Posts

Showing posts from July, 2022

ಕಲಬುರ್ಗಿ ಗುಂತಕಲ್ ರೈಲು ಹಾಗೂ ಹೈದ್ರಾಬಾದ್ ಕೊಲ್ಹಾಪೂರು ರೈಲು ಪ್ರಾರಂಭಕ್ಕೆ ಮನವಿ

Image
  ಕಲಬುರ್ಗಿ ಗುಂತಕಲ್ ರೈಲು ಹಾಗೂ ಹೈದ್ರಾಬಾದ್ ಕೊಲ್ಹಾಪೂರು ರೈಲು ಪ್ರಾರಂಭಕ್ಕೆ ಮನವಿ ರಾಯಚೂರು,ಜು.೩೧-ಕಲಬುರ್ಗಿ ಗುಂತಕಲ್ ಹಾಗೂ ಹೈದ್ರಾಬಾದ್ ಕೊಲ್ಹಾಪೂರು ನಡುವೆ ರೈಲು ಓಡಾಟ ಪುನರ್ ಪ್ರಾರಂಭಕ್ಕೆ ಸಂಸದ ಅಮರೇಶ ನಾಯಕ ರವರು ಸಿಕಂದ್ರಾಬಾದ್ ರೈಲ್ವೆ ಮ್ಯಾನೇಜರ್ ಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದು ರೈಲ್ವೇ ಬೋರ್ಡ್ ಸದಸ್ಯ ಬಾಬುರಾವ್ ತಿಳಿಸಿದ್ದಾರೆ. ಕರೋನಾ ಸಕ್ರಿಯ ಪ್ರಕರಣಗಳು ಕಡಿಮೆಯಾಗಿದ್ದು ಎಕ್ಸ್ಪ್ರೆಸ್ ರೈಲು ಓಡಾಟ ಪ್ರಾರಂಭಗೊ0ಡಿದ್ದು ದಿನ ನಿತ್ಯ ಅನೇಕ ಜನರು ಪ್ರಯಾಣಿಸುತ್ತಿದ್ದುಶ್ರಾವಣ  ಮಾಸದ ಅಂಗವಾಗಿ ವಿವಿಧ ಪುಣ್ಯ ಕ್ಷೇತ್ರಗಳಿಗೆ ತೆರಳುತ್ತಾರೆ ಅಲ್ಲದೆ ದಿನನಿತ್ಯ ಕೂಲಿ ಮಾಡುವ ಜನರು ಈ ರೈಲು ಓಡಾಟದಿಂದ ಪ್ರಯೋಜನ ಪಡೆಯಲಿದ್ದು ಕೂಡಲೆ ಪ್ರಯಾಣಿಕರ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದಾರೆ.

ಏಮ್ಸ್ ಪಡೆಯಲು ಮುಂದಿನ ದಿನಗಳಲ್ಲಿ ರೈತರು ಸಹ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ: ಜು..೩೧ ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸತ್ಯಾಗ್ರಹ –ಚಾಮರಸ ಮಾಲಿಪಾಟೀಲ

Image
   ಏಮ್ಸ್ ಪಡೆಯಲು ಮುಂದಿನ ದಿನಗಳಲ್ಲಿ ರೈತರು ಸಹ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ: ಜು..೩೧ ರಂದು  ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸತ್ಯಾಗ್ರಹ –ಚಾಮರಸ ಮಾಲಿಪಾಟೀಲ ರಾಯಚೂರು,ಜು.೩೦- ರೈತರ ಸಂಕಷ್ಟ ಕೇಳದ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ದ ಜು.೩೧ ರಂದು ಜಿಲ್ಲಾಧಿಕಾರಿಗಳ ಕಚೇರಿ ಮುoದೆ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಸಂಯುಕ್ತ ಕರ್ನಾಟಕ ಹೋರಾಟ  ಸಮಿತಿ ಸಂಚಾಲಕ ಚಾಮರಸ ಮಾಲಿ ಪಾಟೀಲ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕೇಂದ್ರ ಸರ್ಕಾರ ತನ್ನ ಹಟಮಾರಿತನ ಧೋರಣಿಯಿಂದ ರೈತರ ಮೇಲೆ ಗಧಾ ಪ್ರಹಾರ ಮಾಡುತ್ತಿದೆ ಮೂರು ಕೃಷಿ ಕಾಯ್ದೆಯನ್ನು ಜಾರಿಗೆ ತಂದಿ ತು ನಂತರ ದೇಹಲಿಯಲ್ಲಿ ನಡೆದ ರೈತರ ನಿರಂತರ ಹೋರಾಟಕ್ಕೆ ಮಣಿದು ಅದನ್ನು ವಾಪಸ್ ಪಡೆಯಿತು ಎಂದರು. ರೈತರ ಬೆಳೆದ ಬೆಳೆಗೆ ಸೂಕ್ತ ಬೆಂಬಲಬೆಲೆಯಿಲ್ಲ ಮತ್ತು ಹೋರಾಟ ನಿರತ ರೈತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಲಾಗುತ್ತದೆ ಅಲ್ಲದೆ ಲೋಕಸಭೆಯಲ್ಲಿ ವಿದ್ಯುತ್ ಮಸೂದೆಗೆ ಒಪ್ಪಿಗೆ ಪಡೆಯಲು ಮುಂದಾಗಿದ್ದು ವಿದ್ಯುತ್ ಮಸೂದೆ ಮಂಡನೆಯಾದೆ ರೆ ರೈತರ ಪಂಪಸೆಟ್‌ಗಳಿಗೆ ಮೀಟರ್ ಅಳವಡಿಕೆಯಾಗುತ್ತದೆ ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದರು. ರೈತರು ತಮ್ಮ ತಮ್ಮ ಸಂಪನ್ಮೂಲ ಬಳಸಿಕೊಂಡು ನೀರಾವರಿ ಮಾಡಿಕೊಂಡು ಬೆಳೆಬೆಳೆಯುತ್ತಾರೆ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಿದೆ ರೆ ಕೃಷಿ ಗೆ   ಭಾರಿ ಹೊಡೆತ ಬೀಳುತ್ತದೆ ಎಂದರು. ತು0ಗಭದ್ರ ನೀರಾ

ವೀರಶೈವ ಲಿಂಗಾಯಿತರನ್ನು ಕೇಂದ್ರ ಹಿಂದುಳಿದ ವರ್ಗ ಪಟ್ಟಿಯಲ್ಲಿ ಸೇರಿಸುವಂತೆ ಆಗ್ರಹಿಸಿ ಆ.೧ ರಂದು ಧರಣಿ

Image
  ವೀರಶೈವ ಲಿಂಗಾಯಿತರನ್ನು ಕೇಂದ್ರ ಹಿಂದುಳಿದ ವರ್ಗ ಪಟ್ಟಿಯಲ್ಲಿ ಸೇರಿಸುವಂತೆ ಆಗ್ರಹಿಸಿ ಆ.೧ ರಂದು ಧರಣಿ ರಾಯಚೂರು,ಜು.೩೦-ವೀರಶೈವ ಲಿಂಗಾಯಿತರನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಆ.೧ ರಂದು ನಗರದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಪಾಟೀಲ ಮಿರ್ಜಾಪೂರು ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅಂದು  ಬೆಳಿಗ್ಗೆ ನಗರದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಸಮುದಾಯದ ಎಲ್ಲರು ಸೇರಲಿದ್ದು ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುತ್ತಿದ್ದು ಸಮುದಾಯದ ಎಲ್ಲರೂ ಆಗಮಿಸಬೇಕೆಂದು ಕೋರಿದರು.  ಬಸವಾದಿ ಶರಣರ ಮಾರ್ಗದಲ್ಲಿ ನಮ್ಮ ಸಮುದಾಯ ನಡೆಯುತ್ತಿದ್ದು ನಮ್ಮ ಸುಮದಾಯದಲ್ಲೂ ಇನ್ನು ಅನೇಕರು ಭೂ ಮತ್ತು ನಿವೇಶನ ರಹಿತ, ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದು ಇದನ್ನು ಮನಗೊಂಡು ರಾಜ್ಯ ಸರ್ಕಾರ ಈಗಾಗಲೆ ನಮ್ಮ ಸಮುದಾಯಕ್ಕೆ ಹಿಂದುಳಿದ ವರ್ಗ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದು ಆದರೆ ಕೇಂದ್ರ ಸರ್ಕಾರದ ಪಟ್ಟಿಯಲ್ಲಿ ಇನ್ನು ಸೇರ್ಪಡೆಗೊಂಡಿಲ್ಲವೆ0ದರು. ನಮ್ಮ ಸಮುದಾಯದ ಅನೇಕರು ಕೇಂದ್ರ ಸರ್ಕಾರ ಸ್ವಾಮ್ಯದ ಉದ್ಯಮದಲ್ಲಿ ,ನೌಕರಿಯಲ್ಲಿ , ಶಿಕ್ಷಣ ಸಂಸ್ಥೆಯಲ್ಲಿ ಸೇರುವ ಅರ್ಹತೆಯಿದ್ದರೂ ಮೀಸಲಾತಿ ಇಲ್ಲದ್ದರಿಂದ ಹೊರಗುಳಿದಿದ್ದು ಅದನ್ನು ನೀಗಿಸಲು ಕೇಂದ

