Posts

Showing posts from June, 2022

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಸ್ಕಿ ತಾಲೂಕು ಘಟಕದ ಅಧ್ಯಕ್ಷರಾಗಿ ಪ್ರಕಾಶ ಮಸ್ಕಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಇಂದರಪಾಷಾ ಚಿಂಚರಕಿ ಅವಿರೋಧವಾಗಿ ಆಯ್ಕೆ.

Image
  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಸ್ಕಿ ತಾಲೂಕು ಘಟಕದ ಅಧ್ಯಕ್ಷರಾಗಿ ಪ್ರಕಾಶ ಮಸ್ಕಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಇಂದರಪಾಷಾ ಚಿಂಚರಕಿ ಅವಿರೋಧವಾಗಿ ಆಯ್ಕೆ.  ರಾಯಚೂರು,ಜೂ.29- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಅಧ್ಯಕ್ಷತೆಯಲ್ಲಿ ಮಸ್ಕಿಯ ಪತ್ರಿಕಾ ಭವನದಲ್ಲಿ  ನೂತನ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ ಮಸ್ಕಿ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಇಂದರಪಾಷಾ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಪಾಷಾ, ಉಪಾಧ್ಯಕ್ಷ ಶಿವಪ್ಪ ಮಡಿವಾಳರ, ಕಾರ್ಯದರ್ಶಿ ಅಜೀಜ ಮಸ್ಕಿ, ಕಾರ್ಯಕಾರಿ ಸಮಿತಿ ಸದಸ್ಯ ಸಿದ್ಧಯ್ಯಸ್ವಾಮಿ, ಹಿರಿಯ ಪತ್ರಕರ್ತರಾದ ವೀರೇಶ ಸೌದ್ರಿ, ಉಮೇಶ್ವರಯ್ಯ, ಮಲ್ಲಿಕಾರ್ಜುನ ಚಿಲ್ಕರಾಗಿ, ಹನುಮೇಶ ಬಳಗಾನೂರ ಇದ್ದರು.

ಅಗ್ನಿಪಥ ಯೋಜನೆ ಹಿಂಪಡೆಯಲು ಮುಜೀಬುದ್ದೀನ್ ಆಗ್ರಹ

Image
  ರಾಯಚೂರು,ಜೂ.29- ಸರ್ಕಾರ  ಅಗ್ನಿಪಥ ಯೋಜನೆ ಜಾರಿಗೆ ತಂದಿದ್ದು   ಇದು ದೇಶದ ಭದ್ರತೆ‌ ಮತ್ತು ಯುವ ಸಮುದಾಯಕ್ಕೆ ಹಾನಿ ಉಂಟು ಮಾಡಲಿದ್ದು ಕೂಡಲೆ ಹಿಂಪಡೆಯಬೇಕೆಂದು  ಕಾಂಗ್ರೆಸ್ ‌ಮುಖಂಡ ಮುಜೀಬುದ್ದೀನ್ ಆಗ್ರಹಿಸಿದ್ದಾರೆ.                               ಪತ್ರಿಕಾ ಹೇಳಿಕೆ ನೀಡಿರುವ ಅವರು,     ಅಗ್ನಿಪಥ ಯೋಜನೆಯಿಂದಾಗಿ ದೇಶದ ಯುವಕರ ಬಾಳು ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದಂತಾಗಿದೆ. ಈ ಯೋಜನೆಯಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುವುದಿಲ್ಲ. ದೇಶಕ್ಕೆ ಮಾರಕವಾಗಿರುವ ಈ ಯೋಜನೆಯನ್ನು ಹಿಂಪಡೆದು ಸೈನ್ಯ ಸೇರುವ ಯುವಕರಿಗೆ ಭದ್ರತೆ ನೀಡಬೇಕೆಂದು ಮನವಿ ಮಾಡಿದ್ದಾರೆ.                                           ಲಾಲ್‍ಬಹದ್ದೂರ್‌ ಶಾಸ್ತ್ರಿಯವರು ಹೇಳಿದ ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷವಾಕ್ಯದೊಂದಿಗೆ ದೇಶದ ರೈತರು ಮತ್ತು ದೇಶವನ್ನು ಕಾಯುವ ಸೈನಿಕರು ನಮ್ಮ ಎರಡು ಕಣ್ಣುಗಳಿದ್ದಂತೆ ಎಂದು ನಂಬಿದವರು ನಾವು.                 ಆದರೆ ಮೋದಿ ನೇತೃತ್ವದ ಸರ್ಕಾರ ವೀರ ಯೋಧರ ತ್ಯಾಗ ಬಲಿದಾನಕ್ಕೆ ಬೆಲೆ ಕೊಡುತ್ತಿಲ್ಲ ಎಂದು ಕಿಡಿಕಾರಿದರು.    ಅಗ್ನಿಪಥ ಯೋಜನೆಯನ್ನು ಹಿಂಪಡೆದು ಮೊದಲು ಜಾರಿಯಲ್ಲಿದ್ದ ಸೇನಾ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಬೇಕು . ರಕ್ಷಣಾ ಪಡೆಗಳಲ್ಲಿ ಕಾಯಂ ಉದ್ಯೋಗಕ್ಕೆ ನೇಮಕಗೊಳ್ಳಲು ಜನರ ಕೊರತೆ ಇಲ್ಲದ ಭಾರತದಂತಹ ದೇಶಕ್ಕೆ ಇಂತಹ ನೀತಿ ಅಗತ್ಯವೇ ಎಂದು  ಪ್ರಶ್ನಿಸಿರುವ ಅವರು ಅಲ್ಪಾವಧಿ ಕರ್ತವ್

ಲಿಂಗಸೂಗೂರು ತಾಲ್ಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಗುರುರಾಜ ಗೌಡೂರು, ಪ್ರಧಾನ ಕಾರ್ಯದರ್ಶಿಯಾಗಿ ಅಮರಯ್ಯ ಘಂಟಿ ಅವಿರೋಧ ಆಯ್ಕೆ

Image
  ಲಿಂಗಸೂಗೂರು ತಾಲ್ಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಗುರುರಾಜ ಗೌಡೂರು, ಪ್ರಧಾನ ಕಾರ್ಯದರ್ಶಿಯಾಗಿ ಅಮರಯ್ಯ ಘಂಟಿ ಅವಿರೋಧ ಆಯ್ಕೆ ರಾಯಚೂರು,ಜೂ.29-  ಕಾರ್ಯನಿರತ ಪತ್ರಕರ್ತರ ಸಂಘದ ಲಿಂಗಸುಗೂರು ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆ ಜಿಲ್ಲಾಧ್ಯಾಕ್ಷ ಆರ್. ಗುರುನಾಥ ಅಧ್ಯಕ್ಷತೆಯಲ್ಲಿ ಇಂದು ಪತ್ರಿಕಾ ಭವನದಲ್ಲಿ ನಡೆಯಿತು. ತಾಲ್ಲೂಕ ಅಧ್ಯಕ್ಷರಾಗಿ ಗುರುರಾಜ ಗೌಡೂರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಮರಯ್ಯ ಘಂಟಿಯವರು ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಪಾಷ ಹಟ್ಟಿ, ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಮಡಿವಾಳ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದಯ್ಯಸ್ವಾಮಿ, ಶಿವರಾಜ ಕೆಂಬಾವಿ, ಅಮರೇಶ ಕಲ್ಲೂರು, ಶರಣಯ್ಯ ಒಡೆಯರ್ , ಅಮ್ಜದ್ ಕಂದಗಲ್, ರವಿಕುಮಾರ, ಬಲಭೀಮರಾವ್ ಕುಲಕರ್ಣಿ, ದೇವಣ್ಣ ಕೋಡಿಹಾಳ ಹಾಗೂ ಹಿರಿಯ ಪತ್ರಕರ್ತರಾದ ಬಿ.ಎ.ನಂದಿಕೋಲಮಠ, ಗುರುರಾಜ ಮುತಾಲಿಕ, ಖಾಜಾ ಹುಸೇನ, ಆರ್.ವಿ.ಗುಮಾಸ್ತೆ, ಘನಮಠದಯ್ಯ, ನಾಗರಾಜ ಮಸ್ಕಿ, ಅಮರೇಶ ಬಲ್ಲಟಗಿ ಮತ್ತು ಲಿಂಗಸುಗೂರು, ಮುದಗಲ್ ಮತ್ತು ಹಟ್ಟಿ ಪರ್ತಕರ್ತರು ಇದ್ದರು.

ಇಸ್ಕಾನ್ ಸಂಸ್ಥೆಯಲ್ಲಿ ದ್ವೇಷ, ಹಿಂಸೆಯನ್ನು ಪ್ರಚೋದಿಸುವುದಿಲ್ಲ: ಜು.೧ ರಂದು ಶಾಂತಿ, ಸಮೃದ್ಧಿ ಹಾಗೂ ಮಳೆಗಾಗಿ ಕೀರ್ತನ ಮೇಳ-ವರದ ಕೃಷ್ಣ ದಾಸ

Image
  ಇಸ್ಕಾನ್ ಸಂಸ್ಥೆಯಲ್ಲಿ  ದ್ವೇಷ,  ಹಿಂಸೆಯನ್ನು ಪ್ರಚೋದಿಸುವುದಿಲ್ಲ ಜು.೧ ರಂದು ಶಾಂತಿ, ಸಮೃದ್ಧಿ ಹಾಗೂ ಮಳೆಗಾಗಿ ಕೀರ್ತನ ಮೇಳ-ವರದ ಕೃಷ್ಣ ದಾಸ ರಾಯಚೂರು,ಜೂ.೨೯-ನಗರದ ಆಶಾಪೂರು ರಸ್ತೆಯ  ಇಸ್ಕಾನ್ ದೇವಸ್ಥಾನದಲ್ಲಿ ಜು.೧ ರಂದು ದೇಶದಲ್ಲಿ ಶಾಂತಿ ,ಸಮೃದ್ಧಿ ಹಾಗೂ ಉತ್ತಮ ಮಳೆಗಾಗಿ ೧೨ ಗoಟೆಗಳ ಕಾಲ ತಡೆರಹಿತ ಭಜನೆ ಸಂಕೀರ್ತನೆಗಳ ಕೀರ್ತನ ಮೇಳ ಆಯೋಜಿಸಲಾಗಿದೆ ಎಂದು ರಾಯಚೂರು ಇಸ್ಕಾನ್ ದೇವಸ್ಥಾನದ ಅಧ್ಯಕ್ಷ ವರದಕೃಷ್ಣ ದಾಸ್ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಗರದ ಇಸ್ಕಾನ್ ದೇವಸ್ಥಾನದಲ್ಲಿ ವರ್ಷಪೂರ್ತಿ ಅನೇಕ ಧಾರ್ಮಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತ ಬರಲಾಗಿದ್ದು ಇದೀಗ ಜು.೧ ರಂದು ೧೨ ಗಂಟೆಗಳ ತಡೆರಹಿತ ಬಜನೆ ಆಯೋಜಿಸಲಾಗಿದ್ದು ಭಕ್ತರು ಪಾಲ್ಗೊಳ್ಳಬಹುದೆಂದ ಅವರು ಕಲ್ಪತರು ೨೦೨೨ ಕಾರ್ಯಕ್ರಮದಲ್ಲಿ ಶಾಲಾ ಕಾಳೇಜು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು ಆ.೧೨ ರಂದು ಬಲರಾಮ ಜಯಂತಿ,ಆ.೧೯ ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮುಂತಾದ ಕಾರ್ಯಕ್ರಮ ಆಯೋಜಿಲಾಗಿದೆ ಎಂದರು. ದೇಶವಲ್ಲದೆ ವಿದೇಶಗಳಲ್ಲಿ ಸುಮಾರು ೧೫೦೦ ಸ್ಥಳಗಳಲ್ಲಿ ಇಸ್ಕಾನ್ ಸಂಸ್ಥೆಯಿದ್ದು ವೈದಿಕ ಪರಂಪರೆ ಹಾಗೂ ಭಾರತೀಯ ಸಂಪ್ರದಾಯ ಬೋಧನೆ ಪ್ರಮುಖವಾಗಿದ್ದು ಇಸ್ಕಾನ್ ಸಂಸ್ಥೆಗಳಲ್ಲಿ ದ್ವೇಷ ಹಾಗೂ ಹಿಂಸೆಯನ್ನು ಪ್ರಚೋದಿಸುವುದಿಲ್ಲವೆಂದ ಅವರು ಇಸ್ಕಾನ್ ದೇವಸ್ಥಾನಕ್ಕೆ ಎಲ್ಲ ಧರ್ಮದವರು ಬರಬಹುದೆಂದರು. ಮಾದರಿ ಸಮಾಜ ನಿರ್ಮಾ

ಜು.1 ರಂದು ಏಮ್ಸ್ ಹೋರಾಟ 50 ದಿನಕ್ಕೆ: ಐದು ಸಾವಿರ ಜನರಿಂದ ರಕ್ತ ಸಹಿ ಸಂಗ್ರಹ ಚಳುವಳಿ-ಬಸವರಾಜ ಕಳಸ.

