Posts

Showing posts from August, 2025
Image
  ನಿವೃತ್ತ ಶಿಕ್ಷಕರು ಹಾಗೂ ಸಾಹಿತಿಗಳಾದ ತಿಪ್ಪಣ್ಣ ಹೂಗಾರ ನಿಧನ   ಜಯ ಧ್ವಜ ನ್ಯೂಸ್ ,ರಾಯಚೂರು, ಆ.2- ನಿವೃತ್ತ ಶಿಕ್ಷಕರು ಹಾಗೂ ಸಾಹಿತಿಗಳಾದ ತಿಪ್ಪಣ್ಣ ಹೂಗಾರ (87) ಅವರು ಶನಿವಾರ ಬೆಳಿಗ್ಗೆ ರಾಯಚೂರಿನ ಎನ್ ಜಿಓ ಕಾಲೋನಿಯ ಸ್ವಗೃಹದಲ್ಲಿ ದೈವಾಧೀನರಾದರು. ಮೃತರು ಪತ್ನಿ, ಪುತ್ರರಾದ ಹೂಗಾರ ಸಮಾಜದ ಜಿಲ್ಲಾಧ್ಯಕ್ಷರಾದ ಈರಣ್ಣ ಹೂಗಾರ, ಚಂದ್ರಶೇಖರ್ ಹೂಗಾರ ಹಾಗೂ ಇಬ್ಬರು ಪುತ್ರಿಯರು, ಮೊಮ್ಮಕ್ಕಳ ಸೇರಿ ಅಪಾರ ಬಂಧುಗಳವನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ 11ಕ್ಕೆ ಬೋಳಮಾನದೊಡ್ಡಿ ರಸ್ತೆಯ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ. ತಿಪ್ಪಣ್ಣ ಹೂಗಾರ ಅವರು ಶಿಕ್ಷಕರಾಗಿ, ಸಾಹಿತಿಗಳಾಗಿ ಈಶ್ವರಪ್ರಿಯ ಕಾವ್ಯನಾಮದಿಂದ ಸಾಹಿತ್ಯ ರಚಿಸಿದ್ದರು   ಹೀಗಾಗಿ ಅವರ ಸಾಹಿತ್ಯ ಸೇವೆ ಪರಿಗಣಿಸಿ ಮಾನ್ವಿ ತಾಲೂಕಿನ 5 ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ಸರ್ವಾಧ್ಯಕ್ಷರಾಗಿದ್ದರು. ಮೂಲತಃ ಮಾನ್ವಿ ತಾಲೂಕಿನ ಹಿರೇಕೊಟ್ನೇ ಕಲ್ ಗ್ರಾಮದವರಾಗಿದ್ದರು. ಸಂತಾಪ : ಸಮಾಜದ ಮೊದಲ ಶಿಕ್ಷಕರು, ಸಾಹಿತಿಗಳಾಗಿದ್ದ  ತಿಪ್ಪಣ್ಣ ಹೂಗಾರ ಅವರ ನಿಧನಕ್ಕೆ ಜಿಲ್ಲಾ ಹಾಗೂ ತಾಲೂಕು ಹೂಗಾರ ಸಮಾಜ ಸಂಘದ ಪದಾಧಿಕಾರಿಗಳು ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.
