದಿ  ಬಣ್ಣದಲ್ಲಿ  ಸೀರೆ  ಯ  ತಾಳ  ಹಾಕುತ   ದಾಂಡಿಯಾ  ಕುಣಿತ  ದಂಡು  ದಂಡಿನಲಿ  ಹಿಂಡು  ಹಿಂಡು  ಹೆಣ್ಮಕ್ಕಳು ನೋಡಲು  ಸಾಲದು  ಕಂಗಳು   ಮಾ ಗೌರಿಯ  ಪೂಜಿಸಿದ  ನೀರೆಯರು  ನೇರಳೆ ಸೀರೆಯಲ್ಲಿ   ವಯ್ಯಾರ  ತೋರುವರು ಸಿದ್ಧಿ  ಕೊಡು  ಎಂದು   ಸಿದ್ಧಿಧಾತ್ರಿ ಯ ಬದ್ಧದಿ   ಭಜಿಸಿ  ನವಿಲಿನ  ಬಣ್ಣದ  ಸೀರೆಯನುಟ್ಟು   ಮೊರಪಂಖಿಯಾಗಿ   ಮರಳು  ಮಾಡುವರು  ನವವಿಧ  ಭಕುತಿಯ  

ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳ ಕಡಿವಾಣಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮೌಖಿಕ ಮಾಹಿತಿ ಹಾಗೂ ಮನವಿ ಪತ್ರ

Image
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳ ಕಡಿವಾಣಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮೌಖಿಕ ಮಾಹಿತಿ ಹಾಗೂ ಮನವಿ ಪತ್ರ ರಾಯಚೂರು,ಅ.22-ಜಿಲ್ಲೆಯಲ್ಲಿ ಯಥೇಚ್ಛವಾಗಿ ಪಂಚ ಅಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು ಇದರಿಂದ ಅಮಾಯಕ ಬಡ ಕೂಲಿ ಕಾರ್ಮಿಕರು, ರೈತರು ಹಾಗೂ ಇತರೆ ಸಾರ್ವಜನಿಕರು ನಿತ್ಯ ಬಲಿಯಾಗುತ್ತಿದ್ದು ಅವುಗಳನ್ನು ತಡೆಹಿಡಿಯಲು ಸೂಕ್ತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅವಶ್ಯಕತೆ ಇದೆಯೆoದು ರಾಯಚೂರು ಸಂಸದರಾದ ಶ್ರೀ ರಾಜಾ ಅಮರೇಶ್ವರ ನಾಯಕರವರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್.ಆರ್. ಪಾಟೀಲ್ ಅವರಿಗೆ ನಿನ್ನೆ  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯ ನಂತರ ವೈಯುಕ್ತಿಕವಾಗಿ ಸಚಿವರಿಗೆ ಈ ವಿಷಯಗಳ ಕುರಿತು ಮಾಹಿತಿ ನೀಡಿ ಪತ್ರವನ್ನು ಸಹ ನೀಡಿದರು.  ಮಾನ್ಯ ಸಚಿವರಿಗೆ ನೀಡಿದ ಪತ್ರದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ .            ಅಕ್ರಮ ಮರಳು ಸಾಗಾಣಿಕೆ- ಇದು ಬಹಳ ದಿನಗಳಿಂದ ಜಿಲ್ಲೆಯಲ್ಲಿ ನಡೆದಿದ್ದು ವಿಶೇಷವಾಗಿ ದೇವದುರ್ಗ ಮತ್ತು ಮಾನವಿ ತಾಲೂಕು ಗಳಲ್ಲಿ ಅತಿಹೆಚ್ಚಿನ ಅಕ್ರಮ  ಸಾಗಾಣಿಕೆ ಆಗುತ್ತಿದ್ದು ತಡೆಯಲು ಹೋದ ಅನೇಕ ಸರ್ಕಾರಿ ನೌಕರರು,ಕಾರ್ಮಿಕರು, ಅಮಾಯಕ ಜನರು ಬಲಿಯಾಗಿರುತ್ತಾರೆ. ಈ ಅಕ್ರಮ ಮರಳು  ಸಾಗಣಿಕೆಯಿಂದ ಜಿಲ್ಲೆಗೆ ರಾಜಧನ ಬರುತ್ತಿಲ್ಲ ಮತ್ತು ರಸ್ತೆಗಳು, ಪರಿಸರ ಹಾಳಾಗುತ್ತಿದೆ ಎಂದು ತಿಳಿಸಿದರು. ಅಕ್ರಮ ಆಹಾರ ಧಾನ್ಯಗಳ ಸರಬರಾಜು-

