Posts

Showing posts from July, 2025
Image
  ಸನ್ನಿ ರೋನಾಲ್ಡ್ ಗಡಿಪಾರು ಪ್ರಕರಣದಲ್ಲಿ ರವಿ ಬೋಸರಾಜು ಕೈವಾಡವೆಂದು ಜೆ ಬಿ ರಾಜು ಮಾಡಿರುವ ಆರೋಪದಲ್ಲಿ ಹುರುಳಿಲ್ಲ -ನರಸಿಂಹಲು ಮಾಡಗಿರಿ.                                                                                   ಜಯ ಧ್ವಜ ನ್ಯೂಸ್, ರಾಯಚೂರು, ಜು.30- ಸನ್ನಿ ರೋನಾಲ್ಡ್ ಗಡಿಪಾರು ಪ್ರಕರಣದಲ್ಲಿ ರವಿ ಬೋಸರಾಜು ಕೈವಾಡವಿದೆ ಎಂದು ದಲಿತ ಮುಖಂಡರಾದ ಜೆಬಿ ರಾಜು ಮಾಡಿರುವ ಆರೋಪದಲ್ಲಿ ಹುರುಳಿಲ್ಲವೆಂದು ಕಾಂಗ್ರೆಸ್ ಮುಖಂಡ ಹಾಗೂ ಆರ್ ಡಿ ಎ ಸದಸ್ಯ  ನರಸಿಂಹಲು ಮಾಡಗಿರಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸನ್ನಿ ರೋನಾಲ್ಡ್ ಸಮಾಜದಲ್ಲಿ ಭಯ ಭೀತಿ ಮತ್ತು ಪೊಲೀಸರ ಮೇಲೆ ಹಲ್ಲೆಯತ್ನ ಪ್ರಕರಣ ಮುಂತಾದವುಗಳಿಂದ ಕಾನೂನು ಕೈಗೆತ್ತಿಕೊಂಡಿದ್ದರಿಂದ ಅವರನ್ನು ಗಡಿಪಾರು ಮಾಡಲಾಗಿದೆ ಪೊಲೀಸರು ಸೂಕ್ತ ಸಾಕ್ಷ್ಯಾಧಾರ ನೀಡಿದ್ದರಿಂದಲೆ ಸಹಾಯಕ ಆಯುಕ್ತರು ಗಡಿಪಾರು ಆದೇಶ ಹೊರಡಿಸಿದ್ದಾರೆ ಇದರಲ್ಲಿ‌ ರವಿ ಬೋಸರಾಜು ಒತ್ತಡ ಹೇಗೆ ಮಾಡಲು ಸಾಧ್ಯವೆಂದು ಪ್ರಶ್ನಿಸಿದರು. ಬಹಿರಂಗವಾಗಿ ತಲ್ವಾರ್ ಹಿಡಿದು ಹೂಂಕರಿಸಿದ ಸನ್ನಿ ರೋನಾಲ್ಡ್ ಕಾನೂನು...
Image
  ಸಿಂಧನೂರು: ಮನೋಹರ ರಾವ್ ಕುಲಕರ್ಣಿರವರಿಗೆ ವಿಪ್ರ ಶ್ರೀ ಪ್ರಶಸ್ತಿ ಪ್ರದಾನ                                                                                 ಜಯ ಧ್ವಜ ನ್ಯೂಸ್, ರಾಯಚೂರು,ಜು.29-                                                                                           ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ             ಜು.26 ರಂದು ರಾಯಚೂರು  ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ ವಿಪ್ರೋತ್ಸವ ಹಾಗೂ ವಿಪ್ರ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅನಾರೋಗ್ಯದ ನಿಮಿತ್ತ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದ ಮನೋಹರ ರಾವ್ ಕುಲಕರ್ಣಿ "ವಿಪ್ರ ಶ್ರೀ" ಪ್ರಶಸ್ತಿ ಪ...
Image
  ಕೆಪಿಸಿಸಿ ಪ್ರಚಾರ ಸಮಿತಿಗೆ  ಸಂಯೋಜಕರ ನೇಮಕ.                        ಜಯ ಧ್ವಜ ನ್ಯೂಸ್, ರಾಯಚೂರು,ಜು.29-           ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಚಾರ‌ ಸಮಿತಿ ಸಂಯೋಜಕರನ್ನಾಗಿ ಜಿಲ್ಲೆಯ ಅನೇಕ ಮುಖಂಡರನ್ನು ನೇಮಕಗೊಳಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶಿಸಿದ್ದಾರೆ. ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರಾದ ಸುಧೀಂದ್ರ ಜಾಗೀರದಾರ್, ಯಂಕಣ್ಣ ಯಾದವ್, ಬಾಲಸ್ವಾಮಿ ಕೊಡ್ಲಿ ಹಾಗೂ ಜಿಲ್ಲಾ ಪ್ರಾಚಾರ ಸಮಿತಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿಯವರನ್ನು ನೇಮಕ ಮಾಡಲಾಗಿದೆ.
Image
  ಹಟ್ಟಿ ಚಿನ್ನದ ಗಣಿಯಲ್ಲಿ  998 ಕೋಟಿ ರೂ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಆ.6 ರಂದು ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ-  ಜೆ.ಟಿ.ಪಾಟೀಲ ಜಯ ಧ್ವಜ ನ್ಯೂಸ್,  ರಾಯಚೂರು, ಜು. 29-   ಅಂದಾಜು 998 ಕೋಟಿ .ರೂ ವೆಚ್ಚದಲ್ಲಿ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕರ ಹೊಸ ವಸತಿ ಸಮುಚ್ಛಯ ನಿರ್ಮಾಣ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆ. 6 ರಂದು ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಶಂಕುಸ್ಥಾಪನೆಯನ್ನು  ನೆರವೇರಿಸಲಿದ್ದಾರೆ ಎಂದು ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ಅಧ್ಯಕ್ಷರು ಹಾಗೂ ಬೀಳಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಟಿ. ಪಾಟೀಲ ಅವರು ಹೇಳಿದರು. ಲಿಂಗಸೂರ ತಾಲೂಕಿನ ಹಟ್ಟಿಯ ಚಿನ್ನದ ಗಣಿ ಕಂಪನಿಯ ಸಭಾಂಗಣದಲ್ಲಿ ಇಂದು  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಹಟ್ಟಿಯಲ್ಲಿ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕರ ಹೊಸ ವಸತಿ ಸಮುಚ್ಛಯ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಅಂದಾಜು 998 ಕೋಟಿ ರೂ ವೆಚ್ಚದಲ್ಲಿ ವಸತಿ ಗೃಹಗಳು, ಶಾಲೆ, ಆಸ್ಪತ್ರೆ, ಕ್ರೀಡಾ ಸಂಕೀರ್ಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಆಗಲಿವೆ. 2 ಬಿಎಚ್ ಕೆಯ 16 ಕ್ವಾರ್ಟರ್ಸ ಗಳ 1 ಬ್ಲಾಕ್ ನಿರ್ಮಾಣವಾಗಲಿದೆ. ಇದರಲ್ಲಿ ಲಿಫ್ಟ್  ಎಲಿವೇಟರನಂತಹ ಬೇರೆ ಬೇರೆ ಆಧುನಿಕ ಸೌಲಭ್ಯಗಳು ಇರಲಿವೆ.  ಅದೇ ರೀ...
