Posts

Showing posts from September, 2023

ಶ್ರೀ ಶ್ರೀ 1008 ಶ್ರೀವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದಂಗಳವರ ದಂಡೋದಕ ಸ್ನಾನ, ಸೀಮೋಲ್ಲoಘನ

Image
  ಶ್ರೀ ಶ್ರೀ 1008 ಶ್ರೀವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದಂಗಳವರ ದಂಡೋದಕ ಸ್ನಾನ, ಸೀಮೋಲ್ಲoಘನ ರಾಯಚೂರು,ಸೆ.30- ಚಾತುರ್ಮಾಸದ ಪರ್ಯಂತ ಶ್ರೀಮಠದಲ್ಲಿ ಹೋಮ, ಹವನ ಮತ್ತು ಶ್ರೀಭಾಗವತ ಪುರಾಣ ವಿಶೇಷವಾದ ಶಕ್ತಿ ನಿರ್ಮಾಣವಾಗಿದೆ, ಭಕ್ತರು ಶ್ರೀ ಮಠದ ಅಭಿವೃದ್ಧಿ ಮತ್ತು ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಸಹಕರಿಸಬೇಕೆಂದು ಶ್ರೀಮತ್ ಕಣ್ವ ಮಠ ಹುಣಸಿಹೊಳೆಯ, ಪೀಠಾಧಿಪತಿಗಳಾದ ಶ್ರೀ ಶ್ರೀ 1008 ಶ್ರೀ ವಿದ್ಯಾಕಣ್ವ ವಿರಾಜ ತೀರ್ಥ ಶ್ರೀಪಾದಂಗಳವರ ತಮ್ಮ ಚತುರ್ಥ ಚಾತುರ್ಮಾಸ್ಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಈ ಬಾರಿಯ ಚಾತುರ್ಮಾಸ್ಯದಲ್ಲಿ ಭಕ್ತರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಶ್ರೀವಿಠ್ಠಲಕೃಷ್ಣನ ದರ್ಶನ ಪಡೆದು ಚಾತುರ್ಮಾಸ್ಯವನ್ನು ವಿಜೃಂಭಣೆಯಿಂದ ಸಂಪನ್ನಗೊಳಿಸಿದರು, ವಿಶೇಷವಾಗಿ ಮಹಿಳೆಯರು ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದು ಗಣನೀಯ ಸೇವೆ ಸಲ್ಲಿಸಿದ್ದಾರೆ ಚಾತುರ್ಮಾಸ್ಯದ ಫಲ ಸಕಲ ಭಕ್ತರಿಗೂ ತಲುಪಲಿದೆ ಎಂದರು._ ಬೆಳಿಗ್ಗೆ ಶ್ರೀಮನ್ ಮಾಧವತೀರ್ಥರ ತಪೋಭೂಮಿ, ವೀರಘಟ್ಟದ ಕೃಷ್ಣಾ ನದಿ ತಟದಲ್ಲಿ ನೂರಾರು ಭಕ್ತರೊಂದಿಗೆ ದಂಡೋದಕ ಸ್ನಾನ, ಸಕಲ ವಿಧಿ ವಿಧಾನಗಳೊಂದಿಗೆ ತಮ್ಮ ಚಾತುರ್ಮಾಸ ಸಂಕಲ್ಪವನ್ನು ಸಂಪೂರ್ಣಗೊಳಿಸಿದರು, ನಂತರ ಶ್ರೀಮನ್ ಮಾಧವತೀರ್ಥರ ತಪೋಭೂಮಿ ವೀರಘಟ್ಟದಲ್ಲಿ ಮಂಗಳಾರತಿ ಮಾಡಿ ದರ್ಶನ ಪಡೆದು, ವೀರಘಟ್ಟದಿಂದ ಸಕಲ ವಾದ್ಯ, ತಾಳ ಮೇಳಗಳೊಂದಿಗೆ ಶುಭಯಾತ್ರೆ ಮೂಲಕ ಹುಣಸಿಹೊಳೆವರ

ದಾಸ ಸಾಹಿತ್ಯ ಅಧ್ಯಯನ ಪೀಠ ಸ್ಥಾಪಿನೆ ಮನವಿ ಸಲ್ಲಿಕೆ : ನಾಳೆ ಪೂರ್ವಭಾವಿ ಸಭೆ

Image
  ದಾಸ ಸಾಹಿತ್ಯ ಅಧ್ಯಯನ ಪೀಠ ಸ್ಥಾಪಿನೆ ಮನವಿ ಸಲ್ಲಿಕೆ :              ನಾಳೆ ಪೂರ್ವಭಾವಿ ಸಭೆ                                ರಾಯಚೂರು,ಸೆ.30- ವಿಶ್ವವಿದ್ಯಾಲಯ ರಾಯಚೂರಿನಲ್ಲಿ ದಾಸ ಸಾಹಿತ್ಯ ಅಧ್ಯಯನ ಪೀಠವನ್ನು ಸ್ಥಾಪಿಸುವಂತೆ ಕುರಿತಾಗಿ ಮನವಿ ಪತ್ರ ಸಲ್ಲಿಸುವ ಬಗ್ಗೆ ಚರ್ಚಿಸಲುಪೂರ್ವಭಾವಿ ಸಭೆ ಕರೆಯಲಾಗಿದೆ.  ರಾಯಚೂರು ಹರಿದಾಸರ ತೊಟ್ಟಿಲು,ಈ ಒಂದು ಪುಣ್ಯ ಕ್ಷೇತ್ರದಲ್ಲಿ ನೂರಾರು ಹರಿದಾಸರು, ಕಾಲಲ್ಲಿ ಗೆಜ್ಜೆಯನ್ನು ಕಟ್ಟಿ, ಕೈಯಲ್ಲಿ ತಂಬೂರಿಯನ್ನು ಹಿಡಿದು, ಮಧುಕರ ವೃತ್ತಿಯನ್ನು ಮಾಡುತ್ತ, ಸಾವಿರಾರು ಮೌಲ್ಯಯುಕ್ತ ಹರಿನಾಮ ಸಂಕೀರ್ತನೆಗಳನ್ನು ಹಾಡಿ ಈ ಪ್ರದೇಶವನ್ನು ಪಾವನಗೊಳಿಸಿದ್ದಾರೆ.     ಪ್ರಾತಸ್ಮರಣೀಯರ ಹರಿದಾಸರ ಅಧ್ಯಯನಕ್ಕಾಗಿ ರಾಯಚೂರು ವಿಶ್ವವಿದ್ಯಾಲಯ ರಾಯಚೂರಿನಲ್ಲಿ,*ಹರಿದಾಸ ಅಧ್ಯಯನ ಪೀಠ ಸ್ಥಾಪಿಸುವಂತೆ* ಹರಿದಾಸ ಬಂಧುಗಳ ಒತ್ತಾಸೆಯಾಗಿದೆ,  ಈ ನಿಟ್ಟಿನಲ್ಲಿ ದಿನಾಂಕ 01-09-23 ಸಂಜೆ 6 ಗಂಟೆಗೆ ಕರ್ನಾಟಕ ಸಂಘ ಸಭಾಂಗಣ ರಾಯಚೂರಿನಲ್ಲಿ  ಡಾ.ಜಯ ಲಕ್ಷ್ಮಿ ಮಂಗಳಮೂರ್ತಿ ದಾಸ ಸಾಹಿತ್ಯ ವಿದ್ವಾಂಸರು, ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಇವರ ಅಧ್ಯಕ್ಷತೆಯಲ್ಲಿ ಮನವಿ ಪತ್ರ ಸಲ್ಲಿಸುವ ಕುರಿತಾಗಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.   ದಯವಿಟ್ಟು ಈ ಸಭೆಗೆ ಎಲ್ಲಾ ಹರಿದಾಸ ಬಂಧುಗಳು ,ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಭಜನಾ ಮಂಡಳಿಗಳ ಮಾತೆಯರು, ಸಮಾನಮನಸ್ಕ ಬಂಧುಗಳು ಇದರಲ್ಲಿ ಭಾಗವಹಿಸುವಂತ

ಕೋಟೆ ಕೊತ್ತಲಗಳು ಅಭಿವೃದ್ಧಿ ಮರೀಚಿಕೆ : ಪ್ರವಾಸೋದ್ಯಮ ಉತ್ತೇಜನಕ್ಕೆ ಜಿಲ್ಲೆಯಲ್ಲಿ ಅನೇಕ ತಾಣಗಳು ಲಭ್ಯ.