ಕೆಕೆಅರ್‌ಡಿಬಿ ಹಂಚಿಕೆಯಾಗದ ಅನುದಾನದ ಬಗ್ಗೆ ಶಾಸಕರು ಧ್ವನಿ ಎತ್ತಬೇಕು- ರಜಾಕ ಉಸ್ತಾದ್

Image
    ಕೆಕೆಅರ್‌ಡಿಬಿ ಹಂಚಿಕೆಯಾಗದ ಅನುದಾನದ ಬಗ್ಗೆ ಶಾಸಕರು ಧ್ವನಿ ಎತ್ತಬೇಕು- ರಜಾಕ ಉಸ್ತಾದ್ ರಾಯಚೂರು,ಜು.೩೦-ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ಅನುದಾನ ಬಜೆಟ್‌ನಲ್ಲಿ ಘೋಷಣೆಯಾದಂತೆ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಈ ಭಾಗದ ಶಾಸಕರು ಒತ್ತಾಯಿಸಬೇಕೆಂದು ಕಲ್ಯಾಣ ಕರ್ನಾಟಕ ಪ್ರಗತಿಪರ ಒಕ್ಕೂಟ ಸಂಚಾಲಕ ರಜಾಕ ಉಸ್ತಾದ್ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಬಜೆಟ್‌ನಲ್ಲಿ ಮೂರು ಸಾವಿರ ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ ಆದರೆ ವಲಯವಾರು ಹಂಚಿಕೆ ಮಾಡುವಾಗ ಮೂರು ಸಾವಿರ ಕೋಟಿ ರೂ. ಬದಲಾಗಿ ಎರೆಡು ಸಾವಿರ ಕೋಟಿ ರೂ. ಮಾತ್ರ ನೀಡಲಾಗಿದೆ ಎಂದರು. ನ0ಜು0ಡಪ್ಪ ವರದಿ ಅನ್ವಯ ರಾಜ್ಯದಲ್ಲಿ ೧೧೪ ಹಿಂದುಳಿದ ತಾಲೂಕಗಳಿದ್ದು ಕಲ್ಯಾಣ ಕರ್ನಾಟಕದಲ್ಲಿ ೩೧ ತಾಲೂಕುಗಳಲ್ಲಿ ೨೮ ಹಿಂದುಳೀದ ತಾಲೂಕುಗಳಿದ್ದು ಶೇ.೪೦ ರಷ್ಟು ಅನುದಾನ ಈ ಭಾಗಕ್ಕೆ ನೀಡಬೇಕು ಅದೆಲ್ಲವನ್ನು ಸರ್ಕಾರ ನಿರ್ಲಕ್ಷಿಸಿದೆ ಕೆಕೆಅರ್ ಡಿಬಿ ಮಂಡಳಿಗೆ ಅನುದಾನ ನೀಡದೆ ಮಂಡಳಿಗೆ ಹಾಗೂ ಜನರಿಗ ವಂಚಿಸಿದೆ ಎಂದರು. ಈ ಹಿಂದೆ ಸರ್ಕಾರ ಎಸ್ಸಿಪಿ ಟಿಎಸ್ಪಿ ಅನುದಾನವನ್ನು ಮಂಡಳಿಗೆ ವರ್ಗಾಸಿದ್ದಾಗ ನಾವು ಧ್ವನಿ ಎತ್ತಿದಾಗ ಅದನ್ನು ಕೈಬಿಡಲಾಯಿತು ಎಂದ ಅವರು ಕೇಂದ್ರ ಸರ್ಕಾರವು ರಾಯಚೂರು ಮತ್ತು ಯಾದಗೀರಿಯನ್ನು ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆಯಂದು ಗುರುತಿಸಿದೆ ಇತ್ತ ರಾಜ್ಯ ಸರ್ಕಾರ ಈ ಭಾಗಕ್ಕೆ ಒತ್ತು ನೀಡದೆ ದ

ಮಂತ್ರಾಲಯ: ಒಂದು ಲಕ್ಷ ಹರಿಕಥಾಮೃತಸಾರ ಪಾರಾಯಣ ಸಮರ್ಪಣೆ

Image
   ಮಂತ್ರಾಲಯ: ಒಂದು ಲಕ್ಷ ಹರಿಕಥಾಮೃತಸಾರ ಪಾರಾಯಣ ಸಮರ್ಪಣೆ ರಾಯಚೂರು,ಜು.೨೭-ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಒಂದು ಲಕ್ಷ ಹರಿಕಥಾಮೃತಸಾರ ಪಾರಾಯಣ ಸಮರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮ ಸಾನಿಧ್ಯವಹಿಸಿ ದೀಪಪ್ರಜ್ವಾಲನೆ ಮೂಲಕ ಉದ್ಘಾಟನೆ ನೆರವೇರಿಸಿದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಅನುಗ್ರಹ ಸಂದೇಶ ನೀಡಿ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.  ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ಸಹಭಾಗಿತ್ವದಲ್ಲಿ ನಡೆದ ಹರಿಕಥಾಮೃತಸಾರ ಪಾರಾಯಣ ಕಾರ್ಯಕ್ರಮದ ನೇತೃತ್ವವನ್ನು ಅನಂತಪೂರು ಯಶೋಧಮ್ಮ ವಹಿಸಿದ್ದರು. ಸುಮಾರು ೧೫೦೦ ಜನ ಸದಸ್ಯರು ಹರಿಕಥಾಮೃತಸಾರ ಪಾರಾಯಣ ಮಾಡಿದರು.

ಉಭಯ ಸಂಘಗಳ ಕಾರ್ಯಕಾರಿಣಿ ಸಮಿತಿಗಳ ನಿರ್ಣಯದಂತೆ ಪ್ರಶಸ್ತಿಗಳ ಆಯ್ಕೆ: ಜು.೨೯ ಮಸ್ಕಿಯಲ್ಲಿ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಮತ್ತು ಪತ್ರಿಕಾ ಭವನ ಉದ್ಘಾಟನೆ- ಗುರುನಾಥ

Image
  ಉಭಯ ಸಂಘಗಳ ಕಾರ್ಯಕಾರಿಣಿ ಸಮಿತಿಗಳ ನಿರ್ಣಯದಂತೆ ಪ್ರಶಸ್ತಿಗಳ ಆಯ್ಕೆ: ಜು.೨೯ ಮಸ್ಕಿಯಲ್ಲಿ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಮತ್ತು ಪತ್ರಿಕಾ ಭವನ ಉದ್ಘಾಟನೆ- ಗುರುನಾಥ ರಾಯಚೂರು,ಜು.೨೯-ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಜು.೨೯ ರಂದು ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಮಾಸ್ಕಿ ಪತ್ರಿಕಾ ಭವನ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಗುರುನಾಥ ಹಾಗೂ ರಾಯಚೂರು ರಿಪೋಟರ‍್ಸ್ ಗಿಲ್ಡ್ ಅಧ್ಯಕ್ಷ ಚೆನ್ನಬಸವಣ್ಣ ಹೇಳಿದರು. ಅವರಿಂದು ಜಂಟಿ ಸು ದ್ದಿಗೋಷ್ಟಿಯಲ್ಲಿ ಮಾತನಾಡಿ ಜು.೨೯ ರಂದು  ಬೆಳಿಗ್ಗೆ ೧೦ ಕ್ಕೆ ಮಸ್ಕಿ ಪತ್ರಿಕಾ ಭವನ ಉದ್ಘಾಟನೆ ನಂತರ ಕಾರ್ಯಕ್ರಮ ನಡೆಯುವ ಭ್ರಮರಾಂಬ ದೇವಸ್ಥಾನದವರೆಗೆ ಮೆರವಣಿಗೆ ನಡೆಯಲಿದ್ದು ಬೆಳಿಗ್ಗೆ ೧೧ ಗಂಟೆಗೆ ಬ್ರಮರಾಂಭ ದೇವಸ್ಥಾದಲ್ಲಿ ಡಿ.ವಿ.ಗುಂಡಪ್ಪ ಮಂಟಪದ ಪಂಡಿತ ಬಸವಪ್ಪ ಶಾಸ್ತಿç ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ ಸಾನಿಧ್ಯವನ್ನು ಮಸ್ಕಿ ಗಚ್ಚಿನ ಮಠದ ಶ್ರೀ.ಷ.ಬ್ರ.ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು ಉದ್ಘಾಟನೆಯನ್ನು ಜವಳಿ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ನೆರವೇರಿಸಲಿದ್ದು ಆಶಯನುಡಿಯನ್ನು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾಡಲಿದ್ದು ಅತಿಥಿ ಉಪನ್ಯಾಸವನ್ನು ವಿಜಯವಾಣಿ ಪತ್ರಿಕೆ ಸಂಪಾದಕ ಕೆ.ಎನ್.ಚೆನ್ನೆಗೌಡ ನೆರವೇರಿ

75 ನೇ ದಿನಕ್ಕೆ ಮುಂದುವರೆದ ಏಮ್ಸ್ ಹೋರಾಟ : ವಿದ್ಯಾರ್ಥಿ ಮತ್ತು ಯುವಜನರ ಬೃಹತ್ ಪ್ರತಿಭಟನಾ ಸಮಾವೇಶ

