Posts

Showing posts from September, 2025
Image
 ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ ಅರ್ಚಕರಾದ ಶಿವಪುತ್ರಯ್ಯ ಸ್ವಾಮಿರವರಿಗೆ ಮಾತೃವಿಯೋಗ ಜಯ ಧ್ವಜ ನ್ಯೂಸ್ ,ರಾಯಚೂರು, ಅ.1- ನಗರದ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶಿವಪುತ್ರಯ್ಯ ಸ್ವಾಮಿ ಅವರ ತಾಯಿ ಶತಾಯುಷಿ ಪಾರ್ವತಮ್ಮ (101) ಬುಧವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಮೃತರು ಆರು ಜನ ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು, ಬಂಧು ಬಳಗ ಹಾಗೂ ಅಪಾರ ಶಿಷ್ಯ ಬಳಗವನ್ನು ಬಿಟ್ಟು ಅಗಲಿದ್ದಾರೆ.         ಮೃತರ ಅಂತ್ಯಕ್ರಿಯೆ ಸ್ವಗ್ರಾಮ ನಾರಾಯಣಪೇಟೆ ಜಿಲ್ಲೆಯ ನೆರಡಗುಂಬ ಗ್ರಾಮದಲ್ಲಿ ಬುಧವಾರ ಸಂಜೆ  4 ಗಂಟೆಗೆ ನೆರವೇರಲಿದೆ ಎಂದು ಕುಟುಂಬ ಮೂಲ ಪ್ರಕಟಣೆಯಲ್ಲಿ ತಿಳಿಸಿದೆ. 
Image
  ದಾಸ ಸಾಹಿತ್ಯದಲ್ಲಿ ಪ್ರಮುಖ ದಾಸವರೇಣ್ಯರು ಶ್ರೀ ಪ್ರಾಣೇಶ ದಾಸರು- ಮುರಳಿಧರ ಕುಲಕರ್ಣಿ ಜಯ ಧ್ವಜ ನ್ಯೂಸ್ , ರಾಯಚೂರು, ಅ.1-  ದಾಸ ಸಾಹಿತ್ಯ ಮತ್ತು ವ್ಯಾಸ ಸಾಹಿತ್ಯದ ಪರಂಪರೆಯನ್ನು ಬೆಳೆಸಿದವರಲ್ಲಿ ಪ್ರಮುಖ ದಾಸ ವರೇಣ್ಯರೆಂದರೆ ಶ್ರೀ ಪ್ರಾಣೇಶ ದಾಸರಾಗಿದ್ದಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿಯವರು  ಹೇಳಿದರು.  ಅವರು ಮಂಗಳವಾರ ಸಂಜೆ ರಾಯಚೂರು ನಗರದ ಜವಾಹರ ನಗರ ಬಯಲು ಆಂಜನೇಯ ದೇವಸ್ಥಾನದಲ್ಲಿ ಏರ್ಪಡಿಸಿದ ಶ್ರೀ ಪ್ರಾಣೇಶದಾಸರ  ಉತ್ತರಾರಾಧನೆ  ಕಾರ್ಯಕ್ರಮ ದಲ್ಲಿ ಮಾತನಾಡಿದರು.  1785 ರಿಂದ 1860 ಶ್ರೀ ಪ್ರಾಣೇಶದಾಸರ ಕಾಲಾವಧಿ ಯಾಗಿದ್ದು,ಲಿಂಗಸುಗೂರಿನಲ್ಲಿ ಜನಿಸಿದ ಇವರು ದಾಸ ಶ್ರೇಷ್ಠರಾದ ಜಗನ್ನಾಥದಾಸರಿಂದ ಹರಿದಾಸ ದೀಕ್ಷೆಯನ್ನು ಪಡೆದು ಶ್ರೀ ಪ್ರಾಣೇಶ ವಿಠಲ ಅಂಕಿತದಿಂದ  ಬಿಂಬ ಧ್ಯಾನ ಸುಳಾದಿ, ಪಂಚಭೇದ, ತಂತ್ರಸಾರೋಕ್ತ ಕೇಶವಾದಿ, ಬುಡ್ಡಿ ಬ್ರಹ್ಮ ನ ಕಥ,  ಗೋಪಿಕಾ ವಿಲಾಸ, ಸೀತಾ ಸ್ವಯಂವರ, ಪ್ರಹ್ಲಾದ ಚರಿತೆ ಪಾರ್ಥವಿಲಾಸ, ಮುಂತಾದ ಕೃತಿಗಳ ಜೊತೆಗೆ ನೂರಾರು ಸಂಕೀರ್ತನೆಗಳನ್ನು ಸುಳಾದಿ ಗಳನ್ನು, ಉಗಾಭೋಗಗಳನ್ನು ರಚಿಸಿ ದಾಸ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಕರ್ತ ಶ್ರೀ ಜಯಕುಮಾರ್ ದೇಸಾಯಿ ಕಾಡ್ಲೂರು ಇವರು ಮಾತನಾಡಿ ಶ್ರೀ ಪ್ರಾಣೇಶ ದಾಸರ ಕೃತಿಗಳು ಮದ್ವ ಸಿದ್ದಾಂತದ ...
Image
ನಾಡಹಬ್ಬ ದಸರಾ ಅಂಗವಾಗಿ ಬಹುಭಾಷಾ ಕವಿಗೋಷ್ಟಿ ಉದ್ಘಾಟನೆ                                                                                    ಜಯ ಧ್ವಜ ನ್ಯೂಸ್ ,ರಾಯಚೂರು, ಸೆ.30 - ಮಹಾನಗರಪಾಲಿಕೆ ಮತ್ತು ಐತಿಹಾಸಿಕ ಕೋಟೆ ಅಧ್ಯಯನ ಸಮಿತಿ ರಾಯಚೂರು ವತಿಯಿಂದ ನಾಡಹಬ್ಬ ದಸರಾ-2025 ಅಂಗವಾಗಿ ಬಹುಭಾಷಾ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಯನ್ನು ಬಸ್ ನಿಲ್ದಾಣ ಎದುರಗಡೆಯಿರುವ  ಮಕ್ಕಾದರವಾಜಾ ದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು  ಜ್ಯೋತಿ ಬೆಳಗಿಸುವ ಮೂಲಕ   ಚಾಲನೆಯನ್ನು ಮಹಾಪೌರರಾದ  ನರಸಮ್ಮ ನರಸಿಂಹಲು ಮಾಡಿಗಿರಿ ನೀಡಿದರು. ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಉಪ-ಮಹಾಪೌರರಾದ ಡಾ.  ಸಾಜೀದ ಸಮೀರ,ಮಹಾನಗರ ಪಾಲಿಕೆ ಹಿರಿಯ ಸದಸ್ಯರಾದ  ಜಯಣ್ಣ,ಉಪ-ಆಯುಕ್ತರಾದ  ಸಂತೋಷ ರಾಣಿ, ಹಿರಿಯ ಸಾಹಿತಿಗಳಾದ ಬಾಬು ಬಂಡಾರಿಗಲ್,  ಪತ್ರಕರ್ತರಾದ  ಕೆ.ಸತ್ಯನಾರಾಯಣ, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರಾದ  ನರಸಿಂಹಲು ಮಾಡಿಗಿರಿ,  ಮಣಿಕಂಠ ,ಕೋಟೆ ಅಧ್ಯಯನ ಸಮಿತಿಯ ಅಧ್ಯಕ್ಷರು ಮ...
