Posts

Showing posts from May, 2022

ಆ ರ್ ಟಿ ಪಿ ಎಸ್: ಸೂಗಪ್ಪರವರಿಗೆ ಬೀಳ್ಕೊಡುಗೆ ಸಮಾರಂಭ

  ರಾಯಚೂರು,ಮೇ.31- ಸುದೀರ್ಘ 37 ವರ್ಷಗಳ ಕಾಲ ಆ ರ್ ಟಿ ಪಿ ಎಸ್ ನಲ್ಲಿ ಚಾಲಕರಾಗಿ ತಮ್ಮ ಸೇವೆಯನ್ನು  ಸಲ್ಲಿಸಿದ ಸೂಗಪ್ಪ ತಂದೆ ಸೂಗಣ್ಣ ದೇವಸೂಗೂರು. 1984 ರಲ್ಲಿ ಸೇವೆಗೆ ಸೇರಿ RTPS ನ ಸಿಬ್ಬಂದಿಗೆ ಮೆಚ್ಚಿನ ಸಹೋದ್ಯೋಗಿಯಾಗಿ  ಕಾರ್ಯನಿರ್ವಹಿಸಿದ್ದಾರೆ, ಇಂದು ಸಂಜೆ ಕಚೇರಿಯಲ್ಲಿ ಸಿಬ್ಬಂದಿ ವರ್ಗ ಸೇರಿ ನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿ ಬೀಳ್ಕೊಟ್ಟರು. ಸೂಗಪ್ಪ ಪತ್ನಿ ಮಹಾದೇವಮ್ಮ, ಮಗಳಾದ ಶ್ರೀಮತಿ ಶ್ರೀ ಸುರೇಖಾ ವಿಶ್ವನಾಥ್ ಸಾಹುಕಾರ್, ಕುಮಾರಿ ಶ್ವೇತಾ, ಮೊಮ್ಮಕ್ಕಳಾದ ವಿವಾನ, ಆಕಾಶ ಸಾಹುಕಾರ,ವಿಹಾರಿಕಾ ಸುರಭಿ ಸಾಹುಕಾರ, ಹಾಗೂ ಕುಟುಂಬವರ್ಗ, ಅಪಾರ ಬಂದು ಮಿತ್ರರು ಶುಭಕೋರಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ: ಬೆಳಗಾವಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ಉಧ್ಘಾಟನೆ

 ರಾಯಚೂರು,ಮೇ.29-ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬೆಳಗಾವಿ ಜಿಲ್ಲಾ ಘಟಕ ವತಿಯಿಂದ ಹಮ್ಮಿಕೊಳ್ಳಲಾದ "ಮೂರು ವರ್ಷಗಳ ಮುನ್ನೋಟ ಹಾಗೂ ಬದಲಾಗುತ್ತಿರುವ ಕಾನೂನು ಮತ್ತು ಮಾಧ್ಯಮ" ವಿಷಯ ಕುರಿತು ಬೆಳಗಾವಿಯ ನಗರದಲ್ಲಿ  ಆಯೋಜಿಸಲಾಗಿದ್ದ  ಕಾರ್ಯಾಗಾರವನ್ನು ಜಲ ಸಂಪನಮೂಲ  ಸಚಿವ ಗೋವಿಂದ ಕಾರಜೋಳ ಉದ್ಘಾಟಿಸಿ ಮಾತನಾಡಿದರು ಹುಕ್ಕೇರಿ ಶ್ರೀ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ರಾಜ್ಯದ ನಾನಾ ಭಾಗದಿಂದ ಸಮಿತಿ ಪದಾಧಿಕಾರಿಗಳು ಆಗಮಿಸಿದ್ದರು.

ಹಿಂದುತ್ವದ ಶಬ್ದವನ್ನು ಜನಪ್ರಿಯಗೊಳಿಸಿದ್ದೆ ಸಾವರ್ಕರ್ -ನಾಗರಾಜ ಅಕ್ಕರಕಿ.

