Posts

Showing posts from August, 2025
Image
ಸದ್ಭಾವನಾ ಯಾತ್ರೆ ಮೂಲಕ ಸಾಮರಸ್ಯ ಸಾರುತ್ತಿರುವ ಕಿಲ್ಲೇಮಠ - ತಿಪ್ಪರಾಜು ಹವಾಲ್ದಾರ್                                                                                                         ಜಯ ಧ್ವಜ ನ್ಯೂಸ್ ,ರಾಯಚೂರು.ಆ.೩೧ -  ನಗರದ ಸಾವಿರ ದೇವರ ಸಂಸ್ಥಾನ ಕಿಲ್ಲೇ ಬ್ರಹನ್ಮಠದಲ್ಲಿ ೧೯ ನೇ ವರ್ಷದ ಸದ್ಬಾವನ ಪಾದಯಾತ್ರೆ ಮತ್ತು ಕೋಳಂಕಿ ಜೀವೈಕ್ಯ ಗುರುಪಾದ ಶಿವಯೇಗೀಶ್ವರ ಶಿವಾಚಾರ್ಯ  ಮಹಾಸ್ವಾಮಿಗಳ ೯೭೪ ನೆ ವರ್ಷದ ಜಯಂತಿಯ ಪರ್ವ ಸಮಾರಾಧನೆಯ ಅಂಗವಾಗಿ ಅಯೋಜನೆ ಮಾಡಿದ ಸಭೆ ಯಲ್ಲಿ ಜ್ಯೋತಿ ಬೆಳಗಿಸಿ  ಗ್ರಾಮೀಣ ಕ್ಷೇತ್ರದ  ಮಾಜಿ ಶಾಸಕ ತಿಪ್ಪರಾಜ ಹವಲ್ದಾರ್ ಮಾತಾನಾಡಿದರು. ಶಾಂತಿ ಸಾಮ ರಸ್ಯದ ಸಂಕೇತ ಮಠಗಳು   ಪಾದಯಾತ್ರಗೆ ಜಾತಿ ಮತ ಬೇಧ ಭಾವವಿಲ್ಲದೆ ನಡಿಯುವ ಪಾದಯಾತ್ರೆ ಮಾಡುವಿಕೆ ಮೂಲಕ ಜನರಿಗೆ,ರೈತರಿಗೆ ಒಳಿತಾಗಳಿ ಎಂದು ಪ್ರಸ್ತಾಪಿಸಿದರು.ಮಾಜಿ ನಗರ ಸಭೆ ಸದಸ್ಯರಾದ ಮೋಹಮ್ಮದ ಶಾಲಂ ಮಾತಾನಾಡುತ್ತ ಪಾದಯಾತ್ರೆಯಿಂದ ಸಮಾಜದಲ್ಲಿ ಶಾಂತಿ ಸ...
Image
ಶ್ರೀ ಸುಬುಧೇಂದ್ರತೀರ್ಥರಿಗೆ ಹಾಗೂ ಶ್ರೀ ಸತ್ಯಾತ್ಮತೀರ್ಥರಿಗೆ ಕಣ್ವ ಮಠದ ಚಾತುರ್ಮಾಸ್ಯ ಗೌರವ ಸಮರ್ಪಣೆ   ಜಯ ಧ್ವಜ ನ್ಯೂಸ್, ರಾಯಚೂರು, ಆ.30- ಕಣ್ವ ಮಠಾಧೀಶರಾದ ಶ್ರೀ ಶ್ರೀ ೧೦೦೮ ಶ್ರೀ ವಿದ್ಯಾಕಣ್ವ ವಿರಾಜ ತೀರ್ಥ ಶ್ರೀಪಾದಂಗಳವರ ಆಜ್ಞೆಯಂತೆ ಆ.29 ರಂದು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯ ಹಾಗೂ ಶ್ರೀ ಉತ್ತರಾಧಿಮಠಾಧೀಶರು ಚಾತುರ್ಮಾಸ್ಯ ವ್ರತ ಕೈಗೊಂಡಿರುವ  ಹೈದರಾಬಾದ ಗೆ ತೆರಳಿ ಕಣ್ವಮಠ ದ  ಚಾತುರ್ಮಾಸ ಗೌರವ ಸಮರ್ಪಣೆ ಯನ್ನು ಮಾಡಲಾಯಿತು. ಮಂತ್ರಾಲಯ ರಾಯರ ಮಠ ಮಠಾಧೀಶರಾದ ಶ್ರೀ ಶ್ರೀ ೧೦೦೮ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಮೂಲಕ ಶ್ರೀಮನ್ಮೂಲ ರಾಮಚಂದ್ರ ದೇವರಿಗೆ ಹಾಗೂ   ರಾಘವೇಂದ್ರ ಸ್ವಾಮಿಗಳು ಹಾಗೂ ಹಾಗೂ ಉತ್ತರಾಧಿ ಮಠದ ಮಠಾಧೀಶರಾದ ಶ್ರೀ ಶ್ರೀ ೧೦೦೮ ಶ್ರೀ ಸತ್ಯಾತ್ಮ ತೀರ್ಥ ಶ್ರೀ ಪಾದಂಗಳವರ  ಮೂಲಕ ಶ್ರೀ ದಿಗ್ವಿಜಯ ಮೂಲ ರಾಮದೇವರಿಗೆ ಚಾತುರ್ಮಾಸ ಸಮಿತಿ ಹಾಗೂ ಶ್ರೀ ಮತ್ ಕಣ್ವ ಮಠ ಆಡಳಿತಾಭಿವೃದ್ದಿ ಟ್ರಸ್ಟ ಹುಣಸಿಹೊಳೆ ವತಿಯಿಂದ ಫಲಪುಷ್ಪ ಶೇಷವಸ್ತ್ರ ಚಾತುರ್ಮಾಸ ಕಾಣಿಕೆ ಸಹಿತ ನೆರವೇರಿಸಲಾಯಿತು.   ಶ್ರೀ ಮತ್ ಕಣ್ವ ಮಠ ಆಡಳಿತಾಭಿವೃದ್ದಿ ಟ್ರಸ್ಟ ಹುಣಸಿಹೊಳೆ ಕಾರ್ಯಾಧ್ಯಕ್ಷರಾದ  ರಾಘವೇಂದ್ರ ಅಲಗೂರ,ಪ್ರಚಾರ ಮತ್ತು ಮಾಧ್ಯಮ ಸಮಿತಿ ಮುಖ್ಯಸ್ಥರಾದ  ಪ್ರಸನ್ನ ಆಲಂಪಲ್ಲಿ,ಚಾತುರ್ಮಾಸ ಸಮಿತಿ ಅಧ್ಯಕ್ಷರಾದ ಶ್ರೀ ಪ್ರಕಾಶರಾವ್,ಕಾನೂನು ಸಲ...