Image
75 ನೇ ದಿನಕ್ಕೆ ಮುಂದುವರೆದ ಏಮ್ಸ್ ಹೋರಾಟ  : ವಿದ್ಯಾರ್ಥಿ ಮತ್ತು  ಯುವಜನರ ಬೃಹತ್ ಪ್ರತಿಭಟನಾ ಸಮಾವೇಶ  ರಾಯಚೂರು,ಜು.26-  ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 75 ನೇ ದಿನಕ್ಕೆ ಮುಂದುವರಿದಿದೆ .ಇಂದು ವಿಶೇಷವಾಗಿ ರಾಯಚೂರು ನಗರದ ವಿದ್ಯಾರ್ಥಿ ಯುವಜನರ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು . ಶಿಕ್ಷಣ ಸಂಸ್ಥೆಗಳಾದ ಪೂರ್ಣಿಮಾ ಕಾಲೇಜು, ಸೇವಾ ಕಾಲೇಜು, ಸಫಿಯಾ ಶಿಕ್ಷಣ ಸಂಸ್ಥೆಯ ಕಾಲೇಜು, ವಿದ್ಯಾನಿಧಿ ಕಾಲೇಜು, ಸರ್ಕಾರಿ ಪದವಿ ಕಾಲೇಜು ,ಥಾಮಸ್ ಪದವಿ ಕಾಲೇಜು, ಎಸ್ ಕೆಇಎಸ್ ಪ್ಯಾರಾ ಮೆಡಿಕಲ್ ಕಾಲೇಜು ,ಹಾಗೂ ನಗರದ ಸಾವಿರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಯುವಕರು  ಸಮಾವೇಶದಲ್ಲಿ ಪಾಲ್ಗೊಂಡು ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು . ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಎಲ್ಲರನ್ನು ಉದ್ದೇಶಿಸಿ ಮಾತನಾಡುತ್ತಾ ರಾಯಚೂರಿನಲ್ಲಿ ಈಗಾಗಲೇ ಐಐಟಿಯಿಂದ ವಂಚಿತವಾಗಿದೆ ನಮ್ಮ ಜಿಲ್ಲೆಯ ಎಲ್ಲ ರಾಜಕೀಯ ಜನಪ್ರತಿನಿಧಿಗಳು ತಮ್ಮ ಇಚ್ಛಾಶಕ್ತಿಯಿಂದ ಸರ್ಕಾರದ ಮೇಲೆ ಒತ್ತಡ ತಂದು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಆಗಲೇಬೇಕು ಮತ್ತು ಸಮಗ್ರ ಅಭಿವೃದ್ದಿಯನ್ನು ನಮ್ಮ ಮುಂದಿನ ಭವಿಷ್ಯದ ಜನಾಂಗ ಕಾಣಲೇ ಬೇಕು ಎಂದು ಒತ್ತಾಯಿಸಿದರು . ಶಿಕ್ಷಣ ಸಂಸ್ಥೆಯ ರಾಕೇಶ ರಾಜಲಬಂಡಿ ಇವರು ಮಾತನಾಡುತ್ತಾ ನಮ್ಮ ಈ ಹೋರಾಟ ನಿಲ್ಲ

ನಗರಸಭೆ ಸಭಾಂಗಣದಲ್ಲಿ ೧೫ನೇ ಹಣಕಾಸಿನ ಕ್ರಿಯಾ ಯೋಜನೆ ಸಭೆ: ಏಕಾಏಕಿ ಸಭೆ ಕರೆದಿರುವ ಬಗ್ಗೆ ಸದಸ್ಯರ ಅಸಮಾಧಾನದೊಂದಿಗೆ ಪ್ರಸ್ತಾವನೆಗೆ ಒಪ್ಪಿಗೆ

Image
   ನಗರಸಭೆ  ಸಭಾಂಗಣದಲ್ಲಿ ೧೫ನೇ ಹಣಕಾಸಿನ ಕ್ರಿಯಾ ಯೋಜನೆ ಸಭೆ: ಏಕಾಏಕಿ ಸಭೆ ಕರೆದಿರುವ ಬಗ್ಗೆ ಸದಸ್ಯರ ಅಸಮಾಧಾನದೊಂದಿಗೆ ಪ್ರಸ್ತಾವನೆಗೆ ಒಪ್ಪಿಗೆ   ರಾಯಚೂರು,ಜು.೨೬-ಏಕಾಏಕಿಯಾಗಿ ಸಭೆ ಕರೆದಿರುವ ಬಗ್ಗೆ ಸದಸ್ಯರು ಒಕ್ಕೂರಲಿನಿಂದ ಪೌರಾಯುಕ್ತರ ನಡೆ ಬಗ್ಗೆ ಅಸಮಾಧನ ನಡುವೆ ಹಣಕಾಸು ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ ಪ್ರಸಂಗ ನಡೆಯಿತು. ಇಂದು ಬೆಳಿಗ್ಗೆ ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಲಲಿತಾ ಕಡಗೋಲ ಆಂಜಿನೇಯ್ಯ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ೧೫ನೇ ಹಣಕಾಸಿನ ಕ್ರಿಯಾ ಯೋಜನೆ ಪ್ರಸ್ತಾವನೆ  ಆಡಳಿತಾತ್ಮಕ ಮಂಜೂರಾತಿಗೆ  ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ಬಗ್ಗೆ ಕರೆದಿದ್ದ ಸಭೆಯಲ್ಲಿ ನಗರಸಭೆ ಸದಸ್ಯರು ಒಕ್ಕೂರಲಿನಿಂದ ಪೌರಾಯುಕ್ತರ ನಡೆಯ ಬಗ್ಗೆ ಅಸಮಾಧನಾ ವ್ಯಕ್ತಪಡಿಸಿದರು. ಪ್ರಾರಂಭದಲ್ಲಿ ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ ಪ್ರಸ್ತಾವಿಕವಾಗಿ ಮಾತನಾಡಿ ನಗರದ ಒಟು ೩೫ ವಾರ್ಡ್ಗಳಿಗೆ ಒಟ್ಟು ೧೧.೭೨ ಕೋಟಿ ರೂ ವಿವಿಧ ಕಾಮಗಾರಿಗಳೀಗೆ ಮೀಸಲಿಡಲಾಗುತ್ತಿದ್ದು ತಲಾ ವಾರ್ಡಿಗೆ ಒಟ್ಟು ೧೩ ಲಕ್ಷ ರೂ ವಿಂಗಡಿಸಲಾಗಿದ್ದು ಉಳೀದ ಹಣದಲ್ಲಿ ಇತರೆ ಕಾಮಗಾರಿ ಹಂಚಿಕೆ ಮಾಡಲಾಗುತ್ತದೆ ಎಂದರು. ನಗರಸಭೆ ಹಿರಿಯ ಸದಸ್ಯ ಜಯಣ್ಣ ಮಾತನಾಡಿ ಸದಸ್ಯರ ತಮ್ಮ ವಾರ್ಡಿನ ಬೇಕು ಬೇಡಗಳ ಬಗ್ಗೆ ತಾವು ಚರ್ಚಿಸದೆ ಏಕಾಏಕಿಯಾಗಿ ಜಿಲ್ಲಾಧಿಕಾರಿಗಳ ಆಡಳಿತಾತ್ಮಕ ಅನುಮೋದನೆಗಾಗಿ ನಮ್ಮ ಸಭೆ ಕರೆದರೆ ಹೇಗೆ ಮೊದಲು ಈ ಬಗ್ಗೆ ಸದಸ್ಯರನ್ನು ಏಕೆ ವಿಶ್ವಾಸಕ್

ರಾಯಚೂರು ಜಿಲ್ಲೆ ಹರಿದಾಸರ ತೊಟ್ಟಿಲು: ಯತಿಗಳಿಗೆ ಚಾತುರ್ಮಾಸ್ಯ ಅತ್ಯಂತ ಪರ್ವಕಾಲ-ಶ್ರೀ ವಿದ್ಯಾವಿಜಯ ತೀರ್ಥರು

Image
  ರಾಯಚೂರು ಜಿಲ್ಲೆ ಹರಿದಾಸರ ತೊಟ್ಟಿಲು: ಯತಿಗಳಿಗೆ ಚಾತುರ್ಮಾಸ್ಯ ಅತ್ಯಂತ ಪರ್ವಕಾಲ-ಶ್ರೀ ವಿದ್ಯಾವಿಜಯ ತೀರ್ಥರು ರಾಯಚೂರು,ಜು.೨೫-ಯತಿಗಳಿಗೆ ಚಾತುರ್ಮಾಸ್ಯ ಅತ್ಯಂತ ಪರ್ವಕಾಲ ಎಂದು ಶ್ರೀವ್ಯಾಸರಾಜ ಮಠದ ಮಠಾಧೀಶರಾದ ಶ್ರೀ ವಿದ್ಯಾವಿಜಯತೀರ್ಥರು ನುಡಿದರು. ಅವರಿಂದು ನಗರದ ಜವಾಹರ ನಗರ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಚಾತುರ್ಮಾಸ್ಯ ದೀಕ್ಷೆ ಕೈಗೊಳ್ಳುವ ಮುನ್ನ ದಿನವಾದ ಇಂದು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು. ಎರೆಡು ತಿಂಗಳಗಳ ಕಾಲ ನಗರದಲ್ಲಿ ಚಾತುರ್ಮಾಸ್ಯ ಕೈಗೊಳ್ಳುತ್ತಿದ್ದು ದಿನ ನಿತ್ಯ ಭಗವಂತನ ಚಿಂತನೆ ಪಾಠ, ಪ್ರವಚನ, ಪೂಜೆ ನಡೆಯಲಿದ್ದು ಭಕ್ತರು ಚಾತುರ್ಮಾಸ್ಯದ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ತಾವು ನಗರದಲ್ಲಿ ಚಾತುರ್ಮಾಸ್ಯ ಕುಳಿತುಕೊಳ್ಳುವುದು ಎರೆಡು ದಿನಗಳ ಹಿಂದೆ ನಿಶ್ಚಯವಾಯಿತು ಎಂದ ಅವರು ರಾಯರ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನಾವಿಲ್ಲಿ ಚಾತುರ್ಮಾಸ್ಯ ಕುಳಿತುಕೊಳ್ಳಲು ಸಕಲ ವ್ಯವಸ್ಥೆ ಮಾಡಿದ್ದು ಪ್ರತಿ ವರ್ಷವು ಅವರು ನನಗೆ ಚಾತುರ್ಮಾಸ್ಯ ಎಲ್ಲಿಬೇಕಾದರೂ ಕುಳಿತುಕೊಂಡರು ಸಕಲ ವ್ಯವಸ್ಥೆ ಮಾಡುವುದಾಗಿ ತಿಳಿಸುತ್ತಾ ಬಂದಿದ್ದಾರೆ0ದರು. ರಾಯಚೂರು ರಾಯರ ಚೂರಾಗಿದ್ದು ಅವರ ಮೃತ್ತಿಕಾ ಬೃಂದಾವನ ಸನ್ನಿದಾನದಲ್ಲಿ ಚಾತುರ್ಮಾಸ್ಯ ಕುಳಿತುಕೊಳ್ಳುವುದು ಒಂದು ಸೌಭಾಗ್ಯವೆಂದ ಅವರು ಚಾತುರ್ಮಾಸ್ಯದಲ್ಲಿ ನಗರದ ವಿವಿಧೆಡೆ ಪ್ರವಚನ ಕಾರ್ಯಕ್ರಮ ನಡೆಯುತ್ತದೆ ಎಂದರು. ನಗರಕ್ಕಾಗಮಿಸಿದ ಶ್ರೀ