Image
  ನಜೀರ್ ಅಹ್ಮದ್ ಪಂಜಾಬಿ ನಿಧನ.                                                                        ಜಯ ಧ್ವಜ ನ್ಯೂಸ್ , ರಾಯಚೂರು, ಸೆ.28 - ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಜಿಲ್ಲಾ ವಕ್ಫ ಸಲಹಾ ಸಮಿತಿ ಅಧ್ಯಕ್ಷ ನಜೀರ‌ ಅಹ್ಮದ ಪಂಜಾಬಿ (75) ಇಂದು ನಿಧನ ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿದ್ದ  ನಜೀರ‌ ಅಹ್ಮದ‌ ಪಂಜಾಬಿ ಒಂದು‌ ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು.    ದೇವರಾಜ್ ಅರಸು ಟ್ರಕ್ ಟರ್ಮಿನಲ್ ಸದಸ್ಯರಾಗಿ ಸಹ ನೇಮಕಗೊಂಡಿದ್ದರು. ಮಡದಿ ಸೇರಿದಂತೆ ಮಕ್ಕಳನ್ನು  ಬಿಟ್ಟು ಅಗಲಿದ್ದಾರೆ .  
Image
    ಮುಂಬೈ ಹಾಗೂ ಬೆಂಗಳೂರು ನಡುವೆ ಸೂಪರ್ ಫಾಸ್ಟ್ ರೈಲು ರಾಯಚೂರು ಮೂಲಕ ಓಡಿಸಲು ಬಾಬುರಾವ್ ಮನವಿ                                                          ಜಯ ಧ್ವಜ ನ್ಯೂಸ್ , ರಾಯಚೂರು, ಸೆ.28-                                                     ಮುಂಬೈ ಹಾಗೂ ಬೆಂಗಳೂರು ನಡುವೆ ಸೂಪರ್ ಫಾಸ್ಟ್ ರೈಲು ಓಡಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಶನಿವಾರ  ಎಕ್ಸ್ ನಲ್ಲಿ ಪೋಸ್ಟ್ ಹಾಕಿ ಸಂತಸ ವ್ಯಕ್ತಪಡಿಸಿರುವುದು ಸ್ವಾಗತಾರ್ಹವಾಗಿದೆ ಎಂದು ರೈಲ್ವೆ ಸಲಹಾ ಸಮಿತಿ ಮಂಡಳಿ ಮಾಜಿ ಸದಸ್ಯ ಡಾ.ಬಾಬುರಾವ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು  ಪತ್ರಿಕಾ ಹೇಳಿಕ ನೀಡಿದ್ದು, ಕಳೆದ  30 ವರ್ಷಗಳಿಂದ,  ‘ಬೆಂಗಳೂರು ಮತ್ತು ಮುಂಬೈ ಎರಡು ಮಹಾನಗರಗಳನ್ನು ಒಂದೇ ಒಂದು ಸೂಪರ್ ಫಾಸ್ಟ್ ರೈಲು-ಉದ್ಯಾನ್ ಎಕ್ಸ್ ಪ್ರೆಸ್ ಮೂಲಕ ಸಂಪರ್ಕಿಸಲಾಗುತ್ತಿತ್ತು. ಆ ರೈಲು...
  ರಾಯಚೂರು ಜಿಲ್ಲೆಗೆ ಹೊಸದಾಗಿ 16 ಆರೋಗ್ಯ ಸೇವೆಗೆ ಮಂಜೂರಾತಿ-  ಸಚಿವ ದಿನೇಶ್ ಗುಂಡೂರಾವ್ ಜಯ ಧ್ವಜ  ನ್ಯೂಸ್  ,ರಾಯಚೂರು ಸೆ.27- ರಾಜ್ಯ ಸರ್ಕಾರವು ಆರೋಗ್ಯ ಕ್ಷೇತ್ರದ ಬೆಳವಣಿಗೆಯ ಬಗ್ಗೆ ವಿಶೇಷ ಗಮನ ಹರಿಸಿದ್ದು, ಈ ನಿಟ್ಟಿನಲ್ಲಿ ರಾಯಚೂರು  ಜಿಲ್ಲೆಯಲ್ಲಿ ಹೊಸದಾಗಿ 16 ಆರೋಗ್ಯ ಕೇಂದ್ರಗಳಿಗೆ ಮಂಜೂರಾತಿ ನೀಡಿ, ಅನುದಾನ ಒದಗಿಸಿ ಜನತೆಗೆ ಆರೋಗ್ಯ ಸೇವೆ ನೀಡುತ್ತಿದ್ದೇವೆ ಎಂದು ರಾಜ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಹೇಳಿದರು. ಸಿಂಧನೂರನ ಸತ್ಯ ಗಾರ್ಡನದಲ್ಲಿ ಸೆ.27ರಂದು ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಯಚೂರು ಜಿಲ್ಲೆಗೆ ಈಗಾಗಲೇ ಹೊಸದಾಗಿ 8 ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಿ ಮಾಡಿದ್ದೇವೆ. 5 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳೆಂದು ಮೇಲ್ದರ್ಜೇಗೇರಿಸುತ್ತಿದ್ದೇವೆ. ರಾಯಚೂರ ಸಿಟಿಗು ಸಹ ಆರೋಗ್ಯ ಕೇಂದ್ರ ಮಂಜೂರಿ ಮಾಡಿದ್ದೇವೆ. ಲಿಂಗಸೂಗೂರನಲ್ಲಿ 21 ಕೋಟಿ ರೂ ವೆಚ್ಚದಲ್ಲಿ ಕ್ರಿಟಿಕಲ್ ಕೇರ್‌ ಯುನಿಟ್ ಸ್ಥಾಪನೆಗೆ ಮಂಜೂರಾತಿ ದೊರೆತಿದೆ. ಸಿಂಧನೂರ ತಾಲೂಕಿನಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಆರಂಭ ಮಾಡಿದ್ದೇವೆ. ಇಲ್ಲಿನ ತಾಲೂಕು ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೇಗೆ ಸೇರಿ ಒಟ್ಟಾರೆ ಜಿಲ್ಲೆಗೆ 16 ಆರೋಗ್ಯ ಸೇವೆ ನೀಡುತ್ತಿದ್ದೇವೆ ಎಂದು ತಿಳಿಸಿದರು. *ಸಿಂಧನೂರಗೆ ಅಗತ್ಯ ಸೌಕರ್ಯ:* ಸಿಂಧನೂರು ತಾಲೂಕಿಗೆ ಮಂಜೂರಾದ ತಾಲೂಕಾಸ್...
Image
ಕಾಡ್ಲೂರು: ವೆಂಕಟೇಶ್ವರ ದೇವಸ್ಥಾನದಲ್ಲಿ ಪಂಚರಾತ್ರೋತ್ಸವ:                 ಸೆ.27 ದುರ್ಗಾ ಹೋಮ, 28 ರಂದು ಶ್ರೀನಿವಾಸ ಕಲ್ಯಾಣೋತ್ಸವ .                                    ಜಯಧ್ವಜ ನ್ಯೂಸ್ ,ರಾಯಚೂರು, ಸೆ.26- ತಾಲೂಕಿನ ಕಾಡ್ಲೂರು ಗ್ರಾಮದ ಪುರಾತನ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ  ಪಂಚರಾತ್ರೋತ್ಸವ ಹಮ್ಮಿಕೊಳ್ಳಲಾಗಿದೆ.  ಪಂಚರಾತ್ರೋತ್ಸವ ನಿಮಿತ್ಯ  ಸೆ.26  ರಂದು ಬೆಳಗ್ಗೆ ಗೋ ಪೂಜೆ ಧ್ವಜಾರೋಹಣ ಕಳಶ ಸ್ಥಾಪನೆ ದಿಂದ ಪ್ರಾರಂಭವಾಗಿ ,ಸೆ.27 ಲೋಕಕಲ್ಯಾಣಕ್ಕಾಗಿ ದುರ್ಗಾ ಹೋಮ ಹಾಗೂ ಸೆ. 28  ಶ್ರೀನಿವಾಸ ಕಲ್ಯಾಣ ಇರುತ್ತದೆ ಹಾಗೂ ವಿಜಯದಶಮಿ ದಿನದಂದು ಬನ್ನಿ ಮುಡಿಯುವ ಕಾರ್ಯಕ್ರಮ ಇರುತ್ತದೆ ಎಲ್ಲರೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಶ್ರೀ ವೆಂಕಟೇಶ್ವರ  ದೇವಸ್ಥಾನದ ಅರ್ಚಕರಾದ ವಾಸುದೇವ ಆಚಾರ್ಯ ಕಲ್ಯಾಣಿ ವಿನಂತಿಸಿದ್ದಾರೆ .