Image
  ಉಪ ಲೋಕಾಯುಕ್ತ ಬಿ. ವೀರಪ್ಪ ಅವರಿಂದ ಮೂರನೇ ದಿನವೂ ಮಿಂಚಿನ ಕಾರ್ಯಾಚರಣೆ : ಗಣಿಗಾರಿಕೆಯಿಂದ ಭೂಮಿ ತಾಯಿ ಗರ್ಭ ಸೀಳಿದಂತಾಗಿದೆ ಎಂದು ಕೆಂಡಾಮಂಡಲ; ಮಿಟ್ಟಿ ಮಲ್ಕಾಪುರ ಕಲ್ಲು ಗಣಿಗಾರಿಕೆ ಪೀಡಿತ ಇಡೀ ಪ್ರದೇಶದ ಮೇಲೆ ಸುಮೋಟೊ ಕೇಸ್ ಜಯ ಧ್ವಜ ನ್ಯೂಸ್ ರಾಯಚೂರು ಆ.30- ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ ವೀರಪ್ಪ ಅವರಿಂದ ಮೂರನೇ ದಿನವಾದ ಇಂದು ಅನಿರೀಕ್ಷಿತ ಭೇಟಿಯೊಂದಿಗೆ ಮಿಂಚಿನ ಕಾರ್ಯಾಚರಣೆ ನಡೆಯಿತು. ನಗರದ ಹೊರ ವಲಯದ ಮಂತ್ರಾಲಯ ರಸ್ತೆಯಲ್ಲಿರುವ ಮಿಟ್ಟಿ ಮಲ್ಕಾಪುರದ ಶ್ರೀ ವೆಂಕಟೇಶ್ವರ ಮಿನಿರಲ್ಸ್ ಸ್ಟೋನ್ ಕ್ರಷರ್ (ಎಂ ಸ್ಯಾಂಡ್ ) ವೀಕ್ಷಣೆ ಮಾಡಿದರು. ವೆಂಕಟೇಶ್ವರ ಮಿನಿರಲ್ಸ್ ಸ್ಟೋನ್ ಕ್ರಷರ್ ಪ್ರದೇಶದಲ್ಲಿ ಸಂಚರಿಸಿ ಗಣಿಗಾರಿಕೆ ನಂತರ ಹಾಗೆಯೇ ಬಿಟ್ಟ ಕಂದಕದ ವೀಕ್ಷಣೆ ನಡೆಸಿದರು. ಇದನ್ನು ಸಮತಟ್ಟು ಯಾಕೆ ಮಾಡಿಲ್ಲ? ಗಿಡ ಯಾಕೆ ನೆಟ್ಟಿಲ್ಲ?. ಇದನ್ನು ನೀವು ನೋಡಿಲ್ವಾ? ಲೀಸ್ ಪಡೆದ ಕಂಪನಿಯವರು ಕಾನೂನು ಉಲ್ಲಂಘನೆ ಮಾಡಿದಾರೆ ಅಂತ ಗೊತ್ತಾದಾಗಲೂ ನೀವು ನಿದ್ದೆ ಮಾಡತಿದೀರಾ? ಎಂದು ಗಣಿ ಇಲಾಖೆಯ ಅಧಿಕಾರಿಗಳಿಗೆ ಉಪ ಲೋಕಾಯುಕ್ತರು ತರಾಟೆ ತೆಗೆದುಕೊಂಡರು. ಬಳಿಕ ಲೋಕಾಯುಕ್ತರು, ಓಂ ಶಕ್ತಿ ಕಂಪನಿಯ ಮತ್ತೊಂದು ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ತೆರಳಿ ಗಣಿಪೀಡಿತ ಪ್ರದೇಶದಲ್ಲಿ ಅಂದಾಜು 100 ಅಡಿ ಆಳವಾಗಿ ಕೊರೆದ ಕಂದಕದ ವೀಕ್ಷಣೆ ನಡೆಸಿದರು. 100 ಅಡಿಯಷ್ಟು ಒಳಗೆ ಕೊರೆದು ಗಣಿಗಾರಿಕೆ ನಡೆಸಲು ನಿಯಮದಲ್ಲಿ ಅವಕಾಶವಿದೆಯಾ...
Image
ಸಮಸ್ತ ಬ್ರಾಹ್ಮಣ ಯುವಕ ಮಂಡಳಿ ಗಣೇಶೋತ್ಸವ: ಲಕ್ಷ್ಮೀ ಶೋಬಾನೆ ಸಹಿತ  ಕುಂಕುಮಾರ್ಚನೆ    ಜಯಧ್ವಜ ನ್ಯೂಸ್, ರಾಯಚೂರು, ಆ. 29- ಸಮಸ್ತ ಬ್ರಾಹ್ಮಣ ಯುವಕ ಮಂಡಳಿ ಗಣೇಶೋತ್ಸವದ  ಮೂರನೇ ದಿನವಾದ ಇಂದು ಭಕ್ತಿಭಾವ ಹಾಗೂ ಸಾಂಸ್ಕೃತಿಕ ವೈಭವದ ನಡುವೆ ವಿಜೃಂಭಣೆಯಿಂದ ನೆರವೇರಿತು. ಸಂಜೆ 6 ಗಂಟೆಗೆ ರಾಯಚೂರಿನ ಸಮಸ್ತ ಸುಮಂಗಲಿ ಸ್ತ್ರೀಯರ ಸಮ್ಮುಖದಲ್ಲಿ ಲಕ್ಷ್ಮೀ ಶೋಭಾನೆ ಸಹಿತ ಕುಂಕುಮಾರ್ಚನೆ ಕಾರ್ಯಕ್ರಮ ನೇರವೇರಿತು‌.  ಅರವಿಂದ ಆಚಾರ ಸಗರ ಅವರಿಂದ ಪೂಜಾ ಕೈಂಕರ್ಯಗಳು ನೇರವೇರಿದವು.  ಮಾನ್ಯ ಮುಕುಂದಾಚಾರ್ ಜೋಶಿ ಅವರು ಸುಮಂಗಲಿ ಸ್ತ್ರೀಯರಿಗೆ ಲಕ್ಷ್ಮೀ ಮೂರ್ತಿಯನ್ನು ದಾನವಾಗಿ ನೀಡಿದರು.  ಕಾರ್ಯಕ್ರಮದ ಕೊನೆಗೆ ಮಹಾಮಂಗಳಾರತಿ ನೆರವೇರಿಸುವದರ ಮೂಲಕ ಮೂರನೇ ದಿನದ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು. ಭಕ್ತಾದಿಗಳಿಗೆಲ್ಲರಿಗೂ ಪ್ರಸಾದ ವಿತರಣೆ ಮಾಡಲಾಯಿತು. ಹೆಚ್ಚನ ಸಂಖ್ಯೆಯಲ್ಲಿ ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.
Image
    ಸತ್ಯನಾಥ ಗಜಾನನ ಮಿತ್ರ ಮಂಡಳಿ ವತಿಯಿಂದ ವಿಘ್ನೇಶ್ವರ ನಿಗೆ  ಕರಕಿ ಅರ್ಚನೆ : ಹರಿಕಥಾಮೃತಸಾರ ಹಾಗೂ ಭರತನಾಟ್ಯ ಜಯ ಧ್ವಜ ನ್ಯೂಸ್ ರಾಯಚೂರು, ಆ.28- ನಗರದ ಸತ್ಯನಾಥ ಅಗ್ರಹಾರದ ಉತ್ತರಾದಿ ಮಠದಲ್ಲಿ ಸತ್ಯನಾಥ ಗಜಾನನ ಮಿತ್ರ ಮಂಡಳಿ ವತಿಯಿಂದ ಪ್ರತಿಷ್ಟಾಪಿಸಲಾದ ಗಣೇಶೋತ್ಸವದಲ್ಲಿ  ಗುರುವಾರ  ಸಾಯಂಕಾಲ ಕರ್ನಾಟಕ ಕಲಾ ಮಂಡಲಮ್  ವತಿಯಿಂದ ಭರತನಾಟ್ಯ ಕಾರ್ಯಕ್ರಮ ಹರಿಕಥಾಮೃತಸಾರ ಮಂಗಳಾಚರಣ ಸಂಧಿಯ ಭರತನಾಟ್ಯ ಬಹಳ ಮನಮೋಹಕವಾಗಿ ನೆರವೇರಿತು.  ಮುಖ್ಯ ಗುರುಗಳಾದ ಮಂಜುನಾಥ್ ಗೋರ್ಕಲ್ ಅವರ ನೆರವೇರಿಸಿದರು . ಸತ್ಯನಾಥ ಅಗ್ರಹಾರ  ಉತ್ತರಾದಿ ಮಠದ ವ್ಯವಸ್ಥಾಪಕರಾದ  ಪಂ ಮುಕುಂದಾಚಾರ್ಯ ಜೋಶಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.
