Posts

Showing posts from May, 2025
Image
  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕ ಪದಾಧಿಕಾರಿಗಳ ಪದಗ್ರಹಣ ಸಮಾರಂಭ :                                  ಬ್ರಾಹ್ಮಣ ಸಮಾಜ ಸರ್ವರ ಒಳಿತು ಬಯಸುತ್ತದೆ- ಎ.ನಾಗರಾಜ.                                                                                                                    ಜಯ ಧ್ವಜ ನ್ಯೂಸ್ ರಾಯಚೂರು ,ಮೇ.31- ಬ್ರಾಹ್ಮಣ ಸಮಾಜ ಸರ್ವರ ಒಳಿತು ಬಯಸುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಸೇವಾ ಪ್ರಮುಖರಾದ ಎ.ನಾಗರಾಜ್ ಹೇಳಿದರು.                             ಅವರು ಶುಕ್ರವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡ...
Image
  ಅಕ್ರಮ ಗೋ ಸಾಗಾಣಿಕೆ ತಡೆಯಲು ಚೆಕ್ ಪೋಸ್ಟ್ ಸ್ಥಾಪಿಸಿ- ವಿನಯ ಸಿಂಗ್.                                                                                      ಜಯ ಧ್ವಜ ನ್ಯೂಸ್ ರಾಯಚೂರು, ಮೇ.29-    ಅಕ್ರಮ ಗೋ ಸಾಗಾಣಿಕೆ ತಡೆಯಲು ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಬೇಕೆಂದು ರಾಷ್ಟ್ರೀಯ ಗೋ ರಕ್ಷಕ ವಾಹಿನಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನಯ್ ಸಿಂಗ್ ಠಾಕೂರ್ ಹೇಳಿದರು.         ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಗರಕ್ಕೆ ಅನೇಕ ಕಡೆಗಳಿಂದ ಅಕ್ರಮವಾಗಿ ಗೋ ಸಾಗಾಣಿಕೆ ಮಾಡಲಾಗುತ್ತಿದೆ ಆದ್ದರಿಂದ ಶಕ್ತಿನಗರ, ನವೋದಯ ಕಾಲೇಜು, ಸಾಥ್ ಮೈಲ್ ಕ್ರಾಸ್ ಮುಂತಾದ ಕಡೆಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ಗೋ ಸಾಗಾಣಿಕೆ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮತ್ತು ಪ್ರಾಣಿ ಹತ್ಯೆ ಕಾಯ್ದೆ ಜಾರಿಯಲ್ಲಿರುವುದರಿಂದ ಪೊಲೀಸ್ ಇಲಾಖೆ ಈ ಬಗ್ಗೆ ನಿಗಾ ವಹಿಸಬೇಕೆಂದರು. ಗೋ ಸಂರಕ್ಷಕರಿಗೆ ಬೆದರಿಕೆ ಕರೆ ಬಂದಲ್ಲಿ ಸ್ಪಂದಿಸಿ ಕರೆ ಮ...
Image
  ಅಂತರಾಷ್ರೀಯ ಜರ್ನಲ್‌ನ ಸಂಪಾದಕ ಆಡಳಿತ ಮಂಡಳಿ ಸದಸ್ಯರಾಗಿ ಡಾ. ಪ್ರಮೋದ ಕಟ್ಟಿ ನೇಮಕ   ಜಯ ಧ್ವಜ ನ್ಯೂಸ್ ರಾಯಚೂರು,ಮೇ.29- ಸ್ಥಳೀಯ  ಕೃಷಿ ವಿಜ್ಞಾನಗಳ ವಿಶ್ವವಿದ್ಯ್ಯಾಲಯದಲ್ಲಿ ಕೀಟಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಮತ್ತು ಇನ್ನಿತರ ಆಡಳಿತಾತ್ಮಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ, ಪ್ರಸ್ತುತ ಬೆಂಗಳೂರುನಲ್ಲಿರುವ “ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ”ಯಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಪ್ರಮೋದ ಕಟ್ಟಿ ಇವರಿಗೆ ಪ್ರತಿಷ್ಠಿತ “ಅಮೇರಿಕನ್ ಜರ್ನಲ್ ಆಫ್ ಅಗ್ರಿಕಲ್ಚರ್ ಅಂಡ್ ಫಾರೆಸ್ಟ್ರೀ” ಯ ಸಂಪಾದಕ ಆಡಳಿತ ಮಂಡಳಿಯ ಸದಸ್ಯರನ್ನಾಗಿ ಮೂರು ವರ್ಷಗಳ ಅವಧಿಗೆ ನೇಮಿಸಿ ನ್ಯೂಯಾರ್ಕನಲ್ಲಿನ “ಸೈನ್ಸ್ ಪಬ್ಲಿಕೇಷನ್ ಗ್ರೂಪ್” ಆದೇಶ ಹೂರಡಿಸಿದೆ. ಇವರ ಕಾರ್ಯಾವಧಿ ಮೇ ೨೦೨೮ರ ವರೆಗೆ ಇರುತ್ತದೆ. ಪ್ರತಿಷ್ಠಿತ ಅಂತರಾಷ್ರೀಯ ಜರ್ನಲ್ ವೊಂದರ ಸಂಪಾದಕೀಯ ಆಡಳಿತ ಮಂಡಳಿ ಸದಸ್ಯರಾಗಿರುವುದು ಜಿಲ್ಲೆಗೆ ಹೆಮ್ಮಯ ಸಂಗತಿಯಾಗಿದೆ.
Image
  ಕ್ರಿಶ್ಚಯನ್ ಅಭಿವೃದ್ಧಿ ನಿಗಮದ ಅರ್ಹ ಫಲಾನುಭವಿಗಳು ಸರ್ಕಾರದ ಸೌಲಭ್ಯ ಪಡೆಯಿರಿ- ಸಂಜಯ್  ಜಯ ಧ್ವಜ ನ್ಯೂಸ್ , ರಾಯಚೂರು, ಮೇ 28- ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಜಿಲ್ಲೆಯ ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಪಡೆಯಬೇಕೆಂದು ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಸಂಜಯ್ ಜಾಗೀರದಾರ್  ಹೇಳಿದರು.  ಅವರಿಂದು ನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ   ಮಾತನಾಡಿ ರಾಜ್ಯದ ವಿವಿಧ ನಿಗಮಗಳಿಂದ ಅನೇಕ ಸೇವೆ, ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಅಲ್ಪಸಂಖ್ಯಾತರ ಕಚೇರಿ ಸೇರಿದಂತೆ ನಿಗಮಕ್ಕೆ ಭೇಟಿ ನೀಡಿ ಯೋಜನೆ, ಸೌಲಭ್ಯಗಳ ಕುರಿತು ಮಾಹಿತಿ ಪಡೆಯಬೇಕು. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಸೌಲಭ್ಯ ಯೋಜನೆಗಳ ಬಗ್ಗೆ ಕರಪತ್ರಗಳನ್ನು ಹಂಚಿ ಫಲಾನುಭವಿಗಳಿಗೆ ಮಾಹಿತಿ ನೀಡುವಂತೆ ಕ್ರಮವಹಿಸಲು   ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು. 371 (ಜೆ) ಜಾರಿ ಮುಂಚೆ ಈ ಭಾಗದಲ್ಲಿ ವೈದ್ಯರ ಸಂಖ್ಯೆ ಕಡಿಮೆಯಿದ್ದು, 371(ಜೆ) ಜಾರಿ ನಂತರ ವೈದ್ಯರು ಸೇರಿದಂತೆ ಇಂಜಿನಿಯರಗಳ ಸಂಖ್ಯೆ ಹೆಚ್ಚಳವಾಗಿದೆ. ಇದಕ್ಕೆ ಮುಖ್ಯ ಕಾರಣ ಈ ಭಾಗದ ಹಿರಿಯ ರಾಜಕಾರಣಿಯಾದ ಮಲ್ಲಿಕಾರ್ಜುನ ಖರ್ಗೆ ಅವರಾಗಿದ್ದಾರೆ ಎಂದು ಹೇಳಿದರು.  ನಿಗಮದ ಕೈಪಿಡಿಯಲ್ಲಿ ಯೋಜನೆ ಕುರಿತು ಮಾಹಿತಿ ಒದಗಿಸಲಾಗಿ...
Image
ಕಮಲ್ ಹಾಸನ್ ವಿರುಧ್ಧ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ                                                      ಜಯ‌ ಧ್ವಜ ನ್ಯೂಸ್ ರಾಯಚೂರು,ಮೇ.28-                        ಕನ್ನಡದ ಬಗ್ಗೆ ಅವಹೇಳನ ರೀತಿಯಲ್ಲಿ ಮಾತನಾಡಿದ ಖ್ಯಾತ  ನಟ ಕಮಲ್ ಹಾಸನ್ ವಿರುಧ್ಧ ಕನ್ನಡ ಪರ ಸಂಘಟನೆಗಳು ಇಂದು   ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ  ಪ್ರತಿಭಟನೆ ನಡೆಸಿದವು.  ತಮಿಳು ನಾಡಿನ ಖಾಸಗಿ ಕಾರ್ಯಕ್ರಮದಲ್ಲಿ ಹಿರಿಯ ಚಿತ್ರನಟ ಅದರಲ್ಲಿಯೂ ಕನ್ನಡದಿಂದಲೇ ಚಿತ್ರರಂಗ ಪ್ರವೇಶಿಸಿ ಬೆಳೆದ ಕಮಲ ಹಾಸನ್  ಟ್ರ್ಯೂತ್ ಲೈಫ್ ಎಂಬ ಖಾಸಗಿ ಕಾರ್ಯಕ್ರಮದಲ್ಲಿ ಮೊದಲಿಗೆ ಕನ್ನಡ ಭಾಷೆ ಇರಲಿಲ್ಲ ತಮಿಳಿನಿಂದಲೇ ಕನ್ನಡ ಜನ್ಮ ತಾಳಿದೆ ಎಂದು ಹೇಳಿರುವುದು ಖಂಡನೀಯ  ಮತ್ತು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ ಇದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರುನಾಡ ಚಕ್ರವರ್ತಿ ಶಿವರಾಜ ಕುಮಾರ ಎದುರಲ್ಲಿಯೇ ಹೇಳಿಕೆ ಈ ನೀಡಿದ್ದು ಇಡೀ ಕನ್ನಡದ ಹೃದಯಗಳಿಗೆ ತುಂಬಾ ನೋವುಂಟಾಗಿದೆ, ಎದುರಿಗೆ ಕುಳಿತ ಶಿವರಾಜಕುಮಾರವರೂ ಸಹಿತ ಕಮಲ ಹಾಸನ್ ರವರ ಮಾತಿಗೆ ವಿರೋಧವಾಗಿ ಏನನ...
Image
  ಡ್ರಗ್ಸ್ ಬಳಕೆ ತಡೆಗಟ್ಟಲು ಪ್ರತಿಯೊಬ್ಬರ ಸಹಕಾರ ಅಗತ್ಯ -ಜಿಲ್ಲಾಧಿಕಾರಿ ನಿತೀಶ್.ಕೆ ಜಯ ಧ್ವಜ ನ್ಯೂಸ್ ,ರಾಯಚೂರು, ಮೇ 27-   ಸಾಮಾನ್ಯ ಜನತೆಗೆ ಡ್ರಗ್ಸ್ ನಿಂದ ಉಂಟಾಗುವ ಹಾನಿಗಳ ಕುರಿತು ಅರಿವು ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ನವೋದಯ ಮೆಡಿಕಲ್ ಕಾಲೇಜ್ ಸಹಯೋಗದಲ್ಲಿ ಇಂದು ಡ್ರಗ್ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ನಗರದ ನವೋದಯ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಮಾತನಾಡಿ, ನಮ್ಮ ಸಮಾಜದ ರಕ್ಷಣೆಗೆ ಇಂತಹ ಜಾಗೃತಿ ಅವಶ್ಯಕವಾಗಿದೆ ಯುವಜನತೆ ಸಮಾಜದ ಶಕ್ತಿಯಾಗಿದೆ. ಡ್ರಗ್ಸ್ ಬಳಕೆಯಿಂದಾಗಿ ಅವರ ಉಜ್ವಲ ಭವಿಷ್ಯ ಧ್ವಂಸವಾಗುತ್ತಿದೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬರು ಸಹಕಾರ ನೀಡಬೇಕು. ಡ್ರಗ್ಸ್ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ, ಮಾನಸಿಕವಾಗಿ ಕೂಡಾ ವ್ಯಕ್ತಿಯನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ ಅಲ್ಲದೆ ಮಕ್ಕಳನ್ನು ಸೂಕ್ತ ಮಾರ್ಗದಲ್ಲಿ ಬೆಳೆಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.  ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಪುಟ್ಟಮಾದಯ್ಯ ಅವರು ಮಾತನಾಡಿ, ಸಮಾಜಕ್ಕೆ ಮಾರಕವಾಗಿರುವ ಡ್ರಗ್ಸ್, ಗಾಂಜಾ, ಅಫೀಮ್ ಸೇವನೆಯಿಂದ ವ್ಯಕ್ತಿಯ ಆರೋಗ್ಯ ಹಾಳಾಗುತ್ತದೆ. ಆರೋಗ್ಯ ಹಾಳಾದರೆ ಸಮಾಜವು ಹಾಳಾಗುತ್ತದೆ. ಸಮಾಜವು ಹಾಳಾಗಲು ಅವಕಾಶ ನೀಡದೆ ಜಿಲ್ಲೆಯ ಪ್ರತಿಯೊಬ್ಬರ ಸಹಕಾರದೊಂದಿಗೆ ಡ್ರಗ್ಸ್ ಮುಕ್ತ ಜಿಲ್ಲ...