 ರಾಯಚೂರು,ಮೇ.29-ದೇವದುರ್ಗದ ವೀರ ಸಾವರ್ಕರ್ ಯೂತ್ ಅಸೋಸಿಯೇಷನ್ ವತಿಯಿಂದ,ಸಾವರ್ಕರ್ ಜನ್ಮ ದಿನಾಚರಣೆಯ ಜಯಂತಿಯನ್ನು ಆಚರಿಸಲಾಯಿತು..  ಈ ಸಂಧರ್ಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಶ್ರೀ.ನಾಗರಾಜ ಅಕ್ಕರಕಿಯವರು ಮಾತನಾಡಿ, ಸಾವರ್ಕರ್ ರವರು ಲೇಖಕ,ಇತಿಹಾಸಕಾರ,ಕವಿ,ತತ್ವಶಾಸ್ತ್ರಜ್ಞ,ಮತ್ತು ಸಮಾಜಸೇವಕ,ಅವರನ್ನುಕೆಲವರು ಭಾರತದ ಸ್ವಾತಂತ್ರ್ಯಸಂಗ್ರಾಮದ ಅತಿದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸಿದರೆ,ಇನ್ನು ಕೆಲವರು ಅವರನ್ನು ಕೋಮುವಾದಿಯಾಗಿಯೂ,ಭಾವಿಸುತ್ತಾರೆ, ದಾಮೋದರ ಸವಾರ್ಕರ ರವರು ಹಿಂದುತ್ವದ ಉಗ್ರ ಪ್ರತಿಪಾದಕರಷ್ಟೇ ಅಲ್ಲ,ಆ ಶಬ್ದವವನ್ನು ಜನಪ್ರಿಯಗೊಳಿಸಿದ್ದೆ ಅವರು,ಎಂದು ಹೇಳಿದರು...  ಚಿಂತನೆ,ಧರ್ಮ,ಭಾಷೆ,ಮತ್ತು ಸಂಸ್ಕೃತಿಯ,ಒಂದು ಸಾಮಾನ್ಯ ಎಳೆಯು ರಾಷ್ಟ್ರೀಯತೆಗೆ ಹೇಗೆ ಅಗತ್ಯ ಎಂಬುದನ್ನು ತಮ್ಮ ಕೃತಿಗಳ ಮೂಲಕ ಎತ್ತಿ ತೋರಿಸಿದ ಕೀರ್ತಿ ಸಾವರ್ಕರ್ ರವರಿಗೆ ಸಲ್ಲುತ್ತದೆ ಎಂದು ಹೇಳಿದರು..   ಈ ಸಂಧರ್ಭದಲ್ಲಿ ಅಧ್ಯಕ್ಷ ವಾಸುದೇವ ನಾಯಕ,ಗಂಗನಗೌಡ ಗೌರಂಪೇಟ,ಚಂದ್ರು ಪಾಟೀಲ್,ಸುನೀಲ ಮಡಿವಾಳ,ಸಂಗಯ್ಯಸ್ವಾಮಿ,ಮಾಹಾಲಿಂಗಯ್ಯ ಸ್ವಾಮಿ,ವೀರೇಶ ಹೂಗಾರ,ಹಾಗೂ ಪಧಾದಿಕಾರಿಗಳು ಉಪಸ್ಥಿತರಿದ್ದರು...