Image
  ಸಮಸ್ತ ಬ್ರಾಹ್ಮಣ ಯುವಕ ಮಂಡಳಿ ಗಣೇಶೋತ್ಸವ: ಗಣಪತಿಗೆ ಗರಿಕೆ ಅರ್ಚನೆ ಹಾಗೂ ದಾಸವಾಣಿ ಭಕ್ತಿ ಸಮರ್ಪಣೆ   ಜಯ ಧ್ವಜ ನ್ಯೂಸ್, ರಾಯಚೂರು , ಆ. 28 - ನಗರದ ಮಾಣಿಕ್ ಪ್ರಭು ದೇವಸ್ಥಾನ ರಸ್ತೆಯ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಸಮಸ್ತ ಬ್ರಾಹ್ಮಣ ಯುವಕ ಮಂಡಳಿಯಿಂದ ಪ್ರತಿಷ್ಟಾಪಿಸಲಾದ ಗಣೇಶೋತ್ಸವದಲ್ಲಿ ವಿವಿಧ ಕಾರ್ಯಕ್ರಮ ನಡೆದವು.  ವಿನಾಯಕ ಚತುರ್ಥಿ ಉತ್ಸವದ ಎರಡನೇ  ದಿನವಾದ ಇಂದು ಭಕ್ತಿಭಾವ ಹಾಗೂ ಸಾಂಸ್ಕೃತಿಕ ವೈಭವದ ನಡುವೆ ವಿಜೃಂಭಣೆಯಿಂದ ನೆರವೇರಿತು. ಸಂಜೆ 6 ಗಂಟೆಗೆ ,ಶ್ರೀ ಗೋಪಿನಾಥ ಆಚಾರ್ ಕೊಪ್ಪರ ಅವರಿಂದ ಗರಿಕೆ ಅರ್ಚನೆ ನೆರವೇರಿತು. ಶ್ರೀ ಗಣಪತಿಯ ಆಶೀರ್ವಾದವನ್ನು ಕೋರುತ್ತಾ ಈ ಅರ್ಚನೆಯಿಂದ ದಿನದ ಕಾರ್ಯಕ್ರಮಗಳಿಗೆ ಶುದ್ಧ ಆಚರಣೆಯ ಆದಿಯನ್ನು ನೀಡಲಾಯಿತು. ಇದಾದ ನಂತರ, ದಾಸ ಸಾಹಿತ್ಯದ ಮಹತ್ವವನ್ನು ಸಾರುವ  ದಾಸವಾಣಿ ಕಾರ್ಯಕ್ರಮ ನಡೆಯಿತು ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನ ನೀಡಿ ,ದಾಸರ ಕೀರ್ತನೆಗಳನ್ನು  ಮನೆಮನೆಗೆ ತಲುಪಿಸುವಲ್ಲಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡ *ಪೂಜ್ಯ ಶ್ರೀ ಕಟಗೇರಿ ದಾಸರ* ಇತ್ತೀಚಿನ  ಇಹಲೋಕದ ಅಗಲಿಕೆಯ ಹಿನ್ನೆಲೆಯಲ್ಲಿ, ಮೌನಾಚರಣೆಯ ಮೂಲಕ ಅವರಿಗೆ ನಮನ ಸಲ್ಲಿಸಿ ಇಂದಿನ ದಾಸವಾಣಿಯನ್ನು  ಅವರಿಗೆ ಸಮರ್ಪಣೆ ಮಾಡಲಾಯಿತು.  ದಾಸವಾಣಿಯು ಗುಂಡಾಚಾರ್ ಹೊಳಗುಂದಿ ಮತ್ತು  ಜಯಸಿಂಹಚಾರ್ ಪೆರೂರ್ ಅವರ ಜುಗಲಬಂದಿ ಭಕ್ತಿಭಾವಪೂರ್ಣವ...
Image
  ರಸ್ತೆ, ಕೆರೆ ಸೇರಿದಂತೆ ಸರ್ಕಾರಿ ಸ್ವತ್ತಿನ ಒತ್ತುವರಿ ತಡೆಗೆ ಕ್ರಮವಹಿಸಲು ಮಹಾನಗರಪಾಲಿಕೆಯ ಅಧಿಕಾರಿಗಳಿಗೆ ಉಪ ಲೋಕಾಯುಕ್ತರಾದ ಬಿ.ವೀರಪ್ಪ ಖಡಕ್ ಸೂಚನೆ  ಜಯ ಧ್ವಜ ನ್ಯೂಸ್ , ರಾಯಚೂರು, ಆ.28- ರಾಯಚೂರು ಪ್ರವಾಸದಲ್ಲಿದ್ದ ಉಪ ಲೋಕಾಯುಕ್ತರಾದ ನ್ಯಾ. ಬಿ ವೀರಪ್ಪ ಅವರು ಇಂದು ನಗರದಲ್ಲಿನ ಹಳೆಯ ಮಹಾನಗರ ಪಾಲಿಕೆಯ ಕಚೇರಿಗೆ ಭೇಟಿ ನೀಡಿದರು.  ಬಹುಮುಖ್ಯವಾಗಿ ಸರ್ಕಾರಿ ಸ್ವತ್ತಿನ ಅತಿಕ್ರಮಣವು ಕೂಡಲೇ ತೆರವಾಗಬೇಕು ಎಂದು ಸೂಚಿಸಿದೆ ಅವರು ದಾಖಲಾದ, ದಾಖಲಾಗುವ ದೂರಿನ ಪ್ರಕರಣಗಳ ವಿಲೇವಾರಿಗೆ ಪಾಲಿಕೆಯ ಅಧಿಕಾರಿಗಳು ಮೊದಲಾದ್ಯತೆ ನೀಡಬೇಕು ಎಂದು  ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು. ನಗರದಲ್ಲಿನ ಸಾರ್ವಜನಿಕ ಆಸ್ತಿಗಳಾದ ಕೆರೆ, ಬಾವಿ ಜಾಗ, ರಸ್ತೆ ಪ್ರದೇಶವನ್ನು ಯಾರು ಸಹ ಒತ್ತುವರಿ ಮಾಡದಂತೆ ನೋಡಿಕೊಳ್ಳಬೇಕು. ಇದು ಪಾಲಿಕೆಯ ಬಹುಮುಖ್ಯ ಕಾರ್ಯ, ಕರ ವಸೂಲಿಯನ್ನು ಸಹ ನಿಯಮಿತವಾಗಿ ನಡೆಸಿ ಅದರಿಂದ ಬರುವ ಆದಾಯದಿಂದ ನಗರದ ನಿವಾಸಿಗಳಿಗೆ ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಸರಿಯಾದ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತು ನೀಡಬೇಕು ಎಂದು ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚನೆ‌ ನೀಡಿದರು . ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್.ಕೆ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Image
  ಪರಿಸರ  ಸ್ನೇಹಿ ಗಣಪ:   ಆಲಂಪಲ್ಲಿ ಪ್ರತಿಷ್ಟಾನ ಶ್ಲಾಘನೆ                                                 ಜಯ ಧ್ವಜ ನ್ಯೂಸ್ , ರಾಯಚೂರು, ಆ.26-                  ಪರಿಸರ ಸ್ನೇಹಿ ಮಣ್ಣಿನ ಗಣಪ ಮಾಡಿದ ಕಲಾವಿದರಾದ ಆನಂದ ಕುಲಕರ್ಣಿ ಅವರಿಗೆ ಆಲಂಪಲ್ಲಿ ಪ್ರತಿಷ್ಟಾನ ರಾಯಚೂರು ವತಿಯಿಂದ ಪ್ರಸನ್ನ ಆಲಂಪಲ್ಲಿ ಸನ್ಮಾನಿಸಿ  ಗೌರವ ಸಮರ್ಪಿಸಿದರು . ರಾಯಚೂರಿನಲ್ಲಿ ಕಳೆದ 30 ವರ್ಷ ಗಳಿಂದ ಪರಿಸರ ಸ್ನೇಹಿ ಮಣ್ಣಿನ ಗಣಪನ ಮೂರ್ತಿಗಳನ್ನು ತಾವೇ ಸ್ವತಃ ತಮ್ಮ ಕೈಯಿಂದ ತಯಾರಿಸಿ ಆತ್ಮೀಯರಿಗೆ,ಮನೆ ಪಕ್ಕದವರಿಗೆ,ಬಡಾವಣೆ ಜನರಿಗೆ ಮತ್ತು ಬಂಧು ಬಳಗದವರಿಗೆ ಉಚಿತವಾಗಿ ಮಣ್ಣಿನ ಗಣೇಶನನ್ನು  ಯಾವುದೇ ಕೃತಕ ಪರಿಸರಕ್ಕೆ ಹಾನಿಕಾರಕ ಬಣ್ಣಗಳನ್ನು ಬಳಸದೆ ಪರಿಸರ ಸ್ನೇಹಿ ವಾಟರ ಪೇಂಟ್ ನಿಂದಲೇ ಅತ್ಯಾಕರ್ಷಕ ವಿವಿಧ ಭಂಗಿಯ ಗಣೇಶ ಮೂರ್ತಿ ಗಳನ್ನು ತಯಾರಿಸಿ ತಮಗೆ ದೈವದತ್ತವಾಗಿ ಒಲಿದು ಬಂದ ಕಲೆಯನ್ನು ಉಳಿಸಿಕೊಂಡು ಪ್ರತಿ ಗಣೇಶೋತ್ಸವ ಸಂಧರ್ಭದಲ್ಲಿ ಇಚ್ಛೆ ಪಟ್ಟವರಿಗೆ,ವಿಧ್ಯಾರ್ಥಿಗಳಿಗೆ ಕಲೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರ  ಮಾಡುತ್ತಿರುವ ಉದಾತ್ತ ಮನೋಭಾವನೆಯುಳ್ಳವರು ವಿರಳವಾಗಿದ್ದ...