Image
  ನಗರದಲ್ಲಿ ಹೆಚ್ಚುತ್ತಿರುವ  ಕೊಲೆ ಪ್ರಕರಣಗಳಿಂದ ನಾಗರಿಕರಲ್ಲಿ  ಆತಂಕ - ಡಾ.ಬಾಬುರಾವ್ ಕಳವಳ  ಜಯ ಧ್ವಜ ನ್ಯೂಸ್ ರಾಯಚೂರು, ಮೇ.27 - ನಗರದಲ್ಲಿ ಕೊಲೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ  ನಾಗರಿಕರಲ್ಲಿ ಆತಂಕ ಮನೆ ಮಾಡಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಹಾಗೂ ಸಮಾಜ ಸೇವಕ ಡಾ. ಬಾಬುರಾವ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ  ಹೇಳಿಕೆ ನೀಡಿರುವ ಅವರು, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಸಂಪೂರ್ಣ ವಿಫಲತೆ ಎದ್ದು ಕಾಣುತ್ತಿದೆ ಎಂದು ಆರೋಪಿಸಿರುವ ಅವರು, ನಗರದಲ್ಲಿ ಗಾಂಜಾ ಮತ್ತಿತರರ ಮಾದಕ ವಸ್ತುಗಳ ಮಾರಾಟ ಹೆಗ್ಗಿಲ್ಲದೆ ನಡೆಯುತ್ತಿದ್ದು, ಗ್ಯಾಬ್ಲಿಂಗ್, ಜೂಜಾಟ ಎಲ್ಲೆಂದರಲ್ಲಿ ನಡೆಯುತ್ತಿವೆ. ಯುವಕರಿಗೆ ಕಾನೂನಿನ ಭಯ ಇಲ್ಲದಂತೆ ವರ್ತಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ನಡು ರಸ್ತೆಯಲ್ಲಿಯೇ ಪೊಲೀಸರ ಭಯವಿಲ್ಲದೆ ಕೆಲ ಯುವಕರು ರಸ್ತೆಯಲ್ಲಿಯೇ ತೂರಾಡುತ್ತ ಮಹಿಳೆಯರು, ಯುವತಿಯರು ಇದ್ದಾರೆ ಎನ್ನುವ ಪರಿಜ್ಞಾನ ವಿಲ್ಲದೆ ಅನುಚಿತವಾಗಿ ವರ್ತಿಸುತ್ತಿರುವುದರಿಂದ ನಾಗರಿಕರು ಭಯಭೀತರಾಗಿದ್ದಾರೆ ಎಂದಿದ್ದಾರೆ. ಪೊಲೀಸರು ಪೆಟ್ರೋಲಿಂಗ್ ಹೆಚ್ಚಿಸಬೇಕು ಮತ್ತು ಕಾನೂನು ಕೈಗೆ ತೆಗೆದುಕೊಳ್ಳುತ್ತಿರುವ ಪ್ರಕರಣಗಳನ್ನು ಹೆಚ್ಚಳವಾಗುತ್ತಿರುವುದರಿಂದ ಪೊಲೀಸರು ಅದನ್ನು ತಹಬದಿಗೆ ತರಲು ಏನು ಕ್ರಮ ಕೈಗೊಳ್ಳದಿರುವುದು ನಾಗರಿಕರಲ...
Image
  ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ವರ್ಚುವಲ್ ಮೂಲಕ ರಾಜ್ಯಪಾಲರು ಭಾಗಿ:                                                                                          ಭಾರತವನ್ನು ತಂತ್ರಜ್ಞಾನ, ನಾವೀನ್ಯತೆ, ನೈತಿಕತೆಯ ಜಾಗತಿಕ ಕೇಂದ್ರವನ್ನಾಗಿ ಮಾಡುವಲ್ಲಿ ಕೃಷಿ ವಿದ್ಯಾರ್ಥಿಗಳ ಪಾತ್ರ ಪ್ರಮುಖ- ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಜಯ ಧ್ವಜ ನ್ಯೂಸ್, ರಾಯಚೂರು ಮೇ, 26 -                                "ಭಾರತವನ್ನು ಆಹಾರ ಮತ್ತು ಕೃಷಿ ಉತ್ಪಾದನೆಯ ಜೊತೆಗೆ ತಂತ್ರಜ್ಞಾನ, ನಾವೀನ್ಯತೆ ಮತ್ತು ನೈತಿಕತೆಯ ಜಾಗತಿಕ ಕೇಂದ್ರವನ್ನಾಗಿ ಮಾಡುವಲ್ಲಿ ಕೃಷಿ ವಿದ್ಯಾರ್ಥಿಗಳ ಪಾತ್ರ ಪ್ರಮುಖ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ  ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.  ಹವಾಮಾನ ವೈಪರೀತ್ಯ ಹಿನ್ನಲೆ ಹೆಲಿಕಾಪ್ಟರ್ ಹಾರಾಟ ಅನಾನುಕೂಲತೆ ಕಾರಣದಿಂದ  ಬಳ್ಳಾರಿಯಿಂದಲೆ ವರ್ಚುವಲ್ ಮೂಲ...
Image
  ವರ್ಚುವಲ್ ಮೂಲಕ  ಘಟಿಕೋತ್ಸವಕ್ಕೆ ರಾಜ್ಯಪಾಲರು ಮತ್ತು ಕೃಷಿ ಸಚಿವರಿಂದ ಚಾಲನೆ.                                ಜಯ ಧ್ವಜ ನ್ಯೂಸ್ ರಾಯಚೂರು,ಮೇ.26 -                    ಹವಾಮಾನ ವೈಪರೀತ್ಯದಿಂದ ನಗರದ ಕೃಷಿ ವಿವಿಯಲ್ಲಿ ಆಯೋಜಿಸಿದ ಘಟಿಕೋತ್ಸವಕ್ಕೆ ಗೈರು ಹಾಜರಾದ ರಾಜ್ಯ ಪಾಲರು ಮತ್ತು ಕೃಷಿ ಸಚಿವರು ವರ್ಚುವಲ್ ಮೂಲಕ ತಾವಿದ್ದ ಸ್ಥಳದಿಂದಲೇ ಘಟಿಕೋತ್ಸವ ಕ್ಕೆ ಚಾಲನೆ ನೀಡಿದರು. ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಘಟಿಕೋತ್ಸವಕ್ಕೆ ಘನತವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮತ್ತು ಕೃಷಿ ಸಚಿವ ಚೆಲುವರಾಯಸ್ವಾಮಿ ಚಾಲನೆ ನೀಡಿದರು. ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ವಿವಿ ಸಾಧನೆ ಮತ್ತು ಶೈಕ್ಷಣಿಕ ಪ್ರಗತಿ ಬಗ್ಗೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತೀಯ ವಿವಿಗಳ ಒಕ್ಕೂಟ ಮಹಾಕಾರ್ಯದರ್ಶಿ ಡಾ.ಪಂಕಜಾ ಮಿತ್ತಲ್,  ಕುಲ ಸಚಿವರಾದ ಡಾ.ಕೆ.ಆರ್ ದುರುಗೇಶ ಸೇರಿದಂತೆ ವಿವಿ ಆಡಳಿತ ಮಂಡಳಿ ಸದಸ್ಯರು , ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೈತರಾದ ದೇವೆಂದ್ರಪ್ಪ ಶಂಕ್ರಪ್ಪ ಬಳ್ಳೂಟಗಿ ಇವರಿಗೆ ಗೌರವ ಡಾಕ್ಟರೇಟ್ ಮತ್ತು ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಚಿನ್ನ...