Image
  ಆ. 7 ರಂದು ಗೌರಿ ಗಣೇಶ ಹಬ್ಬದ ಪೂರ್ವಭಾವಿ ಸಭೆ ಜಯ ಧ್ವಜ ನ್ಯೂಸ್, ರಾಯಚೂರು ಆ.2 -   ಇದೆ ತಿಂಗಳು   27 ರಂದು ಆಚರಿಸುವ ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಪಾಲನಾ ಪೂರ್ವಭಾವಿ ಸಭೆಯು ಆಗಸ್ಟ್ 7ರ ಸಂಜೆ 04.30ಕ್ಕೆ ನೂತನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಗೆ ಹಾಜರಾಗಲು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Image
  ಶಾಸಕ ಬಸನಗೌಡ ದದ್ದಲ್ ರಿಂದ  ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಜಯ ಧ್ವಜ ನ್ಯೂಸ್ ,ರಾಯಚೂರು ಆ .2 - ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಇಂದು  ರಾಯಚೂರ ಗ್ರಾಮೀಣ ಭಾಗದಲ್ಲಿ ಪ್ರವಾಸ ಕೈಗೊಂಡರು. ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಮನ್ಸಲಾಪೂರ, ಚಿಕ್ಕಸೂಗೂರು ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಮನ್ಸಲಾಪೂರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮೈಕ್ರೋ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಅದೇ ರೀತಿ ಮುಜರಾಯಿ ಇಲಾಖೆಯ ಅನುದಾನದಡಿ ಶ್ರೀ ಬೀರಪ್ಪ ಗುಡಿ, ಶ್ರೀ ಸಿದ್ದಲಿಂಗೇಶ್ವರ ಗುಡಿ ಮತ್ತು ಶ್ರೀ ಹುಲಿಗಮ್ಮ ಗುಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಜೊತೆಗೆ ಮನ್ಸಲಾಪೂರು ಗ್ರಾಮ ಪಂಚಾಯತಿಯ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು. ಚಿಕ್ಕಸೂಗೂರು ಗ್ರಾಮಕ್ಕೆ ತೆರಳಿದ ಶಾಸಕರು, ಶ್ರೀ ಆಂಜನೇಯ ಸ್ವಾಮಿ ಗುಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಜೊತೆಗೆ ವಿಶೇಷ ಅನುದಾನದಲ್ಲಿ ಹಜರತ್ ಬಾಬಾ ಫಕ್ರುದ್ದೀನ್ ದರ್ಗಾ ಕಾಮಗಾರಿ  ಭೂಮಿ ಪೂಜೆ ಸಹ ನೆರವೇರಿಸಿದರು. ಸ್ವಂತ ಸಂಪನ್ಮೂಲ ಅನುದಾನದಡಿ ವಿವಿಧ ಕಾಮಗಾರಿಗಳಿಗೆ ಶಾಸಕರ...
Image
  ಏಮ್ಸ್  ನೀಡದ ಕೇಂದ್ರ ಸರಕಾರದಿಂದ  ಮಹಾ ದ್ರೋಹ- ಅಂಬಾಜಿರಾವ್  ಜಯ ಧ್ವಜ ನ್ಯೂಸ್ ರಾಯಚೂರು,ಆ.2-  ಕಳೆದ ಮೂರು ವರ್ಷಗಳಿಂದ ಏಮ್ಸ್  ಸ್ಥಾಪನೆಗಾಗಿ ಹೋರಾಟ ನಡೆಸಿದರೂ, ಇನ್ನು ಕೇಂದ್ರ ಸರಕಾರ ರಾಯಚೂರಿಗೆ ಎಮ್ಸ್ ನೀಡದೆ ಮಹಾ ದ್ರೋಹವೆಸಗಿದೆ ಎಂದು ಸಮಾಜ ಸೇವಕರಾದ ಅಂಬಾಜಿ ರಾವ್ ಮೈದರ್ಕರ್ ಅವರು ಆರೋಪಿಸಿದ್ದಾರೆ. ಕರ್ನಾಟಕಕ್ಕೆ ಇನ್ನು ಏಮ್ಸ್ ಸ್ಥಾಪನೆಯಾಗಿಲ್ಲ   ಜಿಲ್ಲೆಯ ಹಾಗೂ ಕಲ್ಯಾಣ ಕರ್ನಾಟಕ  ಜನರ ಕನಸು ನನಸಾಗದೆ ಉಳಿದಿದೆ. ಭಾರತದ ಪ್ರಮುಖ ಆರೋಗ್ಯ ಸಂಸ್ಥೆಯಾದ ಏಮ್ಸ್ ಕರ್ನಾಟಕಕ್ಕೆ ಬಾರದಂತಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಏಮ್ಸ್ ನೀಡಲಾಗಿದೆ ರಾಯಚೂರಿಗೆ ಅನ್ಯಾಯ   ಮುಂದುವರೆದಿದೆ  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಮ್ಮ ನಗರ ಮಹಾನಗರ ಪಾಲಿಕೆಯಾಗಿ ಬದಲಾವಣೆ ಆದ್ರೂ ಕೂಡ ಏಮ್ಸ್ ನೀಡದ ಕೇಂದ್ರ ಸರಕಾರದ ಕ್ರಮ ಖಂಡನೀಯ. ರಾಜ್ಯ ಸರ್ಕಾರ ಹಲವಾರು ಬಾರಿ ಪತ್ರ ಬರೆದು ಒತ್ತಡ ಹಾಕಿದರೂ ಕೇಂದ್ರ ಸರಕಾರ ಕುರುಡಾಗಿ ವರ್ತಿಸುತ್ತಿದೆ ಎಂದು ದೂರಿರುವ ಅವರು ಕೇಂದ್ರ ಸರಕಾರದ ನಿರ್ಲಕ್ಷ್ಯ ಹಾಗೂ ಮಲತಾಯಿ ಧೋರಣೆ ನಿಲ್ಲುತ್ತಿಲ್ಲ ಎಂದು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Image
  ರಾಜ್ಯಕ್ಕೆ ಏಮ್ಸ್ ಅನುಮೋದನೆ  ನೀಡಿಲ್ಲ ಎಂಬ ಕೇಂದ್ರ ಸರಕಾರದ ಹೇಳಿಕೆ ಖಂಡನಾರ್ಹ- ಡಾ.ಬಾಬುರಾವ್ ಜಯ ಧ್ವಜ ನ್ಯೂಸ್ ,ರಾಯಚೂರು, ಆ.2- ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆಗೆ ಅನುಮೋದನೆ ನೀಡಿಲ್ಲ ಎಂದು ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿರುವುದು ಕೇಂದ್ರ ರಾಜ್ಯ ಸರಕಾರದ ವಿರುದ್ಧ ತಳೆದಿರುವ ಮಲತಾಯಿ ಧೋರಣೆಯ ಪ್ರತೀಕವಾಗಿದೆ ಎಂದ ಸಮಾಜ ಸೇವಕ ಡಾ. ಬಾಬುರಾವ್  ಕಿಡಿ ಕಾರಿದ್ದಾರೆ.  ರಾಜ್ಯದಲ್ಲಿ ಏಮ್ಸ್ ಸ್ಥಾಪನೆ ಕುರಿತು ಲೋಕಸಭೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ಅವಧಿಯಲ್ಲಿ ರಾಯಚೂರು ಸಂಸದ ಜಿ.ಕುಮಾರನಾಯಕ, ಹಾಗೂ ಬಳ್ಳಾರಿ ಸಂಸದ ಇ. ತುಕಾರಾಂ ಕೇಳಿದ ಪ್ರಶ್ನೆಗೆ ಆರೋಗ್ಯ ಖಾತೆ ರಾಜ್ಯ ಸಚಿವ ಪ್ರತಾಪ ರಾವ್ ಜಾಧವ್ ಉತ್ತರ ನೀಡಿದ್ದಾರೆ. ಈವರೆಗೂ ದೇಶದಲ್ಲಿ 22 ಏಮ್ಸ್ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ ಎಂದು ಅವರ ಉತ್ತರದಲ್ಲಿಯೇ ದಕ್ಷಿಣ ಭಾರತದ ಬಗ್ಗೆ ಕೇಂದ್ರ ಸರಕಾರಕ್ಕಿರುವ ಅಸಡ್ಡೆ ತೋರಿಸುತ್ತದೆ ಎಂದು ಹರಿಹಾಯ್ದಿದ್ದಾರೆ.  ಕೇಂದ್ರಕ್ಕೆ ಹೆಚ್ಚಿನ ಆದಾಯವನ್ನು ತಂದು ಕೊಡುವ ರಾಜ್ಯ ಕರ್ನಾಟಕ ಎನ್ನುವುದನ್ನು ಕೇಂದ್ರ ಮರೆತಂತಿದೆ. ಕೇಂದ್ರ ಸರಕಾರ 22 ರಾಜ್ಯಗಳಲ್ಲಿ ಏಮ್ಸ್ ಮಂಜೂರು ಮಾಡಿದೆ. ಆಂಧ್ರಪ್ರದೇಶ, ಆಸ್ಸಾಂ, ಬಿಹಾರಕ್ಕೆ (ಎರಡು), ಛತ್ತೀಸ್ ಗಡ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರಕ್ಕೆ ಎರಡು, ಜಾರ್ಖಂಡ...