ಜಿಲ್ಲಾ ಉಪ್ಪಾರ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ : ಸಮಾಜದ ಅಭಿವೃದ್ಧಿಗಾಗಿ ಮಹಿಳೆಯರು ಸಂಘಟಿತರಾಗಿ: ವಿಷ್ಣು ಲಾತೂರ್

Image
  ಜಿಲ್ಲಾ ಉಪ್ಪಾರ ಮಹಿಳಾ ಘಟಕ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ  : ಸಮಾಜದ ಅಭಿವೃದ್ಧಿಗಾಗಿ ಮಹಿಳೆಯರು ಸಂಘಟಿತರಾಗಿ: ವಿಷ್ಣು ಲಾತೂರ್ ರಾಯಚೂರು,ಜು.24- ಸಮಾಜದ ಅಭಿವೃದ್ಧಿಗಾಗಿ ಮಹಿಳೆಯರು ಸಂಘಟಿತರಾಗಬೇಕು. ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಬಾಲ್ಯ ವಿವಾಹಗಳಿಗೆ ಪ್ರೋತ್ಸಾಹಿಸುವುದು ಸಲ್ಲದು ಎಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ನಗರದ ಉಪ್ಪಾರವಾಡಿ ಬಡಾವಣೆಯ ಶ್ರೀಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಉಪ್ಪಾರ ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಹುದ್ದೆಯಲ್ಲಿದ್ದ ಮಹಿಳೆಯರಿಗೆ ಅನ್ಯ ಸಮಾಜದವರಿಂದ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಟದ ಮೂಲಕ ಆತ್ಮಸ್ಥೈರ್ಯ ತುಂಬುವ ಕೆಲಸ ಮಹಿಳಾ ಸಂಘಟನೆಯಿಂದ ನಡೆಯಬೇಕು ಎಂದು ಕರೆ ನೀಡಿದರು. ನಗರದ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಉಪ್ಪಾರ ಸಮಾಜದ ಅಭಿವೃದ್ಧಿಗಾಗಿ ಹೆಚ್ಚಿನ ಗಮನಹರಿಸಿದ್ದಾರೆ. ಅವರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉಪ್ಪಾರ ಸಮಾಜದವರನ್ನು ಗುರುತಿಸಲು ಶಾಸಕರು ಮುಂದಾಗಬೇಕು. ಮುಂದಿನ ಚುನಾವಣೆಗಳಲ್ಲಿ ಉಪ್ಪಾರ ಸಮಾಜದವರಿಗೆ ಸ್ಪರ್ಧೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ನಗರದ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಉಪ್ಪಾರ ಸಮಾಜಕ

ಕಾಮಿಕಾ ಏಕಾದಶಿ ಮಹಾವಿಷ್ಣುವಿಗೆ ಸಮರ್ಪಿತವಾಗಿದೆ- ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥರು

Image
ಕಾಮಿಕಾ ಏಕಾದಶಿ ಮಹಾವಿಷ್ಣುವಿಗೆ ಸಮರ್ಪಿತವಾಗಿದೆ- ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥರು . ರಾಯಚೂರು,ಜು.24-   ಈ ದಿನವು ಮಹಾವಿಷ್ಣುವಿನ ಆರಾಧನೆಗೆ ಅತ್ಯಂತ ಪವಿತ್ರ ದಿನವಾಗಿದೆ ಎಂದು ಕಣ್ವ ಮಠದ ಮಠಾಧೀಶರಾದ ಶ್ರೀ ವಿದ್ಯಾ ಕಣ್ವವಿರಾಜ ತೀರ್ಥರು ನುಡಿದರು.  ಅವರು ಹುಣಸಿಹೊಳೆಯಲ್ಲಿ ತಮ್ಮ ಚಾತುರ್ಮಾಸ್ಯ ಅನುಗ್ರಹ  ಸಂದೇಶದಲ್ಲಿ ಕಾಮಿಕಾ ಏಕಾದಶಿಯೂ ಸಹ ಮಹಾವಿಷ್ಣುವಿಗೆ ಸಮರ್ಪಿತವಾಗಿದೆ. ಎಲ್ಲ ಏಕಾದಶಿಗಳಂತೆ ಇಂದು ಉಪವಾಸ, ವಿಷ್ಣುವಿನ ಅರ್ಚನೆ, ಉಪಾಸನೆ, ಧ್ಯಾನ, ರಾತ್ರಿ ಜಾಗರಣೆಗಳನ್ನು ಮಾಡುವುದರಿಂದ ಪಾಪರಾಶಿಗಳೆಲ್ಲವು ನಾಶವಾಗಿ ಮೋಕ್ಷ ಲಭಿಸುವಂತಾಗುತ್ತದೆ ಎಂದರು. ವರ್ಷದಲ್ಲಿ ಬರುವ ಪ್ರತಿಯೊಂದು ಏಕಾದಶಿಗೂ ಕೂಡ ತನ್ನದೇ ಆದ ವೈಶಿಷ್ಟ್ಯ ಮಹತ್ವ ಇದೆ .ಇಂದಿನ  ಏಕಾದಶಿಯೂ ಕೂಡ ಬಹಳಷ್ಟು ಮಹತ್ವವನ್ನು ಪಡೆದುಕೊಂಡಿದೆ. ಈ ಕಾಮಿಕ ಏಕಾದಶಿಯ ದಿನ ಈ ದೀಪವನ್ನು ಬೆಳಗಿಸಿ ಉಪವಾಸವನ್ನು ಆಚರಿಸಿದರೆ ಸಮಸ್ತ ಅಭೀಷ್ಟಗಳು ಕೂಡ ನೆರವೇರುತ್ತವೆ.  ಆಷಾಡ ಮಾಸದಲ್ಲಿ ಬರುವ ಈ ಕಾಮಿಕ ಏಕಾದಶಿ ಆಚರಣೆಯಿಂದ ಫಲಗಳು  ಏಕಾದಶಿಯ ವ್ರತವನ್ನು ಆಚರಿಸುವ ಜೀವಿಯ ಸಕಲ ಪಾಪಗಳು ತೊಲಗಿಸುವ ಸಕಲ ಶಕ್ತಿ ಸಾಮರ್ಥ್ಯಗಳು ಇವೆ . ಅಂತೆಯೇ ನಾರದ ಮುನಿಯು  ಈ ಕಾಮಿಕ ಏಕಾದಶಿಯು ಎಲ್ಲ ಏಕಾದಶಿಗಳಿಗಿಂತಲೂ ಅತ್ಯಂತ ಮಹತ್ವವಾದದ್ದು ಮತ್ತು ಉನ್ನತ ಸ್ಥಾನವನ್ನು ಪಡೆದುಕೊಂಡಿದೆ .  ಪುರುಷೋತ್ತಮನಾದ ಆ ಪರಮಾತ್ಮನನ್ನು ಭಕ್ತಿ, ಶ್ರದ್ಧೆಯಿಂದ ಪೂಜಿಸಿದರೆ ಸಿಗುವ ಲಾಭಗಳು

ಪಾರಸಮಲ್ ಸುಖಾಣಿಯವರು ಕೇವಲ ಪತ್ರ ಬರವಣಿಗೆಗೆ ಸೀಮಿತರಾಗಿದ್ದಾರೆ: ಜು.೨೬ಕ್ಕೆ ಏಮ್ಸ್ ಹೋರಾಟ ೭೫ನೇ ದಿನ ಅಂಗವಾಗಿ ಹತ್ತು ಸಾವಿರ ಜನರ ರಕ್ತ ಸಹಿಯುಳ್ಳ ಮನವಿ ಪತ್ರ ಸಿಎಂಗೆ ಸಲ್ಲಿಕೆ–ಕಳಸ

Image
     ಪಾರಸಮಲ್ ಸುಖಾಣಿಯವರು ಕೇವಲ ಪತ್ರ ಬರವಣಿಗೆಗೆ ಸೀಮಿತರಾಗಿದ್ದಾರೆ: ಜು.೨೬ಕ್ಕೆ ಏಮ್ಸ್ ಹೋರಾಟ ೭೫ನೇ ದಿನ ಅಂಗವಾಗಿ ಹತ್ತು ಸಾವಿರ ಜನರ ರಕ್ತ ಸಹಿಯುಳ್ಳ ಮನವಿ ಪತ್ರ ಸಿಎಂಗೆ ಸಲ್ಲಿಕೆ–ಕಳಸ ರಾಯಚೂರು,ಜು.೨೪-ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಜಿಲ್ಲೆಗೆ ಮಂಜೂರು ಮಾಡುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟ ಜು.೨೬ ಕ್ಕೆ ೭೫ನೇ ದಿನಕ್ಕೆ ಕಾಲಿಡುತ್ತಿರುವ ನಿಮಿತ್ಯ ಅಂದು ಹತ್ತು ಸಾವಿರ ಜನರ ರಕ್ತದಿಂದ ಮಾಡಿರುವ ಸಹಿಯುಳ್ಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಸಲ್ಲಿಸಲಾಗುತ್ತದೆ ಎಂದು ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ ಕಳಸ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕಳೆದ ೭೩ ದಿನಗಳಿಂದ ಏಮ್ಸ್ಗಾಗಿ ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದ್ದು ಜು.೨೬ಕ್ಕೆ ೭೫ನೇ ದಿನಕ್ಕೆ ಹೋರಾಟ ಕಾಲಿಡಲಿದ್ದು ಅಂದು ಸಹಸ್ರಾರು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು, ಹೋರಾಟಗಾರರು ಮುಂತಾದವರು ಭಾಗವಹಿಸಲಿದ್ದು ಈಗಾಗಲೆ ಸುಮಾರು ಒಂಬತ್ತು ಸಾವಿರ ಜನರು ರಕ್ತದಿಂದ ಮಾಡಿರುವ ಸಹಿಯ ಜೊತೆಗೆ ಅಂದು ಒಂದು ಸಾವಿರ ಜನರಿಂದ ಮಾಡಲಿರುವ ರಕ್ತದ ಸಹಿ ಸೇರಿಸಿ ಒಟ್ಟು ಹತ್ತು ಸಾವಿರ ಜನರ ರಕ್ತದಿಂದ ಮಾಡಿರುವ ಸಹಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಪತ್ರ ಸಲ್ಲಿಸಲಿದ್ದೇವೆಂದರು. ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಕಳೆದರೂ ಜಿಲ್ಲೆಗೆ