Image
ಕೋಟೆ ಕೊತ್ತಲಗಳು ಅಭಿವೃದ್ಧಿ  ಮರೀಚಿಕೆ   :                  ಪ್ರವಾಸೋದ್ಯಮ ಉತ್ತೇಜನಕ್ಕೆ ಜಿಲ್ಲೆಯಲ್ಲಿ ಅನೇಕ ತಾಣಗಳು ಲಭ್ಯ.                                                           ರಾಯಚೂರು,ಸೆ.30- ನಮ್ಮ ಜಿಲ್ಲೆ ಕೋಟೆ ಕೊತ್ತಲಗಳ ನಾಡಾಗಿದೆ ಇಲ್ಲಿ ಅನೇಕ ಅರಸರು ಆಳ್ವಿಕೆ ನಡೆಸಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಅನೇಕ ಪಳಿಯುಳಿಕೆಗಳು ಇನ್ನೂ ನೋಡಲು ಸಿಗುತ್ತವೆ ಆದರೆ ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪ್ರಾಚ್ಯವಸ್ತು ಇಲಾಖೆ, ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕಿದೆ.                                           ಜಿಲ್ಲೆಯಲ್ಲಿ ಅನೇಕ ಸಾಮ್ರಾಜ್ಯಗಳು ಆಡಳಿತ ನಡೆಸಿವೆ. ವಿಜಯನಗರ, ಕಾಕತೀಯ, ಬಹಮನಿ,ಮುಂತಾದ ಸಾಮ್ರಾಜ್ಯಗಳು ಇಲ್ಲಿ ನೆಲೆ ನಿಂತಿದ್ದವು ಮಸ್ಕಿಯಲ್ಲಿ  ಅಶೋಕ ಶಿಲಾ ಶಾಸನಗಳು ಇವೆ, ಮಲಿಯಾಬಾದ್ ನಲ್ಲಿ ವಿಜಯನಗರ ಸಾಮ್ರಾಜ್ಯದ ಕುರುಹುಗಳು ಲಭಿಸಿವೆ ರಾಯಚೂರು ಕೋಟೆಯನ್ನು ಕಾಕತೀಯ ರಾಣಿ ರುದ್ರಮ್ಮ ದೇವಿ ನಿರ್ಮಿಸಿದ್ದಳು ಎಂಬ ಐತಿಹ್ಯವಿದೆ.                                             ನಂತರ ಬಿಜಾಪುರ ಆದಿಲ್ ಶಾಹಿಗಳು ರಾಯಚೂರು ಕೋಟೆ ವಶಪಡಿಸಿಕೊಂಡರು ಎಂಬುದಾಗಿ ತಿಳಿದುಬರುತ್ತದೆ. ನಗರದಲ್ಲಿ ಇಂದಿಗೂ ಕೆಲ ದ್ವಾರ ಬಾಗಿಲುಗಳಾದ ನವರಂಗ ದರವಾಜಾ, ಕಾಟೆ ದರವಾಜಾ, ಅಂದ್ರೂನ ಕಿಲ್ಲಾ, ಬೆಹರೂನ ಕಿಲ್ಲಾ, ಪೇಟ್ಲಾ ಬುರ್ಜ್, ಕಲ್ಲಾನೆ, 

ಶ್ರೀ ಸುಬುಧೇಂದ್ರ ತೀರ್ಥರ 11ನೇ ಚಾರ್ತುಮಾಸ್ಯ ಸಮಾರೋಪ: ಸನಾತನ ಹಿಂದೂ ಧರ್ಮಕ್ಕೆ ಪರ್ಯಾಯವಾದ ಬೇರೆ ಯಾವುದೇ ಧರ್ಮವಿಲ್ಲ -ಶ್ರೀ ಸುಬುಧೇಂದ್ರ ತೀರ್ಥರು

Image
 ಶ್ರೀ ಸುಬುಧೇಂದ್ರ ತೀರ್ಥರ 11ನೇ ಚಾರ್ತುಮಾಸ್ಯ   ಸಮಾರೋಪ:          ಸನಾತನ ಹಿಂದೂ ಧರ್ಮಕ್ಕೆ ಪರ್ಯಾಯವಾದ ಬೇರೆ ಯಾವುದೇ ಧರ್ಮವಿಲ್ಲ - ಶ್ರೀ  ಸುಬುಧೇಂದ್ರ ತೀರ್ಥರು ರಾಯಚೂರು,ಸೆ.29-  ಸನಾತನ ಹಿಂದೂ ಧರ್ಮಕ್ಕೆ ಪರ್ಯಾಯವಾದ ಬೇರೆ ಯಾವುದೇ ಧರ್ಮವಿಲ್ಲ ಅದರ ಬಗ್ಗೆ ಅಪ ಪ್ರಚಾರಕ್ಕೆ ಮಾನ್ಯತೆ ನೀಡಬಾರದು ಎಂದು  ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳ  ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು  ಹೇಳಿದರು. ಅವರಿಂದು ಶ್ರೀ ಮಠದ ಆವರಣದಲ್ಲಿರುವ ಯೋಗೀಂದ್ರ ಸಭಾ ಮಂಟಪದಲ್ಲಿ  11ನೇ ಚಾರ್ತುಮಾಸ್ಯ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಇಂದು ಸನಾತನ ಹಿಂದೂ ಧರ್ಮದ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಅವರು ಹೇಳುತ್ತಿರುವ ದೋಷಗಳನ್ನು ಸರಿಪಡಿಸುವುದರೊಂದಿಗೆ ಧರ್ಮದ ಗಟ್ಟಿತನವನ್ನು ಸುಭದ್ರಪಡಿಸುವ  ಅನಿವಾರ್ಯತೆ ಹಾಗೂ ಅವಶ್ಯಕತೆ ಇದೆ ಎಂದರು. ಇಂದು ವಿಶ್ವದಲ್ಲೇ ಅಶಾಂತಿ ತಾಂಡವ ಮಾಡುತ್ತಿದ್ದು, ವಸುದೇವಕ ಕುಟುಂಬಕಂ  ಅನ್ನುವ ಹಾಗೆ ವಿಶ್ವದಲ್ಲಿ ಶಾಂತಿ ನೆಲಸಬೇಕು ಧರ್ಮ ಗಟ್ಟಿಯಾಗಲು ಭದ್ರ ಬುನಾದಿ ಹಾಕಬೇಕಾಗಿದೆ ಎಂದರು.  ಮಾನವೀಯ  ಮೌಲ್ಯಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಸದೃಢ  ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು. ರಾಘವೇಂದ್ರ ಸ್ವಾಮಿಗಳ ಮಠ ಎಲ್ಲ ಸಮುದಾಯಗಳ ಮಠವಾಗಿದ್ದು, ಅವುಗಳ ಅಭಿವೃದ್ಧಿಗೆ ಬದ್ದವಾಗಿದ್ದು, ವಿಪ್ರ ಸಮಾಜದ ಸಂಘಟನೆ ಜೋತೆಗೆ  ತ್ರಿಮತಸ್ಥ ವಿದ್ಯಾರ್ಥಿಗಳಿಗೆ

ಕರ್ನಾಟಕ ಬಂದ್ ಗೆ ಕರವೇ ಬೆಂಬಲ.

Image
  ಕರ್ನಾಟಕ ಬಂದ್ ಗೆ ಕರವೇ ಬೆಂಬಲ.                                  ರಾಯಚೂರು,ಸೆ.29- ತಮಿಳು ನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರೆ ನೀಡಲಾಗಿದ್ದು ಕರ್ನಾಟಕ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ( ಪ್ರವೀಣ್ ಶೆಟ್ಟಿ )ಬಣ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು.            ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಈ ಕೂಡಲೆ ಕಾವೇರಿ ನೀರು ತಮಿಳು ನಾಡಿಗೆ ಹರಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ ಅವರು ಸಿಎಂ ಸುಗ್ರೀವಾಜ್ಞೆ ಹೊರಡಿಸಿ ನೀರು ಹರಿಸುವುದನ್ನು ನಿಲ್ಲಿಸಬೇಕೆಂದರು.                                     ಕೆಆರ್ ಎಸ್ ಜಲಾಶಯ ಬರಿದಾಗಿದ್ದು ಕುಡಿಯಲು ನೀರಿಲ್ಲದೆ ಪರಿತಪಿಸಬೇಕಾದ ಸ್ಥಿತಿಯಿದ್ದು ಮುಂದಿನ ದಿನಗಳಲ್ಲಿ ಬೆಂಗಳೂರಿಗರು ನೀರಿಲ್ಲದೆ ಹಾಹಾಕಾರ ಪಡುವ ಸನ್ನಿವೇಶ ಎದುರಾಗಲಿದ್ದು ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕೆಂದರು.                                     ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ವೀರೇಶ ಹೀರಾ, ವೀರೇಶ ರೆಡ್ಡಿ,ವೆಂಕಟೇಶ ರೆಡ್ಡಿ,ತುಳಜಾರಾಮ, ಶ್ಯಾಮ, ರಾಜು, ವಿರುಪನಗೌಡ, ರಮೇಶ್ ಸೇರಿದಂತೆ ಅನೇಕರಿದ್ದರು .

ಕರ್ನಾಟಕ ಬಂದ್ ಗೆ ಬೆಂಬಲಿಸಿ ಕರವೇಯಿಂದ ಕಂದುಗಡ್ಡೆ ಮಾರೆಮ್ಮದೇವಿಗೆ ಪೂಜೆ ಸಲ್ಲಿಸಿ ವಿನೂತನ ಪ್ರತಿಭಟನೆ