Image
  ಹವಾಮಾನ ವೈಪರೀತ್ಯ : ಇಳಿಯದ ರಾಜ್ಯಪಾಲರ , ಸಚಿವರ ಹೆಲಿಕಾಪ್ಟರ್ ಘಟಿಕೋತ್ಸವಕ್ಕೆ ಗೈರು                                                                                         ಜಯ ಧ್ವಜ ನ್ಯೂಸ್, ರಾಯಚೂರು,ಮೇ.26 -                          ಜಿಟಿ ಜಿಟಿ ಮಳೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ರಾಜ್ಯಪಾಲರು ಹಾಗೂ ಕೃಷಿ ಸಚಿವರ ಹೆಲಿಕಾಪ್ಟರ್ ಇಳಿಯಲು ಅನಾನುಕೂಲತೆ ಕಾರಣದಿಂದ ಕೃಷಿ ವಿವಿ ಯಲ್ಲಿ ಆಯೋಜಿಸಲಾಗಿದ್ದ 14 ನೆ ಘಟಿಕೋತ್ಸವಕ್ಕೆ ಗೈರಾಗಿದ್ದಾರೆ. ಬೆಳಿಗ್ಗೆ  11 ಗಂಟೆಗೆ ವಿವಿ ಸಭಾಂಗಣದಲ್ಲಿ ಕಾರ್ಯಕ್ರಮ ನಿಗದಿಯಾಗಿತ್ತು ಆದರೆ ಬೆಂಗಳೂರಿನಿಂದ ನಿರ್ಗಮಿಸಿದ   ಉಭಯರ ಹೆಲಿಕಾಪ್ಟರ್ ಜಿಂದಾಲ್ ವಿಮಾನ ನಿಲ್ದಾಣದಿಂದ ವಾಪಸ್ ಬೆಂಗಳೂರಿನತ್ತ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Image
  ಓಪೆಕ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸುವಂತೆ ಡಾ.ಬಾಬುರಾವ್ ಆಗ್ರಹ  ಜಯ ಧ್ವಜ ನ್ಯೂಸ್ ರಾಯಚೂರು,ಮೇ.25-               ನಗರದ ಒಪೆಕ್ ಆಸ್ಪತ್ರೆಗೆ ಅತ್ಯಗತ್ಯವಾಗಿ ಬೇಕಾಗಿರುವ ತಜ್ಞ ವೈದ್ಯರನ್ನು ಕೂಡಲೇ ನೇಮಕ ಮಾಡಿಕೊಳ್ಳುವಂತೆ  ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಡಾ.ಬಾಬುರಾವ್ ಆಗ್ರಹಿಸಿದ್ದಾರೆ . ಈ ಕುರಿತು ಪತ್ರಿಕಾ  ಪ್ರಕಟಣೆ ನೀಡಿರುವ ಅವರು,ನಗರದ ಒಪೆಕ್ ಆಸ್ಪತ್ರೆ ಹೊಸ ಕಾಯಕಲ್ಪ ದೊಂದಿಗೆ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಉತ್ತಮ ಚಿಕಿತ್ಸೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಜನರ ಆಶೋತ್ತರಗಳಿಗೆ ಸರ್ಕಾರ ಹಾಗೂ ಉಸ್ತುವಾರಿ ಸಚಿವರು ಮುತುವರ್ಜಿ ವಹಿಸಿದ್ದರಿಂದ ಆಸ್ಪತ್ರೆಗೆ ಹೊಸ ಕಳೆ ಬಂದಿದೆ. ಆದರೆ ಎಂಡೋಕ್ರೈನೋಲಾಜಿಸ್ಟ್ ಸೇರಿದಂತೆ ಅವಶ್ಯಕವಾಗಿರುವ ತಜ್ಞ ವೈದ್ಯರ ನೇಮಕ ಮಾಡಿಕೊಳ್ಳಬೇಕಾಗಿದೆ ಎಂದು ಆಗ್ರಹಿಸಿರುವ ಅವರು,ಓಪೆಕ್ ಕ್ಯಾಸುವೆಲ್ಟ್ ನಲ್ಲಿ ಮೂವರು ಎಂಬಿಬಿಎಸ್ ವೈದ್ಯರು ಕರ್ತವ್ಯ ನಿರ್ವಹಿಸಬೇಕು. ಈಗಿರುವ ವೈದ್ಯರಲ್ಲಿ ಬಹುತೇಕರು ತಾತ್ಕಾಲಿಕವಾಗಿ ನೇಮಕಗೊಂಡವರಾಗಿದ್ದು ಅವರನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.  ಡೀನ್ ಡಾ. ರಮೇಶ ಬಿ.ಎಚ್. ಹಾಗೂ...
Image
  ಬಿಜನಗೇರಾ: ಗರುಡ ಗಂಬ ಸ್ಥಾಪನೆ ವೇಳೆ ತಪ್ಪಿದ ಭಾರಿ ಅನಾಹುತ.                                                                                                                      ಜಯ ಧ್ವಜ ನ್ಯೂಸ್ ರಾಯಚೂರು,ಮೇ.25 -                    ತಾಲೂಕಿನ ಬಿಜನಗೇರಾ ಗ್ರಾಮದ ಆಂಜಿನೇಯ ದೇವಸ್ಥಾನ ಉದ್ಘಾಟನೆ ಸಮಾರಂಭದಲ್ಲಿ ಗರುಡ ಗಂಬ ಸ್ಥಾಪನೆ ವೇಳೆ ಪವಾಡ ಸದೃಶ ರೀತಿಯಲ್ಲಿ  ಭಾರಿ ಅನಾಹುತ ತಪ್ಪಿದ ಘಟನೆ ಜರುಗಿದೆ.                                                                             ಬೆಳಿಗ್ಗೆ ದೇವಸ್ಥಾ...
Image
  ನಗರಕ್ಕೆ 40 ಕೋಟಿ. ರೂ ವೆಚ್ಚದ ಸಭಾಂಗಣ ಮಂಜೂರು: ಡಾ.ರಝಾಕ್ ಉಸ್ತಾದ್ ಸ್ವಾಗತ                                  ಜಯ ಧ್ವಜ ನ್ಯೂಸ್ ರಾಯಚೂರು,ಮೇ.24-                     ನಗರದಲ್ಲಿ ಸಭಾಭವನ‌ ನಿರ್ಮಾಣಕ್ಕೆ ಕೆಕೆಆರ್.ಡಿ.ಬಿ ಮ್ಯಾಕ್ರೋ ಅನುದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಇವರ ಶಿಫಾರಸ್ಸಿನಂತೆ ಸರಕಾರ ಆಡಳಿತಾತ್ಮಕ ಅನುಮೋದನೆ‌ ನೀಡಿರುವದನ್ನು  ಕೆಪಿಸಿಸಿ ಮಾಧ್ಯಮ ವಿಭಾಗದ ರಾಜ್ಯ ವಕ್ತಾರ ಡಾ.ರಝಾಕ್ ಉಸ್ತಾದ್ ಸ್ವಾಗತಿಸಿದ್ದಾರೆ. ರಾಯಚೂರು ನಗರವು ಜಿಲ್ಲಾ ಕೇಂದ್ರವಾಗಿದ್ದು ಸಾಂಸ್ಕೃತಿಕ ಸಮಾರಂಭಗಳನ್ನು ನಡೆಸಲು ಎಲ್ಲರೂ‌ ರಂಗಮಂದಿರದ‌ ಮೇಲೆ ಅವಲಂಬಿತರಾಗಿದ್ದು, ಇದರಿಂದ‌ ಕಾರ್ಯಕ್ರಮಗಳನ್ನು ನಡೆಸಲು‌ ಅನಾನುಕೂಲತೆ ಉಂಟಾಗುತ್ತಿರುವದನ್ನು‌ ವಿಧಾನ‌ ಪರಿಷತ್  ಸದಸ್ಯರಾದ ಎ.ವಸಂತಕುಮಾರ, ಶಾಸಕರಾದ ಹಂಪನಗೌಡ ಬಾದರ್ಲಿ ಹಾಗೂ ಬಸನಗೌಡ ದದ್ದಲ್ ಇವರು ಸಲ್ಲಿಸಿದ ಪ್ರಸ್ತಾವನೆಯನ್ನು ಮನಗೊಂಡು ಡಾ.ಶರಣ ಪ್ರಕಾಶ ಪಾಟೀಲ್‌ ಅವರು 2024-25ನೇ ಸಾಲಿನ‌ ಕೆಕೆಆರ್.ಡಿಬಿ ಯ ಮ್ಯಾಕ್ರೋ ಅನುದಾನದಲ್ಲಿ ಸುಮಾರು 5000 ಜನ‌ ಕೂಡುವ ಆಸನ ಉಳ್ಳ ಬೃಹತ ಸಭಾ ಭವನ‌ ನಿರ್ಮಾಣಕ್ಕೆ 40 ಕೋ.ರೂ‌ ಅನುದಾನ‌ ಒದಗಿಸಿ ಮಂಜೂರಾತಿ ನೀಡ...
