Posts

Showing posts from February, 2023

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಛೇರಿ ಮುಂದೆ ಸಿ.ಪಿ.ಐ.ಎಂ ಪ್ರತಿಭಟನೆ

Image
 ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಛೇರಿ ಮುಂದೆ    ಸಿ.ಪಿ.ಐ.ಎಂ ಪ್ರತಿಭಟನೆ ರಾಯಚೂರು,ಫೆ.28-ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಹೋರಾಟಗಾರ ಮತ್ತು ಸಿ.ಪಿ.ಐ.ಎಂ. ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಶಬ್ಬೀರ್ ತಂದೆ ಮಹ್ಮದ  ಜಾಲಹಳ್ಳಿ ಇವರ ಮೇಲೆ  ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದನ್ನು ಖಂಡಿಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಛೇರಿ ಮುಂದೆ   ಸಿ.ಪಿ.ಐ.ಎಂ. ಪಕ್ಷದ  ಕಾರ್ಯಕರ್ತರು ಪ್ರತಿಭಟನೆ  ನಡೆಸಿದರು.  ಶಬ್ಬೀರ್ ಜಾಲಹಳ್ಳಿ ಇವರು ಕಳೆದ ೧೦-೧೫ ವರ್ಷಗಳಿಂದ ವಿದ್ಯಾರ್ಥಿ ದಿಸೆಯಿಂದಲೇ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಸಂಘಟನೆಯಿ0ದ ರೈತ ಮತ್ತು ಕಾರ್ಮಿಕ ಸಂಘಟನೆಗಳ ಮೂಲಕ ಬಡವರ ಕಾರ್ಮಿಕರ ಹಕ್ಕುಗಳಿಗಾಗಿ ಅವರಿಗೆ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ನಿರಂತರವಾಗಿ ಚಳುವಳಿಗಳು ನಡೆಸುತ್ತಿದ್ದಾರೆ. ಚಳುವಳಿಯ ಭಾಗವಾಗಿ ಜನರ ಹಕ್ಕುಗಳಿಗಾಗಿ ಹೋರಾಡುವ ಇವರ ಮೇಲೆ ಯಾವುದೇ ರೀತಿಯ ಪ್ರಕರಣಗಳು ಇರುವುದಿಲ್ಲ. ಆದರೆ ಜಾಲಹಳ್ಳಿ ಪೊಲೀಸ್ ಅಧಿಕಾರಿಗಳು ಏಕಾಏಕಿಯಾಗಿ ಪಟ್ಟಭದ್ರ ಇತಾಸಕ್ತಿಗಳ ರಾಜಕೀಯ ಉದ್ದೇಶಕ್ಕಾಗಿ ಕಾನೂನು ಬಾಹೀರವಾಗಿ ಸುಳ್ಳು ಗೂಂಡಾ ಪ್ರಕರಣ ದಾಖಲಿಸಿರುವ ಸ್ಥಳೀಯ ಪೊಲೀಸ್ ಅಧಿಕಾರಿಗಳ ಕ್ರಮವನ್ನು ಸಿ.ಪಿ.ಐ.ಎಂ. ರಾಯಚೂರು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಈ ಸುಳ್ಳು ಪ್ರಕರಣದ ಬಗ್ಗೆ ಉನ್ನತ ಮಟ್ಟದ  ತನಿಖೆ ಮಾಡಿ ತ

ವಿವಿಧ ಬೇಡಕೆಗಳ ಈಡೇರಿಕೆಗೆ ಒತ್ತಾಯಿಸಿ ಎಸ್ಎಫ್ಐನಿಂದ ಉಪ ಕುಲಪತಿಗೆ ಮನವಿ

Image
  ವಿವಿಧ ಬೇಡಕೆಗಳ ಈಡೇರಿಕೆಗೆ ಒತ್ತಾಯಿಸಿ ಎಸ್ಎಫ್ಐನಿಂದ ಉಪ ಕುಲಪತಿಗೆ ಮನವಿ ರಾಯಚೂರು,ಫೆ.28- ಮಾರ್ಚ್ ನಲ್ಲಿ  ವಿವಿಧ ಕೋರ್ಸ್ ಗಳ ಪ್ರಥಮ ಹಾಗೂ ತೃತೀಯ ಎನ್ಇಪಿ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ಸರಕಾರದ ನಿಯಮದ ಪ್ರಕಾರ ಪರಿಶಿಷ್ಟ ಜಾತಿ,  ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆಧಾರದ ಮೇಲೆ ಪರೀಕ್ಷೆ ಶುಲ್ಕದಲ್ಲಿ ಸಂಬಂಧಪಟ್ಟ ದಾಖಲಾತಿ ತೆಗೆದುಕೊಂಡು ವಿನಾಯಿತಿ ಕೊಡಲು ತಿಳಿಸಿದರೂ ಸಹ  ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಪೂರ್ಣ ಶುಲ್ಕ ತೆಗೆದುಕೊಳ್ಳುತ್ತಿದ್ದಾರೆ ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಎಸ್ಎಫ್ಐ ರಾಯಚೂರು ಜಿಲ್ಲಾ ಸಮಿತಿ   ರಾಯಚೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಹರೀಶ ರಾಮಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರಥಮ ಸೆಮಿಸ್ಟರ್ ನ ಫಲಿತಾಂಶ ಬಿಡುಗಡೆ ಆಗದ ಕಾರಣ ನಾವುಗಳು ವಿದ್ಯಾರ್ಥಿ ವೇತನಕ್ಕೆ ಎಸ್ ಎಸ್ ಪಿ ಅರ್ಜಿ ಹಾಕಲು ಆಗಿರುವುದಿಲ್ಲ. ಇದು ಕೂಡ ಸಮಸ್ಯೆ ಆಗುತ್ತಿದ್ದು, ಕೂಡಲೇ ಫಲಿತಾಂಶ ಬಿಡುಗಡೆ ಮಾಡಬೇಕು ಮತ್ತು ಎಸ್ಸಿ ಎಸ್ಟಿ ಒಬಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಶುಲ್ಕ ವಿನಾಯಿತಿ ಕೊಡಬೇಕು. ಮತ್ತು  ಫಲಿತಾಂಶ ಪ್ರಕಟದಲ್ಲಿ ಅನೇಕ ವಿದ್ಯಾರ್ಥಿಗಳ ಫಲಿತಾಂಶ ದೋಷಪೂರಿತವಾಗಿದೆ ಇದು ವಿವಿಯ ಬೇಜವಾಬ್ದಾರಿತನವಾಗಿದೆ ಎಂದು ದೂರಲಾಯಿತು. ಪರೀಕ್ಷಾ ಶುಲ್ಕವನ್ನು ಕಡಿಮೆ

ಸರ್ಕಾರಿ ನೌಕರರ ಹೋರಾಟಕ್ಕೆ ಜೆಡಿಎಸ್ ಪಕ್ಷ ಬೆಂಬಲ - ಶಿವಶಂಕರ

Image
  ಸರ್ಕಾರಿ ನೌಕರರ ಹೋರಾಟಕ್ಕೆ ಜೆಡಿಎಸ್ ಪಕ್ಷ ಬೆಂಬಲ - ಶಿವಶಂಕರ ರಾಯಚೂರು.ಫೆ.28-  ರಾಜ್ಯ ಸರ್ಕಾರಿ‌ ನೌಕರರ ನ್ಯಾಯಯುತವಾದ ಬೇಡಿಕೆಗಳಾದ ವೇತನ ಭತ್ಯೆ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಸಂಬಂಧ   ಸರ್ಕಾರಿ‌ ನೌಕರರ  ಅನಿರ್ದಿಷ್ಟಾವಧಿ ಮುಷ್ಕರಕ್ಕೆ   ಜೆಡಿಎಸ್ ಪಕ್ಷದಿಂದ ಸಂಪೂರ್ಣ ಬೆಂಬಲವಿದೆ ಎಂದು ಜೆಡಿಎಸ್ ಜಿಲ್ಲಾ  ಕಾರ್ಯಧ್ಯಕ್ಷ ಎನ್ ಶಿವಶಂಕರ ವಕೀಲರು ತಿಳಿಸಿದ್ದಾರೆ .                                              ನಮ್ಮ ರಾಜ್ಯದ ಸರ್ಕಾರಿ ನೌಕರರು ಇತರೆ ರಾಜ್ಯಗಳಿಗಿಂತ ಕಡಿಮೆ ಸಂಬಳದಲ್ಲಿ ದುಡಿಯುತ್ತಿದ್ದಾರೆ.                                       7ನೇ ವೇತನ ಆಯೋಗದ ವರದಿಯಂತೆ ನಮ್ಮ ವೇತನ ಶೇ 40 ರಷ್ಟು ಹೆಚ್ಚಿಸಬೇಕು. ಪಂಜಾಬ್, ರಾಜಸ್ಥಾನ, ಛತ್ತೀಸ್​ಘಡ್, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳ ರೀತಿಯಲ್ಲಿ ನಮ್ಮಲ್ಲೂ ಸಹ ಒಪಿಎಸ್ ಜಾರಿ ಮಾಡಬೇಕು ಎಂಬ ಬೇಡಿಕೆ‌ ಇದೆ ಇದು ನೌಕರರ ನ್ಯಾಯಯುತವಾದ ಹಾಗೂ ಸರಳ ಬೇಡಿಕೆಯಾಗಿದೆ. ನೌಕರರು ತಮ್ಮ ಬೇಡಿಕೆ ಹೋರಾಟದ ಕುರಿತು ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು ಆದರೆ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗೆದೆ .ಸರ್ಕಾರ ವೇತನ ಆಯೋಗದ ಕುರಿತು ಬಜೆಟ್​ನಲ್ಲಿ ಘೋಷಣೆ ಮಾಡುವ ಕುರಿತ ನಿರೀಕ್ಷೆ ಇತ್ತು. ಆದರೆ ಅಲ್ಲಿ ಘೋಷಣೆ ಮಾಡದೆ ನೌಕರರಿಗೆ ನಿರಾಸೆಯನ್ನುಂಟು ಮಾಡಲಾಗಿದೆ ಎಂದು ತಿಳಿಸಿದ್ದಾರೆ .