Image
  ಅರಕೇರ ವಸತಿ ಶಾಲೆ ಪ್ರಿನ್ಸಿಪಾಲ್ ಪತ್ರಕರ್ತರ ಮೇಲೆ ಅವಾಚ್ಯ ಶಬ್ದದಿಂದ ನಿಂದಿಸಿರುವುದನ್ನು ಖಂಡಿಸಿ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧಿಕಾರಿಗೆ ಮನವಿ ಜಯ ಧ್ವಜ ನ್ಯೂಸ್, ರಾಯಚೂರು,ಆ.25- ಜಿಲ್ಲೆಯ  ಅರಕೇರ ಪಟ್ಟಣದಲ್ಲಿ ವರದಿಗೆ ತೆರಳಿದ್ದ ಪತ್ರಕರ್ತರನ್ನು ಅವಾಚ್ಯವಾಗಿ ನಿಂದಿಸಿದ ಘಟನೆ ಖಂಡಿಸಿ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.                                      ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯಲ್ಪಡುವ ಪತ್ರಿಕಾ ಮಾಧ್ಯಮದ ಮೇಲೆ ನಿರಂತರ ದಾಳಿ, ದೌರ್ಜನ್ಯ, ಅವಮಾನಗಳು ನಡೆಯುತ್ತಿವೆ ಅದರ ಭಾಗವಾಗಿ ಕೊತ್ತದೊಡ್ಡಿ ವಸತಿ ಶಾಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾದ ವಿದ್ಯಾರ್ಥಿಗಳನ್ನು ಅರಕೇರ ಪಟ್ಟಣದ ಸಮುದಾಯ ಆರೋಗ್ಯ‌ ಕೇಂದ್ರದಲ್ಲಿ ತಪಾಸಣೆಗೆ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಪತ್ರಕರ್ತರು ವಿಡಿಯೋ, ಫೋಟೊ ಚಿತ್ರೀಕರಣ ಮಾಡುತ್ತಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಪ್ರಿನ್ಸಿಪಾಲ್ ಸುರೇಶ ವರ್ಮಾ ಮಾಹಿತಿ ಮತ್ತು ಚಿತ್ರ ಸಂಗ್ರಹಿಸಿದ ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸಿದರು. ಮಾಧ್ಯಮದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು   ಖಂಡಿಸಲಾಯಿತು. ಪತ್ರಕರ್ತರು ಮಕ್ಕಳ ಹಿತದೃಷ್ಟ...
Image
ವಾರ್ಡ್ ನಂ.17ರಲ್ಲಿ   ಕುಂಟುತ್ತಾ  ಸಾಗಿದ ಚರಂಡಿ ರಸ್ತೆ  ಕಾಮಗಾರಿ ಹಿಡಿಶಾಪ ಹಾಕುತ್ತಿರುವ ಜನತೆ                                                                                                                                        ಜಯ ಧ್ವಜ ನ್ಯೂಸ್ , ರಾಯಚೂರು ,ಆ.25-  ನಗರದ    ವಾರ್ಡ್  ನಂ.17ರ ಓಣಿಯಲ್ಲಿ ಚರಂಡಿ ಹಾಗು ಸಿಸಿ ರಸ್ತೆ ಕಾಮಗಾರಿ ಕುಂಟುತ್ತಾ ಮಂದಗತಿಯಲ್ಲಿ ಸಾಗಿದೆ ಒಂದು ತಿಂಗಳಿನಿಂದ ಕಾಮಗಾರಿ ಸಾಗಿದ್ದು ಬೇಕಾ ಬಿಟ್ಟಿಯಾಗಿ ನಡೆದಿದೆ ರಸ್ತೆ ನಿರ್ಮಿಸುವ ಪೂರ್ವದಲ್ಲಿ ಒಳಚರಂಡಿ ಪೈಪು ಅಳವಡಿಸದೆ ರಸ್ತೆ ನಿರ್ಮಿಸಲು  ಜೆಲ್ಲಿ ಕಲ್ಲು ಹಾಕಿ ಇದೀಗ  ಮತ್ತೆ ಅದನ್ನು ಅಗೆದು ಪೈಪು ಅಳವಡಿಕೆ ಮಾಡುತ್ತಿದ್ದಾರೆ. ಮನೆಗಳ ಮೋರಿಯನ್ನು ಬಂದ್ ಮಾಡಿ ಚರಂಡಿ ನಿರ್ಮಾಣ ಮಾಡಿದ್ದು ನಿವಾಸಿಗಳು ಹಿಡಿಶಾಪ ಹ...
Image
ಶೃಂಗೇರಿ ಶ್ರೀ ಶಂಕರ ಮಠದಲ್ಲಿ ಶ್ರಾವಣ ಮಾಸ ಅಮಾವಾಸ್ಯೆಯಂದು  ಬುತ್ತಿ ಪೂಜೆ ಹಾಗೂ ಮೃತ್ಯುಂಜಯ ಹೋಮ  ಜಯ ಧ್ವಜ ನ್ಯೂಸ್ , ರಾಯಚೂರು , ಆ. 24- ಶ್ರಾವಣ ಮಾಸದ ನಿಮಿತ್ಯ ಶಂಕರ ಮಠದಲ್ಲಿ  ಮೃತ್ಯುಂಜಯ ಹೋಮ ಹಾಗೂ  ಬುತ್ತಿ ಪೂಜೆ ಮತ್ತು ಅಭಿಷೇಕ ನಡೆಸಲಾಯಿತು. ಸಾಯಂಕಾಲ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು .ಈ ಕಾರ್ಯಕ್ರಮದಲ್ಲಿ ಅರ್ಚಕ ವೃತ್ತಿಯಲ್ಲಿ ಬಹಳ ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಪಂಡಿತರಾದ ವೇದಮೂರ್ತಿ ಶೀಲಾ ಕುಮಾರ್ ಶಾಸ್ತ್ರಿ, ಇವರಿಗೆ  ವಿಪ್ರಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಮ್ಮ ಮಠದಲ್ಲಿ ಅನೇಕ ದಿನಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀಯುತ ರಾಮಚಂದ್ರ ಶೆಲವಡಿ ಹಾಗೂ ಶ್ರೀನಾಥ್ ಆನಂತ್ ಭಟ ಇವರನ್ನು ಸನ್ಮಾನಿಸಲಾಯಿತು. ಇದರ ಜೊತೆಗೆ ಆರು ಜನ ವಿದ್ಯಾರ್ಥಿಗಳನ್ನು ಹೆಚ್ಚಿನ ಅಂಕಗಳಿಸಿದ್ದಕ್ಕಾಗಿ ಹಾಗೂ ವಿಶೇಷ ಪ್ರತಿಭೆ ಮಾಡಿದವರಿಗೆ  ಪುರಸ್ಕರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಲ್ ವಿ ಡಿ ಕಾಲೇಜಿನಲ್ಲಿ ಗಣಿತ ಶಾಸ್ತ್ರದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ ಶ್ರೀಯುತ ಸುಬ್ರಮಣ್ಯಂ ಇವರು ಆಗಮಿಸಿದ್ದರು. ಅವರು ತಮ್ಮ ಅತಿಥಿ ಭಾಷಣದಲ್ಲಿ ಇಂದಿನ ಕಾಲದಲ್ಲಿ ನಮ್ಮ ಸಮಾಜವು, ಪೂರ್ಣ ಹಿಂದೆ ಇರುವುದರಿಂದ ನಮ್ಮ ಸಮಾಜ ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗುವುದು ಬಹಳ ಅವಶ್ಯಕವಿದೆ ಎಂದು ನುಡಿದರು. ಪ್ರಾರ್ಥನಾ ಗೀತೆಯನ್ನು  ಗಾಯತ್...