Image
ಆರ್ಯ ಈಡಿಗ ಸಮಾಜದಿಂದ ಕುಮಾರ್ ಬಂಗಾರಪ್ಪಗೆ ಸನ್ಮಾನ.                                                                                             ಜಯ ಧ್ವಜ ನ್ಯೂಸ್ ರಾಯಚೂರು,ಮೇ.24-         ನಗರಕ್ಕಾಗಮಿಸಿದ ಮಾಜಿ ಸಚಿವರಾದ ಎಸ್. ಕುಮಾರ್ ಬಂಗಾರಪ್ಪ  ಅವರನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ  ಬಾಬು ರಾವ್ ಆತ್ಮೀಯವಾಗಿ   ಸನ್ಮಾನಿಸಿದರು.          ಆರ್ಯ ಈಡಿಗ ಸಮಾಜ ರಾಜ್ಯ ಆಯೋಜನಾ ಕಾರ್ಯದರ್ಶಿ ಮಂಜುನಾಥ ಹಾನಗಲ್, ಜಿಲ್ಲಾಧ್ಯಕ್ಷರಾದ ಎಂ. ನರಸನ ಗೌಡ್, ಕಾರ್ಯದರ್ಶಿಗಳಾದ  ಈರಪ್ಪ ಗೌಡ, ಖಜಾಂಚಿಗಳಾದ  ತಾಯನಗೌಡ, ಸಹ ಕಾರ್ಯದರ್ಶಿಗಳಾದ ವೀರೇಶ್ ಅಡ್ವೊಕೇಟ್, ಉಪಾಧ್ಯಕ್ಷರಾದ ಶ್ರೀನಿವಾಸ್ ಶಿಂದೆ ಮತ್ತು ಪ್ರಸನ್ನ, ಜಿಲ್ಲಾ ಉಪಾಧ್ಯಕ್ಷರು ರಾಮನ್ ಗೌಡ, ಸೋಮಶೇಖರ್, ರಂಗಲಿಂಗನಗೌಡ್ ಉಪಸ್ಥಿತರಿದ್ದರು.
Image
  ದಲಿತರ ಪಾಲಿಗೆ ಸಿದ್ದರಾಮಯ್ಯ ಎರಡನೇ ಅಂಬೇಡ್ಕರ್:              ಜೂನ್ ನಲ್ಲಿ ಒಳಮೀಸಲಾತಿ ಜಾರಿಗೆ ಸರ್ಕಾರಕ್ಕೆ ಒತ್ತಾಯ- ಹೆಚ್.ಆಂಜಿನೇಯ.                                                  ಜಯ ಧ್ವಜ ನ್ಯೂಸ್ ರಾಯಚೂರು,ಮೇ.24-              ಮುಂದಿನ ತಿಂಗಳು ಜೂನ್ ನಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಮಾಡುವಂತೆ ಸರ್ಕಾರಕ್ಕೆ ಮಾಜಿ ಸಚಿವ ಹೆಚ್.ಆಂಜಿನೇಯ ಒತ್ತಾಯಿಸಿದರು.                ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಒಳಮೀಸಲಾತಿಗಾಗಿ ದಶಕಗಳಿಂದ ಹೋರಾಟ ನಡೆಯುತಿದ್ದು ಇದೀಗ ಒಳಮೀಸಲಾತಿ ಜಾರಿಗೆ ಕಾಲ ಕೂಡಿಬಂದಿದೆ ಎಂದ ಅವರು ನಾಗ್ ಮೋಹನ್ ದಾಸ್ ಅಧ್ಯಕ್ಷತೆಯ ಆಯೋಗ ಪರಿಶಿಷ್ಟ ಜಾತಿಗಳ ಸಮೀಕ್ಷೆಗೆ ಕೈಗೊಂಡಿದ್ದು ಈ ತಿಂಗಳು ಕೊನೆ ವರೆಗೆ ಸಮೀಕ್ಷೆ ನಡೆಯಲಿದ್ದು ಮಾದಿಗ ಜನಾಂಗದವರು ಸ್ಪಷ್ಟವಾಗಿ ಮಾದಿಗರೆಂದು ಜಾತಿ ಕಾಲಂ ನಲ್ಲಿ ನಮೂದಿಸಬೇಕೆಂದರು.       ಮುಂದಿನ ತಿಂಗಳು ಒಳಮೀಸಲಾತಿ ಜಾರಿ ಮಾಡಲು ಸರ್ಕಾರಕ್ಕೆ ಒತ್ತಾಯಿಸಿದ ಅವರು ಆಧುನಿಕ ಸಲಕರಣೆ ಮೂಲಕ ...
Image
  ಯತ್ನಾಳ್ ಉಚ್ಛಾ ಟನೆಯಿಂದ ನಮ್ಮ ಧ್ವನಿ ಕುಂದಿಲ್ಲ:              ರಾಜ್ಯದಲ್ಲಿ ಅಕ್ರಮ ವಲಸಿಗರನ್ನು ಹೊರಹಾಕಬೇಕು- ಕುಮಾರ್ ಬಂಗಾರಪ್ಪ.                                                                                             ಜಯ ಧ್ವಜ ನ್ಯೂಸ್ ರಾಯಚೂರು,ಮೇ.24-            ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಉಚ್ಛಾಟನೆಯಿಂದ ನಮ್ಮ ಧ್ವನಿ ಕುಂದಿಲ್ಲ ವೆಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು. ಅವರಿಂದು ನಗರದ ಹೊರವಲಯದಲ್ಲಿರುವ ಮಾಜಿ ಸಂಸದ ಬಿ.ವಿ.ನಾಯಕ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯತ್ನಾಳ್ ನಮ್ಮ ಬಣದಲ್ಲಿ ಗುರುತಿಸಿಕೊಂಡಿದ್ದರು ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಅದು ಪಕ್ಷದ ವರಿಷ್ಠರ ತೀರ್ಮಾನವಾಗಿದ್ದು ಇದರಿಂದ ನಮ್ಮ ಧ್ವನಿ ಕುಂದಿಲ್ಲವೆಂದರು. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅಕ್ರಮವಾಗಿ ಬಾಂಗ್ಲಾದೇಶ ,ಪಾಕಿಸ್ತಾನ ವಲಸಿಗರಿದ್ದು ಅವರನ್ನು ಹೊರಹಾಕಬೇಕು ಎಂದ ಅ...