Image
  ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ಆ‌.1 ರಂದು ಪ್ರತಿಭಟನೆ:                                                  ಪಕ್ಷಾತೀತವಾಗಿ ಒಳಮೀಸಲಾತಿ ಹೋರಾಟಕ್ಕೆ ಕರೆ-ಎ.ನಾರಾಯಣಸ್ವಾಮಿ .                                                                                                                               ಜಯ ಧ್ವಜ ನ್ಯೂಸ್, ರಾಯಚೂರು, ಜು.28- ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಕುರಿತು ತೀರ್ಪು ನೀಡಿ ಒಂದು ವರ್ಷ ಗತಿಸುತ್ತಿದ್ದರೂ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ಮೇನಾಮೇಷ ಎಣೆಸುತ್ತಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಆ.1 ರಂದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು. ಅವರಿ...
Image
  ಲಿಂಗಸ್ಗೂರಿನಲ್ಲಿ ಕೆಯುಡ್ಬ್ಬುಜೆ ಯಿಂದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ: ಪತ್ರಿಕೋದ್ಯಮವು ಜನರ ಹಾಗೂ ಸರ್ಕಾರದ ನಡುವಿನ ಸಂಪರ್ಕ ಸೇತುವೆ- ಸಚಿವ ಡಾ.ಶರಣಪ್ರಕಾಶ ಆರ್. ಪಾಟೀಲ ಜಯ ಧ್ವಜ ನ್ಯೂಸ್  ರಾಯಚೂರು, ಜು.27- ಪತ್ರಿಕಾ ರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಪರಿಗಣಿಸಲ್ಪಟ್ಟಿದೆ. ಜನರು ಹಾಗೂ ಸರ್ಕಾರಗಳ ನಡುವೆ ಸಂಪರ್ಕ ಸೇತುವೆಯಾಗಿ  ಪತ್ರಿಕೋದ್ಯಮವು ಸಮರ್ಥವಾಗಿ ಕಾರ್ಯನಿರ್ವಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ ಅವರು ಹೇಳಿದರು. ಜುಲೈ 27ರ ಭಾನುವಾರ ದಂದು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಶ್ರೀವಿಜಯ ಮಹಾಂತೇಶ್ವರ ಶಾಖಾಮಠದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ರಾಯಚೂರು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದಿನ ಈ ಡಿಜಿಟಲ್‌ ಜಗತ್ತಿನಲ್ಲಿ ಪತ್ರಿಕೋದ್ಯಮವು ಸಹ ಡಿಜಿಟಲೀಕರಣಗೊಂಡಿದೆ. ಮೊಬೈಲ್‌ನಲ್ಲಿಯೇ ಎಲ್ಲಾ ಕ್ಷಣ ಕ್ಷಣದ ಸುದ್ದಿಗಳನ್ನು ನಾವು ನೋಡಬಹುದಾಗಿದೆ. ಪತ್ರಿಕೆ ಓದುಗರ ಸಂಖ್ಯೆ ಈಗ ಕಡಿಮೆಯಾಗುತ್ತಿದೆ. ಜನರ ಮನಸ್ಥಿತಿ ಅರಿತು ಪತ...
 ರಾಯಚೂರು, ಪತ್ರಿಕೆ ಮಾಧ್ಯಮಕ್ಕೆ ಬಹುದೊಡ್ಡ ಜವಾಬ್ದಾರಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರ ಕಾಶ ಪಾಟೀಲ್   ಹೇಳಿದರು. ಲಿಂಗಸೂಗೂರಿನ ವಿಜಯ ಮಹಾಂತೇಶ್ವರ ಶಾಖ ಮಠದಲ್ಲಿ ನಡೆದ ಜಿಲ್ಲಾ ಕಾರ್ಯಕರ್ತ ಪತ್ರಕರ್ತ ಸಂಘ, ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. "ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ನಮ್ಮ ದೇಶ ಪ್ರಜಾಪ್ರಭುತ್ವವನ್ನು ಪಡೆಯಿತು. ಸಂವಿಧಾನವು ಸಮಾಜದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಜಾಗೃತಿಯನ್ನು ಮೂಡಿಸುವ ಕೆಲಸ ಪತ್ರಕರ್ತರು ಮಾಡುತ್ತಿದ್ದಾರೆ. ಅವರು ಸರಿ-ತಪ್ಪುಗಳನ್ನು ಎತ್ತಿ ತೋರಿಸುತ್ತಿದ್ದಾರೆ" ಎಂದು ಅವರು ಹೇಳಿದರು. ಅವರು ಪ್ರಸ್ತುತ ಪತ್ರಿಕೋದ್ಯಮದ ಬದಲಾದ ಧೋರಣೆಗಳ ಬಗ್ಗೆ ಮಾತನಾಡುತ್ತಾ, "ಹಿಂದಿನಂತೆ ಇಂದು ಪ್ರಿಂಟ್ ಮಾಧ್ಯಮದ ಪ್ರಭಾವ ಕಡಿಮೆಯಾಗಿದ್ದು, ಡಿಜಿಟಲ್ ಮಾಧ್ಯಮ ಹೆಚ್ಚಾಗಿದೆ. 24x7 ಸುದ್ದಿ ನೀಡುವ ಡಿಜಿಟಲ್ ಮಾಧ್ಯಮಗಳು ಎಲ್ಲವನ್ನೂ ತಕ್ಷಣ ನೀಡುತ್ತವೆ. ಆದರೆ ಇದರ ಹಿಂದಿನ ಪೂರಕ ಮಾಹಿತಿ ಇಲ್ಲದಿದ್ದರೆ ಅಪಾಯಕಾರಿಯಾಗುತ್ತದೆ. ಈಗ ಪತ್ರಿಕೋದ್ಯಮವು ಸಾಮಾಜಿಕ ಕಳಕಳಿಯ ಹಾದಿಯಿಂದ ಹೊರ ಹೋಗಿ, ಬಹುತೇಕ ಕರ್ಪೋರೇಟ್ ಮಾಲೀಕತ್ವದಲ್ಲಿ ನಡೆಯುತ್ತಿದೆ ಎಂಬುದು ಆತಂಕಕಾ...