Image
  ಜು.1 ರಂದು ಏಮ್ಸ್ ಹೋರಾಟ 50 ದಿನಕ್ಕೆ: ಐದು ಸಾವಿರ ಜನರಿಂದ ರಕ್ತ ಸಹಿ ಸಂಗ್ರಹ ಚಳುವಳಿ-ಬಸವರಾಜ ಕಳಸ.      ರಾಯಚೂರು,ಜೂ.29- ಏಮ್ಸ್ ಪಡೆಯಲು ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟ ಜು.1 ರಂದು 50 ದಿನ ಪೂರೈಸುತ್ತಿರುವ ಹಿನ್ನಲೆಯಲ್ಲಿ ಅಂದು ಏಮ್ಸ್ ಮಂಜೂರಾತಿಗೆ ಆಗ್ರಹಿಸಿ ಸುಮಾರು ಐದು ಸಾವಿರ ಜನರ ರಕ್ತದಿಂದ ಸಹಿ ಮಾಡುವ ಚಳುವಳಿ ಪ್ರಾರಂಭಿಸಲಾಗುತ್ತದೆ ಎಂದು ಏಮ್ಸ್ ಹೋರಾಟ ಸಮಿತಿ ಸಂಚಾಲಕ ಬಸವರಾಜ ಕಳಸ ಹೇಳಿದರು.                                              ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ಏಮ್ಸ್ ಪಡೆಯಲು ಕಳೆದ 48 ದಿನದಿಂದ ನಿರಂತರ ಹೋರಾಟ ಶಾಂತಿಯುತವಾಗಿ ನಡೆಯುತ್ತಿದೆ ಇದುವರೆಗೂ ಸರ್ಕಾರದಿಂದ ಯಾವುದೆ ಪೂರಕ ಸ್ಪಂದನೆ ದೊರೆತಿಲ್ಲವಾದ್ದರಿಂದ ಮುಖ್ಯಮಂತ್ರಿಗಳಿಗೆ ಕೇಂದ್ರ ಸರ್ಕಾರಕ್ಕೆ ಜಿಲ್ಲೆಗೆ ಏಮ್ಸ್ ಶಿಫಾರಸ್ಸು ಮಾಡಲು ಆಗ್ರಹಿಸಿ ಸುಮಾರು ಐದು ಸಾವಿರ ಜನರ ರಕ್ತದಿಂದ ಸಹಿ ಮಾಡುವ ಚಳುವಳಿ ನಡೆಸಲಾಗುತ್ತದೆ ಎಂದರು.                          ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹಾಗೂ  ನಗರ ಶಾಸಕರು ಹೋರಾಟ ಸ್ಥಳಕ್ಕೆ ಭೇಟಿ ನೀಡಿದ್ದು ಬಿಟ್ಟರೆ ಹೆಚ್ಚಿನ ಒತ್ತಡ ಅವರು ಸರ್ಕಾರದ ಮೇಲೆ ಹಾಕಲು ವಿಫಲರಾಗಿದ್ದಾರೆಂದರು.                            ಜಿಲ್ಲಾಧಿಕಾರಿಗಳು ಏಮ್ಸ್ ಮಂಜೂರಿಯಾದರೆ ಸರ್ಕಾರದ ಅಧೀನದಲ್ಲಿ ಸುಮಾರು 500 ಎಕರೆ ಜಮೀನು ತಾಲೂಕಿನಲ್ಲಿದೆ ಎಂದು ತಿಳ

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಯನ್ನು ತಲುಪಿಸಿ-ಸಚಿವ ಎ.ನಾರಾಯಣಸ್ವಾಮಿ

Image
ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಯನ್ನು ತಲುಪಿಸಿ-ಸಚಿವ ಎ.ನಾರಾಯಣಸ್ವಾಮಿ ರಾಯಚೂರು ಜೂ.28- ಬಡವರಿಗಾಗಿ ರೂಪಿಸಿರುವ ಕಾರ್ಯಕ್ರಮಗಳನ್ನು ಸಕಾಲಿಕವಾಗಿ ಅನುಷ್ಠಾನಗೊಳಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕೆಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ಎ. ನಾರಾಯಣಸ್ವಾಮಿ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.           ಅವರು ಜೂ.28ರ ಮಂಗಳವಾರ ದಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಜಾರಿಗೆ ವಿವಿಧ ಇಲಾಖೆಗಳ ನಡುವಿನ ಸಮನ್ವಯತೆ ಕಾಯ್ದುಕೊಳ್ಳುವ ಮೂಲಕ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ದೊರೆಯುವಂತೆ ಮಾಡಬೇಕೆಂದು ಸಂಬAಧಿಸಿದ ಅಧಿಕಾರಿಗಳಿಗೆ  ನಿರ್ದೇಶನ ನೀಡಿದರು.  ಹೆರಿಗೆಗೆ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸದೇ ಸರ್ಕಾರಿ ಆಸ್ಪತ್ರೆಯಲ್ಲಿ ಶೇ.100ರಷ್ಟು ಉಚಿತ ಮತ್ತು ಸುರಕ್ಷಿತ ಹೆರಿಗೆ ಮಾಡಿಸಿಕೊಳ್ಳವಂತೆ ಗರ್ಭಿಣಿ ಮಹಿಳೆಯರಿಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನವರಿಕೆ ಮಾಡುವ ಕೆಲಸ ಆಗಬೇಕು. ಅಲ್ಲದೆ ಗರ್ಭಿಣಿ ಮಹಿಳೆಯರಿಗೆ ಉತ್ತಮ ಗುಣಮಟ್ಟದಲ್ಲಿ ಚಿಕಿತ್ಸೆ ನೀಡಬೇಕೆಂದು ಸಚಿವರು ಆರೋಗ್ಯ ಇಲಾಖೆ ಅಧಿಕಾರಿ

ಶ್ರೀರಂಗಂ ಕ್ಷೇತ್ರಕ್ಕೆ ಶ್ರೀ ಸುಬುಧೇಂದ್ರತೀರ್ಥರ ಭೇಟಿ.

Image
    ಶ್ರೀರಂಗಂ ಕ್ಷೇತ್ರಕ್ಕೆ ಶ್ರೀ ಸುಬುಧೇಂದ್ರತೀರ್ಥರ ಭೇಟಿ.       ರಾಯಚೂರು,ಜೂ.28- ತಮಿಳು ನಾಡಿನ ಶ್ರೀರಂಗಂ ಕ್ಷೇತ್ರಕ್ಕೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಭೇಟಿ ನೀಡಿದರು‌. ಪವಿತ್ರ ಕಾವೇರಿ ನದಿಯಲ್ಲಿ ದಂಡೋದಕ ಸ್ನಾನ ಮಾಡಿ ಶ್ರೀ ರಂಗನಾಥ ದೇವರ ದರ್ಶನ ಪಡೆದರು. ನಂತರ ಶ್ರೀ ಸುಮತೀಂದ್ರತೀರ್ಥರ ಸನ್ನಿದಾನದಲ್ಲಿ ಶ್ರೀ ಮನ್ಮೂಲರಾಮ ದೇವರ ಪೂಜೆ ನೆರವೇರಿಸಿದರು. ಭಕ್ತರಿಗೆ ಹಾಗೂ ಶಿಷ್ಯರಿಗೆ ಮುದ್ರಾ ಧಾರಣೆ ಹಾಗೂ ಫಲ ಮಂತ್ರಾಕ್ಷತೆ  ನೀಡಿದರು.

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ಲಸಿಕಾಕರಣ

Image
ರಾಯಚೂರು,ಜೂ.28-  ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬ್ರಾಹ್ಮಣ್ ಆರ್ಗನೈಸೇಶನ ಆಫ್ ಇಂಡಿಯಾ ರಾಯಚೂರು ಜಿಲ್ಲಾ ಸಮಿತಿ ಸಹಯೋಗದೊಂದಿಗೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕರೋನಾ ಲಸಿಕೆಯ ಬೂಸ್ಟರ್ ಡೋಸ್  ಲಸಿಕಾಕರಣ ಅಭಿಯಾನ ವನ್ನು ಕೋಟೆಯ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಹಾಗೂ ಶ್ರೀ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ದಲ್ಲಿ ಆಯೋಜಿಸಲಾಗಿತ್ತು ಬಡಾವಣೆಯ ಹಿರಿಯರಾದ ಶ್ರೀ ನರಸಿಂಗರಾವ್, ರಾಘವೇಂದ್ರಾಚಾರ್ ಗಬ್ಬೂರ, ಶ್ರೀ ದಾನಪ್ಪ ಯಾದವ, ನವೋದಯ ಪಬ್ಲಿಕ ಶಾಲೆಯ ಸಿಬ್ಬಂದಿ ಇತರರು ಲಸಿಕೆಯನ್ನು ಹಾಕಿಸಿಕೊಂಡರು ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ , ಶ್ರೀ ಕೊಪ್ರೆಶ ಸೌದಿಕರ,ಬ್ರಾಹ್ಮಿನ್ ಆರ್ಗನೈಸೇಶನ ಇಂಡಿಯಾದ ರಾಯಚೂರು ಜಿಲ್ಲಾದ್ಯಕ್ಷರಾದ ಪ್ರಸನ್ನ ಆಲಂಪಲ್ಲಿ,ರಾಜ್ಯ ಉಪಾದ್ಯಕ್ಷರಾದ ಶ್ರೀ ಗೊಪಾಲಕೃಷ್ಣ ತಟ್ಟಿ ಅಭಿಯಾನ ಯಶಸ್ವಿಗೊಳಿಸಲು ಸಹಕರಿಸಿದರು.

ಅಂಚೆ ಕಚೇರಿಯ ಸದುಪಯೋಗ ಪಡೆಯಿರಿ- ಶಶಿರಾಜ.