Image
     ಜಿಲ್ಲಾ ಕಸಾಪ  ಅಧ್ಯಕ್ಷ ಸ್ಥಾನಕ್ಕೆ ಹಂಗಾಮಿ ಅಧ್ಯಕ್ಷರನ್ನು  ನೇಮಿಸಿ - ಮೇಟಿಗೌಡ  ಜಯ ಧ್ವಜ ನ್ಯೂಸ್ ,  ರಾಯಚೂರು, ಸೆ.25-   ಕನ್ನಡದ ಅಸ್ಮಿತೆಯನ್ನ ಉಳಿಸಿ ಬೆಳೆಸಲು ಸರ್ಕಾರದ ಅಂಗಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ರಾಜ್ಯದಲ್ಲಿ ಸಾಂಸ್ಕೃತಿಕ, ಸಾಹಿತ್ಯ,ಸಾಮಾಜಿಕ, ಶೈಕ್ಷಣಿಕವಾಗಿ ತನ್ನದೇ ಆದ ಮಹತ್ವ ಹೊಂದಿದೆ,  ಹಲವಾರು ಸಂಘ ಸಂಸ್ಥೆಗಳಿಗೆ ಕಸಾಪ ಆಲದಮರವಿದ್ದಂತೆ ಆದರೆ ಕ್ಷಣಕೊಂದು ಗೊಂದಲ ಸೃಷ್ಟಿಯಾಗುವ ಆದೇಶಗಳನ್ನು ಮಾಡುತ್ತಿರುವದರಿಂದ ರಾಯಚೂರಿನಲ್ಲಿ ಕಸಾಪ ಘನತೆ ಬೀದಿಗೆ ಬಂದಿದ್ದು ಇದರಿಂದ ಹಲವಾರು ಕನ್ನಡಿಗರ ಮನಸ್ಸಿಗೆ ಧಕ್ಕೆ ತರುತ್ತಿದೆ, ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ರಾಜೀನಾಮೆ ನೀಡಬೇಕು ಹಾಗೂ ಹಂಗಾಮಿ ಅಧ್ಯಕ್ಷರನ್ನು ನೇಮಿಸಬೇಕು ಎಂದು ಬೆಳಕು ಟ್ರಸ್ಟ್ ಅಧ್ಯಕ್ಷರಾದ ಅಣ್ಣಪ್ಪ ಮೇಟಿಗೌಡ ಒತ್ತಾಯ ಮಾಡಿದರು. ಅವರಿಂದು ನಗರದ ಪತ್ರಿಕಾಭವನದಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಯಚೂರು ಜಿಲ್ಲೆಯಲ್ಲಿ ಏಳು ತಾಲೂಕಗಳ ತಾಲೂಕು ಅಧ್ಯಕ್ಷರ ನೇಮಕಾತಿ  ಪಟ್ಟಿ ಸೆ. 24ರಂದು ಜಿಲ್ಲಾಧ್ಯಕ್ಷರು ಹೊಸ ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಪಟ್ಟಿ ಸಾಮಾಜಿಕ ಜಾಲತಾಣದ ಮೂಲಕ ಹಾಕಿದರು ಆದರೆ ಅದಾದ ಕೆಲವೇ ಕ್ಷಣಗಳಲ್ಲಿ ಅವರು ನೀಡಿದ ಆದೇಶಕ್ಕೆ ಉತ್ತರವಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಗೌರವ ಕಾರ್ಯದರ್ಶಿಗಳು ಜಿಲ್ಲಾಧ್ಯಕ್ಷರಾದ ...
Image
  ನಕಲಿ ಎಸ್. ಟಿ. ಪ್ರಮಾಣ ಪತ್ರ ತಡೆಯಲು ಆಗ್ರಹಿಸಿ ಪ್ರತಿಭಟನೆ ಜಯ ಧ್ವಜ ನ್ಯೂಸ್ ,ರಾಯಚೂರು, ಸೆ. 25-  ನಾಯಕ ತಳವಾರ ಮತ್ತು ನಾಯಕ ಪರಿವಾರ ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಹಿಂದುಳಿದ ವರ್ಗದಲ್ಲಿ ಬರುವ ಜಾತಿಗಳವರಿಗೆ ತಳವಾರ ಹೆಸರಿನಲ್ಲಿ ನಕಲಿ ಎಸ್ ಟಿ ಜಾತಿ ಪ್ರಮಾಣ ಪತ್ರ ನೀಡುವುದನ್ನು ಖಂಡಿಸಿ  ವಾಲ್ಮೀಕಿ ನಾಯಕ ಸಮಾಜದಿಂದ ಇಂದು ಪ್ರತಿಭಟನೆ ನಡೆಸಲಾಯಿತು. ರಾಯಚೂರು ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ವೃತ್ತದಿಂದ ಬೈಕ್ ರ್ಯಾಲಿ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಡಳಿತ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ನಾಯಕ ತಳವಾರ ಹೆಸರಿನಲ್ಲಿಪ್ರವರ್ಗ-೧ ರಲ್ಲಿರುವ ಬೇರೆ ಸಮುದಾಯದವರು ಅಕ್ರಮವಾಗಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರಗಳನ್ನು ತೆಗೆದುಕೊಂಡು ವಂಚಿಸುತ್ತಿರುವದನ್ನು ಹಾಗೂ ಅನ್ಯ ಸಮುದಾಯದವರನ್ನು ಎಸ್.ಟಿ ಪಟ್ಟಿಗೆ ಸೇರಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ೧೯.೩.೨೦೨೦ರಲ್ಲಿ ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಯ ಕ್ರಮ ಸಂಖ್ಯೆ ೩೮ ರಲ್ಲಿ ನಾಯಕ ಬುಡಕಟ್ಟಿನ ಪರ್ಯಾಯ ಹೆಸರುಗಳಾದ ಪರಿವಾರ ಮತ್ತು ತಳವಾರ ಬುಡಕಟ್ಟುಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ...
Image
ಮಹಾನಗರ ಪಾಲಿಕೆ ಕಚೇರಿಯಲ್ಲಿ ದಸರಾ ಆಚರಣೆ ಪೂರ್ವಭಾವಿ ಸಭೆ                                                                 ಜಯಧ್ವಜ ನ್ಯೂಸ್  , ರಾಯಚೂರು, ಸೆ.24-  ನಗರದ ಮಹಾನಗರಪಾಲಿಕೆಯ (ಹಳೆಯ ನಗರಸಭೆ) ಸಭಾಂಗಣದಲ್ಲಿ ದಸರಾ ಪೂರ್ವಾಭಾವಿ ಸಿದ್ದತೆ ಸಭೆಯು  ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಿಗಿರಿ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಹಿರಿಯ ಸದಸ್ಯರಾದ  ಜಯಣ್ಣ ಮತ್ತು ಈ.ಶಶಿರಾಜ ರವರು ಮಾತನಾಡಿ ಸ್ಥಳೀಯ,ಜಿಲ್ಲಾ,ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಅಕರ್ಷಣಿಯ ಕಲಾ ತಂಡಗಳನ್ನು ಆಹ್ವಾನಿಸುವಂತೆ ಸಲಹೆ ಹಿನ್ನಲೆ ಕಲಾತಂಡಗಳನ್ನು ಕರೆಸಲು ತೀರ್ಮಾನಿಸಲಾಯಿತು. ಮೆಕ್ಕಾ ದರವಾಜದಲ್ಲಿ ಕವಿಗೋಷ್ಠಿಯ ಅಂಗವಾಗಿ ಹೆಸರಾಂತ ಕವಿಗಳನ್ನು ಸಾಹಿತಿಗಳನ್ನು ಕರೆಸಿ ವಿಜೃಂಭಣೆಯಿಂದ ಜರುಗಿಸಲು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.ಸಭೆಯಲ್ಲಿ  ಮಹಾನಗರಪಾಲಿಕೆಯ ಉಪ-ಮಹಾಪೌರರಾದ  ಸಾಜೀದ ಸಮೀರ ರವರು, ಆಡಳಿತ ಉಪ-ಆಯುಕ್ತರಾದ  ಸಂತೋಷ ರಾಣಿ ಕೆ.ಎ.ಎಸ್ ರವರು, ಹಿರಿಯ ಸದಸ್ಯರಾದ ದರೂರು ಬಸವರಾಜ ಪಾಟೀಲ, ವಿ.ನಾಗರಾಜ ನಾಮ ನಿರ್ದೇಶಿತ ಸದಸ್ಯರಾದ ಮುನಿಯಪ್ಪ, ಮಹ್ಮದ್ ಫಿರೋಜ್,ವೆಂಕಟೇಶ...