Image
ಗಾಯಿತ್ರಿ ಭವನ ನಿರ್ಮಾಣಕ್ಕೆ 25 ಲಕ್ಷ ರೂ ಅನುದಾನ - ಎ.ವಸಂತ ಕುಮಾರ್.                                                                    ಜಯ ಧ್ವಜ ನ್ಯೂಸ್, ರಾಯಚೂರು,ಜು.26 - ನಗರದಲ್ಲಿ ನಿರ್ಮಾಣಹಂತದಲ್ಲಿರುವ ಬ್ರಾಹ್ಮಣ ಸಮಾಜದ ಗಾಯಿತ್ರಿ ಭವನ ಪೂರ್ಣಗೊಳಿಸಲು 25 ಲಕ್ಷ ರೂ. ಅನುದಾನ ನೀಡುತ್ತೇನೆಂದು  ವಿಧಾನಪರಿಷತ್ ಸದಸ್ಯರಾದ ಎ.ವಸಂತ ಕುಮಾರ್ ಘೋಷಿಸಿದರು. ಅವರಿಂದು ನಗರದ  ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಮ್ಮಿಕೊಂಡಿದ್ದ ವಿಪ್ರ ಶ್ರೀ ಹಾಗೂ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಬ್ರಾಹ್ಮಣರು ಮೂಲತಃ ಪ್ರತಿಭಾವಂತರು ಬ್ರಹ್ಮ ದೇವರು ಅವರನ್ನು ಪ್ರತಿಭೆಯುಳ್ಳವರಾಗಿ ಎಂದು ಹಣೆಬರಹ ಬರೆದು ಕಳಿಸಿದ್ದಾರೆ ಎಂದರು.ಅವರಿಗೆ ಪ್ರತಿಭೋತ್ಸವ ಹಮ್ಮಿಕೊಳ್ಳುವ  ಅವಶ್ಯಕತೆಯಿಲ್ಲ ಆದರೆ ಅವರಲ್ಲಿರುವ ಯುವ ಪ್ರತಿಭೆಯನ್ನು  ಪ್ರೋತ್ಸಹಿಸುವುದಕ್ಕಾಗಿ ಪ್ರತಿಭೋತ್ಸವ ಮಾಡಲಾಗುತ್ತಿದೆ ಎಂದರು. ಬ್ರಾಹ್ಮಣ ಸಮಾಜ ಅತ್ಯಂತ ನಿಸ್ವಾರ್ಥ ಸಮಾಜ ಮತ್ತು ಇದ್ದದ್ದರಲ್ಲಿಯೆ ತೃಪ್ತಿ ಪಟ್ಟುಕೊಳ್ಳುವ ಆಡಂಬರಕ್ಕೆ ಆಕರ್...
Image
  ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಿಪ್ರ ಶ್ರೀ ಹಾಗೂ ಪ್ರತಿಭೋತ್ಸವ ಉದ್ಘಾಟನೆ:                ಒಂದು ನೂರು  ಕೋಟಿ ನಿಧಿ ಸ್ಥಾಪನೆ ಮೂಲಕ  ಬ್ರಾಹ್ಮಣ ಸಮಾಜಕ್ಕೆ ಶಕ್ತಿ - ರಘುನಾಥ.                   ಜಯ ಧ್ವಜ ನ್ಯೂಸ್, ರಾಯಚೂರು,ಜು.26 - ಒಂದು ನೂರು ಕೋಟಿ ರೂ.ಗಳ ನಿಧಿ ಸ್ಥಾಪನೆ ಮಾಡುವ ಮೂಲಕ ಬ್ರಾಹ್ಮಣ ಸಮಾಜಕ್ಕೆ ಶಕ್ತಿ ತುಂಬುವ ಕಾರ್ಯ ಕೈಗೊಳ್ಳುತ್ತಿರುವುದಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಅಧ್ಯಕ್ಷರಾದ ಎಸ್.ರಘುನಾಥ ಹೇಳಿದರು. ಅವರಿಂದು ನಗರದ ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭೋತ್ಸವ ಮತ್ತು ಬ್ರಾಹ್ಮಣರ ಹಬ್ಬ ಉದ್ಘಾಟಿಸಿ ಮಾತನಾಡಿದರು. ಬ್ರಾಹ್ಮಣರ ಶ್ರೇಯೋಭಿವೃದ್ಧಿಗೆ ವಿಶೇಷವಾಗಿ ಬಡವರ ಶೈಕ್ಷಣಿಕ ಮತ್ತು ಆರೋಗ್ಯಕ್ಕಾಗಿ ಒಂದು ನೂರು ಕೋಟಿ ರೂ ನಿಧಿ ಸ್ಥಾಪಿಸಿ ಅದನ್ನು ಠೇವಣಿ ಇಟ್ಟು ಬರುವ ಬಡ್ಡಿಯಲ್ಲಿ ವಾರ್ಷಿಕ ಸುಮಾರು 5 ಕೋಟಿ ರೂ ವ್ಯಯಮಾಡುವ ಗುರಿ ಹೊಂದಲಾಗಿದ್ದು ರಾಜ್ಯದಲ್ಲಿರುವ ಸುಮಾರು ಹತ್ತು ಸಾವಿರ  ಸ್ಥಿತಿವಂತ ಬ್ರಾಹ್ಮರಿಂದ ಒಂದು ಲಕ್ಷ ರೂ ದೇಣಿಗೆ ಸಂಗ್ರಹಿಸಲಾಗುತ್ತಿದ್ಧು ಸ್ವಪ್ರೇರಣೆಯಿಂದ ಮುಂದೆ ಬರಬೇಕೆಂದು ಕೋರಿದ ಅವರು ಈಗಾಗಲೆ 50 ...
Image
  ಜು.28 ರಂದು ನಗರಕ್ಕೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಆಗಮನ:                          ಮಹಿಳಾ ಕಾರ್ಯಕರ್ತೆಯರೊಂದಿಗೆ ಸಮಾಲೋಚನಾ ಸಭೆ- ನಿರ್ಮಲಾ ಬೆಣ್ಣೆ.                                                                                                                                                                                        ಜಯ ಧ್ವಜ ನ್ಯೂಸ್, ರಾಯಚೂರು,ಜು.26- ಕರ್ನಾಟಕ ಪ್ರದೇಶ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾದ ಸೌಮ್ಯ ರೆಡ್ಡಿ ರವರು ಜು.28ಕ್ಕೆ ನಗರಕ್ಕೆ ಆಗಮಿಸಲಿದ್ದಾರೆ ಎಂದು ಜಿಲ್...
