Posts

Showing posts from April, 2025
Image
ಮಂತ್ರಾಲಯ : ಮಾಜಿ ಸಿಎಂ ಯಡಿಯೂರಪ್ಪ ಭೇಟಿ.                                                      ಜಯ ಧ್ವಜ ನ್ಯೂಸ್ ರಾಯಚೂರು,ಮೇ.1-    ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿದರು. ಶ್ರೀ ಮಠದಿಂದ ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು.      ಮಂಚಾಲಮ್ಮ ದರ್ಶನ ಪಡೆದು ನಂತರ ರಾಯರ ಬೃಂದಾವನ ದರ್ಶನ ಪಡೆದರು. ತದನಂತರ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ಫಲ ಮಂತ್ರಾಕ್ಷತೆ , ಶೇಷವಸ್ತ್ರ, ಸ್ಮರಣಿಕೆ ನೀಡಿ ಆಶೀರ್ವಾದ ಮಾಡಿದರು .
Image
  ಮಂತ್ರಾಲಯ: ರಾಯರ‌ ಬೃಂದಾವನಕ್ಕೆ ಗಂಧ ಲೇಪನ.                                                  ಜಯ ಧ್ವಜ ನ್ಯೂಸ್ ರಾಯಚೂರು,ಏ.30 - ಅಕ್ಷಯ ತೃತೀಯ ಪ್ರಯುಕ್ತ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಗಂಧ ಲೇಪನ ನೆರವೇರಿತು. ಬೆಳಿಗ್ಗೆ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ರಾಯರ ಬೃಂದಾವನಕ್ಕೆ ಗಂಧ ಲೇಪನ ಗೈದರು. ನಂತರ ಮಹಾಮಂಗಳಾರತಿ ನೆರವೇರಿಸಿದರು.
Image
  ಜಿಲ್ಲಾಡಳಿತದಿಂದ ಅದ್ಧೂರಿಯಾಗಿ ಬಸವ ಜಯಂತಿ ಆಚರಣೆ :                                                    ಬಸವಣ್ಣನವರ ಆದರ್ಶಗಳನ್ನು ಅಳವಡಿಸಿಕೊಳ್ಳಿ- ಸಂಸದ ಜಿ.ಕುಮಾರ ನಾಯಕ ಜಯ ಧ್ವಜ ನ್ಯೂಸ್ ರಾಯಚೂರು, ಏ.30- 12 ನೆಯ ಶತಮಾನದಲ್ಲಿ ಸಮಾನತೆ ಸಾರಿದ ಬಸವಣ್ಣನವರ ಆದರ್ಶಗಳನ್ನು ಎಲ್ಲರ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಯಚೂರು ಲೋಕಸಭಾ ಸದಸ್ಯರಾದ ಜಿ.ಕುಮಾರ‌ ನಾಯಕ ಅವರು ಹೇಳಿದರು. ಅವರಿಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮಕ್ಕೆ‌ ಚಾಲನೆ‌ ನೀಡಿ ಮಾತನಾಡಿದರು. ಸಮಾಜದಲ್ಲಿರುವ ಪ್ರತಿಯೊಂದು ಸಮಸ್ಯೆಗಳಿಗೂ ವಿಶ್ವಗುರು ಬಸವಣ್ಣನವರ ಸಂದೇಶಗಳಲ್ಲಿ ಪರಿಹಾರವಿದೆ. ಬಸವಣ್ಣನವರ ಸಂದೇಶಗಳು ಸರ್ವಕಾಲಕ್ಕೂ ಜೀವಂತವಾಗಿರುತ್ತವೆ. ಅವರ ವಚನಗಳಲ್ಲಿರುವ ಅಂಶಗಳು ಇಂದಿಗೂ ಜೀವಂತವಾಗಿವೆ ಎಂದರು. ಸಮಾಜದಲ್ಲಿ ಸಮಾನತೆಯೆಂಬುವುದು ಇರಬೇಕು ಶರಣ ಬಸವಣ್ಣನ ಮಾತು ಪೂರ್ಣವಾಗಿ ಆಚರಣೆಗೆ ತರಬೇಕು. ಸಮಾಜದ ಪ್ರತಿಯೊಬ್ಬರೂ ಕೂಡ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು. ಗುರು ...
Image
  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೂತನ ರಾಜ್ಯಾಧ್ಯಕ್ಷ ಎಸ್.ರಘುನಾಥ್ ರವರಿಗೆ ಸನ್ಮಾನ ಕಾರ್ಯಕ್ರಮ ಪೂರ್ವಭಾವಿ ಸಭೆ:            ನೂತನ ಜಿಲ್ಲಾ ಪ್ರತಿನಿಧಿಗಳಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ವಿಪ್ರ ಶ್ರೀ ಪ್ರಶಸ್ತಿ ಪ್ರದಾನ  ಸರ್ವಾನುಮತದ ನಿರ್ಣಯ- ಜಗನ್ನಾಥ  ಕುಲಕರ್ಣಿ.                         ಜಯ ಧ್ವಜ ನ್ಯೂಸ್ ರಾಯಚೂರು,ಏ.30 - ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಕಲ್ಯಾಣ  ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು(ರಿ) (ಕೆಕೆ ಬಿಎಂಎಸ್ ಈಗ ಅಧಿಕೃತವಾಗಿ ಎಕೆಬಿಎಂಎಸ್ ಗೆ ಸಂಯೋಜಿತವಾಗಿದೆ.)    ಏ. 29 ಸಂಜೆ 5-30 ಕ್ಕೆ ನಗರದ ಗಾಜಗಾರ ಪೇಟೆ ಶಂಕರ ಮಠ ಕಲ್ಯಾಣ ಮಂಟಪದಲ್ಲಿ ರಾಜ್ಯ ಅಧ್ಯಕ್ಷರು ಆದ ಸನ್ಮಾನ್ಯ ಶ್ರೀ ಎಸ್ ರಘುನಾಥ ರವರ ಸನ್ಮಾನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು .               ರಾಜ್ಯ ನೂತನ ಅಧ್ಯಕ್ಷರಿಗೆ ಮತ್ತು ಹಿರಿಯ ಉಪಾಧ್ಯಕ್ಷರಿಗೆ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ನೂತನವಾಗಿ ಚುನಾಯಿತರಾದ ಜಿಲ್ಲಾ ಪ್ರತಿನಿಧಿಗಳಿಗೆ ಸನ್ಮಾನ ಮಾಡಲು ನಿರ್ಧರ, ವಿಪ್ರ ಸಾಧಕ ಐವರಿಗೆ ವಿಪ್ರಶ್ರೀ ಪ್ರಶಸ್ತಿ ಕೊಡಲು ಸಹ ತೀರ್ಮಾನಿಸಲಾಯಿತು.  ಎ...