ದೇವಸ್ಗೂರು: ಶ್ರೀ ಸವಿತಾ ಮಹರ್ಷಿ ಜಯಂತಿ ಅಂಗವಾಗಿ ವಿಜೃಂಭಣೆಯಿಂದ ಭಾವಚಿತ್ರ ಮೆರವಣಿಗೆ

Image
ದೇವಸ್ಗೂರು: ಶ್ರೀ ಸವಿತಾ ಮಹರ್ಷಿ ಜಯಂತಿ ಅಂಗವಾಗಿ ವಿಜೃಂಭಣೆಯಿಂದ ಭಾವಚಿತ್ರ ಮೆರವಣಿಗೆ                      ದೇವಸುಗೂರು .ಫೆ- 28. ರಾಯಚೂರು ತಾಲೂಕಿನ ದೇವಸುಗೂರು ಗ್ರಾಮದಲ್ಲಿ   ಸವಿತಾ ಸಮಾಜ ಹಮ್ಮಿಕೊಂಡಿದ್ದ ಶ್ರೀ ಸವಿತಾ ಮಹರ್ಷಿ  ಜಯಂತೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಭಾವಚಿತ್ರ ಮೆರವಣಿಗೆ ಮಾಡಲಾಯಿತು.                           ಸೂಗುರೇಶ್ವರ ದೇವಸ್ಥಾನ ಹತ್ತಿರ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಮಾಜಿ ಶಾಸಕ ತಿಪ್ಪರಾಜ್ ಹವಲ್ದಾರ್ ಪೂಜೆ ಸಲ್ಲಿಸಿ  ನಂತರ ಶ್ರೀ  ದೇವಸುಗೂರೇಶ್ವರ ದೇವಸ್ಥಾನದಿಂದ  ಭಾವಚಿತ್ರದ ಮೆರವಣಿಗೆಯನ್ನು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು . ಸೂಗುರೇಶ್ವರ ದೇವಸ್ಥಾನದಿಂದ ಹೊರಟು ಎರಡನೇ  ಕ್ರಾಸ್ ದಿಂದ ಪೊಲೀಸ್ ಠಾಣೆ ಮಾರ್ಗವಾಗಿ ಕಾರ್ಯಕ್ರಮ ನಡೆಯವ ಬಸವ ಕಲ್ಯಾಣ ಮಂಟಪ ವರೆಗೆ ನಡೆಯಿತು ವಿವಿಧ ಕಲಾವಿದರಿಂದ ಆಕರ್ಷಕ ನೃತ್ಯ ಪ್ರದರ್ಶನ ಜರುಗಿತ್ತು ಮೆರವಣಿಗೆಯಲ್ಲಿ ಶಶಿಕಲ ಭೀಮರಾಯ, ಪ್ರಕಾಶ್ ಹೋಬಳಿ ಅಧ್ಯಕ್ಷ ಭೀಮಣ್ಣ ತಾಲೂಕು ಅಧ್ಯಕ್ಷ ಗುಂಜಳ್ಳಿ ಭೀಮೇಶ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಇಟಗಿ ರಾಜ್ಯ ಮಹಿಳಾ ಅಧ್ಯಕ್ಷರಾದ ಸುಮಾ ಗಸ್ತಿ ಜಿಲ್ಲಾಧ್ಯಕ್ಷ ವಿಜಯ್ ಭಾಸ್ಕರ್ ಇಟಿಗಿ  ವಿಭಾಗೀಯ ಕಾರ್ಯದರ್ಶಿ ವಲ್ಲೂರು ವೆಂಕಟೇಶ್ ನಗರ ಅಧ್ಯಕ್ಷ ವಿ ಗೋವಿಂದ ಉರುಕುಂದಿ ಎಸ್ ಅನಿಲ್  ಗೋಪಾಲ್ ವಡವಟ್ಟಿ ಅಶೋಕ್ ಡಿ ಸುರೇಶ್ ಭೀಮಣ್ಣ ಮಲ್ಲೇಶ್ ರಮೇಶ್ ಸುರೇಶ್ ದಿನೇಶ್ ಆಂಜನೇಯ ಗ್ರಾಮದ ವ

ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಗುರುವೈಭವೋತ್ಸವಕ್ಕೆ ಅದ್ದೂರಿ ತೆರೆ: ರಾಯರ ವರ್ಧಂತಿ ಅಂಗವಾಗಿ ತಿರುಪತಿ ಶೇಷವಸ್ತ್ರ ಹಾಗೂ ನಾದಹಾರ ಸಮರ್ಪಣೆ

Image
 ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಗುರುವೈಭವೋತ್ಸವಕ್ಕೆ ಅದ್ದೂರಿ ತೆರೆ: ರಾಯರ ವರ್ಧಂತಿ ಅಂಗವಾಗಿ ತಿರುಪತಿ ಶೇಷವಸ್ತ್ರ ಹಾಗೂ ನಾದಹಾರ ಸಮರ್ಪಣೆ ರಾಯಚೂರು,ಫೆ.೨೬-ಕಳೆದ ಒಂದು ವಾರದಿಂದ ಮಂತ್ರಾಲಯದಲ್ಲಿ ನಡೆಯುತ್ತಿದ್ದ ಶ್ರೀ ರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವಕ್ಕೆ ಇಂದು ಅದ್ದೂರಿ ತೆರೆ ಬಿದ್ದಿದ್ದು ಇಂದು ಟಿಟಿಡಿ ದೇವಸ್ಥಾನ ಸಮಿತಿಯಿಂದ ರಾಯರ ಮೂಲ ಬೃಂದಾವನಕ್ಕೆ ತಿರುಪತಿ ಶ್ರೀ ವೆಂಕಟೇಶ್ವರ ದೇವರ ಶೇಷವಸ್ತç ಸಮರ್ಪಿಸಲಾಯಿತು. ಬೆಳಿಗ್ಗೆ ಟಿಟಿಡಿ ಸಿಬ್ಬಂದಿಗಳು ಹಾಗೂ ವಿಧ್ವಾಂಸರು ಶೇಷವಸ್ತçವನ್ನು ಶ್ರೀ ಮಠಕ್ಕೆ ತಂದರು ನಂತರ ವಾದ್ಯ ವೈಭವದೊಂದಿಗೆ ವಸ್ತçವನ್ನು ಬರಮಾಡಿಕೊಳ್ಳಲಾಯಿತು ನಂತರ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಹರಿವಾಣದಲ್ಲಿ ಅದನ್ನು ತಮ್ಮ ಶಿರದ ಮೇಲೆ ಹೊತ್ತು ರಾಯರ ಮೂಲ ಬೃಂದಾವನಕ್ಕೆ ಸಮರ್ಪಿಸಿದರು. ರಾಯರಿಗೆ ಪಂಚಾಮೃತ ಅಭೀಷೇಕ ನೆರವೇರಿಸಲಾಯಿತು. ನಂತರ ರಜತ ರಥೋತ್ಸವಕ್ಕೆ ಪೀಠಾಧಿಪತಿಗಳು ಚಾಲನೆ ನೀಡಿದರು. ಕಳೆದ ೧೯ ವರ್ಷದಿಂದ ಸತತವಾಗಿ ಮಂತ್ರಾಲಯದಲ್ಲಿ ನಾದಹಾರ ಸೇವೆಗೈಯುತ್ತಿರುವ ಚೆನ್ನೆöÊನ ನಾದಹಾರ ಟ್ರಸ್ಟ್ನ ಸುಮಾರು ೩೦೦ ಕ್ಕೂ ಹೆಚ್ಚು ಕಲಾವಿದರಿಂದ ನಾದಹಾರ ಸಂಗೀತ ಸೇವೆ ಸಮರ್ಪಿಸಲಾಯಿತು. ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಆಶೀರ್ವಚನ ನೀಡಿ ಇಂದು ರಾಯರ ೪೨೮ನೇ ವರ್ಧಂತಿ ಮಹೋತ್ಸವ  ನೆಡೆಯುತ್ತಿದ್ದು ಆ ಮೂಲಕ ಫೆ.೨೧ ರಿಂದ ಒಂದು ವಾರದವರೆಗೆ ನಡೆಯುತ್ತಿದ್ದ ಗುರುವೈಭವೋತ್

ಧರ್ಮದಲ್ಲಿ ರಾಜಕೀಯ ಬರಬಾರದು ರಾಜಕೀಯದಲ್ಲಿ ಧರ್ಮ ಬರಬೇಕು: ಉತ್ತಮರು ಯಾರೇಯಾದರೂ ರಾಜಕೀಯ ಪ್ರವೇಶಿಸಬಹುದು- ಶ್ರೀ ಸುಬುಧೇಂದ್ರತೀರ್ಥರು

