Posts

Showing posts from June, 2023

ಹುಣಸಿಹೊಳೆ : ಆಷಾಡ ಶುದ್ಧ ಏಕಾದಶಿ ಪ್ರಯುಕ್ತ ಮುದ್ರಾಧಾರಣೆ

Image
  ಹುಣಸಿಹೊಳೆ : ಆಷಾಡ ಶುದ್ಧ ಏಕಾದಶಿ ಪ್ರಯುಕ್ತ ಮುದ್ರಾಧಾರಣೆ ರಾಯಚೂರು,ಜೂ.29- ಶ್ರೀಮದ್ ಕಣ್ವ ಮಠ ಮೂಲ ಮಹಾ ಸಂಸ್ಥಾನ ಶ್ರೀಕ್ಷೇತ್ರ ಹುಣಸಿಹೊಳೆ ಯಲ್ಲಿ   ಶ್ರೀ ಸುದರ್ಶನ ಹೋಮ ಆಯೋಜಿಸಲಾಗಿತ್ತು.    ಕಣ್ವಮಠಾಧೀಶರಾದ  ಶ್ರೀ ಶ್ರೀ೧೦೦೮ ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥ ಶ್ರೀ ಪಾದಂಗಳವರು ಸಂಸ್ಥಾನ ಮುದ್ರೆ ಗಳಿಗೆ ಪೂಜೆ ಮತ್ತು  ಮಂಗಳಾರತಿ ನೆರವೇರಿಸಿ  ಆಷಾಡ ಪ್ರಥಮ ಏಕಾದಶಿ ಮುದ್ರಾಧಾರಣೆ ಮಾಡಿ ತದನಂತರ ನೆರೆದ ಸಕಲ ಭಕ್ತಾದಿಗಳಿಗೆ ತಪ್ತ ಮುದ್ರಾಧಾರಣೆ ನೆರವೇರಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಆಷಾಡ ಪ್ರಥಮ ಏಕಾದಶಿ: ಶ್ರೀ ಸುಬುಧೇಂದ್ರತೀರ್ಥರಿಂದ ತಪ್ತ ಮುದ್ರಾ ಧಾರಣೆ.

Image
  ಆಷಾಡ ಪ್ರಥಮ ಏಕಾದಶಿ: ಶ್ರೀ ಸುಬುಧೇಂದ್ರತೀರ್ಥರಿಂದ ತಪ್ತ ಮುದ್ರಾ ಧಾರಣೆ.                          ರಾಯಚೂರು,ಜೂ.29- ಆಷಾಡ   ಪ್ರಥಮ ಏಕಾದಶಿ ಪ್ರಯುಕ್ತ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಂದ ತಪ್ತ ಮುದ್ರಾ ಧಾರಣೆ ನೆರವೇರಿತು.                                               ಇಂದು ಬೆಳಿಗ್ಗೆ ಬೆಂಗಳೂರಿನ ಜಯನಗರ 5ನೇ ಹಂತದ ಬಡಾವಣೆಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಸುದರ್ಶನ ಹೋಮ ನಡೆಯಿತು.                                             ರಾಯರ ಮೃತ್ತಿಕಾ ಬೃಂದಾವನಕ್ಕೆ ಮಂಗಳಾರತಿ ನೆರವೇರಿತು ನಂತರ ನೆರೆದ ಅಪಾರ ಸಂಖ್ಯೆಯ ಭಕ್ತರಿಗೆ ಮುದ್ರಾ ಧಾರಣೆ ನೆರವೇರಿತು .

ರಾಯಚೂರು ವಿವಿ ಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಆರೋಗ್ಯಕರ ಜೀವನಶೈಲಿಗೆ ಯೋಗ ಅಗತ್ಯ- ಪ್ರೊ.ವಿಶ್ವನಾಥ.ಎಂ

Image
  ರಾಯಚೂರು ವಿವಿಯಲ್ಲಿ  ಅಂತಾರಾಷ್ಟ್ರೀಯ ಯೋಗ ದಿನಾಚರಣೆ:                          ಆರೋಗ್ಯಕರ ಜೀವನಶೈಲಿಗೆ ಯೋಗ ಅಗತ್ಯ- ಪ್ರೊ.ವಿಶ್ವನಾಥ.ಎಂ ರಾಯಚೂರು, ಜೂ.೨೧: ಯೋಗವು ಪ್ರಾಚೀನ ಅಭ್ಯಾಸವಾಗಿದ್ದು ಇದರ ಹಲವಾರು ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಮತ್ತು ಒತ್ತಡದ ಬದುಕಿನ ದಿನಮಾನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದು ಅತ್ಯಂತ ಸೂಕ್ತವಾಗಿದ್ದು, ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಯೋಗ ಉತ್ತಮವಾದ ಅಭ್ಯಾಸವೆಂದು ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿಶ್ವನಾಥ ಎಂ. ಅವರು ಹೇಳಿದರು. ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ೯ನೇ ಅಂತರರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಗ ದೈಹಿಕ ಆರೋಗ್ಯಕ್ಕೆ ಸಂಬAಧ ಪಟ್ಟ ಅಧಿಕ ರಕ್ತದೊತ್ತಡ, ದೇಹದ ತೂಕ ನಿಯಂತ್ರಣ, ದೈಹಿಕ ಸಾಮರ್ಥ್ಯ ಹೆಚ್ಚಳ, ಏಕಾಗ್ರತೆ, ಸ್ನಾಯುಸೆಳೆತ ಸಮಸ್ಯೆ ಹಾಗೂ ಹಲವು ಮಾನಸಿಕ ಸಮಸ್ಯೆ ನಿವಾರಣೆಗೆ ದಾರಿಯಾಗಿ ಇದರಿಂದ ಸಾಕಷ್ಟು ಲಾಭಗಳಿದ್ದು ಪ್ರತಿಯೊಬ್ಬರು ಯೋಗಾಭ್ಯಾಸವನ್ನು ರೂಡಿಸಿಕೊಳ್ಳಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಯೋಗ ಶಿಕ್ಷಕ ಮಲ್ಲಿಕಾರ್ಜುನ ಸ್ವಾಮಿ ಅವರು ಮಾತನಾಡುತ್ತಾ ಯೋಗ ಭಾರತೀಯರು ವಿಶ್ವಕ್ಕೆ ಕೊಟ್ಟ ಅದ್ಭುತ ಕೊಡುಗೆಯಾಗಿದೆ. ದ್ವೇಷ ಮುಕ್ತ, ದುಷ್ಚಟ ಮುಕ್ತ ಸಮಾಜಕ್ಕೆ ಯೋಗಭ್ಯಾಸ ಅಗತ್ಯವಾಗಿದ್ದು, ಯೋಗವು ಪ್ರಾಚೀನ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಅಭ್ಯಾಸವಾ

9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ :ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಾಮೂಹಿಕ ಯೋಗಭ್ಯಾಸ

Image
  9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ:                             ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಾಮೂಹಿಕ ಯೋಗಭ್ಯಾಸ ರಾಯಚೂರು,ಜೂ.೨೧- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪೌರಾಡಳಿತ ಇಲಾಖೆಯ ವತಿಯಿಂದ ಇಂದು ಬೆಳಿಗ್ಗೆ ೬.೩೦ಕ್ಕೆ ೯ನೇ ಅಂತರಾಷ್ಟಿçÃಯ ಯೋಗ ದಿನಾಚರಣೆಗೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಯೋಗ ತರಬೇತುದಾರರಾದ ಡಾ.ತಿಮ್ಮಪ್ಪ ವಡ್ಡೆಪಲ್ಲಿ ಹಾಗೂ ಪೂಜಾ ಅವರು ಯೋಗಭ್ಯಾಸವನ್ನು ಮಾಡಿಸಿದರು. ನಂತರ ಜೂ.೧೯ರಂದು ನಡೆದ ಯೋಗ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಯೋಗಪಟುಗಳಿಗೆ ಬಹುಮಾನವನ್ನು ವಿತರಿಸಲಾಯಿತು.  ಈ ಸಂದರ್ಭದಲ್ಲಿ ಪ್ರೊಭೇಷನರಿ ಐಎಎಸ್ ಅಧಿಕಾರಿ ಅಪರ್ಣಾ, ಅಪರ ಜಿಲ್ಲಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಸಹಾಯಕ ಆಯುಕ್ತ ರಜನಿಕಾಂತ ಚೌಹಾಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಪಾಟೀಲ್, ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ವೃಷಬೇಂದ್ರಯ್ಯ, ಕೈಗಾ