Image
  ಅಂಚೆ ಕಚೇರಿಯ ಸದುಪಯೋಗ ಪಡೆಯಿರಿ- ಶಶಿರಾಜ.        ರಾಯಚೂರು,ಜೂ.27- ಅಂಚೆ ಕಚೇರಿಯ ಸದುಪಯೋಗ ಪಡೆದುಕೊಳ್ಳಿ ಎಂದು ನಗರಸಭೆ ಸದಸ್ಯ ಇ.ಶಶಿರಾಜ ಹೇಳಿದರು.                                          ಅವರಿಂದು ನಗರದ ವಾಸವಿನಗರದಿಂದ ಜವಾಹರನಗರದ ಸತ್ಯಕಾಮ ಫಂಕ್ಷನ್ ಹಾಲ್ ಗೆ ಸ್ಥಳಾಂತರಗೊಂಡ ಅಂಚೆ ಕಚೇರಿ ಶಾಖೆ ಉದ್ಘಾಟಿಸಿ ಮಾತನಾಡಿದರು. ವೃದ್ಧರು ,ಮಹಿಳೆಯರು ಸ್ಥಳಾಂತರಗೊಂಡ ಶಾಖೆಯ ಸದುಪಯೋಗಕ್ಕೆ ಕರೆ ನೀಡಿದರು.ಈ ಸಂದರ್ಭದಲ್ಲಿ ಅಂಚೆ ಕಚೇರಿ ವ್ಯವಸ್ಥಾಪಕರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.

ಕೇಂದ್ರ ಸಚಿವರಿಂದ ವಿವಿಧ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ: ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳು ಶ್ರಮಿಸಿ- ನಾರಾಯಣಸ್ವಾಮಿ

Image
  ಕೇಂದ್ರ ಸಚಿವರಿಂದ ವಿವಿಧ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ: ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳು ಶ್ರಮಿಸಿ- ಸಚಿವ ನಾರಾಯಣಸ್ವಾಮಿ   ರಾಯಚೂರು ಜೂ.27- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ವತಿಯಿಂದ ಜಾರಿಗೊಳಿಸಲಾದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಶ್ರಮಿಸಬೇಕೆಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಅವರು ಸಂಬ0ಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಜೂ.27ರ ಸೋಮವಾರ ದಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ್ದ ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಿಂದ ಬಡವರ ಜೀವನ ಶೈಲಿಯಲ್ಲಿ ಸುಧಾರಣೆಯಾಗಬೇಕು. ಸರ್ಕಾರದ ಮಹತ್ವದ ಯೋಜನೆಗಳಡಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಬಡವರು ಮತ್ತು ಅರ್ಹರಿಗೆ ಪ್ರಯೋಜನ ಸಿಗುವಂತೆ ಕಾಳಜಿವಹಿಸಬೇಕು ಎಂದು ಹೇಳಿದರು. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ, ಒನ್ ನೇಷನ್ ಒನ್ ರೇಷನ್, ಪ್ರಧಾನ ಮಂತ್ರಿ ಮಾತೃ ವಂದನ, ಆವಾಸ್ ಯೋಜನೆ, ಉಜ್ವಲ, ಗರೀಬ್ ಕಲ್ಯಾಣ ಅನ್ನ ಯೋಜನೆ, ಪೋಷಣ ಅಭಿಯಾನ, ಮುದ್ರಾ ಯೋಜನೆ, ಸ್ವಚ್ಛ ಭಾರತ ಮಿಷನ್, ಪ್ರಧಾನಮಂತ್ರಿ ಸ್ವನಿಧಿ ಮತ್ತಿತರ ಯೋಜನೆಗಳ ಪ್ರಗತಿ ಪರ

ಸಿಂಧನೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಕಂಬಳಿ, ಪ್ರ.ಕಾರ್ಯದರ್ಶಿಯಾಗಿ ಗೊರೇಬಾಳ ಅವಿರೋಧ ಆಯ್ಕೆ

Image
ರಾಯಚೂರು,ಜೂ.27- ಜಿಲ್ಲೆಯ ಸಿಂಧನೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಎಚ್.ಕಂಬಳಿ, ಪ್ರ‌ಧಾನ ಕಾರ್ಯದರ್ಶಿಯಾಗಿ ಡಿ.ಶರಣೇಗೌಡ ಗೋರೇಬಾಳ ಅವಿರೋಧ ಆಯ್ಕೆಯಾದರು.      ಇಂದು ಸಿಂಧನೂರು ನಗರದ ಪ್ರವಾಸಿ ಮಂದಿರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಅವರ ಅಧ್ಯಕ್ಷತೆಯಲ್ಲಿ  ಆಯ್ಕೆ ಸಭೆ ನಡೆಯಿತು.        ಅಧ್ಯಕ್ಷ ಹಾಗೂ ಪ್ರ.ಕಾರ್ಯದರ್ಶಿ ಸ್ಥಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ಅವರ ಆಯ್ಕೆಯನ್ನು ಘೋಷಿಸಲಾಯಿತು.       ಜಿ.ಪಂ. ಪ್ರಧಾನ ಕಾರ್ಯದರ್ಶಿ ಪಾಷಾ ಹಟ್ಟಿ, ಉಪಾಧ್ಯಕ್ಷ ಎಂ.ವೀರಭದ್ರಪ್ಪ, ಕಾರ್ಯಕಾರಿ ಸಮಿತಿ ಸದಸ್ಯ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಸಿಂಧನೂರಿನ ಪತ್ರಕರ್ತರು ಇದ್ದರು.

ಅಗ್ನಿಪಥ ಯೋಜನೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ.

Image
ಅಗ್ನಿಪಥ ಯೋಜನೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ.                                      ರಾಯಚೂರು,ಜೂ.27-ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಅಗ್ನಿಪಥ ಯೋಜನೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರತಿಭಟನಾ ಧರಣಿ ನಡೆಸಿತು. ನಗರದ ಅಂಬೇಡ್ಕರ್ ವೃತ್ತದ ಬಳಿ ಸೇರಿದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುಧ್ದ ಘೋಷಣೆ ಕೂಗಿ ಅವೈಜ್ಞಾನಿಕ ಯೋಜನೆ ಕೈಬಿಡಬೇಕೆಂದು ಆಗ್ರಹಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ, ಏಐಸಿಸಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು ಗ್ರಾಮೀಣ ಶಾಸಕ  ದದ್ದಲ ಬಸನಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತ ಕುಮಾರ ಇತರರು  ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಸರಕಾರದ ಜನ ವಿರೋಧಿ ನಡೆ ಖಂಡಿಸಿದರು. ಯುವಕರ ಭವಿಷ್ಯಕ್ಕೆ ಅಗ್ನಿಪಥ ಯೋಜನೆ ಮಾರಕವಾಗಲಿದ್ದು ಇದೋಂದು ಕೆಟ್ಟ ಯೋಜನೆಯಾಗಿದ್ದು ಇದರಿಂದ ದೇಶದ ಯುವಕರಲ್ಲಿ ನಿರುದ್ಯೋಗ ಸಮಸ್ಯೆ ಬಿಗಡಾಯಿಸಲಿದೆ ಎಂದು ಟೀಕೆ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಶಾಂತಪ್ಪ, ಅಸ್ಲಂ ಪಾಶಾ, ಅಬ್ದುಲ್ ಕರೀಮ್, ಜಯಣ್ಣ, ನರಸಿಂಹಲು ಮಾಡಗಿರಿ,ಸಾಜೀದ ಸಮೀರ,ಕಡಗೋಲ ಶರಣಪ್ಪ, ಅಮರೇಗೌಡ ಹಂಚಿನಾಳ,ಶಶಿಕಲಾ ಭೀಮರಾಯ ಸೇರಿದಂತೆ ಮಹಿಳಾ ಕಾಂಗ್ರೆಸ್ ಮುಖಂಡರು, ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿದ್ದರು.

ಕಳೆಗುಂದಿದ ಮಣ್ಣೆತ್ತು ವ್ಯಾಪಾರ : ತಯಾರಕರ ಅಳಲು

Image
ಕಳೆಗುಂದಿದ ಮಣ್ಣೆತ್ತು ವ್ಯಾಪಾರ : ತಯಾರಕರ ಅಳಲು ರಾಯಚೂರು,ಜೂ.27- ಭಾರತದೇಶ ಹಬ್ಬ ಹರಿದಿನಗಳ ಆಚರಣೆಗೆ ಬರವಿಲ್ಲದ ದೇಶವಾಗಿದೆ ಹಿಂದೂ ಧರ್ಮದಲ್ಲಿ ವರ್ಷ ಪೂರ್ತಿ ಹಬ್ಬಗಳನ್ನು ಕಾಣುತ್ತೇವೆ ಅನೇಕ ಹಬ್ಬಗಳಲ್ಲಿ ಮಣ್ಣೆತ್ತಿನ ಅಮವಾಸ್ಯೆ ಹಬ್ಬವು ಒಂದಾಗಿದ್ದು ಗ್ರಾಮಿಣ ಭಾಗದಲ್ಲಿ ಹಾಗೂ ನಗರ ಪ್ರದೇಶದಲ್ಲಿಯೂ ಮಣ್ಣೆತ್ತು ಅಮವಾಸ್ಯೆ ಆಚರಣೆ ಕಾಣುತ್ತೇವೆ ಕೃಷಿ ಚಟುವಟಿಕೆಗಳಲ್ಲಿ ಎತ್ತುಗಳ ಶ್ರಮಕ್ಕೆ ಯಾವ ಯಂತ್ರವು ಸರಿಸಾಟಿಯಾಗಲಾರವು. ಭೂಮಿ ಹದ ಮಾಡಲು, ಬೀಜ ಬಿತ್ತಲು ಎತ್ತುಗಳ ಅವಶ್ಯಕತೆಯಿದೆ.ಆಧುನಕತೆ ಬೆಳೆದು ಟ್ರ್ಯಾಕ್ಟರ್ ಬಂದರು ಸಹ ಸಣ್ಣ ಹಿಡುವಳಿದಾರರಿಗೆ ಎತ್ತುಗಳೆ ಆತ್ಮೀಯ ಗೆಳೆಯರಿದ್ದಂತೆ ಅಂತಹ ಎತ್ತುಗಳ ಪೂಜೆಗೆ ಭಾರತದಲ್ಲಿ ಮೇಲಾಗಿ ಕರ್ನಾಟಕದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಮಣ್ಣೆತ್ತಿನ ಅಮವಾಸ್ಯೆಗೆ ಪ್ರಾಧಾನ್ಯತೆ ಅಧಿಕವಾಗಿದೆ. ನಗರದಲ್ಲಿ ಮಣ್ಣೆತ್ತಿನ ತಯಾರಿಸುವವರು ಕೋಸಿಗಿಯಿಂದ ಬರುತ್ತಾರೆ ಮಣ್ಣೆತ್ತುಗಳನ್ನು ಹೊತ್ತು ನಗರದೆಲ್ಲಡೆ ತಿರುಗಿ ಮಾರಾಟ ಮಾಡುತ್ತಾರೆ.ಈ ಬಾರಿಯೂ ಮಣ್ಣೆತ್ತು ಮಾರಾಟ ನಗರದಲ್ಲಿ ಕಾಣುತ್ತಿದ್ದು ಮಣ್ಣೆತ್ತಿನ ಅಮವಾಸ್ಯೆ ಎರೆಡು ದಿನ ಬಂದಿವೆ ಬುಧವಾರ ಮಣ್ಣೆತ್ತಿನ ಅಮವಾಸ್ಯೆ ಆಚರಣೆರಣೆಯಿದೆ.                          "ಮಣ್ಣೆತ್ತಿನ ಅಮವಾಸ್ಯೆ ಹಿನ್ನಲೆ ಮಣ್ಣೆತ್ತು ಮಾರಾಟ ಮಾಡುಲು ಬಂದಿದ್ದೇವೆ ಜೋಡಿ ಮಣ್ಣೆತ್ತಿನ ಬೆಲೆ 50 ರೂ .ನಿಗದಿ ಮಾಡಿದ್ದೇವೆ ವ್ಯಾಪಾರ ಕುಂದಿದ್