ಉಪ್ಪಾರವಾಡಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ 52 ನೇ ನವರಾತ್ರಿ ಉತ್ಸವ: ಉಚ್ಛಾಯ ಮಹೋತ್ಸವ

Image
ಉಪ್ಪಾರವಾಡಿ  ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ 52 ನೇ ನವರಾತ್ರಿ ಉತ್ಸವ: ಉಚ್ಛಾಯ ಮಹೋತ್ಸವ ರಾಯಚೂರು, ಅ.21- ನಗರದ ಉಪ್ಪಾರವಾಡಿ  ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ 52ನೇ ನವರಾತ್ರಿ ಉತ್ಸವದ ಅಂಗವಾಗಿ  ಆಂಜನೇಯ ವಾಹನೋತ್ಸವ ಹಾಗೂ ಉಚ್ಛಾಯ ಮಹೋತ್ಸವ ಜರುಗಿತು.  7ನೇ ದಿನವಾದ ಶನಿವಾರ ದಂದು ಬೆಳಗ್ಗೆ 5:30ಕ್ಕೆ ಸುಪ್ರಭಾತ ಸೇವೆ, 7:30ಕ್ಕೆ ಸಂಕಲ್ಪ ಸೇವೆ, 8: 30ಕ್ಕೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಹಾಗೂ 9 ಗಂಟೆಗೆ ದೇವರಿಗೆ ಮಹಾಮಂಗಳಾರತಿ ಹಾಗೂ 11:00 ಗಂಟೆಗೆ ಪವಮಾನ ಹೋಮ ಜರುಗಿತು.  ಸಂಜೆ 6:30ಕ್ಕೆ  ಪಲ್ಲಕ್ಕಿಯಲ್ಲಿ ಆಂಜನೇಯ ವಾಹನೋತ್ಸವ ನಂತರ 7:30ಕ್ಕೆ ಉಚ್ಛಾಯವನ್ನು ದೇವಸ್ಥಾನದಿಂದ ಗೀತಾ ಮಂದಿರದ ವರೆಗೆ ಹೋಗಿ ಪುನಃ ದೇವಸ್ಥಾನಕ್ಕೆ ಮರಳಲಾಯಿತು.       ನಂತರ ಸಂಗೀತ ಸೇವೆ, ಅಂಬಾಭವಾನಿ ತಂಡದವರಿಂದ ನರ್ತನ ಸೇವೆ ಹಾಗೂ ಭಗವಂತನಿಗೆ ಮಹಾಮಂಗಳಾರತಿ ಆದ ನಂತರ ಪ್ರಸಾದವನ್ನು ವಿತರಿಸಲಾಯಿತು.                     ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಕಲ ಭಕ್ತಾದಿಗಳು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು.

ಬಯಲು ಆಂಜನೇಯ ದೇವಸ್ಥಾನದಲ್ಲಿ ಶ್ರೀ ಪ್ರಾಣೇಶ ದಾಸರ ಆರಾಧನೆ: ದಾಸ ಸಾಹಿತ್ಯದಲ್ಲಿ ಪ್ರಖ್ಯಾತ ಹರಿದಾಸರು ಪ್ರಾಣೇಶ ದಾಸರು- ಮುರಳಿಧರ ಕುಲಕರ್ಣಿ

