Posts

Showing posts from September, 2022

ಭಾರತ್ ಜೋಡೋ ಅಲ್ಲ, ಮೊದಲು ಕಾಂಗ್ರೆಸ್ ಜೋಡೋ ಮಾಡಿ- ಸಿಎಂ ಇಬ್ರಾಹೀಂ

Image
ಭಾರತ್ ಜೋಡೋ  ಅಲ್ಲ, ಮೊದಲು ಕಾಂಗ್ರೆಸ್ ಜೋಡೋ ಮಾಡಿ- ಸಿಎಂ ಇಬ್ರಾಹೀಂ.                       ರಾಯಚೂರು,ಸೆ.30-ಕಾಂಗ್ರೆಸ್ ಬಿಜೆಪಿ ನಡುವೆ  ಪೈಪೋಟಿ ನಡೆಯುತ್ತಿದ್ದು ನಾವು ಅವರಿಗಿಂತ ವಿಭಿನ್ನವಾಗಿ ಹೋಗ್ತೇವೆ, ಪಂಚ ರತ್ನ ಜಾರಿಗೆ ತರುತ್ತೇವೆ  ಆ ಯೋಜನೆ ಈಗ ರಾಜ್ಯದ ಜನರ ಮುಂದೆ ಇಟ್ಟಿದ್ದೇವೆ. ಭಯ, ಹಸಿವು ಮುಕ್ತ ಕರ್ನಾಟಕ ಮಾಡುವ ಸಂಕಲ್ಪ ಮಾಡಿದ್ದು,ನಾವು ಕೆಲಸ ಮಾಡದೇ ಇದ್ರೆ ಪಕ್ಷ ವಿಸರ್ಜನೆ ಮಾಡ್ತೇವೆ ಎಂದು ಜೆಡಿಎಸ್ ರಾಜಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಯಾವುದೇ ರಾಜಕೀಯ ಪಕ್ಷ ಇದುವರೆಗೂ ಈ ರೀತಿಯ ವಾಗ್ದಾನ ಮಾಡಿಲ್ಲ. ನಾವು ಎಲ್ಲಾ ನೀರಾವರಿ ಯೋಜನೆ ಮುಕ್ತಾಯಗೊಳಿಸ್ತೇವೆ ಎಂದರು. ಭಾರತ್ ಜೋಡೋ ಯಾತ್ರೆಗೆ ರಾಹುಲ್ ಗಾಂಧಿ ಅವರು ಬರ್ತಿದ್ದಾರೆ. ನಮ್ಮ  ಕಾರ್ಯಕ್ರಮ ಇಟ್ಕೊಂಡು ನಾವು ಹೋಗ್ತಿದ್ದೇವೆ .ಕೆಲವರು ಜೈಲ್ ನಲ್ಲಿದ್ದಾರೆ, ಇನ್ನೂ ಕೆಲವರು ಬೇಲ್ ಮೇಲಿದ್ದಾರೆ ಎಂದು ಕಟುಕಿದರು. ನಮಗೆ ಯಾವುದೇ ಹೈಕಮಾಂಡ್ ಇಲ್ಲ, ತಮಾಷೆ ತೋರಿಸೋದು ನಮ್ಮಲ್ಲಿ ಇಲ್ಲ  ಭಾರತ್ ಜೋಡೋ ಅಲ್ಲ, ಮೊದಲು ಕಾಂಗ್ರೆಸ್ ಜೋಡೋ ಮಾಡಿ ಎಂದರು. ಮೊದಲು ಕಾಂಗ್ರೆಸ್ ಗೆ ಅಧ್ಯಕ್ಷರನ್ನ ಮಾಡೋದಕ್ಕೆ ಆಗ್ತಿಲ್ಲ ಎಂದು ಕಿಚಾಯಿಸಿದರು. ನಮ್ದು ಬಿ ಟೀಂ ಅಂತಿದ್ರು, ಇವಾಗ ಅವ್ರೇ ಬಿ ಟೀಂ ಆಗಿದ್ದಾರೆ .ಇವ್ರೇ 12 ಜನ ಎಮ್ಎಲ್ಎ ಗಳನ್ನ ಕಳಿಸಿ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ.ರಾಹುಲ್ ಗಾಂಧಿ ಅವ್ರು ಇವತ್ತು

ಮಂತ್ರಾಲಯ: ರಾಯರಿಗೆ ನವರತ್ನ ಖಚಿತ ಕವಚ ಸಮರ್ಪಣೆ.

Image
ಮಂತ್ರಾಲಯ: ರಾಯರಿಗೆ ನವರತ್ನ ಖಚಿತ ಕವಚ ಸಮರ್ಪಣೆ.                     ರಾಯಚೂರು,ಸೆ.29-ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ಮೂಲ ಬೃಂದಾವನಕ್ಕೆ ನವರತ್ನ ಖಚಿತ ಕವಚ ಸಮರ್ಪಣೆ ನೆರವೇರಿತು. ಹೈದರಾಬಾದ ಮೂಲದ ರಾಯರ  ಭಕ್ತರಾದ ವೆಂಕಟರೆಡ್ಡಿ ಮತ್ತು ಎ ಲಕ್ಷ್ಮೀ ಕುಟುಂಬ ವರ್ಗ ನವರತ್ನ ಖಚಿತ ಕವಚ ಸಮರ್ಪಿಸಿದರು. ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನವರತ್ನ ಖಚಿತ ಕವಚ ದಾನಿಗಳನ್ನು ಆಶೀರ್ವದಿಸಿದರು .

ಸದೃಢ ಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದೆ- ವೇಣುಗೋಪಾಲ

Image
  ಸದೃಢ ಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದೆ-ವೇಣುಗೋಪಾಲ ರಾಯಚೂರು,ಸೆ.26-  ಸದೃಢ ಭಾರತ ನಿರ್ಮಾಣದಲ್ಲಿ  ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದ್ದು, ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿ ಗುರುತಿಸಿ  ಪ್ರೋತ್ಸಾಹಿಸುವ ಕಾರ್ಯ ಶಿಕ್ಷಕರಿಂದ ಎಂದು ರಾಮಕೃಷ್ಣ ಆಶ್ರಮದ ಸಂಚಾಲಕ ಪಿ ವೇಣುಗೋಪಾಲ ಅವರು ಹೇಳಿದರು. ಅವರು ಇತ್ತಿಚೆಗೆ ಲಾಯನ್ಸ ಕ್ಲಬ್ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಅಂಗವಾಗಿ  ಜಿಲ್ಲೆಯ ಶಿಕ್ಷಕರನ್ನು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿ, ಶಾಲಾ ವಾತಾವರಣದಲ್ಲಿ ಯಾವುದೇ ತಾರತಮ್ಯವಿಲ್ಲದೇ ವಿವಿಧ ಜಾತಿ ,ಮತ ಧರ್ಮಗಳ ವಿದ್ಯಾರ್ಥಿಗಳು ಸಮಾನವಾಗಿ ಕಲಿಯುವಂತಹ ಅವಕಾಶಗಳನ್ನು   ಸೃಷ್ಟಿಸುವದರಿಂದ ಮುಂದಿನ ನಾಗರಿಕರನ್ನು ಸುಸಂಸ್ಕೃತಗೊಳಿಸುವುದರ ಜೊತೆಗೆ ಅವರ ಸರ್ವಾಂಗೀಣ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವಾಗಿದೆ. ಮಕ್ಕಳ ಸರ್ವಾಂಗೀಣ  ಅಭಿವೃದ್ಧಿಯಲ್ಲಿ ಶಿಕ್ಷಕರು   ಮೂಲ ಬುನಾದಿಯಾಗಿದ್ದು, ಅವರಿಗೆ ನಮ್ಮ ಸಂಸ್ಕೃತಿಯ ಪರಿಚಯಿಸಿ  ಸಮಾಜದಲ್ಲಿ ಉತ್ತಮ ಸುಸಂಸ್ಕೃತ ವ್ಯಕ್ತಿಯನ್ನಾಗಿಸು ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು  ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ. ಎಂ ವೃಷಭೇಂದ್ರಸ್ವಾಮಿ  ಮಾತನಾಡಿ, ಇಂದು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತಲು ಚೆನ್ನಾಗಿವೆ,  ಖಾಸಗಿ ಶಾಲೆಯ ಸಕಲ ಸೌಲಭ್ಯ ಸರ್ಕಾರಿ ಶಾಲೆಗಳು ಹೊಂದಿದ್ದು, ಪ್ರತಿಭಾವಂತ ಶಿಕ್ಷ

ಉಪ್ಪಾರವಾಡಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ: ನವರಾತ್ರಿ ವಿಶೇಷ ಕಾರ್ಯಕ್ರಮಗಳು