Image
  ಧರ್ಮದಲ್ಲಿ ರಾಜಕೀಯ ಬರಬಾರದು ರಾಜಕೀಯದಲ್ಲಿ ಧರ್ಮ ಬರಬೇಕು: ಉತ್ತಮರು ಯಾರೇಯಾದರೂ ರಾಜಕೀಯ ಪ್ರವೇಶಿಸಬಹುದು- ಶ್ರೀ ಸುಬುಧೇಂದ್ರತೀರ್ಥರು ರಾಯಚೂರು,ಫೆ.೨೬-ಉತ್ತಮರು ಯಾರೇ ಆಗಿರಲಿ ಅವರು ರಾಜಕೀಯ ಪ್ರವೇಶಿಸಿ ಜನರಿಗೆ ಬೇಕಾಗುವ ಅಭಿವೃದ್ದಿ ಕೆಲಸಗಳನ್ನು ಮಾಡಬಹುದೆಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನುಡಿದರು. ಅವರಿಂದು ಮಂತ್ರಾಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಮಠಾಧೀಶರು, ಸನ್ಯಾಸಿಗಳು ರಾಜಕೀಯ ಪ್ರವೇಶ ಮಾಡುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ ಇಂತಹವರೆ ರಾಜಕೀಯ ಪ್ರವೇಶಿಸಬೇಕೆಂದು ಏನು ಇಲ್ಲ ಉತ್ತಮರು ಯಾರೆ ಆಗಿರಲಿ ಅವರು ರಾಜಕೀಯ ಪ್ರವೇಶಿಸಬಹುದು ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುವವರು ಮತ್ತು ಅಭಿವೃದ್ದಿ ಚಿಂತನೆಯುಳ್ಳ ಯಾರಾದರೂ ಸರಿ ರಾಜಕೀಯ ಪ್ರವೇಶಿಸಬಹುದೆಂದ ಅವರು ಧರ್ಮದಲ್ಲಿ ರಾಜಕೀಯ ಬರಬಾರದು ಆದರೆ ರಾಜಕೀಯದಲ್ಲಿ ಧರ್ಮದಿಂದ ನ ಡೆ ದುಕೊಳ್ಳಬೇಕೆಂದರು. ಧಾರ್ಮಿಕ ಮುಖಂಡರು ಧಾರ್ಮಿಕವಾಗಿ ದೇಶವನ್ನು ಮುನ್ನಡೆಸಬೇಕು ರಾಜಕೀಯ ವ್ಯಕ್ತಿಗಳಿಗೆ ಸಲಹೆ ಸೂಚನೆ ನೀಡುತ್ತೇವೆ ತಾವು ಸ್ವತಃ ರಾಜಕೀಯ ಪ್ರವೇಶಸುವುದಿಲ್ಲವೆಂದ ಅವರು ಪರೋಕ್ಷವಾಗಿ ಸಾಧು, ಸಂತರು, ಮಠಾಧೀಶರು ರಾಜಕೀಯ ಪ್ರವೇಶಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಯಿಸಿದರು. ಮಂತ್ರಾಲಯದಲ್ಲಿ ಇಂದು ಶ್ರೀ ಗುರುರಾಯ ೪೨೮ನೇ ವರ್ಧಂತಿ(ಜನ್ಮದಿನೋತ್ಸವ) ನಡೆಯುತ್ತಿದ್ದು ಕಳೆದ ಒಂದು ವಾರದಿಂದ ನಡೆಯುತ್

ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ-ದದ್ದಲ್

Image
  ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ-ದದ್ದಲ್ ರಾಯಚೂರು.ಫೆ.26- ಬಡತನವನ್ನು ಮೆಟ್ಟಿ ನಿಂತು ಕಷ್ಟ ಪಟ್ಟು ವಿದ್ಯಾಬ್ಯಾಸ ಮಾಡಿ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವೆಂದು ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಹೇಳಿದರು. ತಾಲೂಕಿನ ಮಮದಾಪೂರ ಗ್ರಾಮದ ಎಂಜಿ ಶಾಲೆಯ 5ನೇ ಶಾಲಾ ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಈ ದೇಶಕ್ಕೆ ಅನ್ನ ಕೊಡುವ ರೈತ ಮತ್ತು ಸೈನಿಕರ ಪಾತ್ರ ಮುಖ್ಯವಾಗಿದೆ, ರೈತ ಮತ್ತು ಸೈನಿಕರಿಗೆ ಗೌರವ ಕೊಡುವ ಕೆಲಸ ಸರ್ಕಾರ ಮಾಡಬೇಕಿದೆ,  ಮೃತಪಟ್ಟಿರುವ ಸೈನಿಕನ ಕುಟುಂಬಕ್ಕೆ ಸೌಲಭ್ಯ ಒದಗಿಸಿಕೊಡಬೇಕು, ಅವರಿಗೆ ಗೌರವ ನೀಡುವ ಕೆಲಸ ಆಗಬೇಕಿದೆ, ಅವರಿಗೆ ಪ್ರೋತ್ಸಾಹ ಕೊಡ ಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ದೇಶ ಕಾಯುವ ಸೈನಿಕ, ವಿಜ್ಞಾನ, ರಾಷ್ಟ್ರಪತಿ ಆಗಬಹುದು, ದೇಶದಲ್ಲಿ ಗ್ರಾಮದಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ದೇಶದಲ್ಲಿ ಸಾಧನೆ ಮಾಡಿದ್ದಾರೆ, ಅಬ್ದುಲ್ ಕಲಾಂ ರಾಷ್ಟ್ರಪತಿಗಳಾಗಿದ್ದಾರೆ, ಬಡತನದಲ್ಲಿ ಕಷ್ಟ ಪಟ್ಟು ಓದಿದ ವಿದ್ಯಾರ್ಥಿ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯವೆಂದರು. ತಂದೆ ತಾಯಿಗಳಿಗೆ ಎಷ್ಟೇ ಕಷ್ಟ ವಿದ್ದರೂ ತಮ್ಮ ಮಕ್ಕಳಿಗೆ ಶಿಕ್ಷಣ ಒದಗಿಸಿಕೊಡುವ ಕೆಲಸ ಮಾಡಬೇಕು, ಶಿಕ್ಷಕರು ಮಕ್ಕಳಿಗೆ  ಗುಣಮಟ್ಟದ ನೀಡಬೇಕು, ತಾಲೂಕಿನಲ್ಲಿರುವ 35 ರಿಂದ 40 ಕೋಟಿ ಶಾಲೆಗಳಿಗೆ ಖರ್ಚು ಮಾಡಿದ್ದೇನೆ, 2019-20ನೇ

ನವದೆಹಲಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಂದ ಬ್ರಹ್ಮೋದ್ಯೋಗ ಉದ್ಘಾಟನೆ

Image
ನವದೆಹಲಿ:  ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಂದ ಬ್ರಹ್ಮೋದ್ಯೋಗ ಉದ್ಘಾಟನೆ          ರಾಯಚೂರು,ಫೆ.25- ನವದೆಹಲಿಯಲ್ಲಿ ನಡೆದ ಅಖಿಲ ಭಾರತ ಬ್ರಾಹ್ಮಣ ಮಹಾಸಂಘದ ಆಶ್ರಯದಲ್ಲಿ  ಸಂಯೋಜಿಸಲ್ಪಟ್ಟ ಅಖಿಲ ಭಾರತ ಮಟ್ಟದ ಬ್ರಾಹ್ಮಣ  ಉದ್ಯಮಿಗಳ ಸಮಾವೇಶ "ಬ್ರಹ್ಮೋದ್ಯೋಗ" ವನ್ನು  ಉದ್ಘಾಟಿಸಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಅನುಗ್ರಹ ಸಂದೇಶ ನೀಡಿದರು .                        ಈ ಸಂದರ್ಭದಲ್ಲಿ   ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ , ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ , ಅಖಿಲ ಭಾರತ ಮಹಾಸಂಘದ ಅಧ್ಯಕ್ಷ ಡಾ ಗೋವಿಂದ ಕುಲಕರ್ಣಿ , ಬ್ರಾಹ್ಮಣ ಮಹಾ  ಸಂಘದ ಉದ್ಯಮ ವಿಭಾಗದ ಸಂಯೋಜಕ ಶ್ರೀಕಾಂತ್ ಬಡ್ವೆ , ಹರ್ಯಾಣದ ಅರವಿಂದ ಶರ್ಮಾ , ತ್ರಿವಿಕ್ರಮ ಜೋಶಿ ಇನ್ನಿತರರು ಉಪಸ್ಥಿತರಿದ್ದರು .

ಕೃಷ್ಣ ಸೇತುವೆ ದುರಸ್ಥಿ : ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ - ಅಮರೇಶ್ವರ ನಾಯಕ

Image
ಕೃಷ್ಣ ಸೇತುವೆ ದುರಸ್ಥಿ : ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ - ಅಮರೇಶ್ವರ ನಾಯಕ ರಾಯಚೂರು,ಫೆ.24- ರಾಜಾ ಅಮರೇಶ್ವರ ನಾಯಕ, , ಕೃಷ್ಣ ನದಿಯ ಸೇತುವೆ ಮೇಲೆ ನಡೆದಿರುವ ರಸ್ತೆ ದುರಸ್ತಿ  ಕಾಮಗಾರಿ ಸ್ಥಳಕ್ಕೆ ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ   ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿದರು.                                   ಅಲ್ಲಿರುವ ರಾಷ್ಟ್ರೀಯ ಹೆದ್ದಾರಿ 167 ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಿಗೆ ಮತ್ತು ಇಂಜಿನಿಯರಿಂಗ್ ಗಳಿಗೆ  ಸದರಿ ಸೇತುವೆಯ ಪೂರ್ಣ 750 ಮೀಟರ್ ಉದ್ದ ಹಾಗೂ 5.50  ಮೀಟರ್ ಕೆ ಹಾಕುತ್ತಿರುವ ಬಿ. ಸಿ.  ಕಾಮಗಾರಿಯನ್ನು ಉತ್ತಮವಾಗಿ ಹಾಗೂ ನಿಗದಿತ ಅವಧಿ ಫೆ.25ರ  ಒಳಗಾಗಿ 25-02-ದುರಸ್ತಿ ಕಾರ್ಯ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಸೂಚನೆ ನೀಡಿದರು.  ನಂತರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ರಾಷ್ಟ್ರೀಯ ಹೆದ್ದಾರಿ ಇವರು ಸದರಿ ಕಾಮಗಾರಿಯನ್ನು ಉತ್ತಮವಾಗಿ ಹಾಗೂ ನಿಗದಿತ ಸಮುದೊಳಗೆ ಪೂರ್ಣಗೊಳಿಸಲಾಗುವದು ಎಂದು ಭರವಸೆ ನೀಡಿದರು. ನಂತರ ಈ  ಈ ಸೇತುವೆಯ, ದುರಸ್ತಿ ಕಾಮಗಾರಿ ಬಾಳಿಕೆಗಾಗಿ ತಮಗೆ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ನ್ಯಾಷನಲ್ ಹೈವೇ ಡಿವಿಜನ್ ಚಿತ್ರದುರ್ಗ ಇವರಿಂದ ರಾಷ್ಟ್ರೀಯ ಹೆದ್ದಾರಿ ತಾಂತ್ರಿಕ  ಅಭಿಯಂತರರುಗಳ ವರದಿ ಬಂದಿದ್ದು, ಸದರಿ ಸೇತುವೆಯ ರಸ್ತೆ ದುರಸ್ತಿಯು ಫಲಪ್ರದವಾಗಲು ಹಾಗೂ  ಬಾಳಿಕೆಗಾಗಿ ಈ ಕೆಳಗಿನ ಕೆಲವು ಕ್ರಮಗಳನ್ನು  ಪಾಲಿಸಲು ಕೋ

ಮಂತ್ರಾಲಯ: ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ ಮತ್ತು ನಟಿ ರಚಿತಾ ರಾಮ್ ಗೆ ಸನ್ಮಾನ.