Image
  ರಾಷ್ಟ್ರ ಮಟ್ಟದಲ್ಲಿ  ಕೃಷಿ ವಿವಿಗೆ ಉತ್ತಮ ಹೆಗ್ಗಳಿಕೆ:      ಮೇ.26 ರಂದು ಕೃಷಿ ವಿವಿಯಲ್ಲಿ 14 ನೇ ಘಟಿಕೋತ್ಸವ-ಡಾ.ಎಂ.ಹನುಮಂತಪ್ಪ ಜಯ ಧ್ವಜ ನ್ಯೂಸ್ ರಾಯಚೂರು ಮೇ.24 -    ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಮೇ.26ರ ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ನಡೆಯಲಿದೆ ಎಂದು ಕೃಷಿ ವಿವಿ ಕುಲಪತಿಗಳಾದ ಡಾ.ಎಂ.ಹನುಮಂತಪ್ಪ ಅವರು ಹೇಳಿದರು.    ಅವರಿಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಅತಿಥಿ ಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ  ಮಾತನಾಡಿದರು.   ಕಾರ್ಯಕ್ರಮದಲ್ಲಿ ಘನತವೆತ್ತ ರಾಜ್ಯಪಾಲರು ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಆಗಿರುವ ಥಾವರ್ ಚಂದ್ ಗೆಹ್ಲೋಟ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ .  ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಹಾಗೂ ಕೃಷಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಅವರು ಘಟಿಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು. ಘಟಿಕೋತ್ಸವದ  ಮುಖ್ಯ ಅತಿಥಿಗಳಾಗಿ ಹಾಗೂ ಘಟಿಕೋತ್ಸವ ಮುಖ್ಯ ಭಾಷಣಕಾರರಾಗಿ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಗೌರವಾನ್ವಿತ ಮಹಾಕಾರ್ಯದರ್ಶಿಗಳಾದ ಡಾ. ಪಂಕಜ ಮಿತ್ತಲ್ ಅವರು ಆಗಮಿಸುತ್ತಿದ್ದಾರೆ. ಜೊತೆಗೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥ...
Image
  ಮಾನ್ವಿಯಲ್ಲಿ ನಡೆದ ಘಟನೆಗೆ  ಚಾಮರಸ್ ಮಾಲಿಪಾಟೀಲ್  ವಿಷಾದ.                                                                                       ಜಯ ಧ್ವಜ ನ್ಯೂಸ್ ರಾಯಚೂರು,ಮೇ.23-                 ಮಾನ್ವಿ ಯಲ್ಲಿ ರೈತರೊಂದಿಗೆ ಪ್ರತಿಭಟನೆ ವೇಳೆ ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣಾ  ಶಾವಂತಗೇರಿ ರವರಿಗೆ ಭಾವಾವೇಶದಲ್ಲಿ ಆಡಿರುವ ಮಾತಿಗೆ ವಿಷಾದ ವ್ಯಕ್ತಪಡಿಸುತ್ತೇನೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ್ ಮಾಲಿಪಾಟೀಲ್ ತಿಳಿಸಿದ್ದಾರೆ. ಮಾನ್ವಿಯಲ್ಲಿ ರೈತರು ಸಂಕಷ್ಟಕ್ಕೊಳಗಾದ ಹಿನ್ನಲೆ ಮುಷ್ಕರ ಸಂದರ್ಭದಲ್ಲಿ ಆಹಾರ ಇಲಾಖೆ ಉಪನಿರ್ದೇಶಕರಿಗೆ ತಾವು ರೈತರ ಸಮಸ್ಯೆ ಆಲಿಸುತ್ತಿಲ್ಲ ವೆಂದು ರೈತರ ಪರವಾಗಿ ನಾನು ಭಾವಾವೇಶದಲ್ಲಿ ಮಾತನಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸುತ್ತೇನೆಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ. 
Image
  ಶಕ್ತಿ ನಗರ ಪೊಲೀಸ್ ಠಾಣೆಯಲ್ಲಿ ಮಕ್ಕಳ ಸ್ನೇಹಿ ಕೋಣೆ ಉಧ್ಘಾಟನೆ    ಜಯಧ್ವಜ ನ್ಯೂಸ್ ರಾಯಚೂರು, ಮೇ.23-                                  ಮಕ್ಕಳ ವಿಶೇಷ ಪೊಲೀಸ್ ಘಟಕದ ವತಿಯಿಂದ ಇಂದು ಶಕ್ತಿ ನಗರ ಪೊಲೀಸ್ ಠಾಣೆಯಲ್ಲಿ ಮಕ್ಕಳ ಸ್ನೇಹಿ ಕೋಣೆಯನ್ನು ಪೊಲೀಸ್ ಅಧೀಕ್ಷಕರಾದ ಎಂ. ಪುಟ್ಟಮಾದಯ್ಯ ರವರು ಮಕ್ಕಳೊಂದಿಗೆ ಉದ್ಘಾಟನೆ ನೆರವೇರಿಸಿದರು . ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ  ಶ್ರೀ ಹರೀಶ್, ಪೊಲೀಸ್ ಉಪಾಧೀಕ್ಷಕರಾದ ಶಾಂತವೀರ, ಡಿಎಆರ್ ಡಿವೈಎಸ್ಪಿ ಪ್ರಮಾನಂದ ಘೋಡಕೆ  ಹಾಗೂ ಉಪವಿಭಾಗದ ಎಲ್ಲಾ ಸಿಪಿಐ ಮತ್ತು ಪಿಎಸ್ಐ ರವರು, ಸಿಬ್ಬಂದಿಗಳು ಉಪಸ್ಥಿತರಿದ್ದರು .