Image
  ಕರ್ನಾಟಕ ಬಂದ್ ಗೆ ಬೆಂಬಲಿಸಿ ಕರವೇಯಿಂದ ಕಂದುಗಡ್ಡೆ ಮಾರೆಮ್ಮದೇವಿಗೆ ಪೂಜೆ ಸಲ್ಲಿಸಿ  ವಿನೂತನ ಪ್ರತಿಭಟನೆ           ರಾಯಚೂರು,ಸೆ.29- ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ "ಕರ್ನಾಟಕ ಬಂದ್" ಗೆ ಬೆಂಬಲಿಸಿ ರಾಯಚೂರಿನ ಗ್ರಾಮ ದೇವತೆಯಾದ ಕಂದುಗಡ್ಡೆ ಮಾರೆಮ್ಮದೇವಿಗೆ ಪೂಜೆ ಸಲ್ಲಿಸುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಾಣ) ವಿನೂತನ ಪ್ರತಿಭಟನೆ ನಡೆಸಿತು. ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ತಮಿಳುನಾಡಿನ ಪರವಾಗಿ ಕಾವೇರಿ ನೀರು ನಿಯಂತ್ರಣ ಸಮಿತಿ  ಮತ್ತು ಸರ್ವೋಚ್ಚ ನ್ಯಾಯಾಲಯವು, ಸೆಪ್ಟೆಂಬರ್ ೨೮ ರಿಂದ ಅಕ್ಟೋಬರ್ ೧೫ ರವರೆಗೆ ಪ್ರತಿನಿತ್ಯ ಮೂರು ಸಾವಿರಕ್ಯೂಸೆಕ್ ನೀರನ್ನು ಹರಿಸಲು ನಿರ್ದೇಶಿಸಿರುವದರಿಂದ, ಕರ್ನಾಟಕ ನೇಗಿಲ ಯೋಗಿಗೆ ಮರಣ ಶಾಸನ ಬರೆದಹಾಗೆ ಆಗಿದೆ. ಕಾವೇರಿ ನದಿ ನೀರು ನಿಯಂತ್ರಣ ಸಮಿತಿಗೆ ರಾಯಚೂರಿನ ಗ್ರಾಮದೇವತೆಯಾದ ಕಂದುಗಡ್ಡೆ  ಮಾರೆಮ್ಮದೇವಿಯು ಒಳ್ಳೆಯ ಬುದ್ಧಿಕೊಟ್ಟು ಕಾವೇರಿ ಉಳಿಸಿ, ಕನ್ನಡಿಗರನ್ನು ಉಳಿಸಿ, ರೈತರನ್ನ ಉಳಿಸಿ ಎಂದು ತಾಯಿಗೆಪೂಜೆ ಸಲ್ಲಿಸಿ ಕರ್ನಾಟಕ ಜನರ ಹಿತ ಕಾಪಾಡಲೆಂದು ಬೇಡಿಕೊಳ್ಳುತ್ತಾ ಕರ್ನಾಟಕ ಬಂದ್‌ನ್ನು ಬೆಂಬಲಿಸಿ ವಿನೂತನವಾಗಿ ಪ್ರತಿಭಟಿಸಲಾಯಿತು. ಮಳೆಯ ಅಭಾವದಿಂದ ಕಾವೇರಿ ನದಿಯ ನಾಲ್ಕು ಜಲಾಶಯಗಳಲ್ಲಿ, ನೀರಿನ ಒಳಹರಿವು ಕಡಿಮೆಯಾಗಿದ್ದು, ೩೦೦೦ ಕ್ಯೂಸೆಕ್ ನೀರನ್ನು ಹರಿಸಿದರೆ, ನಮ್ಮ ರಾಜ್ಯದ ರೈತರಿಗೆ

ನಗರದಲ್ಲಿ ವರ್ಷಕ್ಕೊಮ್ಮೆ ಮಾತ್ರ ಕೆಲವು ಗಂಟೆಗಳ ಕಾಲ ಅರಳುವ ಬ್ರಹ್ಮ ಕಮಲ

Image
ನಗರದಲ್ಲಿ ವರ್ಷಕ್ಕೊಮ್ಮೆ ಮಾತ್ರ ಕೆಲವು ಗಂಟೆಗಳ ಕಾಲ ಅರಳುವ  ಬ್ರಹ್ಮ ಕಮಲ ರಾಯಚೂರು,ಸೆ.28- ವರ್ಷಕ್ಕೊಮ್ಮೆ ಮಾತ್ರ ಕೆಲವು ಗಂಟೆಗಳ ಕಾಲ ಅರಳುವ ಬ್ರಹ್ಮಕಮಲ ರಾಯಚೂರಿನ ಶ್ರೀರಾಮನಗರ ಕಾಲೋನಿಯ ನ್ಯಾಯವಾದಿ ಅಯ್ಯನಗೌಡ ಗೊಲದಿನ್ನಿ ಮನೆಯ ಅಂಗಳದಲ್ಲಿ ಅರಳಿದೆ.                               ಮೂರು ತಿಂಗಳ ಕೆಳಗೆ ನೆಟ್ಟಿದ್ದ ಗಿಡದಲ್ಲಿ ಬಿಟ್ಟಿದ್ದ ಹೂ ಇಂದು ರಾತ್ರಿ ಅರಳಿದೆ. ಅಪರೂಪಕ್ಕೆ ಹೂಬಿಡುವ ಗಿಡದಲ್ಲಿ ಬ್ರಹ್ಮಕಮಲ ಅರಳಿರುವ ಹಿನ್ನಲೆ ಗೌರಮ್ಮ ಮತ್ತು ಅಯ್ಯನಗೌಡ ದಂಪತಿ ಬ್ರಹ್ಮಕಮಲಕ್ಕೆ ಪೂಜೆಯನ್ನ ಸಲ್ಲಿಸಿದ್ದಾರೆ.   ಬ್ರಹ್ಮಕಮಲಕ್ಕೆ  ಪುರಾಣದಲ್ಲಿ ವಿಶೇಷ ಮಹತ್ವ ತಿಳಿಸಲಾಗಿದೆ ಆದ್ದರಿಂದಲೇ ಈ ಹೂವಿಗೆ ವಿಶೇಷ ಮಹತ್ವವಿದೆ. ಹಿಮಾಲಯದ ಕೆಲವು ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುವ ಬ್ರಹ್ಮ ಕಮಲ ಹೂವು ,ಇದು ಅರಳುವುದನ್ನು ನೋಡಿದವರಿಗೆ ಇಷ್ಟಾರ್ಥಗಳು ಈಡೇರುತ್ತವೆ ಅನ್ನೊ ಪ್ರತೀತಿ ಇರುವುದರಿಂದ ಬ್ರಹ್ಮ ಕಮಲಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ.

ಮಂತ್ರಾಲಯ: ಅನಂತ ಪದ್ಮನಾಭ ವ್ರತ ಆಚರಣೆ

Image
  ಮಂತ್ರಾಲಯ: ಅನಂತ ಪದ್ಮನಾಭ ವ್ರತ ಆಚರಣೆ.                                ರಾಯಚೂರು,ಸೆ.28- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅನಂತ ಚತುರ್ದಶಿ ಪ್ರಯುಕ್ತ ಅನಂತ ಪದ್ಮನಾಭವ್ರತ ಆಚರಿಸಲಾಯಿತು.                    ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ಶ್ರೀ ಬ್ರಹ್ಮದೇವರ ಕರಾರ್ಚಿತ ಶ್ರೀ ಮನ್ಮೂಲ ರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿದರು.ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಗಣೇಶ ವಿಸರ್ಜನೆ :ಖಾಸ ಬಾವಿ ಬಳಿ ಸಾಲುಗಟ್ಟಿರುವ ಗಣೇಶ ಮೂರ್ತಿಗಳು.

Image
  ಗಣೇಶ ವಿಸರ್ಜನೆ :ಖಾಸ ಬಾವಿ ಬಳಿ ಸಾಲುಗಟ್ಟಿರುವ ಗಣೇಶ ಮೂರ್ತಿಗಳು.                            ರಾಯಚೂರು,ಸೆ.28- ಸಾರ್ವಜನಿಕ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿಂದ ಸಾಗಿದ್ದು ಮಾವಿನ ಕೆರೆ ಬಳಿಯ ಖಾಸ ಬಾವಿ ಬಳಿ ಗಣೇಶ ಮೂರ್ತಿಗಳು ಸಾಲುಗಟ್ಟಿ ನಿಂತಿವೆ.                                       ನಿನ್ನೆ ತಡರಾತ್ರಿ 1 ಗಂಟೆ ನಂತರ ಗಣೇಶ ಮೂರ್ತಿಗಳು ವಿಸರ್ಜನೆಗೆ ಒಂದೊಂದಾಗಿ ಬಂದವು ನಸುಕಿನ ಜಾವ ಬೆರಳೆಣಿಕೆಯ ಗಣೇಶ ಮೂರ್ತಿಗಳು ವಿಸರ್ಜನೆಗೊಂಡವು ಬಹುತೇಕ ಗಣೇಶ ಮೂರ್ತಿಗಳ ವಿಸರ್ಜನೆ ಬಾಕಿಯಿದ್ದು ಕಿವಿಗಡಚಿಕ್ಕುವ ಡಿಜೆ ಸಂಗೀತದ ಮಧ್ಯೆ ವಿಸರ್ಜನ ಮೆರವಣಿಗೆ ಸಾಗಿದ್ದು ಖಾಸ್ ಬಾವಿ ಬಳಿ ಗಣೇಶ ಮೂರ್ತಿಗಳ ವಿಸರ್ಜನೆ ವೀಕ್ಷಿಸಲು ಜನ ಜಂಗುಳಿ ನೆರೆದಿದೆ ಬೃಹತ್ ಕ್ರೇನ್ ಗಳ ಸಹಾಯದಿಂದ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗುತ್ತಿದೆ. ಬಾವಿ ಸುತ್ತ ಪೊಲೀಸರು ಬಂದೋ ಬಸ್ತ್ ಕೈಗೊಂಡಿದ್ದಾರೆ .

ಸಾರ್ವಜನಿಕ ಗಣೇಶೋತ್ಸವ ವಿಸರ್ಜನೆ: ಪ್ರತಿಷ್ಠಾಪಿತ ಸ್ಥಳದಿಂದ ಒಂದೊಂದೆ ಗಣೇಶ ಆಗಮನ.