Image
  ಮಂತ್ರಾಲಯ: ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ ಮತ್ತು ನಟಿ ರಚಿತಾ ರಾಮ್ ಗೆ ಸನ್ಮಾನ.            ರಾಯಚೂರು,ಫೆ.23- ಮಂತ್ರಾಲಯದಲ್ಲಿ ನಡೆಯುತ್ತಿರುವ ಶ್ರೀ ಗುರುವೈಭವೋತ್ಸವದಲ್ಲಿ ರಾಜ್ಯ ಸಭಾ ಸದಸ್ಯ ಹಾಗೂ  ನಟ ಜಗ್ಗೇಶರವರಿಗೆ ಮತ್ತು ನಟಿ ರಚಿತಾ ರಾಮ್ ಅವರಿಗೆ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಪ್ರಶಸ್ತಿ ನೀಡಿ ಸನ್ಮಾನಿಸಿದರು.                                          ನಟ ಜಗ್ಗೇಶ ಪತ್ನಿ ಸಮೇತರಾಗಿ ಶ್ರೀ ಮಂಚಾಲಮ್ಮ  ದೇವಿ ಹಾಗೂ ರಾಯರ ಮೂಲ ಬೃಂದಾವನ ದರ್ಶನ ಪಡೆದರು. ನಟಿ ರಚಿತಾ ರಾಮ್ ರವರು ಸಹ ಮಂಚಾಲಮ್ಮ ದೇವಿ ದರ್ಶನ ಪಡೆದು ರಾಯರ  ಮೂಲ ಬೃಂದಾವನ ದರ್ಶನ ಪಡೆದುಕೊಂಡರು.

ಜೆ ಡಿ ಎಸ್ ನಿಂದ ಮನೆ ಮನೆಗೆ ಕುಮಾರಣ್ಣ: ಜನತೆ ಆರ್ಶೀವಾದಿಂದ ಕುಮಾರಣ್ಣ ಮತ್ತೆ ಮುಖ್ಯ ಮಂತ್ರಿಯಾಗಲಿ- ಕಿಲ್ಲೆ ಶ್ರೀಗಳು

Image
ಜೆ ಡಿ ಎಸ್ ನಿಂದ ಮನೆ ಮನೆಗೆ ಕುಮಾರಣ್ಣ:                                      ಜನತೆ ಆರ್ಶೀವಾದಿಂದ ಕುಮಾರಣ್ಣ ಮತ್ತೆ  ಮುಖ್ಯ ಮಂತ್ರಿಯಾಗಲಿ- ಕಿಲ್ಲೆ ಶ್ರೀಗಳು   ರಾಯಚೂರು,ಫೆ.22- ನಗರದ ಕಿಲ್ಲೆ ಬೃಹನ್ಮಠದಲ್ಲಿ ಮಠದ ದೇವಸ್ಥಾನದಲ್ಲಿ ಶ್ರೀ ಶ್ರೀ ಶಾಂತಮಲ್ಲ ಶಿವಾಚಾರ್ಯ ದಿವ್ಯ ಸಾನಿಧ್ಯ ದಲ್ಲಿ ಪ್ರಚಾರ ವಾಹನ ಕರಪತ್ರಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ನಂತರ ಆರ್ಶೀವಾಚನ ನೀಡಿ ನಮ್ಮ ಮಠಕ್ಕೆ ಎಲ್ಲ ರಾಜಕೀಯ ಪಕ್ಷದವರು ಆಗಮಿಸುವರು ಇಂದು ಜೆಡಿಎಸ್ ಪಕ್ಷದವರು ಮಠದಲ್ಲಿ ಪೂಜೆ ಮಾಡಿದ್ದು ಸಂತೋಷ ವಿಷಯ ಹಗಲು ರಾತ್ರಿಯ ಜನರ ಸೇವೆ ಸಲ್ಲಿಸುವ ಸರಳ ವ್ಯಕ್ತಿತ್ವದ ಕುಮಾರಸ್ವಾಮಿಯವರನ್ನು ನಾಡಿನ ಜನತೆ ಮತ್ತೊಮ್ಮೆ ಮುಖ್ಯ ಮಂತ್ರಿಯ ಮಾಡಲಿ ಜನಸಾಮಾನ್ಯರ ಸಂಕಷ್ಟ ಮಿಡಿಯುವ ನಾಯಕರು ಈಗ ಅವಶ್ಯಕವಾಗಿದೆ ಪ್ರಚಾರ ಕಾರ್ಯ ಯಶಸ್ವು ಯಾಗಲಿ ಎಂದು ಹಾರೈಸಿದರು. ಜೆ ಡಿ ಎಸ್ ಅಭ್ಯರ್ಥಿ ಈ ವಿನಯಕುಮಾರ ಮನೆ ಮನೆಗೆ ಕಮಾರಣ್ಣ  ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿ" ಪಕ್ಷದಿಂದ ರಾಯಚೂರು ನಗರದಲ್ಲಿ ಪ್ರತಿ ಮನೆಗೆ ಹೋಗಿ  ಜನತೆಗೆ ಕುಮಾರಣ್ಣ ಪಂಚರತ್ನ ಯೋಜನೆಯ ತಿಳಿಸಲಾಗುವದು  ಕುಮಾರಣ್ಣ ನನಗೆ ರಾಯಚೂರು ನಗರದಲ್ಲಿ ಜೆಡಿಎಸ್ ಬಾವುಟ ಹಾರಿಸಿಲು ಆಶಿರ್ವಾದ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಪಕ್ಷ ಬಲಿಷ್ಠ ಗಳಿಸುತ್ತನೆ  ಎಂದರು.   ರಾಜ್ಯ ಉಪಾಧ್ಯಕ್ಷ ಮಹಾಂತೇಶಪಾಟೀಲ ಮಾತನಾಡಿದ   ಮಾತನಾಡಿ , ಎರಡು ರಾಷ್ಟ್ರೀಯ ಪಕ್ಷಗಳಿಂದ ಜನತೆ ಬೇಸತ್

ಮಂತ್ರಾಲಯದಲ್ಲಿ ಖಾಸಗಿಯವರ ಸಹ ಭಾಗಿತ್ವದಲ್ಲಿ ಮಿನಿ ಏರ್‌ಪೋರ್ಟ್ ನಿರ್ಮಾಣ: ರಾಯಚೂರಲ್ಲಿ ಏಮ್ಸ್ ಸ್ಥಾಪನೆಗೆ ಸಿಎಂಗೆ ಮನವಿ ಮಾಡುತ್ತೇವೆ- ಶ್ರೀ ಸುಬುಧೇಂದ್ರತೀರ್ಥರು

Image
ಮಂತ್ರಾಲಯದಲ್ಲಿ ಖಾಸಗಿಯವರ ಸಹ ಭಾಗಿತ್ವದಲ್ಲಿ ಮಿನಿ ಏರ್‌ಪೋರ್ಟ್ ನಿರ್ಮಾಣ: ರಾಯಚೂರಲ್ಲಿ ಏಮ್ಸ್ ಸ್ಥಾಪನೆಗೆ ಸಿಎಂಗೆ ಮನವಿ ಮಾಡುತ್ತೇವೆ- ಶ್ರೀ ಸುಬುಧೇಂದ್ರತೀರ್ಥರು ರಾಯಚೂರು,ಫೆ.೨೨- ಬಜೆಟ್‌ನಲ್ಲಿ ರಾಯಚೂರಲ್ಲಿ ಏಮ್ಸ್ ಮಾದರಿ ಆಸ್ಪತ್ರೆ ಘೋಷಣೆ ಮಾಡಿದ್ದು ಆದರೆ ಅನೇಕ ದಿನಗಳಿಂದ   ಏಮ್ಸ್  ಗಾ ಗಿ ಹೋರಾಟ ನಡೆದಿದ್ದು ಆದ್ದರಿಂದ ಸರ್ಕಾರ ಏಮ್ಸ್ ನೀಡಬೇಕು ಈ ನಿಟ್ಟಿನಲ್ಲಿ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಲಾಗುತ್ತದೆ ಎಂದು ಮಂತ್ರಾಲಯ ಶ್ರೀ ರಾಘವೇಂದದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನುಡಿದರು. ಅವರಿಂದು ಮಂತ್ರಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ  ಏಮ್ಸ್ ಬಗ್ಗೆ ಪ್ರತಿಕ್ರಯಿಸಿ ಏಮ್ಸ್ ಆಸ್ಪತ್ರೆ ಸ್ಥಾಪನೆಯಿಂದ ಈ ಭಾಗಕ್ಕೆ ಆರೋಗ್ಯ ಸೌಕರ್ಯ ದೊರೆಯುತ್ತದೆ ಅಲ್ಲದೆ ಈ ಭಾಗದ ಅಭಿವೃದ್ದಿಯೂ ಆಗುತ್ತದೆ ಎಂದರು. ಮ0ತ್ರಾಲಯದಲ್ಲಿ ಖಾಸಗಿಯವರ ಸಹ ಭಾಗಿತ್ವದಲ್ಲಿ ಮಿನಿ ಏರ್‌ಪೋರ್ಟ್ ನಿರ್ಮಾಣ ಚಿಂತನೆಯಿದ್ದು ಯಾರಾದರು ಉದ್ಯಮಿಗಳು ಮುಂದೆ ಬಂದು ಮಿನಿ ಏರ್‌ಪೋರ್ಟ್ ನಿರ್ಮಾಣಕ್ಕೆ ಮುಂದಾದರೆ ಸಕಲ ಸಹಕಾರ ನೀಡಲಾಗುತ್ತದೆ ಈಗಾಗಲೆ ಪ್ರಜಕ್ಟ್ ರಿಪೋರ್ಟ್ ಸಿದ್ದಪಡಿಸಲಾಗುತ್ತಿದೆ ಅದು ಬಂದ ನಂತರ ಮುಂದಿನ ಹೆಜ್ಜೆಯಿರಿಸಲಾಗುತ್ತದೆ ವಿಮಾಣ ನಿಲ್ದಾಣ ನಿರ್ಮಾಣದಿಂದ ಭಕ್ತರಿಗೆ ದೂರದ ಊರುಗಳಿಂದ ಮಂತ್ರಾಲಯಕ್ಕೆ ತಲುಪಲು ಅನುಕೂಲವಾಗುತ್ತದೆ ಎಂದರು. ಬೆಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ ನಡ್ಡಾ ವಿವಿಧ ಮಠಗಳ ಸ