Image
  ರೈತರಿಗೆ ಸಮರ್ಪಕ ರಸಗೊಬ್ಬರ ಸಿಗುವಂತಾಗಬೇಕು-ಡಾ.ಬಾಬುರಾವ್  ಜಯ ಧ್ವಜ ನ್ಯೂಸ್, ರಾಯಚೂರು,ಜು.26- ರಾಜ್ಯ ಸರಕಾರ ಜಿಲ್ಲೆಯ ರೈತರಿಗೆ ಸಮರ್ಪಕ ರಸಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ಮುಂದಾಗಬೇಕೆಂದು ಸಮಾಜ ಸೇವಕ ಹಾಗೂ ಎಪಿಎಂಸಿ ಮಾಜಿ ಉಪಾಧ್ಯಕ್ಷ ಡಾ.ಬಾಬುರಾವ್ ಆಗ್ರಹಿಸಿದ್ದಾರೆ.  ಜಿಲ್ಲೆಯಲ್ಲಿ ಮುಂಗಾರು ಮಳೆ ರೈತರ ನಿರೀಕ್ಷೆಯಂತೆ ಬೀಳುತ್ತಿದೆ. ಈಗಾಗಲೇ ರೈತರು ಬಿತ್ತನೆ ಮಾಡಿರುವುದರಿಂದ ಬೆಳೆಗಳ ಬೆಳವಣಿಗೆ ಹೆಚ್ಚಿಸಲು ರಸಗೊಬ್ಬರದ ಅವಶ್ಯಕತೆ ಇರುವುದರಿಂದ ರಸಗೊಬ್ಬರಕ್ಕಾಗಿ ರೈತರು ಪರದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ರೈತರಿಗೆ ತಮಗೆ ಬೇಕಾದ ರಸಗೊಬ್ಬರ ಬೇಕಾದಷ್ಟು ಪ್ರಮಾಣದಲ್ಲಿ ದೊರೆಯದಿರುವುದರಿಂದ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಹತ್ತಿ ಮತ್ತಿತರ ಬೆಳೆಗಳು ಹೊಲದಲ್ಲಿ ನಳನಳಿಸುತ್ತಿದ್ದು ಖುಷಿಯಲ್ಲಿರುವ ರೈತರಿಗೆ ರಸಗೊಬ್ಬರ ಸಮರ್ಪಕವಾಗಿ ಸಿಗುತ್ತಿಲ್ಲ. ದುಪ್ಪಟ್ಟು ಹಣ, ಪ್ರಭಾವ ಬೀರಿದ  ರೈತರಿಗೆ ರಸಗೊಬ್ಬರ ಸಿಗುತ್ತಿದ್ದು, ಬಡವ ಹಾಗೂ ಮುಗ್ಧ ರೈತರಿಗೆ ರಸಗೊಬ್ಬರ ಮರೀಚಿಕೆಯಾಗಿ ಪರಿಣಮಿಸಿದೆ. ಅವರು ಏನೂ ಮಾಡಬೇಕೆಂದು ಚಿಂತಿತರಾಗಿದ್ದಾರೆ. ಕೃಷಿ ಇಲಾಖೆ ಉಪನಿರ್ದೇಶಕರು ಮಾತ್ರ ಬೇಡಿಕೆನುಗುಣವಾಗಿ ರಸಗೊಬ್ಬರ ಜಿಲ್ಲೆಯಲ್ಲಿ ಲಭ್ಯವಿದೆ ಎಂದು ಕೆಡಿಪಿ ಸಭೆಯಲ್ಲಿ ಹೇಳಿದ್ದರೂ   ಮಾರುಕಟ್ಟೆಯಲ್ಲಿ ಗೊಬ್ಬರದ ಕೃತಕ ಅಭಾವವನ್ನು ಸೃಷ್ಟಿಸಲಾಗಿದೆ. ರೈತರ ನೆರವಿಗೆ ಬರಬೇಕಾದ ಕೃಷಿ ಇಲಾಖೆ ಕ...
Image
  ಎಲ್‌ಐಸಿ ವತಿಯಿಂದ ಟ್ರಾಫಿಕ್ ಬ್ಯಾರಿಕೇಡ್ ವಿತರಣೆ  ಜಯ ಧ್ವಜ ನ್ಯೂಸ್,ರಾಯಚೂರು, ಜು.26 – ಲೈಫ್ ಇನ್ಸೂರನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್‌ಐಸಿ) ಸಂಸ್ಥೆಯ ರಾಯಚೂರು ವಿಭಾಗೀಯ ಕಚೇರಿಯಲ್ಲಿ ಶನಿವಾರ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (CSR) ಚಟುವಟಿಕೆಯಡಿಯಲ್ಲಿ ಪೊಲೀಸ್ ಟ್ರಾಫಿಕ್ ಬ್ಯಾರಿಕೇಡ್ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹೈದರಾಬಾದ್‌ನ ದಕ್ಷಿಣ ಮಧ್ಯ ವಲಯದ ವಲಯ ವ್ಯವಸ್ಥಾಪಕರಾದ ಪುನೀತ್ ಕುಮಾರ್ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, 20 ಟ್ರಾಫಿಕ್ ಬ್ಯಾರಿಕೇಡ್‌ಗಳನ್ನು ರಾಯಚೂರು ಟ್ರಾಫಿಕ್ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಮಧ್ಯ ವಲಯದ ಮುಖ್ಯ ಇಂಜಿನಿಯರ್ ಎಎಎಂ ಹಿಲಾಲಿ ಉಪಸ್ಥಿತರಿದ್ದು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಯಚೂರು ವಿಭಾಗದ ಹಿರಿಯ ವಿಭಾಗೀಯ ವ್ಯವಸ್ಥಾಪಕರಾದ  ವೈ.ವಿ.ರಾವ್, ಬಿ. ಪ್ರಸಾದ್ ಬಸವರಾಜ ಹಾಗೂ ಮಾರ್ಕೆಟಿಂಗ್ ವ್ಯವಸ್ಥಾಪಕರಾದ ಎ.ಚಿರಂಜೀವಿ, ಮಾರಾಟ ವ್ಯವಸ್ಥಾಪಕ ಬಿ. ರಮೇಶ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಈ ಸಂದರ್ಭದಲ್ಲಿ  ಆಡಿಷನಲ್ ಎಸ್ ಪಿ  ಕುಮಾರಸ್ವಾಮಿ, ಸಿಪಿಐ ವೆಸ್ಟ್ ನಾಗರಾಜ್, ಪಿಎಸ್ಐ ಟ್ರಾಫಿಕ್ ಸಣ್ಣ ಈರೇಶ್ ಸೇರಿದಂತೆ  ಅಧಿಕಾರಿಗಳು ಭಾಗವಹಿಸಿದ್ದರು. ಸಾರ್ವಜನಿಕರ ಸುರಕ್ಷತೆಗೆ ನೆರವಾಗುವ ನಿಟ್ಟಿನಲ್ಲಿ ಎಲ್‌ಐಸಿ ಕೈಗೊಂಡಿರುವ ಕಾರ್ಯ ಮೆಚ್ಚುಗೆಗೆ ಪಾತ್ರವಾಯಿತು.