Image
ಕೇಂದ್ರದಿಂದ ಜಿಲ್ಲೆಗೆ ಏಮ್ಸ್ ಮಂಜೂರು ಮಾಡದಿರುವುದು ಖಂಡನೀಯ- ಡಾ.ರಝಾಕ್ ಉಸ್ತಾದ್    ಜಯ ಧ್ವಜ ನ್ಯೂಸ್, ರಾಯಚೂರು,ಆ.2- ಕರ್ನಾಟಕ ರಾಜ್ಯಕ್ಕೆ ಯಾವುದೇ ಏಮ್ಸ್ ಮಂಜೂರು ಮಾಡಿಲ್ಲವೆಂದು ಲೋಕಸಭೆಯಲ್ಲಿ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವರು ಉತ್ತರ ನೀಡಿರುವದು ಅತ್ಯಂತ ಖಂಡನೀಯವಾಗಿದೆ ಎಂದು ಕೆಪಿಸಿಸಿ ಮಾದ್ಯಮ ವಿಭಾಗ ರಾಜ್ಯ ವಕ್ತಾರರಾದ ಡಾ.ರಝಾಕ ಉಸ್ತಾದ ತಿಳಿಸಿದ್ದಾರೆ. ಲೋಕಸಭೆ ಅಧಿವೇಶನದಲ್ಲಿ ಕೇಂದ್ರ ಸರಕಾರ ರಾಯಚೂರು ಜಿಲ್ಲೆಗೆ ಏಮ್ಸ್ ಸ್ಥಾಪಿಸುವ ಕುರಿತು ಸಂಸದ ಜಿ.ಕುಮಾರ ನಾಯಕ ಮತ್ತು ಈ.ತುಕಾರಾಂ ಅವರು ಕೇಳಿದ ಪ್ರಶ್ನೆಗೆ ಸಚಿವರು ನೀಡಿರುವ ಉತ್ತರ ಬೇಸರ ಮೂಡಿಸಿದ ಎಂದು ತಿಳಿಸಿದ್ದಾರೆ. ಈಗಾಗಲೇ ದೇಶದಲ್ಲಿ 25 ಏಮ್ಸ್ ಮಂಜೂರು ಮಾಡಿ, ಕೆಲವೊಂದು ಕಾರ್ಯನಿರ್ವಹಿಸುತ್ತಿವೆ, ಇಡೀ ದಕ್ಷಿಣ ಭಾರತದಲ್ಲಿ ಆಂದ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಗೆ ಮಾತ್ರ ಏಮ್ಸ್ ನೀಡಲಾಗಿದೆ, ಇನ್ನುಳಿದಂತೆ ಎಲ್ಲಾ 22 ಏಮ್ಸ್ ಸಂಸ್ಥೆಗಳನ್ನು ಉತ್ತರ ಭಾರತಕ್ಕೆ ನೀಡಿ ತಾರತಮ್ಯ ಮಾಡಿದ್ದಾರೆ. ಕೇವಲ ಉತ್ತರ ಭಾರತ ಕೇಂದ್ರೀಕರಿಸಿ ಅಭಿವೃದ್ದಿ ಯೋಜನೆಗಳನ್ನು ಜಾರಿಗೊಳಿಸುವದು ಯಾವ ನ್ಯಾಯ ಎಂದು ಕೇಂದ್ರ ಸರಕಾರಕ್ಕೆ ಪ್ರಶ್ನಿಸಬೇಕಾಗುತ್ತದೆ. ಕರ್ನಾಟಕ ರಾಜ್ಯ ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದು, ದೇಶದ ಆರ್ಥಿಕತೆಗೆ ಅತೀ ಹೆಚ್ಚು ಕೊಡುಗೆ ನೀಡುತ್ತಿದೆ, ಇಂತಹ ರಾಜ್ಯಕ್ಕೆ ಏಮ್ಸ್ ಮಂಜೂರ...