ಯೋಗದಿಂದ ಒತ್ತಡ ಮುಕ್ತ ಜೀವನ ಸಾಧ್ಯ- ನಿಖಿಲ್.ಬಿ

Image
  ಯೋಗದಿಂದ ಒತ್ತಡ ಮುಕ್ತ ಜೀವನ ಸಾಧ್ಯ- ನಿಖಿಲ್.ಬಿ          ರಾಯಚೂರು,ಜೂ.21- ಜಿಲ್ಲಾ ಪೊಲೀಸ್ ವತಿಯಿಂದ `೯ ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ' ಯನ್ನು ಆಚರಿಸಲಾಯಿತು.      ಪೊಲೀಸ್ ಅಧೀಕ್ಷಕರಾದ   ನಿಖಿಲ್ ಬಿ.ರವರು  ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.                                                     ಕಳೆದ ೩ ದಿನಗಳಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಯೋಗ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿತ್ತು. ಯೋಗ ಶಿಕ್ಷಕರಾದ  ಮಲ್ಲಿಕಾರ್ಜುನ ಸ್ವಾಮಿ, ಪತ್ರಿಕಾ ಛಾಯಾಗ್ರಾಹಕರು, ದೇವೆಂದ್ರಪ್ಪ, ದೈಹಿಕ ಶಿಕ್ಷಕರು, ಇಡಪನೂರು,  ನಾಗಭೂಷಣ್, ಶಿಕ್ಷಕರು, ಮಲಿಯಾಬಾದ್ ರವರಿಂದ ಯೋಗ  ತರಬೇತಿ ನೀಡಲಾಯಿತು.ಶಿಬಿರದ ಕೊನೆಯಲ್ಲಿ ಡಿ.ಎ.ಆರ್. ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸದಪ್ಪ ಅಂಬಿ, ಎ.ಪಿ.ಸಿ. ರವರ ಪತ್ನಿ ಲಕ್ಷ್ಮೀಬಾಯಿ   ಸಂಗಮೇಶ್ ಕೋಲ್‌ಕಾರ ಇವರು ರಾಜ್ಯಮಟ್ಟದಲ್ಲಿ ಯೋಗ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನು ಪಡೆದಿರು  ಯೋಗ ತರಬೇತುದಾರರಿಗೆ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ನಿಖಿಲ್ ಬಿ. ಐಪಿಎಸ್, ಪೊಲೀಸ್ ಅಧೀಕ್ಷಕರು, ಮಾತನಾಡಿ ಯೋಗದಿಂದ ವ್ಯಕ್ತಿಯ ದೈಹಿಕ ಮತು ್ತ ಮಾನಸಿಕ ಆರೋಗ್ಯ ಸದೃಢವಾಗುವುದೆಂದು ಹೇಳಿದ ಅವರು ಯೋಗವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಪ್ರತಿದಿನ ಯೋಗ ಅಭ್ಯಾಸ ಮಾಡುವ ಮೂಲಕ ಕರ್ತವ್ಯ ಸಹಜ ಒತ್ತಡಗಳಿಂದ ಮುಕ್

ತೇಜಸ್ ವಿಶ್ವಸ್ಥ ಮಂಡಲಿಯಿಂದ ವಿಶ್ವ ಯೋಗ ದಿನ ಆಚರಣೆ: ನಿಯಮಿತವಾಗಿ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ- ಡಾ. ಖೇಣೇದ್

Image
  ತೇಜಸ್ ವಿಶ್ವಸ್ಥ ಮಂಡಲಿಯಿಂದ ವಿಶ್ವ ಯೋಗ ದಿನ ಆಚರಣೆ:    ನಿಯಮಿತವಾಗಿ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ-  ಡಾ. ಖೇಣೇದ್             ರಾಯಚೂರು,ಜೂ.21- ಪತಂಜಲಿ ಮುನಿಗಳ ಅಷ್ಟಾಂಗ ಯೋಗ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಆರೋಗ್ಯಪೂರ್ಣ ಹಾಗು ಸಂತೃಪ್ತ ಬದುಕು ನಮ್ಮದಾಗುತ್ತದೆ ಎಂದು ಸ್ವಾಮಿ ವಿವೇಕಾನಂದ ಸಮಗ್ರ ಆರೋಗ್ಯ ಕೇಂದ್ರದ ಮುಖ್ಯಸ್ಥರಾದ ಡಾ. ಕಿರಣ್ ಖೇಣೇದ್ ಅವರು ಹೇಳಿದರು.                                          ಅವರಿಂದು ನಗರದ ಯಾದವ ಸಂಘದ ಮೈದಾನದಲ್ಲಿ ತೇಜಸ್ ವಿಶ್ವಸ್ಥ ಮಂಡಲಿ ಹಾಗು ಸ್ವಾಮಿ ವಿವೇಕಾನಂದ ಸಮಗ್ರ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಇಂದು ಆಯೋಜಿಸಿದ್ದ 9 ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪತಂಜಲಿಯ ಸೂತ್ರಗಳನ್ನು ವಿವರಿಸಿ,ಯೋಗ ಎಂದರೆ, ಕೇವಲ ಆಸನ, ಪ್ರಾಣಾಯಾಮ ಮಾತ್ರವಲ್ಲ, ಅದೊಂದು ಜೀವನ ಕಲೆ ಎಂದು ತಿಳಿಸಿದರು. ಅನುಭವಿ ಯೋಗ ಚಿಕಿತ್ಸಕರಾದ  ರಾಘವೇಂದ್ರ ಗುರುಮಿಟಕಲ್ ಅವರು ಯೋಗಾಭ್ಯಾಸ ಮಾಡಿಸಿದರು. ಈ ಸಂದರ್ಭದಲ್ಲಿ ಟ್ರಸ್ಟಿನ ಸದಸ್ಯರುಗಳಾದ  ಶಿವಬಸಪ್ಪ ಮಾಲಿಪಾಟೀಲ್,  ನಾಗರಾಜ ಆದೋನಿ ಹಾಗು ಹೆಚ್ಚಿನ ಸಂಖ್ಯೆಯಲ್ಲಿ ಯೋಗಾಭ್ಯಾಸಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ವಿಧಾನ ಪರಿಷತ್ ಚುನಾವಣೆ: ಎನ್.ಎಸ್. ಬೋಸರಾಜು ರಿಂದ ನಾಮಪತ್ರ ಸಲ್ಲಿಕೆ

Image
ವಿಧಾನ ಪರಿಷತ್ ಚುನಾವಣೆ:   ಎನ್.ಎಸ್. ಬೋಸರಾಜು ರಿಂದ ನಾಮಪತ್ರ ಸಲ್ಲಿಕೆ ರಾಯಚೂರು, ಜೂ.20- ವಿಧಾನ ಪರಿಷತ್ ಗೆ  ಜೂ.30ರಂದು ನಡೆಯುವ ಚುನಾವಣೆಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ  ಸಚಿವರಾದ ಎನ್ ಎಸ್ ಬೋಸರಾಜು ಅವರಿಂದು ಬೆಂಗಳೂರಿನಲ್ಲಿ   ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.                ಬಿಜೆಪಿ ಪಕ್ಷದ ಪರಿಷತ್ ಸದಸ್ಯರು   ಅವಧಿಪೂರ್ವ   ರಾಜೀನಾಮೆ ನೀಡಿದ ನಂತರ ತೆರವಾದ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದ್ದು ಕಾಂಗ್ರೆಸ್ ನಿಂದು ಮೂವರಿಗೆ ಅವಕಾಶ ಕಲ್ಪಿಸಲಾಗಿದೆ .                                    ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸುಧೀರ್ಘವಾಗಿ 53 ವರ್ಷಗಳ ಕಾಲ ಪಕ್ಷಕ್ಕಾಗಿ ಸೇವೆ ಸಲ್ಲಿಸಿದನ್ನು ಪರಿಗಣಿಸಿ ಎನ್ಎಸ್ ಬೋಸುರಾಜು ಅವರಿಗೆ ಕಾಂಗ್ರೆಸ್   ಹೈಕಮಾಂಡ್  ಸಚಿವರನ್ನಾಗಿ ಮಾಡಿದೆ. ವಿಧಾನ ಪರಿಷತ್ ಚುನಾವಣೆಗೆ ಸಚಿವ ಎನ್ಎಸ್ ಬೋಸರಾಜು ಸೇರಿ ಜಗದೀಶ್ ಶೆಟ್ಟರ್, ತಿಪ್ಪಣ್ಣ ಕಮಕನೂರು ಅವರಿಗೆ ಪಕ್ಷ ಅವಕಾಶ ನೀಡಿದೆ‌ .