ಲೋಕ ಜನಶಕ್ತಿ ಪಕ್ಷಕ್ಕೆ 100 ಕ್ಕೂ ಅಧಿಕ ಕಾರ್ಯಕರ್ತರು ಸೇರ್ಪಡೆ

Image
ರಾಯಚೂರು,ಜೂ.27- ಜಿಲ್ಲಾ ಕಾರ್ಯಾಲಯದಲ್ಲಿ ಲೋಕ ಜನಶಕ್ತಿ ಪಕ್ಷಕ್ಕೆ ನಗರದಿಂದ 100 ಕ್ಕೂ ಅಧಿಕ ಕಾರ್ಯಕರ್ತರು ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕಿಸಾನ್ ಘಟಕದ ರಾಜ್ಯಾಧ್ಯಕ್ಷರಾದ ಜಿ. ವೆಂಕಟರೆಡ್ಡಿ ಅವರು ಮತ್ತು ಜಿಲ್ಲಾಧ್ಯಕ್ಷರಾದ ಬಂಗಿ ಮನಿರೆಡ್ಡಿ ಅವರು ಹಾಗೂ ಹಂಪಯ್ಯ, ಮಿಥುನ ರಾಜ್, ನರಸಿಂಹ ನಾಯಕ್ ಮಲ್ಲಪ್ಪ, ಆನಂದ ಮಲ್ಲಿಕಾರ್ಜುನ್,ನಾಗರಾಜ್, ಅಮರ್ ಗೌಡ ರಾಘವೇಂದ್ರ ಭಾಸ್ಕರ್, ರಾಘವೇಂದ್ರ ಬಂಡಾರಿ ವೆಂಕಟರಾಜ್, ಜಂಬಣ್ಣ, ರವಿ, ಸತ್ಯ ರೆಡ್ಡಿ ,ನಾಗರಾಜ್, ಗೋವಿಂದ ಸ,ಈರಪ್ಪ, ಶಾಶಪ್ಪ,ಆಶಪ್ಪ,ರಫಿ,ದೀನದಯಾಳ್, ಇನ್ನು ಅನೇಕರು ಉಪಸ್ಥಿತರಿದ್ದರು.

ಖ್ಯಾತ ನಿರೂಪಕ ಮುರಳಿಧರ ಕುಲಕರ್ಣಿಯವರಿಗೆ ಸನ್ಮಾನ

Image
*ಖ್ಯಾತ ನಿರೂಪಕ ಮುರಳಿಧರ ಕುಲಕರ್ಣಿಯವರಿಗೆ ಸನ್ಮಾನ* ರಾಯಚೂರು.ಜೂ.26- ನಗರದ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಕರಾಗಿರುವ ಹಾಗೂ ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷರಾದ ಮುರಳಿಧರ ಕುಲಕರ್ಣಿಯವರಿಗೆ ನಿನ್ನೆ ರಂಗಮಂದಿರದಲ್ಲಿ ರಾಗ-ರಂಗ ಸಾಂಸ್ಕೃತಿಕ ವೇದಿಕೆಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.      ಶಿಕ್ಷಣ ಇಲಾಖೆಯ ನಿವೃತ್ತ ಸೂಪರ್ಡೆಂಟ್ ಶ್ರೀ ಪಂಪಾಪತಿ ಹೂಗಾರ್ ಅವರ ಸನ್ಮಾನ ಸಮಾರಂಭ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು ಮುರಳಿಧರ ಕುಲಕರ್ಣಿಯವರಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಾಜಯೋಗಿನಿ ಸ್ಮಿತಾ ಅಕ್ಕನವರು, ಶ್ರೀ ರಾಮನ ಗೌಡ ಏಗನೂರು ಜೆಡಿಎಸ್ ಮುಖಂಡರು, ಇವರು ಸನ್ಮಾನಿಸಿ ಅಭಿನಂದಿಸಿದರು.       ಮುರಳಿಧರ ಕುಲಕರ್ಣಿಯವರು 35 ವರ್ಷಗಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಯಚೂರಿನಲ್ಲಿ ಆಯೋಜಿಸುವ ಮೂಲಕ ಸಾಂಸ್ಕೃತಿಕ  ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದ್ದಾರೆ.   ಈಗಾಗಲೇ ತಿರುಪತಿ, ಬೆಳಗಾವಿ, ಬೆಂಗಳೂರು, ಬಾಗಲಕೋಟೆ, ಹುಬ್ಬಳ್ಳಿ, ಮೈಸೂರು, ಮುಂತಾದ ಕಡೆಗಳಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿ ಮೆಚ್ಚುಗೆ ಗಳಿಸಿದ್ದಾರೆ.      ರಾಯಚೂರಿನಲ್ಲಿ ನಡೆಯುವ ಮುಂಗಾರು ಉತ್ಸವ, ಗೋವಿಂದ ಗಾನ, 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಸ

ಚುಕ್ಕಿ ಚಿತ್ರ ಕಲಾವಿದ ಎಚ್ಎಸ್ ಮ್ಯಾದರ್ ಇವರಿಗೆ ಶೃತಿ ಸಾಹಿತ್ಯ ಮೇಳದಿಂದ ಸನ್ಮಾನ

Image
 ಚುಕ್ಕಿ ಚಿತ್ರ ಕಲಾವಿದ ಎಚ್ಎಸ್ ಮ್ಯಾದರ್ ಇವರಿಗೆ ಶೃತಿ ಸಾಹಿತ್ಯ ಮೇಳದಿಂದ ಸನ್ಮಾನ   ರಾಯಚೂರು,ಜೂ.26-   ಕನ್ನಡದ ವರನಟ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುವ ಮೇರುನಟ ಡಾಕ್ಟರ್ ರಾಜಕುಮಾರ್ ಅವರ ವಿವಿಧ ಭಂಗಿಗಳ  100 ಚುಕ್ಕಿ ಚಿತ್ರ ಗಳನ್ನು ಬಿಡಿಸಿ ದಾಖಲೆ ಮಾಡಿದ  ನಗರದ ಚಿತ್ರ ಕಲಾವಿದ ಶ್ರೀ ಎಚ್ ಎಚ್ ಮ್ಯಾದರ್ ಅವರಿಗೆ ರಾಯಚೂರಿನ ಶೃತಿ ಸಾಹಿತ್ಯ ಮೇಳದ ವತಿಯಿಂದ ಇಂದು ಸಂಜೆ ಸನ್ಮಾನಿಸಿ ಅಭಿನಂದಿಸಲಾಯಿತು.     ಈ ಸಂದರ್ಭದಲ್ಲಿ ಶೃತಿ ಸಾಹಿತ್ಯ ಮೇಳದ ಗೌರವ ಅಧ್ಯಕ್ಷರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾಕ್ಟರ್ ಜಯಲಕ್ಷ್ಮಿ ಮಂಗಳಮೂರ್ತಿ ಅವರು ಮಾತನಾಡಿ,  ಎಚ್ ಎಚ್ ಮ್ಯಾಧಾರ್ ಅವರು ಚುಕ್ಕಿ ಚಿತ್ರಗಳು, ಚಿತ್ರಕಲೆಯಲ್ಲಿ ಹೊಸ ಮನ್ವಂತರ ವನ್ನು ಸೃಷ್ಟಿ ಮಾಡಿವೆ, ಇವರು ಬಿಡಿಸಿದ ಚಿತ್ರಗಳು ಇತಿಹಾಸವನ್ನು ಸೃಷ್ಟಿಸುವುದರ ಜೊತೆಗೆ ತಲೆತಲಾಂತರ ಗಳವರೆಗೆ ಇರುತ್ತವೆ ಎಂದು ಹೇಳಿದರು.     ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿಯವರು ಮಾತನಾಡಿ ಶ್ರೀ ಎಚ್ ಎಚ್ ಮ್ಯಾಧಾರ್ ಅವರು ಕನ್ನಡದ ಮೇರು ನಟ ಡಾಕ್ಟರ್ ರಾಜಕುಮಾರ್ ಅವರ ಕಟ್ಟ ಅಭಿಮಾನಿಗಳಾಗಿದು, ಇವರು ದೇಶದಲ್ಲಿಯೇ ಯಾರೂ ಮಾಡದ ಸಾಧನೆಯನ್ನು ಮಾಡಿದ್ದಾರೆ ಅದರಲ್ಲಿ ವಿಶೇಷವಾಗಿ  ಡಾಕ್ಟರ್ ರಾಜಕುಮಾರ್ ಅಭಿನಯದ ಪ್ರಸಿದ್ಧ ಚಿತ್ರಗಳಾದ ಬೇಡರ ಕಣ್ಣಪ್ಪ, ಶ್ರೀ ಕೃಷ್ಣದೇವರಾಯ, ಶ್ರೀ ಮಂತ್ರಾಲಯ ಮಹಾತ್ಮೆ ಶ್ರೀ ರಾಘವೇಂದ್ರ ಗುರುಗಳು, ಮಯೂರ, ಭಕ್ತ ಕ

ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹೆಸರಲ್ಲಿ ದುಷ್ಕರ್ಮಿಗಳಿಂದ ದೇಣಿಗೆ ಸಂಗ್ರಹ ಎಚ್ಚರ ವಹಿಸಲು ಭಕ್ತರಿಗೆ ಮನವಿ

Image
  ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹೆಸರಲ್ಲಿ ದುಷ್ಕರ್ಮಿಗಳಿಂದ ದೇಣಿಗೆ ಸಂಗ್ರಹ ಎಚ್ಚರ ವಹಿಸಲು  ಭಕ್ತರಿಗೆ ಮನವಿ                   ರಾಯಚೂರು,ಜೂ.26-ಶ್ರೀಮಠದ ಹೆಸರಲ್ಲಿ ನಕಲಿ ವೈಬಸೈಟ್ ಸೃಷ್ಠಿಸಿ ದೇಣಿಗೆ ಸಂಗ್ರಹದ ಬಗ್ಗೆ ಭಕ್ತಾದಿಗಳು ಎಚ್ಚರ ವಹಿಸಬೇಕೆಂದು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ವ್ಯವಸ್ಥಾಪಕರಾದ ಎಸ್.ಕೆ.ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.                                                ಶ್ರೀಮಠದ ಪರಿಮಳ ಪ್ರಸಾದವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಬಗ್ಗೆ ಗಮನಕ್ಕೆ ಬಂದಿದ್ದು ಅದಕ್ಕೆ ಭಕ್ತರು ಮೋಸ ಹೋಗಬಾರದು ಮತ್ತು ಶ್ರೀಮಠದಲ್ಲಿ ದಿನ ನಿತ್ಯ ಅನ್ನದಾನಕ್ಕೆ ದೇಣಿಗೆ ನೀಡಬೇಕೆಂದು ಕೆಲ ದುಷ್ಕರ್ಮಿಗಳು ಭಕ್ತರಿಗೆ ಕೋರುತ್ತಿದ್ದು ಅದಕ್ಕೆ ಯಾರು ಕಿವಿಗೊಡದಂತೆ ಹೇಳಿರುವ ಅವರು ಶ್ರೀಮಠದ ಅಧಿಕೃತ ಬ್ಯಾಂಕ್  ಖಾತೆ ಖಚಿತಪಡಿಸಿಕೊಂಡು ದೇಣಿಗೆ ನೀಡಬೇಕೆಂದು ಕೋರಿದ್ದಾರೆ.