ಮಂತ್ರಾಲಯದಲ್ಲಿ ಅದ್ದೂರಿಯಾಗಿ ರಾಯರ 402 ನೇ ಪಟ್ಟಾಭಿಷೇಕ ಮಹೋತ್ಸವ: ರಾಘವೇಂದ್ರಸ್ವಾಮಿಗಳು ವಿಶ್ವಕ್ಕೆ ಪ್ರಭುಗಳು-ಶ್ರೀ ಸುಬುಧೇಂದ್ರತೀರ್ಥರು

Image
  ಮಂತ್ರಾಲಯದಲ್ಲಿ ಅದ್ದೂರಿಯಾಗಿ ರಾಯರ 402 ನೇ ಪಟ್ಟಾಭಿಷೇಕ ಮಹೋತ್ಸವ: ರಾಘವೇಂದ್ರಸ್ವಾಮಿಗಳು ವಿಶ್ವಕ್ಕೆ ಪ್ರಭುಗಳು-ಶ್ರೀ ಸುಬುಧೇಂದ್ರತೀರ್ಥರು ರಾಯಚೂರು,ಫೆ.೨೨-ರಾಘವೇ0ದ್ರ ಸ್ವಾಮಿಗಳು ಸಮಸ್ತ ಜೀವರಾಶಿಗಳಿಗೂ ಒಳಿತನ್ನು ಬಯಸುವವರಾಗಿದ್ದು ಅವರು ವಿಶ್ವಕ್ಕೆ ಪ್ರಭುಗಳಾಗಿದ್ದಾರೆಂದು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನುಡಿದರು. ಅವರಿಂದು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ರಾಯರ ೪೦೨ನೇ ಪಟ್ಟಾಭಿಷೇಕ ಅಂಗವಾಗಿ ರಾಯರ ಮೂಲ ಪಾದುಕೆಗಳಿಗೆ ಅಭೀಷೇಕ ಮತ್ತು ಪುಷ್ಪ ವೃಷ್ಟಿ ನೆರವೇರಿಸಿ ರಾಯರ ಮೂಲ ಬೃಂದಾªನಕೆ ವಿಶೇಷ ಪೂಜೆ ನೆರವೇರಿಸಿ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು. ರಾಯರು ಶ್ರೀ ಸುಧೀಂದ್ರತೀರ್ಥರಿ0ದ ಸನ್ಯಾಸತ್ವ ಸ್ವೀಕರಿಸಿ ನಂತರ ಪೀಠಾರೋಹಣ ಮಾಡಿದರು ತಂಜಾವೂರಿನ ರಾಜರ ಆಸ್ಥಾನದಲ್ಲಿ ರಾಜ ಮರ್ಯಾದೆಯೊಂದಿಗೆ ಪೀಠವನ್ನು ಅಲಂಕರಿಸಿ ಸನಾತನ ದ್ವೆöÊತ ಸಿದ್ದಾಂತವನ್ನು ಲೋಕದೆಲ್ಲಡೆ ಬೆಳಗಿ ಅಬಾಲ ವೃದ್ದರಾದಿಯಾಗಿ ಸಕಲ ಜೀವರಾಶಿಗಳಿಗೆ ಅನುಗ್ರಹಿಸಿದ ಕೀರ್ತಿ ಪುರುಷರು ರಾಘವೇಂದ್ರ ಸ್ವಾಮಿಗಳು ಎಂದರು. ಶ್ರೀ ನಿವಾಸದೇವರಿಂದ ಅನುಗ್ರಹಿತರಾಗಿ ಶ್ರೀಮಧ್ವಾಚಾರ್ಯರ ತತ್ವಗಳನ್ನು ಪಸರಿಸಿದವರು ರಾಯರು ಎಂದ ಅವರು ಸತ್ಯ ಧರ್ಮಗಳಲ್ಲಿ ರತರಾಗಿ ಸುಮಾರು ೧೦೪ ಸ್ವಗ್ರಂಥಗಳನ್ನು ರಚಿಸಿ ವಿಧ್ವತ್ ಪ್ರಪಂಚಕ್ಕೆ ಅಪಾರ ಕೊಡುಗೆ ನೀಡಿದವರಾಗಿದ್ದು ಅವರು ಇಂದಿಗೂ ಜನರ ಕಷ್ಟ ಕ

ವಾರ್ಡ್ ನಂ 17- ಅವೈಜ್ಞಾನಿಕ ಬ್ಯಾರಿಕೇಡ್ ಅಳವಡಿಕೆ ವಾಹನ ಸಂಚಾರಕ್ಕೆ ಅಡಚಣೆ

Image
ವಾರ್ಡ್ ನಂ 17- ಅವೈಜ್ಞಾನಿಕ ಬ್ಯಾರಿಕೇಡ್ ಅಳವಡಿಕೆ  ವಾಹನ ಸಂಚಾರಕ್ಕೆ ಅಡಚಣೆ .                            ರಾಯಚೂರು,ಫೆ.21- ನಗರದ ವಾರ್ಡ್ ನಂ.17 ರಲ್ಲಿ ಅವೈಜ್ಞಾನಿಕ ಬ್ಯಾರಿಕೇಡ್ ಅಳವಡಿಕೆಯಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ.                               ತುಮ್ಮಾಪೂರು ಪೇಟೆ ಹನುಮಾನ್ ಟಾಕೀಸ್ ಬಳಿಯ ಮಾರೆಮ್ಮ ದೇವಸ್ಥಾನದ ಮಹಾದ್ವಾರ ನಿರ್ಮಾಣ ಹಿನ್ನಲೆ ಸಂಚಾರ ನಿರ್ಭಂಧಿಸಲಾಗಿದ್ದು ವಾಸವಿನಗರ ಮತ್ತು ಜವಾಹರ ನಗರ ಮುಂತಾದ ಬಡಾವಣೆಯಿಂದ ಬರುವವರು ಗಾಜಗಾರ ಪೇಟೆ ಉತ್ತರಾಧಿ ಮಠದ ಮುಂಭಾಗ ರಸ್ತೆಯಿಂದ ಸಂಚರಿಸಬೇಕು ಮತ್ತೊಂದು ರಸ್ತೆ ರಾಮನದೊಡ್ಡಿಯಿಂದ ಪಕೀರಪ್ಪ ಛತ್ರ ಮುಂಭಾಗದ ಮೂಲಕ ರಘೋತ್ತಮ ರಾವ್ ವಕೀಲರ ಮನೆ ಮುಂಭಾಗದ ರಸ್ತೆ ಹಾಗೂ ಕಾಡ್ಲೂರು ದೇಸಾಯಿಯವರ ಮನೆ ಮುಂಭಾಗದಿಂದ ಚೌಡಮ್ಮ ದೇವಿ ದೇವಸ್ಥಾನದ ಮುಂಭಾಗದಿಂದ ಸಂಚರಿಸಬೇಕು ಇದೀಗ ರಾಮನದೊಡ್ಡಿ ಪ್ರವೇಶಿಸುವ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ದ್ವಿಚಕ್ರ ವಾಹನಕ್ಕೆ ದಾರಿ ಬಿಡಲಾಗಿದೆ ಮತ್ತೊಂದೆಡೆ ರಘೋತ್ತಮ ರಾವ್ ಮನೆ ಮುಂದೆ ಸಾಗಿ ಮುಖ್ಯ ರಸ್ತೆಗೆ ಸಂಪರ್ಕಿಸುವ ಸ್ಥಳದಲ್ಲಿಯೂ ದ್ವಿಚಕ್ರ ವಾಹನ ಸಂಚಾರಕ್ಕೆ ಬೇಕಾಗುವಷ್ಟು ಸ್ಥಳ ಮಾತ್ರ ಬಿಡಲಾಗಿದೆ ದೊಡ್ಡ ಸರಕು ಸಾಗಣೆ ವಾಹನ ಹೋಗುವುದನ್ನು ನಿರ್ಭಂದಿಸುವ ಧಾವಂತದಲ್ಲಿ ಇತರೆ ನಾಲ್ಕು ಚಕ್ರ ವಾಹನಗಳಿಗೆ ಪರ್ಯಾಯ ಮಾರ್ಗವಿಲ್ಲದೆ ಓಣಿಯಲ್ಲಿ ವಾಸಿಸುವವರ ಕಾರು ಮುಂತಾದ ವಾಹನ ಮಾಲಿಕರಿಗೆ ಭ್ಯಾರಿಕೇಡ್ ಅಳವಡಿಕೆಯಿ

ಸಿಎಂ ರಿಂದ ವಿಮಾನ ನಿಲ್ದಾಣ ಭೂಮಿ ಪೂಜೆಗೆ ಮುಹೂರ್ತವೆಂದು: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಮಾನ ಬಂತು.. ರಾಯಚೂರಿಗೆ ಯಾವಾಗ?