Image
  ನಾಲವಾರ ಮಠದಲ್ಲಿ  ದಕ್ಷಿಣ ಭಾರತದ ದೀಪಮೇಳ ಅದ್ಧೂರಿ ತನಾರತಿ ಜಯ ಧ್ವಜ ನ್ಯೂಸ್ ರಾಯಚೂರು, ಏ.29 - ಚಿತಾಪೂರ ತಾಲೂಕಿನ ನಾಲವಾರ ಶ್ರೀ ಕೋರಿ ಸಿದ್ದೇಶ್ವರ ಮಹಾ ಸಂಸ್ಥಾನ ಮಠದಲ್ಲಿ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಸಿದ್ಧ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ತನಾರತಿ ಮತ್ತು ಪಲ್ಲಕ್ಕಿ ಮಹೋತ್ಸವವನ್ನು ಸಹಸ್ರಾರು ಸದ್ಭಕ್ತರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆರಾಧ್ಯ ಗುರುವಿಗೆ ಹರಕೆ ಸಲ್ಲಿಸಿದ  ಸಹಸ್ರಾರು ಭಕ್ತರು, ನಾಡಿನ ವಿಶಿಷ್ಟ ಉತ್ಸವಗಳಲ್ಲಿ ಒಂದಾದ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ  ತನಾರತಿ ಉತ್ಸವವು  ಸಹಸ್ರಾರು ಭಕ್ತರ ಮಧ್ಯೆ ಅಕ್ಷಯತದಿಗೆ ಅಮಾವಾಸ್ಯೆ ಪ್ರಯುಕ್ತ ಅದ್ಧೂರಿಯಾಗಿ ಜರುಗಿತು. ದಕ್ಷಿಣ ಭಾರತದ ಮಹಾದೀಪಮೇಳವೆಂದೇ ಪ್ರಖ್ಯಾತವಾದ ನಾಲವಾರದ ತನಾರತಿ ಉತ್ಸವವು ಇಷ್ಟಾರ್ಥಗಳು ಈಡೇರಿದ ಪ್ರಯುಕ್ತ ಕೃತಜ್ಞತೆಯ ರೂಪದಲ್ಲಿ ಕರ್ತೃ ಕೋರಿಸಿದ್ಧೇಶ್ವರರ ಗದ್ದುಗೆಗೆ ಸಲ್ಲಿಸುವ ಹರಕೆಯಾಗಿದ್ದು ದೇಶದ ವಿವಿಧ ಭಾಗಗಳ ಸಾವಿರಾರು ಸದ್ಭಕ್ತರು ಪಾಲ್ಗೊಂಡು ಹರಕೆ ತೀರಿಸಿದರು. ಶ್ರೀ ಮಠದ ಹಳೆಯ ಜಾತ್ರೆ ಹಾಗೂ ಪ್ರಸಕ್ತ ವರ್ಷದ ಎರಡನೆಯ ತನಾರತಿ ಉತ್ಸವವು ಪೀಠಾಧಿಪತಿಗಳಾದ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ವೈಭವದಿಂದ ನಡೆಯಿತು. ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಶ್ರೀಮಠದ ಪಾರಂಪರಿಕ ವಿಶೇಷ ಉಡುಪು ಧರಿಸಿ ಉತ್ಸವ...
Image
  ದಾಸ ಸಾಹಿತ್ಯ ಮಾನವೀಯ ಮೌಲ್ಯಗಳ ತುಂಬು ಹೊಳೆ- ಮುರಳಿಧರ ಕುಲಕರ್ಣಿ ಜಯ ಧ್ವಜ ನ್ಯೂಸ್ ರಾಯಚೂರು, ಏ.29- ದಾಸ ಸಾಹಿತ್ಯವು ಕರ್ನಾಟಕದ ಸಾಹಿತ್ಯ, ಸಂಗೀತ, ಸಂಸ್ಕೃತಿಯ, ಮಾನವೀಯ ಮೌಲ್ಯಗಳ, ಸಾಮಾಜಿಕ ಪ್ರಜ್ಞೆಯ ತುಂಬು ಹೊಳೆಯಾಗಿದೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ರವರು ಹೇಳಿದರು.  ಅವರು ಇಂದು ಬೆಳಗ್ಗೆ ತಾಲೂಕ ಕನ್ನಡ ಸಾಹಿತ್ಯ ಪರಿಷತ್  ರಾಯಚೂರು, ನಂದಿನಿ ಶಿಕ್ಷಣ ಮಹಾವಿದ್ಯಾಲಯ ರಾಯಚೂರು ಇವರುಗಳ ಸಹಯೋಗದಲ್ಲಿ ನಂದಿನಿ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ದಾಸ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಎಂಬ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.   16ನೇ ಶತಮಾನದಲ್ಲಿಯೇ  ಸಾಮಾಜಿಕ ಅಂಕುಡೊಂಕುಗಳನ್ನು, ಮೂಡನಂಬಿಕೆಗಳನ್ನು, ಜಾತಿ ಪದ್ಧತಿಗಳನ್ನು  ಎದೆಗಾರಿಕೆಯಿಂದ ಖಂಡಿಸಿ  ಕೈಯಲ್ಲಿ ತಾಳ, ತಂಬೂರಿ ಹಿಡಿದು,  ಕಾಲಲ್ಲಿ ಗೆಜ್ಜೆ ಕಟ್ಟಿ, ಹೆಗಲಲ್ಲಿ ಜೋಳಿಗೆಯನ್ನು ಹಾಕಿಕೊಂಡು ಮನೆ ಮನೆಗೆ ತೆರಳಿ ಮಾನವೀಯ ಮೌಲ್ಯವನ್ನು, ಭಕ್ತಿಯನ್ನು, ಪ್ರೀತಿ ವಿಶ್ವಾಸ, ಆತ್ಮಸ್ಥೈರ್ಯ, ಭರವಸೆಗಳನ್ನು ಬಿತ್ತಿದ ಮಹಾನುಭಾವರು. ಇಂತಹ ದಾಸ ಸಾಹಿತ್ಯ ದಲ್ಲಿರುವ ಪ್ರತಿಯೊಂದು ವಿಷಯಗಳು ಪ್ರಸ್ತುತ ಸಮಾಜಕ್ಕೆ ದಾರಿ ದೀಪವಾಗಿವೆ ಎಂದು ಹೇಳಿದರು.       ‌ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಾಸೋತ್ಸವ ಸಮಿತ...