ಜಿಲ್ಲಾ ಉಸ್ತುವಾರಿ ಸಚಿವರ ಪ್ರಥಮ ಕೆಡಿಪಿ ಸಭೆಯಲ್ಲಿ ಖಡಕ್ ಸೂಚನೆ: ಅಕ್ರಮ ಮರಳುಗಾರಿಕೆ, ಕಳಪೆ ಕಾಮಗಾರಿ, ಭ್ರಷ್ಠಾಚಾರ ಮುಂತಾದವುಗಳನ್ನು ಸಹಿಸುವುದಿಲ್ಲ-ಡಾ.ಶರಣ ಪ್ರಕಾಶ ಪಾಟೀಲ

Image
  ಜಿಲ್ಲಾ ಉಸ್ತುವಾರಿ ಸಚಿವರ ಪ್ರಥಮ ಕೆಡಿಪಿ ಸಭೆಯಲ್ಲಿ ಖಡಕ್ ಸೂಚನೆ: ಅಕ್ರಮ ಮರಳುಗಾರಿಕೆ, ಕಳಪೆ ಕಾಮಗಾರಿ, ಭ್ರಷ್ಠಾಚಾರ ಮುಂತಾದವುಗಳನ್ನು ಸಹಿಸುವುದಿಲ್ಲ- ಡಾ.ಶರಣ ಪ್ರಕಾಶ ಪಾಟೀಲ ರಾಯಚೂರು,ಜೂ.೧೯-ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಜನರಿಗೆ ಐದು ಗ್ಯಾರಂಟಿಗಳನ್ನು ನೀಡುವುದಾಗಿ ಭರವಸೆ ನೀಡಲಾಗಿದ್ದು ಅವುಗಳನ್ನು ಈಡೇರಿಸಲು ಅಧಿಕಾರಿಗಳು ಪ್ರಮಾಣಿಕ ಪ್ರಯತ್ನ ಮಾಡಬೇಕು ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ, ಕಳಪೆ ಕಾಮಗಾರಿ, ಲಂಚಗುಳಿತನ, ಬೆಟ್ಟಿಂಗ್ ಮುಂತಾದವುಗಳನ್ನು ಸಹಿಸುವುದಿಲ್ಲವೆಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು. ಅವರಿಂದು ನಗರದ ಜಿ.ಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯಲು ಅಧಿಕಾರಿಗಳು ಸರ್ಕಾರದ ಕೆಲಸ ದೇವರ ಕೆಲಸವೆಂದು ಭಾವಿಸಿ ಮಾಡಬೇಕು ಕಳಪೆ ಕಾಮಗಾರಿ, ಭ್ರಷ್ಟಾಚಾರ ಕಂಡುಬ0ದರೆ ಅಂತಹ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದ ಅವರು ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ನಡೆಸುವವರು ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕಬೇಕೆಂದು ಸೂಚನೆ ನೀಡಿದರು. ಮುಂಗಾರು ಕ್ಷಿಣೀಸಿದ್ದು ನದೀ ಮೂಲದ ಕುಡಿಯುವ ನೀರು ಮಾತ್ರ ಅವಲಂಬಿಸದೆ ಲಭ್ಯವಿರುವ ಬೋರವೆಲ್ ಇನ್ನಿತರ ಮೂಲಗಳಿಂದ ಕುಡಿಯುವ ನೀರನ್ನು ಜನರಿಗೆ ಒದಗಿಸುವ ಕಾರ್ಯ ಮಾಡಬೇಕೆಂದ

ಆದಷ್ಟು ಶೀಘ್ರದಲ್ಲಿ ಅಧುಸೂಚನೆ ಹೊರಡಿಸಬೇಕು: ಏಮ್ಸ್ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸಿಎಂ ಶಿಫಾರಸ್ಸು ಸ್ವಾಗತಾರ್ಹ- ಕಳಸ

Image
  ಆದಷ್ಟು ಶೀಘ್ರದಲ್ಲಿ ಅಧುಸೂಚನೆ ಹೊರಡಿಸಬೇಕು: ಏಮ್ಸ್ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸಿಎಂ ಶಿಫಾರಸ್ಸು ಸ್ವಾಗತಾರ್ಹ-ಕಳಸ ರಾಯಚೂರು,ಜೂ.೧೮-ಜಿಲ್ಲೆಯ ಏಕೈಕ ಹೆಸರನ್ನು ಏಮ್ಸ್ ಸ್ಥಾಪನೆಗೆ ಶಿಫಾರಸ್ಸು ಮಾಡಿ ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು ಸ್ವಾಗತಾರ್ಹವಾಗಿದೆ ಎಂದು ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಏಮ್ಸ್ ಹೋರಾಟವು ಕಳೆದ ೪೦೦ ದಿನಗಳಿಂದ ನಡೆಯುತ್ತಿದ್ದು ೪೦೧ನೇ ದಿನಕ್ಕೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾರವರಿಗೆ ಸಿಎಂ ರಾಯಚೂರಿನ ಏಕೈಕ ಹೆಸರನ್ನು ಶಿಫಾರಸ್ಸು ಮಾಡಿ ಪತ್ರ ಬರೆದಿದ್ದು ಹೋರಾಟಕ್ಕೆ ಭಾಗಶ ಜಯ ಸಿಕ್ಕಂತಾಗಿದೆ ಎಂದರೆ ತಪ್ಪಾಗಲಾರದು ಎಂದ ಅವರು ಶಿಫಾರಸ್ಸು ಪತ್ರಕ್ಕೆ ಮನ್ನಣೆ ದೊರೆಯಬೇಕೆಂದರೆ ಈ ಕೂಡಲೆ ಜಿಲ್ಲೆಯ ಸಂಸದ ರಾಜಾ ಅಮರೇ ಶ  ನಾಯಕರವರು ಹೋರಾಟ ಸಮಿತಿಯ ನೀಯೋಗವನ್ನು ಕೇಂದ್ರ ಸರ್ಕಾರದ ಬಳಿ ಕೊಂಡೊಯ್ಯದು ಇನ್ನಷ್ಟು ಒತ್ತಡವನ್ನು ಹೇರಬೇಕೆಂದ ಅವರು ಆದಷ್ಟು ಶೀಘ್ರದಲ್ಲೆ ಅಧಿಸೂಚನೆ ಹೊರಡಿಸಬೇಕೆಂದು ಒತ್ತಾಯಿಸಿದರು. ಇತ್ತೀಚೆಗೆ ಜಿಲ್ಲೆಯವರೆ ಆದ ಸಣ್ಣ ನೀರವರಿ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ರವರು ಸಿಎಂರವರಿಗೆ ರಾಯಚೂರು ಏಕೈಕ ಹೆಸರನ್ನು ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸದ್ದರು ಅಲ್ಲದೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾ

ವಾರ್ಡ್ ನಂ17 ರಲ್ಲಿ ಸ್ವಚ್ಚಗೊಳ್ಳದ ಕಾಲುವೆಗಳು ನಗರಸಭೆ ದಿವ್ಯ ನಿರ್ಲಕ್ಷ್ಯ

Image
  ವಾರ್ಡ್ ನಂ.17 ರಲ್ಲಿ ಸ್ವಚ್ಚಗೊಳ್ಳದ ಕಾಲುವೆಗಳು ನಗರಸಭೆ ದಿವ್ಯ ನಿರ್ಲಕ್ಷ್ಯ                                           ರಾಯಚೂರು,ಜೂ.18-ನಗರದ ವಾರ್ಡ್ ನಂ .17 ರಲ್ಲಿ ಕಾಲುವೆಗಳನ್ನು ಸ್ವಚ್ಚಗೊಳಿಸದೆ  ದಿವ್ಯ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಚರಂಡಿಗಳು ಕಸದಿಂದ ತುಂಬಿ ಸರಾಗವಾಗಿ ನೀರು ಹರಿಯದೆ ಅಸ್ವಚ್ಚತೆ ಆಗರವಾಗಿದೆ .                   ನಗರಸಭೆಯ ಈ ಅಲಕ್ಷ್ಯ ತನಕ್ಕೆ  ಜನರು ಹಿಡಿಶಾಪ ಹಾಕುತ್ತಿದ್ದಾರೆ ನಗರಸಭೆಗೆ ಕೋಟಿಗಟ್ಟಲೆ ಅನುದಾನ ಬಂದರೂ ಸಾರ್ವಜನಿಕರು ಕರ ಕಟ್ಟಿದ್ದರು ನಗರಸಭೆ ಮಾತ್ರ ಸ್ವಚ್ಚತೆ ಕಡೆಗೆ ಗಮನ ಹರಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.                         ಸ್ವಚ್ಚ ನಗರಕ್ಕೆ ಮುಂದಾಗಬೇಕಿರುವ ನಗರಸಭೆ ವರ್ತನೆ ಅಸಹ್ಯ ಮೂಡಿಸಿದೆ ಇನ್ನಾದರು ನಗರಸಭೆ ತನ್ನ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಲಿ ಎಂಬುದು ಜನರ ಒತ್ತಾಯವಾಗಿದೆ.                            