Image
  ಸಾರ್ವಜನಿಕ ಗಣೇಶೋತ್ಸವ ವಿಸರ್ಜನೆ: ಪ್ರತಿಷ್ಠಾಪಿತ ಸ್ಥಳದಿಂದ ಒಂದೊಂದೆ ಗಣೇಶ ಆಗಮನ                  ರಾಯಚೂರು,ಸೆ.27- ನಗರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಸಾರ್ವಜನಿಕ ಗಣೇಶೋತ್ಸವ ಒಂಬತ್ತನೆ ದಿನದ ವಿಸರ್ಜನಾ ಮೆರವಣಿಗೆಗೆ ಕ್ಷಣಗಣನೆ ಪ್ರಾರಂಭವಾಗಿದೆ.                     ನಗರದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಗಣೇಶ ಮೂರ್ತಿಗಳು ಪ್ರತಿಷ್ಠಾಪಿಸಿದ್ದ ಸ್ಥಳದಿಂದ ಒಂದೊಂದಾಗಿ ಆಗಮಿಸುತ್ತಿದ್ದು ವಿ‌ಸರ್ಜನಾ ಮೆರವಣಿಗೆಗೆ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ ತೀನ್ ಕಂದೀಲ್ , ಮೌಳೇಶ್ವರ ವೃತ್ತದಲ್ಲಿ ಗಜಾನನ ಸಮೀತಿಗಳಿಂದ ಗಣೇಶ ಮಂಡಳಿಗಳಿಗೆ ಗೌರವ ಸಮರ್ಪಣೆ ನಡೆಯಲಿದೆ. ತೀನ್ ಕಂದೀಲ್ ಬಳಿ ಮಾಜಿ ಶಾಸಕ ಸೈಯದ್ ಯಾಸಿನ್ ಆಗಮಿಸಿ ಗಣೇಶ ವಿಸರ್ಜನಾ ಮೆರವಣಿಗೆಗೆ ಸಾಕ್ಷಿಯಾದರು.                        ಡಿಜೆ ಸಂಗೀತದಲ್ಲಿ ಕಣ್ಣು ಕೋರೈಸುವ ವಿದ್ಯುತ್ ಬೆಳಕಿನಲ್ಲಿ ಯುವಕರು ಹೆಜ್ಜೆ ಹಾಕಿದರು ವಿಸರ್ಜನಾ ಮೆರವಣಿಗೆ ಪ್ರಮುಖ ರಸ್ತೆಗಳ ಮುಖಾಂತರ ಸಾಗಿ ಮಾವಿನ ಕೆರೆ ಬಳಿ ಖಾಸಬಾವಿಯಲ್ಲಿ ಬೆಳಿಗ್ಗೆ ಗಣೇಶ ಮೂರ್ತಿಗಳು ವಿಸರ್ಜನೆಗೊಳ್ಳಲಿವೆ.                            ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋ ಬಸ್ತ್ ಕಲ್ಪಿಸಲಾಗಿದೆ .

ದಾಸ ಸಾಹಿತ್ಯವನ್ನು ಪ್ರಸನ್ನಗೊಳಿಸಿದ ದಾಸ ಶ್ರೇಷ್ಠ ಶ್ರೀ ಪ್ರಸನ್ನ ವೆಂಕಟದಾಸರು- ಮುರಳಿಧರ ಕುಲಕರ್ಣಿ

Image
ದಾಸ ಸಾಹಿತ್ಯವನ್ನು ಪ್ರಸನ್ನಗೊಳಿಸಿದ ದಾಸ ಶ್ರೇಷ್ಠ ಶ್ರೀ ಪ್ರಸನ್ನ ವೆಂಕಟದಾಸರು- ಮುರಳಿಧರ ಕುಲಕರ್ಣಿ   ರಾಯಚೂರು,ಸೆ.27-ಹರಿದಾಸ ಪರಂಪರೆಯಲ್ಲಿ ವಿಜಯದಾಸರು ಗೋಪಾಲ ದಾಸರು, ಹಳೆವನ ಕಟ್ಟಿ ಗಿರಿಯಮ್ಮ, ಶ್ರೀ ಜಗನ್ನಾಥದಾಸರ ಸಮಕಾಲಿನ ಹರಿದಾಸರಾಗಿರುವ ಶ್ರೀ ಪ್ರಸನ್ನ ವೆಂಕಟದಾಸರು  ದಾಸ ಸಾಹಿತ್ಯವನ್ನು ಹರಿನಾಮ ಸಂಕೀರ್ತನೆಗಳ ಮುಖಾಂತರಪ್ರಸನ್ನ ಗೊಳಿಸಿದ ಹರಿದಾಸ ಶ್ರೇಷ್ಠರು ಎಂದು ಶ್ರುತಿ ಸಾಹಿತ್ಯ ಮೇಳದ ಅದ್ಯಕ್ಷ ಮುರಳಿಧರ ಕುಲಕರ್ಣಿ ಅವರು ಹೇಳಿದರು.  ಅವರು ಇಂದು ಸಂಜೆ ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಶ್ರೀ ಪ್ರಸನ್ನ ವೆಂಕಟದಾಸರ ಆರಾಧನೆಯ ಪ್ರಯುಕ್ತ ಹಮ್ಮಿಕೊಂಡ ಜ್ಞಾನ  ಯಜ್ಞ ಕಾರ್ಯಕ್ರಮದಲ್ಲಿ  ಮಾತನಾಡಿದರು. ಅವರು ಮುಂದುವರೆದು ಮಾತನಾಡುತ್ತಾ , ಶ್ರೀಪ್ರಸನ್ನ ವೆಂಕಟ ದಾಸರ ಜೀವನ ಚರಿತ್ರೆಯು ಅತಿ ವಿಸ್ಮಯದಿಂದ ಕೂಡಿದೆ. ಹೇಗೆಂದರೆ ಸಣ್ಣ ವಯಸ್ಸಿನಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡು ಅಣ್ಣನ ಮನೆಯಲ್ಲಿ ಆಶ್ರಯ ವಿದ್ದಾಗ ಅಣ್ಣನ ಹೆಂಡತಿ ಅತ್ತಿಗೆಯು ಅವಮಾನಕರ ರೀತಿಯಾಗಿ ಇವರನ್ನು ನಡೆಸಿಕೊಳ್ಳುತ್ತಿದ್ದಳು, ಹಗಲು ರಾತ್ರಿ ಎನ್ನದೆ ದುಡಿಸಿಕೊಂಡು ಸರಿಯಾಗಿ ಊಟವನ್ನು ಸಹ ಕೊಡುತ್ತಿರಲಿಲ್ಲ. ಒಂದು ದಿನ ದನಗಳನ್ನು ಕಾಯಿಸಿಕೊಂಡು ಉರಿಬಿಸಿಲಿನಲ್ಲಿ ಮನೆಗೆ ಬಂದಾಗ ಮಜ್ಜಿಗೆ ಕಡಿಯುತ್ತಿದ್ದ ಅತ್ತಿಗೆ ಯನ್ನುನೋಡಿ ಸ್ವಲ್ಪ ಮಜ್ಜಿಗೆಯನ್ನು ಕೊಡಿ ಎಂದು ಅಂಗಲಾಚಿದಾಗ ಅತ್ತಿಗೆಯ ಚುಚ್ಚು ಮಾತುಗಳನ್ನು ಆಡಿ ಅವಮಾನಗೊಳಿಸ

ನಾಳೆ ನಗರದಲ್ಲಿ ಮಾದಿಗ ದಂಡೋರಾ ರಾಜ್ಯ ಕಾರ್ಯಕಾರಣಿ ಸಭೆ: ಒಳ ಮೀಸಲಾತಿ ವರ್ಗಿಕರಣ ಜಾರಿ ಮಾಡಲೇಬೇಕು- ನರಸಪ್ಪ.

Image
ನಾಳೆ ನಗರದಲ್ಲಿ ಮಾದಿಗ ದಂಡೋರಾ ರಾಜ್ಯ ಕಾರ್ಯಕಾರಣಿ ಸಭೆ:                                                  ಒಳ ಮೀಸಲಾತಿ ವರ್ಗಿಕರಣ ಜಾರಿ ಮಾಡಲೇಬೇಕು- ನರಸಪ್ಪ.                        ರಾಯಚೂರು,ಸೆ.27- ಮಾದಿಗ ದಂಡೋರಾ ರಾಜ್ಯ ಸಮಿತಿ ಕಾರ್ಯಕಾರಿಣಿ ಸಭೆ ನಾಳೆ ನಗರದಲ್ಲಿ ನಡೆಯಲಿದೆ ಎಂದು ಮಾದಿಗ ದಂಡೋರಾ ರಾಜ್ಯಾಧ್ಯಕ್ಷ ಬಿ.ನರಸಪ್ಪ ಹೇಳಿದರು.                                          ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ 11ಗಂಟೆಗೆ ಸ್ಟೇಷನ್ ರಸ್ತೆಯ ಸಂತೋಷಿ ಸರೋವರ್ ಸಭಾಂಗಣದಲ್ಲಿ ನಮ್ಮ ರಾಷ್ಟ್ರೀಯ ನಾಯಕರಾದ ಮಂದಕೃಷ್ಣ ಮಾದಿಗ ಉಪಸ್ಥಿತಿಯಲ್ಲಿ ಸಭೆ ನಡೆಯಲಿದ್ದು ಸಭೆಯಲ್ಲಿ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ,ಜಿಲ್ಲಾಧ್ಯಕ್ಷ ಮಾನಪ್ಪ ಮೇಸ್ತ್ರೀ ಸೇರಿದಂತೆ ವಿವಿಧ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಆಗಮಿಸಲಿದ್ದಾರೆಂದು.                                    ಈ ಹಿಂದಿನ ರಾಜ್ಯ  ಬಿಜೆಪಿ ಸರ್ಕಾರ ಒಳ ಮೀಸಲಾತಿ ವರ್ಗಿಕರಣ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸಿದ್ದೇವೆ ಆದರೆ ಕೇಂದ್ರ ಸರ್ಕಾರ ಒಳ ಮೀಸಲಾತಿ ವರ್ಗಿಕರಣ ಜಾರಿ ಮಾಡದೆ ಮೀನಾಮೇಷ ಮಾಡುತ್ತಿದೆ ಲೋಕಸಭಾ ಅಧಿವೇಶನದಲ್ಲಿ ಜಾರಿ ಮಾಡಬೇಕಿತ್ತು ಮಾಡಿಲ್ಲ ಮುಂಬರುವ ಅಧಿವೇಶನದಲ್ಲಿ ಮಾಡಬೇಕು ಕೇವಲ ಭರವಸೆ ನೀಡಿದರೆ ನಮ್ಮ ಸಮುದಾಯದ ಮತದಾರರು ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರ

ಸರ್ಕಾರದಿಂದ ಹೊಸ ಮದ್ಯದಂಗಡಿ ಪರವಾನಿಗೆ ವಿರೋಧಿಸಿ ಗಾಂಧಿ ಜಯಂತಿಯಂದು ಜನಪ್ರತಿನಿಧಿಗಳಿಗೆ ಪ್ರತಿಮೆ ಬಳಿ ನಿರ್ಬಂಧ- ಮೋಕ್ಷಮ್ಮ.