Image
  ವಾರ್ಡ ನಂ‌.34 : 3 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗೆ ಎ.ವಸಂತ ಕುಮಾರ್ ಹಾಗೂ ಶಿವರಾಜ್ ಪಾಟೀಲ್ ಚಾಲನೆ                                                      ಜಯ ಧ್ವಜ ನ್ಯೂಸ್ ರಾಯಚೂರು  , ಆ.24-   ನಗರದ ವಾರ್ಡ ನಂ‌.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,‌ ಹಾಜಿ ಕಾಲೋನಿ ಹಾಗೂ ಶಾಂತಿ ಕಾಲೋನಿಯ ವಿವಿದ ಬಡಾವಣೆಗಳಲ್ಲಿ ಸುಮಾರು 3 ಕೋಟಿ .ರೂ ವೆಚ್ಚದ  ಸಿಸಿ ರಸ್ತೆ ನಿರ್ಮಾಣಕ್ಕೆ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಯ ಅನುದಾನದಡಿಯಲ್ಲಿ ಕಾಮಗಾರಿ ಅಡಿಗಲ್ಲು ಕಾರ್ಯಕ್ರಮವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಪರಿಷತ್ ಸದಸ್ಯರಾದ ಎ.ವಸಂತಕುಮಾರ ಮತ್ತು ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶಿವರಾಜ ಪಾಟೀಲ್ ಜಂಟಿಯಾಗಿ ನೆರವೇರಿಸಿದರು. ಸದರಿ ಬಡಾವಣೆಗಳಲ್ಲಿ ದಶಕಗಳಿಂದ ಮೂಲಭೂತ ಸೌಕರ್ಯಗಳಿಲ್ಲದೇ ಜನತೆ ಸಂಕಷ್ಟ ಅನುಭವಿಸುತ್ತಿರುವದನ್ನು ಗಮನಿಸಿ ಸರಕಾರದಿಂದ ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಸುಮಾರು 3 ಕೋಟಿ‌ ರೂ ಅನುದಾನ ಮಂಜೂರು ಮಾಡಿ, ಕಾಮಗಾರಿ ಕೈಗೊಳ್ಳಲು ಅಡಿಗಲ್ಲು ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎ.ವಸಂತಕುಮಾರ ಅವರು ರಾಯಚೂರು ನಗರದಲ್ಲಿ ಹಲವಾರು ಬಡಾವಣೆಗಳು ಮ...
  ಅರಕೇರದಲ್ಲಿ ಪತ್ರಕರ್ತರಿಗೆ ಕೊತ್ತದೊಡ್ಡಿ  ಏಕಲವ್ಯ ವಸತಿ ಶಾಲೆಯ  ಪ್ರಿನ್ಸಿಪಲ್ ನಿಂದನೆ: ಕೆಯುಡ್ಬ್ಲೂಜೆ ಖಂಡನೆ ಜಯ ಧ್ವಜ ನ್ಯೂಸ್ , ರಾಯಚೂರು,ಆ.24- ಜಿಲ್ಲೆಯ ಅರಕೇರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊತ್ತದೊಡ್ಡಿ ಏಕಲವ್ಯ ವಸತಿ ಶಾಲೆಯ ಪ್ರಿನ್ಸಿಪಲ್  ಪತ್ರಕರ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆಯನ್ನು ಜಿಲ್ಲಾ ಕಾರ್ಯನಿರತ  ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ. ಕೊತ್ತದೊಡ್ಡಿ ವಸತಿ ಶಾಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾದ ವಿದ್ಯಾರ್ಥಿಗಳು ಅರಕೆರ ಪಟ್ಟಣದ ಸಮುದಾಯ ಆರೋಗ್ಯ‌ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಪತ್ರಕರ್ತರು  ವಿಡಿಯೋ, ಫೋಟೊ ಚಿತ್ರಿಕರಿಸಿಕೊಂಡಿದ್ದರು. ಜವಬ್ದಾರಿಯುತ ಸ್ಥಾನದಲ್ಲಿದ್ದ ಪ್ರಿನ್ಸಿಪಲ್ ಸುರೇಶ ವರ್ಮಾ ಅವರು ಮಾಹಿತಿ ಮತ್ತು ಚಿತ್ರ ಸಂಗ್ರಹಕ್ಕೆ ಆಗಮಿಸಿದ್ದ ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸಿ. ಮಾಧ್ಯಮದವರು ಲೋಫರ್ಸ್, ಉಪಯೋಗಕ್ಕೆ ಬಾರದವರು, ಇಡಿಯಟ್ಸ್ ನೀವೆನು ಮಾಹಿತಿ ಪಡಿಯುತ್ತೀರಿ ಎಂದು ನಿಂದಿಸಿರುವುದು ಖಂಡನೀಯ.  ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ ಕೊತ್ತದೊಡ್ಡಿ ಏಕಲವ್ಯ ವಸತಿ ಶಾಲೆಯ ಪ್ರಿನ್ಸಿಪಲ್ನನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಿ ಕ್ರಮಕ್ಕೆ ಮುಂದಾಗ ಬೇಕೆಂದು  ಕೆಯುಡಬ್ಲ್ಯೂ ಜೆ ಜಿಲ್ಲಾಧ್ಯಕ್ಷ   ಆರ್. ಗುರುನಾಥ್ ಪ್ರಕಟಣೆ ಮೂಲಕ ಒತ್ತಾಸಿದ್ದಾರೆ.
Image
  ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ: ರಕ್ತದಾನ ಜೀವದಾನದಷ್ಟೇ ಶ್ರೇಷ್ಠ  - ಪಾರಸಮಲ್ ಸುಖಾಣಿ  ಜಯ ಧ್ವಜ ನ್ಯೂಸ್ ,ರಾಯಚೂರು, ಆ.22 -  ನಗರದ ಎಲ್.ವಿ.ಡಿ ಪದವಿ ಮಹಾವಿದ್ಯಾಲಯದಲ್ಲಿಂದು  ರಾಜಯೋಗಿನಿ ಪ್ರಕಾಶಮಣಿಜೀ ಅವರ ಪುಣ್ಯತಿಥಿ ಹಾಗೂ ವಿಶ್ವ ಭ್ರಾತೃತ್ವ ದಿನ ಅಂಗವಾಗಿ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಇತರ ಸಂಘ ಸಂಸ್ಥೆಗಳೊಂದಿಗೆ ಜರುಗಿದ ಬೃಹತ್ ರಕ್ತದಾನ ಶಿಬಿರವನ್ನು ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪಾರಸಮಲ್ ಸುಖಾಣಿಯವರು ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವುದು ಒಬ್ಬ ವ್ಯಕ್ತಿಗೆ ಜೀವದಾನ ನೀಡಿದಷ್ಟೇ ಶ್ರೇಷ್ಠ ಕಾರ್ಯವಾಗಿದ್ದು 4 ದಿನಗಳ ಕಾಲ ನಡೆಯುವ ಬೃಹತ್ ರಕ್ತದಾನ ಶಿಬಿರದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕೆಂದರು. ರಕ್ತದ ತುರ್ತುಅಗತ್ಯವನ್ನು ಪೂರೈಸುವ ಉದ್ದೇಶ ಹಾಗೂ ವಿಶ್ವ ಭಾತೃತ್ವದ ಸಂದೇಶವನ್ನು ಹರಡುವ ಉದ್ದೇಶದಿಂದ ಈಶ್ವರೀಯ ಬ್ರಹ್ಮಕುಮಾರೀಸ್ ವಿಶ್ವವಿದ್ಯಾಲಯದಿಂದ ಹಮ್ಮಿಕೊಂಡಿರುವ ಈ ಪವಿತ್ರ ಕಾರ್ಯ‌ವನ್ನು ಉದ್ಘಾಟಿಸುವುದು ನನ್ನ ಸೌಭಾಗ್ಯವಾಗಿದೆ ಎಂದರು. ಈ ವೇಳೆ ಕಾಂಗ್ರೆಸ್ ಯುವ ಮುಖಂಡರಾದ ರವಿಬೋಸರಾಜುರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ರಕ್ತನಿಧಿ ಕೇಂದ್ರದಲ್ಲಿಯೂ ಸಹ ರಕ್ತದ ಕೊರತೆಯಿದ್ದು ಸಂಕಷ್ಟದ ಸಂದರ್ಭದಲ್...