Image
  ಪಹಲ್ಗಾಮ್ ನಲ್ಲಿ ಉಗ್ರರ ಕೃತ್ಯ ಖಂಡಿಸಿ ಸಿಪಿಐಎಂ ಪ್ರತಿಭಟನೆ.                                                            ಜಯ ಧ್ವಜ ನ್ಯೂಸ್ ರಾಯಚೂರು, ಏ.29- ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ  ಭಯೋತ್ಪಾದನೆ ಕೃತ್ಯ ಖಂಡಿಸಿ    ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ಇಂದು ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯನ್ನು ಉದ್ಧೇಶಿಸಿ  ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ ಜಿ ವಿರೇಶ ಅವರು ಮಾತನಾಡಿ ‘ಕಾಶ್ಮೀರದಲ್ಲಿ ಉಗ್ರವಾದಿಗಳು ನಡೆಸಿದ ಹತ್ಯೆಯನ್ನುತೀವ್ರವಾಗಿ ಖಂಡಿಸುತ್ತೇವೆ. ೨೮ ಜನ ದಾಳಿಯಲ್ಲಿ ಅಸು ನೀಗಿದ್ದಾರೆ. ಅವರ ದುಃಖದಲ್ಲಿ ನಾವಿದ್ದೇವೆ. ಅವರಿಗೆ ಮನದಾಳ ಸಾಂತ್ವನ. ಹತ್ಯೆಯಲ್ಲಿ ಮಡಿದವರು ಇತರೆ ಜಾತಿ ಧರ್ಮದ ಜನರೂ ಇರುವರು. ಕೇಂದ್ರ ಸರ್ಕಾರ  ತನ್ನ ಭದ್ರತಾ ಲೋಪವನ್ನು ಮುಚ್ಚಿಕೊಳ್ಳಲು  ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು ಇದು ತೀವ್ರ ಖಂಡನಾರ್ಹವಾಗಿದೆ ಎಂದರು. ಕಾಶ್ಮೀರದ ಜನತೆಯು ಪ್ರವಾಸಿಗರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕಾಶ್ಮೀರದಲ್ಲಿ ಸಿಪಿಐಎಂ ಪಕ್ಷದ...
Image
  ಮೇ.2 ರಂದು ಜಿಲ್ಲಾಡಳಿತದಿಂದ ಶ್ರೀ ಶಂಕರಾಚಾರ್ಯರ ಜಯಂತಿ ಜಯ‌ಧ್ವಜ ನ್ಯೂಸ್ ರಾಯಚೂರು,ಏ.29-                  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮೇ.02ರ ಬೆಳಿಗ್ಗೆ 11ಗಂಟೆಗೆ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ. ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಉದ್ಘಾಟಿಸುವರು. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಘನ ಉಪಸ್ಥಿತಿ ವಹಿಸುವರು. ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಎಸ್. ಶಿವರಾಜ ಪಾಟೀಲ್ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ಆಗಿರುವ ಮಸ್ಕಿ ಕ್ಷೇತ್ರದ ಶಾಸಕರಾದ ಆರ್.ಬಸನಗೌಡ ತುರ್ವಿಹಾಳ, ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಸಿಂಧನೂರು ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ,...
Image
  ಪಹಲ್ಗಾಮ್ ಉಗ್ರರ ದಾಳಿ‌ ಖಂಡಿಸಿ ಬೃಹತ್ ಪ್ರತಿಭಟನಾ ಜಾಥಾ:                                                      ಕಾಶ್ಮೀರ ಭಾರತದ ಮುಕುಟ- ಶ್ರೀಕಾಂತ್.                                                                                                  ಜಯಧ್ವಜ ನ್ಯೂಸ್ ರಾಯಚೂರು,ಏ.28-                   ಕಾಶ್ಮೀರ ಭಾರತದ ಮುಕುಟ ಅದನ್ನು ಪಾಕಿಸ್ಥಾನ ಪಡೆದುಕೊಳ್ಳುವುದು ಅಸಾಧ್ಯದ ಮಾತು ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಸಹ ಸಂಚಾಲಕ ಶ್ರೀಕಾಂತ್ ಹೇಳಿದರು.          ಅವರಿಂದು ನಗರದಲ್ಲಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿ‌ ಖಂಡಿಸಿ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ಜಾಥಾ ಉದ್ದೇಶಿಸಿ ಮಾತ...
Image
  ಮೇ.1 ರಂದು ಜಾಗೃತಿ ಜಾಥಾಕ್ಕೆ ಚಾಲನೆ:                  ಮಾದಿಗ ಸಮುದಾಯದವರು ನಿಖರ ಮಾಹಿತಿ ನೀಡಿ- ಜೆ.ಬಿ.ರಾಜು.                                                            ಜಯ ಧ್ವಜ ನ್ಯೂಸ್ ರಾಯಚೂರು,ಏ.28 -                  ಒಳಮೀಸಲಾತಿ ಜಾರಿಗಾಗಿ ರಚಿಸಿದ ನಾಗ್ ಮೋಹನದಾಸ್ ಆಯೋಗವು ಮೇ.5ರಿಂದ  ಒಳಮೀಸಲಾತಿಗೊಳಪಡುವ ಜಾತಿಗಳ ಗಣತಿ ನಡೆಸುತ್ತಿದ್ದು ಮಾದಿಗ ಸಮುದಾಯದ ಜನರು ನಿಖರ ಮಾಹಿತಿ ನೀಡಬೇಕೆಂದು ಮಾದಿಗ ಸಮಾಜದ ಮುಖಂಡರಾದ ಜೆ.ಬಿ.ರಾಜು ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಲು ನಾಗಮೋಹನ ದಾಸ್ ಆಯೋಗ ಸರ್ಕಾರಕ್ಕೆ ಮಧ್ಯಂತರ ವರದಿ ನೀಡಿದ್ದು ಒಳಮೀಸಲಾತಿ ಕಲ್ಪಿಸಲು ಒಳಮೀಸಲಾತಿಗೆ ಒಳಪಡುವ ಜಾತಿಗಳ ಗಣತಿ ಮಾಡಲು ಮೇ. 5ರಿಂದ ಮನೆ ಮನೆಗೆ ಬರುತ್ತಿದ್ದು ಮಾದಿಗ ಜನಾಂಗದ ಜನರು ಕಾಲಂ ನಂ.61 ರಲ್ಲಿ  ಮಾದಿಗರೆಂದು ಬರೆಸಬೇಕೆಂದು ಹೇಳಿದ ಅವರು ಮೇ.1 ರಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ನರಸಮ್ಮ ನರಸಿಂಹಲ...