Image
    ಪುರಾಣ ಪ್ರವಚನ ಕೇಳುವುದರಿಂದ ಮಾನಸಿಕ ನೆಮ್ಮದಿ-  ವಸಂತ್ ಕುಮಾರ್.      ಜಯ ಧ್ವಜ ನ್ಯೂಸ್ ರಾಯಚೂರು ಜು. 25- ಪುರಾಣ ಪ್ರವಚನ ಕೇಳುವುದರಿಂದ ಮನಸಿಗೆ ನೆಮ್ಮದಿ ಶಾಂತಿ ಸಿಗುತ್ತದೆ ಎಂದು ವಿಧಾನ ಪರಿಷತ್  ಸದಸ್ಯರಾದ ಎ.ವಸಂತ ಕುಮಾರ್ ಹೇಳಿದರು. ಶುಕ್ರವಾರ ರಾತ್ರಿ ಕಿಲ್ಲೇಬೃಹನ್ಮಠದಲ್ಲಿ 101ನೇ ವರ್ಷದ ಶ್ರಾವಣ ಮಾಸದ ಅಂಗವಾಗಿ ನವಲಗುಂದ ಶ್ರೀ ಅಜಾತ ನಾಗಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತಾನಾಡಿದರು. ತಿಂಗಳ ಪರ್ಯಂತ ನಡೆಯುವ ಪುರಾಣ ಪ್ರವಚನದಲ್ಲಿ ನವಲಗುಂದದ ಶ್ರೀ ಅಜಾತ ನಾಗಲಿಂಗೇಶ್ವರ ಪುರಾಣ ಪ್ರವಚನವನ್ನು ಆಯೋಜನೆ ಮಾಡಿರುವುದು ಸಂತಸ ತಂದಿದೆ ಎಂದರು. 101 ನೇ ವರ್ಷದ ಶ್ರಾವಣ ಮಾಸದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ  ಭಕ್ತರು ಭಕ್ತಿಯಿಂದ ಪಾಲ್ಗೊಳ್ಳಬೇಕೆಂದರು. ಇಂದಿನ ದಿನಗಳಲ್ಲಿ  ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ಭಾರತೀಯ ಸಂಸ್ಕೃತಿ ಪರಂಪರೆಯ ಸಂಪ್ರದಾಯವನ್ನು ಅಳವಡಿಸಿ ಕೊಂಡು ಶ್ರೀಗಳ, ಗುರುಗಳ ಮಾರ್ಗದರ್ಶನದಲ್ಲಿ ನಡೆದು ಕೊಂಡು ನಡಿಯ ಬೇಕಾಗಿದೆ ಎಂದು ತಿಳಿಸಿದರು. ಸಂಸ್ಕೃತ, ಪುರಾಣ,ಇತಿಹಾಸ ಜೀವಂತವಾಗಿದ್ದಾವೆ ಎಂದರೆ ಮಠಗಳ ಕೊಡಿಗೆ ಅಪಾರ ಎಂದು ಮಾತಾನಾಡಿದರು.  ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ೧೦೮ ಸಾವಿರ ದೇವರು ಷ.ಬ್ರ.ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು, ಹಿರೇನಾಗಾವಿಯ ಜಯಶಾಂತಲಿಂಗೇಶ...
Image
  ರೋನಾಲ್ಡ್ ಸನ್ನಿಗೆ ಆರು ತಿಂಗಳು ಗಡಿಪಾರು ಶಿಕ್ಷೆ.                                        ಜಯ ಧ್ವಜ ನ್ಯೂಸ್, ರಾಯಚೂರು, ಜು.25- ಸಾರ್ವಜನಿಕವಾಗಿ ಶಾಂತತೆ ಕದಡುವಿಕೆ ಸೇರಿದಂತೆ ಅನೇಕ ಅಪರಾಧಿಕ ಪ್ರಕರಣ ಹಿನ್ನಲೆಯಲ್ಲಿ ರೋನಾಲ್ಡ್ @ ಸನ್ನಿಯನ್ನು ಆರು ತಿಂಗಳು ಗಡಿಪಾರುಗೊಳಿಸಿ ರಾಯಚೂರು ಉಪವಿಭಾಗಾಧಿಕಾರಿ  ಗಜಾನನ ಬಾಲೆ ಆದೇಶಿಸಿದ್ದಾರೆ.          ಜು.21 ರಿಂದ 2026 ಇಸ್ವಿ ಜ.20 ವರೆಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿ ಪಾರು ಮಾಡಲಾಗಿದೆ ಎಂದು  ತಿಳಿಸಲಾಗಿದೆ.
Image
  ವಿಪ್ರಶ್ರೀ ಪ್ರಶಸ್ತಿಗೆ ವಿಜಯರಾವ್ ಗುಂಜಳ್ಳಿ ಆಯ್ಕೆ   ಜಯ ಧ್ವಜ ನ್ಯೂಸ್ , ರಾಯಚೂರು, ಜು.25- ಉದ್ಯಮಿ ಹಾಗೂ ಧಾರ್ಮಿಕ ಚಟುವಟಿಕೆ ಕ್ಷೇತ್ರದಲ್ಲಿ ಸಾಧನೆಗೈದ ವಿಜಯರಾವ್ ಗುಂಜಳ್ಳಿಯವರನ್ನು ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಿಪ್ರ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ ಅವರು ಮೂಲತಃ ಗುಂಜಳ್ಳಿ ಗ್ರಾಮದವರಾಗಿದ್ದು ಕೃಷಿಕರಾಗಿದ್ದಾರೆ.  ಇವರ ತಂದೆ ಭೀಮಸೇನ್ ರಾವ್ ಗುಂಜಳ್ಳಿ, ತಾಯಿ ಕಲ್ಯಾಣ ಭಾಯಿ. ಇವರ ತಂದೆಯಾದ ಭೀಮಸೇನ್ ರಾವ್ ಗುಂಜಳ್ಳಿ ಯವರು ಸ್ವತಂತ್ರ ಹೋರಾಟಗಾರರು ಹಾಗೂ ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಹೋರಾಡಿ ಜೈಲು ವಾಸ ಅನುಭವಿಸಿದ ಧೀರ ಹೋರಾಟ ಗಾರರಾ ಗಿದ್ದರು.     ಶ್ರೀ ವಿಜಯರಾವ್ ಗುಂಜಳ್ಳಿ ಅವರು ಡಿ ಫಾರ್ಮ್ ವಿದ್ಯಾಭಾಸವನ್ನು ಮುಗಿಸಿದ ನಂತರ 50 ವರ್ಷಗಳವರೆಗೆ ಮೆಡಿಕಲ್ ಸ್ಟೋರ್ ಹಾಗೂ ಪೆಟ್ರೋಲ್ ಬಂಕ್ ಸ್ಥಾಪಿಸಿದ್ದಾರೆ ಇವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಗುಂಜಳ್ಳಿಯಲ್ಲಿ ರಾಮಲಿಂಗೇಶ್ವರ ದೇವಸ್ಥಾನ, ಶ್ರೀ ಹನುಮಂತ ದೇವಸ್ಥಾನ, ಶ್ರೀ ಚನ್ನಕೇಶವ ದೇವಸ್ಥಾನ ಗಳನ್ನು ಜೀರ್ಣೋದ್ಧಾರಗೊಳಿಸಿ ಅಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಕರೋನ ಸಮಯದಲ್ಲಿ ಇವರು ಅವಶ್ಯಕತೆ ಇದ್ದಂತ ಜನರಿಗೆ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ, ಆಸ್ಪತ್ರೆಗಳಿಗೆ ಬಿಸಿ ಊಟದ ವ್ಯವಸ್ಥೆಯನ್ನು ಮಾಡಿ ಸಾಮಾಜಿಕ ಕಾರ್ಯವನ್ನು ಕೈಗೊಂಡಿದ್ದಾ...