Image
  ಶೃತಿ ಸಾಹಿತ್ಯ ಮೇಳದಿಂದ ಯಶಸ್ವಿ ಯಾಗಿ ಜರುಗಿದ ದಾಸನಾಗು ವಿಶೇಷನಾಗು ಕಾರ್ಯಕ್ರಮ:            ಕನಕದಾಸರು ಸಮಾಜಕ್ಕೆ ಮೌಲಿಕ ಸಾಹಿತ್ಯವನ್ನು ನೀಡಿದ ಭಕ್ತಿಯ ಸಾಕಾರ ಮೂರ್ತಿ- ಸುಸ್ವರಂ ನಾಗರಾಜಾಚಾರ್ಯ ಜಯ ಧ್ವಜ ನ್ಯೂಸ್ , ರಾಯಚೂರು , ಆ. 22- ನಗರದ ಸಾಹಿತಿಕ ಹಾಗೂ ಸಾಂಸ್ಕೃತಿಕ ಸಂಘಟನೆಯಾದ ಶ್ರುತಿ ಸಾಹಿತ್ಯ ಮೇಳದಿಂದ ಗುರುವಾರ  ಸಂಜೆ  ಕರ್ನಾಟಕ ಸಂಘದ ಸಭಾಂಗಣದಲ್ಲಿ ಜರುಗಿದ ದಾಸನಾಗು ವಿಶೇಷನಾಗು ಶ್ರೀ ಕನಕದಾಸರ  ಸಾರಸ್ವತ ದರ್ಶನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.    ಖ್ಯಾತ ವಾಗ್ಮಿಗಳು ಪ್ರವಚನಕಾರರಾಗಿರವ ಸುಸ್ವರಂ ನಾಗರಾಜ ಆಚಾರ್ಯರು ಮಾತನಾಡಿ ಕನಕದಾಸರು ಸಮಾಜಕ್ಕೆ ಮೌಲಿಕ ಸಾಹಿತ್ಯವನ್ನು ನೀಡಿದ ಭಕ್ತಿಯ ಸಾಕಾರ ಮೂರ್ತಿ. ಇವರ ಪರಿಪಕ್ವ ಜೀವನಾನುಭವ, ವಿವೇಕ, ಸಮಚಿತ್ತತೆ, ಮುಂತಾದ ಸಿದ್ಧಿಗಳಿಂದ ಅವರ ಸಾಹಿತ್ಯವು ಎಲ್ಲ ಕಾಲಕ್ಕೂ ನಿಲ್ಲಬಲ್ಲ ಪರಿಪಕ್ವ ಸಾಹಿತ್ಯವಾಗಿದೆ. ಮಹಾಭಾರತ ,ರಾಮಾಯಣ, ಉಪನಿಷತ್ತು, ಶೃತಿ,ಸ್ಮೃತಿ, ಶಾಸ್ತ್ರ  ಮುಂತಾದವುಗಳ ಆಧಾರದ ಮೇಲೆ ರೂಪಗೊಂಡ  ಇವರ ಕೀರ್ತನೆಗಳು  ಸಮಾಜವನ್ನು ತಿದ್ದುವ ಸಂಜೀವಿನಿಗಳಾಗಿವೆ ಎಂದು ಹೇಳಿದರು.     ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶೃತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಜಯಲಕ್ಷ್ಮಿ ...
Image
ಸುಮಧುರವಾಗಿ ಮೂಡಿಬಂದ ದಾಸನಾಗು ವಿಶೇಷನಾಗು ಕಾರ್ಯಕ್ರಮ:                                                              ನಾಗರಾಜರಾಚಾರ್ಯರ ನಿರರ್ಗಳ ಉಪನ್ಯಾಸ; ಉದಯೋನ್ಮುಖ ಸಂಗೀತಗಾರರಿಂದ  ಸುಮಧುರ ದಾಸವಾಣಿ                                                                                       ಜಯ ಧ್ವಜ ನ್ಯೂಸ್ , ರಾಯಚೂರು , ಆ.22- ಶೃತಿ ಸಾಹಿತ್ಯ ಮೇಳದಿಂದ ನಿನ್ನೆ ಗುರುವಾರ ಸಂಜೆ ಕರ್ನಾಟಕ ಸಂಘದ ಸಭಾಂಗಣದಲ್ಲಿ ಜರುಗಿದ ದಾಸನಾಗು ವಿಶೇಷನಾಗು ಎಂಬ ವಿನೂತನ ಕಾರ್ಯಕ್ರಮ ಅಪಾರ ಜನಮೆಚ್ಚುಗೆ ಗಳಿಸಿತು.                   ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿಗಳು, ಆಧ್ಯಾತ್ಮ ಚಿಂತಕರು, ಪ್ರವಚನಕಾರರಾದ ಸ್ವಸ್ವರಂ ನಾಗರಾಜ ಆಚಾರ್ಯರ     ನಿರರ್ಗಳವಾಗಿ ಸುಶ...
Image
ದಾಸನಾಗು ವಿಶೇಷನಾಗು ಕಾರ್ಯಕ್ರಮದಲ್ಲಿ ರಮೇಶ್ ಕುಲಕರ್ಣಿ ಗೆ ಸನ್ಮಾನ .                                                                                         ಜಯ ಧ್ವಜ ನ್ಯೂಸ್ , ರಾಯಚೂರು, ಆ.22-                                                 ನಗರದ ಕರ್ನಾಟಕ ಸಂಘದಲ್ಲಿ ಶ್ರುತಿ ಸಾಹಿತ್ಯ ಮೇಳದ ವತಿಯಿಂದ ಗುರುವಾರ ಸಾಯಂಕಾಲ ನಡೆದ ದಾಸನಾಗು ವಿಶೇಷನಾಗು  ಎಂಬ ವಿನೂತನ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ಜಿಲ್ಲಾ ಚುನಾಯಿತ ಪ್ರತಿನಿಧಿ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ಶೃತಿ ಸಾಹಿತ್ಯ ಮೇಳದ ಪ್ರಧಾನ ಕಾರ್ಯದರ್ಶಿಗಳಾದ  ರಮೇಶ್ ಕುಲಕರ್ಣಿ ರವರನ್ನು ಖ್ಯಾತ  ಪ್ರವಚನಕಾರರಾದ   ಸುಸ್ವರಂ ನಾಗರಾಜ ಆಚಾರ್ಯರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ  ಬ್ರಾಹ್ಮ...