Image
  ಸಿಎಂ ರಿಂದ ವಿಮಾನ ನಿಲ್ದಾಣ  ಭೂಮಿ ಪೂಜೆಗೆ ಮುಹೂರ್ತವೆಂದು: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಮಾನ ಬಂತು.. ರಾಯಚೂರಿಗೆ ಯಾವಾಗ? - ಜಯಕುಮಾರ್ ದೇಸಾಯಿ ಕಾಡ್ಲೂರು ರಾಯಚೂರು,ಫೆ.೨೧-ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಮಧ್ಯಮ ವರ್ಗದ ಜನರಿಗೂ ಲಭೀಸಲಿ ಎಂಬು ಉದ್ದೇಶದಿಂದ ದೇಶದೆಲ್ಲಡೆ ಎರೆಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೇಂದ್ರ ಸರ್ಕಾರ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವತ್ತ ಹೆಜ್ಜೆಯಿಟ್ಟಿದ್ದು  ಅದಕ್ಕ ನುಗುಣವಾಗಿ ರಾಜ್ಯದ ಎರಡನೆ ಹಂತದ ನಗರಗಳಾದ ಹುಬ್ಬಳ್ಳಿ, ಬೆಳಗಾವಿ, ಕಲಬುರ್ಗಿ ಮುಂತಾದೆಡೆ ವಿಮಾಣ ನಿಲ್ದಾಣ ಗಳು   ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಜನರು ವಿಮಾನ ಪ್ರಯಾಣ ಮಾಡುತ್ತಿದ್ದಾರೆ ಇದೀಗ ಇದೆ ಫೆ.೨೭ ರಂದು ಶಿವಮೊಗ್ಗದಲ್ಲಿ  ಪ್ರಧಾನ ಮಂತ್ರಿಗಳು  ವಿಮಾನ ನಿಲ್ದಾಣ ಉದ್ಘಾಟನೆ ನೆರವೇರಿಸಲಿದ್ದು ರಾಷ್ಟçಕವಿ ಕುವೆಂಪು ಹೆಸರು ನಾಮಕರಣಕ್ಕೆ ನಿರ್ಧರಿಸಲಾಗಿದೆ. ಮೇಲಿನ ಇಷ್ಟೆಲ್ಲ ಪೀಠಿಕೆ ಏಕೆಂದು ಓದುಗರು ಕೇಳಬಹುದು ಅದಕ್ಕೆ ಈ ಕೆಳಗಿನ ಸುದ್ದಿ ನೀವು ತಪ್ಪದೆ ಓದಬೇಕು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಸಿದ್ದವಾಗಿದೆ.. ಆದರೆ ರಾಯಚೂರು ವಿಮಾನ ನಿಲ್ದಾಣ ಶಂಕು ಸ್ಥಾಪನೆಗೂ ಇನ್ನೂ ಮುಹೂರ್ತ ನಿಗದಿಯಾಗಿಲ್ಲ ಬಜೆಟ್ ನಲ್ಲಿಯೂ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭದ ಬಗ್ಗೆ ನಿಖರವಾಗಿ ಉಲ್ಲೇಖಿಸಲಾಗಿಲ್ಲ ನಗರ ಶಾಸಕರು ಹೇ ಳು ವಂತೆ ವಿಮಾನ ನಿಲ್ದಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದ

ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ಎನ್‌ಇಪಿ-೨೦೨೦ ಕುರಿತು ಎರಡು ದಿನಗಳ ಅಭಿವೃದ್ಧಿ ಕಾರ್ಯಕ್ರಮ : ದೇಶದಲ್ಲಿ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ್ದೇವೆ: ಪ್ರೊ.ಹರೀಶ ರಾಮಸ್ವಾಮಿ

Image
ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ಎನ್‌ಇಪಿ-೨೦೨೦ ಕುರಿತು ಎರಡು ದಿನಗಳ ಅಭಿವೃದ್ಧಿ ಕಾರ್ಯಕ್ರಮ: ದೇಶದಲ್ಲಿ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ್ದೇವೆ- ಪ್ರೊ.ಹರೀಶ ರಾಮಸ್ವಾಮಿ ರಾಯಚೂರು,ಫೆ.೨೧- ಬೇರೆ ದೇಶಗಳಿಗೆ ಹೋಲಿಸಿದಾಗ ನಮ್ಮಲ್ಲಿ ಅತ್ಯುತ್ತಮವಾದ ಶಿಕ್ಷಣ ವ್ಯವಸ್ಥೆಯನ್ನು ನಾವು ಹೊಂದಿದ್ದು, ಇದೀಗ ಶಿಕ್ಷಣದಲ್ಲಿ ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ವಿಷ ಯ ಗಳನ್ನು ಸೇರಿಸಿದ್ದು, ವಿದ್ಯಾರ್ಥಿಗಳಿಗೆ ಇದು ತುಂಬಾ ಅನುಕೂಲವಾಗಲಿದೆ ಎಂದು ರಾಯಚೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಅವರು ಹೇಳಿದರು. ಅವ ರಿ 0 ದು   ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಯಚೂರು ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಬೆಂಗಳೂರು, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಅಕಾಡೆಮಿ ಮುಂಬೈ ವತಿಯಿಂದ ಹಮ್ಮಿಕೊಂಡಿದ್ದ ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ಎನ್‌ಇಪಿ-೨೦೨೦ ಕುರಿತು ಎರಡು ದಿನದ ಅಭಿವೃದ್ಧಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.  ಮಹಾತ್ಮಗಾಂಧಿ ಅವರು ದೇಶದಲ್ಲಿ ಸುಂದರವಾದ ಶಿಕ್ಷಣ ವೃಕ್ಷವಿದೆ ಎಂದು ಹೇಳಿದ್ದು, ಅಂತಹ ವೃಕ್ಷವನ್ನು ಬೆಳೆಸುವ ಕಾರ್ಯವನ್ನು ಈಗಿನ ಶಿಕ್ಷಕರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಮಾಡಬೇಕಾಗಿದೆ. ದೇಶದ ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿದ್ದಲ್ಲಿ ನಮ್ಮ ದೇಶದಲ್ಲಿ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ನಾವ

ಭಗವಾನ್ ರವರ ನಿಧನಕ್ಕೆ ಬಸವರಾಜ ಕಳಸ ತೀರ್ವ ಸಂತಾಪ

Image
ಭಗವಾನ್ ರವರ ನಿಧನಕ್ಕೆ ಬಸವರಾಜ ಕಳಸ ತೀರ್ವ ಸಂತಾಪ                                                   ರಾಯಚೂರು,ಫೆ.20- ಕನ್ನಡ ಚಲನಚಿತ್ರರಂಗದ ಖ್ಯಾತ ನಿರ್ದೇಶಕರಾದ ಶ್ರೀ ಭಗವಾನ್ ರವರು ನಿಧನರಾಗಿದ್ದು ಇಡೀ ಕನ್ನಡ ಚಲನಚಿತ್ರ ರಂಗಕ್ಕೆ ಮತ್ತು ದಕ್ಷಿಣ ಭಾರತದ ಚಲನ ಚಿತ್ರರಂಗಕ್ಕೆ ಅಘಾತವನ್ನುಂಟು ಮಾಡಿದೆ. ಅವರ ಅಭಿಮಾನಿಗಳಿಗೆ ಚಿತ್ರ ಪ್ರೇಮಿಗಳಿಗೆ ಅತೀವ ದುಃಖವನ್ನುಂಟು ಮಾಡಿದೆ. ಹಿರಿಯ ನಿರ್ದೇಶಕ ದಿವಂಗತ ಶ್ರೀ ದೊರೆ ಅವರೊಂದಿಗೆ ಶ್ರೀ ಭಗವಾನ್ ರವರು  ದೊರೆ ಭಗವಾನ್ ಎಂದೇ ಖ್ಯಾತರಾಗಿದ್ದು, ನಿರ್ದೇಶನ ಮಾಡಿದ ಕಸ್ತೂರಿ ನಿವಾಸ, ರಾಘವೇಂದ್ರ ಸ್ವಾಮಿ ಮಹಾತ್ಮೆ, ಎರಡು ಕನಸು, ಗಿರಿಕನ್ಯೆ, ಆಪರೇಷನ್ ಡೈಮಂಡ್ ರಾಕೆಟ್, ಬಯಲುದಾರಿ ಮುಂತಾದ ಅಮರ ಚಲನಚಿತ್ರಗಳು ಚಿತ್ರ ರಸಿಕರ ಹೃದಯದಲ್ಲಿ ಶಾಶ್ವತವಾಗಿ ನೆಲೆಗೊಂಡಿವೆ.  ಇಂಗ್ಲೀಷ್ ಬಾಂಡ್ ಚಲನಚಿತ್ರಗಳ ನಂತರ ಮೊಟ್ಟಮೊದಲ ಬಾರಿಗೆ ಇಡೀ ದಕ್ಷಿಣ ಭಾರತದಲ್ಲಿಯೇ ಕನ್ನಡ ಚಲನಚಿತ್ರ ರಂಗದಲ್ಲಿ ಡಾ. ರಾಜಕುಮಾರ್ ರವರ ನಟನೆಯಲ್ಲಿ ಮೊಟ್ಟಮೊದಲ ಬಾಂಡ್ ಚಿತ್ರಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಇವರಗಿದೆ . ಇವರೊಂದಿಗೆ ಕನ್ನಡಚಲನಚಿತ್ರರಂಗದ ಶ್ರೀಮಂತಿಕೆಯ ವೈಭವದ ಸಾಮಾಜಿಕ ಸಂದೇಶಗಳನ್ನು ಸಾರುವ ಅರ್ಥಪೂರ್ಣವಾದ ಇತಿಹಾಸ ನಿರ್ಮಿಸಿದ ಚಲನಚಿತ್ರಗಳ ಒಂದು ಪರ್ವ ಅಂತ್ಯಗೊಂಡಂತಾಯಿತು . ನಾನು ಇತ್ತೀಚೆಗೆ ಅವರನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಭೇಟಿಯಾದ ಸಂದರ್ಭದಲ್ಲಿ ಡಾ. ರಾಜಕು

ರಾಷ್ಟ್ರೀಯ ಸಂಘಟನೆಗಳೊಂದಿಗೆ ಕೆಲಸ ಮಾಡೋಣ -ಡಾ ಶ್ರೀಕಾಂತ್ ಶೆಟ್ಟಿ .