ದಾಸೋತ್ಸವ ಸಮೀತಿಯಿಂದ ವಿಶೇಷ ಉಪನ್ಯಾಸ ಮಾಲಿಕೆ: ಸನ್ಯಾಸಿಗಳು ಅನೇಕ ಕಟ್ಟುಪಾಡುಗಳಿಂದ ಇರಬೇಕಾಗುತ್ತದೆ-ಬಾಳಗಾರು ಶ್ರೀ

Image
ದಾಸೋತ್ಸವ ಸಮೀತಿಯಿಂದ ವಿಶೇಷ ಉಪನ್ಯಾಸ ಮಾಲಿಕೆ:                              ಸನ್ಯಾಸಿಗಳು ಅನೇಕ ಕಟ್ಟುಪಾಡುಗಳಿಂದ ಇರಬೇಕಾಗುತ್ತದೆ- ಬಾಳಗಾರು ಶ್ರೀ ರಾಯಚೂರು,ಜೂ.೧೭-ಸನ್ಯಾಸಿಗಳ ಜೀವನ ಅನೇಕ ಕಟ್ಟುಪಾಡುಗಳನ್ನೊಳಗೊಂಡಿರುತ್ತದೆ ನಮ್ಮ ನಡೆ ನುಡಿ ಪರಿಶುದ್ಧವಾಗಿರಬೇಕೆಂದು ಬಾಳಗಾರು ಮಠದ ಕಿರಿಯ ಪೀಠಾಧಿಪತಿಗಳಾದ ಶ್ರೀ ಅಕ್ಷೋಭ್ಯ ರಾಮ ಪ್ರಿಯತೀರ್ಥ ಶ್ರೀಪಾದಂಗಳವರು ನುಡಿದರು. ಅವರಿಂದು ನಗರದ ಜೋಡುವೀರಾಂಜಿನೇಯ ದೇವಸ್ಥಾನದಲ್ಲಿ ದಾಸೋತ್ಸವ ಸಮಿತಿ ಆಯೋಜಿಸಿದ ವಿಶೇಷ ಉಪನ್ಯಾಸ ಮಾಲಿಕೆಯ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.         ತಾವು ಇತ್ತೀಚೇಗೆ ಲೌಕಿಕ ಜೀವನದಿಂದ ವಿಮುಖರಾಗಿ ಸನ್ಯಾಸ ಜೀವನಕ್ಕೆ ಕಾಲಿರಿಸಿದ್ದು ಸನ್ಯಾಸ ಜೀವನ ಅತ್ಯಂತ ಕಾಠಿಣ್ಯವುಳ್ಳ ಜೀವನವೆಂದ ಅವರು ನಮ್ಮ ನಡೆ ನುಡಿಗೆ ನಾವು ಉತ್ತರದಾಯಿಗಳಾಗಿರಬೇಕೆಂದ ಅವರು ನಮ್ಮ ಪರಿಶುದ್ಧತೆ ಮತ್ತು ದೇವರ ಮೇಲಿನ ಭಕ್ತಿ ನಾವು ಭಕ್ತರಿಗೆ ನೀಡುವ ಮಂತ್ರಾಕ್ಷತೆ ಪ್ರಭಾವವನ್ನು ಹೆಚ್ಚಿಸುತ್ತದೆ ನಾವು ಲೆಕ್ಕಪತ್ರದಲ್ಲಿ ಲೆಕ್ಕಪರಿಶೋಧಕರ ರೀತಿಯಲ್ಲಿ ಅಂಕಿಸಂಖ್ಯೆಗಳನ್ನು ಹೊಂದಿಸಬಹುದು ಆದರೆ ದೇವರ ದೃಷ್ಟಿಯಲ್ಲಿ ನಮ್ಮ ತಪ್ಪು ಬಯಲಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ನಮ್ಮ ನಡಿಗೆ ವೇಗವಿದ್ದರೆ ಸಾಲದು ನಮ್ಮ ಸಾಧನೆ ವೇಗದಿಂದಿರಬೇಕೆಂದ ಅವರು ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರು ತಾವೊಬ್ಬರೆ ಸಂತೋಷದಿಂದ ಇರದೆ ಅನ್ಯರಿಗೂ ಸಂತೋಷದಿಂದ ಇರುವಂತೆ ವರ್ತಿಸಬೇಕೆಂದ ಅವರ

ಏಮ್ಸ್ ಹೋರಾಟದ 401 ನೇ ದಿನಕ್ಕೆ ಶಿಫಾರಸ್ಸು ಪತ್ರದ ಬಲ: ಏಮ್ಸ್ ಸ್ಥಾಪಿಸಲು ರಾಯಚೂರು ಏಕೈಕ ಹೆಸರು ಕೇಂದ್ರಕ್ಕೆ ಸಿಎಂ ಶಿಫಾರಸ್ಸು

Image
ಏಮ್ಸ್ ಹೋರಾಟದ 401 ನೇ ದಿನಕ್ಕೆ  ಶಿಫಾರಸ್ಸು ಪತ್ರದ ಬಲ:                               ಏಮ್ಸ್ ಸ್ಥಾಪಿಸಲು  ರಾಯಚೂರು ಏಕೈಕ ಹೆಸರು ಕೇಂದ್ರಕ್ಕೆ ಸಿಎಂ ಶಿಫಾರಸ್ಸು                                ರಾಯಚೂರು,ಜೂ.17- ಅಖಿಲ ಭಾರತ ವೈದ್ಯಕೀಯ ವಿಜ್ಞಾನ  ಸಂಸ್ಥೆ(ಏಮ್ಸ್) ಸ್ಥಾಪಿಸಲು ರಾಯಚೂರಿನ ಏಕೈಕ ಹೆಸರನ್ನು  ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಫಾರಸ್ಸು ಮಾಡಿದ್ದಾರೆ.                            ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ ಮಾಂಡವೀಯಾ ರವರಿಗೆ ಬರೆದ ಶಿಫಾರಸ್ಸು ಪಾತ್ರದಲ್ಲಿ ರಾಯಚೂರು ಜಿಲ್ಲೆ ನೀತಿ ಆಯೋಗದ ಮಹಾತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ರಾಜ್ಯದ ರಾಯಚೂರು ಮತ್ತು ಯಾದಗಿರಿ ಇದ್ದು ರಾಯಚೂರಿನಲ್ಲಿ ಆರೋಗ್ಯ, ಶಿಕ್ಷಣ ಮಟ್ಟ ಹೆಚ್ಚಿಸಲು ಈ ಭಾಗದಲ್ಲಿ ಉತ್ತಮ ಆರೋಗ್ಯ ಕಲ್ಪಿಸಲು ಏಮ್ಸ್ ಅನಿವಾರ್ಯವೆಂದು ಉಲ್ಲೇಖಿಸಿದ್ದು ತಮ್ಮ ಸಚಿವ ಸಂಪುಟ  ಸಹೋದ್ಯೋಗಿ  ಜಿಲ್ಲೆಯವರೇ ಆದ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೆಸರನ್ನು ಉಲ್ಲೇಖಿಸಿ ಅವರು ಸಹ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿದ್ದನ್ನು ಶಿಫಾರಸ್ಸು ಪತ್ರದಲ್ಲಿ ಬರೆದಿದ್ದು ಸುಮಾರು 400 ದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ  ಇದರಿಂದ ಕೊಂಚ ಮಟ್ಟಿನ ಯಶಸ್ಸು ಲಭಿಸಿದಂತಾಗಿದೆ ಎಂದರೆ ತಪ್ಪಾಗಲಾರದು .                                            ಈ ಶಿಫಾರಸ್ಸು ಪತ