Image
  ಮಾನವೀಯ ಮೌಲ್ಯದ ಶಿಕ್ಷಣ ಅತ್ಯುತ್ತಮವಾದದ್ದು - ಎ.ಪಾಪಾರೆಡ್ಡಿ. ಜಯ ಧ್ವಜ ನ್ಯೂಸ್ ರಾಯಚೂರು,ಮೇ.23-    ಇಂದಿನ ಪ್ರಗತಿ ಪಥ ಯುಗದಲ್ಲಿ ಕೇವಲ ಅಂಕಗಳಿಗೆ ಮಾತ್ರ ಒತ್ತು ನೀಡದೆ ಮಕ್ಕಳಲ್ಲಿ ಸಂಸ್ಕಾರಯುತ ಹಾಗೂ ಮೌಲ್ಯಯುತವಾದ ಮಾನವೀಯತೆ ಗುಣದ ಶಿಕ್ಷಣ ಅತ್ಯಗತ್ಯವಾಗಿದೆ ಎಂದು ಮಾಜಿ ಶಾಸಕ, ಮುನ್ನೂರ ಕಾಪು ಸಮಾಜದ  ಮುಖಂಡರು ರಾಯಚೂರು ಸಾಂಸ್ಕೃತಿಕ ಹಬ್ಬದ ರುವಾರಿಗಳಾದ ಎ. ಪಾಪಾರೆಡ್ಡಿಯವರು ಹೇಳಿದರು. ನಗರದ ದೇವಿ ನಗರದಲ್ಲಿರುವ ಮಂದಾರ ನವೋದಯ ತರಬೇತಿ ಕೇಂದ್ರದ ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಸಮಸ್ತ ರಾಯಚೂರು ಜಿಲ್ಲೆಯೇ ಅತ್ಯಂತ ಕಡಿಮೆ ಅವಧಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆ ಡಾ. ಬಾಬುರಾವ್ ಎಂ. ಶೇಗುಣಶಿಯವರ ಮಂದಾರ ನವೋದಯ ಶಿಕ್ಷಣ ಸಂಸ್ಥೆ ಎಂದು ಹೇಳಲು ಹೆಮ್ಮೆ ವಿಷಯವಾಗಿದೆ ಎಂದು ಹೇಳಿದರು. ವಿಶೇಷ ಅಹ್ವಾನಿತರಾಗಿ ಆಗಮಿಸಿದ ಮಾನ್ವಿ ಸರಕಾರಿ  ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೆ.ಎಂ. ಈರಣ್ಣನವರು ಮಾತನಾಡಿ ಪ್ರಾಥಮಿಕ ಹಂತದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಯ ಮಾರ್ಗದರ್ಶನ ನೀಡಿ ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ವೇದಿಕೆಯ ಮೇಲೆ ಜಾನಪದ ಕಲಾವಿದರಾದ ಶರಣಪ್ಪ ಗೋನಾಳ, ಧಾರವಾಡದ ಫೇಸ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರದ ನಿರ್ಧೇಶಕರಾದ ಪಾಶ್ವನಾಥ ಉಪನ್ಯಾಸಕರು ಇ...
Image
  ಸಚಿವ ಪ್ರಿಯಾಂಕ್ ಖರ್ಗೆ ವಿರುಧ್ದ ಚಲುವಾದಿ ನಾರಾಯಣ ಸ್ವಾಮಿ ಅಸಭ್ಯ ಟೀಕೆಗೆ ವಸಂತ‌ಕುಮಾರ್ ಖಂಡನೆ           ಜಯ ಧ್ವಜ ನ್ಯೂಸ್ ರಾಯಚೂರು,ಮೇ.23-                ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಚಲುವಾದಿ ನಾರಾಯಣ ಸ್ವಾಮಿಯವರು ಇತ್ತೀಚಿಗೆ ಗುಲ್ಬರ್ಗಾ ನಗರಕ್ಕೆ ಭೇಟಿ ನೀಡಿದ ವೇಳೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆಯವರ ಬಗ್ಗೆ ಅಸಭ್ಯ ಟಿಪ್ಪಣಿ ಮಾಡಿ ಟೀಕಿಸಿದ್ದನ್ನು  ವಿಧಾನ ಪರಿಷತ್ ಸದಸ್ಯ ಎ.ವಸಂತ್ ಕುಮಾರ್ ಖಂಡಿಸಿದ್ದಾರೆ .                                                          ಚಲುವಾದಿ ನಾರಾಯಣಸ್ವಾಮಿಯವರು ಕಳೆದ ಮೂವತ್ತು ವರ್ಷಗಳ ಕಾಲ ಮಲ್ಲಿಕಾರ್ಜುನ ಖರ್ಗೆಯವರ ಗರಡಿಯಲ್ಲಿಯೇ ರಾಜಕೀಯವಾಗಿ ಬೆಳೆದು ಹತ್ತು ಹಲವು ಹುದ್ದೆಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಪಡೆದಿದ್ದನ್ನು ಮರೆತು ಆ ಕಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮತ್ತು ಹಗುರವಾಗಿ ಮಾತನಾಡುವದು ಸರಿಯಾದುದಲ್ಲ. ದೇಶದ ಪ್ರಧಾನ ಮಂತ್ರಿಗಳನ್ನು ಪ್ರಶ್ನೆ ಮಾಡಲು ಪ್ರಿಯಾಂಕ್ ಯಾರು ಎಂದು ಕೇಳಿರುವ ಚಲುವಾದಿ ನಾರಾಯಣಸ್ವ...
Image
  ಮಧ್ಯೆ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ - ಡಾ. ಬಾಬುರಾವ್  ಜಯ ಧ್ವಜ ನ್ಯೂಸ್ ರಾಯಚೂರು- ಮೇ.22                                          ರಾಯಚೂರಿನಿಂದ ಪುಣೆಯವರೆಗೆ ಏಕಮುಖವಾಗಿ ವಿಶೇಷ ರೈಲುಗಳು ಮೇ.23 ರಿಂದ 25ರವರೆಗೆ ಸಂಚಾರ ಮಾಡಲಿವೆ ಎಂದು ರೈಲ್ವೆ ಸಲಹಾಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ತಿಳಿಸಿದ್ದಾರೆ.  ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,   ರಾಯಚೂರು - ಪುಣೆ ಏಕ ದಿಕ್ಕಿನ ವಿಶೇಷ  ರೈಲು( ಸಂಖ್ಯೆ 01107)  ಎಲ್.ಟಿ.ಟಿ - ರಾಯಚೂರು ವಿಶೇಷವಾಗಿ ಮೇ.22 ಮತ್ತು   23 ರಂದು ಎಲ್ ಟಿ ಟಿನಲ್ಲಿ ತೆರಳುವುದು.  ರೈಲು ಸಂಖ್ಯೆ 01108 ರಾಯಚೂರು – ಎಲ್ ಟಿಟಿ ವಿಶೇಷ  ರೈಲು ಮೇ.23ರಂದು RC ನಲ್ಲಿ ತೆರಳುವುದು. ರೈಲು ಸಂಖ್ಯೆ 01110 ರಾಯಚೂರು - ಪುಣೆ ವಿಶೇಷ ರೈಲು ಮೇ. 25 ಮೇ 2025 ರಂದು ತೆರಳಲಿವೆ.    01107/08 ಸಂಖ್ಯೆಯ ರೈಲುಗಳು ಥಾಣೆ,, ಕಲ್ಯಾಣ, ಲೊನವಲಾ, ಪುಣೆ, ದೌಂಡ್, ಕುಡುರ್ವಾಡಿ, ಸೋಲಾಪುರ, ಕಲಬುರ್ಗಿ, ವಾಡಿ, ನಲ್ವಾರ್, ಯಾದ್ಗೀರ್, ಕೃಷ್ಣ, ರಾಯಚೂರುಗಳಲ್ಲಿ ನಿಲುಗಡೆಯಾಗಲಿದ್ದು,   01110 ನಂಬರಿನ ರೈಲು ಕೃಷ್ಣ, ಯಾದ್ಗೀರ್, ನಲ್ವಾರ್, ವಾಡಿ, ಕಲಬುರ್ಗಿ, ಸೋಲಾಪುರ...