Image
  ಸರ್ಕಾರದಿಂದ ಹೊಸ ಮದ್ಯದಂಗಡಿ ಪರವಾನಿಗೆ  ವಿರೋಧಿಸಿ            ಗಾಂಧಿ ಜಯಂತಿಯಂದು ಜನಪ್ರತಿನಿಧಿಗಳಿಗೆ ಪ್ರತಿಮೆ ಬಳಿ ನಿರ್ಬಂಧ- ಮೋಕ್ಷಮ್ಮ.                  ರಾಯಚೂರು,ಸೆ.27- ಕಾಂಗ್ರೆಸ್ ಸರ್ಕಾರ ಹೊಸ ಮಧ್ಯದಂಗಡಿಗಳಾಗೆ ಪರವಾನಿಗೆ ನೀಡುತ್ತಿರುವುದನ್ನು ವಿರೋಧಿಸಿ ಗಾಂಧಿ ಜಯಂತಿಯಂದು ಆಡಳಿತ ಪಕ್ಷದ ಜನಪ್ರತಿನಿಧಿಗಳು ಗಾಂಧಿ ಪ್ರತಿಮೆ ಬಳಿ ಬರದಂತೆ ನಿರ್ಬಂಧಿಸುತ್ತೇವೆಂದು ಮದ್ಯ ನಿಷೇಧ ಆಂದೋಲನದ ಸಂಚಾಲಕಿ ಮೋಕ್ಷಮ್ಮ ಹೇಳಿದರು.                                          ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ  ರಾಜ್ಯ ಸರ್ಕಾರ ಐದು ಗ್ಯಾರಂಟಿ ನೀಡಿ ಜನಪರವಾದ ಆಡಳಿತ ನೀಡುತ್ತಿದೆ ಎಂದು ನಿರೀಕ್ಷಿಸಿದ್ದೆವು ಆದರೆ ಸರ್ಕಾರ ರಾಜ್ಯದಲ್ಲಿ ಕುಡುಕರ ಹಾವಳಿ ಹೆಚ್ಚಿಸಲು ಹೊರಟಿದೆ ಅಬಕಾರಿ ಸಚಿವರು ಹೊಸದಾಗಿ ಸಾವಿರ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುತ್ತೇವೆಂದಿ ದ್ದಾರೆ ಇದು ಅಕ್ಷಮ್ಯ ಮಹಿಳೆಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಕುಡುಕ ಗಂಡಂದಿರಿಂದ ನಿತ್ಯ ನರಕ ಅನುಭವಿಸುತ್ತಿದ್ದಾರೆ ಎಂದರು.                                               ಹಳ್ಳಿಗಳಲ್ಲಿ ಗೂಡಂಗಡಿಗಳಲ್ಲಿ ಮಧ್ಯೆ ಸಿಗುತ್ತಿದೆ ಅಕ್ರಮ ಮದ್ಯ ಮಾರಾಟ ನಿರಾತಂಕವಾಗಿ ಸಾಗಿದೆ ಈ ಹಿನ್ನೆಲೆಯಲ್ಲಿ ಅ.1 ಮಧ್ಯಾಹ್ನ ದಿಂದ ಆಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ವಿದ್ಯಾ ಪಾಟೀಲ್, ಡಾ. ಶಾರದಾ ಹುಲಿ ನಾಯಕ, ಎಂ.ಆರ್.ಭೇರ

ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಪೌರಕಾರ್ಮಿಕರ ದಿನಾಚರಣೆ ಆಚರಣೆ: ಮಕ್ಕಳಿಗೆ ಶಿಕ್ಷಣದ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿ- ಶಾಸಕ ಡಾ.ಶಿವರಾಜ ಪಾಟೀಲ್

Image
ಜಿಲ್ಲಾಡಳಿತ ಹಾಗೂ   ನಗರಸಭೆಯಿಂದ  ಪೌರಕಾರ್ಮಿಕರ ದಿನಾಚರಣೆ ಆಚರಣೆ: ಮಕ್ಕಳಿಗೆ ಶಿಕ್ಷಣದ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿ-  ಶಾಸಕ ಡಾ.ಶಿವರಾಜ ಪಾಟೀಲ್ ರಾಯಚೂರು.ಸೆ.26- ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಲು ಹೆಚ್ಚಿನ ಶ್ರಮ ವಹಿಸಬೇಕೆಂದು ನಗರ ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಅವರು ಹೇಳಿದರು.  ಅವರಿಂದು ನಗರದ ಅತ್ತನೂರು ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.  ಪೌರಕಾರ್ಮಿಕರು ತಮ್ಮ ಸ್ವಚ್ಛತಾ ಕೆಲಸವನ್ನು ತಮ್ಮ ಮಕ್ಕಳಿಗೆ ವಿಸ್ತರಿಸದೇ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಉನ್ನತ ಸ್ಥಾನಕ್ಕೇರಿಸಬೇಕು. ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ನೀಡುವುದಕ್ಕಾಗಿ ಪ್ರತಿಯೊಬ್ಬ ಪೌರಕಾರ್ಮಿಕರೂ ಶಪತ ಮಾಡಬೇಕು ಎಂದು ತಿಳಿಸಿದರು.  ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿರುವ ಪೌರಕಾರ್ಮಿಕರಿಗೆ ಸರ್ಕಾರದಿಂದ ಸೌಲಭ್ಯಗಳನ್ನು ನೀಡಿದಾಗ ಮಾತ್ರ ಸರ್ಕಾರ ತಮ್ಮ ಜವಾಬ್ದಾರಿಯನ್ನು ಪೂರ್ಣವಾಗಿ ನಿಭಾಯಿಸಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ನಗರದ ಸ್ವಚ್ಛತೆ ಮಾಡುವ ಪೌರಕಾಮಿಕರಿಗೆ ವಸತಿ ಸೌಲಭ್ಯವನ್ನೂ ಕಲ್ಪಿಸಲಾಗುವುದು ಮತ್ತು ಅವರ ಮಕ್ಕಳಿಗೆ ಶಿಕ್ಷಣ ಹಾಗೂ ಕುಟುಂಬಕ್ಕೆ ಆರೋಗ್ಯ ಸೌಲಭ್ಯಗಳನ್ನು ನೀಡುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು

ವಾಸವಿ ಪತ್ತಿನ ಸಹಕಾರ ಸಂಘ:23ನೇ ವಾರ್ಷಿಕ ಮಹಾಸಭೆ

Image
ವಾಸವಿ ಪತ್ತಿನ ಸಹಕಾರ ಸಂಘ: 23ನೇ ವಾರ್ಷಿಕ ಮಹಾಸಭೆ    ರಾಯಚೂರು,ಸೆ.25- ವಾಸವಿ ಪತ್ತಿನ ಸಹಕಾರ ಸಂಘದ 23ನೇ ವಾರ್ಷಿಕ ಮಹಾಸಭೆಯು ದಿನಾಂಕ  ರವಿವಾರ ದಂದು ಮಾ ಆಶಪುರ ಕನ್ವೆನ್ಷನ್ ಹಾಲ್ ಇದರ ಸಭಾಂಗಣದಲ್ಲಿ ಸಭೆಯು ನಡೆಯಿತು. ಸಭೆಯು ನಿರ್ದೇಶಕ ಮಂಡಳಿಯಿಂದ ದೀಪ ಬೆಳಗುವುದರ ಮೂಲಕ ಅರಂಭಗೊಂಡಿತು.  ಸಂಘವು ಸನ್ 2022-23 ನೇ ಸಾಲಿಗೆ ₹ 7.22 ಕೋಟಿ ಠೇವಣಿ ಹೊಂದಿದ್ದು ₹ 7.67 ಕೋಟಿ ತನ್ನ ಸದಸ್ಯರಿಗೆ ಸಾಲವನ್ನು ನೀಡಿದೆ. ₹9.74 ಕೋಟಿ ದುಡಿಯುವ ಬಂಡವಾಳ ಹೊಂದಿರುತ್ತದೆ. ₹47.09 ಲಕ್ಷ ನಿವ್ವಳ ಲಾಭವನ್ನು ಮಾಡಿದ್ದು, ತನ್ನ ಸದಸ್ಯರಿಗೆ ಶೇಕಡಾ 18 ರಷ್ಟು ಲಾಭಾoಶ ಘೋಷಿಸಿದರು. ಅಲ್ಲದೆ ಸಂಘವು ಜಾಗವನ್ನು ಖರೀದಿಸಿದ್ದು ಇದೇ ವರ್ಷದಲ್ಲಿ ಸ್ವಂತ ಹಾಗೂ ಸುಸಜ್ಜಿತ ಕಟ್ಟಡವನ್ನು ಹೊಂದುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಸದಸ್ಯರು ಚಪ್ಪಾಳೆಯೊಂದಿಗೆ ಅನುಮೋದಿಸಿದರು. ಸಂಘದ ಅಧ್ಯಕ್ಷರಾದ ಕೆ. ವಿ. ಮನೋಹರ ಇವರು 22-23 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಸಹಕಾರ ಶಿಕ್ಷಣ ನಿಧಿ ಚೆಕ್ ನ್ನು ಸಹಕಾರ ಒಕ್ಕೂಟದ ಭೋದಕರಾದ ಶ್ರೀಮತಿ ಮಂಜುಳಾ ರವರಿಗೆ ನೀಡಿದರು.ಸಭೆಯಲ್ಲಿ ಉಪಾಧ್ಯಕ್ಷರಾದ ನೆಲ್ಲೂರು ಶ್ರೀನಿವಾಸ, ನಿರ್ದೇಶಕರುಗಳಾದ ಶೆಟ್ಟಿ ನಾಗರಾಜ, ಪಿ ಗುಂಡಯ್ಯ, ದೇವನಪಲ್ಲಿ ಶ್ರೀನಿವಾಸ, ಜಿ, ಆರ್, ಬಸಣ್ಣ, ತನ್ ಶೇಖರನ್, ಸುಭಾಷಬಾಬು ಸುಬೇದಾರ, ಶ್ರೀಮತಿ ವೀರಂ ಗೀತಾ, ಶ್ರೀಮತಿ ಎಮ್, ಆರ್. ಅಂಜಲಿ ಹಾಗೂ ಶ್ರೀಮತಿ ಎಮ್. ಸರೋಜ