ಎಪಿಎಂಸಿ ಕಾಯ್ದೆ ಹಿಂಪಡೆಯಲು ಸಚಿವ ಸಂಪುಟ ಸಭೆ ಒಪ್ಪಿಗೆ ಸ್ವಾಗತಾರ್ಹ-ಮಾಲಿಪಾಟೀಲ

Image
  ಎಪಿಎಂಸಿ ಕಾಯ್ದೆ ಹಿಂಪಡೆಯಲು ಸಚಿವ ಸಂಪುಟ ಸಭೆ ಒಪ್ಪಿಗೆ ಸ್ವಾಗತಾರ್ಹ- ಮಾಲಿಪಾಟೀಲ ರಾಯಚೂರು,ಜೂ.೧೭-ಈ ಹಿಂದೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆಯನ್ನು ರಾಜ್ಯ ಸರ್ಕಾರ ಹಿಂಪಡೆಯಲು ಸಚಿವ ಸಂಪುಟ ಅಸ್ತು ಎಂದಿರುವುದು ಸ್ವಾಗತಾರ್ಹವೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರೈತರಿಗೆ ಮತ್ತು ಕೃಷಿಗೆ ಮಾರಕವಾಗಿದ್ದ ಎಪಿಎಂಸಿ ಕಾಯ್ದೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು ರೈತರ ಹೋರಾಟ ಕ್ಕ   ಸಿಕ್ಕ ಜಯವಾಗಿದೆ ಎಂದ ಅವರು ಅದೇ ರೀತಿ ಇನ್ನೂ ಎರೆಡು ಕಾಯ್ದೆಯನ್ನು ವಾಪಸ್ಸು ಪಡೆಯಬೇಕೆಂದ ಅವರು ರೈತರಿಗೆ ಮಾರಕವಾದ ಕಾಯ್ದೆಗಳನ್ನು ಹಿಂದಕ್ಕೆ ಪಡೆಬೇಕೆಂದರು . ಬಡವರಿಗೆ ನೀಡುವ ಅಕ್ಕಿಯಲ್ಲಿ ರಾಜಕೀಯ ಸಲ್ಲದು ಎಂದ ಅವರು ಕೇಂದ್ರ ಸರ್ಕಾರ ೫ ಕೇಜಿ ಅಕ್ಕಿಯನ್ನು ಕೂಡಲೆ ಬಿಡುಡೆಗೊಳಿಸಬೇಕೆಂದ ಅವರು  ಅಕ್ಕಿ ಕೇಂದ್ರ ಸರ್ಕಾರ  ನೀಡದ ಪಕ್ಷದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭತ್ತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ ಇಲ್ಲಿ ಸಹ ಖರೀದಿಸಬಹುದೆಂದರು. ಈ ಸಂದರ್ಭದಲ್ಲಿ ಪ್ರಭಾಕರ್ ಪಾಟೀಲ,ಬೂದಯ್ಯಸ್ವಾಮಿ,ನರಸಿಂಹಲು, ಚಂದ್ರು ಭಂಡಾರಿ ಇತ್ತರರು ಇದ್ದರು  

ರಿಮ್ಸ್ ನಿರ್ದೇಶಕ ಹಾಗೂ ಆಡಳಿತಾಧಿಕಾರಿ ಅಮಾನತ್ತುಗೊಳಿಸಲು ಆಗ್ರಹಿಸಿ: ಜೂ.19 ರಂದು ದಲಿತ ಸಂಘರ್ಷ ಸಮಿತಿಯಿಂದ ಧರಣಿ- ನರಸಿಂಹಲು

Image
 ರಿಮ್ಸ್ ನಿರ್ದೇಶಕ ಹಾಗೂ ಆಡಳಿತಾಧಿಕಾರಿ ಅಮಾನತ್ತುಗೊಳಿಸಲು ಆಗ್ರಹಿಸಿ: ಜೂ.19 ರಂದು ದಲಿತ ಸಂಘರ್ಷ ಸಮಿತಿಯಿಂದ ಧರಣಿ- ನರಸಿಂಹಲು ರಾಯಚೂರು,ಜೂ.೧೭-ಅವ್ಯಸ್ಥೆಯ ಆಗರವಾಗಿರುವ ರಿಮ್ಸ್ ನಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರಕಿಸಿಕೊಡುವಲ್ಲಿ ವಿಫಲರಾದ ರಿಮ್ಸ್ ನಿರ್ದೇಶಕ ಮತ್ತು ಆಡಳೀತಾಧಿಕಾರಿಯನ್ನು ಅಮಾನತ್ತುಗೊಳಿಸಲು ಆಗ್ರಹಿಸಿ ಜೂ.19 ರಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ಮಾಡಲಾಗುತ್ತದೆ ಎಂದು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಎಸ್.ನರಸಿಂಹಲು ಹೇಳಿದರು. ಅವರಿಂದು  ಸುದ್ದಿಗೋಷ್ಟಿಯಲ್ಲಿ ಮಾತನಾಡಿ   ರಿಮ್ಸ್ ನಲ್ಲಿ 700 ಹಾಸಿಗೆ ವ್ಯವಸ್ಥೆಯಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಬಡವರ ಬಗ್ಗೆ ನಿಶ್ಕಾಳಜಿ ವಹಿಸಲಾಗಿದೆ ಎಂದು ದೂರಿದ ಅವರು ವೈದ್ಯರು ನಿಯಮಗಳನ್ನು ಗಾಳಿಗೆ ತೂರಿ ಆಸ್ಪತ್ರೆಯಲ್ಲಿರದೆ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ ಎಂದು ಆರೋಪಿಸಿದರು. ಔಷಧಿಗಳನ್ನು ಮೆಡಿಕಲ್ ಶಾಪ್ ಗಳಿಗೆ ಮಾರಾಟ ಮಾಡಿ ಬಡ ರೋಗಿಗಳಿಗೆ ಬೇರೆಡೆ ಔಷಧಿ ಖರೀದಿಗೆ ಚೀಟಿ ಬರೆದುಕೊಡುತ್ತಾರೆ ಎಂದ ಅವರು ರೋಗಿಗಳೀಗೆ ಉತ್ತಮ ಆಹಾರ ನೀಡದೆ ಹಳಿಸಿದ ಆಹಾರ ನೀಡುತ್ತಾರೆ ಆಸ್ಪತ್ರೆಯಲ್ಲಿ ಶುಚಿತ್ವಯಿಲ್ಲದೆ ಹಂದಿ ನಾಯಿಗಳ ವಾಸ ಸ್ಥಾನದಂತಿದೆ ಇತ್ತೀಚೆಗೆ ಕೋತಿ ಕಾಟದ ಬಗ್ಗೆ ವರದಿಯಾಗಿದ್ದರೂ ಯಾವುದೆ ಕ್ರಮವಾಗಿಲ್ಲವೆಂದ ಅವರು ಈ ಕೂಡಲೆ ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪೂರು ಮತ್ತು ರಿಮ್ಸ್ ಆಡ

ಗ್ರಾಮೀಣ ಠಾಣೆಯಲ್ಲಿ ಸುಳ್ಳು ದೂರು ದಾಖಲು: ಪಿಎಸ್‌ಐ ಅಮಾನತ್ತಿಗೆ ಕೆಅರ್‌ಎಸ್ ಪಕ್ಷ ಆಗ್ರಹ- ಗೋಮರ್ಸಿ

Image
  ಗ್ರಾಮೀಣ ಠಾಣೆಯಲ್ಲಿ ಸುಳ್ಳು ದೂರು ದಾಖಲು: ಪಿಎಸ್‌ಐ ಅಮಾನತ್ತಿಗೆ ಕೆಅರ್‌ಎಸ್ ಪಕ್ಷ ಆಗ್ರಹ-ಗೋಮರ್ಸಿ ರಾಯಚೂರು,ಜೂ.೧೭-ನಮ್ಮ ಪಕ್ಷದ ಕಾರ್ಯಕರ್ತ ಆಂಜಿನೇಯ್ಯ ಎಂಬುವವರ ಮೇಲೆ ಸುಳ್ಳು ಕೇಸು ದಾಖಲಿಸಿದ ಗ್ರಾಮೀಣ ಠಾಣೆ ಪಿಎಸ್‌ಐ ಮಂಜುನಾಥರವರನ್ನು ಅಮಾನತ್ತು ಮಾಡಬೇಕೆಂದು ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ನಿರುಪಾದಿ ಗೋಮರ್ಸಿ ಆಗ್ರಹಿಸಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಆಂಜಿನೇಯ ಎಂಬುವವರು ಇಬ್ರಾಹಿಂ ದೊಡ್ಡಿಯ ಕುಂಬಾರ ಸಮುದಾಯದೊಂದಿಗೆ ಜಮೀನಿ ವ್ಯಾಜ್ಯ ಸಂಬ0ಧಿಸಿ ಪರಸ್ಪರ ದೂರು ದಾಖಲಿಸಿದ್ದು ಅದರನ್ವಯ ಸುಳ್ಳು ಕೇಸು ದಾಖಲಿಸಿ ಎಫ್‌ಐಅರ್ ದಾಖಲಿಸಿ ನ್ಯಾಯಂಗ ಬಂಧನಕ್ಕೆ ದೂಡಿ ಜೈಲಿಗೆ ಹಾಕಿಸಿದ್ದಾರೆ ಅಲ್ಲದೆ ಇದೆ ಪಿಎಸ್‌ಐ ಸದರ್ ಬಜಾರ್ ಠಾಣೆಯಲ್ಲಿರುವಾಗ ನಮ್ಮ ಪಕ್ಷದ ನಗರ ಘಟಕದ ಅಧ್ಯಕ್ಷರಾದ ಕಂದೂರು ರಾಘವೇಂದ್ರ ರವರು ಬಾಡಿಗೆಯಿದ್ದ ಮಳಿಗೆಯ  ಬೀಗ ಹಾಕಿದ ಸಂದರ್ಭದಲ್ಲಿ ಮಳಿಗೆ ಮಾಲಿಕ ಇತರರು ಸೇರಿಕೊಂಡು ಮಳಿಗೆಯಲ್ಲಿದ್ದ ಸಾಮಗ್ರಿ ತೆಗೆದುಕೊಂಡು ಹೋಗಿದ್ದಲ್ಲದೆ ಕನ್ನಕೊರೆದು ಸಾಮಗ್ರಿ ದೋಚಿದ್ದ ರು  ದೂರು ಸ್ವೀಕರಿಸಿದೆ ರಾಜಿ ಮಾಡಲು ಯತ್ನಿಸಿದ್ದರು ಎಂದು ಆರೋಪಿಸಿದ   ಅವರು ಈ ಕೂಡಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪಿಎಸ್‌ಐರನ್ನು ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಂದೂರು ರಾಘವೇಂದ್ರ, ರಾಮಣ್ಣ ಅರ್ ಹೆಚ್ ಜೆ, ಗಂಗಾ.ಕೆ, ಕುಮಾರ್ ನಾಯಕ ಇತರರು ಇದ್ದರು.

ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರ ಭೇಟಿ. ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ- ಎನ್ಎಸ್ ಬೋಸರಾಜು

Image
  ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ವಿಜ್ಞಾನ ತಂತ್ರಜ್ಞಾನ  ಸಚಿವರ ಭೇಟಿ. ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ- ಎನ್ಎಸ್ ಬೋಸರಾಜು ರಾಯಚೂರು,ಜೂ.16- ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಎನ್ ಎಸ್ ಬೋಸರಾಜು ಅವರು  ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪ್ರಗತಿಪರಿಶೀಲನೆ  ನಡೆಸಿದರು. ರಾಯಚೂರು ನಗರದ ಮಂತ್ರಾಲಯ ರಸ್ತೆಯಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತನಾಡಿ, ಜಿಲ್ಲಾ ವಿಜ್ಞಾನ ಕೇಂದ್ರದ ಸರ್ವಾಂಗಣ ಅಭಿವೃದ್ಧಿ ಹಾಗೂ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮಗಳ ಆಯೋಜನೆ ಕುರಿತಂತೆ ಅಧಿಕಾರಿಗಳೊಂದಿಗೆ ಮಾತನಾಡಿದರು. ಇಲ್ಲಿವರೆಗೆ ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರದಿಂದ ಶಾಲಾ-ಕಾಲೇಜುಗಳಲ್ಲಿ  ಏನಿಲ್ಲ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ಪಡೆದರು ಅಲ್ಲದೆ ಈ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರ, ಕ್ಯಾಶುಟೆಕ್  ನಿಂದ ನಡೆದ ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಜವಾಬ್ದಾರಿಯಿಂದ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಿಜ್ಞಾನ ಕೇಂದ್ರದಿಂದ ಯಾವ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಆಯಾ ಶಾಲೆಗಳಲ್ಲಿ  ದಾಖಲೆಗಳನ್ನು ರಿಜಿಸ್ಟರ್ ಮಾಡುವಂತೆ ಪ್ರಾಥಮಿಕ ಮತ್ತು ಪ್ರೌಢಶಾಲೆ ಉಪ ನಿರ್ದೇಶಕರಾದ ವೃಷಭೇಂದ್ರಯ್ಯ ಅವರಿಗೆ ತಿಳಿಸಿದರು. ಈ ಸಂದ

ಕುಂಭಕೋಣ: ಶ್ರೀ ವಿಜಯೀಂದ್ರತೀರ್ಥರ ಆರಾಧನಾ ಅಂಗವಾಗಿ ತಿರುಪತಿ ಶೇಷವಸ್ತ್ರ ಸಮರ್ಪಣೆ.

Image
  ಕುಂಭಕೋಣ: ಶ್ರೀ ವಿಜಯೀಂದ್ರತೀರ್ಥರ ಆರಾಧನಾ ಅಂಗವಾಗಿ ತಿರುಪತಿ ಶೇಷವಸ್ತ್ರ ಸಮರ್ಪಣೆ.                              ರಾಯಚೂರು,ಜೂ.16- ತಮಿಳುನಾಡಿನ ಕುಂಭಕೋಣ ಶ್ರೀ ವಿಜಯೀಂದ್ರತೀರ್ಥರ ಆರಾಧನೆ ಅಂಗವಾಗಿ ತಿರುಪತಿ ತಿಮ್ಮಪ್ಪನ ಶೇಷವಸ್ತ್ರವನ್ನು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಸಮರ್ಪಿಸಿದರು.    ನಂತರ ಶ್ರೀ ವಿಜಯೀಂದ್ರತೀರ್ಥರ ಮೂಲ ಬೃಂದಾವನಕ್ಕೆ ಪೀಠಾಧಿಪತಿಗಳು ಪಂಚಾಮೃತ ಅಭಿಷೇಕ ನೆರವೇರಿಸಿದರು.                       ಶ್ರೀಕರ ಲಕ್ಷ್ಮೀ ನರಸಿಂಹ ದೇವರ  ದೇವಸ್ಥಾನದ ರಜತ ದ್ವಾರವನ್ನು ಪೀಠಾಧಿಪತಿಗಳು ಉದ್ಘಾಟಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಅಲ್ಲಮಪ್ರಭು ಕಾಲೋನಿ ತಾಯಮ್ಮ ದೇವಿ ದೇವಸ್ಥಾನ ಸಮಿತಿಯಿಂದ ಶಾಸಕರಿಗೆ ಸನ್ಮಾನ

Image
ಅಲ್ಲಮಪ್ರಭು ಕಾಲೋನಿ ತಾಯಮ್ಮ ದೇವಿ ದೇವಸ್ಥಾನ ಸಮಿತಿಯಿಂದ ಶಾಸಕರಿಗೆ ಸನ್ಮಾನ                  ರಾಯಚೂರು ,ಜೂ.16-  ರಾಯಚೂರು ನಗರ ಕ್ಷೇತ್ರಕ್ಕೆ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾದ ಡಾ. ಶಿವರಾಜ್ ಪಾಟೀಲ್ ಅವರಿಗೆ ಅಲ್ಲಮಪ್ರಭು ಕಾಲೋನಿ ತಾಯಮ್ಮ ದೇವಿ ದೇವಸ್ಥಾನ ಸಮಿತಿಯಿಂದ  ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷರಾದ ಬಾಶುಮಿಯ, ಉಪಾಧ್ಯಕ್ಷರುಗಳಾದ ಉಮೇಶ್ ಅವಂತಿ ರಾಯಪ್ಪ ನಿವೃತ್ತಿ ಶಿಕ್ಷಕರು ,ಖಜಾಂಚಿ ಯಾದ ರಾಯಕೊಂಪಿ ಮೋದಿ ಕೃಷ್ಣಮೂರ್ತಿ,ನಿರ್ದೇಶಕರುಗಳಾದ ಮಲ್ಲೇಶ್ ದಳವಾಯಿ,ಡಾ ಶರಣಗೌಡ ಪಾಟೀಲ್,ಮುಖಂಡರುಗಳಾದ ಸಂಗಮೇಶ್ ,ಮೌನೇಶ್,ಬಸವರಾಜ್ ,ವೀರೇಶ್ ನಾಗಲದಿನ್ನಿ ಮುಂತಾದವರು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಿಲ್ಲೇ ಬೃಹನ್ಮಠ ಹಾಗೂ ಸೋಮವಾರಪೇಟೆ ಹಿರೇಮಠಕ್ಕೆ ಸಚಿವ ಬೋಸರಾಜು ಭೇಟಿ

Image
  ಕಿಲ್ಲೇ  ಬೃಹನ್ಮಠ ಹಾಗೂ  ಸೋಮವಾರಪೇಟೆ ಹಿರೇಮಠಕ್ಕೆ ಸಚಿವ ಬೋಸರಾಜು ಭೇಟಿ                  ರಾಯಚೂರು , ಜೂ.16-ನಗರದ ಕಿಲ್ಲೆ ಬೃಹನ್ಮಠ ಹಾಗೂ  ಸೋಮವಾರಪೇಟೆ ಹಿರೇಮಠಕ್ಕೆ   ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು   ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ  ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು  ಹಾಗೂ ಪೀಠಾಧಿಪತಿಗಳಾದ ಶ್ರೀ  ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮಿಗಳಿಂದ    ಸನ್ಮಾನಿತರಾಗಿ   ಆಶೀರ್ವಾದ  ಪಡೆದರು.

ಯಾರಾಗುವರು ಲೋಕಸಭಾ ಚುನಾವಣೆ ಅಭ್ಯರ್ಥಿಗಳು: ಮೂರು ಪಕ್ಷಗಳೂ ಹೊಸ ಮುಖಗಳಿಗೆ ಆದ್ಯತೆ ನೀಡಲಿವೆಯೇ ?