ಹುಬ್ಬಳ್ಳಿಯ ದುರ್ಗದಬೈಲ್ ಗಿರ್ಮಿಟ್ ಮಂಡಕ್ಕಿ ಬಹಳ ಫೇಮಸ್

 ಹುಬ್ಬಳ್ಳಿಯ  ದುರ್ಗದಬೈಲ್ ಗಿರ್ಮಿಟ್ ಮಂಡಕ್ಕಿ ಬಹಳ ಫೇಮಸ್.                                            ಹುಬ್ಬಳ್ಳಿ,ಮೇ.28- ಗಂಡು ಮೆಟ್ಟಿದ ನಾಡು ,ಛೋಟಾ ಮುಂಬೈ, ವಾಣಿಜ್ಯನಗರಿ ಹುಬ್ಬಳ್ಳಿ ಬಗ್ಗೆ ಎಲ್ಲರೂ ಕೇಳಿರುತ್ತಾರೆ ಬಹುತೇಕ ಜನರು ಹುಬ್ಬಳ್ಳಿ ನೋಡಿರುತ್ತಾರೆ ಹುಬ್ಬಳ್ಳಿ ನೋಡಿದ ಅನೇಕರು ಹುಬ್ಬಳ್ಳಿ ನಗರದ ಪ್ರಮುಖ ಮಾರುಕಟ್ಟೆ ಜನ ನಿಬಿಡ ಪ್ರದೇಶವಾದ ದುರ್ಗದಬೈಲು ನೋಡಿರುತ್ತಾರೆ.ಇಲ್ಲಿ ಬಟ್ಟೆ, ಪಾತ್ರೆ,ಮೋಬೈಲ್, ಎಲೆಕ್ಟ್ರಾನಿಕ್ಸ್,ಸ್ಟೇಷನರಿ,ಸಿಹಿ ತಿಂಡಿಗಳ ಅಂಗಡಿ, ಇನ್ನೂ ಅನೇಕ ಮಳಿಗೆಗಳು ಉಂಟು ನೀವು ಇದರಲ್ಲೇನಿದೆ... ಮಾರುಕಟ್ಟೆ ಅಂದ ಮೇಲೆ ಇದೆಲ್ಲ ಸಾಮಾನ್ಯವೆಂದು ಕೇಳಬಹುದು ಆದರೆ ಈ ಸ್ದಳದಲ್ಲಿ ಮತ್ತೊಂದು ವಿಶೇಷತೆಯಿದೆ ಇಲ್ಲಿ ಸಾಯಿಂಕಾಲವಾದರೆ ತಿಂಡಿ, ತಿನಸುಗಳ ಲೋಕವೆ ತೆರೆದುಕೊಳ್ಳುತ್ತೆ ಅದರಲ್ಲಿ ವಿಶೇಷವಾಗಿ ಉತ್ತರ  ಕರ್ನಾಟಕದ ಗಿರ್ಮಿಟ್ ಸಿಗುತ್ತದೆ ಅಲ್ಲಿ ದೊರೆಯುವ ಗಿರ್ಮಿಟ್ ಗೆ ಭಾರಿ ಡಿಮ್ಯಾಂಡ್ ಇದೆ ಪ್ರಭಯ್ಯ ಎನ್ನುವವರು ಗಿರ್ಮಿಟ್ ಮಾಂತ್ರಿಕ ಎಂದರೆ ಅತಶಯೋಕ್ತಿ ಆಗಲಾರದು.                         ಪ್ರಭಯ್ಯ  1966 ರಲ್ಲಿ ತಮ್ಮ ತಾತಂದಿರ, ತಂದೆ  ಕಾಲದಿಂದಲು ನಡೆಸಿಕೊಂಡು ಬಂದ ಗಿರ್ಮಿಟ ಅಂಗಡಿ ನಡೆಸುತ್ತಿದ್ದು ಜನರು ಇವರ ಅಂಗಡಿಯನ್ನೆ ಹುಡುಕಿಕೊಂಡು ಬಂದು ಗಿರ್ಮಿಟ್ ಸವಿಯುತ್ತಾರೆ ಅಬಾಲ ವೃದ್ದರಾದಿಯಾಗಿ ಗಿರ್ಮಿಟ್ ತಿನ್ನಲು ಜನ ಜಂಗುಳಿ ಸೇರಿರುತ್ತದೆ ರುಚಿ ಶುಚಿಗೆ ರಾಜಿಯಾಗದೆ