Image
  ಕಾಕರಗಲ್ ಟೋಲ್ ಧ್ವಂಸ   ಶಾಸಕರ ಪುತ್ರನ ಪಾತ್ರವಿಲ್ಲ- ಎಂ.ವಿರುಪಾಕ್ಷಿ.                                                                                                          ಜಯ ಧ್ವಜ ನ್ಯೂಸ್ ರಾಯಚೂರು ಏ.28- ದೇವದುರ್ಗ ತಾಲ್ಲೂಕಿನ ಕಾಕರಗಲ್ ಟೋಲ್ ಪ್ಲಾಜಾ ಧ್ವಂಸ ಪ್ರಕರಣದಲ್ಲಿ ಶಾಸಕಿ ಕರೆಮ್ಮ ನಾಯಕ ಪುತ್ರ ಸಂತೋಷ ನಾಯಕ ಪಾತ್ರವಿಲ್ಲ ವೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಕರಗಲ್ ಬಳಿ ಟೋಲ್ ಧ್ವಂಸ ಪ್ರಕರಣದಲ್ಲಿ ಶಾಸಕಿ ಪುತ್ರನ ಪಾತ್ರವಿಲ್ಲದಿದ್ದರೂ ಅವರು ಹೆಸರು ಸೇರಿಸಲಾಗಿದೆ ಉದ್ಧೇಶ ಪೂರ್ವಕವಾಗಿ ಶಾಸಕರ ಹೆಸರಿಗೆ ಕಳಂಕ ತರಲು ಇದನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದರು. ಟೋಲ್ ಪ್ಲಾಜಾ ನಿರ್ಮಾಣ ವಿರೋಧಿಸಿ ಸ್ಥಳೀಯ ರೈತರು, ಗ್ರಾಮಸ್ಥರು ಪ್ರತಿಭಟಿಸುವ ವೇಳೆ ಶಾಸಕರು ಅದೆ ಮಾರ್ಗದಲ್ಲಿ ತೆರಳುತ್ತಿರುವ ವೇಳೆ ಪ್ರತಿಭಟನೆಯ ಬಗ್ಗೆ ವಿಚಾರಿಸಿ ತೆರಳಿದ್ದಾರೆ ಅದನ್ನು ವಿರೋಧಿಗಳು...
Image
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಪ್ರದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಅಂಗವಾಗಿ ನಾಳೆ ಪೂರ್ವಭಾವಿ ಸಭೆ - ಜಗನ್ನಾಥ ಕುಲಕರ್ಣಿ                    ಜಯ ಧ್ವಜ ನ್ಯೂಸ್ ರಾಯಚೂರು,ಏ.28-                                                                                                          ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ  ಅಧಿಕೃತವಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ಬೆಂಗಳೂರು. ಗೆ ಸಂಯೋಜಿತವಾಗಿದ್ದು ಏ‌. 29 ರಂದು ಸಂಜೆ 5-30ಕ್ಕೆ  ಗಾಜಗಾರಪೇಟೆಯ ಶ್ರೀ ಶ್ರೀಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ಸಭೆಯನ್ನು ಆಯೋಜಿಸಲಾಗಿದೆ.  ಇತ್ತೀಚೆಗೆ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಎಸ್ ರಘುನಾಥ ರವರಿಗೆ ಹಾಗೂ ಎಕೆಬಿಎಂಎಸ್ ರಾಜ್ಯ ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರ...
Image
  ಕಾಕರಗಲ್ ಟೋಲ್ ಧ್ವಂಸ ಶಾಸಕರ ಪುತ್ರನ ಮೇಲೆ ಸೂಕ್ತ ಕ್ರಮ ವಹಿಸಿ- ಶ್ರೀ ದೇವಿ ನಾಯಕ.                               ಜಯ ಧ್ವಜ ನ್ಯೂಸ್ ರಾಯಚೂರು,ಏ.27- ದೇವದುರ್ಗ ತಾಲೂಕಿನ ಕಾಕರಗಲ್ ಬಳಿ ಟೋಲ್ ಧ್ವಂಸಗೊಳಿಸಿದ ಶಾಸಕರಾದ ಕರೆಮ್ಮ ನಾಯಕ ಪುತ್ರ ಸಂತೋಷ್ ನಾಯಕ ಮೇಲೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಶ್ರೀ ದೇವಿ ನಾಯಕ ಆಗ್ರಹಿಸಿದರು. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ‌ಶಾಸಕರ ಪುತ್ರ ನಿಂದಲೆ ಅಶಾಂತಿ ಮೂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಈ ಹಿಂದೆ ಶಾಸಕರು ತಮಗೆ ಜೀವ ಬೆದರಿಕೆಯಿದೆ ಎಂದು ವಿಧಾನ ಸಭೆಯಲ್ಲಿ ಸರ್ಕಾರದಿಂದ ರಕ್ಷಣೆ ಕೋರಿದ್ದರು ಸದ್ಯ ಅವರ ಪುತ್ರ ನಿಂದಲೆ ಸರ್ಕಾರದ ಆಸ್ತಿ ನಷ್ಟವಾಗಿದ್ದು ಇದನ್ನು ಭರಿಸುವವರು ಯಾರು ಇವರ ಮೇಲೆ ಸೂಕ್ತ ಕ್ರಮ ಜರುಗಿಸದಿದ್ದರೆ ಗೃಹ ಸಚಿವರಿಗೆ ಮನವಿ ಮಾಡಲಾಗುತ್ತದೆ ಎಂದರು. ಟೋಲ್ ಅಗತ್ಯವಿಲದಿದ್ದಲ್ಲಿ  ಸರ್ಕಾರಕ್ಕೆ ಮನವಿ ಮಾಡಿ ತೆರವುಗೊಳಸಬೇಕಿತ್ತು ಈ ರೀತಿ ದೌರ್ಜನ್ಯ ಮಾಡಿರುವುದು ಸರಿಯಲ್ಲವೆಂದರು. ಈ ಸಂದರ್ಭದಲ್ಲಿ ಮಂಜುಳಾ ಅಮರೇಶ, ಮಾಲಾ ಭಜಂತ್ರಿ,ಕಾಸಿಂಬಿ, ಲಕ್ಷ್ಮೀ ನರಸಿಂಹಲು ಇದ್ದರು.