Image
ಬಯಲು ಆಂಜನೇಯ ದೇವಸ್ಥಾನದಲ್ಲಿ ಶ್ರೀ ಪ್ರಾಣೇಶ ದಾಸರ ಆರಾಧನೆ:                              ದಾಸ ಸಾಹಿತ್ಯದಲ್ಲಿ ಪ್ರಖ್ಯಾತ ಹರಿದಾಸರು ಪ್ರಾಣೇಶ ದಾಸರು- ಮುರಳಿಧರ ಕುಲಕರ್ಣಿ   ರಾಯಚೂರು ,ಅ.21- ಶ್ರೀ ವಿಜಯದಾಸರು, ಶ್ರೀ ಗೋಪಾಲ ದಾಸರು, ಶ್ರೀ ಜಗನ್ನಾಥದಾಸರ, ದಾಸ ಕೂಟದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಿ, ದಾಸ ಸಾಹಿತ್ಯದ ಪ್ರಖ್ಯಾತ ಹರಿದಾಸರು ಶ್ರೀ ಪ್ರಾಣೇಶ ದಾಸರು ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿಯವರು ಹೇಳಿದರು.      ಅವರು ಇಂದು ಶನಿವಾರ ಸಂಜೆ ಜವಾಹರ ನಗರ ಬಯಲು ಆಂಜನೇಯ ದೇವಸ್ಥಾನದಲ್ಲಿ ಹರಿದಾಸ ಬೌದ್ಧಿಕ ಮಂಟಪ ಆಶ್ರಯದಲ್ಲಿಜರುಗಿದ ಶ್ರೀ ಪ್ರಾಣೇಶ ದಾಸರ ಆರಾಧನೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ, ಮಾತನಾಡಿದರು.      ಪ್ರಾಣೇಶ ದಾಸರು ದಾಸ ಸಾಹಿತ್ಯಕ್ಕೆ ಅದ್ವಿತೀಯವಾದ ಕೊಡುಗೆಯನ್ನು ನೀಡಿದ್ದಾರೆ. ಇವರು ನೂರಾರು  ಸಂಕೀರ್ತನೆಗಳನ್ನು, ಉಗಾ- ಬೋಗಗಳನ್ನು, ಲಾವಣಿ ಪದಗಳನ್ನು, ಗೀಗಿ ಪದಗಳನ್ನು, ಕೋಲಾಟ ಪದಗಳನ್ನು ರಚಿಸುವುದರ ಜೊತೆಗೆ ಗೋಪಿಕ ವಿಲಾಸ, ಗಾಲವ ಚರಿತ್ರ, ಬ್ರಹ್ಮರ ಗೀತಾ, ಅನಿರುದ್ಧ ವಿಲಾಸ, ವಸಿಷ್ಠ ವಿಶ್ವಾಮಿತ್ರ ವ್ಯಾಖ್ಯಾನ, ಹಾಸ್ಯಮಯ ಪ್ರಮೇಯಗಳಾದ ಬುಡ್ಡಿ ಬ್ರಹ್ಮ ಕಥೆ ಮುಂತಾದ ಕೃತಿಗಳನ್ನು ರಚಿಸಿ, ಭಗವಂತನ ಎಂಬ ಬೆಳಕಿನೆಡೆಗೆ ಭಕ್ತಿಯ ಸೇತುವೆಯನ್ನು ನಿರ್ಮಿಸಿದ ಶ್ರೇಷ್ಠ ದಾಸರು. ಎಂದು ಹೇಳಿದರು.  ಕಾರ್ಯಕ್ರಮವನ್ನು  ಶ್ರೀ ರಾಘವೇಂದ್ರ ಸ್ವಾಮಿಗಳ ಮಠ  ಸಂ

ಬರಗಾಲ, ಕುಡಿಯುವ ನೀರಿನ ಸಮಸ್ಯೆ ಕುರಿತು ಸಚಿವರ ಸಭೆ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹೆಚ್ಚಿನ ಕಾಳಜಿ ವಹಿಸಿ ಕಾರ್ಯ ನಿರ್ವಹಿಸಿ- ಸಚಿವ ಡಾ.ಶರಣಪ್ರಕಾಶ.ಆರ್ ಪಾಟೀಲ್