ಧಾರವಾಡ ನುಗ್ಗೀಕೆರಿ ಹನುಮಂತ ದೇವಸ್ಥಾನಕ್ಕೆ ಭಕ್ತರ ದಂಡು

 ಧಾರವಾಡ ನುಗ್ಗೀಕೆರಿ ಹನುಮಂತ ದೇವಸ್ಥಾನಕ್ಕೆ  ಭಕ್ತರ ದಂಡು.                                        ಧಾರವಾಡ,ಮೇ.28-ಧಾರವಾಡದ ಸುಪ್ರಸಿದ್ಧ  ನುಗ್ಗೀಕೇರಿ  ಶ್ರೀ ಹನುಮಂತನ ದೇವಸ್ಥಾನಕ್ಕೆ ಶನಿವಾರ ಹಿನ್ನಲೆ ಭಕ್ತರು ಹರಿದು ಬರುತ್ತಿದ್ದು ದೇವಸ್ಥಾನ ತುಂಬಿ ತುಳುಕುತ್ತಿದೆ. ಧಾರವಾಡ ಬಸ್ ನಿಲ್ದಾಣದಿಂದ ಸುಮಾರು 6 ಕಿ.ಮಿ ಅಂತರದಲ್ಲಿ ಕಲಘಟಗಿ ಮುಖ್ಯ ರಸ್ತೆಯಲ್ಲಿ ಅರ್ಧ ಕಿ.ಮಿ ಕಾಲ್ನಡಿಗೆಯಲ್ಲಿ ಸಾಗಿದರೆ ಸುಂದರ ವಿಶಾಲ ಪರಿಸರದಲ್ಲಿ ಹರಡಿಕೊಂಡಿರುವ ಕೆರೆ ದಡದಲ್ಲಿ ನೆಲೆಸಿರುವ ಹನುಮಂತ ದೇವರು ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ ಈ ಭಾಗದ ಆರಾಧ್ಯ ದೈವವಾಗಿದ್ದು ಹನುಮನ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆಯುತ್ತಾರೆ.ದೇವಸ್ಥಾನ ಸಮಿತಿ ಭಕ್ತರಿಗೆ ಸುಲಲಿತವಾಗಿ ದರ್ಶನವಾಗುವ ಹಾಗೆ ವ್ಯವಸ್ಥೆ ಕಲ್ಪಿಸುತ್ತಾರೆ.  ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.ಇತ್ತೀಚೆಗೆ  ಅನ್ಯಕೋಮಿನ ಜನರು ಇಲ್ಲಿ ಟೆಂಗಿನಕಾಯಿ, ಹಣ್ಣು ಮಾರಾಟ ಮಾಡುತ್ತಾರೆ ಅದನ್ನು ಹಿಂದು ಪರ ಸಂಘಟನೆಗಳು ವಿರೋಧಿಸಿದ್ದ ಪರಿಣಾಮ ಬಿಗಿವಿನ ವಾತಾವರಣ ಅಂದು ಕಂಡುಬಂದ  ಹಿನ್ನಲೆ ಈಗಲೂ ಪೊಲೀಸ್ ಸಿಬ್ಬಂದಿ ಇಲ್ಲಿ ಮೋಕ್ಕಾಂ ಹೂಡಿದ್ದಾರೆ.

ಸ್ವಾತಂತ್ರಕ್ಕಾಗಿ ಹೋರಾಡಿದ ವೀರ ಯೋಧರನ್ನು ಇಂದಿನ ಯುವ ಪೀಳಿಗೆ ಸ್ಮರಿಸಬೇಕು: ರಾಜಾ ಅಮರೇಶ್ವರ ನಾಯಕ

 ಸ್ವಾತಂತ್ರಕ್ಕಾಗಿ ಹೋರಾಡಿದ ವೀರ ಯೋಧರನ್ನು ಇಂದಿನ ಯುವ ಪೀಳಿಗೆ ಸ್ಮರಿಸಬೇಕು: ರಾಜಾ ಅಮರೇಶ್ವರ ನಾಯಕ ರಾಯಚೂರು ಮೇ.28- ಭಾರತ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ತ್ಯಾಗ ಬಲಿದಾನ ಮಾಡಿದ ವೀರ ಯೋಧರ ಬಗ್ಗೆ ಇಂದಿನ ಪೀಳಿಗೆಯ ಯುವಕರಿಗೆ ಹಾಗೂ ಮಕ್ಕಳಿಗೆ ತಿಳಿಯಪಡಿಸಬೇಕು ಆಗ ಮಾತ್ರ ಭಾರತವನ್ನು ಭವ್ಯ ಭಾರತವನ್ನಾಗಿ ಕಾಣಲು ಸಾಧ್ಯ ಎಂದು ಸಂಸದ ರಾಜ ಅಮರೇಶ ನಾಯಕ ಅವರು ಹೇಳಿದರು. ಅವರಿಂದು ನಗರದ ಶ್ರೀರಾಮಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರ ಸಂಯುಕ್ತಶ್ರಾದಲ್ಲಿ 75ನೇ ಭಾರತ ಸ್ವಾತಂತ್ರದ ಅಮೃತ ಮಹೋತ್ಸವ ಅಂಗವಾಗಿ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದಲ್ಲಿ ಭಾರತಬಾಂಬೆಯ ಭಾವಚಿತ್ರಕ್ಕೆ ಪುಷ್ಪರ್ಚಾನೆ  ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತ ದೇಶದ ಸ್ವಾತಂತ್ರಕ್ಕಾಗಿ ತ್ಯಾಗ ಬಲಿದಾನ ಮಾಡಿ ತಮ್ಮ ಕುಟುಂಬಗಳನ್ನು ಕಳೆದುಕೊಂಡು ಹುತಾತ್ಮ ವೀರಯೋಧರ ರಕ್ತ ಬಲಿದಾನ ದ ತ್ಯಾಗದಿಂದ ನಾವು ಇಂದು ಭಾರತ ದೇಶದಲ್ಲಿ ಸ್ವಾತಂತ್ರ ಪಡೆದು ಸಾಮರಸ್ಯ ಜೀವನವನ್ನು ಸಾಗಿಸಲು ಸಾಧ್ಯವಾಗಿದೆ. ಯಾರು ಇತಿಹಾಸ ಬಗ್ಗೆ ಅರಿತುಕೊಳ್ಳುತ್ತಾರೆ ಅಂತವರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು. ಭಾರತದ 75ನೇ ಸ್ವಾತಂತ್ರ ಅಮೃತ ಮಹೋತ್ಸವ ಅಂಗವಾಗಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ವೀರಯೋಧರ ಬಗ್ಗೆ ಈಗಿನ