ಸೋನಿಯಾ ಗಾಂಧಿಗೆ ಇಡಿ ವಿಚಾರಣೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

Image
  ಸೋನಿಯಾ ಗಾಂಧಿಗೆ ಇಡಿ ವಿಚಾರಣೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ರಾಯಚೂರು,ಜು.೨೨-ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಗೆ ಇಡಿ ವಿಚಾರಣೆಗೊಳಪಡಿಸಿದ್ದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.  ಬೆಳಿಗ್ಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಮಾತನಾಡಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಲೆಕ್ಕ ಪತ್ರ ಕುರಿತು ವಿನಾಕಾರಣ ಜಾರಿ ನಿರ್ದೇಶನಾಲಯ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ವಿಚಾರಣೆಗೊಳಪಡಿಸಿದ್ದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದ ಅವರು ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನ್ನ ಇಷ್ಟಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ ಎಂದು ಅರೋಪಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ ಮಾತನಾಡಿ ಕಾಂಗ್ರೆಸ್ ಕೊಡುಗೆಯನ್ನು ಬಿಜೆಪಿ ಸಹಿಸುತ್ತಿಲ್ಲ ದೇಶಕ್ಕೆ ಸ್ವಾತಂತ್ರö್ಯ ಬಂದ ನಂತರ ಭಾರತದಲ್ಲಿ ಬದಲಾವಣೆ ತರುವಲ್ಲಿ ಕಾಂಗ್ರೆಸ್ ನಾಯಕರ ಕೊಡುಗೆ ಅನನ್ಯವಾಗಿದ್ದು ಕಾಂಗ್ರೆಸ್ ಪಕ್ಷದ ಬಲ ಕುಂದಿಸಲು ಬಿಜೆಪಿ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು  ವಿನಾಕಾರಣ ವಿಚಾರಣೆ ನೆಪದಲ್ಲಿ ನಮ್ಮ ನಾಯಕರಿಗೆ ಕಿರುಕುಳ ನೀಡುತ್ತಿದೆ ಎಂದರು. ಗ್ರಾಮೀಣ ಶಾಸಕ ಬಸನಗೌಡ ದದ್ದಲ ಮಾತನಾಡಿ ಕೇಂದ್ರ ಸರ್ಕಾರ ತನ್ನ ಅಧಿಕಾರ ದುರು

ತುರುಕನಡೋಣಿ ಗ್ರಾಮದ ಜಯಶೀಷಾಗೆ ಚಿಕಿತ್ಸೆಗೆ ಪಾಲಕರ ಮನವಿ: ಕಿಡ್ನಿ ವೈಫಲ್ಯಕ್ಕೊಳಗಾದ ಬಾಲಕಿಗೆ ನೆರವಿಗೆ ಕೋರಿಕೆ

Image
    ತುರುಕನಡೋಣಿ ಗ್ರಾಮದ ಜಯಶೀಷಾಗೆ ಚಿಕಿತ್ಸೆಗೆ ಪಾಲಕರ ಮನವಿ: ಕಿಡ್ನಿ ವೈಫಲ್ಯಕ್ಕೊಳಗಾದ ಬಾಲಕಿಗೆ ನೆರವಿಗೆ ಕೋರಿಕೆ ರಾಯಚೂರು,ಜು.೨೨-ಕಿಡ್ನಿ ವೈಫಲ್ಯಕ್ಕೊಳಗಾದ ತಮ್ಮ ಮಗಳಾದ ಜಯಶೀಷಾಗೆ  ಆಕೆಯ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಬಾಲಕಿ ತಂದೆ ತಾಲೂಕಿನ ತುರುಕನದೋಣಿ ಗ್ರಾಮದ ಮೇಷಕ್ ಕೋರಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ತಮ್ಮ ಮಗಳು ನಾಲ್ಕನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಆಕೆಯ ಕಿಡ್ನಿ ವೈಫಲ್ಯವಾಗಿದ್ದು ಆಕೆಯೆನ್ನು ಈಗಾಗಲೆ ರಿಮ್ಸ್ ಮತ್ತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಸುಮಾರು ೧೫ ಲಕ್ಷ ರೂ ವೆಚ್ಚವಾಗಲಿದೆ ಎಂದು ತಜ್ಞ ವೈದ್ಯರು ತಿಳಿಸಿದ್ದು ಕೂಲಿ ಕೆಲಸ ಮಾಡುವ ನಮಗೆ ಅಷ್ಟೊಂದು ಹಣ ಹೊಂದಿಸಲು ಆಗದಿರುವುದರಿಂದ ದಾನಿಗಳು ಅಥವಾ ಸಂಸದರ ಮತ್ತು ಶಾಸಕರು ನೆರವು ನೀಡಬೇಕೆಂದು ಮನವಿ ಮಾಡಿದರು. ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ತಿಪ್ಪಣ್ಣ ಮಾತನಾಡಿ ಬಾಲಕಿಯ ವೈದ್ಯಕೀಯ ವೆಚ್ಚ ಭರಿಸಲು ದಾನಿಗಳು ಮುಂದಾಗಬೇಕೆ0ದು ಮನವಿ ಮಾಡಿದ ಅವರು ಬಾಲಕಿಯ ಶಾಲೆಗೆ ಹೋಗುತ್ತಿದ್ದು ಅಕೆಯ ಬಾಳಿಗೆ ದಾನಿಗಳು, ಸರ್ಕಾರ ಬೆಳಕಾಗಬೇಕೆಂದು ಹೇಳಿದರು. ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವವರು ಅವರ  ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಟಮಾರಿ ಶಾಖೆಯ ಖಾತೆ ಸಂಖ್ಯೆ ೧೦೭೪೪೧೦೧೧೦೫೯೨೨ ಐಎಫೆಸ್‌ಸಿ ಕೋಡ್ ಸಂಖೆ ಪಿಕೆಜಿಬಿ೦೦೧೦೭೪೪ ನೆರವು ನೀಡಬೇಕೆಂದು

ಟ್ರಾಕ್ಟರ್ ಚಲಾಯಿಸಿ ನೈರ್ಮಲ್ಯ ವಾಹನಗಳಿಗೆ ಚಾಲನೆ ನೀಡಿದ ಶಾಸಕ ಡಾ.ಶಿವರಾಜ ಪಾಟೀಲ.

Image
  ಟ್ರಾಕ್ಟರ್ ಚಲಾಯಿಸಿ ನೈರ್ಮಲ್ಯ ವಾಹನಗಳಿಗೆ ಚಾಲನೆ ನೀಡಿದ ಶಾಸಕ ಡಾ.ಶಿವರಾಜ ಪಾಟೀಲ.      ರಾಯಚೂರು,ಜು.21-ಟ್ರಾಕ್ಟರ್ ಚಲಾಯಿಸಿ ನೈರ್ಮಲ್ಯ ವಾಹನಗಳಿಗೆ ಶಾಸಕ ಡಾ.ಶಿವರಾಜ ಪಾಟೀಲ ಚಾಲನೆ ನೀಡಿದರು.                         ಬೆಳಿಗ್ಗೆ ನಗರಸಭೆ ಆವರಣದಲ್ಲಿ ನಗರದಲ್ಲಿ ಸ್ವಚ್ಚತೆ ಹಾಗೂ ನೈರ್ಮಲ್ಯ ಕಾಪಾಡಲು ಖರೀದಿಸಲಾದ ಐದು ಟ್ರ್ಯಾಕ್ಟರ್ ಮತ್ತು ಒಂದು ಮಿನಿ ಜೆಸಿಬಿಗೆ ಪೂಜೆ ನೆರವೇರಿಸಲಾಯಿತು.                             ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ್ ಆಂಜಿನೇಯ್ಯ ಮತ್ತು ಉಪಾಧ್ಯಕ್ಷರಾದ  ನರಸಮ್ಮ ನರಸಿಂಹಲು  ಮಾಡಗಿರಿ ಮತ್ತು  ನಗರ ಸಭೆ ಸದಸ್ಯರು, ಪೌರಾಯುಕ್ತರಾದ ಗುರುಲಿಂಗಪ್ಪ, ನಗರಸಭೆ ಅಧಿಕಾರಿಗಳಾದ ಮಲ್ಲಿಕಾರ್ಜುನ ಸೇರಿದಂತೆ  ಇನ್ನಿತರರು  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಜು.23 ರಂದು ಹುಣಸಿಹೊಳೆಯಲ್ಲಿ ಕಣ್ವ ಮಠಾಧೀಶರಾದ ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯ ವ್ರತ ಸಂಕಲ್ಪ .