Image
ಉಪ್ಪಾರವಾಡಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ: ನವರಾತ್ರಿ  ವಿಶೇಷ ಕಾರ್ಯಕ್ರಮಗಳು   ರಾಯಚೂರು,ಸೆ.26-ಉಪ್ಪಾರವಾಡಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ  ಪ್ರತಿ ವರ್ಷದ ಪದ್ಧತಿಯಂತೆ ಈ ಸೋಮವಾರ ದಿನಾಂಕ 26-09-2012 ರಿಂದವ ಬುಧವಾರ ದಿನಾಂಕ 5-10-2022 ರ ವರೆಗೆ ಶ್ರೀ  ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವನ್ನು ಅತಿ ವಿಜೃಂಭಣೆಯಿಂದ ನೆರೆವೇರಿಸಲಾಗುತ್ತಿದೆ. ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಗೆ ನಡೆಯುವ ವಿಶೇಷ ಸೇವೆಗಳು ಬೆಳಿಗ್ಗೆ 5-00 ರಿಂದ 7-00 ರ ವರೆಗೆ ಶ್ರೀ ವೆಂಕಟೇಶ್ವರ ಸುಪ್ರಭಾತ, 5-30 ರಿಂದ 6-30 ರ ವರೆಗೆ ಧ್ವಜಾರೋಹಣ, ಕಲಶಸ್ಥಾಪನೆ, 7-00 ರಿಂದ ಪಂಚಾಮೃತಾಭಿಷೇಕ, 10-00 ತುಳಸಿ ಅರ್ಚನೆ, ನೈವೇದ್ಯ, ಮಹಾಮಂಗಳಾರತಿ ವಿಶೇಷ  ಅಲಂಕಾರಗಳು, ಮಧ್ಯಾಹ್ನ 3-00 ರಿಂದ 4-00 ರ ವರೆಗೆ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪುರಾಣ ಸಂಜೆ 5-00 ರಿಂದ ರಾತ್ರಿ 9-00 ರ ವರೆಗೆ ವಾಹನೋತ್ಸವ, ತೊಟ್ಟಿಲೋತ್ಸವ, ಶಯನೋತ್ಸ ಹಾಗೂ ಪ್ರಸಾದ ವಿತರಣೆ. ವಿಶೇಷ ಕಾರ್ಯಕ್ರಮಗಳು ಸೋಮವಾರ ದಿನಾಂಕ 26 -9 -2022 ರಂದು ಸಂಜೆ ಸೂರ್ಯಾವಾಹನೋತ್ಸವ 7 ರಿಂದ 8ವರೆಗೆ ಸಾಮೂಹಿಕ ಪುಷ್ಪಹಾಸನಿಗೆ ನಾಮ ಪುಷ್ಪವಳಿ.  ಮಂಗಳವಾರ ದಿನಾಂಕ: 27-9-2022 ರಂದು ಸಂಜೆ ಆದಿಶೇಷವಾಹನ ಉತ್ಸವ ಲಕ್ಷ್ಮೀ ಶೋಭಾನ ಪಾರಾಯಣ ಕೃಷ್ಣ ಭಜನ ಮಂಡಳಿ ಹಾಗೂ ಸಂಗಡಿಗರಿಂದ ಬುಧವಾರ ದಿನಾಂಕ 28-09-2020 ರಂದು ಕಾಮಧೇನು ಅಲ್ಪವೃಕ್ಷವಾಹ ಕಳಸಗ

ನವರಾತ್ರಿ ಅಂಗವಾಗಿ ಮಂತ್ರಾಲಯ ರಾಯರ ಮಠದಲ್ಲಿ ಘಟ ಸ್ಥಾಪನೆ

Image
ನವರಾತ್ರಿ  ಅಂಗವಾಗಿ   ಮಂತ್ರಾಲಯ ರಾಯರ ಮಠದಲ್ಲಿ ಘಟ ಸ್ಥಾಪನೆ ರಾಯಚೂರು,ಸೆ.೨೬-ನವರಾತ್ರಿ ಅಂಗವಾಗಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಘಟ ಸ್ಥಾಪನೆ ಕಾರ್ಯ ನೆರವೇರಿಸಿದರು. ಪಾಡ್ಯದಿಂದ ವಿಜಯದಶಮಿ ವರೆಗೆ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಉಪನ್ಯಾಸಗಳು ನೆರವೇರಲಿವೆ ಎಂದು ಶ್ರೀಮಠ ತಿಳಿಸಿದೆ.

ಮಂತ್ರಾಲಯ: ರೈತರಿಗೆ ಉಚಿತವಾಗಿ ೭೫ ಜೋಡಿ ಹೋರಿಗಳ ವಿತರಣೆ

Image
 ಮಂತ್ರಾಲಯ : ರೈತರಿಗೆ ಉಚಿತವಾಗಿ ೭೫ ಜೋಡಿ ಹೋರಿಗಳ ವಿತರಣೆ ರಾಯಚೂರು,ಸೆ.೨೬-ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಮುಂಭಾಗದಲ್ಲಿ ಇಂದು ಸುಮಾರು ೭೫ ಜೋಡಿ ಹೋರಿಗಳನ್ನು ರೈತರಿಗೆ ಉಚಿತವಾಗಿ ನೀಡಲಾಯಿತು.  ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು  ಚೀಟಿಗಳನ್ನು ಎತ್ತುವ ಮೂಲಕ ಹೋರಿಗಳನ್ನು ವಿತರಣೆ ಮಾಡಿ ಕೃಷಿಯಲ್ಲಿ ತೊಡಗಿಸಿಕೊಂಡು ಅವಗಳ ಉತ್ತಮ ಪಾಲನೆ ಪೋಷಣೆಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಂತ್ರಾಲಯ ಕ್ಷೇತ್ರದ ಶಾಸಕ ವೈ.ಬಾಲನಾಗಿ ರೆಡ್ಡಿ ಸೇರಿದಂತೆ ಮಠದ ಸಿಬ್ಬಂದಿಗಳಿದ್ದರು .

ಗ್ರಾಮಾಂತರ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಸಣ್ಣ ನರಸಿಂಹ ನಾಯಕಗೆ ಟಿಕೆಟ್ ಘೋಷಣೆ ಸಾಧ್ಯತೆ : ಸೆ.೩೦ ರಂದು ಗಿಲ್ಲೆಸುಗೂರಿನಲ್ಲಿ ಜನತಾ ಸಮಾವೇಶ ಮಾಜಿ ಸಿಎಂ ಹೆಚ್‌ಡಿಕೆ ಆಗಮನ-ವಿರುಪಾಕ್ಷಿ

Image
ಗ್ರಾಮಾಂತರ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಸಣ್ಣ ನರಸಿಂಹ ನಾಯಕಗೆ ಟಿಕೆಟ್ ಘೋಷಣೆ ಸಾಧ್ಯತೆ   ಸೆ.೩೦ ರಂದು ಗಿಲ್ಲೆಸುಗೂರಿನಲ್ಲಿ ಜನತಾ ಸಮಾವೇಶ ಮಾಜಿ ಸಿಎಂ ಹೆಚ್‌ಡಿಕೆ ಆಗಮನ-ವಿರುಪಾಕ್ಷಿ ರಾಯಚೂರು,ಸೆ.೨೬-ಇದೆ ಸೆ.೩೦ ರಂದು ತಾಲೂಕಿನ ಗಿಲ್ಲೆಸುಗೂರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ್ ಸ್ವಾಮಿ ಆಗಮಿಸಲಿದ್ದು ಅಂದು ಗ್ರಾಮಾಂತರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಹೆಸರು ಘೋಷಣೆ ಮಾಡುವ ಸಾಧ್ಯತೆಯಿದೆ  ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ  ಬೆಂಗಳೂರಿನಿ0ದ ಹೆಲಿಕಾಪ್ಟರ್ ಮೂಲಕ ೧೨ ಗಂಟೆಗೆ ಮಂತ್ರಾಲಯಕ್ಕೆ ಆಗಮಿಸುವ ಅವರು ಅಲ್ಲಿಂದ ರಸ್ತೆ ಮೂಲಕ ಗಿಲ್ಲೆಸುಗೂರಿಗೆ ಆಗಮಿಸಲಿದ್ದು ಸುಮಾರು ೪ ಸಾವಿರ ದ್ವಿಚಕ್ರ ವಾಹನಗಳ ಮೂಲಕ ಅವರನ್ನು ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಗುತ್ತದೆ ಎಂದರು. ಜನತಾ ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಶರವಣ ಸೇರಿದಂತೆ ಅನೇಕ ನಾಯಕರು ಪಾಲ್ಗೊಳ್ಳಲಿದ್ದು ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಗ್ರಾಮಾಂತರ ಕ್ಷೇತ್ರದ ಟಿಕೆಟ್ ನ್ನು ಘೋಷಣೆ ಮಾಡುವ ಸಾಧ್ಯತೆಯಿದ್ದು ಸಣ್ಣ ನರಸಿಂಹ ನಾಯಕರಿಗೆ ಟಿಕೆಟ್ ನೀಡುವ ಬಗ್ಗೆ  ಪಕ್ಷದ ವರಿಷ್ಠರಲ್ಲಿ ಒಲವು ವ್ಯಕ್ತವಾಗಿದೆ ಎಂದರು. ಅನೇಕರು ಆಕಾಂಕ್ಷಿಗಳಾಗಿದ್ದರೂ ಸಣ್ಣ ನರಸಿಂಹ ನಾಯಕರು ಗ್ರಾಮಾಂತರ ಕ್ಷೇತ್ರದಲ್ಲಿ ನೂರಾರು ಹಳ್ಳಿಗಳಲ್

ಬಿಜೆಪಿ ಸರ್ಕಾರದಲ್ಲಿ ಭ್ರಹ್ಮಾಂಡ ಭ್ರಷ್ಠಾಚಾರವಿದೆ: ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಸಮರ್ಥ ವ್ಯಕ್ತಿ- ಖಂಡ್ರೆ