Image
  ರಾಷ್ಟ್ರೀಯ ಸಂಘಟನೆಗಳೊಂದಿಗೆ ಕೆಲಸ ಮಾಡೋಣ - ಡಾ ಶ್ರೀಕಾಂತ್ ಶೆಟ್ಟಿ . ರಾಯಚೂರು,ಫೆ.20-  ಉಡುಪಿ ಮತ್ತು ಮಂಗಳೂರಿನಲ್ಲಿ ರಾಷ್ಟ್ರೀಯ ವೈದ್ಯಕೀಯ ಸಂಸ್ಥೆ  ಎನ್.ಎಂ.ಓ ಘಟಕಗಳನ್ನು ಉದ್ಘಾಟಿಸಲಾಯಿತು.     ಕರ್ನಾಟಕ ದಕ್ಷಿಣ ಸಂಘಟನಾ ಕಾರ್ಯದರ್ಶಿ ಡಾ.ಶ್ರೀಕಾಂತ್ ಶೆಟ್ಟಿ ಮತ್ತು ತಂಡವು ವಿವಿಧ ವೈದ್ಯರನ್ನು ಆಹ್ವಾನಿಸಿ  ಎನ್.ಎಂ.ಓ ಕುರಿತು ಮಾಹಿತಿ ನೀಡಿದರು.  ಎನ್.ಎಂ.ಓ ಕರ್ನಾಟಕ ದಕ್ಷಿಣ ಅಧ್ಯಕ್ಷ ಡಾ.ಸತೀಶ್, ಕಾರ್ಯದರ್ಶಿ ಡಾ.ಶ್ರೀಧರ್ ಎನ್.ಎಂ.ಓ  ಕಾರ್ಯದ ಕುರಿತು ವಿವರ ನೀಡಿದರು.  ಡಾ.ಶ್ರೀಕಾಂತ್ ಶೆಟ್ಟಿ ಅವರು ಮಾತನಾಡಿ ಎನ್.ಎಂ.ಓ ವೈದ್ಯರ ಸೇವಾ ಸಂಸ್ಥೆಯಾಗಿದೆ  ಎಂದು  ವೈದ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಾ ವೈದ್ಯ ಸಮುದಾಯ ರಾಷ್ಟ್ರ ನಿರ್ಮಾಣ ಶಕ್ತಿಗಳೊಂದಿಗೆ ಕೆಲಸ ಮಾಡುವಂತೆ ಕೇಳಿಕೊಂಡ ಅವರು ಇದರಿಂದ ಸಾರ್ವಜನಿಕ ಮತ್ತು ವೈದ್ಯರ ಸಂವಹನ ಅಂತರವು ಕಡಿಮೆಯಾಗುತ್ತದೆ ಮತ್ತು ಸಮಾಜ ಮತ್ತು ವ್ಯಕ್ತಿಯ ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂದರು.  ಉಡುಪಿ ಮತ್ತು ಮಂಗಳೂರಿನ ಹಲವು ವೈದ್ಯರು , ಸಮಾಜ ಸೇವಕರು ಉಪಸ್ಥಿತರಿದ್ದರು .

ಫೆ.೨೪ ಕ್ಕೆ ಸಂಭ್ರಮ ಚಿತ್ರ ತೆರೆಗೆ-ಪ್ರವೀಣಾ ಕುಲಕರ್ಣಿ

Image
  ಫೆ.೨೪ ಕ್ಕೆ ಸಂಭ್ರಮ ಚಿತ್ರ ತೆರೆಗೆ-ಪ್ರವೀಣಾ ಕುಲಕರ್ಣಿ ರಾಯಚೂರು,ಫೆ.೨೦-ಜಿಲ್ಲೆಯ ಸಿಂಧನೂರಿನ ಪ್ರತಿಭೆಗಳನ್ನೊಳಗೊಂಡ ಸಂಭ್ರಮ ಚಿತ್ರ ಫೆ.೨೪ ಕ್ಕೆ ರಾಜ್ಯದ್ಯಂತ ತೆರೆ ಕಾಣಲಿದೆ ಎಂದು ಚಿತ್ರ ತಂಡದ ಪ್ರವೀಣಾ ಕುಲಕರ್ಣಿ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸಿಂಧನೂರಿನ ಪ್ರತಿಭೆಗಳು ಚಿತ್ರದಲ್ಲಿ ನಟಿಸಿದ್ದು ಮನೋಮೂರ್ತಿ, ಜಯಂತ ಕಾಯ್ಕಿಣಿ ,ಸೋನು ನಿಗಮ್ ಸಂಗೀತವಿದ್ದು ಶ್ರೀ ಎಂಬುವವರು ನಿರ್ದೇಶಕ ಮತ್ತು ರಾಘವೇಂದ್ರ ಎಂಬುವವರು ಸಹ ನಿರ್ದೇಶಕರಾಗಿದ್ದು ಅಭಯಯ ವಿರ್ ನಾಯಕ ನಟರಾಗಿದ್ದು ಚಿತ್ರದಲ್ಲಿ ನಿಧಿ ರಾಥೋಡ,ಶ್ರಾವಣಿ ಸೇರಿದಂತೆ ಮೂವರು  ನಾಯಕ ನಟಿಯರಿದ್ದು ಅನಿಲ್ ರಾಜ್ ಸಂಕೇತ್, ಉಮೇಶ ಎಲ್. ಧರಂಶಿ ನಿರ್ಮಾಪಕ ಮತ್ತು ಸಹ ನಿರ್ಮಾಪಕರಾಗಿದ್ದು ಮನೋ ಮನೋಮೂರ್ತಿ ಸಂಗೀತ ನೆರವು ನೀಡಲಿದ್ದಾರೆಂದರು. ಚಿತ್ರವು ನವಿರಾದ ಪ್ರೇಮ ಕಥೆಯನ್ನೊಳಗೊಂಡಿದ್ದು ೯  ಸುಮಧುರ ಹಾಡುಗಳನ್ನು ಒಳಗೊಂಡಿದೆ ಎಂದ ಅವರು ಸುಮಾರು ಒಂದು ಕೋಟಿ .ರೂ ಬಂಡವಾಳದಲ್ಲಿ ಚಿತ್ರ ನಿರ್ಮಾ ಣ  ಮಾಡಲಾಗಿದ್ದು ಬಹುತೇಕ ಚಿತ್ರಿಕರಣ ಸಿಂಧನೂರು ಭಾಗದಲ್ಲಿ ಚಿತ್ರೀಕರಿಸ ಲಾ ಗಿದೆ ಎಂದ ಅವರು ರಾಜ್ಯಾದ್ಯಂತ ಫೆ.೨೪ ಕ್ಕೆ ೬೦ ಚಿತ್ರ ಮಂದಿರದಲ್ಲಿ ಚಿತ್ರ ಬಿಡುಗಡೆ ಹೊಂದಲಿದ್ದು ರಾಯಚೂರಿನಲ್ಲಿ ಮಿರಾಜ್ ಚಿತ್ರ ಮಂದಿರದಲ್ಲಿ ಪ್ರೇಕ್ಷಕರು ಚಿತ್ರ ವೀಕ್ಷಣೆ ಮಾಡಬಹುದೆಂದರು.  ಈ ಸಂದರ್ಭದಲ್ಲಿ ಚಿತ್ರ ತಂಡದ ಪವನ್, ಸುನೀಲ್, ರಾಘವೇಂದ್ರ, ಸುದೀಪ್ ಇದ್ದರು.

ಕೆಎಸ್‌ಓಯು ನಿಂದ ಆರ್ಥಿಕ ದುರ್ಬಲ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣಕ್ಕೆ ಒತ್ತು-ಶರಣಪ್ಪ