ಯರಮರಸ್‌ನಲ್ಲಿ ಶೀಘ್ರ ಹೊಸ ರೈಲ್ವೆ ಗೂಡ್ಸ್‌ ಶೆಡ್‌ ನಿರ್ಮಾಣ – ಬಾಬುರಾವ್

Image
  ಯರಮರಸ್‌ನಲ್ಲಿ ಶೀಘ್ರ ಹೊಸ ರೈಲ್ವೆ ಗೂಡ್ಸ್‌ ಶೆಡ್‌ ನಿರ್ಮಾಣ – ಬಾಬುರಾವ್ ರಾಯಚೂರು,ಸೆ.25- ನಗರದ ಹೃದಯಭಾಗದಲ್ಲಿರುವ ಕೇಂದ್ರ ರೈಲ್ವೆ ನಿಲ್ದಾಣದ ಸುಮಾರು ನೂರು ವರ್ಷಗಳ ಬ್ರಿಟಿಷ್‌ ಕಾಲದ ರೈಲ್ವೆ ಗೂಡ್ಸ್‌ ಶೆಡ್‌ ನಿಂದ ರಾಯಚೂರು ನಗರದ ಮಧ್ಯದ ಸ್ಟೇಷನ್‌ ರಸ್ತೆ ಮೂಲಕ ಓಡಾಡುತ್ತಿರುವ ಸರಕು ಸಾಗಣೆ ವಾಹನಗಳ ಸಂಚಾರ ದಟ್ಟಣೆಯಿಂದಾಗಿ ಸಾರ್ವಜನಿಕರಿಗೆ ಅತೀವ ತೊಂದರೆ ಹಾಗೂ  ಹಲವಾರು ಪ್ರಾಣಗಳು (ಕಳೆದ ವರ್ಷದ ಪೊಲೀಸ್‌ ಇಲಾಖೆ ಮಾಹಿತಿಯಂತೆ ಇಲ್ಲಿಯವರೆಗೆ ಸುಮಾರು ೧೪ಜನ) ಬಲಿಯಾಗಿರುವ ವಿಷಯವನ್ನು ತೀವ್ರವಾಗಿ ಗಮನಕ್ಕೆ ತೆಗೆದುಕೊಂಡು  ರಾಜಾ ಅಮರೇಶ್ವರ ನಾಯಕ, ಮಾನ್ಯ ಲೋಕಸಭಾ ಸದಸ್ಯರು ರಾಯಚೂರು ಇವರು ಕಳೆದ ವರ್ಷದಿಂದ ಸದರಿ ಗೂಡ್ಸ್‌ ಶೆಡ್‌ನ್ನು ಯರಮರಸ್‌ಗೆ ಸ್ಥಳಾಂತರಿಸಿ ಅಪಘಾತಗಳಿಂದ ಪಾರು ಮಾಡುವ ಬಗ್ಗೆ ಪ್ರಸ್ತಾವನೆಯ ಕುರಿತು  ಕೇಂದ್ರ ರೈಲ್ವೆ ಸಚಿವರಿಗೆ ಹಾಗೂ ಜನರಲ್‌ ಮ್ಯಾನೇಜರ್‌, ಸೌತ್‌ ಸೆಂಟ್ರಲ್‌ ರೈಲ್ವೆ, ಸಿಕಿಂದ್ರಾಬಾದ್‌ ಇವರಿಗೆ ಪತ್ರ ಬರೆಯಲಾಗಿತ್ತು.   ಅದರಂತೆ ರೈಲ್ವೆ ಬೋರ್ಡ್‌ ಸದಸ್ಯರಾದ  ಬಾಬುರಾವ್‌ರವರು ಸಹ ಕಳೆದ ವರ್ಷ ಸಿಕಿಂದ್ರಾಬಾದ್‌ನಲ್ಲಿ ನಡೆದ  ಸಭೆಯಲ್ಲಿ ರಾಯಚೂರು ರೈಲ್ವೆ ನಿಲ್ದಾಣವು ಅತ್ಯಂತ ಹಳೆಯ ನಿಲ್ದಾಣವಾಗಿದ್ದು, ಚೆನ್ನೈನಿಂದ-ಮುಂಬಯಿ ರೈಲು ಮಾರ್ಗದಲ್ಲಿ ಅತಿ ಹೆಚ್ಚು ಪ್ರಯಾಣಿಕರು ರಾಯಚೂರು  ಮೂಲಕ ದೇಶದ ಅನೇಕ ನಗರಗಳಿಗೆ ಪ್ರವಾಸ ಹಾಗೂ ವ್ಯವಹಾರಕ್ಕಾಗಿ ಸಂಚರಿಸುತ್ತಾರೆ ಹಾಗೂ ಏಷ್ಯಾದ

ಜಿಲ್ಲಾ ಕ್ರೀಡಾಂಗಣದಲ್ಲಿ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟನೆ: ಸಮಸ್ಯೆ ಪರಿಹರಿಸಲು ಜನರ ಬಳಿಗೆ ಸರ್ಕಾರವೆ ಆಗಮಿಸಿದೆ- ಡಾ.ಶರಣ ಪ್ರಕಾಶ್ ಪಾಟೀಲ್.

Image
  ಜಿಲ್ಲಾ ಕ್ರೀಡಾಂಗಣದಲ್ಲಿ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟನೆ:  ಸಮಸ್ಯೆ ಪರಿಹರಿಸಲು ಜನರ ಬಳಿಗೆ ಸರ್ಕಾರವೆ ಆಗಮಿಸಿದೆ- ಡಾ.ಶರಣ ಪ್ರಕಾಶ್ ಪಾಟೀಲ್.                                                                 ರಾಯಚೂರು,ಸೆ.25- ನಿಮ್ಮ ಸಮಸ್ಯೆ ಪರಿಹರಿಸಲು ಜನತಾ ದರ್ಶನ ಮೂಲಕ ಸರ್ಕಾರವೆ ಜನರ ಬಳಿಗೆ ಆಗಮಿಸಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದರು. ಅವರಿಂದು ನಗರದ ಮಹಾತ್ಮ ಗಾಂಧಿಜೀ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.                     ಜನರು ತಮ್ಮ ಅಹವಾಲು ಸಲ್ಲಿಸಲು ಸರ್ಕಾರಿ ಕಛೇರಿಗೆ ಅಲಿಯುವುದನ್ನು ತಪ್ಪಿಸಲು ಹಾಗೂ ಅವರ ಸಮಸ್ಯೆಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ  ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದ್ದು ಜನರು ಇದರ ಸದುಪಯೋಗ ಪಡೆಯಬೇಕೆಂದ ಅವರು ವೈಯಕ್ತಿಕ ಸಮಸ್ಯೆ ಮತ್ತು ಸಂಘ ಸಂಸ್ಥೆಗಳು ನೀಡುವ ಅರ್ಜಿಗಳನ್ನು ಪ್ರತ್ಯೇಕವಾಗಿ ಸಲ್ಲಿಸಲು ಕೋರಿದರು.                                        ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ನಾಲ್ಕು ತಿಂಗಳಾಗುತ್ತಿದ್ದು  ಈಗಾಗಲೆ ಸರ್ಕಾರ ಐದು ಗ್ಯಾರಂಟಿಗಳಲ್ಲಿ ನಾಲ್ಕು ಈಡೇರಿಸಿದ್ದು ಐದನೆ ಗ್ಯಾರಂಟಿಯು ಸಹ ಈಡೇರುತ್ತದೆ ಎಂದರು.                           

ದಲಿತರಿಗೆ ಪ್ರತ್ಯೇಕ ಚುನಾಯಿತ ಹಕ್ಕು ನೀಡದೆ ವಂಚನೆ- ಕೋರೆನಲ್

Image
  ದಲಿತರಿಗೆ ಪ್ರತ್ಯೇಕ ಚುನಾಯಿತ ಹಕ್ಕು ನೀಡದೆ  ವಂಚನೆ- ಕೋರೆನಲ್ ರಾಯಚೂರು,ಸೆ.24- ದಲಿತರಿಗೆ ಪ್ರತ್ಯೇಕ ಚುನಾಯಿತ ಹಕ್ಕಿಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾಡಿದ ಹೋರಾಟಕ್ಕೆ ಪ್ರತಿಫಲ ದೊರಕದಂತೆ, ಮಹಾತ್ಮಗಾಂಧಿ ಅವರು ಪೂನಾದ ಯರವಾಡ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುವ ಮೂಲಕ ದಲಿತರ ಸ್ವಾತಂತ್ರ್ಯ ರಾಜಕೀಯ ಹಕ್ಕನ್ನು ಕಸಿದುಕೊಂಡರು ಎಂದು ದಲಿತ ಸಾಹಿತ್ಯ ಪರಿಷತಿನ ಕೋರೆನಲ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಾಲಯದಲ್ಲಿ ಭಾನುವಾರ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ, 'ಪೂನಾ ಒಪ್ಪಂದ'ದ ಉಪನ್ಯಾಸ ಕಾರ್ಯಕ್ರಮ ಮತ್ತು ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲೂಕು ಘಟಕಗಳ ರಚನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ದೇಶದಲ್ಲಿ ಏಕಸ್ವಾಮ್ಯದ ಪಾರುಪತ್ಯವನ್ನು ಜಾರಿಗೊಳಿಸುವ ಹುನ್ನಾರ ನಡೆದಿದ್ದು, ಇದರಿಂದ ಬಹುಸಂಖ್ಯಾತರ ಅಸ್ಮಿತೆ ಮತ್ತು ಅಸ್ತಿತ್ವವೇ ನಶಿಸಿಹೋಗುತ್ತದೆ. ಭಾರತ ವಿವಿಧತೆಯನ್ನು ಹೊಂದಿದ ದೇಶವಾಗಿದೆ ಅದನ್ನು ಮುಂದಿನ ತಲೆಮಾರುಗಳಿಗೆ ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಭಾರತದಲ್ಲಿ  ವೈಚಾರಿಕ   ಸಂಘರ್ಷ ನಡೆದುಕೊಂಡು ಬರುತ್ತಿದ್ದು, ನಿರ್ದಿಷ್ಟವಾದದಿಂದ ದೇಶದ ಬಹುತ್ವಕ್ಕೆ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸಭೆಯಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರಿಗೂಳಿ ಅವರು ಪ

ನಾಳೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಸರ್ವಜನಿಕರ ಅಹವಾಲು ಸಲ್ಲಿಕೆಗೆ ಜನತಾ ದರ್ಶನ - ಎಡಿಸಿ ಡಾ.ಕೆ.ಆರ್ ದುರುಗೇಶ

Image
  ನಾಳೆ ಜಿಲ್ಲಾ ಉಸ್ತುವಾರಿ ಸಚಿವರಿಂದ  ಸರ್ವಜನಿಕರ ಅಹವಾಲು ಸಲ್ಲಿಕೆಗೆ ಜನತಾ ದರ್ಶನ- ಎಡಿಸಿ ಡಾ.ಕೆ.ಆರ್ ದುರುಗೇಶ ರಾಯಚೂರು,ಸೆ.24- ಸೆ.25ರಂದು ನಡೆಯುವ ಜನತಾ ದರ್ಶನ ಕಾರ್ಯಕ್ರಮವನ್ನು ಯಾವುದೇ ಲೋಪದೋಷಗಳಾಗದಂತೆ ಯಶಸ್ವಿಯಾಗಿ ನಡೆಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ ಅವರು ತಿಳಿಸಿದರು. ಅವರು ಇಂದು ನಗರದ ಮಹತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಜನತಾ ದರ್ಶನ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಹವಾಲು ಸ್ವೀಕರಿಸಲು 20 ವಿವಿಧ ಇಲಾಖೆಯ ಸ್ಟಾಲ್‍ಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಸ್ಟಾಲ್ ಗಳಲ್ಲಿಯೂ  ಡಾಟಾ ಎಂಟ್ರಿ ಆಪರೇಟರ್ ಹಾಗೂ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಡಾಟಾ ಎಂಟ್ರೀ ಆಪರೇಟರ್ ಗಳು ಎರಡು ಅರ್ಜಿಗಳ ಪ್ರತಿಗಳನ್ನು ಸ್ವೀಕರಿಸಿ ಅದರಲ್ಲಿ ಒಂದು ಅರ್ಜಿಯನ್ನು ಸ್ವೀಕೃತಿಯಾಗಿ ಸಾರ್ವಜನಿಕರಿಗೆ ನೀಡುವರು. ಸಾಧ್ಯವಿರುವ ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಗುವುದು ಮತ್ತು ಉಳಿದ ಅರ್ಜಿಗಳನ್ನು ಐಪಿಜಿಆರ್‍ಎಸ್ ಪೋರ್ಟಲ್ ನಲ್ಲಿ ನೊಂದಾಯಿಸಲಾಗುವುದು ಮತ್ತು ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು. ಸಾರ್ವಜನಿಕರ ದೂರುಗಳು, ಅಹವಾಲುಗಳನ್ನು ಸ್ವೀಕರಿಸಲು ಸೆ.25ರಂದು ನಗರದ ಮಹತ್ಮಾಗಾಂಧಿ ಕ್ರೀಡಾಂಗಣದಲ್

ಮಂತ್ರಾಲಯ: ನಟಿ ಹರಿಪ್ರಿಯಾ ಭೇಟಿ.

Image
ಮಂತ್ರಾಲಯ: ನಟಿ ಹರಿಪ್ರಿಯಾ ಭೇಟಿ.                                        ರಾಯಚೂರು,ಸೆ.24- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಹರಿಪ್ರಿಯಾ ಭೇಟಿ ನೀಡಿದರು.                                     ಪತಿಯೊಂದಿಗೆ ಆಗಮಿಸಿದ ಅವರು ರಾಯರ ಬೃಂದಾವನ ದರ್ಶನ ಪಡೆದು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರಿಂದ ಆಶಿರ್ವಾದ ಪಡೆದರು.

ಶೋಷಣೆಗಳ ಆಯಾಮ ಅರಿತು ಹೋರಾಟ ಮಾಡಿ- ಕರಿಗೂಳಿ ಸುಂಕೇಶ್ವರ

Image
  ಶೋಷಣೆಗಳ ಆಯಾಮ ಅರಿತು ಹೋರಾಟ ಮಾಡಿ- ಕರಿಗೂಳಿ ಸುಂಕೇಶ್ವರ ರಾಯಚೂರು,ಸೆ.24- ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಶೋಷಣೆಗಳನ್ನು ತಡೆಗಟ್ಟಬೇಕಾದರೆ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ಅಸ್ತ್ರ ಮತ್ತು ಕ್ರಾಂತಿಕಾರಿ ಚಿಂತನೆಗಳ ಅರಿತುಕೊಂಡು, ಶೋಷಣೆಗಳ ಆಯಾಮಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರಿಗೂಳಿ ಸುಂಕೇಶ್ವರ ಅವರು ಅಭಿಮತ ವ್ಯಕ್ತಪಡಿಸಿದರು. ನಗರದ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಾಲಯದಲ್ಲಿ ಭಾನುವಾರ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ, 'ಪೂನಾ ಒಪ್ಪಂದದ' ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ವಿವಿಧ ತಾಲೂಕು ಘಟಕಗಳ ರಚನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಸ್ತುತ ದಿನಮಾನಗಳಲ್ಲಿ ದಲಿತ ಸಂಘಟನೆಗಳು ಸರಿಯಾದ ಮಾರ್ಗದಲ್ಲಿ ಸಾಗುತ್ತಿಲ್ಲ. ಕೇವಲ ಹುದ್ದೆಗಳ ಆಸೆಗಾಗಿ ಸಂಘಟನೆಗಳನ್ನು ಹುಟ್ಟುಹಾಕುತ್ತಿರುವುದು ಬೇಸರದ ಸಂಗತಿಯಾಗಿದೆ. ಆದರೆ ಎಲ್ಲಾ ದಲಿತ ಸಂಘಟನೆಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವ ಪ್ರಯತ್ನ ಮಾಡದೆ ಹೋದರೆ, ಮುಂದಿನ ದಿನಗಳಲ್ಲಿ ದಲಿತರ ಅಸ್ಮಿತೆಗೆ ಧಕ್ಕೆ ಬರುವಂತಹ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ತಾಯರಾಜ್ ಮರ್ಚೆಟ್ಹಾಳ್, ಕೋರೆನಲ್, ಡಾ.ಹುಸೇನ

ವೀರ್ ಸಾವರ್ಕರ್ ಗಣೇಶ ಭವ್ಯ ಮೆರವಣಿಗೆ: ಕಣ್ಣು ಕೋರೈಸುವ ಕಿವಿಗಡಚಿಕ್ಕುವ ಸಂಗೀತ, ಕುಣಿತದಲ್ಲಿ ಮೈಮರೆತ ಯುವಕರು.

Image
  ವೀರ್ ಸಾವರ್ಕರ್ ಗಣೇಶ ಭವ್ಯ ಮೆರವಣಿಗೆ:                              ಕಣ್ಣು ಕೋರೈಸುವ ಕಿವಿಗಡಚಿಕ್ಕುವ ಸಂಗೀತ, ಕುಣಿತದಲ್ಲಿ ಮೈಮರೆತ ಯುವಕರು.                              ರಾಯಚೂರು,ಸೆ.23- ವೀರ್ ಸಾವರ್ಕರ್ ಗಣೇಶ ವಿಸರ್ಜನೆ ಜಿಲ್ಲೆಯಲ್ಲಿಯೆ ಭವ್ಯತೆಗೆ ನಾಂದಿ ಹಾಡುತ್ತಿದೆ.                                                     ಈ ವರ್ಷವು 17 ನೇ ವರ್ಷದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕಣ್ಣು ಕೋರೈಸುವ ದೀಪ, ಕಿವಿಗಡಚಿಕ್ಕುವ ಸಂಗೀತದಲ್ಲಿ ಯುವಕರು ಕುಣಿದು ಕುಪ್ಪಳಿಸಿದರು.           ಸಹಸ್ರಾರು ಯುವಕರು ಮೆರವಣಿಗೆ ವೀಕ್ಷಿಸಲು ತಂಡೋಪ ತಂಡವಾಗಿ ಆಗಮಿಸಿದ್ದರು. ಮಹಿಳೆಯರು, ಮಕ್ಕಳು ಸಹ ಮೆರವಣಿಗೆಗೆ ಸಾಕ್ಷಿಯಾದರು.                         ದಶ ದಿಕ್ಕುಗಳಿಗೆ ಹರಡುತ್ತಿದ ಕಣ್ಣು ಕೋರೈಸುವ ಬೆಳಕು, ಸಂಚಲನ ಮೂಡಿಸುವ ಸಂಗೀತದಲ್ಲಿ ಯುವಕರು ಮೈರೆತರು.                             ನಗರದ ಪ್ರಮುಖ ರಸ್ತೆಗಳ ಮೂಲಕ ಹಾದು ಹೋಗುವ   ಮೆರವಣಿಗೆ ಮಾವಿನ ಕೆರೆ ಬಳಿಯ ಖಾಸ ಬಾವಿಯಲ್ಲಿ ವಿಸರ್ಜನೆಯಾಗುತ್ತದೆ. ಭಾರಿ ಪೊಲೀ‌ಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಲೋಕಸಭಾ ಚುನಾವಣೆ ವೇಳೆಗೆ ಗ್ಯಾರಂಟಿಗಳ ವಾರಂಟಿ ಮುಗಿಯುತ್ತದೆ- ಯತ್ನಾಳ್.