Image
 ಯಾರಾಗುವರು ಲೋಕಸಭಾ ಚುನಾವಣೆ ಅಭ್ಯರ್ಥಿಗಳು: ಮೂರು ಪಕ್ಷಗಳೂ ಹೊಸ ಮುಖಗಳಿಗೆ ಆದ್ಯತೆ ನೀಡಲಿವೆಯೇ? ರಾಯಚೂರು,ಜೂ.೧೫- ವಿಧಾನ ಸಭೆ ಚುನಾವಣೆ ಪಲಿತಾಂಶ ಹೊರಬಿದ್ದು ಒಂದು ತಿಂಗಳು ಗತಿಸಿದ್ದು ಕಾಂಗ್ರೆಸ್ ಪಕ್ಷವು ಅಧಿಕಾರ ಗದ್ದುಗೆ ಏರಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಹೊಸ ಸರ್ಕಾರ ಸಹ ಅಸ್ತಿತ್ವಕ್ಕೆ ಬಂದಿದೆ ಚುನಾವಣೆ ಪೂರ್ವದಲ್ಲಿ ಹೇಳಿದಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ಮುಂದಾಗಿದ್ದು ' ಶಕ್ತಿ' ಎಂಬ ಮಹಿಳೆಯರಿಗೆ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಯೋಜನೆಗೆ ಹಸಿರು ನಿಶಾನೆ ತೋರಿದ್ದಾರೆ ಇನ್ನು ನಾಲ್ಕು ಗ್ಯಾರಂಟಿ ನೀಡುವ ಧಾವಂತದಲ್ಲಿ ಸರ್ಕಾರ ಕಾರ್ಯ ಪ್ರವೃತ್ತವಾದಂತಿದೆ. ಸದ್ಯ ವಿಧಾನ ಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಏರಿದೆ ಎಂಬುದು ಜನಿಜನಿತವಾಗಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಲೋಕಸಭೆ ಸ್ಥಾನಗಳನ್ನು ಅಧಿಕ ಸಂಖ್ಯೆಯಲ್ಲಿ ಪಡೆಯಬೇಕೆಂಬ ಅಸೆ ಸಹಜವಾಗಿ ಕಾಂಗ್ರೆಸ್ ನಾಯಕರಲ್ಲಿ ಚಿಗಿರೊಡೆದಿದೆ ರಾಜ್ಯದಲ್ಲಿ ಒಟ್ಟು ೨೮ ಲೋಕಸಭಾ ಸ್ಥಾನಗಳಿದ್ದು ಅದರಲ್ಲಿ ಸದ್ಯ ಬಿಜೆಪಿ ೨೬, ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸ್ಥಾನ ಗಳಿಸಿದೆ. ರಾಯಚೂರು ಜಿಲ್ಲೆಯ ಐದು ಮತ್ತು ಯಾದಗೀರಿ ಜಿಲ್ಲೆಯ ಮೂರು ವಿಧಾನ ಸಭಾ ಕ್ಷೇತ್ರಗಳನ್ನೊಳಗೊಂಡು ರಾಯಚೂರು ಲೋಕಸಭಾ ಕ್ಷೇತ್ರ ಒಳಪಡುತ್ತಿದ್ದು ಹಾಲಿ ಸಂಸದರಾಗಿ ರಾಜ

ಗೌರೀಶ ಅಕ್ಕಿ ಸಾರಥ್ಯದ "ಅಲ್ಮಾ ಮೀಡಿಯಾ ಸ್ಕೂಲ್" ನಲ್ಲಿ ಜುಲೈ ತಿಂಗಳಿನಿಂದ ತರಗತಿಗಳು ಪ್ರಾರಂಭ

Image
ಗೌರೀಶ ಅಕ್ಕಿ ಸಾರಥ್ಯದ "ಅಲ್ಮಾ ಮೀಡಿಯಾ ಸ್ಕೂಲ್" ನಲ್ಲಿ ಜುಲೈ ತಿಂಗಳಿನಿಂದ  ತರಗತಿಗಳು  ಪ್ರಾರಂಭ   ರಾಯಚೂರು,ಜೂ.15- ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತನಾಗಿ-ಸುದ್ದಿ ನಿರೂಪಕನಾಗಿ ಈಟಿವಿ, ಸುವರ್ಣ ನ್ಯೂಸ್, ಟಿವಿ9 ಕನ್ನಡ ಮುಂತಾದ ಪ್ರಮುಖ ಸುದ್ದಿವಾಹಿನಿಗಳಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಗೌರೀಶ್ ಅಕ್ಕಿ ಇದೀಗ  ಬೆಂಗಳೂರಿನಲ್ಲಿ ಕಳೆದ ಐದು ವರ್ಷಗಳಿಂದ 'ಆಲ್ಮಾ ಮೀಡಿಯಾ ಸ್ಕೂಲ್' ಎಂಬ ಪ್ರಾಯೋಗಿಕ ಪತ್ರಿಕೋದ್ಯಮ ತರಬೇತಿ ಸಂಸ್ಥೆಯೊಂದನ್ನು  ನಡೆಸುತ್ತಿದಾರೆ.  ಬದಲಾದ ಕಾಲಘಟ್ಟದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ದುಡಿಯಬೇಕಾದರೆ ಪತ್ರಕರ್ತರಿಗೆ ಪ್ರಾಯೋಗಿಕ ಶಿಕ್ಷಣ ಮತ್ತು ಟೆಕ್ನಿಕಲ್ ಸ್ಕಿಲ್ಸ್ ಅತ್ಯಗತ್ಯ. ಮಾಧ್ಯಮ ಕ್ಷೇತ್ರದ ಸುದೀರ್ಘ ಅನುಭವದಲ್ಲಿ ಇವುಗಳ ಮಹತ್ತ್ವ . ಪತ್ರಿಕೋದ್ಯಮದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಬೇಕೆಂಬ ಧ್ಯೇಯ ಹೊತ್ತು‌ -"ಆಲ್ಮಾ ಮೀಡಿಯಾ ಸ್ಕೂಲ್". 70% ಪ್ರಾಕ್ಟಿಕಲ್ ಮತ್ತು 30% ಥಿಯರಿ ಎಂಬ ಸೂತ್ರದಡಿಯಲ್ಲಿ ಆಲ್ಮಾ ಮೀಡಿಯಾ ಸ್ಕೂಲ್ ಕಾರ್ಯನಿರ್ವಹಿಸುತ್ತಿದೆ. ಮಾಧ್ಯಮ ಕ್ಷೇತ್ರದಲ್ಲಿ ಅನುಭವವಿರುವ ಪರಿಣತರಿಂದ ತರಬೇತಿ, ವಿಶೇಷ ಅತಿಥಿಗಳಿಂದ ಉಪನ್ಯಾಸ, ಪ್ರತಿನಿತ್ಯ ಪ್ರಾಯೋಗಿಕ ತರಬೇತಿಗಳ ಮೂಲಕ ಸುದ್ದಿಮನೆಯ ನೇರ ಅನುಭವ ವಿದ್ಯಾರ್ಥಿಗಳಿಗೆ ದೊರಕುವಂತೆ ಮಾಡಿದೆ. ಇಲ್ಲಿ ಕಲಿಯುವ ಪ್ರತಿಯೊಬ್ಬರೂ ಉತ್ತಮ ಪತ್ರಕರ್ತರಾಗಿ

ಯಾವುದೆ ಕೋಚಿಂಗ್ ಪಡೆಯದೆ ಸ್ವಯಂ ಅಧ್ಯಯನ: ಪ್ರಮಾಣ ಕಾಲೇಜು ವಿದ್ಯಾರ್ಥಿ ಅನುರಾಗ ರಂಜನ್‌ಗೆ ನೀಟ್ ಪರೀಕ್ಷೆಯಲ್ಲಿ 127 ನೇ ರ‍್ಯಾಂಕ್- ಪಲ್ಲೇದ್