Image
  ಬಿಜೆಪಿ ಸರ್ಕಾರದಲ್ಲಿ ಭ್ರಹ್ಮಾಂಡ    ಭ್ರಷ್ಠಾಚಾರವಿದೆ: ಪ್ರಧಾನಿ  ಹುದ್ದೆ ಗೆ   ರಾಹುಲ್ ಗಾಂಧಿ ಸಮರ್ಥ ವ್ಯಕ್ತಿ-ಖಂಡ್ರೆ ರಾಯಚೂರು,ಸೆ.೨೬-ಪ್ರಧಾನ ಮಂತ್ರಿ ಹುದ್ದೆಗೆ ರಾಹುಲ ಗಾಂಧಿ ಸಮರ್ಥ ವ್ಯಕ್ತಿಯಾಗಿದ್ದು ಮೋದಿಯವರನ್ನು ರಾಜಕೀಯವಾಗಿ ಎದುರಿಸಲು ಸೂಕ್ತ ವ್ಯಕ್ತಿಯಾಗಿದ್ದಾರೆಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು. ಅವರಿಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ಐಕ್ಯತಾ ಯಾತ್ರೆಯ ಪೂರ್ವಭಾವಿ ಸಭೆ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರಾಹುಲ ಗಾಂಧಿ ಭಾರತದಲ್ಲಿ ಸಾಮರಸ್ಯ ಮೂಡಿಸಲು ಬಡವರಿಗೆ ಶಕ್ತಿ ತುಂಬಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಕೈಗೊಂಡಿದ್ದು ಸುಮಾರು ೩೫೭೦ ಕಿ.ಮಿ ಕ್ರಮಿಸಲಿದ್ದು ರಾಜ್ಯಕ್ಕೆ ಸೆ.೩೦ಕ್ಕೆ ಚಾಮರಾಜನಗರ ಮೂಲಕ ಪ್ರವೇಶ ಮಾಡಲಿದ್ದು ರಾಜ್ಯದ ಎಂಟು ಜಿಲ್ಲೆಗಳಲ್ಲಿ ಅವರು ಹಾದುಹೋಗಲಿದ್ದು ಕಲ್ಯಾಣ ಕರ್ನಾಟಕದ ಬಳ್ಳಾರಿಗೆ ಅ.೧೮ ಅಥವಾ ೧೯ ಆಗಮಿಸಲಿದ್ದು ಸುಮಾರು ೫ ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದರು. ರಾಯಚೂರು ಜಿಲ್ಲೆಗೆ ಅ.೨೧ ಅಥವಾ ೨೨ ಆಗಮಿಸಲಿದ್ದು ಗ್ರಾಮೀಣ ವಿಧಾನಸಭಾ ಕ್ಷೇತ್ರ ಮತ್ತು ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು ೫೧ ಕಿ.ಮಿ ಕ್ರಮಿಸಲಿದ್ದು ಎರೆಡು ದಿನಗಳ ಕಾಲ ಜಿಲ್ಲೆಯಲ್ಲಿ ಕ್ರಮಿಸಲಿದ್ದಾರೆಂದ ಅವರು ಒಟ್ಟಾರೆ ಕಲ್ಯಾಣ ಕರ್ನಾಟಕದ ೪೧ ಕ್ಷೇತ್ರಗಳಲ್ಲಿ ಅವರು ಸಂಚರಿಸಲಿದ್ದು ರಾಯಚೂರು ಜಿಲ್ಲೆಯಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಯಾ

ಬಿಜೆಪಿ ಸರ್ಕಾರದಲ್ಲಿ ಭ್ರಹ್ಮಾಂಡ ಬ್ರಷ್ಠಾಚಾರವಿದೆ: ಪ್ರಧಾನಿ ಹುದ್ದೇಗೆ ರಾಹುಲ್ ಗಾಂಧಿ ಸಮರ್ಥ ವ್ಯಕ್ತಿ-ಖಂಡ್ರೆ

Image
ಬಿಜೆಪಿ ಸರ್ಕಾರದಲ್ಲಿ ಭ್ರಹ್ಮಾಂಡ    ಭ್ರಷ್ಠಾಚಾರವಿದೆ: ಪ್ರಧಾನಿ  ಹುದ್ದೆ ಗೆ ರಾಹುಲ್ ಗಾಂಧಿ ಸಮರ್ಥ ವ್ಯಕ್ತಿ-ಖಂಡ್ರೆ ರಾಯಚೂರು,ಸೆ.೨೬-ಪ್ರಧಾನ ಮಂತ್ರಿ ಹುದ್ದೆಗೆ ರಾಹುಲ ಗಾಂಧಿ ಸಮರ್ಥ ವ್ಯಕ್ತಿಯಾಗಿದ್ದು ಮೋದಿಯವರನ್ನು ರಾಜಕೀಯವಾಗಿ ಎದುರಿಸಲು ಸೂಕ್ತ ವ್ಯಕ್ತಿಯಾಗಿದ್ದಾರೆಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು. ಅವರಿಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ಐಕ್ಯತಾ ಯಾತ್ರೆಯ ಪೂರ್ವಭಾವಿ ಸಭೆ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರಾಹುಲ ಗಾಂಧಿ ಭಾರತದಲ್ಲಿ ಸಾಮರಸ್ಯ ಮೂಡಿಸಲು ಬಡವರಿಗೆ ಶಕ್ತಿ ತುಂಬಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಕೈಗೊಂಡಿದ್ದು ಸುಮಾರು ೩೫೭೦ ಕಿ.ಮಿ ಕ್ರಮಿಸಲಿದ್ದು ರಾಜ್ಯಕ್ಕೆ ಸೆ.೩೦ಕ್ಕೆ ಚಾಮರಾಜನಗರ ಮೂಲಕ ಪ್ರವೇಶ ಮಾಡಲಿದ್ದು ರಾಜ್ಯದ ಎಂಟು ಜಿಲ್ಲೆಗಳಲ್ಲಿ ಅವರು ಹಾದುಹೋಗಲಿದ್ದು ಕಲ್ಯಾಣ ಕರ್ನಾಟಕದ ಬಳ್ಳಾರಿಗೆ ಅ.೧೮ ಅಥವಾ ೧೯ ಆಗಮಿಸಲಿದ್ದು ಸುಮಾರು ೫ ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದರು. ರಾಯಚೂರು ಜಿಲ್ಲೆಗೆ ಅ.೨೧ ಅಥವಾ ೨೨ ಆಗಮಿಸಲಿದ್ದು ಗ್ರಾಮೀಣ ವಿಧಾನಸಭಾ ಕ್ಷೇತ್ರ ಮತ್ತು ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು ೫೧ ಕಿ.ಮಿ ಕ್ರಮಿಸಲಿದ್ದು ಎರೆಡು ದಿನಗಳ ಕಾಲ ಜಿಲ್ಲೆಯಲ್ಲಿ ಕ್ರಮಿಸಲಿದ್ದಾರೆಂದ ಅವರು ಒಟ್ಟಾರೆ ಕಲ್ಯಾಣ ಕರ್ನಾಟಕದ ೪೧ ಕ್ಷೇತ್ರಗಳಲ್ಲಿ ಅವರು ಸಂಚರಿಸಲಿದ್ದು ರಾಯಚೂರು ಜಿಲ್ಲೆಯಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಯಾದಗೀ

ರಾಯಲವಾಣಿ ನೂತನ ಕನ್ನಡ ದಿನ ಪತ್ರಿಕೆ ಬಿಡುಗಡೆ ಸಮಾರಂಭ: ಶೋಷಿತರ ಧ್ವನಿಯಾಗಿ ಪತ್ರಿಕಾರಂಗ ಕಾರ್ಯ ನಿರ್ವಹಿಸಲಿ-ನಟ ಚೇತನ್