ಜಾಗೀರ ವೆಂಕಟಾಪೂರು: ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ

 ಸಮಗ್ರ ಕೃಷಿ ಅಭಿಯಾನ ವಾಹನಗಳಿಗೆ ಶಾಸಕರಿಂದ ಚಾಲನೆ ರಾಯಚೂರು ಮೇ.27- ತಾಲೂಕಿನ ಕಲ್ಮಲಾ ಹೋಬಳಿಯ ಜಾಗೀರ ವೆಂಕಟಾಪೂರು ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಹಾಗೂ ಕೃಷಿ ಮತ್ತು ಕೃಷಿಗೆ ಸಂಬAಧಿಸಿದ ಇತರೆ  ಇಲಾಖೆಗಳ ಸಹಯೋಗದೊಂದಿಗೆ ಸಮಗ್ರ ಕೃಷಿ ಅಭಿಯಾನದ ವಾಹನಗಳಿಗೆ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರು ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಪೂರೈಕೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಿ. ಅಲ್ಲದೆ ರಸಗೊಬ್ಬರವು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಮಾರಾಟಗಾರರ ಮೇಲೆ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿ, ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.        ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಪ್ರಾಣೇಶ, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೂರ ಜಹಾರ್ ಖಾನಂ, ಅಪರ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್, ರಾಯಚೂರು ತಾಲೂಕು ತಹಸೀಲ್ದಾರ್ ಡಾ.ಹಂಪಣ್ಣ ಸಜ್ಜನ್, ರಾಯಚೂರು ತಾಲೂಕು ಪಂಚಾ