Image
  ಬರಗಾಲ, ಕುಡಿಯುವ ನೀರಿನ ಸಮಸ್ಯೆ ಕುರಿತು ಸಚಿವರ   ಸಭೆ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹೆಚ್ಚಿನ ಕಾಳಜಿ ವಹಿಸಿ ಕಾರ್ಯ ನಿರ್ವಹಿಸಿ -  ಡಾ.ಶರಣಪ್ರಕಾಶ.ಆರ್ ಪಾಟೀಲ್ ರಾಯಚೂರು,ಅ.21 -ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ, ನಗರ ಪ್ರದೇಶಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಹೆಚ್ಚಿನ ಒತ್ತು ನೀಡಿ ಜನರಿಗೆ ತೊಂದರೆಯಾಗದಂತೆ  ಹಾಗೂ  ಬೆಳೆ ನಷ್ಟ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ, ಜೀವನೋಪಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ.ಆರ್ ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅವರಿಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬರಗಾಲ ಹಾಗೂ ಕುಡಿಯುವ ನೀರಿನಸಮಸ್ಯೆ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬರಗಾಲ ಪೀಡಿತ ತಾಲೂಕುಗಳಲ್ಲಿ ಕೈಗೊಳ್ಳಲಾದ ಬೆಳೆ ಸಮೀಕ್ಷೆಯ ವರದಿಯನ್ನಾದರಿಸಿ ಸೂಕ್ತ ಪರಿಹಾರ ನೀಡಲು ಅಧಿಕಾರಿಗಳು ಶ್ರಮಿಸಬೇಕು ಮತ್ತು ಗ್ರಾಮೀಇಣ ಭಾಗದಲ್ಲಿ ಕುಡಿಯುವ ನೀರನದನು ಸರಬಾರಾಜು ಮಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳವೇಕು. ಹಳ್ಳಗಳಲ್ಲಿ ವ್ಯರ್ಥವಾಗಿ ಹರಿದುಹೋಗುತ್ತಿರುವ ನೀರನ್ನು ತಡೆಯುವುದರಿಂದ ಆ ನೀರು ಜಾನುವಾರುಗಳಿಗೆ ಕುಡಿಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಕೈಗಾರಿಕೆಗಳಿಗೆ ಹಾಗೂ ಏತ

ಬಿಜೆಪಿ ಗ್ರಾಮೀಣ ಮಂಡಲದಿಂದ ನನ್ನ ಮಣ್ಣು ನನ್ನ ದೇಶ ಅಭಿಯಾನ

Image
ಬಿಜೆಪಿ ಗ್ರಾಮೀಣ ಮಂಡಲದಿಂದ ನನ್ನ ಮಣ್ಣು ನನ್ನ ದೇಶ ಅಭಿಯಾನ    ರಾಯಚೂರು,ಅ.21-  ಭಾರತೀಯ ಜನತಾ ಪಾರ್ಟಿ ರಾಯಚೂರು ಗ್ರಾಮೀಣ ಮಂಡಲ ವತಿಯಿಂದ ದೆಹಲಿಯ ಕರ್ತವ್ಯ ಪಥದಲ್ಲಿ ನಿರ್ಮಾಣವಾಗುತ್ತಿರುವ ಅಮೃತ ವಾಟಿಕಾ ವನಕ್ಕಾಗಿ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪವಿತ್ರ ಪುಣ್ಯ ಕ್ಷೇತ್ರಗಳಿಂದ ಮಣ್ಣು ಸಂಗ್ರಹಿಸಿ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾ ಅಧ್ಯಕ್ಷರಾದ  ರಮಾನಂದ ಯಾದವ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಶಂಕರ ರೆಡ್ಡಿ ಯವರಿಗೆ ಗ್ರಾಮೀಣ ಮಂಡಲ  ಅಧ್ಯಕ್ಷರಾದ  ಶಂಕರಗೌಡ ಮಿರ್ಜಾಪುರ, ಸಂಚಾಲಕರಾದ  ಶಾಂತಕುಮಾರ ಉಪ್ರಾಳ ರವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ನರಸಿಂಹ ನಾಯಕ ಹಂಚಿನಾಳ ,ನಾಗೇಶ ನಾಯಕ ದುಗನೂರ್ ,ವೆಂಕಟೇಶ ನಾಯಕ ಮಟಮಾರಿ ,ನರಸಿಂಹ ನಾಯಕ ಗುಂಜಳ್ಳಿ ಉಪಸ್ತಿತರಿದ್ದರು.

ಮಕ್ತಲ್ ಪೇಟೆ ಶ್ರೀ ಮಾತಾ ಚೌಡೇಶ್ವರಿ ದೇವಿಯ ಸಮುದಾಯ ಭವನದ ಉದ್ಘಾಟನೆ. ಮಾತೆ ಚೌಡೇಶ್ವರಿ ದೇವಿಗೆ ರವಿ‌ ಬೋಸರಾಜುರಿಂದ ವಿಶೇಷ ಪೂಜೆ ಸಲ್ಲಿಕೆ.