Image
  ಜಿಂದಪ್ಪ ಮೇಲಿನ ಹಲ್ಲೆ ಖಂಡಿಸಿ ಜಿಲ್ಲಾ ಗಂಗಾಮತಸ್ಥ ಸಮಾಜ ಎಸ್ಪಿಗೆ ದೂರು.                                            ಜಯ ಧ್ವಜ ನ್ಯೂಸ್ , ರಾಯಚೂರು, ಸೆ.24 -            ಮಹಾನಗರ ಪಾಲಿಕೆ ಸದಸ್ಯ ಜಿಂದಪ್ಪರವರ ಮೇಲಿನ ಹಲ್ಲೆ ಖಂಡಿಸಿ ಜಿಲ್ಲಾ ಗಂಗಾಮತಸ್ಥ ಸಮಾಜ ಸೇವಾ ಸಂಘ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿತು.                                   ಸೆ.23 ರಂದು ಪಾಲಿಕೆ ಕಚೇರಿಯಲ್ಲಿ ಏಕಾಏಕಿ ಜಿ.ತಿಮ್ಮಾರೆಡ್ಡಿ ತಮ್ಮ ಸಹಚರರೊಂದಿಗೆ ಆಗಮಿಸಿ ಗುಂಡಾಗಿರಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಎಸ್ಪಿ ಗೆ ದೂರು ಸಲ್ಲಿಸಿ ಹಲ್ಲೇಕೋರರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿಕೊಳ್ಳಲಾಯಿತು.             ಈ ಸಂದರ್ಭದಲ್ಲಿ ಜಿಲ್ಲಾ ಗಂಗಾಮತಸ್ಥ ಸೇವಾ ಸಂಘದ  ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಸಮಾಜದ ಮುಖಂಡರಾದ ಕಲ್ಮಲಾ ಶರಣಪ್ಪ, ಕಡುಗೋಲ ಆಂಜಿನೇಯ, ಕಡುಗೋಲು ಶರಣಪ್ಪ ಸೇರಿದಂತೆ ಮಹಿಳೆಯರು,ಮತ್ತಿತರರು ಇದ್ದರು.
Image
   ಸೆ. 26 ರಂದು ರಾಯಚೂರು ಪತ್ರಕರ್ತರು ಹಾಗೂ ಪತ್ರಕರ್ತರ ಮಕ್ಕಳಿಗಾಗಿ ಚೆಸ್ ತರಬೇತಿ ಕಾರ್ಯಾಗಾರ ಜಯ ಧ್ವಜ ನ್ಯೂಸ್ ,ರಾಯಚೂರು,ಸೆ.24- ರಾಯಚೂರು ರಿಪೋರ್ಟರ್ಸ್  ಗಿಲ್ಡ್‌, ರೋಟರಿ ಕ್ಲಬ್ ರಾಯಚೂರು ಹಾಗೂ ವೇದಾಂತ ಕಾಲೇಜ್ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ 26 ರಂದು ರಾಯಚೂರಿನ ಪತ್ರಿಕಾ ಭವನದಲ್ಲಿ ಪತ್ರಕರ್ತರ ಹಾಗೂ ಪತ್ರಕರ್ತರ ಮಕ್ಕಳಿಗಾಗಿ ಒಂದು ದಿನದ ಚದುರಂಗ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ ಅಧ್ಯಕ್ಷ ವಿಜಯ್ ಜಾಗಟಗಲ್ ತಿಳಿಸಿದ್ದಾರೆ. ಕಾರ್ಯಾಗಾರವನ್ನು ಬಿಜಿವಿಎಸ್‌ನ ಜಿಲ್ಲಾ ಸಂಚಾಲಕ  ಸೈಯದ್ ಹಫೀಜುಲ್ಲಾ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ  ರವಿಕುಮಾರ್ ಗಣೇಕಲ್, ಮಾಜಿ ಅಸಿಸ್ಟೆಂಟ್ ಗೌರ್ನರ್ ಎನ್.ಶಿವಶಂಕರ ವಕೀಲರು, ವೇದಾಂತ ಕಾಲೇಜ್ ಆಡಳಿತಾಧಿಕಾರಿ ರಾಕೇಶ್ ರಾಜಲಬಂಡಿ ಭಾಗವಹಿಸಲಿದ್ದಾಾರೆ. ಕಾರ್ಯಗಾರದಲ್ಲಿ ಭಾಗವಹಿಸುವ ಮಕ್ಕಳಿಗೆ ಹಾಗೂ ಪತ್ರಕರ್ತರಿಗೆ ಚೆಸ್ ತರಬೇತುದಾರರಾದ ಹನುಮಂತ ಯಾದವ್, ಶರತ್‌ಕುಮಾರ್, ಪೂಜಾ ಯಾದವ್, ಕೀರ್ತಿಕಿಟ್ಟು ಮಾರ್ಗದರ್ಶನ ಮಾಡಲಿದ್ದಾರೆ. ಆಸಕ್ತ ಪತ್ರಕರ್ತರು ಮತ್ತು ಪತ್ರಕರ್ತರ ಮಕ್ಕಳು ತಮ್ಮ ಹೆಸರನ್ನು ಸೆ.25 ರ ವರೆಗೂ ನೋಂದಾಯಿಸಿಕೊಳ್ಳಬಹುದು. ಭಾಗವಹಿಸುವ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಚೆಸ್ ಕಿಟ್ ವಿತರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ....