Image
  ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಕುಲಪತಿಗಳ ನೇಮಕಗೊಳಿಸಿ- ರಘುವೀರ ನಾಯಕ.                                              ಜಯ ಧ್ವಜ ನ್ಯೂಸ್ , ರಾಯಚೂರು,ಏ.27-  ಆದಿ ಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಕಾಯಂ ಕುಲಪತಿಗಳ ನೇಮಕ ಮಾಡುವಂತೆ ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕರ ಸಂಘ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ 2021ರಲ್ಲಿ ನೂತನ ವಿಶ್ವ ವಿದ್ಯಾಲಯವಾಗಿ ಅಸ್ತಿತ್ವಕ್ಕೆ ಬಂದ ರಾಯಚೂರು ವಿಶ್ವ ವಿದ್ಯಾಲಯಕ್ಕೆ ಇತ್ತೀಚೆಗೆ ಸರ್ಕಾರ ಮಹರ್ಷಿ ವಾಲ್ಮೀಕಿರವರ ಹೆಸರು ನಾಮಕರಣ ಮಾಡಿದ್ದು ಬಿಟ್ಟರೆ  ವಿವಿಗೆ ಸಮರ್ಪಕ ಅನುದಾನ ಸಹ ದೊರೆಯುತ್ತಿಲ್ಲ ವೆಂದು ದೂರಿದರು. ಕಲ್ಯಾಣ ಕರ್ನಾಟಕ ಭಾಗದ ಸಮರ್ಥರನ್ನು ಕುಲಪತಿಗಳನ್ನಾಗಿ ನೇಮಕ ಮಾಡಬೇಕೆಂದು ಒತ್ತಾಯಿಸಿದ ಅವರು  ಪ್ರಭಾರಿ ಕುಲಪತಿಗಳ ನೇಮಕದಿಂದ ಅಭಿವೃದ್ಧಿ ಅಸಾದ್ಯ ಕೂಡಲೆ ನೂತನ ಕುಲಪತಿಗಳನ್ನು ನೇಮಿಸಬೇಕೆಂದು ಒತ್ತಾಯಿಸಿದ‌ ಅವರು ಕೂಡಲೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಮಾಡಬೇಕು ಹೆಚ್ಚಿನ ಅನುದಾನ ಒದಗಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಚಣ್ಣ ನಾಯಕ, ರಾಮಕೃಷ್ಣ ನಾಯಕ್,ರಾಮು ನಾಯಕ, ಬೋಳಬಂಡಿ , ನರೇಂ...
Image
  ಏ.28 ರಂದು ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನಾ ಜಾಥಾ- ಫಡ್ನೀಸ್ .                                       ಜಯ ಧ್ವಜ ನ್ಯೂಸ್, ರಾಯಚೂರು,ಏ.27-              ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ಏ.28 ರಂದು ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸಂಚಾಲಕ ಡಾ.ಆನಂದತೀರ್ಥ ಫಡ್ನೀಸ್ ಹೇಳಿದರು.  ಅವರಿಂದು ಸುದ್ದಿಗೋಷ್ಠಿಯಲ್ಲಿ  ಮಾತನಾಡಿ ಅಂದು ಸಂಜೆ 6ಕ್ಕೆ ನಗರದ ಶೆಟ್ಟಿಭಾವಿ ವೃತ್ತದಿಂದ ಸರಾಫ್ ಬಜಾರ್, ತೀನ್ ಕಂದೀಲ್, ಬಟ್ಟೆ ಬಜಾರ್, ಮಹಾವೀರ ವೃತ್ತದ ಮೂಲಕ ಚಂದ್ರಮೌಳೇಶ್ವರ ವೃತ್ತಕ್ಕೆ ಬಂದು ಸೇರಲಿದೆ ಎಂದರು. ಪ್ರತಿಭಟನಾ ಜಾಥಾದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಸಂಖ್ಯೆಯ ಜನರು ಭಾಗವಹಿಸಲಿದ್ದು ಮಂತ್ರಾಲಯ ಶ್ರೀಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಶಿವಬಸಪ್ಪ ಮಾಲಿಪಾಟೀಲ್, ಅಶೋಕ್ ಪಾಟೀಲ್ ಅತ್ತನೂರು, ಶಂಶಾಲಪ್ಪ, ರವಿ ಕೃಷ್ಣಾ, ರಮೇಶ್, ಹನುಮೇಶ ಸರಾಫ್ ಇದ್ದರು.
Image
  ಪಹಲ್ಗಾಮ್ ಉಗ್ರರ ದಾಳಿ‌ ಪ್ರಕರಣ‌:                        ಕೇಂದ್ರದ ಆಂತರಿಕ ಭದ್ರತಾ ವೈಫಲ್ಯ ಕಾರಣ- ಉಗ್ರಪ್ಪ.                                                                                                                                  ಜಯ ಧ್ವಜ ನ್ಯೂಸ್ ರಾಯಚೂರು,ಏ.27-             ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿ  ಸಂಭವಿಸಲು ಕೇಂದ್ರ ಸರ್ಕಾರದ ಆಂತರಿಕ ಭದ್ರತಾ ವೈಫಲ್ಯವೇ ಕಾರಣವೆಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಹೇಳಿದರು. ಅವರಿಂದು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಉಗ್ರರ ದಾಳಿಯಲ್ಲಿ ಅಮಾಯಕರು ಬಲಿಯಾಗಿದ್ದು ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. 2016ರಲ್ಲಿ ಊರಿ ಘಟನೆ, 2019ರಲ್ಲಿ ಬಾಲಕೋಟ್ ಘಟನೆ...