Image
  ಜು.23 ರಂದು ಹುಣಸಿಹೊಳೆಯಲ್ಲಿ ಕಣ್ವ ಮಠಾಧೀಶರಾದ  ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯ ವ್ರತ ಸಂಕಲ್ಪ . ರಾಯಚೂರು,ಜು.21- ಶುಭಕೃತ ನಾಮ ಸಂವತ್ಸರದಲ್ಲಿ ಶ್ರೀ ಶ್ರೀ 1008 ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀ ಪಾದಂಗಳವರು ತಮ್ಮ ತೃತೀಯ ಚಾತುರ್ಮಾಸ್ಯ ವ್ರತವನ್ನುಹುಣಸಿಹೊಳೆಯಲ್ಲಿ ಆಚರಿಸಲು ಸಂಕಲ್ಪಿಸಿದ್ದಾರೆ. ಜುಲೈ 23ರಂದು ಬೆಳಿಗ್ಗೆ ಕೃಷ್ಣನದಿತೀರ ವೀರಘಟ್ಟದಲ್ಲಿ ದಂಡೋಧಕ ಸ್ನಾನ, ಶೋಭಾಯಾತ್ರೆಯೊಂದಿಗೆ ಶ್ರೀಮಠಕ್ಕೆ ಆಗಮನ ಸಂಕಲ್ಪ, ಸಂಸ್ಥಾನ ಪೂಜೆ, ಪಂಡಿತರಿಂದ ಪ್ರವಚನ ವಿವಿಧ ಬಜನಾ ಮಂಡಳಿಗಳಿಂದ ಭಜನೆ ನಂತರ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ.         ಸುಮಾರು ಎರಡು ಶತಮಾನಗಳ ಇತಿಹಾಸವಿರುವ ಶುಕ್ಲ ಯಜುರ್ವೇದಿಯ ಶಾಖ ಮಠವಾದ ಸುರಪುರ ತಾಲೂಕಿನ ಶ್ರೀಮದ್ ಕಣ್ವಮಠ ಮೂಲ ಮಹಾಸಂಸ್ಥಾನ ಹುಣಸಿಹೊಳೆಯಲ್ಲಿ ಪೀಠಾಧಿಪತಿಗಳಾದ ಶ್ರೀ ಶ್ರೀ 1008 ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀ ಪಾದಂಗಳವರು ಶುಭ ಕೃತ ನಾಮ ಸಂವತ್ಸರದ ತಮ್ಮ ತೃತೀಯ ಚಾತುರ್ಮಾಸ್ಯ  ವ್ರತವನ್ನು ಅನುಷ್ಠಾನ ಮಾಡಲಿದ್ದಾರೆ.                                              ಜುಲೈ 23 ರಿಂದ ಸೆಪ್ಟಂಬರ್ 10 ಅನಂತ ಚತುರ್ದಶಿಯವರೆಗೆ ಅನುಗ್ರಹ ಮುಖಿಗಳಾದ ಶ್ರೀಪಾದಂಗಳವರು ವಿಠಲ ಕೃಷ್ಣನಿಗೆ ವಿಶೇಷ ಪೂಜೆ ಪುನಸ್ಕಾರ ಗೋಷ್ಠಿ, ಉಪನ್ಯಾಸ ಧಾರ್ಮಿಕ ಕಾರ್ಯಕ್ರಮಗಳು ಜ್ಞಾನ ಸತ್ರಗಳನ್ನು ಹಮ್ಮಿಕೊಳ್ಳಲಿದ್ದಾರೆ ಮತ್ತು ಶ್ರೀ ಕೃಷ್ಣ

ವಾಡ್ ನಂ.17 ರಲ್ಲಿ ಕರೋನಾ ಬೂಸ್ಟ್ ರ್ ಡೋಸ್ ಲಸಿಕೆ ವಿತರಣೆ.

Image
  ವಾಡ್ ನಂ.17 ರಲ್ಲಿ ಕರೋನಾ ಬೂಸ್ಟ್ ರ್ ಡೋಸ್ ಲಸಿಕೆ ವಿತರಣೆ.                            ರಾಯಚೂರು,ಜು.21- ನಗರದ ವಾರ್ಡ್ ನಂ.17 ರಲ್ಲಿ ಕರೋನಾ ಬೂಸ್ಟ್ ರ್ ಡೋಸ್ ಲಸಿಕೆ ಹಾಕಲಾಯಿತು.                                                    ಶ್ರೀ ಶೃಂಗೇರಿ ಶಂಕರಮಠದಲ್ಲಿ ನಡೆದ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ಕರೋನಾ ಒಂದು ಮತ್ತು ಎರಡನೆ ಡೋಸ್ ಲಸಿಕೆ ಪಡೆದವರು ಬೂಸ್ಟ್ ರ್ ಡೋಸ್ ಲಸಿಕೆ ಹಾಕಿಸಿಕೊಂಡರು.                                                                                ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಈ. ಶಶಿರಾಜ,   ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೊಪ್ರೇಶ ಸೌದಿಕರ್ ಬಡಾವಣೆಯ ಹನುಮೇಶ ಗಾರಲದಿನ್ನಿ, ವಿಠಲ್, ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು,  ಆಶಾ ಕಾರ್ಯಕರ್ತೆಯರು ಇನ್ನಿತರರು ಇದ್ದರು. ನೂರಾರು ಜನರು ಲಸಿಕೆಯ ಪ್ರಯೋಜನೆ ಪಡೆದರು.

ಸಿದ್ಧರಾಮಯ್ಯ ಹುಟ್ಟುಹಬ್ಬ :ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆ.

Image
  ರಾಯಚೂರು,ಜು.19- ಆಗಸ್ಟ್ 3 ರಂದು ಸಿದ್ಧರಾಮಯ್ಯ ಅವರ  ಹುಟ್ಟುಹಬ್ಬವನ್ನು  ಆಚರಿಸುತ್ತಿರುವದರಿಂದ ಇಂದು ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಈ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯ ವೀಕ್ಷಕರು ಹಾಗೂ ಕೆಪಿಸಿಸಿ ಕಾರ್ಯದರ್ಶಿಗಳಾದ ಶರಣುಕುಮಾರ ಮೋದಿ ಅವರು ಮಾತನಾಡಿ, ರಾಜ್ಯದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜನ್ಮದಿನಾಚರಣೆಯನ್ನು ದಾವಣಗೆರೆಯಲ್ಲಿ ಅಭಿಮಾನಿಗಳು ಆಚರಿಸುತ್ತಿರುವದು ಸಂತೋಷದ ಸಂಗತಿ. ಹೀಗಾಗಿ ನಾವೆಲ್ಲರೂ ನಮ್ಮ ನಾಯಕರ ಜನ್ಮದಿನೋತ್ಸವವನ್ನು ವಿಜೃಂಭಣೆಯಿ೦ದ ಆಚರಿಸಿ ಪಾಲ್ಗೊಳ್ಳುವದು ಅವಶ್ಯವಾಗಿದೆ. ಹೀಗಾಗಿ ನಾವೆಲ್ಲರೂ ಪಾಲ್ಗೊಳ್ಳೋಣ ಎಂದು ಹೇಳಿದರು. ನಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಿ.ವಿ.ನಾಯಕ ಅವರು ಮಾತನಾಡಿ, ಜಿಲ್ಲೆಯಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ ಎಂದು ಹೇಳಿದರು. ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಶರಣಪ್ಪ ಮಟ್ಟೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ, ಮುಖಂಡರುಗಳಾದ ಜಯಣ್ಣ, ಕೆ.ಶಾಂತಪ್ಪ, ಜಿ.ಬಸವರಾಜರೆಡ್ಡಿ, ಜಯವಂತರಾವ ಪತಂಗೆ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಜಿ.ಶಿವಮೂರ್ತಿ, ಅಬ್ದುಲ್ ಕರೀಂ, ಆಂಜನೇಯ ಕುರುಬದೊಡ್ಡಿ, ಅಸ್ಲಂ ಪಾಷಾ, ಅರುಣ ದೋತರಬಂಡಿ, ನಾಗೇಂದ್ರಪ್ಪ, ನರಸಿಂಹ ನಾಯಕ, ರಾಮಕೃಷ್ಣ ನಾಯಕ, ಶಂಕರ ಕಲ್ಲೂರು, ಜಾ

ಈರಣ್ಣ ಬೆಂಗಾಲಿ ರಚಿತ "ಸಾಧನಾಗಿರಿ ಅರುಣ ನಂದಗಿರಿ" ಪುಸ್ತಕ ಬಿಡುಗಡೆ: ದಿ.ಅರುಣ ನಂದಗಿರಿ ಓರ್ವ ಅತ್ಯತ್ತಮ ವ್ಯಂಗ್ಯ ಚಿತ್ರಕಾರರಾಗಿದ್ದರು-ಎಂ.ಸ೦ಜೀವ

Image
  ಈರಣ್ಣ ಬೆಂಗಾಲಿ ರಚಿತ "ಸಾಧನಾಗಿರಿ ಅರುಣ ನಂದಗಿರಿ" ಪುಸ್ತಕ ಬಿಡುಗಡೆ: ದಿ.ಅರುಣ ನಂದಗಿರಿ ಓರ್ವ ಅತ್ಯತ್ತಮ ವ್ಯಂ ಗ್ಯ ಚಿತ್ರಕಾರರಾಗಿದ್ದರು-ಎಂ.ಸ೦ಜೀವ   ರಾಯಚೂರು,ಜು.೧೯- ದಿ.ಅರುಣ ನಂದಗಿರಿ ಓರ್ವ ಅತ್ಯುತ್ತಮ ವ್ಯಂಗ್ಯ ಚಿತ್ರಕಾರರಾಗಿದ್ದರು ಎಂದು ಕಲಬು ರ ಗಿ ಯ ವ್ಯಂಗ್ಯ ಚಿತ್ರಕಾರ ಎಂ.ಸ೦ಜೀವ ಹೇಳಿದರು. ಅವರಿಂದು "ಸಾಧನಾಗಿರಿ ಅರುಣ ನಂದಗಿರಿ" ಪುಸ್ತಕ ಬಿಡುಗಡೆ ಮಾಡಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅರುಣ ನಂದಗಿರಿ ನಾಡು ಕಂಡ ಅತ್ಯುತ್ತಮ ವ್ಯಂಗ್ಯ ಚಿತ್ರ ಕಲಾವಿದರಾಗಿದ್ದರು ವಿಶಿಷ್ಟ ಚೇತನರಾಗಿದ್ದರು ಅವರು ಅಂಗವೈಕಲ್ಯ ಮೆಟ್ಟಿ ನಿಂತು ೪೦ ವರ್ಷದ ವಯಸ್ಸಿನಲ್ಲಿ ತಮ್ಮ ಜೀವನ ಸಮಾಪ್ತಿಗೊಳಿಸಿದ್ದು ದುರದೃಷ್ಟಕರ ಸಂಗತಿಯಾಗಿದೆ ಎಂದರು. ಅವರು ಒಂದು ಕೋಣೆಯಲ್ಲಿ ಮಂಚದ ಮೇಲೆಯೆ ಮಲಿಗಿರುತ್ತಿದ್ದು ಅದು ಅವರಿಗೆ ಪ್ರಪಂಚವಾಗಿತ್ತು ರಾಯಚೂರು ವಾಣಿ ಪತ್ರಿಕೆ ಅವರಿಗೆ ಒಂದು ಅಂಕಣವೆ ನೀಡುವ ಮೂಲಕ ಅವರ ಸಾಧನೆಗೆ ಮೆಟ್ಟಿಲು ಆಯಿತು ಎಂದು ಅಭಿಪ್ರಾಯ ಪಟ್ಟರು. ಮುದ್ರಣ ಮಾಧ್ಯಮ ಅವರಿಗೆ ಪ್ರಚಾರ ನೀಡಿತಲ್ಲದೆ ಅವರ ಸಾಧನೆಯನ್ನು ನಾಡಿನೆಲ್ಲಡೆ ಪರಿಚಿತರಾಗುವಂತೆ ಮಾಡಿತು ಎಂದರು. ಸಾಹಿತಿ ವೀರ ಹನುಮಾನ ಮಾತನಾಡಿ ಅರುಣ ನಂದಗಿರಿ ಪ್ರತಿಭಾವಂತರು ವಿಕಲ ಚೇತನರಾಗಿದ್ದರು ಸೃಜನಶೀಲತೆ ಅವರು ವ್ಯಂಗ್ಯಚಿತ್ರದಲ್ಲಿ ಮೇಳೈಸುತ್ತಿರುತ್ತಿತ್ತು ಎಂದ ಅವರು ಅರುಣ ನಂದಗಿರಿ ನಿಧನರಾಗಿದ್ದರು ಇಂದಿಗೆ ಜನ ಮಾನಸದಲ್ಲಿ ಅಜ