Image
  ಮಂತ್ರಾಲಯ : ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭೇಟಿ.                                                      ಜಯ ಧ್ವಜ ನ್ಯೂಸ್ ರಾಯಚೂರು,ಮೇ.22-        ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಮಾಜಿ ಸಚಿವ ಹಾಗೂ ಶಾಸಕ ಹೆಚ್.ಡಿ.ರೇವಣ್ಣ ಭೇಟಿ ನೀಡಿ ರಾಯರ ಬೃಂದಾವನ ದರ್ಶನ ಪಡೆದರು.                  ನಂತರ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರಿಂದ ಆಶೀರ್ವಾದ ಪಡೆದುಕೊಂಡರು.ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
Image
  ಮೇ.25 ರಂದು ರವಿವಾರ ಶ್ರೀ ಮಹಾರಾಣ ಪ್ರತಾಪ ಸಿಂಹ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಜಯ ಧ್ವಜ ನ್ಯೂಸ್ ರಾಯಚೂರು, ಮೇ.22- ರಾಯಚೂರು ಜಿಲ್ಲಾ ರಾಜಪೂತ ಸಮಾಜದ ವತಿಯಿಂದ ಮೇ 25 ರಂದು ರವಿವಾರ ಶ್ರೀ ಮಾಹಾರಾಣ ಪ್ರತಾಪ ಸಿಂಹ ರವರ 485ನೇ  ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ ಎಂದು ರಾಜಪೂತ ಸಮಾಜದ  ಜಿಲ್ಲಾ ಅಧ್ಯಕ್ಷ ಮನೋಹರಸಿಂಗ್ ತಿಳಿಸಿದ್ದಾರೆ. ಪ್ರತಿ ವರ್ಷದಂದತೆ ಈ ವರ್ಷವೂ ನಡೆಯುವ ಈ ಜಯಂತಿ ಕಾರ್ಯಕ್ರಮವನ್ನು  ಸಂಜೆ  7 ಗಂಟೆಗೆ   ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು   ಉದ್ಘಾಟನೆ ಮಾಡಲಿದ್ದಾರೆ. ಮುಖ್ಯತಿಥಿಗಳಾಗಿ ಲೋಕಸಭಾ ಸದಸ್ಯರಾದ ಜಿ.ಕುಮಾರನಾಯಕ, ಶಾಸಕ ಡಾ.ಶಿವರಾಜ ಪಾಟೀಲ ವಿಧಾನ ಪರಿಷತ್ ಸದಸ್ಯ ಎ.ವಸಂತ್ ಕುಮಾರ್, ಮಹಾನಗರಪಾಲಿಕೆ ಮೇಯರ ನರಸಮ್ಮ ಮಾಡಿಗಿರಿ, ಪಾಲಿಕೆ ಸದಸ್ಯ ಎನ್.ಶ್ರೀನಿವಾಸ್ ರೆಡ್ಡಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನಾಾ ನಗರದ ಮಾವಿನಕೆರೆ ಬಳಿ ಇರುವ ಶ್ರೀೆ ಮಾಹಾರಾಣಾ ಪ್ರತಾಪ ಸಿಂಹಾಜೀಯರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಸಂಜೆ 4ಗಂಟೆಗೆ  ಶೋಭಾ ಯಾತ್ರೆೆ ಆರಂಭವಾಗಿ ನಗ...
Image
  ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳಿಂದ ಅಧಿಕ ಡೊನೇಷನ್ ಪಡೆದರೆ  ನಿರ್ದಾಕ್ಷಿಣ್ಯ ಕ್ರಮ: ದ್ವಿತೀಯ ಪಿಯು 3ನೇ ಪರೀಕ್ಷೆಗೆ ನೋಂದಾಯಿಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಿ- ಕೊಟ್ರಬಸಪ್ಪ ಜಯ ಧ್ವಜ ನ್ಯೂಸ್ ,ರಾಯಚೂರು, ಮೇ.22 - ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ-3 ಕ್ಕೆ ನೋಂದಾಯಿಸಿಕೊಂಡು ಪರೀಕ್ಷೆಗೆ ಹಾಜರಾಗಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೊಟ್ರಬಸಪ್ಪ.ಕೆ ಅವರು ಹೇಳಿದರು.  ಅವರಿಂದು ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ  ಮಾತನಾಡಿದರು. 2025 ದ್ವಿತೀಯ ಪಿಯುಸಿ ಪರೀಕ್ಷಾ-2ಕ್ಕೆ ಅವಕಾಶ ಕಲ್ಪಿಸಿದ್ದರಿಂದ ರಾಜ್ಯದಲ್ಲಿ 60,692 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಂತೆ ರಾಯಚೂರು ಜಿಲ್ಲೆಯಲ್ಲಿ 6,788 ವಿದ್ಯಾರ್ಥಿಗಳ ಪೈಕಿ 1625 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪ್ರತಿಶತ 23.09 ಫಲಿತಾಂಶ ಬಂದಿದೆ. ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮೂರನೇ ಪರೀಕ್ಷೆ-3ಯನ್ನು ಜೂನ್ 09 ರಿಂದ ಜೂನ್ 20ರವರೆಗೆ ನಡೆಸಲು ದಿನಾಂಕ ನಿಗದಿಪಡಿಸಿದೆ. ಆದ್ದರಿಂದ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಮೇ 28 ಅಂತಿಮ ದಿನಾಂಕವಾಗಿದ್ದು, ಅನುತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಮುಂದಿನ ಉತ್ತಮ ಭವಿಷ್ಯಕ್ಕಾಗಿ ವಿದ್ಯಭ್ಯಾಸ ಮುಂದುವರಿಸಬೇಕ...
Image
  ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಉನತ್ತೀಕರಿಸುವಂತೆ ಎ.ವಸಂತಕುಮಾರ್ ಮನವಿ                             ಜಯಧ್ವಜ ನ್ಯೂಸ್ ರಾಯಚೂರು,ಮೇ.21- ನಗರದಲ್ಲಿರುವ ಉರ್ದು ಮಾದ್ಯಮ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಉನತ್ತೀಕರಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಹಾಗೂ ವಸತಿ ಖಾತೆ ಸಚಿವರಾದ ಬಿ.ಝೆಡ್.ಜಮೀರ ಅಹ್ಮದ ಖಾನ್ ರವರಿಗೆ ವಿಧಾನ ಪರಿಷತ್ ಸದಸ್ಯರಾದ ಎ.ವಸಂತ ಕುಮಾರ್ ಮನವಿ ಮಾಡಿದ್ದಾರೆ.                                                           ಸರಕಾರ ೨೦೨೫-೨೬ನೇ ಸಾಲಿನಲ್ಲಿ ರಾಜ್ಯ ಸರಕಾರದ ೧೦೦ ಉರ್ದು ಮಾದ್ಯಮ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಉನತ್ತೀಕರಿಸುವದು ಮತ್ತು ಅಭಿವೃದ್ದಿ ಪಡಿಸುವ ಯೋಜನೆ ಘೋಷಿಸಿದೆ, ಅದರಂತೆ ತಮ್ಮ ಇಲಾಖೆಯು ಸದರಿ ಶಾಲೆಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತಿದ್ದು  ರಾಯಚೂರು ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪೂರೈಸುತ್ತಿದ್ದು, ಜಿಲ್ಲೆಯಲ್ಲಿ ಸಾಕಷ್ಟು ...