Image
 ರಾಯಲವಾಣಿ ನೂತನ ಕನ್ನಡ ದಿನ ಪತ್ರಿಕೆ ಬಿಡುಗಡೆ ಸಮಾರಂಭ: ಶೋಷಿತರ ಧ್ವನಿಯಾಗಿ ಪತ್ರಿಕಾರಂಗ ಕಾರ್ಯ ನಿರ್ವಹಿಸಲಿ-ನಟ ಚೇತನ್ ರಾಯಚೂರು,ಸೆ.೨೫-ಶೋಷಿತರ ಧ್ವನಿಯಾಗಿ ಪತ್ರಿಕಾರಂಗ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯವೆಂದು ನಾಯಕ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಭಿಪ್ರಾಯಪಟ್ಟರು. ಅವರಿಂದು ಸಂಜೆ ನಗರದ ಸಿದ್ದರಾಮ ಜಂಬಲದಿನ್ನಿ ರಂಗಮoದಿರದಲ್ಲಿ ರಾಯಲವಾಣಿ ನೂತನ ಕನ್ನಡ ದಿನಪತ್ರಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕದ ಭಾಗವಾಗಿರುವ ರಾಯಚೂರು ಅತ್ಯಂತ ಫಲಪ್ರದವಾಗಿರುವ ಪ್ರದೇಶವಾಗಿದೆ ಆದರೆ ಇಲ್ಲಿ ಈಗ ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ ಎಂದ ಅವರು ಅಪೌಷ್ಟಿಕತೆ ,ನಿರುದ್ಯೋಗ, ಆರ್ಥಿಕ ಅಸಮಾನತೆ ಮುಂತಾದ ತಾಪತ್ರಯದಿಂದ ಈ ಭಾಗ ಬಳಲುತ್ತಿದೆ ಎಂದರು. ನಾನು ಅಮೇರಿಕದಲ್ಲಿ ವ್ಯಾಸಂಗ ಮಾಡಿ ಅಲ್ಲಿಯೆ ಐಷಾರಾಮಿ ಜೀವನ ನಡೆಸಬಹುದಿತ್ತು ಆದರೆ ನಾನು ಹುಟ್ಟಿ ಬೆಳೆದ ನಾಡಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿAದ ಪುನಃ ತಾಯಿನಾಡಿಗೆ ವಾಪಸ್ಸು ಬಂದೆ ನಟನೆಯಲ್ಲಿ ಆಸಕ್ತಿ ಹಿನ್ನಲೆಯಲ್ಲಿ ಚಿತ್ರರಂಗದಲ್ಲಿ ನಾಯಕ ನಟನಾಗಿ ಆಭಿನಯಿಸುವ ಪಾತ್ರ ಲಭಿಸಿತು ನಿರ್ದೇಶಕರು, ನಿರ್ಮಾಪಕರು ಅನೇಕರ ಪರಿಶ್ರಮದಿಂದ ಅನೇಕ ಚಿತ್ರಗಳು ಯಶಸ್ಸು ಕಂಡವು ಎಂದರು. ವೈಜ್ಞಾನಿಕತೆ ಮತ್ತು ವೈಚಾರಿಕತೆ ತಳಹದಿ ಮೇಲೆ ಸಮಾಜ ನಿರ್ಮಾಣವಾಗಬೇಕೆಂದ ಅವರು ಮೂಢನಂಬಿಕೆ ಕಂದಾಚಾರಕ್ಕೆ ನಾವೆಲ್ಲರೂ ವಿರೋಧ ವ್ಯಕ್ತಪಡ

ಕಾಡ್ಲೂರಲ್ಲಿ ಗ್ರಾಮಾಂತರ ಖಾಸಗಿ ಶಾಲೆಗಳ ಒಕ್ಕೂಟ (ಗುಸ್ಮಾದಿಂದ) ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ: ಖಾಸಗಿ ಶಾಲೆಗಳ ಕಟ್ಟಡಗಳಿಗೆ ಸರ್ಕಾರದಿಂದ ಅನುದಾನ ನೀಡಲು ಸಿಎಂಗೆ ಪ್ರಸ್ತಾವನೆ-ದದ್ದಲ್

Image
  ಕಾಡ್ಲೂರಲ್ಲಿ ಗ್ರಾಮಾಂತರ ಖಾಸಗಿ ಶಾಲೆಗಳ ಒಕ್ಕೂಟ (ಗುಸ್ಮಾದಿಂದ) ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ: ಖಾಸಗಿ ಶಾಲೆಗಳ ಕಟ್ಟಡಗಳಿಗೆ ಸರ್ಕಾರದಿಂದ ಅನುದಾನ ನೀಡಲು ಸಿಎಂಗೆ ಪ್ರಸ್ತಾವನೆ-ದದ್ದಲ್ ರಾಯಚೂರು,ಸೆ.೨೫-  ಖಾಸಗಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ದೊರಕಿಸಿಕೊಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಗಿದೆ ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹೇಳಿದರು. ಅವರು ತಾಲೂಕಿನ ಕಾಡ್ಲೂರು ಗ್ರಾಮದ ಮೇಧಾ ಪಬ್ಲಿಕ್ ಶಾಲೆಯಲ್ಲಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಖಾಸಗಿ ಶಾಲೆಗಳ ಒಕ್ಕೂಟ (ಗುಸ್ಮಾ )ವತಿಯಿಂದ ಆಯೋಜಿಸಲಾದ ಶಿಕ್ಷಕರ  ದಿನಾಚರಣೆ ಹಾಗೂ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರ ಬಲವರ್ಧನೆಗೆ ಖಾಸಗಿ ಶಾಲೆಗಳ ಪಾತ್ರ ಬಹುಮುಖ್ಯವಾಗಿದ್ದು ಖಾಸಗಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ನೀಡುವಂತೆ ಈ ಭಾಗದ ಎಲ್ಲ ಶಾಸಕರು ಮುಖ್ಯಮಂತ್ರಿಗಳಿಗೆ ಕೋರಿದ್ದು ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಲ್ಲಿ ಈ ಪ್ರಸ್ತಾವನೆ ಕೋರಲಾಗಿದ್ದು ಅದು ಕಾರ್ಯಗತವಾದರೆ ಅನುದಾನ ದೊರಕಿಸಿಕೊಡಲಾಗುತ್ತದೆ ಅಲ್ಲದೆ ತಮ್ಮ ಅನುದಾನದಲ್ಲಿಯೂ ಆರ್ಥಿಕ ಇತಿಮಿತಿಯಲ್ಲಿ ಅನುದಾನ ನೀಡುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಖಾಸಗಿ ಶಾಲೆಗಳು ನನ್ನ ಗ್ರಾಮಾಂತರ ಕ್ಷೇತ್ರದಲ್ಲಿ ಸುಮಾರು ೪೫ ಶಾಲೆಗಳ

ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನ ಪಡೆದ ಸುಬುಧೇಂದ್ರತೀರ್ಥರು.

Image
  ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನ ಪಡೆದ ಸುಬುಧೇಂದ್ರತೀರ್ಥರು.                ರಾಯಚೂರು,ಸೆ.24- ಶ್ರೀಶೈಲ ಮಲ್ಲಿಕಾರ್ಜುನ  ದೇವರ ದರ್ಶನವನ್ನು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಪಡೆದುಕೊಂಡರು. ದೇವಸ್ಥಾನದ ಆಡಳಿತ ವರ್ಗದವರು ಭಕ್ತಿಪೂರ್ವಕವಾಗಿ ಸ್ವಾಗತಿಸಿ ಗೌರವ ಸಮರ್ಪಣೆ ಮಾಡಿದರು.                               ಈ ಸಂದರ್ಭದಲ್ಲಿ ಮಹಾಮಹೋಪಾಧ್ಯಾಯರಾದ ಶ್ರೀ ರಾಜಾ ಎಸ್ ಗಿರಿಯಾಚಾರ್ಯರು, ವಿದ್ವಾನ್ ವಾದಿರಾಜಾಚಾರ್ಯರು ಸೇರಿದಂತೆ ಅನೇಕರಿದ್ದರು.

ಸಂಸದ ರಾಜಾ ಅಮರೇಶ್ವರ ನಾಯಕ ರಿಂದ ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವರ ಭೇಟಿ

Image
  ಸಂಸದ  ರಾಜಾ ಅಮರೇಶ್ವರ ನಾಯಕ ರಿಂದ ಕೇಂದ್ರ  ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವರ ಭೇಟಿ    ರಾಯಚೂರು,ಸೆ.23-ವಿವಿಧ ಕಾರ‍್ಯಕ್ರಮಗಳ ನಿಮಿತ್ಯ ಬೆಂಗಳೂರಿಗೆ ಆಗಮಿಸಿರುವ .  ರೈಲ್ವೆ ಮತ್ತು ಜವಳಿ ರಾಜ್ಯ ಸಚಿವರಾದ ದರ್ಶನ ಜರ್ದೋಶರವರನ್ನು,  ಲೋಕಸಭಾ ಸದಸ್ಯರಾದ  ರಾಜಾ ಅಮರೇಶ್ವರ ನಾಯಕರವರು  ಸಭೆಯಲ್ಲಿ ಸಚಿವರನ್ನು ಭೇಟಿಯಾಗಿ  ರಾಯಚೂರು ಲೋಕಸಭಾ ವ್ಯಾಪ್ತಿಯ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ರೈಲ್ವೆ ನಿಲ್ದಾಣಗಳ ಅಭಿವೃದ್ದಿ ಕಾಮಗಾರಿಗಳ ಪಟ್ಟಿ ಮಾಡಿ ಶೀಘ್ರ ಕಾಮಗಾರಿಗಳನ್ನು ಪೂರ‍್ಣಗೊಳಿಸಲು ಸಂಬಂಧಪಟ್ಟವರಿಗೆ ನರ್ದೇಶನ ನೀಡುವಂತೆ ವಿನಂತಿಸಿದರು. ಮಾನ್ಯ ಲೋಕಸಭಾ ಸದಸ್ಯರು ಸಲ್ಲಿಸಿದ ಮನವಿ ಪತ್ರಗಳಲ್ಲಿ ಇರುವ ಮುಖ್ಯ ಬೇಡಿಕೆಗಳು:- ೧) ಗಿಣಿಗೇರಾ(ಮುನಿರಾಬಾದ್)-ಮಹೆಬೂಬನಗರ ರೈಲ್ವೆ ಲೈನ್‌ ಕಾಮಗಾರಿಯು ಅನೇಕ ರ‍್ಷಗಳ ಹಿಂದೆ ಪ್ರಾರಂಭವಾಗಿದ್ದು ಇದುವರೆಗೂ ಈ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯು ಕುಂಟುತ್ತಾ ಸಾಗಿದ್ದು ಬಾಕಿ ಇರುವ ಸಿಂಧನೂರು ತಾಲ್ಲೂಕಿನಲ್ಲಿ ೫೧.೦೬ ಎಕರೆ, ಮಾನ್ವಿ ತಾಲ್ಲೂಕಿನಲ್ಲಿ ೪೪೨.೧೭ ಎಕರೆ, ಸಿರವಾರ ತಾಲ್ಲೂಕಿನಲ್ಲಿ ೧೯೪.೧೦ ಎಕರೆ, ರಾಯಚೂರು ತಾಲ್ಲೂಕಿನಲ್ಲಿ ೧೫.೩೮ ಎಕರೆ ಭೂಸ್ವಾಧೀನ ಕರ‍್ಯವನ್ನು ಶೀಘ್ರ ಪರ‍್ಣಗೊಳಿಸಿ ರೈಲ್ವೆ ಲೈನ್‌ ಕಾಮಗಾರಿಯು ಪರ‍್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನರ‍್ದೇಶನ ನೀಡಲು ಮತ್ತು ಕೇಂದ್ರದಿಂದ ಬಾಕಿ ಇರುವ ಅನುದಾನವನ್ನು ಬಿಡುಗಡೆಗೊಳಿಸಲು ಕೋರಿದರು. (೨)