ಕಾರು ಮತ್ತು ಲಾರಿ ನಡುವಿನ ಭೀಕರ ರಸ್ತೆ ಅಪಘಾತ ಸ್ಥಳಕ್ಕೆ ಎಸ್ಪಿ ಭೇಟಿ

Image
    ಕಾರು ಮತ್ತು ಲಾರಿ ನಡುವಿನ ಭೀಕರ ರಸ್ತೆ ಅಪಘಾತ ಸ್ಥಳಕ್ಕೆ ಎಸ್ಪಿ ಭೇಟಿ ರಾಯಚೂರು,ಜು.18-ಜಿಲ್ಲೆಯ ಸಿಂಧನೂರು ತಾಲೂಕಿನ ಬಾಲಯ್ಯ ಕ್ಯಾಂಪ್ ಬಳಿ ಬೆಳಗಿನ ಜಾವ ಕಾರು ಮತ್ತು ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಭೇಟಿ ನೀಡಿ ಪರಿಶೀಲಿಸಿದರು. ಕಾರಿನಲ್ಲಿ ಹೈದ್ರಾಬಾದ್‌ಕ್ಕೆ ತೆರಳುತ್ತಿದ್ದ ಒಂದೆ ಕುಟುಂಬದ ನಾಲ್ವರು ಅಪಘಾತದಲ್ಲಿ ಅಸುನೀಗಿದ್ದರು. ಕಾರಿಗೆ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಮುಂಭಾಗದಲ್ಲಿ ಕಾರು ಸಿಲುಕಿಕೊಂಡಿತ್ತು ಜೆಸಿಬಿ ಮೂಲಕ ತೆರವು ಮಾಡಲಾಯಿತು.

ಮಂತ್ರಾಲಯದಲ್ಲಿ ಭಕ್ತಿಯಿಂದ ಶ್ರೀಜಯತೀರ್ಥರ ಆರಾಧನೆ: ಶ್ರೀಮದಾಚಾರ್ಯರ ಗ್ರಂಥಗಳಿಗೆ ಟೀಕೆ ಬರೆದವರು ಟೀಕಾರಾಯರು-ಶ್ರೀಸುಬುಧೇಂದರತೀರ್ಥರು

Image
    ಮಂತ್ರಾಲಯದಲ್ಲಿ ಭಕ್ತಿಯಿಂದ ಶ್ರೀಜಯತೀರ್ಥರ ಆರಾಧನೆ: ಶ್ರೀಮದಾಚಾರ್ಯರ ಗ್ರಂಥಗಳಿಗೆ ಟೀಕೆ ಬರೆದವರು ಟೀಕಾರಾಯರು-ಶ್ರೀಸುಬುಧೇಂದರತೀರ್ಥರು   ರಾಯಚೂರು,ಜು.೧೮-ಶ್ರೀ ಮದಾಚಾರ್ಯರ ಗ್ರಂಥಗಳಿಗೆ ಟೀಕೆ ಬರೆದವರು ಶ್ರೀ ಜಯತೀರ್ಥರು(ಟೀಕಾರಾಯರು) ಎಂದು ಮಂತ್ರಾಲಯಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನುಡಿದರು. ಅವರಿಂದು ಶ್ರೀ ಮಠದಲ್ಲಿ ಟೀಕಾರಾಯರ ಆರಾಧನೆ ಅಂಗವಾಗಿ ರಥೋತ್ಸವ ನೆರವೇರಿಸಿ ನಂತರ ಅನುಗ್ರಹ ಸಂದೇಶ ನೀಡಿದರು. ಜಯತೀರ್ಥರು ಒಂದು ರೀತಿಯಲ್ಲಿ ಸೇನಾನಿಗಳೆ ಅವರು ಶ್ರೀಮದಾಚಾರ್ಯರ ಶಾಸ್ತçಗಳನ್ನು ಪ್ರಚುರ ಪಡಿಸಿ ಅದಕ್ಕೆ ಅಡೆತಡೆಗಳನ್ನು ನಿವಾರಿಸಿ ಸೇನಾನಿಗಳಾದರು ಎಂದರು. ಜಯತೀರ್ಥರು ನೆಲೆಸಿದ್ದು ನವಬೃಂದಾವನೆಗಡೆಯಲ್ಲಿ ಎಂಬುದಕ್ಕೆ ಅನೇಕ ಪ್ರಮಾಣಗಳು ದೊರೆಯುತ್ತವೆ ಈ ಬಾರಿ ಅಲ್ಲಿ ಶ್ರೀಮಠದಿಂದ ಆರಾಧನೆ ನೆರವೇರಿಸುವ ಉದ್ದೇಶವಿತ್ತು ಆದರೆ ಪ್ರವಾಹ ಸೇರಿದಂತೆ ಸ್ಥಳೀಯ ಜಿಲ್ಲಾಡಳಿತ ಆರಾಧನೆಗೆ ತಡೆ ನೀಡಿದ್ದು ಮುಂದಿನ ವರ್ಷ ಅಲ್ಲಿ ಆರಾಧನೆ ಮಾಡಲಾಗುತ್ತದೆ ಎಂದರು. ಶ್ರೀ ಜಯತೀರ್ಥರ ಮೂಲ ಬೃಂದಾವನ ಬಗ್ಗೆ ಅನೇಕರು ಅನೇಕ ಗೊಂದಲ ಮೂಡಿಸಿದ್ದಾರ ಅದನ್ನು ಯಾರು ನಂಬಬಾರದು ಜಯತೀರ್ಥರ ಬೃಂದಾವನ ಬಗ್ಗೆ ವಾದಿರಾಜ ಗುರುಸಾರ್ವಭೌಮರು ಸ್ಪಷ್ಟವಾಗಿ ಅವರ ನೆಲೆ ತಿಳಸಿದ್ದಾರೆ ಅಲ್ಲದೆ ಅನೇಕ ಗ್ರಂಥ, ಸುಳಾದಿ ಮುಂತಾದವುಗಳಲ್ಲಿ ತಿಳಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಶ್ರೀಮಠದ ಪಂಡಿತರು, ವಿದ್ಯ