Image
  ಮಕ್ತಲ್ ಪೇಟೆ ಶ್ರೀ ಮಾತಾ ಚೌಡೇಶ್ವರಿ ದೇವಿಯ ಸಮುದಾಯ ಭವನದ ಉದ್ಘಾಟನೆ:                         ಮಾತೆ ಚೌಡೇಶ್ವರಿ ದೇವಿಗೆ ರವಿ‌ ಬೋಸರಾಜುರಿಂದ ವಿಶೇಷ ಪೂಜೆ ಸಲ್ಲಿಕೆ. ರಾಯಚೂರು,20-ನಗರದ ಮಕ್ತಲ್ ಪೇಟ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಮಾತಾ ಚೌಡೇಶ್ವರಿ ದೇವಿಯ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ‌ ಬೋಸರಾಜು ಅವರು ಭಾಗವಹಿಸಿ ಮಾತನಾಡಿ ಶ್ರೀದೇವಿಯು  ಸಮಸ್ತ ಜನರ ಸಂಕಷ್ಟಗಳನ್ನು ದೂರ ಮಾಡು ಎಲ್ಲರಿಗೂ ಒಳಿತಾಗಲಿ ಎಂದು  ಮಾತೇ ಚೌಡೇಶ್ವರಿ ದೇವಿ ಹಾಗೂ ಲಕ್ಷ್ಮಿದೇವಿಗೆ  ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ನೂತನ ಭವನ ಕಟ್ಟಡವನ್ನು ರಿಬ್ಬನ್ ಕತ್ತರಿಸುವ ಮೂಲಕ  ರಾಜ್ಯ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಉದ್ಘಾಟಿಸಿದರು. ಉದ್ಘಾಟನೆಯಲ್ಲಿ ಮಾಜಿ ಶಾಸಕ ಎ ಪಾಪರಡ್ಡಿ ಹಾಗೂ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮೊಹ್ಮದ್ ಶಾಲಂ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಯಾಪಚಟ್ಟು ಚಿನ್ನಯ್ಯ, ಗೋವಿಂದರಡ್ಡಿ ಉಪ್ಪೇಟ, ಶೇಖರ್ ರಡ್ಡಿ, ಶಶಿಧರ್ ಏಗನೂರು, ತಿಮ್ಮಾರಡ್ಡಿ, ಅರುಣ ದೋತರಬಂಡಿ,  ಪೋಗುಲ್ ಚಂದ್ರಶೇಖರ್ ರಡ್ಡಿ, ರವಿ‌ಕಂಬೈಗಾರ್ ನೂರಾರು ಭಕ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಗ್ರಾಮೀಣದಲ್ಲಿ ವೈದ್ಯ ಸೇವೆ ರದ್ದುಗೊಳಿಸಿದಕ್ಕಾಗಿ ಕರವೇ ಆಕ್ರೋಶ