Image
  ಕೆಎಸ್‌ಓಯು ನಿಂದ ಆರ್ಥಿಕ ದುರ್ಬಲ ವಿದ್ಯಾ ರ್ಥಿಗಳಿಗೆ ದೂರ ಶಿಕ್ಷಣಕ್ಕೆ ಒತ್ತು-ಶರಣಪ್ಪ  ರಾಯಚೂರು,ಫೆ.೨೦-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ವತಿಯಿಂದ ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬ ಧ್ಯೇಯದೊಂದಿಗೆ ರಾಜ್ಯದ ಆರ್ಥಿಕ ದುರ್ಬಲವಾದ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಮೂಲಕ ಶಿಕ್ಷಣ ನೀಡಲಾಗುತ್ತದೆ ಎಂದು ಕೆಎಸ್‌ಓಯು ಉಪಕುಲಪತಿ ಶರಣಪ್ಪ ವೈಜನಾಥ ಹಲಸೆ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರಾಜ್ಯದಲ್ಲಿ ಏಕೈಕ ಮುಕ್ತ ವಿವಿ ಎಂದು ಹೆಸರು ಪಡೆದಿರುವ ಕೆಎಸ್‌ಓಯು ರಾಜ್ಯದಲ್ಲಿ ಒಟ್ಟು ೨೩ ಪ್ರದೇಶಿಕ ಕೇಂದ್ರಗಳನ್ನು ಒಳಗೊಂಡಿದ್ದು ೧೩೦ ಕಲಿಕಾ ಕೇಂದ್ರಗಳಿದ್ದು ಸುಮಾರು ೬೪ ವಿವಿಧ ವಿಷಯಗಳನ್ನು ಬೋಧಿಸಲಾಗುತ್ತದೆ ಎಂದ ಅವರು ಈ ವಿವಿಯಲ್ಲಿ ದೂರ ಶಿಕ್ಷಣ ಪಡೆದ ಅನೇಕರು ಜಿಲ್ಲಾಧೀಕಾರಿ, ಸಹಾಯಕ ಆಯುಕ್ತ ಮುಂತಾದ ಉನ್ನತ ಹುದ್ದೇಯಲ್ಲಿದ್ದಾರೆಂದರು. ೧೯೯೬ ರಲ್ಲಿ ಸ್ಥಾಪನೆಯಾದ ಈ ವಿವಿ ರಾಜ್ಯದಲ್ಲಿ ಅನೇಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ ಇದೀಗ ನಾನು ಕುಲಪತಿಯಾದ ನಂತರ ಇದರ ವಿಸ್ತರಣೆ ಹೆಚ್ಚಿಸಲು ಮೇಲಾಗಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ನಮ್ಮ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಲು ಕಾರ್ಯೋನ್ಮುಖನಾಗಿದ್ದೇನೆಂದರು. ನ್ಯಾಕ್ ಪಡೆದಿರುವ ವಿವಿ ಸದ್ಯದಲ್ಲೆ ಅ ಪ್ಲಸ್ ಪ್ಲಸ್ ಶ್ರೇಣೀ ಲಬಿಸಲಿದೆ ಎಂದ ಅವರು ಮನೆ ಮನೆಗೆ ವಿದ್ಯೆ ಎಂಬ ಭಾವನೆಯೊಂದಿಗೆ ಬಿಪಿಎಲಸ್ ಕಾರ್ಡ ಹೊಂದಿ

ಕಾಡ್ಲೂರು: ಸಂಗ್ರಹಿಸಿಟ್ಟ ಹತ್ತಿಗೆ ಬೆಂಕಿ- ಅಪಾರ ನಷ್ಟ

Image
ಕಾಡ್ಲೂರು: ಸಂಗ್ರಹಿಸಿಟ್ಟ ಹತ್ತಿಗೆ ಬೆಂಕಿ- ಅಪಾರ ನಷ್ಟ ರಾಯಚೂರು,ಫೆ.೨೦-ತಾಲೂಕಿನ ಕಾಡ್ಲೂರು ಗ್ರಾಮದಲ್ಲಿ ಸಂಗ್ರಹಿಸಿಟ್ಟ ಹತ್ತಿಗೆ ಬೆಂಕಿ ತಗುಲಿ ಅಪಾರ ನಷ್ಟವಾಗಿದೆ.  ಗ್ರಾಮದ ಹೊರವಲಯದ ಪೆಟ್ರೋಲ್ ಪಂಪ್ ಬಳಿಯ ಹೊಲದ ಲ್ಲಿ  ಸಂಗ್ರಹಸಿಟ್ಟ ಹತ್ತಿಗೆ ಬೆಂಕಿ ಹತ್ತಿದ್ದು ಬೆಳಿಗಿನ ಜಾವ ಈ ಘಟನೆ ನಡೆದಿರಬಹುದೆಂದು ಹೇಳಲಾಗಿದ್ದು ಸುದ್ದಿ ತಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನಿಸಿದರು ಅಲ್ಲದೆ ಗ್ರಾಮಸ್ಥರು ಸಹ ಟ್ರಾಕ್ಟರ್ ಟ್ಯಾಂಕರ್ ಮೂಲಕ ನೀರು ತಂದು ಬೆಂಕಿ ನಂದಿಸಲು ಶ್ರಮಿಸಿದರು.  ಮೌಲಾಲಿ, ನಬಿಸಾಬ್ ಎಂಬುವವರಿಗೆ ಸೇರಿರುವ ಹತ್ತಿ ಸುಟ್ಟು ಭಸ್ಮವಾಗಿದೆ ಎಂದು ತಿಳಿದುಬಂದಿದೆ.  ಅದೇ ರೀತಿ ಗ್ರಾಮದಲ್ಲಿ ಮನೆ ಬಳಿ ಸುರೇಶ ಉಪ್ಪಾರ, ತಿಪ್ಪಣ್ಣ ಬಡಿಗೇರ್ ಎಂಬುವವರಿಗೆ ಸೇರಿರುವ ಸಂಗ್ರಹಿಸಿಟ್ಟ ಹತ್ತಿಯೂ ಸಹ ಬೆಂಕಿಗೆ ಸುಟ್ಟು ಭಸ್ಮವಾಗಿದೆ   . ರೈತರಿಗೆ ಗಾಯದ ಮೇಲೆ ಬರೆ: ಹತ್ತಿ ಬೆಲೆ ಕುಸಿತದ ಪರಿಣಾಮ ಮಾರುಕಟ್ಟೆಯಲ್ಲಿ ಸೂಕ್ತ ದರ ಬಂದಾಗ ಮಾರಾಟ ಮಾಡಲು ರೈತರು ಹತ್ತಿ ಸಂಗ್ರಹಿಸಿಟ್ಟರೆ ಈ ರೀತಿಯ ಬೆಂಕಿ ಅವಘಡದಿಂದ ಅಪಾರ ಹತ್ತಿ ಕ್ಷಣಾರ್ಥದಲ್ಲಿ ಬೆಂಕಿಗೆ ಸುಟ್ಟು ಕರಕಲಾಗಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು ಬೆಂಕಿಯಿ0ದ ಸುಟ್ಟ ಹತ್ತಿ ನಷ್ಟ ಪರಿಹಾರಕ್ಕೆ ಸರ್ಕಾರ ನೆರವಿಗೆ ಧಾವಿಸಬೇಕೆಂಬುದು ಗ್ರಾಮಸ್ಥರ ಕೋರಿಕೆಯಾಗಿದೆ .

ಏಮ್ಸ್ ಬದಲಿಗೆ ಏಮ್ಸ್ ಮಾದರಿ ಆಸ್ಪತ್ರೆ ಘೋಷಣೆ ಖಂಡನೀಯ: ಸುಳ್ಳಿನ ಸರ್ದಾರ ಶಾಸಕ ಡಾ.ಶಿವರಾಜ ಪಾಟೀಲ- ರವಿ ಬೋಸರಾಜು

Image
  ಏಮ್ಸ್ ಬದಲಿಗೆ ಏಮ್ಸ್ ಮಾದರಿ ಆಸ್ಪತ್ರೆ ಘೋಷಣೆ ಖಂಡನೀಯ: ಸುಳ್ಳಿನ ಸರ್ದಾರ ಶಾಸಕ ಡಾ.ಶಿವರಾಜ ಪಾಟೀಲ- ರವಿ ಬೋಸರಾಜು ರಾಯಚೂರು,ಫೆ.೨೦-ಏಮ್ಸ್ ಬದಲಿಗೆ ಏಮ್ಸ್ ಮಾದರಿ ಆಸ್ಪತ್ರೆ ನೀಡುವುದಾಗಿ ಬಜೆಟ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದು ಅತ್ಯಂತ ಖಂಡನೀಯ ವಿಷಯವಾಗಿದೆ ಎಂದು ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ  ಮಾತನಾಡಿ ಬಜೆಟ್ ವೇಳೆ ನಮ್ಮ ನಾಯಕರು ಕಿವಿಯಲ್ಲಿ ಹೂವು ಇಟ್ಟುಕೊಂಡು ಬಜೆಟ್ ವಿರೋಧಿಸಿದ್ದಾರೆ ನಾವು ಸಹ ಕಿವಿಯಲ್ಲಿ ಹೂವು ಇಟ್ಟುಕೊಂಡೆ ಸುದ್ದಿಗೋಷ್ಟಿಗೆ ಆಗಮಿಸಿದ್ದು ಜನರ ಕಿವಿ ಮೇಲೆ ಹೂವು ಇಡಲು ಸರ್ಕಾರ ಹೊರಟಿದೆ ಇದಕ್ಕೆ ಜನರು ತಕ್ಕ ಪಾಠ ಚುನಾವಣೆಯಲ್ಲಿ ಕಲಿಸಲಿದ್ದಾರೆಂದರು. ಜಿಲ್ಲೆಗೆ ಏಮ್ಸ್ ಬದಲಾಗಿ ಏಮ್ಸ್ ಮಾದರಿ ಆಸ್ಪತ್ರೆ ನೀಡುವುದಾಗಿ ಹೇಳಿದ್ದು ಐಐಟಿ ರೀತಿಯಲ್ಲೆ ಏಮ್ಸ್ ಸಹ ಹುಬ್ಬಳ್ಳಿ ಧಾರವಾಡಕ್ಕೆ ಕೊಂಡ್ಯೋಯುವ ಹುನ್ನಾರವೆಂದ ಅವರು ಇದರ ವಿರುದ್ದ ಏಮ್ಸ್ ಹೋರಾಟ ಸಮಿತಿ ಫೆ.೨೩ ಕ್ಕೆ ರಾಯಚೂರು ಬಂದ್ ಗೆ ಕರೆ ನೀಡಿದ್ದು ಕಾಂಗ್ರೆಸ್ ಪಕ್ಷ ಸಹ ಬೆಂಬಲಿಸಲಿದೆ ಎಂದ ಅವರು ಬಜೆಟ್ ಪುಸ್ತಕ ಕಸದ ಗುಂಡಿಗೂ ಹಾಕಲು ಲಾಯಕ್ಕಿಲ್ಲವೆಂದು ಟೀಕಿಸಿದರು.  ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮಾಡಲು ಪರಿಶೀಲಿಸಲಾಗುತ್ತದೆ ಎಂದು ಹೇಳಿದ್ದು ಜನರನ್ನು ದಿಕ್ಕು ತಪ್ಪಿಸುವ ಕೆಲಸವೆಂದ ಅವರು ಬಜೆಟ್‌ನಲ್ಲಿ ನಿಖರವಾಗಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆರಿಸಲ