
ಸದ್ಭಾವನಾ ಯಾತ್ರೆ ಮೂಲಕ ಸಾಮರಸ್ಯ ಸಾರುತ್ತಿರುವ ಕಿಲ್ಲೇಮಠ - ತಿಪ್ಪರಾಜು ಹವಾಲ್ದಾರ್ ಜಯ ಧ್ವಜ ನ್ಯೂಸ್ ,ರಾಯಚೂರು.ಆ.೩೧ - ನಗರದ ಸಾವಿರ ದೇವರ ಸಂಸ್ಥಾನ ಕಿಲ್ಲೇ ಬ್ರಹನ್ಮಠದಲ್ಲಿ ೧೯ ನೇ ವರ್ಷದ ಸದ್ಬಾವನ ಪಾದಯಾತ್ರೆ ಮತ್ತು ಕೋಳಂಕಿ ಜೀವೈಕ್ಯ ಗುರುಪಾದ ಶಿವಯೇಗೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ೯೭೪ ನೆ ವರ್ಷದ ಜಯಂತಿಯ ಪರ್ವ ಸಮಾರಾಧನೆಯ ಅಂಗವಾಗಿ ಅಯೋಜನೆ ಮಾಡಿದ ಸಭೆ ಯಲ್ಲಿ ಜ್ಯೋತಿ ಬೆಳಗಿಸಿ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ತಿಪ್ಪರಾಜ ಹವಲ್ದಾರ್ ಮಾತಾನಾಡಿದರು. ಶಾಂತಿ ಸಾಮ ರಸ್ಯದ ಸಂಕೇತ ಮಠಗಳು ಪಾದಯಾತ್ರಗೆ ಜಾತಿ ಮತ ಬೇಧ ಭಾವವಿಲ್ಲದೆ ನಡಿಯುವ ಪಾದಯಾತ್ರೆ ಮಾಡುವಿಕೆ ಮೂಲಕ ಜನರಿಗೆ,ರೈತರಿಗೆ ಒಳಿತಾಗಳಿ ಎಂದು ಪ್ರಸ್ತಾಪಿಸಿದರು.ಮಾಜಿ ನಗರ ಸಭೆ ಸದಸ್ಯರಾದ ಮೋಹಮ್ಮದ ಶಾಲಂ ಮಾತಾನಾಡುತ್ತ ಪಾದಯಾತ್ರೆಯಿಂದ ಸಮಾಜದಲ್ಲಿ ಶಾಂತಿ ಸ...