Image
  ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟನೆ.                 ಜಯ ಧ್ವಜ ನ್ಯೂಸ್ , ಸೆ.23-          ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಸರಕಾರಿ ಆಯುರ್ವೇದ ಮತ್ತು ಯುನಾನಿ ಅಸ್ಪತ್ರೆ ಸಭಾಂಗಣದಲ್ಲಿ 10ನೇಯ ರಾಷ್ಟ್ರೀಯ ಆಯುರ್ವೇದ ದಿನಾಚರಣೆ-2025 ಸಮಾರಂಭದ ಉದ್ಘಾಟನೆಯನ್ನು ಮಾನ್ಯ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಿಗಿರಿ ರವರ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾಕ್ಟರ ಶ್ರೀ ಸುರೇಂರಬಾಬು, ಜಿಲ್ಲಾ ಆಯುಷ್ಯ ಅಧಿಕಾರಿಗಳಾದ ಡಾ. ಶಂಕರಗೌಡರವರು ಮತ್ತು ಆಯುಷ್ಯ ಇಲಾಖೆ ವೈದ್ಯರ ವೃಂದ,ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
Image
ನವರಾತ್ರಿ : ಗಬ್ಬೂರು ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವರಿಗೆ ವಿಶೇಷ ಅಲಂಕಾರ                                                    ಜಯ ಧ್ವಜ ನ್ಯೂಸ್, ರಾಯಚೂರು, ಸೆ.22-                    ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನ ಐತಿಹಾಸಿಕ  ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಇಂದಿನಿಂದ ಪ್ರಾರಂಭಗೊಂಡಿತು.                  ಬೆಳ್ಳಿಗೆ ಘಟ ಸ್ಥಾಪನೆ, ಲಕ್ಷ್ಮೀ ವೆಂಕಟೇಶ್ವರ ದೇವರಿಗೆ ಅಭಿಷೇಕ, ಪುಷ್ಪ ಹಾಗೂ ಸುವರ್ಣಾಭರಣಗಳಿಂದ ಅಲಂಕಾರ, ನೈವೇದ್ಯ, ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನೆರವೇರಿತು. ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
Image
  ಶಾಸಕರಾದ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ  ತುಂಗಾಭದ್ರಾ ನದಿ ತಟದಲ್ಲಿ ಅಂಬಾ ಆರತಿ ಕಾರ್ಯಕ್ರಮ ಜಯ ಧ್ವಜ ನ್ಯೂಸ್ , ರಾಯಚೂರು ಸೆ.22- ' ಅಂಬಾ ಮಾತಾಕಿ ಜೈ'.. 'ತಾಯಿ ತುಂಗಭದ್ರಗೆ ಜಯವಾಗಲಿ'.. 'ಹರಹರ ಮಹಾದೇವ..'.. 'ತುಂಗಾರತಿಗೆ ಜಯವಾಗಲಿ..' 'ಅಂಬಾ ಮಾತೆಗೆ ಜಯವಾಗಲಿ'.. ಎನ್ನುವ ಭಕ್ತಿ ಭಾವದ ಘೋಷಣೆಗಳ ಮಧ್ಯೆ ತುಂಗಭದ್ರಗೆ ಅಂಬಾ ಆರತಿ ಕಾರ್ಯಕ್ರಮವು ಇಂದು  ತುಂಗಭದ್ರಾ ತಟದಲ್ಲಿರುವ ಮುಕ್ಕುಂದಾ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು. ಗೋಧೂಳಿ ಹೊತ್ತಿಗೆ, ಜಿಟಿಜಿಟಿ ಮಳೆಹನಿಗಳ ಸಿಂಚನದಲ್ಲಿ ವಾರಣಾಸಿಯ ಪ್ರಖ್ಯಾತ ಅರ್ಚಕರ ತಂಡವು ಮುಕ್ಕುಂದಾ ನದಿ ತೀರದಲ್ಲಿ ಅಂಬಾ ಆರತಿಯ ಪೂಜಾ ಕೈಂಕರ್ಯಗಳನ್ನು ಆರಂಭಿಸುತ್ತಿದ್ದಂತೆ ನೆರೆದಿದ್ದ ಜನಸ್ತೋಮದಿಂದ ಜಯಕಾರದ ಘೋಷಣೆಗಳು ಮೊಳಗಿದವು.  ಮುಕ್ಕುಂದಾ ಸೇರಿದಂತೆ ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ತುಂಗಭದ್ರೆಯ ಅಂಗಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ಆಂಬಾ ಆರತಿಯ ಸಂಭ್ರಮವನ್ನು ಕಣ್ತುಂಬಿಕೊಂಡರು. ನೆರೆದಿದ್ದ ಜನರು ತುಂಗಭದ್ರೆಗೆ ಹಾಗೂ ತಾಯಿ ಅಂಬಾದೇವಿಗೆ ಭಕ್ತಿ-ಭಾವದಿಂದ ನಮನ ಸಲ್ಲಿಸಿದರು. ಶಾಸಕರ ನೇತೃತ್ವ: ಸಿಂಧನೂರ ತಾಲೂಕಾಡಳಿತ ಮತ್ತು ಸಿಂಧನೂರ ತಾಲೂಕು ದಸರಾ ಉತ್ಸವ ಸಮಿತಿ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ನೇತೃತ್ವವನ್ನು ಸಿಂಧನೂರ ಕ್ಷೇತ್ರದ ಶಾಸಕರು ಹಾಗೂ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾದ ಹಂಪನಗೌಡ ಬಾದರ...
Image
  ಅಮೆರಿಕನ್ ವಿಸ್ಡಮ್  ಪೀಸ್ ಯುನಿವಸಿ೯ಟಿ ನವದೆಹಲಿ ವತಿಯಿಂದ ನಿಜಾಮುದ್ದೀನ್ ರವರಿಗೆ ಗೌರವ ಡಾಕ್ಟರೇಟ್ ಪ್ರದಾನ    ಜಯ ಧ್ವಜ ನ್ಯೂಸ್ , ರಾಯಚೂರು ,ಸೆ.21- ನವದೆಹಲಿಯಲ್ಲಿ   ಅಮೆರಿಕನ್ ವಿಸ್ಡಮ್  ಪೀಸ್ ಯುನಿವಸಿ೯ಟಿ ನವದೆಹಲಿಯ ವತಿಯಿಂದ  ಯರಗೇರಾ   ಮಾಜಿ ಗ್ರಾಮ ಪಂಚಾಯತ್  ಅಧ್ಯಕ್ಷರು, ರಾಯಚೂರು ತಾಲೂಕ  ಪಂಚಾಯತಿಯ ಮಾಜಿ   ವಿರೋಧ ಪಕ್ಷದ  ನಾಯಕರು, ಯರಗೇರಾ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ರಾಯಚೂರು ತಾಲೂಕ  ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ, ರಾಜ್ಯ ಸರಕಾರದ ರಾಜ್ಯ  ಮಟ್ಟದ ಸಹಕಾರ ರತ್ನ ಪ್ರಶಸ್ತಿ  ಪುರಸ್ಕೃತ,  ಬಡವರ, ದೀನ ದಲಿತರ,  ಹಿಂದುಳಿದ ವರ್ಗಗಳ ಹಾಗೂ  ಸಾರ್ವಜನಿಕರ  ಸಮಸ್ಯೆಗಳಿಗೆ  ಸ್ಪಂದಿಸುವ   ಮಹ್ಮದ್ ನಿಜಾಮುದ್ದೀನ್  ಇವರ ನಿರಂತರ  ಸಮಾಜ  ಸೇವೆಯನ್ನು   ಗುರುತಿಸಿ  ರಾಷ್ಟ್ರಮಟ್ಟದ  ಗೌರವ ಡಾಕ್ಟರೇಟ್  ಪದವಿ   ಪ್ರದಾನ   ಮಾಡಲಾಯಿತು.
Image
ಕಣ್ವ ಮಠದ ಪರಂಪರೆ ಪೂರ್ವ ಯತಿಗಳಾದ ಅಕ್ಷೋಭ್ಯ ತೀರ್ಥರ ಮಧ್ಯಾರಾಧನೆ ಸಂಪನ್ನ                                ಜಯ‌ಧ್ವಜ ನ್ಯೂಸ್ , ರಾಯಚೂರು, ಸೆ.20- ಶ್ರೀಮತ್  ಕಣ್ವ ಮಠ ಪರಂಪರೆಯ ಪೂರ್ವ ಯತಿ ಗಳಾದ   ಶ್ರೀ ಶ್ರೀ ೧೦೦೮ ಶ್ರೀ  ಅಕ್ಷೋಭ್ಯತೀರ್ಥ* ಶ್ರೀ ಪಾದಂಗಳವರ *ಮಧ್ಯಾರಾಧನೆಯ ವೈಭವದಿಂದ  ನೆರವೇರಿತು. ಆರಾಧನೆ ಪ್ರಯುಕ್ತ ಕಣ್ವ ಮಠಾಧಿಶರಾದ  *ಶ್ರೀಶ್ರೀ ೧೦೦೮ ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥ* ಶ್ರೀಪಾದಂಗಳವರಿಂದ ಬೃಂದಾವನಕ್ಕೆ ವಿಶೇಷ ಪೂಜೆ, ಭಜನಾಮಂಡಳಿ ಸದಸ್ಯರಿಂದ *ಭಜನೆ, ಭಕ್ತಾದಿಗಳಿಂದ ಪಾದಪೂಜೆ ಮುದ್ರಾಧಾರಣೆ, ಶ್ರೀಗಳಿಂದ ಸಂಸ್ಥಾನ ಪೂಜೆ,ಅಲಂಕಾರ ಬ್ರಾಹ್ಮಣರಿಗೆ ಬೋಜನ,ವೃಂದಾವನ ವಿಶೇಷ ಅಲಂಕಾರ ನಡೆಯಿತು. ವೇದಿಕೆ ಕಾರ್ಯಕ್ರಮ ದಲ್ಲಿ ಶ್ರೀ ರಾಮರಾವ್ ಕುಲಕರ್ಣಿ ಧಾರ್ಮಿಕ ಆಚರಣೆಗಳು ಕುರಿತು ಆಧ್ಯಾತ್ಮಿಕ ಪ್ರವಚನ,ಶ್ರೀ ಅರುಣ ಕುಮಾರ ದೇಸಾಯಿ ಅವರಿಂದ ಸತ್ಸಂಗ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ದೇಶಪಾಂಡೆ ಹಾಗೂ ನಾಗೂರ ಕುಟುಂಬ ಮತ್ತು ಸಕಲ ಭಕ್ತಾದಿಗಳ ಸೇವಾಸಮಿತಿ ಸಹಕಾರದಿಂದ  ಯಶಸ್ವಿಯಾಗಿ ನೆರವೇರಿದವು. ಸಕಲ ಭಕ್ತಾದಿಗಳಿಗೆ ತೀರ್ಥಪ್ರಸಾದದ ನಂತರ ಶ್ರೀ ಪಾದಂಗಳವರು  ಆಶಿರ್ವಾದ ಪೂರ್ವಕ ಫಲಮಂತ್ರಾಕ್ಷತೆ ವಿತರಿಸಿದರು ಎಂದು  ಶ್ರೀ ಮತ್ ಕ...