Image
  ಗ್ರಾಮೀಣದಲ್ಲಿ ವೈದ್ಯ ಸೇವೆ ರದ್ದುಗೊಳಿಸಿದಕ್ಕಾಗಿ ಕರವೇ ಆಕ್ರೋಶ   ರಾಯಚೂರು ,ಅ.20-ವೈದ್ಯ ಸೇವೆ   ಮುಗಿಸಿದವರಿಗೆ ಗ್ರಾಮ ಸೇವೆ ಕಡ್ಡಾಯ ನೀತಿ, ಕಾನೂನು ರದ್ದುಗೊಳಿಸಿದ ಸರ್ಕಾರದ ನಡೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕಕುಮಾರ ಸಿ ಕೆ  ಜೈನ ಆಕ್ರೋಶ ಹೊರ ಹಾಕಿದ್ದಾರೆ.                                             ರಾಜ್ಯದ ಹಳ್ಳಿಗಳಲ್ಲಿ ಸರಿಯಾದ ವೈದ್ಯ ಸೇವೆ ಸಿಗುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇರುವುದಿಲ್ಲ. ನರ್ಸಗಳೇ ಪ್ರಕರಣ ಬಗೆಹರಿಸಲಿಕ್ಕೆ  ಪ್ರಯತ್ನಿಸುತ್ತಾರೆ. ಇದರಿಂದ ಹೆರಿಗೆ ಮತ್ತು ಗರ್ಭೀಣಿ, ಮಕ್ಕಳ ಸಾವು, ಅಪೌಷ್ಠಿಕತೆಯ ಸಾವಾಗುತ್ತಿವೆ. ಔಷಧೋಪಚಾರ ಸಿಗುತ್ತಿಲ್ಲ. ಅದರಲ್ಲೂ ಹಿಂದುಳಿದ ಜಿಲ್ಲೆಗಳಲ್ಲಿ ಕಲುಷಿತ ನೀರು, ಕಲುಷಿತ ವಾತಾವರಣದಿಂದ ಸಾಮೂಹಿಕವಾಗಿ ಅನಾರೋಗ್ಯಕ್ಕೆ ಒಳಗಾಗುವುದು ಸಹಜ.ಅನಾರೋಗಿಗಳು ನಗರ, ಪಟ್ಟಣಕ್ಕೆ ಬರಲು ತಡವಾಗುತ್ತದೆ. ಗ್ರಾಮೀಣ ಭಾಗದಲ್ಲಿ ವೈದ್ಯರ ನೇಮಕವಾಗಿಲ್ಲ. ನೇಮಕವಾದರೂ, ಸೇವೆಗೆ ಬರುತ್ತಿಲ್ಲ. ನರ್ಸ ಮತ್ತು ಆರ್.ಎಂ.ಪಿ ಗಳೇ ಚಿಕಿತ್ಸೆ ನೀಡುವುದು ನಡೆದಿದೆ.ಗುಣಮಟ್ಟದ ಸೇವೆ ಗ್ರಾಮದಲ್ಲಿ ಶೂನ್ಯವಾಗಿದೆ. ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಗ್ರಾಮೀಣ ವೈದ್ಯ ಸೇವೆ ರದ್ದು, ಗಂಭೀರವಾದ ವಿಚಾರ, ಈ ಆದೇಶ  ವಾಪಸ್ಸಾತ್ತಿಗೆ ಶಿವರಾಮೇಗೌ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ  ಒತ್ತಾಯ ಮಾಡಿದ್ದ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

Image
  ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.                                   ರಾಯಚೂರು, ಅ.19- ಪ್ರಗತಿಪರ ಸಾವಯವ ಕೃಷಿಕರು, ಸಮಾಜ ಸೇವಕರು, ಖಾದಿ ಗ್ರಾಮೋದ್ಯೋಗ ಮಂಡಳಿ ನೌಕರರ ಸಂಘಟನೆ ಮಾಜಿ ಅಧ್ಯಕ್ಷರು,  ಬ್ರಾಹ್ಮಣ ಸಮಾಜದ ಮುಖಂಡರು, ಮಹಾಮಾಯಾ ದೇವಸ್ಥಾನದ ಮಾಜಿ ಆಡಳಿತಾಧಿಕಾರಿಗಳಾದ ಪ್ರಕಾಶ್  ಅನಂತರಾವ್ ದೇಸಾಯಿ ಚನ್ನಪನಹಳ್ಳಿ(68) ಅನಾರೋಗ್ಯದಿಂದ ಬುಧುವಾರ ರಾತ್ರಿ  ನಿಧನರಾಗಿದ್ದಾರೆ.                      ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಾಗಿದ್ದ ಅವರು ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.                           ಮೃತರು ಪತ್ನಿ ,ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ.     ಮೃತರು ತಮ್ಮ ನೇತ್ರಗಳನ್ನು ದಾನ ಮಾಡುವ ಮೂಲಕ  ಅಂಧರ ಬಾಳಿಗೆ ಬೆಳಕಾಗಿ ದ್ದಾರೆ.                                        ಮೃತರ ಅಂತ್ಯಕ್ರಿಯೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚನ್ನಪನಹಳ್ಳಿಯಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲ ತಿಳಿಸಿದೆ.     