Image
ಇಂದು ನಗರಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಎಸ್.ರಘುನಾಥ.                                                     ಜಯ ಧ್ವಜ ನ್ಯೂಸ್ ರಾಯಚೂರು , ಜು.25 - ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರಾದ  ರಘುನಾಥ ಎಸ್ ರವರು ಇಂದು ರಾಯಚೂರಿಗೆ ಆಗಮಿಸುತ್ತಿದ್ದಾರೆ. ಸಂಜೆ 6.30ಕ್ಕೆ ಸಾವಿತ್ರಿ ಕಾಲೋನಿಯ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ಅವರಿಗೆ ಸ್ವಾಗತಿಸಲಾಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿಪ್ರ ಬಾಂಧವರು ಆಗಮಿಸುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಚುನಾಯಿತ ಪ್ರತಿನಿಧಿ  ರಮೇಶ ಕುಲಕರ್ಣಿ ತಿಳಿಸಿದ್ದಾರೆ .
Image
  ಕೆಯುಡ್ಬ್ಲೂಜೆ ಜಿಲ್ಲಾ ಘಟಕದಿಂದ ಜು.27 ರಂದು ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ - ಆರ್ .ಗುರುನಾಥ.                                                                                                   ಜಯ ಧ್ವಜ ನ್ಯೂಸ್ ರಾಯಚೂರು, ಜು.25-                                  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಜು.27 ರಂದು ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಲಿಂಗಸ್ಗೂರಿನಲ್ಲಿ ಆಯೋಜಿಸಲಾಗಿದೆ ಎಂದು ಕೆಯುಡ್ಬ್ಲುಜೆ ಜಿಲ್ಲಾ ಅಧ್ಯಕ್ಷ ಆರ್.ಗುರುನಾಥ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜು.27 ರಂದು  ಲಿಂಗಸ್ಗೂರಿನ ವಿಜಯ ಮಹಾಂತೇಶ್ವರ ಶಾಖಾ ಮಠದ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ  ನಡೆಯುವ ಕಾರ್ಯಕ್ರಮ ಸಾನಿಧ್ಯವನ್ನು ಚಿತ್ತ...
Image
  ಪರೋಪಕಾರಿ ಮನೋಭಾವದ ಪ್ರಹ್ಲಾದ್ ರಾವ್ ಕುಲಕರ್ಣಿ ರವರಿಗೆ ಒಲಿದ "ವಿಪ್ರ ಸಮಾಜ ಸೇವಾ" ಪ್ರಶಸ್ತಿ   ಜಯ ಧ್ವಜ ನ್ಯೂಸ್, ರಾಯಚೂರು,ಜು.25-  ಪರೋಪಕಾರಿ ಮನೋಭಾವದ ಪ್ರಹ್ಲಾದ್ ರಾವ್ ಕುಲಕರ್ಣಿ ರವರಿಗೆ ಒಲಿದ "ವಿಪ್ರ ಸಮಾಜ ಸೇವಾ" ಪ್ರಶಸ್ತಿ .                                 ಪ್ರಹ್ಲಾದ ರಾವ ಕುಲಕರ್ಣಿ ಅವರು ಪ್ರತಿಷ್ಠಿತ ರಾಯಚೂರಿನ ರಾಯಕೆಮ್  ಆಂಟಿಬೋಟಿಕ್  ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಇವರು ರಾಯಚೂರಿನಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ನಿರಂತರ ಕಾರ್ಯ ಚಟುವಟಿಕೆಗಳಿಗೆ ಪ್ರಸಿದ್ಧಿಯನ್ನು ಪಡೆದು ಪರೋಪಕಾರಿ ಮನೋಭಾವ ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ.  ಹಲವಾರು ಮಠಮಾನ್ಯಗಳಿಗೆ ,ದೇವಾಲಯಗಳಿಗೆ, ಸಂಘ ಸಂಸ್ಥೆಗಳಿಗೆ ಅವಶ್ಯಕತೆಗೆ ತಕ್ಕಂತೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ.   ವಿಶೇಷವಾಗಿ ಆಸರೆ ವೃದ್ಧ ಆಶ್ರಮದ ಹಿರಿಯ ಜೀವಿಗಳ ರಕ್ಷಣೆಗಾಗಿ ಸುಸಜ್ಜಿತವಾದ ಅಂಬುಲೆನ್ಸ್ ಒದಗಿಸುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.  ಅಲ್ಲದೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಊಟದ ವ್ಯವಸ್ಥೆಯನ್ನು, ಬಡ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಪ್ರಾರಂಭಿಸ...