Image
ತಾಲೂಕಾ ಮತ್ತು ಗ್ರಾಮ ಮಟ್ಟದಲ್ಲಿ ಮದುಮೇಹ ಪಾಠಶಾಲೆ ಪ್ರಾರಂಭಿಸಿ ಜಾಗೃತಿ ಮೂಡಿಸುವೆ -  ಡಾ.ಬಸವರಾಜ್.ಎಂ. ಪಾಟೀಲ .                                                      ಜಯಧ್ವಜ ನ್ಯೂಸ್ ರಾಯಚೂರು, ಏ.26- ನಗರದ ರಿಮ್ಸ್ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ಮದುಮೇಹ ಸಂಶೋಧನಾ ಸಂಸ್ಥೆಗೆ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಭಾರತೀಯ ಮೆಡಿಕಲ್ ಅಸೋಷಿಯೇಶನ್ ಅಧ್ಯಕ್ಷರಾದ ಡಾ. ವಿ.ವಿ. ಚಿನಿವಲರರವರ  ನೆರವೇರಿಸಿದರು. ಅಧ್ಯಕ್ಷತೆಯನ್ನು ರಿಮ್ಸ್ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಸವರಾಜ ಎಂ. ಪಾಟೀಲರು ವಹಿಸಿದ್ದರು . ಉದ್ಘಾಟಕರಾಗಿ ಆಗಮಿಸಿದ ರಾಯಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಡೀನ್ ಕಮ್ ನಿರ್ಧೇಶಕರಾದ ಡಾ. ರಮೇಶರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸುಮಾರು 13 ವರ್ಷಗಳ ಬಳಿಕ ಕಲ್ಯಾಣ ಕರ್ನಾಟಕಕ್ಕೆ ಆರ್.ಎಸ್ ಎಸ್ ಡಿ.ಐ. ಸಂಸ್ಥೆಗೆ ಅಧ್ಯಕ್ಷ ಸ್ಥಾನ ದೊರೆತಿದ್ದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ, ಅಧ್ಯಕ್ಷ ಸ್ಥಾನದ ಅಧಿಕಾರ ಸ್ವೀಕರಿಸಿದ ರಿಮ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಸವರಾಜ ಎಂ. ಪಾಟೀಲರಿಗೆ ಹಾರ್ಧಿಕ ಶುಭಾಶಯಗಳನ್ನು ತಿಳಿಸುತ್ತೇನೆ, ಅವರು ಭ...
Image
ಸದರ್ ಬಜಾರ್  ಪೊಲೀಸರ ಕಾರ್ಯಾಚರಣೆ ನಾಲ್ಕು ಗಂಟೆಗಳಲ್ಲಿ 1.95 ಲಕ್ಷ ರೂ ಮೌಲ್ಯದ ಬಂಗಾರ, ಬೆಳ್ಳಿ  ಒಡವೆ ಪತ್ತೆ.                                                                                                                                ಜಯ ಧ್ವಜ ನ್ಯೂಸ್ ರಾಯಚೂರು,ಏ.26-                   ನಗರದ ಸದರ್ ಬಜಾರ್ ಪೊಲೀಸರ ಕಾರ್ಯಾಚರಣೆಯಿಂದ ನಾಲ್ಕು ಗಂಟೆಗಳಲ್ಲಿ ಕಳೆದು ಹೋದ ಒಡವೆ ಪತ್ತೆ ಹಚ್ಚಿ  ಮಾಲೀಕರಿಗೆ ಒಪ್ಪಿಸಿದ ಘಟನೆ ಜರುಗಿದೆ.            ಈ ಬಗ್ಗೆ  ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ  ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಸುದ್ದಿಗೋಷ್ಠಿಯಲ್ಲಿ  ಮಾತನಾಡಿ ಶಕ್ತಿ ನಗರದ ಕರಾಟೆ ಶಿಕ್ಷಕಿ ಲಕ್ಷ್ಮೀ. ಎಂ ಎಂಬುವವರ...
Image
    ಪಹಲ್ಗಾಮ್ ಘಟನೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ನಿಂದ ಮೇಣದಬತ್ತಿ ಮೆರವಣಿಗೆ.                                                                                                            ಜಯ ಧ್ವಜ ನ್ಯೂಸ್ ರಾಯಚೂರು ಏ.25-                                                                                                                                        ಕಾಶ್ಮೀರದ‌ ಪಹಲ್ಗಾಮ್ ನಲ್ಲಿ‌ ನಡೆದ ಉಗ್ರರ‌ ದಾಳಿಯ...
Image
  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಅಭಿಯಾನ- ಜಗನ್ನಾಥ ಕುಲಕರ್ಣಿ.                                                                                                                                         ಜಯ ಧ್ವಜ ನ್ಯೂಸ್.  ರಾಯಚೂರು, ಏ.25-                                     ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ವಿಪ್ರ ಬಾಂಧವರು ಸದಸ್ಯತ್ವ ಪಡೆಯುವಂತೆ ಕೋರಲಾಗಿದೆ. ಸದಸ್ಯತ್ವ ಪಡೆಯಲು ಇಚ್ಚಿಸುವವರು ಜಗನ್ನಾಥ ಕುಲಕರ್ಣಿ ಮೋ.9611493765 ಅಥವಾ ಗೋಪಾಲಕೃಷ್ಣ ತಟ್ಟಿ  ಮೋ.9480283734 ರವರನ್ನು ಸಂಪರ್ಕಿಸಿ ಸದಸ್ಯತ್ವ ಅರ್ಜಿ ಪಡೆದು ಅದನ್ನು ಭರ್ತಿ ಮಾಡಿ ಜೊತೆಗೆ ಆಧಾರ್ ಕಾರ್ಡ್ ...