ಎಕೆಬಿಎಂಎಸ್ ನಿಂದ ಶತ ಕೋಟಿ ಶ್ರೀ ರಾಮನಾಮ ಜಪ ಯಜ್ಞ : ಸರ್ವರು ಜಪ ಯಜ್ಞದಲ್ಲಿ ಪಾಲ್ಗೊಳ್ಳಿ- ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು

Image
ಎಕೆಬಿಎಂಎಸ್ ನಿಂದ ಶತ ಕೋಟಿ  ಶ್ರೀ ರಾಮನಾಮ ಜಪ ಯಜ್ಞ : ಸರ್ವರು ಜಪ ಯಜ್ಞದಲ್ಲಿ ಪಾಲ್ಗೊಳ್ಳಿ- ಶ್ರೀ  ಸುಬುಧೇಂದ್ರ ತೀರ್ಥ ಶ್ರೀಗಳು       ರಾಯಚೂರು,ಅ.19- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಹಮ್ಮಿಕೊಳ್ಳಲಾದ ಶ್ರೀ ರಾಮನಾಮ ಜಪ ಯಜ್ಞ, ಶತ ಕೋಟಿ ರಾಮ ತಾರಕ ಮಂತ್ರ ಜಪ ಹಾಗೂ ಶ್ರೀ ರಾಮ ತಾರಕ ಮಹಾಯಜ್ಞ ಕಾರ್ಯಕ್ರಮ ಇದೇ ಅ.24 ರಂದು ವಿಜಯ ದಶಮಿ ಶುಭ ಸಂದರ್ಭದಲ್ಲಿ ಪ್ರಾರಂಭ ಗೊಂಡು ಅಯೋಧ್ಯ ಶ್ರೀ ರಾಮ ಮಂದಿರ ಪುನಃ ಪ್ರತಿಷ್ಠಾಪನೆ ದಿನ ಪೂರ್ಣ ಗೊಳಿಸುವ ಕಾರ್ಯ ಕ್ಕೆ ಮಂತ್ರಾಲಯ  ಶ್ರೀ ರಾಘವೇಂದ್ರ  ಸ್ವಾಮಿಗಳ ಮಠದ ಶ್ರೀ ಸುಬುಧೇಂದ್ರತೀರ್ಥ ತೀರ್ಥ ಶ್ರೀ ಪಾದಂಗಳವರ ಆಶೀರ್ವಾದ ಅನುಗ್ರಹ ವನ್ನು ಶ್ರೀ ರಾಯರ ಸನ್ನಿದಿ ಮಂತ್ರಾಲಯ ದಲ್ಲಿ ಪಡೆದು ಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶ್ರೀ ಗಳು ಮಾತಾಡಿ ಭಾರತ ದೇಶದ ಹಿಂದೂಗಳ ಸುಮಾರು ವರ್ಷದ ಕನಸು ಶ್ರೀ ರಾಮ ಮಂದಿರ ನಿರ್ಮಾಣ ನಿರ್ವಿಘ್ಞ ವಾಗಿ ನೆರವೇರಲಿದ್ದು ಸಕಲ ಹಿಂದೂ ಶ್ರೀ ರಾಮ ಭಕ್ತ ರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಕರ್ನಾಟಕ ರಾಜ್ಯ ವತಿಯಿಂದ ಆಯೋಜಿಸಲಾಗಿರುವ ಈ ಶ್ರೀ ರಾಮ ನಾಮ ಜಪ ಯಜ್ಞ ದಲ್ಲಿ ಪಾಲ್ಗೊಂಡು ಶ್ರೀ ರಾಮದೇವರ ಕೃಪೆಗೆ ಪಾತ್ರ ರಾಗಲು ಆಶೀರ್ವಾದ ಮಾಡಿದರು .    ಈ ಸಂದರ್ಭದಲ್ಲಿ ಮಹಾ ಯಜ್ಞ ಕಾರ್ಯಕ್ರಮ ದ ಪ್ರಧಾನ ಸಂಚಾಲಕರಾದ ಶ್ರೀ ರಾಘವೇಂದ್ರ ಭಟ್,ಮಹಾಸಭಾದ ಉಪಾಧ್ಯಕ್ಷರಾದ ಡಾ. ಆನಂದತೀರ್ಥ ಫಡ್ನೀಸ್, ಮಹಾಸಭೆ ಯ ರಾಜ್ಯ ಯುವ ಘಟಕ ಉಪಾಧ್ಯಕ್ಷರಾದ ಹನು