Image
ವಿವಿಧ ಬೇಡಿಕೆಗಳ ಈಡೇರಿಕೆಗೆ  ಒತ್ತಾಯಿಸಿ ಅಂಗನವಾಡಿ ನೌಕರರ  ಪ್ರತಿಭಟನೆ ಜಯ ಧ್ವಜ ನ್ಯೂಸ್ , ರಾಯಚೂರು, ಆ.21-      ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರುಅಂಗನವಾಡಿ ಕಪ್ಪು ದಿನ ಪ್ರತಿಭಟನೆ  ನಡೆಸಿದರು. ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು . ಭಾರತದಲ್ಲಿ ಮಾನವ ಅಭಿವೃದ್ಧಿ ಸೂಚ್ಯಾಂಕಕ್ಕಿರುವ ಏಕೈಕ ಯೋಜನೆ ಐಸಿಡಿಎಸ್ ಮಾತ್ರ. ಈ ಯೋಜನೆಗೆ ಇಂದು ೫೦ ವರ್ಷಗಳಾಗುತ್ತಾ ಬರುತ್ತಿದೆ. ಈ ಯೋಜನೆಯನ್ನು ಸರಳೀಕರಿಸಿ ಫಲಾನುಭವಿಗಳನ್ನು ಆಕರ್ಷಿಸಲು ಸರ್ಕಾರಗಳು ಕ್ರಮಗಳನ್ನು ರೂಪಿಸಬೇಕಿತ್ತು. ಆದರೆ ಅದರ ಬದಲಾಗಿ ಸಂಕೀರ್ಣಗೊಳಿಸಲಾಗುತ್ತಿದೆ. ಯಾವುದೇ ಸೌಲಭ್ಯಗಳನ್ನು ಕೊಡದೇ ಮುಖಚರ್ಯೆ ಗುರ್ತಿಸುವ ಕ್ರಮ (ಈಖS) ನ್ನು ಅಳವಡಿಸಿದ್ದರಿಂದ ಕ್ಷೇತ್ರಮಟ್ಟದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸುವಂತಾಗಿದೆ. ೨೦೧೩ ರ ಆಹಾರ ಭದ್ರತಾ ಕಾಯ್ದೆಯ ಆಶಯವೇನೆಂದರೆ ಯಾವುದೇ ಫಲಾನುಭವಿ ಹಸಿವಿನಿಂದ ನರಳಬಾರದು ಮತ್ತು ಸುಪ್ರಿಂ ಕೋರ್ಟ್ ನಿರ್ದೇಶನದ ಆಶಯವೇನೆಂದರೆ, ಆಧಾರ ಕಾರ್ಡ್ ಇಲ್ಲ ಎಂಬ ನೆಪದಲ್ಲಿ ಸಬ್ಸಿಡಿ ಹಾಗೂ ಉಚಿತವಾಗಿ ಸಿಗುವ ಸೌಲಭ್ಯಗಳಿಂದ ಫಲಾನುಭವಿಗಳಿಗೆ ವಂಚನೆಯಾಗಬಾರದು. ಈ ಆಶಯಗಳನ್ನು ಸಂರಕ್ಷಣೆ ಮಾಡಬೇಕಾದ ಸರ್ಕಾರಗಳು ಇಂದು   ಕಡ್ಡಾಯಗೊಳಿಸುವ ಮುಖಾಂತರ ಫಲಾನುಭವಿಗಳ ಹಕ್ಕ...
Image
  ಸಚಿವ ಸಂಪುಟದಲ್ಲಿ ಒಳಮೀಸಲಾತಿ ಅಂಗಿಕಾರ ಸ್ವಾಗತಾರ್ಹ, ಶೀಘ್ರ ಜಾರಿಗೆ ಒತ್ತಾಯ- ರವೀಂದ್ರನಾಥ ಪಟ್ಟಿ.                                                                                                  ಜಯ ಧ್ವಜ ನ್ಯೂಸ್, ರಾಯಚೂರು,ಆ.21- ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ  ಪರಿಶಿಷ್ಟ ಜಾತಿ ಒಳಮೀಸಲಾತಿ ಕುರಿತು ಆಯೋಗ ನೀಡಿರುವ ವರದಿ  ಅಂಗೀಕಾರ ಮಾಡಿದ್ದು ಸ್ವಾಗತಾರ್ಹವಾಗಿದ್ದು ಶೀಘ್ರ ಮೀಸಲಾತಿ ಜಾರಿಗೊಳಿಸಬೇಕೆಂದು ರಾಜ್ಯ ಬಲಗೈ ಸಂಬಂಧಿತ ಛಲವಾದಿ, ಬ್ಯಾಗಾರ ಹಾಗೂ ಮಾಲಾ ಜಾತಿಗಳ ಒಳಮೀಸಲಾತಿ  ಹೋರಾಟ ಸಮಿತಿ ಸಂಚಾಲಕ ರವೀಂದ್ರ ನಾಥ್ ಪಟ್ಟಿ ಹೇಳಿದರು. ಅವರಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡ ಒಳಮಿಸಲಾತಿ ಜಾರಿಗೆ ಸರ್ಕಾರ ತೀರ್ಮಾನ ಮಾಡಿದ್ದು ಸ್ವಾಗತಾರ್ಹವಾಗಿದೆ ಆದರೆ ಅಲೆಮಾರಿ ಜನಾಂಗಕ್ಕೆ ಅನ್ಯಾಯವೆಸಗಲಾಗಿದ್ದು ಅವರನ್ನು ಮತ್ತೊಂದು ಪ್ರವರ್ಗ ಮಾಡಿ ಶೇ.1ರಷ್ಟು ಮೀಸಲಾತಿ ಕಲ್ಪಿಸಬೇಕೆಂದರು. ಅಲ್ಲದೆ ಶೀಘ್ರದಲ್ಲೇ ಈ ನಿರ್ಣಯವನ್ನು ಉಭಯ ಸದನದಲ್ಲಿ ಮಂಡಿಸ ಬೇಕೆಂದರು. ಯಾವುದ...
Image
  ಆ.24 ರಂದು ಛಲವಾದಿ ಮಹಾಸಭಾ ಮಹಿಳಾ ಘಟಕದಿಂದ ಪ್ರತಿಭಾ ಪುರಸ್ಕಾರ - ಅರ್ಚನಾ                  ಜಯ ಧ್ವಜ ನ್ಯೂಸ್, ರಾಯಚೂರು, ಆ.21- ಛಲವಾದಿ ಮಹಾಸಭಾ ಜಿಲ್ಲಾ ಘಟಕದಿಂದ ಆ.24ರಂದು ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ ಎಂದು ಛಲವಾದಿ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅರ್ಚನಾ ತಾಯಪ್ಪ ಸುಂಕಾರಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆ.24 ರಂದು ಬೆಳಿಗ್ಗೆ 10 ಕ್ಕೆ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮ ಉದ್ಘಾಟನೆಯನ್ನು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ನೆರವೇರಿಸಲಿದ್ದು , ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಜ್ಯೋತಿ ಬೆಳಗಿಸಲಿದ್ದು .ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ರಾಜ್ಯ ಛಲವಾದಿ ಮಹಾಸಭಾದ ರಾಜ್ಯ ಅಧ್ಯಕ್ಷರಾದ ಸಿದ್ದಯ್ಯಾ ಹಾಗೂ ರಾಜ್ಯ ಛಲವಾದಿ ಮಹಾಸಭಾದ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಈರಮ್ಮ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಲಲಿತಾ ಅರೋಲಿಕರ್ ನೆರವೇರಿಸಲಿದ್ದಾರೆ ಎಂದರು. ಅಧ್ಯಕ್ಷತೆಯನ್ನು ಜಿಲ್ಲಾ ಛಲವಾದಿ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಅರ್ಚನಾ ತಾಯಪ್ಪ ಸುಂಕಾರಿ ವಹಿಸಲಿದ್ದು ಕಾರ್ಯಕ್ರಮದಲ್ಲಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಗಣ್ಯರು, ಸಮಾಜ ಬಾಂಧವರು, ವೈದ್ಯರು ಇನ್ನಿತರರು ಪಾಲ್ಗೊಳ್ಳುತ...
Image
  ನಗರದಲ್ಲಿ ಆ.22 ರಿಂದ 31ರವರೆಗೆ ಮೈಸೂರು ಸ್ಯಾಂಡಲ್ ಸೋಪ್ ಮೇಳ:                                                                    ನಟಿ ತಮನ್ನಾ ಭಾಟಿಯಾ ರಾಯಭಾರಿಯಾದ ನಂತರ ವಹಿವಾಟು ವೃದ್ಧಿ -ಗಂಗಪ್ಪ.                                                                                   ಜಯ ಧ್ವಜ ನ್ಯೂಸ್, ರಾಯಚೂರು,ಆ.21-                 ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು ನಗರದಲ್ಲಿ ಆ.22ರಿಂದ 31ರವರೆಗೆ ಮೈಸೂರು ಸ್ಯಾಂಡಲ್ ಸೋಪ್ ಮೇಳ ಆಯೋಜಿಸುತ್ತಿದೆ ಎಂದು ಸಂಸ್ಥೆಯ ಮುಖ್ಯ ವ್ಯವಸ್ಥಾಪಕ  ಗಂಗಪ್ಪ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿಸೋಪ್ ಮೇಳ ಆಯೋಜಿಸಲಾಗುತ್ತಿದ್ದು  ಮೈಸೂರು ದರ್ಬಾರ್ ...