ಸಮುತ್ಕರ್ಷ ಐಎಎಸ್ ವತಿಯಿಂದ ೬,೭,೮ ಹಾಗೂ ೯ ನೇ ತರಗತಿಯ ಮಕ್ಕಳಿಗೆ ಐಎಎಸ್/ ಐಪಿಎಸ್ ಹಾಗೂ ನಾಗರೀಕ ಸೇವಾ ಪರೀಕ್ಷೆಗಳ ಬಗ್ಗೆ ಅರಿವು ಕಾರ್ಯಕ್ರಮ

Image
    ರಾಯಚೂರ : ಸಮುತ್ಕರ್ಷ ಐಎಎಸ್ ಸಂಸ್ಥೆಯು ಕರ್ನಾಟಕದಲ್ಲಿ ಕಳೆದ ಏಳು ವರ್ಷಗಳಿಂದ ಶಾಲಾ ಮಕ್ಕಳಲ್ಲಿ ಐಎಎಸ್/ ಐಪಿಎಸ್ ಹಾಗೂ ನಾಗರೀಕ ಸೇವಾ ಪರೀಕ್ಷೆಗಳ ಬಗ್ಗೆ ಅರಿವು ಮತ್ತು ಈಗಿನಿಂದಲೇ ತಯಾರಿ ಮಾಡಲು ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಪ್ರತಿವರ್ಷವೂ ಸಮುತ್ಕರ್ಷದ ಅಭ್ಯರ್ಥಿ ಗಳು ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಆಯ್ಕೆಯಾಗುತ್ತಿರುವುದು ಹೆಮ್ಮೆಯ ಸಂಗತಿ. ಈ ಹಿನ್ನೆಲೆಯಲ್ಲಿ ರಾಯಚೂರ ನಲ್ಲಿ ಶಾಲಾಮಕ್ಕಳಿಗಾಗಿ "ಶ್ರಧ್ಧಾ ಮತ್ತು "ಮೇಧಾ" ಹೆಸರಿನ Pಡಿe-IಂS ಜಿouಟಿಜಚಿಣioಟಿ ಕೋರ್ಸುಗಳನ್ನು ಪ್ರಾರಂಭಿಸಲಾಗುತ್ತಿದೆ. ಆ ಮೂಲಕ ೬,೭,೮ ಹಾಗೂ ೯  ನೇ ತರಗತಿಯ ವಿದ್ಯಾರ್ಥಿಗಳಿಗೆ ನಾಗರೀಕ ಸೇವಾ ಪರೀಕ್ಷೆಗಳಿಗೆ ಅಗತ್ಯವಿರುವ ಮಾನಸಿಕ, ಬೌದ್ಧಿಕ ಸಾಮರ್ಥ್ಯಗಳ ಬೆಳವಣಿಗೆ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳ ಮೂಲಕ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಉನ್ನತ ಕನಸು ಕಾಣುವತ್ತ ಅಡಿಪಾಯ ಹಾಕುವ ಉದ್ದೇಶ ಈ ಕೋರ್ಸನದ್ದು. ಈ ಹಿನ್ನೆಯಲಿ ್ಲಸಮುತ್ಕರ್ಷ ಐ.ಎ.ಎಸ್ – ಜುಲೈ ೦೩, ೨೦೨೨ ರವಿವಾರ ದÀಂದು ಬೆಳಿಗ್ಗೆ ೧೦:೩೦ ರಿಂದ ೧೨:೩೦ ರವರೆಗೆ,  ಟ್ಯಾಗೊರ ಮೆಮೋರಿಯಲ ಎಜ್ಯುಕೇ಼ಷÀನ ಅಸೋಸಿಯೆಶನ, ಮಹಾತ್ಮಾ ಗಾಂಧಿ ಸ್ಟೇಡಿಯಮ ಎದುರುಗಡೆ, ರಾಯಚೂರ ನಲ್ಲಿ ಏರ್ಪಡಿಸಲಾಗಿದ್ದು, ್ಲ ಆಸಕ್ತ ವಿದ್ಯಾರ್ಥಿಗಳು sಚಿmuಣಞಚಿಡಿshiಚಿs.iಟಿ ವೆಬಸೈಟ್ ನಲ್ಲಿ ನೋಂದಣಿ ಮಾಡಿ, ಪರೀಕ್ಷೆಗೆ ಹಾಜರಾಗುವ ಮೂಲಕ ಕೋ

ಐವತ್ತು ದಿನದತ್ತ ಏಮ್ಸ್ ಹೋರಾಟ : ಸರ್ಕಾರ ಮೌನ ನಡೆ.!

Image
 ಐವತ್ತು ದಿನದತ್ತ ಏಮ್ಸ್ ಹೋರಾಟ : ಸರ್ಕಾರ  ಮೌನ ನಡೆ.!  ರಾಯಚೂರು,ಜೂ.25- ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ  ನೀಡಬೇಕೆಂದು ಒತ್ತಾಯಿಸಿ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟ 44 ದಿನ ಪೂರೈಸಿ ಐವತ್ತನೆ ದಿನದತ್ತ ಮುನ್ನುಗ್ಗುತ್ತಿದ್ದು ಸರ್ಕಾರ ಮೌನ ನಡೆ ಅನುಸರಿಸುತ್ತಿದ್ದು ಹೋರಾಟನಿರತರ ತಾಳ್ಮೆ ಪರೀಕ್ಷೆಗೊಡ್ಡಿದೆ. ಜಿಲ್ಲಾ ಉಸ್ತುವಾರು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ತಮ್ಮದೆ ರೀತಿಯಲ್ಲಿ ಏಮ್ಸ್ ತರಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ ಇದುವರೆಗೂ ಯಾವುದೆ ಪೂರಕ ಸ್ಪಂದನೆ ದೊರೆತಿಲ್ಲ ದಿನ ನಿತ್ಯ ಸಂಘ ಸಂಸ್ಥೆಗಳು ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸುತ್ತಿದ್ದು ಕಾಂಗ್ರೇಸ್ ಪಕ್ಷ ಮುಖಂಡರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಕಾಂಗ್ರೆಸ್ ಮುಖಂಡ ಬಶೀರುದ್ದೀನ್ ಶಾಸಕ ಡಾ.ಶಿವರಾಜ ಪಾಟೀಲರು ಏಕೆ ಏಮ್ಸ್ ತರುವಲ್ಲಿ ಸರ್ಕಾರಕ್ಕೆ ಒತ್ತಡ ಹಾಕುತ್ತಿಲ್ಲ ಅವರಿಗೆ ಏಮ್ಸ್ ಬರುವುದು ಬೇಡವೆ ಎಂದು ಪ್ರಶ್ನಿಸಿದ್ದಾರೆ ಏಮ್ಸ್ ಹೋರಾಟವನ್ನು ಸರ್ಕಾರ ಲಘುವಾಗಿ ಪರಿಗಣಿಸಿದರೆ ಅದು ಸರ್ಕಾರಕ್ಕೆ ಮುಂದೊಂದು ದಿನ ಸುತ್ತಿಕೊಳ್ಳಬಹುದು ಪ್ರಜಾ ಪ್ರಭುತ್ವದಲ್ಲಿ ಧರಣಿ, ಸತ್ಯಾಗ್ರಹಗಳ ಮೂಲಕ ಪರಿಕಿಯರಿಂದ ಸ್ವಾತಂತ್ರ್ಯ ಪಡೆದ ಉದಾಹರಣೆಯಿದ್ದು ಎಂತಹ ಕಠಿಣಾಥಿ ಕಠಿಣ ಸರ್ಕಾರವಿದ್ದರೂ ಶಾಂತಿ ರೀತಿಯಲ್ಲಿ ಪ್ರತಿಭಟನೆ ಮಾಡುವ ಜನರ ಧ್ವನಿ ಅಡಗಿಸಲು ಅಸಾಧ್ಯ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ಪ್ರ

ಕರ್ಕಷ ಸೈಲೆಂನ್ಸರ್ ಗಳನ್ನು ಪರ್ಮನೆಂಟ್ ಸೈಲೆಂಟ್ ಮಾಡಿದ ಪೊಲೀಸರು

Image
 ಕರ್ಕಷ  ಸೈಲೆಂನ್ಸರ್ ಗಳನ್ನು  ಪರ್ಮನೆಂಟ್ ಸೈಲೆಂಟ್ ಮಾಡಿದ ಪೊಲೀಸರು .                            ರಾಯಚೂರು,ಜೂ.24- ದೋಷ ಪೂರಿತ ಹಾಗೂ ಕರ್ಕಷವಾಗಿ ಶಬ್ಧ ಮಾಡುತ್ತ ವಾಯು ಮತ್ತು ಶಬ್ಧ ಮಾಲಿನ್ಯಕ್ಕೆ ಕಾರಣವಾದ ವಾಹನಗಳ ಸೈಲೇಂನ್ಸರ್ ಗಳನ್ನು ಪೊಲೀಸರು ಸೈಲೆಂಟ್ ಮಾಡಿದರು. ಇಂದು ಬೆಳಿಗ್ಗೆ ಎಸ್ಪಿ ಕಚೇರಿ ಅವರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ. ರವರ ಆದೇಶದಂತೆ ದೋಷಪೂರಿತ ಸೈಲೆಂಸ್ ರ್ ಗಳನ್ನು ರೋಡ್ ರೋಲರ ಚಲಾಯಿಸುವ ಮೂಲಕ ಅಪ್ಪಚ್ಚಿ ಮಾಡಲಾಯಿತು. ಜಿಲ್ಲೆಯಾದ್ಯಂತ ಕಾರ್ಯಾಚರಣೆಗಿಳಿದಿದ್ದ ಪೊಲೀಸರು ಕರ್ಕಷ ಶಬ್ಧ ಮಾಡುವ ವಾಹನಗಳ ಮಾಲಿಕರ ಮೇಲೆ ಪ್ರಕರಣ ದಾಖಲಿಸಿಕೊಂಡು ಸುಮಾರು 2.95 ಲಕ್ಷ ರೂ. ದಂಡವಿಧಿಸಿ ದೋಷಪೂರಿತ ಸೈಲೆಂನ್ಸ ರ್ ಗಳ ಸದ್ದು ಕೇಳದಂತೆ ಪರ್ಮನೆಂಟ್ ಸೈಲೆಂಟ್ ಮಾಡಲಾಯಿತು.

ಸರ್ಕಾರ ಶ್ರೀಶರಣ ಹೂಗಾರ ಮಾದಯ್ಯನವರ ಹೆಸರಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಮನವಿ : ಜೂ.26 ರಂದು ಹೂಗಾರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ-ಈರಣ್ಣ .