ಚಿಂತಲಕುಂಟಾ : ಬಸ್ ಸೌಲಭ್ಯ ಆರಂಭ

ರಾಯಚೂರು,ಮೇ.27- ರಸ್ತೆ ಸಂಪರ್ಕ, ಬಸ್ ಸೌಲಭ್ಯದಿಂದ ವಂಚಿತವಾಗಿದ್ದ ತಾಲೂಕಿನ ಚಿಂತಲಕುಂಟಾ ಗ್ರಾಮಕ್ಕೀಗ ಬಸ್ ಸೇವೆ ಆರಂಭಗೊಂಡಿದ್ದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಶಾಸಕರು ಮತ್ತು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ಶಿವನಗೌಡ ನಾಯಕ ಅವರ ಇಚ್ಛಾಶಕ್ತಿ, ಕಾಳಜಿಯ ಹಿನ್ನೆಲೆಯಲ್ಲಿ ಚಿಂತಲಕುಂಟಾ ಗ್ರಾಮಕ್ಕೆ ರಸ್ತೆ ಡಾಂಬರೀಕರಣ ಹಾಗೂ ನೂತನ ಬಸ್ ಸೇವೆ ಆರಂಭವಾಗಿದೆ. ಲೋಕೋಪಯೋಗಿ ಇಲಾಖೆಯ ಎಸ್ಎಸ್'ಡಿಪಿ ಯೋಜನೆಯಡಿ ಮಸರಕಲ್ ಗ್ರಾಮದಿಂದ ಚಿಂತಲಕುಂಟಾ ಗ್ರಾಮಕ್ಕೆ ರಸ್ತೆ ಡಾಂಬರೀಕರಣ ಕಾಮಗಾರಿಯಾಗಿದೆ. ಜೊತೆಗೆ ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಬಸ್ ಸಾರಿಗೆ ಸೇವೆ ಕಲ್ಪಿಸಲಾಗಿದ್ದು ದೇವದುರ್ಗ-ಶಿವಂಗಿ(ಮಸರಕಲ್, ಚಿಂತಲಕುಂಟಾ ವಾಯಾ) ಮಾರ್ಗದಲ್ಲಿ ಬಸ್ ಸಂಚಾರ ಆರಂಭವಾಗಿದೆ. ಇದರಿಂದ ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಂಬಣ್ಣ ನೀಲಗಲ್, ಬಿಜೆಪಿ ಹಿರಿಯ ಮುಖಂಡರಾದ ಗೋಪಾಲಪ್ಪಗೌಡ, ನಾಗರಾಜ ಪಾಟೀಲ್ ಗೋಪಾಳಪುರ, ಜಹೀರ್ ಪಾಷಾ, ಬಸನಗೌಡ ವೆಂಕಟಾಪುರ, ಮಲ್ಲಿಕಾರ್ಜುನ ಹಿರೇಬುದೂರು, ಶಿವಪ್ಪ ನಾಯಕ ಸೇರಿದಂತೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧಿಕಾರಿಗಳು, ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಿಲ್ಲೆಯ 179 ಗ್ರಾ.ಪಂ.ಗಳಲ್ಲಿ ``ದುಡಿಯೋಣ ಬಾ ಅಭಿಯಾನ’’

 ಜಿಲ್ಲೆಯ 179 ಗ್ರಾ.ಪಂ.ಗಳಲ್ಲಿ ``ದುಡಿಯೋಣ ಬಾ ಅಭಿಯಾನ’’‌: ನರೇಗಾ ಯೋಜನೆಯಡಿ ಜಿಲ್ಲೆಗೆ 105 ಲಕ್ಷ ಮಾನವ ದಿನಗಳ ಗುರಿ ವಿಶೇಷ ವರದಿ: ರಾಯಚೂರು ಮೇ.26,(ಕ.ವಾ):-ರಾಜ್ಯದಲ್ಲೇ ಅತಿ ದೊಡ್ಡ ಉದ್ಯೋಗ ಯೋಜನೆ ಎಂಬ ಹೆಗ್ಗಳಿಕೆಗೆ ಭಾರತ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಪಾತ್ರವಾಗಿದ್ದು, ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಎಲ್ಲ ವಯಸ್ಕ ಜನರಿಗೆ ಉದ್ಯೋಗ ಒದಗಿಸುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದೆ.   ಗ್ರಾಮೀಣ ಭಾಗದ ಜನರ ಜೀವನಕ್ಕೆ ಭದ್ರತೆ ಹೆಚ್ಚಿಸಲು ವರ್ಷದಲ್ಲಿ 100 ದಿನಗಳ ಕೆಲಸ ಒದಗಿಸುವ ಗುರಿಯನ್ನು ನರೇಗಾ ಯೋಜನೆ ಹೊಂದಿದೆ. ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ನರೇಗಾ) ಯಡಿ ಒಂದು ಕುಟುಂಬದ ವಯಸ್ಕ ಸದಸ್ಯರು ಸ್ವಯಂ ಪ್ರೇರಿತರಾಗಿ ನೋಂದಣಿಯಾದರೆ, ಅಂತವರಿಗೆ ಆರ್ಥಿಕ ವರ್ಷವೊಂದಕ್ಕೆ ನೂರು ದಿನಗಳ ಉದ್ಯೋಗ ನೀಡಲಾಗುತ್ತದೆ. ಈ ಯೋಜನೆಯು 2005ರ ಸೆಪ್ಟೆಂಬರ್ 5ರಂದು ಜಾರಿಗೆ ತರಲಾಯಿತು. ಆರಂಭದಲ್ಲಿ ಈ ಯೋಜನೆಗೆ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಓಖಇಉಂ) ಎಂದು ಹೆಸರಿಸಲಾಯಿತು. ಆದರೆ 2009ರ ಅಕ್ಟೋಬರ್ 2ರಂದು ಈ ಯೋಜನೆಯ ಹೆಸರನ್ನು ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಒಓಖಇಉಂ) ಎಂದು ಬದಲಾಯಿಸಲಾಯಿತು.  ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ತೀವ್ರತೆ ಕಡಿಮೆಯಾಗಿ ಸಾಮಾನ್ಯ ಜನಜೀವನ ಸಹಜ ಸ್ಥಿತಿಗೆ ಬಂದಿದ್ದು, ಜಿ

ಏಮ್ಸ್ ಹೋರಾಟ: ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘ ಬೆಂಬಲ

  ರಾಯಚೂರು,ಮೇ.26- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ವತಿಯಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ 14ನೆ ದಿನಕ್ಕೆ ಮುಂದುವರಿದಿದೆ .ಇಂದು ರಾಯಚೂರು ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ರಾಮಣ್ಣ ಇವರ ನೇತೃತ್ವದಲ್ಲಿ ರಾಮಚಂದ್ರಪ್ಪ ,ಎಂ ಡಿ ದಸ್ತಗಿರಿ, ಭೀಮಣ್ಣ ,ಮಹಾದೇವ, ಖಾದರ್ ನಬಿ, ಮಾರ್ಯಪ್ಪ ,ವಿಟ್ಠಲ, ಮಲ್ಲಿಕಾರ್ಜನ ,ಹಣಮಂತ ಗದಾರ್, ಬಶೀರ್ ಅಹ್ಮದ್ ,ಸೀತಾರಾಮ, ತಿಮ್ಮಪ್ಪ ,ಸತ್ಯನಾಥ್ ,ಪೆಡ್ಲಿ ಮುಂತಾದ ಅನೇಕ ನಿವೃತ್ತ ಪೋಲೀಸ್ ಅಧಿಕಾರಿಗಳು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಡಾ. ಬಸವರಾಜ ಕಳಸ ಸಂಚಾಲಕರಾದ ಅಶೋಕ್ ಕುಮಾರ್ ಜೈನ್' ಎಸ್ ಮಾರೆಪ್ಪ ವಕೀಲರು ,ವೆಂಕಟೇಶಾಚಾರಿ, ಸುಲೋಚನಾ ಸಂಘ, ಬಶೀರ್ ಅಹ್ಮದ್ ಹೊಸಮನೆ, ಅಶ್ವತ್ಥನಾರಾಯಣ 'ಸಾದಿಕ್ ಖಾನ್, ನರೇಂದ್ರ ಆರ್ಯ ,ಶ್ರೀನಿವಾಸ್ ಕಲಾಲದೊಡ್ಡಿ  ಮುಂತಾದವರು ಭಾಗವಹಿಸಿದ್ದರು .

ಗಲಗ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಗಿಡ್ಡಯ್ಯ ರಾಜಿನಾಮೆ ಸಲ್ಲಿಕೆ.

 ಗಲಗ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಗಿಡ್ಡಯ್ಯ ರಾಜಿನಾಮೆ ಸಲ್ಲಿಕೆ. ರಾಯಚೂರು,ಮೇ.25- : ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಲಗ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಗಿಡ್ಡಯ್ಯ ವೈಯಕ್ತಿಕ ಕಾರಣಾಗಳಿಂದಾಗಿ ತಮ್ಮ ಅಧ್ಯಕ್ಷೀಯ ಸ್ಥಾನವನ್ನು ನಿಭಾಯಿಸಲು ತೊಂದರೆ ಆಗುತ್ತದೆ ಎಂದು ಮನ: ಪೂರ್ವಕವಾಗಿ, ಸ್ವ ಇಚ್ಛೆಯಿಂದ ಕೂಡಿದ ತಮ್ಮ ಲಿಖಿತ ರೂಪದ ರಾಜಿನಾಮೆಯನ್ನು ಅವಧಿಗೆ ಮುನ್ನವೇ ರಾಯಚೂರು ಉಪ ವಿಭಾಗಧಿಕಾರಿಯಾದ ರಜನಿಕಾಂತ್ ಇವರನ್ನು ಕಚೇರಿಯಲ್ಲಿ ಭೇಟಿ ಮಾಡಿ ರಾಜಿನಾಮೆ ಪತ್ರವನ್ನು ಸಲ್ಲಿಸಿ ತಮ್ಮ ರಾಜಿನಾಮೆಯನ್ನು ಅಂಗಿಕರಿಸುವಂತೆ ಕೋರಿದ್ದಾರೆ. ಈ ಸಂದರ್ಭದಲ್ಲಿ ಗಲಗ ಗ್ರಾಮ ಪಂಚಾಯತಿಯ ವಿವಿಧ ವಾರ್ಡಿನ ಸದಸ್ಯರು, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತಿಭಾ ಸುಗಮಸಂಗೀತ ಸಂಸ್ಥೆ ಕಾರ್ಯ ಶ್ಲಾಘನೀಯ -ಎ. ಪಾಪಾರೆಡ್ಡಿ.