ಯುವ ಬ್ರಿಗೇಡ್ ನಿಂದ ಸೆ.೨೪ ರಂದು ಉಘೇ ಕಲ್ಯಾಣ ಕರ್ನಾಟಕ ಕಾರ್ಯಕ್ರಮ: ಚಕ್ರವರ್ತಿ ಸೂಲಿಬೆಲೆಯವರಿಂದ ದಿಕ್ಸೂಚಿ ಭಾಷಣ-ವರ್ಧಮಾನ್ ತ್ಯಾಗಿ

Image
ಯುವ ಬ್ರಿಗೇಡ್ ನಿಂದ ಸೆ.೨೪ ರಂದು ಉಘೇ ಕಲ್ಯಾಣ ಕರ್ನಾಟಕ ಕಾರ್ಯಕ್ರಮ: ಚಕ್ರವರ್ತಿ ಸೂಲಿಬೆಲೆಯವರಿಂದ ದಿಕ್ಸೂಚಿ ಭಾಷಣ-ವರ್ಧಮಾನ್ ತ್ಯಾಗಿ ರಾಯಚೂರು,ಸೆ.೨೩-ಯುವ ಬ್ರಿಗೇಡ್ ಸಂಸ್ಥೆಯಿ0ದ ಸೆ.೨೪ ರಂದು ಉಘೇ ಕಲ್ಯಾಣ ಕರ್ನಾಟಕ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯುವ ಬ್ರಿಗೇಡ್ ಸಂಸ್ಥೆಯ ಉತ್ತರ ಕರ್ನಾಟಕ ಸಂಚಾಲಕ ವರ್ಧಮಾನ ತ್ಯಾಗಿ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸೆ.೨೪ ರಂದು ನಗರದ ಎಲ್‌ವಿಡಿ ಕಾಲೇಜು ಮುಂಭಾಗದ ಯಾದವ ಸಮಾಜದ ಮೈದಾನದಲ್ಲಿ ಸಂಜೆ ೬ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲಿ ದಿಕ್ಸೂಚಿ ಭಾಷಣ ಮಾಡಲಿದ್ದು ಕಲ್ಯಾಣ ಕರ್ನಾಟಕ ಕುರಿತು ಮಾತನಾಡಲಿದ್ದಾರೆಂದರು. ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಶ್ರೀಗಳು ವಹಿಸಲಿದ್ದಾರೆಂದರು. ಈ ಹಿಂದೆ ಹೈದ್ರಾಬಾದ ಕರ್ನಾಟಕವೆಂದು ಕರೆಯಲ್ಪಡುತ್ತಿದ್ದ ಕಲ್ಯಾಣ ಕರ್ನಾಟಕದ ವಿಮೋಚನೆ ಕುರಿತು ಬೆಳಕು ಚೆಲ್ಲಲಿದ್ದಾರೆ ಎಂದರು. ನಿಜಾಮ ಹೈದ್ರಾಬಾದ್ ಸಂಸ್ಥಾನ ಆಳವಿಕೆಯಲ್ಲಿ ಕಲ್ಯಾಣ ಕರ್ನಾಟಕ ನಲುಗಿ ಹೋಗಿತ್ತು ಮತಾಂತರ ಸೇರಿದಂತೆ ರಜಾಕಾರರ ದೌರ್ಜನ್ಯಕ್ಕೆ ಅನೇಕರು ನಲುಗಿದರು ತದನಂತರ ಸೆ.೧೭, ೧೯೪೮  ರಂದು ದೇಶದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಬಾಯಿ ಪಟೇಲರು ಆಪರೇಷನ್ ಪೋಲೊ ಮುಖಾಂತರ ಭಾರತ ಒಕ್ಕೂಟದಲ್ಲಿ ಸೇರ್ಪಡೆಯಾಯಿತು ಎಂದರು. ಈ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ದಿ

ವಿಶ್ವ ಓಜೋನ್ ದಿನಾಚರಣೆ

Image
  ವಿಶ್ವ ಓಜೋನ್ ದಿನಾಚರಣೆ ರಾಯಚೂರು, ಸೆ. ೨೧: ಇತ್ತೀಚೆಗೆ ನಗರದ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಮೋರರ‍್ಜಿ ದೇಸಾಯಿ ವಸತಿ ಶಾಲೆಯಲ್ಲಿ ರ‍್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಪ್ರಾದೇಶಿಕ ಕಚೇರಿ), ಗ್ರೀನ್ ರಾಯಚೂರು ಹಾಗೂ ಲಯನ್ಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಓಜೋನ್ ದಿನಾಚರಣೆಯನ್ನು ಆಚರಿಸಲಾಯಿತು.  ಶಾಲೆ ಯ ಪರಿಸರದಲ್ಲಿ ೩೫ ಸಸಿಗಳನ್ನು ನೆಡುವ ಮೂಲಕ  ಕಾ ರ‍್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು,  ಕಾ ರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಪರಿಸರ ಅಧಿಕಾರಿ ಗೀರಿಶ್ ಅವರು ಓಜೋನ್ ಪದರದ ರಕ್ಷಣೆ ಹಾಗೂ ಪರಿಸರ ಜಾಗೃತಿ ಕುರಿತು ಶಾಲೆಯ ಶಿಕ್ಷಕರು ಮತ್ತು ವಿದ್ಯರ‍್ಥಿಗಳಿಗೆ ಉಪನ್ಯಾಸ ನೀಡಿದರು. ನಂತರ ವಿದ್ಯರ‍್ಥಿಗಳಿಗೆ ಪರಿಸರ ಸಂರಕ್ಷಣೆ ವಿಷಯದ ಕುರಿತು ಭಾಷಣ ಮತ್ತು ಚಿತ್ರಕಲೆ ಸ್ರ‍್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.  ಕಾ ರ‍್ಯಕ್ರಮದಲ್ಲಿ ಜಿಲ್ಲಾ ಲಯನ್ಸ್ ಕ್ಲಬ್ ಅಧ್ಯಕ್ಷ ಮಲ್ಲಿ ಕಾ ರ‍್ಜುನ್, ಗ್ರೀನ್ ರಾಯಚೂರು ಸಂಸ್ಥೆಯ ಅಧ್ಯಕ್ಷೆ ಕಿಲ್ಕಿಲೆ ಸರಸ್ವತಿ, ರಾಜೇಂದ್ರ ಕುಮಾರ್ ಶಿವಾಳೆ, ಮಾಲಿನ್ಯ ನಿಯಂತ್ರಣ ಮಂಡಳಿಯ ವೈಜ್ಞಾನಿಕ ಸಹಾಯಕ ರಾಜಾ.ಹೆಚ್ ಸೇರಿದಂತೆ ಲಯನ್ಸ್ ಕ್ಲಬ್, ಶಿಲ್ಪಾ ಫೌಂಡೇಶನ್ ಹಾಗೂ  ಪ ರ‍್ಯಾವರಣ ಸಂರಕ್ಷಣ ಗತಿವಿಧಿಯ ಪದಾಧಿಕಾರಿಗಳು ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅ.೧೫ರಂದು ಅರಕೇರಾ ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ - ಅಪರ ಜಿಲ್ಲಾಧಿಕಾರಿ ದುರುಗೇಶ