Image
  ಹೆಚ್ ಪಿ ಇ ಎಲ್ ಸ್ವತಂತ್ರ ನಿರ್ದೇಶಕರಾಗಿ ಗಿರೀಶ್ ಕನಕವೀಡು ಮುಂದುವರಿಕೆ.                                               ಜಯ ಧ್ವಜ ನ್ಯೂಸ್, ರಾಯಚೂರು, ಏ.25-                                                 ಭಾರತ ಸರ್ಕಾರದ ಪ್ರತಿಷ್ಠಿತ ಹೆಮಿಸ್ಪಿಯರ್ ಪ್ರಾಪರ್ಟೀಸ್  ಇಂಡಿಯಾ ಲಿಮಿಟೆಡ್ ಸ್ವತಂತ್ರ ನಿರ್ದೇಶಕರಾಗಿದ್ದ ಭಾರತಿಯ ಜನತಾ ಪಕ್ಷದ ಮುಖಂಡರು ಹಾಗು ಬ್ರಾಹ್ಮಣ ಸಮಾಜದ ಮುಖಂಡರು ಆಗಿರುವ ಇವರನ್ನು ಮತ್ತೆ ಮುಂದುವರಿಸಲಾಗಿದೆ. ಆಡಳಿತ ನಿರ್ವಹಣೆ ಹಾಗೂ ನಾಯಕತ್ವ ಅಂಶ ಮನಗೊಂಡು ಇವರನ್ನು ಮುಂದುವರೆಸಲಾಗಿದೆ ಕಳೆದ ಮೂರು ದಶಕಗಳಿಂದ ಇವರು ರಾಜಕೀಯ ಜೀವನದಲ್ಲಿದ್ದು ಬಿಜೆಪಿ ನಿಷ್ಟಾವಂತ ಕಾರ್ಯಕರ್ತರಾಗಿ ಪಕ್ಷ ಸಂಘಟನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ . 
Image
ಏ.26 ರಂದು ಕೆ ಆರ್ ಎಸ್ ಎಸ್ ಡಿ ಐ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಮಧುಮೇಹ ಜಾಗೃತಿ ಕಾರ್ಯಕ್ರಮ - ಡಾ.ಬಸವರಾಜ ಪಾಟೀಲ್.                                                                                                                  ಜಯ ಧ್ವಜ ನ್ಯೂಸ್ ರಾಯಚೂರು, ಏ.25 -                                                     ರಿಸರ್ಚ್ ಸೋಸೈಟಿ ಫಾರ್ ದಿ ಸ್ಟಡಿ ಆಫ್ ಡಯಾಬಿಟಿಸ್ ಇನ್ ಇಂಡಿಯಾ ಕರ್ನಾಟಕ ಶಾಖೆಯ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಮಧುಮೇಹ ಜಾಗೃತಿ ಕಾರ್ಯಕ್ರಮವನ್ನು ಏ.26 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕೆ ಆರ್ ಎಸ್ ಎಸ್ ಡಿ ಐ ಸಂಸ್ಥೆಯ ನೂತನ ಅಧ್ಯಕ್ಷರಾದ ಡಾ.ಬಸವರಾಜ ಎಂ.ಪಾಟೀಲ್ ಹೇಳಿದರು. ಅವರಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ದೇಶ...
Image
  ಕಾಶ್ಮೀರದ  ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನು  ತೀವ್ರವಾಗಿ ಖಂಡಿಸುತ್ತೇವೆ - ಶ್ರೀ  ವಿದ್ಯಾ ಕಣ್ವ ವಿರಾಜ ತೀರ್ಥರು    ಜಯ ಧ್ವಜ ನ್ಯೂಸ್ ರಾಯಚೂರು, ಏ.24-  ಕಾಶ್ಮೀರದ  ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನು  ತೀವ್ರವಾಗಿ ಖಂಡಿಸುತ್ತೇವೆ ಎಂದು ಕಣ್ವ ಮಠಾಧೀಶರಾದ ಶ್ರೀ  ವಿದ್ಯಾ ಕಣ್ವ ವಿರಾಜ ತೀರ್ಥ ಶ್ರೀಪಾದಂಗಳವರು ತಿಳಿಸಿದ್ದಾರೆ. ದೇಶದ ಏಕತೆ, ಸಾಮರಸ್ಯ, ಶಾಂತಿ – ಇವು ನಮ್ಮ ಸಂಸ್ಕೃತಿಯ ಮೂಲಸ್ತಂಭಗಳು. ಯಾವುದೇ ಉಗ್ರಕೃತ್ಯಗಳು ಈ ಅಖಂಡತೆಯ ಮೇಲೆ ಹೊಡೆತ ನೀಡದಂತೆ ನಾವು ಎಚ್ಚರಿಕೆಯಿಂದ ಇರಬೇಕಾಗಿದೆ.  ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದು, ಎಲ್ಲರಿಗೂ ಸಮಾನ ಹಕ್ಕುಗಳನ್ನು ಒದಗಿಸುವ ಭಾವನೆಗಳನ್ನು ಬೆಳೆಸುವುದು ನಿಜವಾದ ದೇಶಪ್ರೇಮವಾಗಿದೆ. ಇಂತಹ‌ ಘಟನೇಗಳು ದೇಶದ್ರೋಹಿಗಳ, ಸಂವಿಧಾನ ವಿರೋಧಿಗಳ ದುಷ್ಕೃತ್ಯಗಳಾಗಿವೆ. ಹಾಗೆಯೇ, ನಿನ್ನೆ ಅಮಾಯಕ ಪ್ರವಾಸಿಗಳನ್ನು ಹತ್ಯೆಗೈದ ಕಾಶ್ಮೀರ ದಾಳಿಯೂ ಅದೇ ಶ್ರೇಣಿಗೆ ಸೇರಿದೆ. ಇಂತಹ ಭಯೋತ್ಪಾದಕರಿಗೂ, ಅವರನ್ನು ಬೆಂಬಲಿಸುವ ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂಬುದು  ಎಲ್ಲ  ಭಾರತೀಯರ ಆಶಯವಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಜಾತಿ ಭೇದ ಮರೆತು ಉಗ್ರವಾದದ ವಿರುದ್ಧ ಒಂದಾಗಬೇಕಿದೆ. ದೇಶದ ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಶಾಂತಿ, ಸಹಿಷ್ಣುತೆ ಮತ್ತ...