ಮಧ್ವ ಮತದ ಯತಿ ವರೇಣ್ಯರು ಶ್ರೀ ಜಯತೀರ್ಥರು

Image
          ಮಧ್ವ ಮತದ  ಯತಿ ವರೇಣ್ಯರು  ಶ್ರೀ ಜಯತೀರ್ಥರು  ಗತಕಾಲದಲ್ಲಿ ಭವ್ಯ ಸಾಮ್ರಾಜ್ಯವಾಗಿ ಮೆರೆದ ರಾಷ್ಟçಕೂಟರ ರಾಜಧಾನಿಯಾಗಿದ್ದ ಮಳಖೇಡ ಆಧ್ಯಾತ್ಮಿವಾಗಿಯು ಅಷ್ಟೆ ಮಹತ್ವವುಳ್ಳದ್ದಾಗಿದೆ .ಇಂದಿನ ಯುಗದಲ್ಲಿ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಭಕ್ತ ಕಾರುಣಿ ,ಕಾಗಿನಾ ತಟ ನಿವಾಸಿ ಮಧ್ವ ಮಥೋಧ್ಧಾರಕ ಮಹಿಮಾ ವ್ಯಕ್ತಿತ್ವವುಳ್ಳ ಶ್ರೀ ಟೀಕಾಚಾರ್ಯರೆಂದೆ ಫ್ರಖ್ಯಾತಿ ಪಡೆದಿದ್ದ ಶ್ರೀ ಜಯತೀರ್ಥರ ಆರಾಧನೆಯು ಆಷಾಡ  ಪಂಚಮಿ ದಿ.೧೮-೭-೨೨ ಸೋಮವಾರದಂದು ಇದ್ದು ಅವರ ಜೀವನ, ಕೃತಿ, ಗ್ರಂಥ, ಪವಾಡಗಳ ಕುರಿತು ಕಿರು ಲೇಖನ- ಜನನ ಮತ್ತು ಬಾಲ್ಯ :-ಮಧ್ವ ಮತದ ಯತಿ ಪರಂಪರೆಯಲ್ಲಿ ಆದ್ಯಾತ್ಮಿಕ ಜ್ಯೋತಿ ಬೆಳಗಿಸಿದ ಯತಿ ವರೇಣ್ಯರು ಶ್ರೀಮದ ಜಯತೀರ್ಥರು, ಶ್ರೀ ಮಧ್ವಾಚಾರ್ಯರ ಗ್ರಂಥಗಳಿಗೆ ಟೀಕೆ ರಚಿಸಿ ಟೀಕಾಚಾರ್ಯರೆಂದೆ ಹೆಸರಾದವರು ಶ್ರೀ ಮದ ಜಯತೀರ್ಥರು .ಇವರು ೧೩೪೬ನೆ ಇಸ್ವಿಯಲ್ಲಿ ಮಹಾರಷ್ಟç ರಾಜ್ಯದ ಪಂಡರಪೂರದಿAದ  ಸುಮಾರು ೧೫ ಮೈಲಿ ದೂರದಲ್ಲಿ ಇದ್ದ ಗ್ರಾಮ ಮಂಗಲವೇಡಿಯಲ್ಲಿ ಜನಿಸಿದರು. ಮಾಂಡಲೀಕ ಧೊಂಡೊ ನರಸಿಂಹರಾಯ ದಂಪತಿಗಳು ಇವರ ತಂದೆ ತಾಯಿ. ಬಾಲ್ಯದಲ್ಲೆ ಭಗವದ್ಭಕ್ತರಾಗಿದ್ದ  ಇವರು ಉಪನಯನಾದಿ ಸಂಸ್ಕಾರಗಳೊAದಿಗೆ ಅತ್ಯಂತ ತೇಜಸ್ವಿಯಾಗಿ  ಉನ್ನತ ವಿದ್ಯಾಪಾರಂಗತರಾಗಿ ಬೆಳೆದರು. ಸರ್ವ ವಿದ್ಯಯಲ್ಲಿ ನಿಪುಣತೆಯನ್ನು ಸಾಧಿಸಿದರು. ರಾಜೊಚಿತ ವಿದ್ಯೆಯನ್ನು ಪಡೆದು ಶಸ್ತçಕ್ಕು ಸೈ ಶಾಸ್ತçಕ್ಕೂ ಸೈ ಎಂಬAತ್ತಿದ್ದರು. ಪೂರ್ವ ಜನ್ಮ :-ತಮ

ಜಾಗತಿಕ ತಾಪಮಾನ ಕಡಿಮೆಗೊಳಿಸಲು ಪರಿಸರ ಸ್ನೇಹಿ ವಸ್ತುಗಳು ಅನಿವಾರ್ಯ :ನಗರದಲ್ಲಿ ಗ್ರೀನ್ ಇಂಜಿನೀಯಸ್ ಬಿಜಿನೆಸ್ ಕೇಂದ್ರ ಪ್ರಾರಂಭ

Image
  ಜಾಗತಿಕ ತಾಪಮಾನ ಕಡಿಮೆಗೊಳಿಸಲು ಪರಿಸರ ಸ್ನೇಹಿ ವಸ್ತುಗಳು ಅನಿವಾರ್ಯ: ನಗರದಲ್ಲಿ ಗ್ರೀನ್ ಇಂಜಿನೀಯಸ್ ಬಿಜಿನೆಸ್  ಕೇಂದ್ರ ಪ್ರಾರಂಭ- dAiÀÄ®Qëöä ರಾಯಚೂರು,ಜು.೧೭-ಪ್ರಪ0ಚದಲ್ಲಿ ಜಾಗತಿಕ ತಾಪಮಾನ ಕಡಿಮೆಗೊಳಿಸಲು ಪರಿಸರ ಸ್ನೇಹಿ ಸಾವಯವ ವಸ್ತುಗಳ ಬಳಕೆ ಉತ್ತೇಜಿಸಲು ಗ್ರೀನ್ ಇಂಜಿನಿಯಸ್ ಸಂಸ್ಥೆ ತನ್ನ ಶಾಖೆಯನ್ನು ನಗರದಲ್ಲಿ ಪ್ರಾರಂಬಿಸುತ್ತಿದೆ ಎಂದು ಗ್ರೀನ್ ಇಂಜಿನಿಯಸ್ ಸಂಸ್ಥೆ ಯ ಅಮೇರಿಕದ dAiÀÄ®Qëöä ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸಾವಯವ ವಸ್ತುಗಳನ್ನು ಮುಖ್ಯವಾಗಿ ಕೃಷಿ, ಜವಳಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಬಳಕೆ ಮಾಡುವಂತೆ ನಮ್ಮ ಸಂಸ್ಥೆ ಮಧ್ಯವರ್ತಿಯಾಗಿ ಕಾರ್ಯ ಮಾಡಲಿದ್ದು ನಗರದ ಆಜಾದ್ ನಗರದಲ್ಲಿ ತನ್ನ ನೂತನ ಕೇಂದ್ರ ಪ್ರಾರಂಭಿಸುತ್ತಿದೆ ಎಂದ ಅವರು ರೈತರ ಸಾವಯವ ಉತ್ಪನ್ನಗಳನ್ನು ಆನ್ ಲೈನ ಮುಖಾಂತರವೇ ಖರೀದಿಸಲಾಗುತ್ತದೆ  ಮಾರಾಟ ಮಾಡುವವ ರು ದರವನ್ನು ನಿಗದಿ ಮಾಡಬಹುದೆಂದರು. ಗ್ರೀನ್ ಇಂಜಿನೀಯಸ್ ಸಂಸ್ಥೆಯ ಡಾ.ಧರ್ಮಸಾ ಮಾತನಾಡಿ ಸಾವಯವ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡಬೇಕೆಂಬ ಕಲ್ಪನೆಯೊಂದಿಗೆ ನಮ್ಮ ಸಂಸ್ಥೆ ಹುಟ್ಟಿದ್ದು ಆನ್ ಲೈನ ಮುಖಾಂತರ ಖರೀದಿ ಹಾಗೂ ಹಣ ಪಾವತಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ಡಾ.ವಿಶ್ವಜೀತ ನಾಯಕ ಮಾತನಾಡಿ ಅರಣ್ಯದಲ್ಲಿರುವ ಸಸ್ಯ ವೈವಿಧ್ಯ ಪ್ರಾಣಿ ಸಂಕುಲ ರಕ್ಷಣೆಗೆ ಪರಿಸರ ಸಂರಕ್ಷಣೆ ಅತಿ ಮುಖ್ಯ ನಾವೆಲ್ಲರೂ ಸಾವಯವ ವಸ್ತುಗಳ ಬಳಕೆ ಮಾಡಬೇಕೆಂದು

ಕಳಚಿದ ಬಸ್ಸಿನ ಚಕ್ರದ ನಟ್ ಬೋಳ್ಟ್ : ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Image
                            ಕಳಚಿದ ಬಸ್ಸಿನ ಚಕ್ರದ ನಟ್ ಬೋಳ್ಟ್ : ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ ರಾಯಚೂರು.,ಜು.೧೬-ರಾಯಚೂರಿನಿಂದ ತಲಮಾರಿಗೆ ಹೋಗುವ ಬಸ್ಸಿನ ಚಕ್ರದ ನಟ್ ಬೋಲ್ಟ್ ಕಳಚಿ ಕೂದಲೆಳೆ ಅಂತರದಲ್ಲಿ ಚಾಲಕನ ಸಮಯಪ್ರಜ್ಞೆಯಿಂದ ಬಸ್ ನಲ್ಲಿ ಪ್ರಯಾಣಿಸುವವರ ಜೀವ ಹಾನಿ ತಪ್ಪಿದೆ. ಬಸ್ ಸಂಖ್ಯೆ ಕೆಎ ೩೬-ಎಫ್ ೯೧೬ ಸಂಖ್ಯೆಯ ಬಸ್ ಎಂದಿನ0ತೆ ತಲಮಾರಿಗೆ ಹೋಗಿ ಹಿಂತಿರುಗುವ ವೇಳೆ ಬಸ್ಸಿನ ಹಿಂದಿನ ಚಕ್ರದ ನಟ್ ಬೋಳ್ಟ್ ಕಳಚಿಬಿದ್ದಿದ್ದು ಒಂದೆರೆಡು ನಟ್ ಬೋಳ್ಟ್ ಮೇಲೆ ಬಸ್ ಚಲಿಸಿದ್ದು ನಂತರ ಹಿಂದಿನಿ0ದ ಬಂದ್ ಆಟೊ ಚಾಲಕ ಬಸ್ ಚಕ್ರದ ನಟ್ ಬೋಳ್ಟ್ ಕಳಿಚಿದ ಬಗ್ಗೆ ಸೂಚನೆ ನೀಡಿದಾಗ ಚಾಲಕನು ತಕ್ಷಣ ಬಸ್ ನಿಲ್ಲಿಸಿ ಮುಂದಾಗಬಹುದಾದ ಅಪಘಾತವನ್ನು ತಪ್ಪಿಸಿದ್ದು ಪ್ರಯಾಣಿಕರ ಜೀವ ರಕ್ಷಣೆಯಾಗಿದೆ. ಹದಗೆಟ್ಟ ರಸ್ತೆಯಿಂದ ವಾಹನಗಳ ಬಿಡಿಭಾಗಗಳು ಕಳಚಿ ದುರಂತ ಸಂಭವಿಸುವ ಮುನ್ನ ರಸ್ತೆ ದುರಸ್ತಿ ಮಾಡಬೇಕು ಇಲ್ಲದಿದ್ದರೆ ಇದೆ ರೀತಿ ಮುಂದೆ ಬಸ್ಸಿನ ಚಕ್ರ ಕಳಚಿ ಬೀಳಿವುದರಲ್ಲಿ ಸಂಶಯವಿಲ್ಲ್ಲ ಹೀಗೆ ಮುಂದುವರೆದರೆ ಪ್ರಯಾಣಿಕರ ಜೀವ ಹಾನಿ ತಪ್ಪಿದಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.