Image
  ಯಾವುದೆ ಕೋಚಿಂಗ್ ಪಡೆಯದೆ ಸ್ವಯಂ ಅಧ್ಯಯನ: ಪ್ರಮಾಣ ಕಾಲೇಜು ವಿದ್ಯಾರ್ಥಿ  ಅನುರಾಗ ರಂಜನ್‌ಗೆ ನೀಟ್ ಪರೀಕ್ಷೆಯಲ್ಲಿ 127 ನೇ ರ‍್ಯಾಂಕ್- ಪಲ್ಲೇದ್ ರಾಯಚೂರು,ಜೂ.೧೫- ನಗರದ ಪ್ರಮಾಣ ಕಾಲೇಜಿನ  ವಿದ್ಯಾರ್ಥಿ   ಅನುರಾಗ್ ರಂಜನ್‌ಗೆ ನೀಟ್ ಪರೀಕ್ಷೆಯಲ್ಲಿ ೧೨೭ನೇ ಲಭಿಸಿದೆ ಎಂದು ಕಾಲೇಜಿನ ಉಪನ್ಯಾಸಕರಾದ ಬಸವರಾಜ ಪಲ್ಲೇದ್ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಇತ್ತೀಚೆಗೆ ನಡೆದ ವೈದ್ಯಾಕೀಯ ಪದವಿಯ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿ ಉತ್ತಮ ಸಾಧನೆ ತೋರಿದ್ದು ಉತ್ತರ ಕರ್ನಾಟಕದಲ್ಲೆ  ಅತಿ ಹೆಚ್ಚಿನ ರ‍್ಯಾಂಕ್ ಪಡೆದಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ ಎಂದರು. ಇವರು ೭೨೦ ಅಂಕಗಳಲ್ಲಿ ೭೦೫ ಅಂಕಗಳನ್ನು ಪಡೆದಿದ್ದು ಇಂದು ಪ್ರಕಟಗೊಂಡ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲೂ ಬಿಎಸ್ಸಿ ಕೃಷಿ ವಿಭಾಗಕ್ಕೆ ೨ನೇ ರ‍್ಯಾಂಕ್ ಪಡೆದಿದ್ದಾರೆ ಅಲ್ಲದೆ ನರ್ಸಿಂಗ್   , ಪಶುವೈದ್ಯಕೀಯ ಇನ್ನೀತರ ಪದವಿ ಅರ್ಹತಾ ಪರೀಕ್ಷೆಯಲ್ಲೂ ಉತ್ತಮ ರ‍್ಯಾಂಕ್ ಪಡೆದಿದ್ದಾರೆ ಎಂದರು. ಇವರು ಯಾವುದೆ ಪ್ರತ್ಯೇಕ ಕೋಚಿಂಗ್ ಪಡೆಯದೆ ಕಾಲೇಜಿನಲ್ಲೆ ಆಯೋಜಿಸಲಾಗುತ್ತಿದ್ದ ತರಗತಿಗಳಿಗೆ ಹಾಜರಾಗಿ ಅವಿರತ ಆದ್ಯಯನ ಮತ್ತು ಶಿಕ್ಷಕರ ಸೂಚನೆ ಪಾಲಿಸಿ ಉತ್ತಮ ಸಾಧನೆ ಮೆರೆದಿದ್ದಾರೆ ಇವರು ಮೂಲತಃ ಓರಿಸ್ಸಾ ರಾಜ್ಯದಾವರಾಗಿದ್ದು ಬಾಲ್ಯದಿಂದಲೂ ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದು ಇವರ ತಂದೆ ತಾಯಿ ನಗರದ ರಿಮ್ಸ

ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್ ಎಸ್ ಎಸ್ ಘಟಕದಿಂದ ಸ್ವಯಂ ಪ್ರೇರಿತ ರಕ್ತದಾನ ಜಾಗೃತಿ ಜಾಥಾ

Image
  ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್ ಎಸ್ ಎಸ್ ಘಟಕದಿಂದ ಸ್ವಯಂ ಪ್ರೇರಿತ ರಕ್ತದಾನ ಜಾಗೃತಿ ಜಾಥಾ ರಾಯಚೂರು,ಜೂ.14- ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ ಜಂಟಿಯಾಗಿ 'ವಿಶ್ವ ರಕ್ತದಾನಿಗಳ ದಿನಾಚರಣೆ' ಯ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಕುರಿತಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಾಗೃತಿ ಜಾಥಾ ಹಮ್ಮಿಕೊಂಡಿತ್ತು. ಜಾಗೃತಿ ಜಾಥಾಕ್ಕೆ ಎನ್ ಎಸ್ ಎಸ್ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿ ವಿದ್ಯಾರ್ಥಿನಿ ಸ್ವಯಂ ಸೇವಕಿಯರನ್ನುದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪುಷ್ಪ ರಕ್ತದಾನ ಶ್ರೇಷ್ಠ ದಾನವಾಗಿದೆ. ಆಪತ್ಕಾಲದಲ್ಲಿ ಜೀವರಕ್ಷಣೆಗೆ ರಕ್ತದಾನ ಏಕೈಕ ಆಸರೆಯಾಗಿರುತ್ತದೆ. ಹಾಗಾಗಿ ಸದೃಢ ವ್ಯಕ್ತಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನವನ್ನು ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗುವಂತೆ ಅವರಲ್ಲಿ ಅರಿವನ್ನು ಮೂಡಿಸಲು ವಿದ್ಯಾರ್ಥಿನಿ ಸ್ವಯಂ ಸೇವಕಿಯರು ಶ್ರಮಿಸಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ್ ಜಾಗೃತಿ ಜಾಥಾದ ಉದ್ದೇಶಗಳನ್ನು ಪರಿಚಯಿಸಿ, ಇದುವರೆಗೂ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿರುವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹಾಗೂ ಎಲ್ಲ ರಕ್ತದಾನಿಗಳಿಗೂ ವಿಶ್ವ ರಕ್ತದಾನಿಗಳ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ರಕ್ತವನ್ನು ಕೃತಕವಾಗ

ವಿದ್ಯುತ್ ದರ ಹೆಚ್ಚಳದಿಂದ ಕೈಗಾರಿಕೆಗಳಿಗೆ ತೀರ್ವ ಸಂಕಷ್ಟ: ಅವೈಜ್ಞಾನಿಕ ವಿದ್ಯುತ್ ದರ ಹೆಚ್ಚಳ ಆದೇಶ ಹಿಂಪಡೆಯದಿದ್ದರೆ ಹೋರಾಟ- ತ್ರಿವಿಕ್ರಮ ಜೋಷಿ

Image
  ವಿದ್ಯುತ್ ದರ ಹೆಚ್ಚಳದಿಂದ ಕೈಗಾರಿಕೆಗಳಿಗೆ ತೀರ್ವ ಸಂಕಷ್ಟ: ಅವೈಜ್ಞಾನಿಕ ವಿದ್ಯುತ್ ದರ ಹೆಚ್ಚಳ ಆದೇಶ  ಹಿಂಪಡೆಯದಿದ್ದರೆ ಹೋರಾಟ- ತ್ರಿವಿಕ್ರಮ ಜೋಷಿ ರಾಯಚೂರು,ಜೂ.೧೪- ಏಕಾಏಕಿ ಆವೈಜ್ಞಾನಿಕವಾಗಿ ವಿದ್ಯುತ್ ದರ ಹೆಚ್ಚಳ ಮಾಡಿರುವ ಆದೇಶ ಹಿಂಪಡೆಯದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆಂದು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ ಹೇಳಿದರು.                             ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಹೊಸದರಲ್ಲಿ ಕೈಗಾರಿಕೆಗಳಿಗೆ ವಿದ್ಯುತ್ ದರ ಏರಿಕೆಯ ಶಾಕ್ ನೀಡಿದ್ದು ಸ್ವಾಯತ್ತ ಸಂಸ್ಥೆಯಾದ ಕೆಇಅರ್‌ಸಿಯವರು ಅವೈಜ್ಞಾನಿಕವಾಗಿ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ ನಿಗದಿತ ಶುಲ್ಕ ೧ ಕೆವಿಎ ಗೆ ೨೬೫ ರೂ ಗಳಿಂದ ೩೫೦ ರೂಗೆ ಹೆಚ್ಚಿಸಿದ್ದು ಇದು ಹಗಲು ದರೋಡೆಯಾಗಿದೆ ಎಂದರು. ಎಫ್‌ಸಿಎಸಿ ದರವನ್ನು ೫೫ ಪೈಸೆಯಿಂದ ೨.೬೪ ರೂಗೆ ಏರಿಸಿದ್ದು ಒಂದು ಯೂನಿಟ್‌ಗೆ ೨ ರೂ ಹೆಚ್ಚಿಸಿದಂತಾಗುತ್ತದೆ ಎಂದ ಅವರು ಅನ್ಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ವಿದ್ಯುತ್ ದರ ಅತಿ ಹೆಚ್ಚಿಗೆಯಿದ್ದು ಇದರಿಂದ ಕೈಗಾರಿಕೆಗಳಿಗೆ ಹೊರೆಯಾಗುತ್ತದೆ ಅದು ಪರೋಕ್ಷವಾಗಿ ಗ್ರಾಹಕರಿಗೆ ಹೊರೆಯಾಗುತ್ತದೆ ಮತ್ತು ಲಕ್ಷಾಂತರ ಕಾರ್ಮಿಕರ ಬದುಕಿನ ಮೇಲೂ ಪರಿಣಾಮ ಬೀರುತ್ತದೆ ಎಂದರು. ಉದ್ಯಮಗಳ ಯಂತ್ರೋಪಕರಣ ಮತ್ತು ಬಿಡಿ ಭಾಗಗಳ ಮೇಲೂ ಶೇ.೫ ರಿಂದ ೧೮ ಶೇ ತೆರಿಗೆ ಹೆಚ್ಚಳವಾಗಿದ್ದು ಇದ