Image
  ಯಶಸ್ವಿಯಾಗಿ ಜರುಗಿದ ಸುಜ್ಞಾನ ಸಂಗಮ ಕಾರ್ಯಕ್ರಮ ಜಯ‌ಧ್ವಜ ನ್ಯೂಸ್, ರಾಯಚೂರು, ಜು.24-   ಜಗದ್ಗುರು ಶ್ರೀ ಶಿವ ಶಕ್ತಿ ಪೀಠ ಸುಕ್ಷೇತ್ರ ಇರಕಲ್ ಮಠದಲ್ಲಿ ಇಂದು 203ನೇ ಸುಜ್ಞಾನ ಸಂಗಮ ಎಂಬ ಆಧ್ಯಾತ್ಮಿಕ ಚಿಂತನ ಗೋಷ್ಠಿ ನಡೆಯಿತು. ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಬಸವ ಪ್ರಸಾದ ಶರಣರು ವಹಿಸಿಕೊಂಡಿದ್ದರು. ಅಭಿಜಿತ್ ಮಾಲಿ ಪಾಟೀಲ್ ಮಸ್ಕಿ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ  ಮಾತನಾಡಿ ಶ್ರೀಮಠದ ಶಿಕ್ಷಣ ಪದ್ದತಿಯು ಅತ್ಯುತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಈಗಿನ ಮಕ್ಕಳಲ್ಲಿ ನೀಡುವಂತಹ ಕಾರ್ಯ ಶ್ಲಾಘನೀಯ ಎಂದು ಅತ್ಯಂತ ಮಾರ್ಮಿಕವಾಗಿ ವಿವರಿಸಿದರು. ಬೆಳಕು ಸಂಸ್ಥೆಯ ಸಂಸ್ಥಾಪಕರಾದ ಅಣ್ಣಪ್ಪ ಮೇಟಿಗೌಡರು ಮಾತನಾಡಿ ಶ್ರೀಮಠದಲ್ಲಿ  ಮಕ್ಕಳು ಸಂಸ್ಕಾರಯುತವಾಗಿ ಶಿಕ್ಷಣವನ್ನು ಪಡೆಯುವ ವಾತಾವರಣವನ್ನು ನಿರ್ಮಿಸುವ ಪ್ರಯತ್ನ ನಮ್ಮ ಭಾಗದಲ್ಲಿ ದೊಡ್ಡ ಕಾರ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜ್ಞಾನಾಕ್ಷಿ ಶಾಲೆಯ ಮಕ್ಕಳಿಂದ ಪ್ರತಿಭಾ ಪ್ರದರ್ಶನ ಹಾಗೂ ವಿಜ್ಞಾನ ಚಿತ್ರಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಸುಜ್ಞಾನ ಸಂಗಮ ಕಾರ್ಯಕ್ರಮದ ವೇದಿಕೆಯಲ್ಲಿ ಸುರೇಶ್ ಕ .ಸಾ.ಪ ಅಧ್ಯಕ್ಷರು ಸಿರವಾರ ಬಸವರಾಜ್ ಬಂಕಲ್ ದೊಡ್ಡಿ ವಟಗಲ್, ಆದನ ಗೌಡ ಗ್ರಾ. ಪಂ ವಟಗಲ್, ಸೂಗಪ್ಪ ವಟಗಲ್ ಉಪಸ್ಥಿತರಿದ್ದರು. ವಿಶೇಷವಾಗಿ ಈ ಎಲ್ಲಾ ಅತಿಥಿಗಳಿಂದ ಶ್ರೀ ಜ್ಞಾನಾಕ್ಷಿ ವಿದ್ಯಾ ಮಂದಿರ ಶಾಲೆಯ ಪುಟಾಣಿ ಮಕ್ಕಳಿಗೆ ವಾ...
Image
  ಕೃಷ್ಣಗಿರಿ ಹಿಲ್ಸ್ ಬಡಾವಣೆಯಲ್ಲಿ ಕಳ್ಳರ ಚಲನ ವಲನ ಶಂಕೆ: ನಿವಾಸಿಗಳು ಭಯ ಭೀತ .              ಜಯ ಧ್ವಜ ನ್ಯೂಸ್, ರಾಯಚೂರು,ಜು.24 - ನಗರದ ಹೊರ ವಲಯದ ಕೃಷ್ಣಗಿರಿ ಹಿಲ್ಸ್ ನಲ್ಲಿ  ನಿನ್ನೆ ರಾತ್ರಿ  ಕಳ್ಳರ  ಚಲನ ವಲನ ಶಂಕೆ ವ್ಯಕ್ತವಾಗಿದ್ದು ನಿವಾಸಿಗಳಲ್ಲಿ ಭಯ ಭೀತಿ ಹುಟ್ಟಿಸಿದೆ.                     ನಾಲ್ಕೈದು  ಮುಸುಕು ಧಾರಿಗಳು  ಮನೆಗಳ ಮುಂದೆ ಓಡಾಡುವ ಮತ್ತು ಮನೆಯೊಂದರ ಒಳಕ್ಕೆ ಹೊಕ್ಕು ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ ಎನ್ನಲಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪೊಲೀಸ್ ಇಲಾಖೆ ಸೂಕ್ತವಾಗಿ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಅಂಬಾಜಿರಾವ್ ಮೈದರಕರ್ ಒತ್ತಾಯಿಸಿದ್ದಾರೆ.
Image
  ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್  ಆಭರಣ ಪ್ರದರ್ಶನ ಉದ್ಘಾಟನೆ ಜಯ ಧ್ವಜ ನ್ಯೂಸ್,  ರಾಯಚೂರು,ಜು.24-                 ಭಾರತದ ಪ್ರತಿಷ್ಠಿತ ಆಭರಣ ಕಂಪನಿಯಾದ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಜುಲೈ 24ರಿಂದ 27ರವರೆಗೆ ಹೋಟೆಲ್ ರಂಜಿತ ಪ್ಯಾಲೇಸ್ ನಲ್ಲಿ 4 ದಿನಗಳವರೆಗೆ  ಆಯೋಜಿಸಲಾದ ಆಭರಣ ಪ್ರದರ್ಶನ ಉದ್ಘಾಟನೆಯನ್ನು ಮಹಾನಗರ ಪಾಲಿಕೆ ಮಹಾಪೌರರಾದ ಡಾ.ಜೆ.ಸಾಜಿದ ಸಮೀರ್  ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ವಿಶಿಷ್ಟ ಬಗೆಯ ನವೀನ್ ವಿನ್ಯಾಸದ ಬೆಳ್ಳಿ ಬಂಗಾರ ಮತ್ತು ವಜ್ರಾಭರಣ ಪ್ರದರ್ಶನ ಮೇಳವನ್ನು ಸಾರ್ವಜನಿಕರು ಸದುಪಯೋಗಪಡೆದುಕೊಳ್ಳಲು ಕೋರಿದರು. ಪ್ರದರ್ಶನ ವಿಶಿಷ್ಟತೆ: ಸಿ.  ಕೃಷ್ಣಯ್ಯ ಚೆಟ್ಟಿ ಅವರ ಮಳಿಗೆ ಸಾಟಿಯಿಲ್ಲದ ಕಲ್ಪನೆ, ಸೃಜನಶೀಲತೆ ಮತ್ತು ವಿನ್ಯಾಸದಲ್ಲಿನ ಶ್ರೇಷ್ಠತೆಯೊಂದಿಗೆ ಅಪರೂಪದ ಸೃಷ್ಟಿಗಳಿಗೆ ಜೀವ ತುಂಬುತ್ತದೆ. ಪ್ರದರ್ಶಿಸಲಾದ ಸಂಗ್ರಹಗಳು ವೈಡೂರ್ಯ, ಸಿಟ್ರಿನ್, ಮುತ್ತುಗಳು, ಅಮೆಥಿಸ್ಟ್ ಪಚ್ಚೆಗಳು, ಮಾಣಿಕ್ಯಗಳು ಮತ್ತು ಉತ್ತಮ ವಜ್ರಗಳಂತಹ ಅಪರೂಪದ ರತ್ನಗಳನ್ನು ಒಳಗೊಂಡ ಕ್ಲಾಸಿಕ್ಮೋಡಿ ಮತ್ತು ದಿಟ್ಟ ಆಧುನಿಕತೆಯ ಸೊಗಸಾದ ಸಾಮರಸ್ಯವನ್ನು ಪ್ರತಿಬಿಂಬಿಸುತ್ತವೆ. ಆಭರಣಗಳ ಹೊಸಯುಗಕ್ಕೆ ಸ್ವಾಗತಿಸುತ್ತವೆ — ಸೌಂದರ್ಯವು ಉದ್ದೇಶವನ್ನು ಪೂರೈಸುತ್ತದೆ ಮತ್ತು ಐಷಾರಾಮಿ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ಸಿ.ಕೃಷ್ಣ...