Image
 ಅ.೧೫ ರಂದು ಅರಕೇರಾ ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ - ಅಪರ ಜಿಲ್ಲಾಧಿಕಾರಿ ದುರುಗೇಶ ರಾಯಚೂರು ಸೆ.೨೧- ಜಿಲ್ಲೆಯ ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ ಎಂಬ ಘೋಷ ವಾಕ್ಯದಡಿ ಆಯೋಜಿಸಿರುವ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಇದೇ ಅಕ್ಟೋಬರ್ ೧೫ ರಂದು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಗ್ರಾಮ ವಾಸ್ತವ್ಯ ಹೂಡಲಿದ್ದು, ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ಅವರು ಸಂಬ0ಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.        ಅವರು ಸೆ.೨೧ರ ಬುಧವಾರ ದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅ.೧೫ರಂದು ಜಿಲ್ಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಮಾತನಾಡಿದರು.  ಮುಂದಿನ ತಿಂಗಳ ಮೂರನೇ ಶನಿವಾರ (ಅಕ್ಟೋಬರ್-೧೫)ರಂದು ಅರಕೇರಾ ಗ್ರಾಮದಲ್ಲಿ ಬೆಳಿಗ್ಗೆ ೧೦ರಿಂದ ಸಂಜೆ ೫ಗಂಟೆವರೆಗೆ ಗ್ರಾಮ ವಾಸ್ತವ್ಯ ಮಾಡಲಿದ್ದು, ಕೂಡಲೇ ಅರಕೇರಾ ಗ್ರಾಮದಲ್ಲಿ ಮೂಲಭೂತ ಸಮಸ್ಯೆಗಳಾದ ಕುಡಿಯುವ ನೀರಿನ ಸಮಸ್ಯೆ, ಸಮುದಾಯ ಭವನ, ಅಂಗನವಾಡಿ ಕಟ್ಟಡ ಸೇರಿದಂತೆ ಇತರೆ ಸಮಸ್ಯೆಗಳನ್ನು ಆಲಿಸಬೇಕೆಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.    ಅಂದು ಅರಕೇರಾ ಗ್

ದಸರಾ ಹಬ್ಬ ಆಚರಣೆ ಕುರಿತು ಸೆ.೨೨ ನಗರಸಭೆ ಕಚೇರಿಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆ

ದಸರಾ ಹಬ್ಬ ಆಚರಣೆ ಕುರಿತು ಸೆ.೨೨ ನಗರಸಭೆ ಕಚೇರಿಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ರಾಯಚೂರು ಸೆ.೨೧:- ಇಲ್ಲಿಯ ನಗರಸಭೆ ಕಚೇರಿಯ ಸಭಾಂಗಣದಲ್ಲಿ ನಾಡ ಹಬ್ಬವಾದ ದಸರಾ ಆಚರಣೆ ಕುರಿತು ಇದೇ ಸೆ.೨೨ರ ಬೆಳಿಗ್ಗೆ ೧೧ಗಂಟೆಗೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು, ನಗರಸಭೆಯ ಎಲ್ಲಾ ಸದಸ್ಯರು ಹಾಗೂ ನಾಮ ನಿರ್ದೇಶತ ಸದಸ್ಯರು ಭಾಗಿವಹಿಸಿ, ತಮ್ಮ  ಸಲಹೆ ಸೂಚನೆಗಳನ್ನು ನೀಡಬೇಕೆಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುಸ್ಮಾ ಒಕ್ಕೂಟ: ಸೆ.24 ಕಾಡ್ಲೂರಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ

Image
  ಗುಸ್ಮಾ ಒಕ್ಕೂಟದ 6ನೇ ವರ್ಷದ ಸಂಭ್ರಮ ಆಚರಣೆ: ಸೆ.24  ರಂದು  ಕಾಡ್ಲೂರಲ್ಲಿ ಶಿಕ್ಷಕರ   ದಿನಾಚರಣೆ ಹಾಗೂ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ರಾಯಚೂರು,ಸೆ.೨೧-ಗ್ರಾಮಾ0ತರ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ(ಗುಸ್ಮಾ)ದ 6ನೇ ವರ್ಷದ ಸಂಭ್ರಮಾಚರಣೆ ನಿಮಿತ್ಯ ಸೆ.24 ರಂದು ಶಿಕ್ಷಕರ ದಿನಾಚರಣೆ ಹಾಗೂ  ಶಿಕ್ಷಕ ಶಿಕ್ಷಕಿಯರಿಗೆ "ಶಿಕ್ಷಕ ರತ್ನ" ಪ್ರಶಸ್ತಿ ಪ್ರದಾನ ಸಮಾರಂಭವನ್ನು ತಾಲೂಕಿನ ಕಾಡ್ಲೂರು ಗ್ರಾಮದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ ೧೦ ಗಂಟೆಗೆ ಕಾಡ್ಲೂರು ಗ್ರಾಮದ ಮೇಧಾ ಪಬ್ಲಿಕ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠ ಶ್ರೀ ೧೦೮ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದು ,ಉದ್ಘಾಟನೆಯನ್ನು ಸಂಸದ ರಾಜಾ ಅಮರೇಶ್ವರ ನಾಯಕ ನೆರವೇರಿಸಲಿದ್ದು ಜ್ಯೋತಿಯನ್ನು ಗ್ರಾಮೀಣ ಶಾಸಕರಾದ ದದ್ದಲ ಬಸನಗೌಡ ಬೆಳಗಿಸಲಿದ್ದು, ಪ್ರಶಸ್ತಿಯನ್ನು ಶಾಸಕರಾದ ಡಾ.ಶಿವರಾಜ ಪಾಟೀಲ ವಿತರಿಸಲಿದ್ದು,  ಅಧ್ಯಕ್ಷತೆಯನ್ನು ಗುಸ್ಮಾ ಅಧ್ಯಕ್ಷರಾದ ಎಸ್.ರವಿಕುಮಾರ್ ಗೋನಾಳ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಸದಸ್ಯೆ ಹೇಮಾವತಿ ಸತೀಶ ಕುಮಾರ್, ತಾ.ಪಂ ಮಾಜಿ ಸದಸ್ಯ ಎಸ್.ಎಫ್.ಖಾದ್ರಿ, ಕಾಡ್ಲೂರು ಗ್ರಾ.ಪಂ ಅಧ್ಯಕ್ಷೆ ಸುನೀತಾ ಮುನೀಂದ್ರ ಹಾಗೂ ಸರ್ವ ಸದಸ್ಯರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೃಷಭೇಂದ್ರಯ್ಯ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮ

ನೇತ್ರದಾನ ಮೂಲಕ ತಾಯಿಯ ಅಂತಿಮ ಇಚ್ಛೆ ಪೂರೈಸಿದ ಮಕ್ಕಳ ಕಾರ್ಯಕ್ಕೆ ಶ್ಲಾಘನೆ

Image
ನೇತ್ರದಾನ ಮೂಲಕ ತಾಯಿಯ ಅಂತಿಮ ಇಚ್ಛೆ ಪೂರೈಸಿದ ಮಕ್ಕಳ ಕಾರ್ಯಕ್ಕೆ ಶ್ಲಾಘನೆ ರಾಯಚೂರು,ಸೆ.20-  ನೇತ್ರದಾನ ಮೂಲಕ ದೃಷ್ಟಿಹೀನರಿಗೆ ಹೊಸಬೆಳಕು ನೀಡುವ ಕನಸು ಕಂಡಿದ್ದ ನಿವೃತ್ತ ಮುಖ್ಯಶಿಕ್ಷಕಿ  ಲಕ್ಷ್ಮಿದೇವಿ  ನಿಧನರಾದರು. ಅವರ ಅಂತಿಮ ಇಚ್ಛೆಯಂತೆ ಮಕ್ಕಳಾದ ನ್ಯಾಯವಾದಿ ಎನ್. ಶಿವಶಂಕರ, ಎನ್ .ಜಯಶಂಕರ್, ಉಪಪ್ರಾಂಶುಪಾಲರಾದ  ಎನ್. ರಾಜಾಶಂಕರ ರವರುಗಳು ತಾಯಿಯ ನೇತ್ರದಾನ ಮೂಲಕ ಅವರ ಅಂತಿಮ ಇಚ್ಛೆ ಪೂರೈಸಿದ ಕಾರ್ಯಕ್ಕೆ ಸರ್ವತ್ರ ಶ್ಲಾಘನೆ .ವ್ಯಕ್ತವಾಗುತ್ತಿದೆ.  ಸಾವಿನಲ್ಲೂ ಸಾರ್ಥಕತೆ ಕಾಣುವ ತಾಯಿಯ ಅಂತಿಮ ಇಚ್ಛೆ ಪೂರೈಸುವುದು ಮಕ್ಕಳ ಕರ್ತವ್ಯವಾಗಿದ್ದು ಇಬ್ಬರು ಅಂಧರಿಗೆ ಜಗತ್ತನ್ನು ನೋಡುವ ಭಾಗ್ಯ ನಮ್ಮ ತಾಯಿಯಿಂದ ಸಿಗುತ್ತಿರುವುದು ದುಃಖದಲ್ಲಿಯೂ ಸಮಾಧಾನ ತಂದಿದೆ ಎಂದು ಮಕ್ಕಳು ನುಡಿದರು.   ನವೋದಯ ವೈದ್ಯಕೀಯ ವಿದ್ಯಾಲಯದ ನೇತ್ರ ವಿಭಾಗ ಮುಖ್ಯಸ್ಥರಾದ ಡಾ. ಅನುಪಮಾ ವಾಲ್ವೆಕರ ಮಾರ್ಗದರ್ಶನದಲ್ಲಿ ಡಾ. ನಿತಿನ್. ಡಾ. ಜಯಶ್ರೀ. ಡಾ. ಆಶೀಯಾ ನೇತ್ರದಾನ ಪ್ರಕ್ರಿಯೆ ಪೂರ್ಣಗೊಳಿಸಿದರು. ದಾನವೆಂಬುದು ಶ್ರೇಷ್ಠ ಕಾರ್ಯವಾಗಿದ್ದು. ಮೃತ್ಯು ನಂತರ ದೇಹದಾನ ನೇತ್ರದಾನ ಮೂಲಕ ಮೃತ್ಯುಂಜಯರಾಗುವ  ಪದ್ಧತಿ ಸಾಮಾಜಿಕ ಪರಂಪರೆಯಾಗಬೇಕಿದ್ದು ಮಾತೋಶ್ರೀ ಲಕ್ಷ್ಮಿದೇವಿಯವರ ಇಚ್ಛೆ ಸರ್ವರಿಗೂ ಪ್ರೇರಣೆನೀಡುವಂತಾಗಿದೆ ಎಂದು ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿ ರಾಯಚೂರು ಜಿಲ್ಲಾಧ್ಯಕ್ಷ ಮತ್ತು ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ರಾಜೇಂದ್ರಕುಮಾ

ಜಿ.ಪಂ ಸಿಇಒ ರವರಿಂದ ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮಕ್ಕೆ ಸಂಕೇತಿಕವಾಗಿ ಚಾಲನೆ.

Image
  ಜಿ.ಪಂ ಸಿಇಒ  ರವರಿಂದ ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮಕ್ಕೆ ಸಂಕೇತಿಕವಾಗಿ ಚಾಲನೆ.  ರಾಯಚೂರು ಸೆ:18 ರಂದು‌ ರಾಯಚೂರು ತಾಲೂಕಿನ‌  ವ್ಯಾಪ್ತಿಯ ಬಿಜನಗೇರಾ  ಗ್ರಾಮ ಪಂಚಾಯತಿಯಲ್ಲಿ ಶಶಿಧರ ಕುರೇರ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ರಾಯಚೂರು ರವರು, ಅಂಗನವಾಡಿ ಮತ್ತು ಶಾಲಾ ಮೈಧಾನ ಸ್ವಚ್ಚ ಮಾಡುವುದರ ಮೂಲಕ  ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಜಲ ಶಕ್ತಿ ಮಂತ್ರಾಲಯ ಸಂಯುಕ್ತಾಶ್ರಯದಲ್ಲಿ ಗ್ರಾಮಗಳಲ್ಲಿ ಸಂಪೂರ್ಣ ನೈರ್ಮಲ್ಯ  ಕಾಪಾಡುವ ನಿಟ್ಟಿನಲ್ಲಿ ಪ್ರತಿ ವರ್ಷ ಸ್ವಚ್ಚತಾ ಹಿ ಸೇವಾ ಅಂದೋಲನಾ ಅಯೋಜಿಸಿಕೊಂಡು ಬರುತ್ತಿದೆ.  ಪಸಕ್ತ ಸಾಲಿನಲ್ಲಿ ಇಂದಿನಿಂದ‌ ಅಂದರೆ  ಸೆ 15 ರಿಂದ  ಅ.2 ರವರೆಗೆ ರಾಷ್ಟ ವ್ಯಾಪಿ ಸ್ವಚ್ಚತಾ ಹಿ ಸೇವಾ ಕಾರ್ಯವನ್ನು ಅಯೋಜಿಸಲು ನಿರ್ದೇಶನಗಳು ಇವೆ. ಈ ನಿಟ್ಟಿನಲ್ಲಿ  ಇಂದು  ರಾಯಚೂರು ತಾಲೂಕಿನ ಬಿಜನಗೇರಾ ಗ್ರಾಮದಲ್ಲಿ " ಸ್ವಚ್ಚತಾ ಹಿ ಸೇವಾ" ಆಂದೋಲನವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ  ಗ್ರಾಮದ ಎಲ್ಲಾ ಸ್ಥಳಗಳಲ್ಲಿ ಕಸ ಸಂಗ್ರಹಣೆ ಮಾಡುವ ಮೂಲದಲ್ಲಿ ಕಸ ವಿಂಗಡಣೆ, ವಿಲೇವಾರಿ, ಮತ್ತು ಸ್ವಚ್ಚತಾ ಶ್ರಮಧಾನ  ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಇಡಿ ಗ್

ಮಂತ್ರಾಲಯಕ್ಕೆ ಮೋಯ್ಲಿ , ಈಶ್ವರಪ್ಪ ಪ್ರತ್ಯೇಕ ಭೇಟಿ.

Image
ಮಂತ್ರಾಲಯಕ್ಕೆ ಮೋಯ್ಲಿ ,ಈಶ್ವರಪ್ಪ ಪ್ರತ್ಯೇಕ  ಭೇಟಿ .                                            ರಾಯಚೂರು,ಸೆ.18-ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಮಾಜಿ ಸಿಎಂ ವೀರಪ್ಪ ಮೋಯ್ಲಿ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತ್ಯೇಕವಾಗಿ ಭೇಟಿ ನೀಡಿದರು.                                              ಕೆ.ಎಸ್.ಈಶ್ವರಪ್ಪ ಕುಟುಂಬ ಸಹಿತ ಭೇಟಿ ನೀಡಿ ರಾಯರ ಬೃಂದಾವನ ದರ್ಶನ ಪಡೆದು ನಂತರ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರಿಂದ ಆಶೀರ್ವಾದ ಪಡೆದರು .                                            ವೀರಪ್ಪ ಮೋಯಿಲಿರವರು ರಾಯರ ಬೃಂದಾವನ ದರ್ಶನ ಪಡೆದು ಪೀಠಾಧಿಪತಿಗಳಿಂದ ಆಶೀರ್ವಾದ ಪಡೆದುಕೊಂಡರು.

ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ಕೇವಲ ಹಣ ಮೀಸಲಿರಿಸದೆ ಅಗತ್ಯ ಯೋಜನೆ ರೂಪಿಸಿ: ಸಿಎಂ ಬೊಮ್ಮಾಯಿ ಸಮಗ್ರ ಅಭಿವೃದ್ದಿಗೆ ದೃಷ್ಟಿ ಹರಿಸಲಿ-ರಾಯರೆಡ್ಡಿ

Image
  ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ಕೇವಲ ಹಣ ಮೀಸಲಿರಿಸದೆ ಅಗತ್ಯ ಯೋಜನೆ ರೂಪಿಸಿ: ಸಿಎಂ ಬೊಮ್ಮಾಯಿ ಸಮಗ್ರ ಅಭಿವೃದ್ದಿಗೆ ದೃಷ್ಟಿ ಹರಿಸಲಿ-ರಾಯರೆಡ್ಡಿ ರಾಯಚೂರು,ಸೆ.೧೮-ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇವಲ ಹಣ ಮೀಸಲಿರಿಸದೆ ಅಗತ್ಯ ಯೋಜನೆ ರೂಪಿಸುವ ಮೂಲಕ ಈ ಭಾಗದ ಸಮಗ್ರ ಅಭೀವೃದ್ದಿಗೆ ದೃಷ್ಟಿ ಹರಿಸಬೇಕೆಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಇತ್ತೀಚೆಗೆ ಕಲಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕ ಮಹೋತ್ಸವದಲ್ಲಿ ಸಿಎಂ ಕೆಕೆಅರ್‌ಡಿಬಿಗೆ ಮುಂದಿನ ವರ್ಷದಿಂದ ೫ ಸಾವಿರ ಕೋಟಿ ನೀಡುವ ಮಾತನಾಡಿದ್ದು ಅವರು ಕೇವಲ ಹಣ ನೀಡದರೆ ಸಾಲದು ಬದಲಾಗಿ ಈ ಭಾಗದ ಅಗತ್ಯತೆಗೆ ಅನುಗುಣವಾಗಿ ಯೋಜನೆ ರೂಪಿಸಬೇಕೆಂದು ಹೇಳಿದ ಅವರು ಶಾಸಕರ ಅಭಿಪ್ರಾಯ ಆಲಿಸಿ ಅವರೊಂದಿಗೆ ಚರ್ಚಿಸಿ ಹಣ ನೀಡದರೆ ಅನುದಾನ ಸದ್ಬಳಿಕೆಯಾಗುತ್ತದೆ ಎಂದರು. ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಕೆಕೆಅರ್‌ಡಿಬಿ ಅಸ್ತಿತ್ವಕ್ಕೆ ಬಂದಿತು ಅವರು ಅನುದಾನ ನೀಡುವ ಮೂಲಕ ಈ ಬಾಗಕ್ಕೆ ವಿಶೇಷ ಕಾಳಜಿ ಮೆರೆದರು ನಂತರ ಬಂದ ಸರ್ಕಾರಗಳು ಕೆಕೆಅರ್‌ಡಿಬಿ ಬಗ್ಗೆ ನಿರ್ಲಕ್ಷö್ಯ ವಹಿಸಿದವು ಎಂದ ಅವರು ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ರಾಯಚೂರು ವಿವಿ ಸ್ಥಾಪನೆಗೆ ಹೆಜ್ಜೆಯಿಡಲಾಯಿತು ಈಗಿನ ಸರ್ಕಾರ ಅದಕ್ಕೆ ಸಮರ್ಪಕ ಅನುದಾನ ನೀಡದೆ ವಿವಿಗೆ ಬೆಳವಣಿಗೆಗೆ ಆಸಕ್ತಿ ವಹಿಸುತ್ತಿಲ್ಲವೆಂ

ವಿದ್ಯಾಭಾರತಿ ಸಿಬಿಎಸ್‌ಇ ಶಾಲೆಯಲ್ಲಿ ಪೋಷಕರ ದಿನಾಚರಣೆ.

Image
  ವಿದ್ಯಾಭಾರತಿ ಸಿಬಿಎಸ್‌ಇ ಶಾಲೆಯಲ್ಲಿ  ಪೋಷಕರ ದಿನಾಚರಣೆ.                                ರಾಯಚೂರು,ಸೆ.17- ವಿದ್ಯಾಭಾರತಿ ಸಿಬಿಎಸ್‌ಇ ಶಾಲೆಯಲ್ಲಿ ್ಲಇಂದು ಪೋಷಕರ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲಾಯಿತು.                   ಇದರ ಅಂಗವಾಗಿ ಕೈ ತುತ್ತು ಊಟ, ಪಾದಪೂಜೆ ಹಾಗೂ ಪೋಷಕರಿಗೆ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.               ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.                             ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಾಯಚೂರಿನ ವಿಧಾನ ಸಭಾ ಸದಸ್ಯರಾದ ಡಾ. ಶಿವರಾಜ ಪಾಟೀಲ್ ಇವರು ಆಗಮಿಸಿದ್ದರು.                                     ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.               ಮುಖ್ಯ ಅತಿಥಿಗಳು ಮಾತನಾಡಿ ಪೋಷಕರು ಆಧುನಿಕ ಯುಗದಲ್ಲಿ ಮೊಬೈಲನ್ನು ಬಳಸದೆ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸಬೇಕು, ಕೈ ತುತ್ತು ಮಕ್ಕಳ ಜೀವನಕ್ಕೆ ಬಹಳ ಮುಖ್ಯ, ಇದು ಪೋಷಕರ ಹಾಗೂ ಮಕ್ಕಳ ನಡುವೆ ಅವಿನಾಭಾವ ಸಂಬಂಧವನ್ನು ಬೆಳೆಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಕೈ ತುತ್ತು ಉಣಿಸುವುದಕ್ಕಾಗಿ ವಿವಿಧ ರೀತಿಯ ಭಕ್ಷö್ಯಗಳನ್ನು ತಯಾರಿಸಿಕೊಂಡು ಬಂದಿದ್ದರು. ಮಕ್ಕಳು ಸಂತೋಷವಾಗಿ ತಮ್ಮ ತಾಯಂದಿರ ಕೈ ತುತ್ತು ಉಂಡು ಸಂತೃಪ್ತಗೊಂಡರು.                                   

ಸೆ.೧೮ ರಂದು ನೇಕಾರರ ಸಮಾವೇಶ, ಪ್ರತಿಭಾ ಪುರಸ್ಕಾರ , ಸನ್ಮಾನ ಸಮಾರಂಭ

Image
ಸೆ.೧೮ ರಂದು ನೇಕಾರರ ಸಮಾವೇಶ, ಪ್ರತಿಭಾ ಪುರಸ್ಕಾರ , ಸನ್ಮಾನ ಸಮಾರಂಭ ರಾಯಚೂರು, ಸೆ.೧೭- ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಬೆಂಗಳೂರು ಹಾಗೂ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದಿಂದ ಸೆ.೧೮ ರಂದು ಬೆಳಿಗ್ಗೆ ೧೦:೩೦ ನಿ.ಕ್ಕೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನೇಕಾರರ ಸಮಾವೇಶ, ಪ್ರತಿಭಾ ಪುರಸ್ಕಾರ ಮತ್ತು ಸಮಾಜದಲ್ಲಿ ಸೇವೆ ಸಲ್ಲಿಸಿದ ಹಿರಿಯ ನಾಗರಿಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ೯:೩೦ ನಿಕ್ಕೆ ನಗರದ ಡಾ. ಬಿ. ಆರ್ ಅಂಬೇಡ್ಕರ್ ವೃತ್ತದಿಂದ ರಂಗಮAದಿರದ ವರೆಗೆ ವಿವಿಧ ಕಲಾತಂಡಗಳ ಮೂಲಕ ಭವ್ಯ ಮೆರವಣಿಗೆ ಮಾಡಲಾಗುವುದು. ವೇದಿಕೆ ಕಾರ್ಯಕ್ರಮವನ್ನು ಜವಳಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಧ್ಯಕ್ಷ ಬಿ.ಎಸ್ ಸೋಮಶೇಖರ್ ಅವರು ಅಧ್ಯಕ್ಷತೆವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದರಾದ ರಾಜಾ ಅಮರೇಶ್ವರ ನಾಯಕ್, ರಾಜ್ಯಸಭಾ ಸದಸ್ಯರಾದ ಕೆ. ನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಎಸ್. ಕೇಶವ್ ಪ್ರಸಾದ್, ಶಾಸಕ ಡಾ. ಶಿವರಾಜ ಪಾಟೀಲ್, ಎನ್.ಎಸ್ ಭೋಸರಾಜು, ಶಾಸಕರಾದ ಬಸನಗೌಡ ದದ್ದಲ್, ಶಿವನಗೌಡ ನಾಯಕ್, ರಾಜಾ ವೆಂಕಟಪ್ಪ ನಾಯಕ್ , ವೆಂಕಟರಾವ್ ನಾಡಗೌಡ, ಡಿ.ಎಸ್. ಹೂಲಗೇರಿ, ನಗರಸಭೆ ಅಧ್ಯಕ್ಷೆ ಲಲಿತಾ ಆಂಜಿನೇಯ್ಯ ಕಡಗೋಳ ಅವರು ಆಗಮಿಸಲಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯಷ್ಟೆ ಮಹತ್ವದ್ದು ಕಲ್ಯಾಣ ಕರ್ನಾಟಕ ಮಹೋತ್ಸವ- ಚಂದ್ರಶೇಖರ ನಾಯಕ

Image
  ಸ್ವಾತಂತ್ರ್ಯ ದಿನಾಚರಣೆಯಷ್ಟೆ  ಮಹತ್ವದ್ದು  ಕಲ್ಯಾಣ ಕರ್ನಾಟಕ ಮಹೋತ್ಸವ- ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ರಾಯಚೂರು,ಸೆ.17-  ಸ್ವಾತಂತ್ರ  ದಿನಾಚರಣೆಯಷ್ಟೆ  ಮಹತ್ವದ್ದು  ಕಲ್ಯಾಣ ಕರ್ನಾಟಕ ಮಹೊತ್ಸವೆಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹೇಳಿದರು. ಅವರಿಂದು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.   ಕಲ್ಯಾಣ-ಕರ್ನಾಟಕ (ಹೈದ್ರಾಬಾದ್-ಕರ್ನಾಟಕ) ಪ್ರದೇಶ ನಿಜಾಮರ ಆಳ್ವಿಕೆಯಿಂದ ಸ್ವಾತಂತ್ರö್ಯಗೊಂಡು ೭೪ ವರ್ಷಗಳಾದ ನೆನಪಿನಲ್ಲಿ ಇಂದು ಏರ್ಪಡಿಸಿರುವ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ನನಗೆ ಸಂತೋಷವೆನಿಸುತ್ತದೆ. ಇದಕ್ಕಾಗಿ ಹೋರಾಡಿದ ಎಲ್ಲ ಮಹನೀಯರಿಗೆ ನಮ್ಮ ನಿಮ್ಮೆಲ್ಲರ ಪರವಾಗಿ ಗೌರವದ ವಂದನೆಗಳು ಸಲ್ಲಿಸುತ್ತೇನೆಂದರು.  ನಮ್ಮ ಜಿಲ್ಲೆಯವರೇ ಆದ ಎಂ. ನಾಗಪ್ಪ, ಡಾ. ಬಿ.ಜಿ. ದೇಶಪಾಂಡೆ, ಜನಾರ್ಧನರಾವ ದೇಸಾಯಿ, ಗುಡಿಹಾಳ ಹನುಮಂತರಾವ, ರಾಮಾಚಾರ ಗುರಾಚಾರ‍ ಜೋಷಿ, ಎಲ್.ಕೆ. ಸರಾಫ್, ಗಾಣದಾಳ ನಾರಾಯಣಪ್ಪ, ಕಸಬೆ ಪಾಂಡುರಂಗರಾವ, ಜಿ. ಮಧ್ವರಾಯರು ಸೇರಿದಂತೆ ಸಹಸ್ರ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಹೈದ್ರಾಬಾದ್-ಕರ್ನಾಟಕ (ಕಲ್ಯಾಣ ಕರ್ನಾಟಕ) ವಿಮೋಚನಾ ಹೋರಾಟ ಈ ನಾಡಿನ ಭವ್ಯ ಇತಿಹಾಸವಾಗಿ ಉಳಿದಿದೆ. ೧೫ನೇ ಆಗಸ್ಟ್ ಸ್ವತಂತ್ರ ದಿನಾಚರಣೆ ಎಷ್ಟು ಮಹತ್ವದಾಗಿದೆಯೋ ಅಷ್ಟೇ ಮಹತ್ವ ೧೭ನೇ ಸೆಪ್ಟೆಂಬರ್ ರಂದು ಆಚರಿಸಲಾಗುವ ಕಲ್ಯಾ