Image
  ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಹಿಂದೂ ಬ್ರಾಹ್ಮಣ ಎಂದು ನಮೂದಿಸಿ- ದೇಶಪಾಂಡೆ             ಜಯ ಧ್ವಜ ನ್ಯೂಸ್ , ರಾಯಚೂರು, ಸೆ.20- ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗದ ಆಯೋಗವು  ಇದೇ ತಿಂಗಳ 22 ನೇ ತಾರೀಖಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳಲಿದ್ದು, ಈ ಒಂದು ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಜಿಲ್ಲೆಯ ಎಲ್ಲಾ ಬ್ರಾಹ್ಮಣ ಬಂಧುಗಳು ಭಾಗವಹಿಸಿ ತಮ್ಮ  ವಿವರಗಳನ್ನು ನೀಡಿ, ಸಮೀಕ್ಷೆಯಲ್ಲಿನ 60 ಅಂಶಗಳ ವಿವರವನ್ನು ನೀಡುತ್ತಾ ,ಧರ್ಮ ಕಾಲಂನಲ್ಲಿ ಕಡ್ಡಾಯವಾಗಿ ಹಿಂದೂ ಎಂದು ಬರೆಯಿಸಿ ಹಾಗೂ ಜಾತಿ ಕಾಲಂನಲ್ಲಿ ಬ್ರಾಹ್ಮಣ ಎಂದು ನಮೂದಿಸಬೇಕೆಂದು ರಾಯಚೂರು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಮಹಾಪೋಷಕರಾದ  ನರಸಿಂಗರಾವ್ ದೇಶಪಾಂಡೆ ಮನವಿ ಮಾಡಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ  ಮಾತನಾಡಿ ಸಮೀಕ್ಷೆಯಲ್ಲಿ ಸಮಾಜ ಬಾಂಧವರು  ಉಪಜಾತಿಯನ್ನು ಹೇಳುವ ಅವಶ್ಯಕತೆ ಇರುವುದಿಲ್ಲವೆಂದು ಈಗಾಗಲೇ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಅಧ್ಯಕ್ಷರು ತಿಳಿಸಿದ್ದು ಇದು ಕೇವಲ ಜಾತಿಗಣಿತಿಯಾಗಿರುವುದಿಲ್ಲ ಸರ್ಕಾರವು ಸಮಸ್ತ ರಾಜ್ಯದ ಜನರ ಶೈಕ್ಷಣಿಕ ಸಾಮಾಜಿಕ ಸಮೀಕ್ಷೆಯನ್ನು ಕೈಗೊಂಡಿದ್ದು ಇದರಲ್ಲಿ ಬ್ರಾಹ್ಮಣ ಸಮಾಜದ ಎಲ್ಲಾ ಬಂಧುಗಳು ಪಾಲ್ಗೊಂಡು ಎಲ್ಲಾ ವಿವರಗಳನ್ನು ನೀಡಿ ನಿಮ್ಮ ಮನೆಯ ಮುಂದೆಗಡೆ ಆಯೋಗದ ವತಿಯಿಂದ ಅಂಟಿಸಿರುವ ಸ್ಟ...
Image
  ಸಚಿವ ಬೋಸರಾಜು ರಿಂದ  ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ:                        ಮುಂದಿನ ದಸರಾ ವೇಳೆಗೆ  ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ                    ಜಯ ಧ್ವಜ ನ್ಯೂಸ್, ರಾಯಚೂರು,ಸೆ.20- ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ .ಎಸ್. ಬೋಸರಾಜು ಅವರು ಇಂದು ರಾಯಚೂರು ನಗರದ ಹೊರವಲಯದ ಯರಮರಸ್ ಪ್ರದೇಶದಲ್ಲಿ ಸಂಚರಿಸಿ ನಿರ್ಮಾಣ ಹಂತದಲ್ಲಿರುವ ರಾಯಚೂರು ವಿಮಾನ ನಿಲ್ದಾಣದ ಕಾಮಗಾರಿ ಪರಿಶೀಲಿಸಿದರು. ನಿರ್ಮಾಣ ಹಂತದಲ್ಲಿರುವ ಪ್ಲೈಟ್ ಟರ್ಮಿನಲ್ ಕಟ್ಟಡ, ಎಲೆಕ್ಟ್ರಿಕಲ್ ಸೇಫ್ಟಿ ಕಟ್ಟಡ, ರವ್ ವೇ ಕಾಮಗಾರಿ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರದಿಂದ ಯಾವುದೇ ರೀತಿಯ ಹಣಕಾಸಿನ ಕೊರತೆಯಿಲ್ಲ. ಜಿಲ್ಲಾಡಳಿತವು ಈ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು, ಜಿಲ್ಲಾಧಿಕಾರಿಗಳು ನಿರಂತರವಾಗಿ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆಯುತ್ತಿದ್ದಾರೆ. ನಿಲ್ದಾಣವನ್ನು ಉತ್ತಮವಾಗಿ ಸಿದ್ದಪಡಿಸಲು ಅಧಿಕಾರಿಗಳು ಸನ್ನದ್ಧರಾಗಿದ್ದಾರೆ ಎಂದು ತಿಳಿಸಿದರು. ನಿಲ್ದಾಣದ ಕಾಂಪೌಂಡ್ ನಿರ್ಮಾಣ ಕಾರ್ಯ ಈಗಾಗಲೆ ಶೇ.90ರಷ್ಟು ...