Image
  ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇರಿದಂತೆ ವಿವಿಧೆಡೆ ಜು.26 ರಿಂದ 28ರವರೆಗೆ ಡಾ.ಈ.ವಿ.ಸ್ವಾಮಿನಾಥನ್ ರವರಿಂದ ಉಪನ್ಯಾಸ ಕಾರ್ಯಕ್ರಮ -ಸ್ಮಿತಾ ಅಕ್ಕ.                                                                                                            ಜಯ ಧ್ವಜ ನ್ಯೂಸ್, ರಾಯಚೂರು, ಜು.24-   ಪ್ರಸಿದ್ಧ ಉಪನ್ಯಾಸಕಾರ ರಾದ ಡಾ.ಈ.ವಿ.ಸ್ವಾಮಿನಾಥನ್ ಮುಂಬೈ ಅವರಿಂದ ಜು.26 ರಿಂದ 28 ವರೆಗೆ ಈಶ್ವರೀಯ ವಿಶ್ವವಿದ್ಯಾಲಯ ಸೇರಿದಂತೆ ನಗರದ ವಿವಿಧೆಡೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಮಿತಾ ಅಕ್ಕ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜು.26 ರಂದು ರಿಮ್ಸ್ ಆಸ್ಪತ್ರೆಯಲ್ಲಿ ಮಾನಸಿಕ ಮತ್ತು ಭಾವನಾತ್ಮಕ ವಿಷಯ ಕುರಿತು ಬೆಳಿಗ್ಗೆ 9.30 ರಿಂದ 11.30ರವರೆಗೆ ಉಪನ್ಯಾಸ ನಂತರ ರಂಗಮಂದಿರದಲ್ಲಿ ಶಿಕ್ಷಕರು ಮತ್ತು ಅಧ್ಯಾಪಕರಿಗೆ ಪರಿಣಾಮಕಾರಿ ಬೋಧನೆ ಬಗ್ಗೆ ಉಪನ್ಯಾಸ  ನಂತ...
Image
  ಜು.26 ರಂದು ಕಲ್ಯಾಣ ಕರ್ನಾಟಕ ಬ್ರಾಹ್ಮಣರ ಹಬ್ಬ:                ಪ್ರತಿಭೋತ್ಸವ ಹಾಗೂ ವಿಪ್ರ ಶ್ರೀ ಪ್ರಶಸ್ತಿ  ಪ್ರದಾನ ಸಮಾರಂಭ - ಜಗನ್ನಾಥ ಕುಲಕರ್ಣಿ.                                        ಜಯ ಧ್ವಜ ನ್ಯೂಸ್, ರಾಯಚೂರು,ಜು.24- ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ರಾಯಚೂರು ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಜು.26 ರಂದು ನಗರದಲ್ಲಿ ಕಲ್ಯಾಣ ಕರ್ನಾಟಕದ ಬ್ರಾಹ್ಮಣರ ಹಬ್ಬ ಹಾಗೂ ಪ್ರತಿಭೋತ್ಸವ ಮತ್ತು ವಿಪ್ರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹಾಗೂ ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಿಭಾಗೀಯ ಅಧ್ಯಕ್ಷ ಜಗನ್ನಾಥ ಕುಲಕರ್ಣಿ ಹೇಳಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜು.26 ರಂದು  ಸಂಜೆ  5ಕ್ಕೆ ನಗರದ ಗಾಜಗಾರ್ ಪೇಟೆಯ ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮ ಉದ್ಘಾಟನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಎಸ್.ರಘುನಾಥ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಜಗನ್ನಾಥ ಕುಲಕರ್ಣಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ ಹಾಗೂ ವಿ...
Image
  ಯರಗೇರಾ ತಾಲೂಕು ರಚನೆ ಹೋರಾಟ ಸಮಿತಿಯಿಂದ ಕಂದಾಯ ಸಚಿವರು, ವಿರೋಧ ಪಕ್ಷದ ನಾಯಕರು, ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ ಜಯ ಧ್ವಜ ನ್ಯೂಸ್, ರಾಯಚೂರು, ಜು.23 - ಯರಗೇರಾ ತಾಲೂಕು ಹೋರಾಟ ಸಮಿತಿ ವತಿಯಿಂದ   ಬೆಂಗಳೂರಿನಲ್ಲಿ   ಮಾನ್ಯ ಕಂದಾಯ ಸಚಿವರಾದ   ಕೃಷ್ಣ ಬೈರೇಗೌಡ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಚಲುವಾದಿ ನಾರಾಯಣ ಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರರವರನ್ನು  ಭೇಟಿಯಾಗಿ ಮನವಿ ಮಾಡಲಾಯಿತು . ಯರಗೇರಾ ತಾಲೂಕ ಘೋಷಣೆ ಮಾಡಲು ಹೋರಾಟ ಸಮಿತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.  ಈ ಮನವಿ ಪತ್ರ  ಸ್ವೀಕರಿಸಿದ ಸಚಿವರು  ಯರಗೇರಾ ತಾಲೂಕ ಘೋಷಣೆಗೆ ಉತ್ತಮ ರೀತಿಯಲ್ಲಿ  ಸ್ಪಂದಿಸಿ ಆಶ್ವಾಸನೆ ನೀಡಿದ್ದು ಇತರ ನಾಯಕರು ಸಹ ಬೆಂಬಲಿಸುವುದಾಗಿ ತಿಳಿಸಿದ್ದಾರೆ.  ಈ ಸಂದರ್ಭದಲ್ಲಿ ಹೋರಾಟ ಸಮಿತಿ ಪ್ರಧಾನ ಸಂಚಾಲಕರರಾದ  ಮಹ್ಮದ್  ನಿಜಾಮುದ್ದೀನ್ , ಸಂಚಾಲಕರಾದ  ಬಸವರಾಜ್ ಹೂಗಾರ್  ಮತ್ತು ಪದಾಧಿಕಾರಿಗಳಾದ ಶ್ರೀ ವಿದ್ಯಾನಂದ ರೆಡ್ಡಿ, ಮೆಹಬೂಬ್ ಪಟೇಲ್, ರಾಘವೇಂದ್ರ ಚಾರ್ಯ   ಜೋಷಿ ,ಟಿ. ಜನಾರ್ಧನ,  ವೈ . ಭೀಮಸೇನ  ನಾಯಕ, ಮೂತಿ೯  ಶೆಟ್ಟಿ,  ಮಹಮ್ಮದ್ ರಫಿ, ಜಗದೀಶ್ ರೆಡ್ಡಿ,ರಮೇಶ್  ಮಿಲ್ ,ಮಹಾದೇವ  ನಾಯಕ್,  ನರಸಿಂಹ ಗುಂಜಳ್ಳಿ,...