Image
  ಕೋಟೆ ಕೊತ್ತಲಗಳ ಅಭಿವೃದ್ಧಿಗಾಗಿ ಸಮಗ್ರ ವರದಿ ಸಿದ್ಧಪಡಿಸಿ:                                                     ರಾಯಚೂರು ಕೋಟೆಗಳ ಸಂರಕ್ಷಣೆಗೆ ಜಿಲ್ಲಾಧಿಕಾರಿಗಳ ಸೂಚನೆ ಜಯ ಧ್ವಜ ನ್ಯೂಸ್ ರಾಯಚೂರು ಏ. 24 -                                                          ನಗರದ ಬಸ್ ನಿಲ್ದಾಣ ಎದುರಿನ ಮೆಕ್ಕ ದರ್ವಾಜ್ ಕೋಟೆ, ಬೆಟ್ಟದ ಮೇಲಿನ ಕೋಟೆ ಪ್ರದೇಶಕ್ಕೆ ತೆರಳಿ ಅಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕೆ  ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಸೂಚಿಸಿದರು. ಅವರಿಂದು ನಗರದಲ್ಲಿರುವ ಕೋಟೆಗಳಿರುವ ಪ್ರದೇಶಕ್ಕೆ ತೆರಳಿ‌ ವೀಕ್ಷಣೆ ಮಾಡಿದರು. ಮೆಕ್ಕ   ದರ್ವಾಜ್ ಕೋಟೆ ಪ್ರದೇಶಕ್ಕೆ ತೆರಳಿ ವೀಕ್ಷಣೆ ನಡೆಸಿದರು. ಈ ಪ್ರದೇಶವನ್ನು ಸಂರಕ್ಷಣೆ ಹೇಗೆ ಮಾಡಬಹುದು. ಇಲ್ಲಿ ಎಲ್ಲ ಬಗೆಯ ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಕ್ರಮ ವಹಿಸಲು  ಮಹಾನಗರ ಪಾಲಿಕೆಯಿಂದ ಒಂದು ಸಮಗ್ರ ವರದಿ ತಯಾರಿಸುವ ಬಗ್ಗೆ ಮಹಾನಗರ ಪಾಲಿಕೆಯ ಆಯುಕ್ತರೊಂದಿಗ...
Image
  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧಿಕೃತ ಸಂಯೋಜನೆ- ಜಗನ್ನಾಥ ಕುಲಕರ್ಣಿ.                                                                           ಜಯಧ್ವಜ ನ್ಯೂಸ್      ರಾಯಚೂರು, ಏ.24- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಡಿ ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧಿಕೃತ ಸಂಯೋಜನೆಗೊಳಿಸಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಾಜಿ ಉಪಾಧ್ಯಕ್ಷ ಹಾಗೂ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ನಿರ್ದೇಶಕ ಜಗನ್ನಾಥ ಕುಲಕರ್ಣಿ ತಿಳಿಸಿದ್ದಾರೆ.            ಕಳೆದ ಕೆಲವು ವರ್ಷಗಳಿಂದ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಬ್ರಾಹ್ಮಣ ಸಮಾಜ‌ ಸಂಘಟನೆಗಾಗಿ ಕಲ್ಯಾಣ ಕರ್ನಾಟಕ ಮಹಾಸಭಾ ಹುಟ್ಟು ಹಾಕಲಾಗಿತ್ತು ಇದೀಗ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದೊಂದಿಗೆ ಜಂಟಿಯಾಗಿ ಸಮಾಜ ಸಂಘಟನೆ ಹಾಗೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು  ಜಗನ್ನಾಥ ಕುಲಕರ್ಣಿ  ಪ್ರಕಟಣೆಯಲ್ಲಿ   ತಿಳಿಸಿದ್ದಾರೆ.
Image
  ಪಹಲ್ಗಾಮ್ ನಲ್ಲಿ  ಉಗ್ರರ ಗುಂಡೇಟಿಗೆ ಬಲಿಯಾದ ರಾಜ್ಯದ ಮೂವರ ಕುಟಂಬಕ್ಕೆ ಮಂತ್ರಾಲಯ ಮಠದಿಂದ ತಲಾ ಒಂದು ಲಕ್ಷ .ರೂ ಪರಿಹಾರ- ಶ್ರೀ ಸುಬುಧೇಂದ್ರತೀರ್ಥರು.                                                            ಜಯ ಧ್ವಜ ನ್ಯೂಸ್ ರಾಯಚೂರು,ಏ.24 -              ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಪೈಶಾಚಿಕ ಕೃತ್ಯದಲ್ಲಿ ಹತ್ಯೆಗೀಡಾದ ರಾಜ್ಯದ ಮೂವರ  ಕುಟುಂಬಕ್ಕೆ  ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಘೋಷಿಸಿದ್ದಾರೆ. ಉಗ್ರರ ಕೃತ್ಯವನ್ನು ತೀರ್ವವಾಗಿ ಖಂಡಿಸಿರುವ ಅವರು ಭಾರತ ದೇಶದಲ್ಲಿ ಎಲ್ಲಾ ಜಾತಿ ಧರ್ಮದವರು ನೆಲೆಸಿದ್ದಾರೆ ನಾವು ಯಾರಿಗೂ ತೊಂದರೆ ನೀಡುವುದಿಲ್ಲ ಭಾರತೀಯರು ಶಾಂತಿ ಪ್ರಿಯರು ಆದರೆ ನಮ್ಮ ದೇಶದ ಜನರ ಮೇಲೆ ವಿನಾಕಾರಣ ದಾಳಿ ಮಾಡಿದರೆ ನಮ್ಮ  ಸರ್ಕಾರ ಸಹಿಸಿಕೊಳ್ಳುವುದಿಲ್ಲ ಅದಕ್ಕೆ ತಕ್ಕ ಪ್ರತಿಕ್ರಿಯೆ ಶತ್ರು ರಾಷ್ಟ್ರಕ್ಕೆ ನೀಡುತ್ತದೆ ನಾವೆಲ್ಲರೂ ಭಾರತೀಯರು ಒಗ್ಗಟ್ಟಿನಿಂದ ಬದುಕಬೇಕು ಎಂದು ಸಂದೇಶ ನೀಡ...