Image
ಜಿಲ್ಲಾಧಿಕಾರಿಗಳಿಂದ  ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ:                                                                       ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ನಿರ್ದೇಶನ  ಜಯ ಧ್ವಜ, ನ್ಯೂಸ್,  ರಾಯಚೂರು ಆ.1  -  ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಇಂದು  ವಿಮಾನ ನಿಲ್ದಾಣ ನಿರ್ಮಾಣ  ಉದ್ದೇಶಿತ ಸ್ಥಳವಾದ ಯರಮರಸ್ ಹೊರವಲಯದ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.  ಪ್ರಸ್ತುತ ವಿಮಾನ ನಿಲ್ದಾಣದ ಸುತ್ತಲಿನ ಗೋಡೆ  ನಿರ್ಮಾಣ ಕಾಮಗಾರಿ ಹಾಗೂ ಪ್ಯಾಸೆಂಜರ್ ಟರ್ಮಿನಲ್ ಕಟ್ಟಡಕ್ಕೆ ಬುನಾದಿ ಕಾಮಗಾರಿಯ ಪರಿವೀಕ್ಷಣೆ ನಡೆಸಿದರು.  ವಿಮಾನ ನಿಲ್ದಾಣ ಕಾಮಗಾರಿಯಲ್ಲಿ ಪ್ರಸ್ತಾಪಿಸಿರುವ ರನ್‌ವೇ, ಸಿಆರ್‌ಎಫ್ ಕಟ್ಟಡ, ಎಟಿಸಿ ಕಟ್ಟಡ ಮತ್ತು ಮಾಸ್ಟರ್ ಪ್ಲಾನ್ ನಲ್ಲಿರುವ  ಸ್ಥಳದ ವೀಕ್ಷಣೆ ನಡೆಸಿದರು.  ಕಾಮಗಾರಿಯ ಪ್ರಗತಿಯ ಬಗ್ಗೆ ಗುತ್ತಿಗೆದಾರರೊಂದಿಗೆ ಚರ್ಚಿಸಿದ ಅವರು  ಕಾಮಗಾರಿಯನ್ನು ತ್ವರಿತಗೊಳಿಸಿ ಬೇಗನೆ ಪೂರ್ಣಗೊಳಿಸಬೇಕೆಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.  ಈ ಸಂದರ್ಭದಲ್ಲಿ ಲೋಕೋಪಯೋಗ...
Image
  ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಜನಾಕ್ರೋಶ ಪ್ರತಿಭಟನೆ:                    ಒಳ ಮೀಸಲಾತಿ ಶತಾಯ ಗತಾಯ ಜಾರಿ ಮಾಡಲು ಹೋರಾಟಗಾರರ ಒತ್ತಾಯ.                                                                                                ಜಯ ಧ್ವಜ ನ್ಯೂಸ್, ರಾಯಚೂರು,ಆ.1-                                   ಒಳ ಮೀಸಲಾತಿ ಜಾರಿ ಮಾಡುವಂತೆ ಆಗ್ರಹಿಸಿ ಇಂದು ನಗರದಲ್ಲಿ ಬೃಹತ್ ಜನಾಕ್ರೋಶ ಪ್ರತಿಭಟನೆ ಜರುಗಿತು. ಬೆಳಿಗ್ಗೆ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಒಳ ಮೀಸಲಾತಿ ಜಾರಿ ಸಮಿತಿ ಹೋರಾಟಗಾರರು ಸರ್ಕಾರದ  ಹಾಗೂ ಸಿಎಂ ವಿರುದ್ಧ ಘೋಷಣೆ ಕೂಗಿದರು. ಹೋರಾಟಗಾರ ಜೆ.ಬಿ .ರಾಜು ಮಾತನಾಡಿ ಸತತ ಮೂವತ್ತು ವರ್ಷದಿಂದ ಸುಧೀರ್ಘ ಹೋರಾಟ ನಡೆದಿದೆ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿ ರಾಜ್ಯ ಸರ್ಕಾರದ ಪರಿಮಿತಿ ಗೆ ಒಳಪಡುತ್ತದೆ ಎಂದು ತ...