Image
  ಜಿಲ್ಲಾಡಳಿತದಿಂದ ಡಿ.ದೇವರಾಜ ಅರಸುರವರ 110ನೇ ಜಯಂತಿ ಆಚರಣೆ: ಡಿ.ದೇವರಾಜ ಅರಸು  ವಿಚಾರಧಾರೆಗಳು ಇಂದಿಗೂ ಪ್ರಸ್ತತ- ಅಪರ ಜಿಲ್ಲಾಧಿಕಾರಿ ಶಿವಾನಂದ  ಜಯ ಧ್ವಜ ನ್ಯೂಸ್ ,ರಾಯಚೂರು, ಆ. 20-  ಹಿಂದುಳಿದ ವರ್ಗದವರ ಏಳಿಗೆಗೆ ಕಾಳಜಿ ವಹಿಸಿ ರಾಜ್ಯದಲ್ಲಿ ಮಹತ್ವದ ಬದಲಾವಣೆಗೆ ಶ್ರಮಿಸಿದ  ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಅವರ ವಿಚಾರಧಾರೆಗಳನ್ನು ಯುವಪೀಳಿಗೆಯು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಹೇಳಿದರು.  ಅವರಿಂದು  ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆದ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಅವರ 110ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.  ರಾಜ್ಯದ ಮುಖ್ಯಮಂತ್ರಿಗಳಾಗಿ ದೀರ್ಘಕಾಲ ಆಡಳಿತ ನಡೆಸಿ, ಹಿಂದುಳಿದ ವರ್ಗದವವರನ್ನು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಅರಸು ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಉಳುವವನೇ ಭೂಮಿ ಒಡೆಯ ಕಾರ್ಯಕ್ರಮದ ಜಾರಿ ತಂದು ಭೂಮಿಯನ್ನು ಉಳುವವರನ್ನೇ ಆ ಹೊಲದ ಒಡೆಯರನ್ನಾಗಿ ಮಾಡಿದರು ಎಂದು ತಿಳಿಸಿದರು. ಅರಸು ಅವರು ಜಾರಿ ಮಾಡಿದ ಭೂಸುಧಾರಣೆ ಕಾರ್ಯಕ್ರಮದಿಂ...
Image
  ಧರ್ಮಸ್ಥಳದ ಘನತೆಗೆ ಧಕ್ಕೆ ತರುವವರ‌ ಮೇಲೆ ಕಠಿಣ ಕ್ರಮಕ್ಕೆ ಯುವ ಬ್ರಿಗೇಡ್‌ ಆಗ್ರಹ ಜಯ ಧ್ವಜ ನ್ಯೂಸ್ ,ರಾಯಚೂರು ಆ.20-  ಭಾರತ ದೇಶದ ಪ್ರಸಿದ್ಧ ಹಾಗೂ   ಪ್ರಮುಖ  ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಒಂದಾಗಿರುವ  ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯ ದಶಕಗಳಿಂದ ಸಮಾಜಮುಖಿ ಕಾರ್ಯಗಳಿಂದ,ಕೋಟ್ಯಂತರ ಭಕ್ತರ ಭರವಸೆಯ ಕೇಂದ್ರವಾಗಿದೆ ಇಂತಹ ಪವಿತ್ರ ಕ್ಷೇತ್ರದ   ಘನತೆಗೆ ಧಕ್ಕೆ ತರುತ್ತಿರುವವರನ್ನು ತಕ್ಷಣ ಬಂಧಿಸಲು ಆಗ್ರಹಿಸಿ ಯುವಾ ಬ್ರಿಗೇಡ್  ಮಾನ್ವಿ ಸಂಘಟನೆಯ ವತಿಯಿಂದ  ಜಿಲ್ಲಾಧಿಕಾರಿಗಳಿಗೆ ಇಂದು ಮನವಿಪತ್ರ ಸಲ್ಲಿಸಲಾಯಿತು. ಈ ವಿಷಯವನ್ನು ರಾಜ್ಯ ಸರ್ಕಾರ ಈಗಾಗಲೇ ಗಂಭೀರವಾಗಿ ಪರಿಗಣಿಸಿ ಎಸ್ ಐಟಿ ತನಿಖೆ ನಡೆಸುತ್ತಿರುವಾಗಲೇ ಧರ್ಮಸ್ಥಳದ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಅವಹೇಳನಕಾರಿ ಹೇಳಿಕೆಗಳು ಸಾರ್ವಜನಿಕವಾಗಿ ಅನೇಕರು ವ್ಯಕ್ತಪಡಿಸುತ್ತಿದ್ದು  ತಕ್ಷಣವೇ ಅವರನ್ನು  ಬಂಧಿಸಿ ವಿಚಾರಣೆಗೆ ಒಳಪಡಿಸಿ,  ಈ ಷಡ್ಯಂತ್ರದ ಪಿತೂರಿ ಮಾಡಿರುವ ಸಮಾಜ ಘಾತುಕರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು  ಒತ್ತಾಯಿಸಿದರು. ಈ ಸಂದರ್ಭದಲ್ಲಿ ಯುವಾಬ್ರಿಗೇಡ್  ಜಿಲ್ಲಾ ಸಂಚಾಲಕ ಬಸವರಾಜ ಬೊಮ್ಮನಾಳ್ , ರವಿ ಗೌಡ ಮಿರಾಪುರ, ನಿರಂಜನ್ ದೇವದುರ್ಗ, ಸುದೀಪ್ ಪಾಟೀಲ್, ಕೃಷ್ಣ ಮಾನ್ವಿ, ಸೇರಿದಂತೆ ಇತರರು ಇದ್ದರು....
Image
  ಆ.22 ರಿಂದ 25ರವರೆಗೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಬೃಹತ್ ರಕ್ತದಾನ ಶಿಬಿರ- ಸ್ಮಿತಾ ಅಕ್ಕ.                                                                                                                            ಜಯ ಧ್ವಜ ನ್ಯೂಸ್, ರಾಯಚೂರು,ಆ.20-            ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಆ.22 ರಿಂದ ಆ25ರವರೆಗೆ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಈಶ್ವರೀಯ ವಿಶ್ವವಿದ್ಯಾಲಯದ  ರಾಜಯೋಗಿನಿ ಸ್ಮಿತಾ ಅಕ್ಕನವರು ಹೇಳಿದರು. ಅವರಿಂದು ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಗೌರವಾನ್ವಿತ ಪೂರ್ವ ಮುಖ್ಯ ಆಡಳಿತಾಧಿಕಾರಿಯಾಗಿದ್ದ ರಾಜಯೋಗಿನಿ ದಾದಿ ಪ್ರಕಾಶ್ ಮಣಿ ಜೀ ರವರ 18ನೇ ಪುಣ್ಯತಿಥಿ ಅಂಗವಾಗಿ ವಿಶ್ವ ಭ್ರಾತೃತ್ವ ದಿನ ಆ.25ರಂದು ಆ...
Image
    ಕಲ್ಮಲಾದಲ್ಲಿ  ರಸ್ತೆ ಬದಿಯಲ್ಲಿ ನವಜಾತ ಶಿಶು ಪತ್ತೆ ಜಯ‌ ಧ್ವಜ ನ್ಯೂಸ್ , ರಾಯಚೂರು,ಆ.19-      ಆಗ ತಾನೆ ಜನಿಸಿದ ಗಂಡು    ನವಜಾತ ಶಿಶುವನ್ನು ರಸ್ತೆ ಬದಿಯಲ್ಲಿ ಬಿಸಾಡಿದ್ದು, ದಾರಿಹೋಕರು ಶಿಶುವಿನ  ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಇಂದು ತಾಲ್ಲೂಕಿನ ಕಲ್ಮಲಾ ಗ್ರಾಮದ ಕಲ್ಲೂರು ರಸ್ತೆಯಲ್ಲಿ ನಡೆದಿದೆ.  ಮಗುವನ್ನು ರಸ್ತೆ ಬದಿಯಲ್ಲಿಯೇ ಹೆತ್ತವರು ಬಿಟ್ಟು ಹೋಗಿರುವ ಸಂಶಯ ವ್ಯಕ್ತವಾಗಿದೆ. ಶಿಶುವನ್ನು ಕಲ್ಮಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಿ, ನಂತರ ರಾಯಚೂರಿನ ರಿಮ್ಸ್ ಆಸ್ಪತ್ರೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಶಿಶು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ. ಶಿಶುವಿನ ಹೆತ್ತವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಚರಣೆ ನಡೆಸಿದ್ದಾರೆ .