Image
            ರಾಯಚೂರು,ಜೂ.24- ಹೂಗಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜೂ.26 ರಂದು ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಹೂಗಾರ ಸಮಾಜದ ಅಧ್ಯಕ್ಷರಾದ ಈರಣ್ಣ ಹೇಳಿದರು.     ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ  ಅಂದು ಬೆಳಿಗ್ಗೆ 10.30ಕ್ಕೆ ನಗರದ ಪತ್ರಿಕಾ ಭವನದ ಮೇಲ್ಮಹಡಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಹೂಗಾರ ಸಮಾಜದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶೇ.60 ಕ್ಕೂ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ ಎಂದ ಅವರು  ಸುಮಾರು 75ಕ್ಕೂ ಅಧಿಕ ವಿದ್ಯಾರ್ಥಿಗಳು ಈಗಾಗಲೆ ಹೆಸರು ನೊಂದಾಯಿಸಿದ್ದು ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಹೆಸರು ನೊಂದಾಯಿಸಿಕೊಳ್ಳಲಿದ್ದಾರೆಂದರು.  ಮೊದಲು ಬಾರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯುತ್ತಿದ್ದು ಶೇ.90 ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡಲಾಗುವುದೆಂದ ಅವರು ಕಾರ್ಯಕ್ರಮದಲ್ಲಿ ಜಿಲ್ಲೆಯ ಸಂಸದರು, ಶಾಸಕರು, ಹೂಗಾರ ಸಮುದಾಯದ ರಾಜ್ಯ ಸಮಿತಿ ಮುಖಂಡರು,ಹಿರಿಯರು ಭಾಗವಹಿಸಲಿದ್ದಾರೆಂದರು. ನಮ್ಮ ಸಮಾಜದಲ್ಲಿಯೂ ಆರ್ಥಿಕವಾಗಿ ಅಶಕ್ತರಿದ್ದು ಅವರ ಅಭಿವೃದ್ದಿಗಾಗಿ  ಸರ್ಕಾರ ಶ್ರೀಶರಣ ಹೂಗಾರ ಮಾದಯ್ಯನವರ ಹೆಸರಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದ ಅವರು ಅನೇಕ ಬಾರಿ ಈ ಬಗ್ಗೆ ಮನವಿ ಮಾಡಲಾಗಿದೆ ಎಂದರು.      ಜಿಲ್ಲಾ ಹೂಗಾರ ಸಮಾಜದ ಪ್ರಧಾನ ಕಾರ್ಯದರ್ಶಿ ಹ

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೮ ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Image
    ರಾಯಚೂರು,23- ನಗರದ ಬೊಳಮಾನದೊಡ್ಡಿ ರಸ್ತೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ರಾಯಚೂರು, ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ,ಗ್ರೀನ್ ರಾಯಚೂರು ಮತ್ತು ಶಿಲ್ಪಾ ಫೌಂಡೇಶನ್ ಪರ್ಯಾವರಣ ಸಂರಕ್ಷಣಾ ಗತಿವಿಧಿ ರಾಯಚೂರು ಇವರ ಸಹಯೋಗದೊಂದಿಗೆ "೮ ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ". ಮತ್ತು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.   ಯೋಗ ದಿನದ ನಿಮಿತ್ಯ ಆರ್ಟ್ ಆಫ್ ಲಿವಿಂಗ್ ನ _ರೂಪಾ ಬಳೆ ಇವರ ಮಾರ್ಗದರ್ಶನದಲ್ಲಿ ವಸತಿ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು.ಕೊನೆಯಲ್ಲಿ ಪರಿಸರ ಜಾಗೃತಿಯ ಅಂಗವಾಗಿ ಗುಲ್ಮೋಹರ್ ಸಸಿಯನ್ನು ಶಾಲಾ ಆವರಣದಲ್ಲಿ ನೆಡಲಾಯಿತು.ಯೋಗ ಪ್ರದರ್ಶನ ಮತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ವಸತಿಶಾಲೆಯ ನಿಲಯಪಾಲಕರಾದ   ಶ್ರೀ  ಶಾಮಣ್ಣ, ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಅನಿತಾ ,ಶಿಕ್ಷಕರಾದ ಶ್ರೀಮತಿ ಶಾರದಾ,ಶ್ರೀಮತಿ ಪದ್ಮಾವತಿ,ಶ್ರೀಮತಿ ಗುರ್ಲಾ ಶೃತಿ, ಕು. ಪೂಜಾ ಸೋನಾರ್, ಕು.ಶ್ರೀದೇವಿ,ಶ್ರೀಮತಿ ಪ್ರಿಯಾಂಜಲಿ,ಶ್ರೀಮತಿ ನಾಜಿಯಾ ಬೇಗಂ ಹಾಗೂ ಗ್ರೀನ್ ರಾಯಚೂರು ತಂಡದ ಸರಸ್ವತಿ ಕಿಲಕಿಲೆ ಮತ್ತು ಶ್ರೀ ರಾಜೇಂದ್ರ ಕುಮಾರ್ ಭಾಗವಹಿಸಿ ಯೋಗದ ಮಹತ್ವ ಮತ್ತು ರಾಯಚೂರಿನ ಹಸಿರೀಕರಣದ ಕುರಿತು ತಿಳಿಸಿಕೊಟ್ಟರು.

ಆರ್ಯವೈಶ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ಬಿ. ಗೋವಿಂದ್ ರವರಿಗೆ ನೀಡಬೇಕೆಂದು ನಿಯೋಗ ಮನವಿ .

Image
                                ರಾಯಚೂರು,23- ಆರ್ಯವೈಶ್ಯ ಅಭಿವೃದ್ಧಿ  ಮಂಡಳಿ ಅಧ್ಯಕ್ಷ ಸ್ಥಾನ ವನ್ನು ಆರ್ಯವೈಶ್ಯ ಸಮಾಜದ ಮುಖಂಡರು ಹಾಗೂ  ಭಾರತೀಯ ಜನತಾ ಪಾರ್ಟಿ ನಗರ ಘಟಕ ಅಧ್ಯಕ್ಷರಾದ ಬಿ. ಗೋವಿಂದ್ ಇವರಿಗೆ  ನೀಡಬೇಕೆಂದು ನಿಯೋಗ ಮನವಿ ಮಾಡಿದರು .ಬೆಂಗಳೂರಲ್ಲಿ ಮಾಜಿ ಸಚಿವರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಿ .ಹೆಚ್. ಶಂಕರಮೂರ್ತಿ ಅವರನ್ನು ಹಾಗೂ ಮಾಜಿ ಶಾಸಕರು ಭಾರತೀಯ ಜನತಾ ಪಾರ್ಟಿ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾನಾ ಭೇಟಿ ಮಾಡಿ  ನಿಯೋಗ ಮನವಿ ಮಾಡಿದರು.  ನಗರ ಶಾಸಕರಾದ ಡಾ. ಶಿವರಾಜ್ ಪಾಟೀಲರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಎನ್ . ಶಂಕರಪ್ಪ ವ ಕೀಲರು ಮತ್ತು  ಮಾಜಿ RDA ಅಧ್ಯಕ್ಷರುಗಳಾದ  ಕಡಗೋಲ ಆಂಜನೇಯ, ವೈ. ಗೋಪಾಲರೆಡ್ಡಿ ಹಾಗೂ ನಗರದ ಆರ್ಯವೈಶ್ಯ ಸಮಾಜದ ಹಿರಿಯ ಮುಖಂಡರು ಗಳಾದ ಮಾಚನೂರು ಕೊಂಡ ಕೃಷ್ಣಮೂರ್ತಿ, ಸಾವಿತ್ರಿ ಪುರುಷೋತ್ತಮ, ದತ್ತಣ್ಣ ಹಾಗೂ ಸಮಾಜದ ಮುಖಂಡರ ನಿಯೋಗದಲ್ಲಿದ್ದರು  .ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಸಾನಾಬಾಳ, ಎ. ಚಂದ್ರಶೇಖರ್ ,ನವೀನ್ ರೆಡ್ಡಿ ಹಾಗೂ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿ ತರಿದ್ದರು .

ನಗರ ಬಿಜೆಪಿ ಕಾರ್ಯಾಲಯದಲ್ಲಿ ಡಾ|| ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ ಆಚರಣಿ

Image
                                    ರಾಯಚೂರು,23-ಇಂದು ಬೆಳಿಗ್ಗೆ  ನಗರ ಬಿಜೆಪಿ ಕಾರ್ಯಾಲಯದಲ್ಲಿ "ಪ್ರಖರ ರಾಷ್ಟ್ರವಾದಿ, ದೇಶದ ಅಖಂಡತೆಗೆ ಶ್ರಮಿಸಿದ ಅಪ್ರತಿಮ ನಾಯಕ, ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ|| ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿಯಂದು ಅವರಿಗೆ ಗೌರವಪೂರ್ವಕ ಪುಷ್ಪಾರ್ಚನೆಯೊಂದಿಗೆ ನಮನಗಳು ಮಾಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ನಗರ ಉಪಾಧ್ಯಕ್ಷರು ಜೆ.ಎಂ. ಮೌನೇಶ್, ಜೆ. ಈರಣ್ಣ  ನಗರ ಮಹಿಳಾ ಮೋರ್ಚಾ ಅಧ್ಯಕ್ಷರು ವಾ ಣಿಶ್ರೀ,ಜೆ. ಎಂ. ವಿರೇಶ್ ಕುಮಾರ್  ವಿರೇಶ್ ತಾಲ್ವಾರ್ ಕಾರ್ಯಾಲಯ ಕಾರ್ಯದರ್ಶಿ,ಎಂ ಹನುಮಂತಪ್ಪ ನರಸಪ್ಪ , ಯೇಸಪ್ಪ, ಬಿ.ಆಂಜನೇಯ, ಪ್ರೇಮ್ BJYM ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.

ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಬಲಿದಾನ ದಿನ ಹಾಗೂ ಜಗನ್ನಾಥರಾವ್ ಜೋಶಿ ಜಯಂತಿ ಆಚರಿಸಲಾಯಿತು

Image
                               ರಾಯಚೂರು,23-ಭಾರತೀಯ ಜನತಾ ಪಾರ್ಟಿ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ    ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನ ಹಾಗೂ ಜಗನ್ನಾಥರಾವ್ ಜೋಶಿ ಅವರ ಜಯಂತಿಯ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ  ಎನ್ . ಶಂಕ್ರಪ್ಪ ರವರು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ದೇಶಕ್ಕಾಗಿ ಅವರು ಮಾಡಿದ ತ್ಯಾಗ ಹಾಗೂ ಕಾಶ್ಮೀರ ವಿಚಾರದಲ್ಲಿ ಅವರ ಹೋರಾಟದ ಬಗ್ಗೆ  ಹಾಗೂ ಜಗನ್ನಾಥರಾವ್ ಜೋಶಿ ಅವರ  ಅವರ ಕಾರ್ಯದ ಬಗ್ಗೆ ಅಲ್ಲದೆ ಪಕ್ಷದ ಸಂಘಟನೆ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿಗಳಾದ ಅರುಣ್ ಕುಮಾರ್, ರಾಜ್ಯ ಕಾರ್ಯದರ್ಶಿಗಳಾದ ಜಗದೀಶ್ ಹಿರೇಮನಿ ಹಾಗೂ ರಾಯಚೂರು ನಗರ ಶಾಸಕರಾದ ಡಾ. ಶಿವರಾಜ್ ಪಾಟೀಲ್  ಬಿಜೆಪಿ ನಗರ ಅಧ್ಯಕ್ಷರಾದ ಬಿ.ಗೋವಿಂದ್ ,ಆರ್ ಡಿ.ಎ . ಮಾಜಿ ಅಧ್ಯಕ್ಷರುಗಳಾದ ಕಡಗೋಲ ಆಂಜನೇಯ , ವೈ. ಗೋಪಾಲರೆಡ್ಡಿ   ನಗರ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಸಾನ್ ಬಾಳ, ಎ. ಚಂದ್ರಶೇಖರ್ ,ನವೀನ್ ಕುಮಾರ್ ರೆಡ್ಡಿ,   ಮುದುಗಲ್ ಈರಣ್ಣ , ಭಾಗವಹಿಸಿದ್ದರು

ಪಿಯುಸಿ ( ವಾಣಿಜ್ಯ)ದಲ್ಲಿ ವಾರಿಜಾ ಅರ್ಷಿಣಗಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ.