Image
  ಮಹಿಳೆಯರ ದೂರು ಅರ್ಜಿಗಳ ಬಗ್ಗೆ  15 ದಿನಗಳಲ್ಲಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ- ಡಾ.ನಾಗಲಕ್ಷ್ಮಿ ಚೌಧರಿ ಜಯ ಧ್ವಜ ನ್ಯೂಸ್ ,ರಾಯಚೂರು, ಸೆ.19- ಮಹಿಳೆಯರು, ವಿದ್ಯಾರ್ಥಿನಿಯರು ,ಸಾರ್ವಜನಿಕರಿಂದ ಸ್ವೀಕೃತವಾದ ದೂರು ಅರ್ಜಿಗಳಿಗೆ ಸ್ಪಂದಿಸಿ 15 ದಿನಗಳಲ್ಲಿ ವರದಿ ನೀಡುವಂತೆ  ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು. ಅವರಿಂದು ನಗರದ  ಮಹಾನಗರ ಪಾಲಿಕೆಯ ಕಚೇರಿ ಸಭಾಂಗಣದಲ್ಲಿ ಸುದ್ದಿ ಗೋಷ್ಠಿಯಲ್ಲಿ  ಮಾತನಾಡಿ  ಇಂದು ನಗರದಲ್ಲಿ ನಡೆದ ಸಂವಾದ  ಕಾರ್ಯಕ್ರಮದಲ್ಲಿ  ಸ್ವೀಕೃತವಾದ ದೂರು ಅರ್ಜಿಗಳನ್ನು ಆಯಾ ಇಲಾಖೆಯ ಆಯುಕ್ತರಿಗೆ ಕಳುಹಿಸಲಾಗುವುದು. ಈ ಸಂಬಂಧ ಆಯಾ ಇಲಾಖೆಗಳು ಸಹ 15 ದಿನಗಳೊಳಗೆ ವರದಿ ಕಳುಹಿಸಲು ಸೂಚಿಸಲಾಗಿದೆ ಎಂದರು. ಸಂವಾದದಲ್ಲಿ ಅನೇಕ ಬಗೆಯ ದೂರು ಅರ್ಜಿಗಳು ಬಂದಿದ್ದು ಜಿಲ್ಲೆಯಲ್ಲಿ ಕುಬ್ಜ ಮಕ್ಕಳ ಸಂಖ್ಯೆ ಹಾಗೂ ಅಪೌಷ್ಠಿಕತೆ, ರಕ್ತಹೀನತೆಯಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವ ದೂರುಗಳು ಬಂದಿವೆ. ಕಾರ್ಖಾನೆ ನೀರು ನದಿಗೆ, ಜಮೀನಿಗೆ ಹರಿದು ಕಲುಷಿತವಾಗುತ್ತಿದೆ. ಯರಮರಸ್ ಸುತ್ತಲಿನ ಪ್ರದೇಶದಲ್ಲಿ ಪರಿಸರ ಮಾಲಿನ್ಯವಾಗಿದೆ ಎಂದು ದೂರುಗಳು ಬಂದಿವೆ ಇದಕ್ಕೆಲ್ಲ ಸ್ಪಂದನೆ ನೀಡಲಾಗಿದೆ. ಇದು ಇಲ್ಲಿಗೆ ಮುಕ್ತಾಯವಾಗದು. ಅಧಿಕಾರಿಗಳು ಜನರ ಬಳಿ ಹೋಗಬೇಕು....
Image
  ಮತ ಕಳ್ಳತನದ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಮೌನ:                ಬಿಜೆಪಿಯಿಂದ ಕಡಿಮೆ ಕೆಲಸ ಅಧಿಕ ಪ್ರಚಾರ- ಸೊರಕೆ.                                                   ಜಯ ಧ್ವಜ ನ್ಯೂಸ್ ರಾಯಚೂರು, ಸೆ.19-    ಬಿಜೆಪಿಯವರು ಕಡಿಮೆ ಕೆಲಸ ಮಾಡಿ ಅಧಿಕ ಪ್ರಚಾರ ಪಡೆಯುತ್ತಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದರು. ಅವರಿಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿಯವರು ಶೇ.5 ರಷ್ಟು ಮಾತ್ರ ಅಭಿವೃದ್ಧಿ ಕೆಲಸ ಮಾಡಿ ಶೇ.95ರಷ್ಟು ಪ್ರಚಾರ ಪಡೆಯುತ್ತಾರೆ ಆದರೆ ಕಾಂಗ್ರೆಸ್ ಪಕ್ಷ ಅದರ ತದ್ವಿರುದ್ಧ ನಾವು ನೂರರಷ್ಟು ಅಭಿವೃದ್ಧಿ ಮಾಡಿದರೂ ಪ್ರಚಾರ ಪಡೆಯುವಲ್ಲಿ ಹಿಂದೆ ಬಿದ್ದಿರುವ ಕಾರಣ ಜನರಿಗೆ ನಮ್ಮ ಅಭಿವೃದ್ಧಿ ಕಾಣಿಸುವುದು ವಿಳಂಬವಾಗುತ್ತಿದೆ ಎಂದರು. ಎಐಸಿಸಿ ಆದೇಶದಂತೆ ಪ್ರಚಾರ ಸಮಿತಿ ರಚಿಸಲಾಗಿದ್ದು ನಾನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷನಾಗಿ ಜವಾಬ್ದಾರಿ ತೆಗೆದುಕೊಂಡು ನಂತರ ಇದುವರೆಗೆ ಸುಮಾರು 29 ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದೇನೆಂದರು. ಸರ್ಕಾರದ ಪಂಚ ಗ್ಯಾರಂಟಿ ಸೇರಿದಂತೆ ಪ್ರಣಾಳಿಕೆಯಲ್ಲಿ ನ...
Image
  ಕನ್ನಡದಲ್ಲಿ 6ನೇ ವಿಜ್ಞಾನ, ತಂತ್ರಜ್ಞಾನ ಸಮ್ಮೇಳನಕ್ಕೆ ಚಾಲನೆ: ಕೃಷಿ ಬೆಳವಣಿಗೆಗೆ ವಿಜ್ಞಾನ, ತಂತ್ರಜ್ಞಾನ ಬಳಕೆ ಪೂರಕ- ಬೋಸರಾಜು ಜಯ ಧ್ವಜ ನ್ಯೂಸ್ ,ರಾಯಚೂರು, ಸೆ. 19 - ಇಡೀ ಪ್ರಪಂಚದಲ್ಲೇ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಯೋಗಗಳ ಗತಿ ವೇಗವಾಗಿದೆ ಈ ದಿಶೆಯಲ್ಲಿ ಕೃಷಿ ಬೆಳವಣಿಗೆಗೆ ವಿಜ್ಞಾನ, ತಂತ್ರಜ್ಞಾನ ಬಳಕೆಯು ಪೂರಕವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ  ಸಭಾ ನಾಯಕರಾದ ಎನ್.ಎಸ್.ಬೋಸರಾಜು ಅವರು ಹೇಳಿದರು. ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಇಂದು ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಇವರ ಸಹಯೋಗದಲ್ಲಿ ನಡೆದ ಕನ್ನಡದಲ್ಲಿ 6ನೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಜನರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳನ್ನು ಸರಿಯಾಗಿ ಮನದಟ್ಟು ಮಾಡಲು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ  ಅಕಾಡೆಮಿಯು ನಾನಾ ಕಾರ್ಯಕ್ರಮ ರೂಪಿಸಿ ಜನಪಯುಕ್ತ ಕೆಲಸ ಮಾಡುತ್ತಿದೆ. ವಿಶೇಷವಾಗಿ ಕನ್ನಡದಲ್ಲಿ 6ನೇ ಸಮ್ಮೇಳನ ಹಮ್ಮಿಕೊಂಡಿದ್ದು ಮಾದರಿಯಾಗಿದೆ ಎಂದರು. ತುಂಗಭದ್ರಾ ಡ್ಯಾಮನ 92 ಟಿಎಂಸಿ ಪ್ರಮಾಣದ  ಬಹುತೇಕ ನೀರು ರಾಯಚೂರ ಜಿಲ್ಲೆಯಲ್ಲಿ 6 ಲಕ್ಷ ಎಕರೆ ಭೂಮಿಗೆ ಹರಿಯು...