Image
  ಲೋಕಸಭಾ ಚುನಾವಣೆ ವೇಳೆಗೆ ಗ್ಯಾರಂಟಿಗಳ ವಾರಂಟಿ ಮುಗಿಯುತ್ತದೆ- ಯತ್ನಾಳ್.                      ರಾಯಚೂರು,ಸೆ.23- ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳ ವಾರಂಟಿ ಮುಗಿಯುತ್ತದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದರು.               ಅವರಿಂದು ನಗರದ ವೀರ ಸಾವರ್ಕರ್ ಯೂಥ್ ಅಸೋಸಿಯೇಷನ್ ವತಿಯಿಂದ ಪ್ರತಿಷ್ಟಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೀಡಿದರು.             ಕಾಂಗ್ರೆಸ್ ಪಕ್ಷ ಹುಸಿ ಭರವಸೆಗಳಾದ ಐದು ಗ್ಯಾರಂಟಿಗಳಿಂದ ಗೆದ್ದಿದೆ ಮುಂಬರುವ ಲೋಕಸಭಾ ಚುನಾವಣೆಗೆ ಅವುಗಳ ವಾರಂಟಿ ಅವಧಿ ಮುಗಿಯುತ್ತದೆ ಎಂದು ವ್ಯಂಗ್ಯವಾಡಿದರು. ಅಪ್ರತಿಮ ದೇಶ ಭಕ್ತರಾದ ವೀರ ಸಾವರ್ಕರ್ ಹೆಸರಿನ ಯುವಕ ಮಂಡಳಿ ವಿಜೃಂಭಣೆಯಿಂದ 17 ವರ್ಷದಿಂದ ಗಣೇಶ ಕೊಡಿಸುತ್ತಿದೆ ವೀರ ಸಾವರ್ಕರ್ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಜೈಲಿನಲ್ಲಿ ಕಳೆದರು ಕಾಲಾ ಪಾನಿ ಘನಘೋರ ಶಿಕ್ಷೆ ಅನುಭವಿಸಿದರು ಅವರ ಕಾಲಿನ ಧೊಳಿಗೂ ಸಮಾನವಾಗಿದೆ ಕೆಲ ಕಾಂಗ್ರೆಸ್ ವ್ಯಕ್ತಿಗಳು ಅವರು ಬಗ್ಗೆ ಲಘುವಾಗಿ ಮಾತನಾಡುತ್ತಾರೆ ಅದು ಅಕ್ಷಮ್ಯವೆಂದರು.             ದೇಶಕ್ಕೆ ಸ್ವಾತಂತ್ರ್ಯ ದೊರೆತ ಹೊಸದರಲ್ಲಿ ಸುಭಾಶಚಂದ್ರಬೋಸ್, ಸರ್ದಾರ್ ವಲ್ಲಭಭಾಯ್ ಪಟೇಲರು ಈ ದೇಶದ ಪ್ರಧಾನಿಯಾಗಬೇಕಿತ್ತು ಬದಲಾಗಿ ಯಾರೋ ಆದರು ಎಂದು ವಾಗ್ದಾಳಿ ನಡೆಸಿದರು.           ನಮ

ನವ ಬೃಂದಾವನ ಗಡ್ಡೆ: ಉಚ್ಛ ನ್ಯಾಯಾಲಯದಿಂದ ರಾಯರ ಮಠದ ಅರ್ಜಿ ಪುರಸ್ಕೃತ.

Image
  ನವ ಬೃಂದಾವನ ಗಡ್ಡೆ: ಉಚ್ಛ ನ್ಯಾಯಾಲಯದಿಂದ  ರಾಯರ ಮಠದ ಅರ್ಜಿ ಪುರಸ್ಕೃತ.            ರಾಯಚೂರು,ಸೆ.23-  ನವಬೃಂದಾವನ ಗಡ್ಡೆಯಲ್ಲಿ ಶ್ರೀ ಜಯತೀರ್ಥರ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲು ರಾಯರ ಮಠಕ್ಕೆ ಅವಕಾಶವನ್ನು ನೀಡಿ ಉಚ್ಛ ನ್ಯಾಯಾಲಯದ ದ್ವಿ ಸದಸ್ಯ ಪೀಠ ಆದೇಶಿಸಿದೆ.                                                  ಕೆಲ ದಿನಗಳ ಹಿಂದೆ ಉತ್ತರಾದಿ ಮಠ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ್ದ ಉಚ್ಛ ನ್ಯಾಯಾಲಯ ಏಕ ಸದಸ್ಯ ಪೀಠವು ರಾಯರ ಮಠವು ನವ ಬೃಂದಾವನ ಗಡ್ಡೆಯಲ್ಲಿ ಶ್ರೀ ಜಯತೀರ್ಥರ ಪೂಜಾ ವಿಧಿ ವಿಧಾನ ಮುಂತಾದವುಗಳನ್ನು ಮಾಡದಂತೆ ಆದೇಶಿಸಿತ್ತು ತರುವಾಯ ರಾಯರ ಮಠವು ಈ ಆದೇಶ ಪ್ರಶ್ನಿಸಿ ಉಚ್ಛ ನ್ಯಾಯಾಲಯದ ದ್ವಿ ಸದಸ್ಯ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದನ್ನು ಪುರಸ್ಕರಿಸಿ ರಾಯರ ಮಠಕ್ಕೆ ಪೂಜಾ ವಿಧಿ ವಿಧಾನಕ್ಕೆ ಅವಕಾಶ ನೀಡಿದೆ ಎಂದು ಶ್ರೀ ಮಠ ತಿಳಿಸಿದೆ.

ರಾಯಚೂರು ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ ವೇದಿಕೆ ಕಾರ್ಯಕ್ರಮ: ಕನ್ನಡ ಕಾವ್ಯಮೀಮಾಂಸೆ ಅಂದರೆ ಬದುಕನ್ನು ಕಟ್ಟಿಕೊಳ್ಳುವುದು - ಪ್ರೊ.ಬಸವರಾಜ ಕೋಡಗಂಟಿ

Image
  ರಾಯಚೂರು ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ ವೇದಿಕೆ ಕಾರ್ಯಕ್ರಮ: ಕನ್ನಡ ಕಾವ್ಯ ಮೀಮಾಂಸೆ ಅಂದರೆ ಬದುಕನ್ನು ಕಟ್ಟಿಕೊಳ್ಳುವುದು - ಪ್ರೊ.ಬಸವರಾಜ ಕೋಡಗಂಟಿ  ರಾಯಚೂರು,ಸೆ.23-ಯಾವುದೇ ಒಂದು ವಿಷಯಕ್ಕೆ ಸಂಬoಧಿಸಿದ ಕಾವ್ಯಗಳು ತುಂಬಾ ಆಳವಾದ ರೀತಿಯಲ್ಲಿ ಬೆಳೆದಿರುವಂತ ಸಿದ್ಧಾಂತಗಳು ಅದರ ಹಗುರವಾದ ಕಾರಣಗಳನ್ನು ಇಟ್ಟುಕೊಂಡಿರುವುದಿಲ್ಲ  ಎಂದು ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಪ್ರೊ.ಬಸವರಾಜ ಕೋಡಗಂಟಿ ಅವರು ಕನ್ನಡ ಕಾವ್ಯಮೀಮಾಂಸೆಗೆ ಪ್ರೊ.ಕೆ.ಕೃಷ್ಣಮೂರ್ತಿಯವರ ಕೊಡುಗೆ ಕುರಿತು ಉಪನ್ಯಾಸ ನೀಡಿದರು.                                   ಪ್ರತಿ ಭಾಷೆಗೂ ಅದರದೇ ಆದ ಸಾಮಾಜಿಕ, ಮಾನಸಿಕ ರಚನೆ ಇರುವುದರಿಂದ ಅವರವರು ಆಡುವ ಭಾಷೆಯ ಭಾಷಿಕ ರಚನೆಯಾಗಿರುತ್ತದೆ. ಕನ್ನಡ ಕಾವ್ಯಮೀಮಾಂಸೆ ಅಂದರೆ ಬದುಕನ್ನು ಕಟ್ಟಿಕೊಳ್ಳುವುದು, ನಮ್ಮನ್ನು ಅರ್ಥಮಾಡಿಕೋಳ್ಳಲು ಕಾವ್ಯಮೀಮಾಂಸೆ ಓದಬೇಕು  ಎಂದರು. ಸಾಹಿತ್ಯ ಅಕಾದೆಮಿ ಹಾಗೂ ರಾಯಚೂರು ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಸಾಹಿತ್ಯ ವೇದಿಕೆ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.  ಉಜಿರೆ ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಪ್ರೊ.ರಾಜಶೇಖರ ಹಳೆಮನೆ ಅವರು ಗಂಗಾಧರ ಚಿತ್ತಾಲರ ಕಾವ್ಯದ ವಿಭಿನ್ನ ನೆಲೆಗಳು ಕುರಿತು ಉಪನ್ಯಾಸದಲ್ಲಿ ಮಾತನಾಡ