Image
ಪಿಯುಸಿ ( ವಾಣಿಜ್ಯ) ದಲ್ಲಿ ವಾರಿಜಾ ಅರ್ಷಿ ಣಗಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ.                                           ರಾಯಚೂರು,ಜೂ.23- ನಗರದ ವಿದ್ಯಾನಿಧಿ ಮಹಾವಿದ್ಯಾಲಯದಲ್ಲಿ ಪಿಯುಸಿ ( ವಾಣಿಜ್ಯ) ಎರಡನೆ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ  ವಾರಿಜಾ ತಂದೆ ಶ್ರೀನಿವಾಸ್ ರಾವ್ ಅರ್ಷಿಣಗಿ 574 ಅಂಕಗಳನ್ನು ಪಡೆಯುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.  

ಕರ್ನಾಟಕ ಸಂಘ ಕಂಪೌಂಡ್ ಗೋಡೆ ಮುಂಭಾಗ ಮೂತ್ರ ವಿಸರ್ಜನೆ.!

Image
 ಕರ್ನಾಟಕ ಸಂಘ ಕಂಪೌಂಡ್  ಗೋಡೆ ಮುಂಭಾಗ ಮೂತ್ರ ವಿಸರ್ಜನೆ. !                                       ರಾಯಚೂರು,ಜೂ.23- ಕನ್ನಡ ಭಾಷೆ ಉಳಿಸಲು ಬೆಳೆಸಲು ಕನ್ನಡವನ್ನು ಬಲವಾಗಿ ಬೇರೂರಿಸಲು  ಕಟ್ಟಲಾದ ಕರ್ನಾಟಕ ಸಂಘ ಮುಂಭಾಗದ ಕಂಪೌಂಡ್ ಗೋಡೆ ಮೂತ್ರ ವಿಸರ್ಜನೆ ಸ್ಥಳವಾಗಿ ಮಾರ್ಪಟ್ಟಿದ್ದು ವಿಪರ್ಯಾಸದ ಸಂಗತಿಯಾಗಿದೆ. ಕನ್ನಡವನ್ನು ಕಟ್ಟಿ ಬೆಳೆಸಲು ಅನೇಕ ಕನ್ನಡ ಹಿರಿತಲೆಗಳ , ಹೋರಾಟಗಾರರ ಶ್ರಮ ಅಡಗಿದ್ದು ಕನ್ನಡ ನೆಲ ಜಲಕ್ಕಾಗಿ ಅನೇಕ ಹೋರಾಟಗಳು ರೂಪುಗೊಳ್ಳಲು ಕರ್ನಾಟಕ ಸಂಘ ಉದಯವಾಗಿದ್ದು ಇದು ಕೇವಲ ಕಟ್ಟಡವಾಗಿರದೆ ಅನೇಕ ಕನ್ನಡ ಕಟ್ಟಾಳುಗಳ ಪಾದ ಧೂಳಿಯಿಂದ ಪಾವನಗೊಂಡಿದೆ ಕನ್ನಡ ಕಂಪು ಪಸರಿಸುವ ಸ್ಥಳದ ಮುಂಭಾಗವಿಂದು ಮೂತ್ರ ವಿಸರ್ಜನೆ ಮಾಡುವ ಸ್ಥಳವಾಗಿದ್ದು ನಾಗರೀಕ ಸಮಾಜ ತಲೆ ತಗ್ಗಿಸಬೇಕಾಗಿದೆ. ಮೂತ್ರ ವಿಸರ್ಜನೆ ಮಾಡಲು ಸಾರ್ವಜನಿಕ ಶೌಚಾಲಯ ಕೊರತೆಯೋ ಅಥವಾ ಜನರಲ್ಲಿ ತಿಳಿವಳಿಕೆ ಕೊರತೆಯೋ ತಿಳಿಯದಾಗಿದ್ದು ಇದಕ್ಕೆ ಹೊಣೆಯಾರು ಎಂಬುವುದು ಯಕ್ಷ ಪ್ರಶ್ನೆಯಾಗಿದೆ ನಗರ ಬೆಳೆದಂತೆ ಜನ ಸಂಖ್ಯೆ ಸಹ ಏರಿಕೆಯಾಗುತ್ತದೆ ‌ಅದಕ್ಕೆ ತಕ್ಕ ಸೌಲಭ್ಯ ಕೊಡಬೇಕಾಗಿದ್ದು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿದ್ದು ಅದನ್ನು ಕಲ್ಪಿಸುವಲ್ಲಿ ವಿಫಲರಾದ ಆಡಳಿತ ವಿರುದ್ಧ ಜನರ ಕೂಗೂ ಏಳುತ್ತದೆ ಇಲ್ಲಿ ಕೇವಲ ಸರ್ಕಾರ, ಜನ ಪ್ರತಿನಿಧಿಗಳನ್ನು ದೂಷಿಸಿದರೆ ಒಮ್ಮುಖ ಸಂಚಾರದಂತೆಯಾಗುತ್ತದೆ ಇಲ್ಲಿ ಸಾರ್ವಜನಿಕರ ಪಾತ್ರವು ಇದ್ದು ಪರಸ್ಪರ ಜವಾಬ್ದಾರಿ ಹಕ

ಜಿಲ್ಲಾಡಳಿತದಿಂದ 8ನೇ ಅಂತರಾಷ್ಟಿçÃಯ ಯೋಗ ದಿನ ಆಚರಣೆ ಅರೋಗ್ಯ ಕಾಪಾಡಲು ಯೋಗ ಉತ್ತಮವಾದ ಮಾರ್ಗ-ಶಾಸಕ ಬಸನಗೌಡ ದದ್ದಲ್

Image
  ಜಿಲ್ಲಾಡಳಿತದಿಂದ 8ನೇ ಅಂತರಾಷ್ಟಿçÃಯ ಯೋಗ ದಿನ ಆಚರಣೆ ಅರೋಗ್ಯ ಕಾಪಾಡಲು ಯೋಗ ಉತ್ತಮವಾದ ಮಾರ್ಗ-ಶಾಸಕ ಬಸನಗೌಡ ದದ್ದಲ್ ರಾಯಚೂರು ಜೂ.21,- ಒತ್ತಡವನ್ನು ನಿವಾರಿಸಲು ಯೋಗ ಅತಿ ಮುಖ್ಯವಾಗಿದೆ, ಇವತ್ತಿನ ದಿನಗಳಲ್ಲಿ ಒತ್ತಡದ ಜೀವನ ಶೈಲಿಯಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಅಂತಹ ಒತ್ತಡವನ್ನು ನಿವಾರಿಸಲು ಹಾಗೂ ಆರೋಗ್ಯವನ್ನು ಸುಧಾರಿಸಲು ಯೋಗಭ್ಯಾಸ ಮಾಡುವುದು ಉತ್ತಮವಾಗಿದೆಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಹೇಳಿದರು. ಅವರು ಜೂ.5ರ ಮಂಗಳವಾರ ದಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ವಿವಿಧ ಯೋಗ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ 8ನೇ ಅಂತರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ಯೋಗದ ಮೂಲಕ ಭಾರತ ದೇಶದ ಸಂಸ್ಕೃತಿಯನ್ನು ಇಡಿ ಜಗತ್ತಿಗೆ ನಾವು ಪರಿಚಯಿಸುತ್ತಿದ್ದೇವೆ. ಅಂತಹ ಸಂಸ್ಕೃತಿಯನ್ನು ಹೊಂದಿರುವ ಭಾರತ ದೇಶದಲ್ಲಿ ಯೋಗವು ಕೂಡ ಒಂದು. ಪ್ರತಿದಿನ ಒಂದು ಗಂಟೆಗಳ ಕಾಲ ಯೋಗ ಮಾಡುವುದರಿಂದ ನಮ್ಮ ದಿನನಿತ್ಯದ ಶೈಲಿಯನ್ನು ಬದಲಿಸಿಕೊಂಡು ಉತ್ತಮವಾದ, ಯೋಗ್ಯವಾದ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಈ ವೇಳೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಮಾತನಾಡಿ, ನಮ್ಮ ಆರೋಗ್ಯ ಕಾಪಾಡ

ಪ್ರತಿನಿತ್ಯ ಯೋಗ ಮಾಡುವುದರಿಂದ ಮನಸ್ಸಿಗೆ ನವೋಲ್ಲಾಸವಾಗುತ್ತದೆ -ಪಾಂಡುರಂಗ ಕಾಡ್ಲೂರು

Image
 ಪ್ರತಿನಿತ್ಯ ಯೋಗ ಮಾಡುವುದರಿಂದ ಮನಸ್ಸಿಗೆ ನವೋಲ್ಲಾಸ -ಪಾಂಡುರಂಗ  ಕಾಡ್ಲೂರು ರಾಯಚೂರು,ಜೂ.21- ಎಂಟನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ತಾಲೂಕಿನ ಕಾಡೢೂರು ಗ್ರಾಮದ  ಸರಕಾರಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ ನಡೆಯಿತು. ಮಕ್ಕಳಿಗೆ ಯೋಗಾಭ್ಯಾಸವನ್ನು ಹೇಳಿಕೊಟ್ಟು ಪಾಂಡುರಂಗ  ಕಾಡ್ಲೂರು ಮಾತನಾಡಿದರು .ಪ್ರತಿನಿತ್ಯ ಯೋಗ ಮಾಡುವುದರಿಂದ ಮನಸ್ಸಿಗೆ ನವೋಲ್ಲಾಸವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಶಾಲಾ  ಸುಧಾರಣಾ ಸಮಿತಿಯ ಮೇಲ್ವಿಚಾರಕರು(sdmc) ಅಧ್ಯಕ್ಷರಾದ ಮಾನ್ಯಶ್ರೀ ವೀರೇಶ್ ಸಾಹುಕಾರ್ ವಹಿಸಿಕೊಂಡಿದ್ದರು  ,ಮಹಾದೇವ , ಕಮಲ ರೆಹಮಾನ್' ಖೈರುನ್ನಿಸಾಬೆಗಂ ಸಂಗೀತಾ ,ನಿರ್ಮಲ ಪವಿತ್ರ ,ಸುವರ್ಣ ಉಪಸ್ಥಿತಿ ಇದ್ದರು.

ಭಾರತೀಯ - ಟಿಬೇಟಿಯನ್ ವಿದ್ವಾಂಸರ ರಾಷ್ಟ್ರೀಯ ಸಮ್ಮೇಳನ.