Image
ಸೆ . 21ರಂದು ರಾಷ್ಟ್ರಮಟ್ಟದ ಬೆಳಕು ಸಮ್ಮೇಳನ:    ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮ - ಅಣ್ಣಪ್ಪ ಮೇಟಿಗೌಡ   ಜಯ‌ ಧ್ವಜ ನ್ಯೂಸ್ ,ರಾಯಚೂರು ಸೆ, 18- ಬೆಳಕು ಸಾಹಿತ್ಯಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ 120ನೇ ಕಾರ್ಯಕ್ರಮ ಸೆಪ್ಟೆಂಬರ್ 21ರಂದು ಮಟ್ಟದ ಬೆಳಕು ಸಮ್ಮೇಳನವನ್ನು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬೆಳಕು ಟ್ರಸ್ಟ್ ಸಂಸ್ಥಾಪಕರಾದ ಅಣ್ಣಪ್ಪ ಮೇಟಿಗೌಡ ತಿಳಿಸಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಮ್ಮೇಳನದಲ್ಲಿ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸ, ಕವಿಗೋಷ್ಠಿ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ರಾಷ್ಟ್ರ ಪ್ರಶಸ್ತಿ ಪ್ರದಾನ ಹಾಗೂ ವಿಶೇಷವಾಗಿ 210ಕವಿಗಳು ರಚಿಸಿರುವ ಕವನಗಳನ್ನು ಒಳಗೊಂಡಿರುವ ಸಂಪಾದಿತ ಕವನ ಸಂಕಲನ ಬೆಳಕಿನ ಬುತ್ತಿ ಕೃತಿ ಲೋಕಾರ್ಪಣೆಗೊಳ್ಳಲಿದೆ.ಹಾಗೂ ಬೆಳಕು ಸಂಸ್ಥೆ ಪದಾಧಿಕಾರಿಗಳು ಮಾಡಿರುವ ರೇಂಜ್ ಚಿತ್ರದ ಪೋಸ್ಟರ್ ಅನಾವರಣವಾಗಲಿದೆ, ರಾಷ್ಟ್ರ ಮಟ್ಟದ ಬೆಳಕು ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ದಾ ಪು ಚಿ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಮಂಡ್ಯ ಜಿಲ್ಲೆಯ ಚಿಕ್ಕಣ್ಣ ಡಿ.ಪಿ ಹಾಗೂ ಸಮ್ಮೇಳನದ ಉದ್ಘಾಟಕರಾಗಿ ನಿವೃತ್ತ ಐಎಎಸ್ ಅಧಿಕಾರಿಗಳು ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯ...
Image
ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ:                     ಅಗತ್ಯ ಮಾಹಿತಿ ನೀಡಲು ಅಪರ ಜಿಲ್ಲಾಧಿಕಾರಿ ಶಿವಾನಂದ ಮನವಿ ಜಯ ಧ್ವಜ ನ್ಯೂಸ್  , ರಾಯಚೂರು ಸೆ. 18-   ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಜಾಗೃತಿ ಅಭಿಯಾನದಲ್ಲಿ ನಾವೆಲ್ಲರೂ ಭಾಗಿಯಾಗಬೇಕು. ಈ ಸಮೀಕ್ಷೆ ಸಂದರ್ಭದಲ್ಲಿ ಸಮೀಕ್ಷೆದಾರರಿಗೆ ಅಗತ್ಯ ಮಾಹಿತಿ ಒದಗಿಸಿ ಸಮೀಕ್ಷೆ ಯಶ್ವಿಸಿಗೊಳಿಸಲು ಜಿಲ್ಲೆಯ ಎಲ್ಲಾ ನಾಗರೀಕರು ಸಹಕಾರ ನೀಡಬೇಕು. ಇದು ನಮ್ಮ ಸಮೀಕ್ಷೆ-ನಾವು ಜವಾಬ್ದಾರಿಯಿಂದ ಪಾಲ್ಗೊಳ್ಳೋಣ ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಮನವಿ ಮಾಡಿದ್ದಾರೆ. ರಾಜ್ಯದ ಎಲ್ಲಾ ವರ್ಗಗಳ ಅಥವಾ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಿಸುವುದು. ಹಾಗೂ ಸಮೀಕ್ಷೆಯಲ್ಲಿ ಅನುಸರಿಸಿದ ವಿವಿಧ ಮಾನದಂಡಗಳ ಆಧಾರದ ಮೇಲೆ ಸಂಗ್ರಹಿಸಿದ ಅಂಕಿ-ಅಂಶಗಳ ಹಿನ್ನೆಲೆಯಲ್ಲಿ ಎಲ್ಲಾ ಜನಾಂಗದಲ್ಲಿರುವ ದುರ್ಬಲ ಅಥವಾ ಹಿಂದುಳಿದವರನ್ನು ಗುರುತಿಸಿ ಅವರ ಅಭಿವೃದ್ಧಿಗಾಗಿ ಕಾರ್ಯಕ್ರಮ ರೂಪಿಸುವುದು ಸಮೀಕ್ಷೆಯ ಉದ್ದೇಶವಾಗಿದೆ.  ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕಾಗಿ ಸೆಪ್ಟೆಂಬರ್ 22ರಿಂದ ನವಂಬರ್ 07ರವರೆ...
Image
ಕಲ್ಯಾಣ ಕರ್ನಾಟಕ ವಿಮೋಚನಾ ಚಳುವಳಿಯಲ್ಲಿ   ಭೀಮಸೇನ ರಾವ್ ಕುಲಕರ್ಣಿ , ರಾಘವೇಂದ್ರರಾವ್ ಪಟವಾರಿ ಪಾತ್ರ ಅನನ್ಯ - ಹನುಮಂತರಾವ್ ಕಲ್ಲೂರಕರ್ ಜಯ ಧ್ವಜ ನ್ಯೂಸ್ , ರಾಯಚೂರು, ಸೆ.17- ಕಲ್ಯಾಣ ಕರ್ನಾಟಕ ವಿಮೋಚನಾ ಚಳುವಳಿಯಲ್ಲಿ ಭೀಮಸೇನ ರಾವ್ ಕುಲಕರ್ಣಿ ಗುಂಜಳ್ಳಿ ಮತ್ತು ರಾಘವೇಂದ್ರರಾವ್ ಪಟವಾರಿ ಲಿಂಗನಖಾನ್ ದೊಡ್ಡಿ ಇವರು ಸಕ್ರಿಯವಾಗಿ ಗುರುತಿಸಿಕೊಂಡು ತಮ್ಮ ತ್ಯಾಗ ಬಲಿದಾನದ ಮೂಲಕ ಸ್ವಾತಂತ್ರ ದೊರಕಿಸಿಕೊಡುವಲ್ಲಿ ಅವರ ಪಾತ್ರ ಅನನ್ಯವಾಗಿತ್ತೆಂದು ಬ್ರಾಹ್ಮಣ ಸಮಾಜದ ಹಿರಿಯರಾದ ಹನುಮಂತರಾವ್ ಕಲ್ಲೂರಕರ್ ಹೇಳಿದರು. ಅವರಿಂದು ಸಂಜೆ  ನಗರದ ಕರ್ನಾಟಕ ಸಂಘದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಹೈ.ಕ ಸ್ವಾತಂತ್ರ್ಯ ಹೋರಾಟಗಾರರ ಉತ್ತರಾಧಿಕಾರಿಗಳ ವೇದಿಕೆಯಿಂದ ಅವರ ಕುಟುಂಬಸ್ಥರು ಆಯೋಜಿಸಿದ ಕಾರ್ಯಕ್ರಮವನ್ನು ಸರದಾರ ವಲ್ಲಬಾಯಿ ಪಾಟೀಲ್, ಮಹಾತ್ಮಾ ಗಾಂಧೀಜಿ,ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಭೀಮಸೇನ ರಾವ್ ಕುಲಕರ್ಣಿ ಗುಂಜಳ್ಳಿ, ರಾಘವೇಂದ್ರರಾವ್ ಪಟವಾರಿ ಲಿಂಗನ್ ಖಾನ್ ದೊಡ್ಡಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ರಾಯಚೂರಿನ ಈ ಇಬ್ಬರು ಮಹನೀಯರು  ಕಲ್ಯಾಣ ಕರ್ನಾಟಕ ಏಕೀಕರಣದಲ್ಲಿ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಹೋರಾಟಕ್ಕೆ ಕಿಚ್ಚು ಹಚ್ಚಿದ್ದರು ಎಂದರು. ದೇಶಕ್ಕೆ ಸ್ವಾತಂತ್ರ್ಯ ಬಂದು ವರ್ಷದ ನಂತರ ಅನೇಕ ಹೋರಾಟಗಾರರ ತ್ಯಾಗ ಬಲಿದಾನದಿಂದ ಈ ಭಾಗಕ್ಕೆ ಸ್ವಾತಂತ್ರ್ಯ ದೊರೆತಿದೆ ಎ...