 ಭಾರತೀಯ - ಟಿಬೇಟಿಯನ್ ವಿದ್ವಾಂಸರ ರಾಷ್ಟ್ರೀಯ ಸಮ್ಮೇಳನ. ರಾಯಚೂರು,ಜೂ.20-ಉತ್ತರ ಕನ್ನಡದ ಮುಂಡಗೋಡ ಟಿಬೇಟಿಯನ್ ಕ್ಯಾಂಪಸ್ ನ ಗಾಡೆನ್ ಜಾಂಗತ್ಸೆ ಬೌದ್ದ ಮಹಾ ಮಂದಿರದಲ್ಲಿ ನಡೆದ ಭಾರತೀಯ ಹಾಗೂ ಟಿಬೆಟಿ ಯನ್ ವಿದ್ವಾಂಸರ 2ನೆ ರಾಷ್ಟ್ರೀಯ ಮಹಾ ಸಮ್ಮೇಳನ ನಡೆಯಿತು. ಸಮ್ಮೇಳನದ 3ನೇ ದಿನದ 4ನೇ ಗೋಷ್ಠಿಯ ಮುಖ್ಯ ಭಾಷಣಕಾರರಾಗಿ  ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ರಾಯಚೂರು ಜಿಲ್ಲೆಯ ಮಾನ್ಯ ಶ್ರೀ ಹನುಮಂತಪ್ಪ ಕಾಕರಗಲ್ ರವರು Topic :"General views and opinions" ವಿಷಯದ ಕುರಿತು ಸುಮಾರು 15-20 ನಿಮಿಷಗಳ ಅವಧಿ ಮಾತನಾಡಿ ಭಾರತೀಯ ಭವ್ಯ ಸಿಂಧು ನಾಗರೀ ಕತೆಯ ಮೇಲೆ ಹೊರ ದೇಶಗಳ ಅನ್ಯ ಪುರುಷ ಪ್ರಧಾನ ಸಂಸ್ಕೃತಿ ಅಗಮಸಿ, ದೇವರು- ಧರ್ಮ, ಯಜ್ಞ ಯಾಗಗಳ ಮೂಲಕ ಪಶು ಪ್ರಾಣಿಗಳನ್ನು ಬಲಿಕೊಟ್ಟು ಮಾದಕ ಸೋಮರಸ (ಮದ್ಯಪಾನ) ಇತ್ಯಾದಿ ಗಳನ್ನು ಪ್ರಯೋಗಿಸಿ ಹಂತ ಹಂತವಾಗಿ ಭವ್ಯ 'ಅವ್ವ'ಸಂಸ್ಕ್ರುತಿ ನಾಶಮಾಡಿ ವರ್ಣಭೇಧ, ವರ್ಗಭೇಧ,ಲಿಂಗಬೇಧ,ಜಾತಿಬೇಧಗಳನ್ನು ಅನುಷ್ಠಾನ ಗೊಳಿಸಿ, ಸಹಜೀವನ ಸಾಮರಷ್ಯದ ಮೂಲಕ ಜೀವನ ಸಾಗುತ್ತಿದ್ದ ಅಲ್ಲಿನ ಜನ ಸಮುದಾಯಗಳನ್ನು ಸರ್ವನಾಶ ಮಾಡಿದರು. ಇಂತಹ ಹೀನ ವ್ಯವಸ್ಥೆಯ ವಿರುದ್ಧ ಮಾತೃ ಸಂಸ್ಕೃತಿಯ ಮಾನವೀಯತೆಯವರು ತಿರುಗಿಬಿದ್ದರೆ ಅವರನ್ನು ಸಮಾಜದಿಂದಲೇ ಬಹಿಷ್ಕರಿಸಿ, ಹೀನವಾಗಿ ಜೀವನ ನಡೆಸಲು ಜೀವನ ಕ್ರಮ ಹೇರಿದರು ಇಂತಹ ಅವಕೃಪೆ ಜ

ಕಲಾ ಸಂಕುಲ ಸಂಸ್ಥೆಯಿAದ ಚಿಂದಿ ಸ್ಟರ‍್ಸ್ ಕಾರ್ಯಕ್ರಮ : ಇಂಗ್ಲೀಷ್ ವ್ಯಾಮೋಹದಿಂದ ಪಾಲಕರು ಹೊರಬರಬೇಕು-ಕುಂವೀ

Image
  ಕಲಾ ಸಂಕುಲ ಸಂಸ್ಥೆಯಿOದ ಚಿಂದಿ ಸ್ಟರ‍್ಸ್ ಕಾರ್ಯಕ್ರಮ:  ಇಂಗ್ಲೀಷ್ ವ್ಯಾಮೋಹದಿಂದ ಪಾಲಕರು ಹೊರಬರಬೇಕು-ಕುಂವೀ   ರಾಯಚೂರು,ಜೂ.೧೯-ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಗೆ  ಕಳಿಸುವ ಮೂಲಕ ಇಂಗ್ಲೀಷ್ ಶಾಲೆ ವ್ಯಾಮೋಹದಿಂದ ಹೊರಬರಬೇಕೆಂದು ಹಿರಿಯ ಸಾಹಿತಿಗಳಾದ ಕುಂ.ವೀರಭದ್ರಪ್ಪ   ಹೇಳಿದರು.   ಅವರಿಂದು ನಗರದ ಸಿದ್ದರಾಮ ಜಂಬಲದಿನ್ನಿ ರಂಗಮAದಿರದಲ್ಲಿ ಕಲಾ ಸಂಕುಲ ಸಂಸ್ಥೆ ಹಮ್ಮಿಕೊಳ್ಳಲಾದ ಚಿಂದಿ ಸ್ಟರ‍್ಸ್ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.       ನಾನು ಇಂದು ನಿಮ್ಮ ಮುಂದೆ ನಗುನಗುತ್ತ ನಿಲ್ಲಬೇಕಾದರೆ ನಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿದ್ದಿರಿಂದ ಮಾರ್ಮಿಕವಾಗಿ ನುಡಿದ ಅವರು ಇಂಗ್ಲೀಷ್ ಶಾಲೆಗೆ ನಮ್ಮ ಮಕ್ಕಳನ್ನು ನಾನು ಕಳಿಸಿದ್ದರೆ ಇಂದು ನಾನು ವೃದ್ದಾಶ್ರಮಕ್ಕೆ ಸೇರಿರುತ್ತಿದ್ದೆನೊ ಓನೊ ಎಂದರು. ಇಂದಿನ ಕಾರ್ಯಕ್ರಮ ಚಿಂದಿ ಆಯುವ ಮಕ್ಕಳಿಗೆ ಮೀಸಲಾಗಿದೆ ಸ್ಲಂನಲ್ಲಿ ವಾಸಿಸಿ ದಿನ ನಿತ್ಯ ಚಿಂದಿ ಆಯುವ ಮೂಲಕ ಜೀವನ ಸಾಗಿಸಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಏಲ್ಗೆಗೆ ನಾವೆಲ್ಲ ಮುಂದಾಗಬೇಕೆAದರು. ಅವಮಾನ ಮತ್ತು ಶ್ರಮ ಮನುಷ್ಯನಲ್ಲಿ ಕಿಚ್ಚು ತರುತ್ತದೆ ಎಂದ ಅವರು ಕೆಳ ಸಮುದಾಯದಲ್ಲಿ ಬುದ್ದಿವಂತರಿದ್ದು ಅವರಿಗೆ ಅವಕಾಶ ದೊರಕಬೇಕೆಂದರು.   ರಾಯಚೂರು ನಗರ ನನಗೆ ಅನೇಕ ವರ್ಷಗಳೀದ ಚಿರಪರಿಚಿತ ಈ ನಗರ ಕೃಷ್ಣದೇವರಾಯನ ಆಡಳಿತಕ್ಕೊಳಪಟ್ಟು ೫೦೦ ವರ್ಷ ಗತಸಿದ್ದು ಅದರ ಹಿನ್ನಲೆಯಲ್ಲಿ ನಾನು
Image
  C¥Àà£Éà DPÁ±ÀzÀ ¥ÀæwgÀÆ¥À   gÁAiÀÄZÀÆgÀÄ.dÆ.19.C¥Àà «±Á® ¥Àæ¥ÀAZÀzÀ MAzÀÄ ¸ÀÄAzÀgÀ CzÀÄãvÀ    ºÀÄnÖzÁV¤AzÀ E°èAiÀĪÀgÉUÉ £À£Àß ¸ÀÄAzÀgÀ §zÀÄQ£À gÀÆ¥ÀPÀ £À£Àß ¸Àj vÀ¥ÀÅàUÀ¼À£ÀÄß w¢Ý wÃqÀĪÀ ²PÀëPÀ £À£Àß ªÀåQÛvÀézÀ »A¢£À CUÀtÂvÀ ±ÀQÛ £À£Àß ªÀÄvÀÄÛ   ¸ÁªÀÄxÀåð.   vÁ¬ÄAiÀÄ ºÁUÉ vÉÆÃgÀUÉÆqÀ¯ÁgÀ C¥Àà£À ¦æÃw   ªÀÄPÀ̼À ¥Á°UÉ C¥Àà£Éà ªÉÆzÀ® »ÃgÉÆÃ...vÉÆÃgÀÄ ¨ÉgÀļÀÄ »rzÀÄ ¸ÀAvÉAiÀÄ°è dUÀvÀÛ£Éßà vÉÆÃjzÀªÀ..... zÀ±ÀPÀUÀ¼À »AzÉ C¥Àà JAzÀgÉ ªÀÄPÀ̼À ªÉÆUÀzÀ°è ªÀÄÆqÀÄwÛzÀÝ ¨sÁªÀ ¨sÀAiÀÄ. ¸ÀtÚ¥ÀÅlÖ PÁgÀtPÀÆÌ vÀ¯ÉAiÀÄ ªÉÄÃ¯É DPÁ±ÀªÉà PÀ¼Àa ©zÀÝAvÉ ¨sÁ«¹, PÀÆUÁr zÀ£ÀPÉÌ §rzÀ ºÁUÉ §rAiÀÄÄwÛzÀÝ DvÀ£À PÉÆÃ¥ÀPÉÌ DvÀ£Éà ¸Án....CzÀPÉÌ K£ÉÆà J®è ªÀÄPÀ̼À rªÀiÁåAqÀÄUÀ¼ÀÄ ªÉÆzÀ®Ä vÁ¬ÄAiÀÄ §½AiÉÄÃ. K£À£Éßà PÉüÀ¨ÉÃPÁzÀgÀÆ CzÀPÉÌ CªÀÄä£À ªÀÄzsÀå¹ÜPÉ ¨ÉÃPÉ ¨ÉÃPÀÄ. C¥Àà£À ªÀÄÄAzÉ zsÉÊAiÀÄðªÁV ºÉÆÃV PÉüÀĪÀ zsÉÊAiÀÄð E®èªÉà E®è. ºÁVzÁÝUÀ JzÀÄgÀÄ ¤AvÀÄ ªÀiÁvÀ£ÁqÀĪÀ ¥Àæ±Éß E®èªÉà E®è.   ºÁUÉAzÀÄ DvÀ ¸ÀªÁð¢üPÁjAiÀÄ®è. §zÀ°UÉ ¸Àj vÀ¥ÀÅàUÀ¼À£ÀÄß wzÀÄݪÀ ªÀiÁUÀðzÀ±ÀðPÀ. DzÀgÉ PÁ® §zÀ¯ÁzÀAvÉ C¥Àà£ÀÆ ¸ÀºÀ