Image
Inbox ಪ್ರತಿಭಾ ಸುಗಮಸಂಗೀತ ಸಂಸ್ಥೆ  ರಾಯಚೂರು ಇದರ ಕಾರ್ಯ ಶ್ಲಾಘನೀಯ        _ಎ. ಪಾಪಾರೆಡ್ಡಿ.         ರಾಯಚೂರಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡುವ ಮೂಲಕ ಹಾಗು ಸಂಗೀತದ ಕಲೆಯನ್ನು ಯುವಕರಲ್ಲಿ ಬೆಳೆಸುವ ಕಾರ್ಯವನ್ನು ನಗರದ ಪ್ರತಿಭಾ ಸುಗಮಸಂಗೀತ ಸಂಸ್ಥೆ ಅತ್ಯುತ್ತಮವಾದ ಕಾರ್ಯವನ್ನು ಮಾಡುತ್ತಿದೆ ಇದರ ಸೇವೆ ಶ್ಲಾಘನೀಯ ಎಂದು ರಾಯಚೂರಿನ ಮಾಜಿ ಶಾಸಕರಾದ  ಎ.ಪಾಪ ರೆಡ್ಡಿ ಅವರು ಹೇಳಿದರು.    ಪ್ರತಿಭಾ ಸುಗಮಸಂಗೀತ ಸಂಸ್ಥೆಯು ಸಂಗೀತ ಕ್ಷೇತ್ರವಲ್ಲದೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ  ರಾಯಚೂರಿನ  ಸಹೃದಯರಿಗೆ ಒಳ್ಳೆಯ ಕಾರ್ಯಕ್ರಮವನ್ನು ನೀಡುತ್ತಾ ಬಂದಿರುತ್ತದೆ ಹಾಗೂಶ್ರೀ ಡಾ. ಶರಣಪ್ಪ ಗೋನಾಳ ಇವರ ತಂದೆ ತಾಯಿಯ ಸ್ಮರಣಾರ್ಥ ಮಾಡುವ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾರೆಂದು ಅವರು ಹೇಳಿದರು.    ನಗರದ      ವಿದ್ಯಾನಗರದಲ್ಲಿರುವ ಶ್ರೀ ಶಿವ ಪಾರ್ವತಿ ಗಣೇಶ ಮಂದಿರ ರಾಯಚೂರ ನಲ್ಲಿ ಪ್ರತಿಭಾ ಸುಗಮಸಂಗೀತ ಸಂಸ್ಥೆಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಇದೇ 23ರಂದು ಜರುಗಿದ ಸುಗಮ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ಶ್ರೀ ಷ.ಬೃ. ಅಭಿನವ ರಾಚೋಟಿ ಶಿವಾಚಾರ್ಯ ಮಹಾಸ್ವಾಮಿಗಳು ಸೋಮವಾರಪೇಟೆ ಮಠ ರಾಯಚೂರು ಇವರು ದಿವ್ಯ ಸಾನಿಧ್ಯವನ್ನು ವಹಿಸಿ ಡಾಕ್ಟ

ಶುಕ್ರವಾರ ದಂದು ಜಿಲ್ಲಾಧಿಕಾರಿಗಳ ನಡೆ, ಹಳ್ಳಿಕಡೆ: ಕಲ್ಮಲಾ ಹೋಬಳಿಯ ಜಾ.ವೆಂಕಟಾಪೂರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ

  ರಾಯಚೂರು ಮೇ.25-“ಜಿಲ್ಲಾಧಿಕಾರಿಗಳ ನಡೆ, ಹಳ್ಳಿಕಡೆ’’ ಎಂಬ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲೆಯಲ್ಲಿ ಒಂದು ಗ್ರಾಮದಲ್ಲಿ ವಾಸ್ತವ್ಯ ಮಾಡುವಂತೆ ಸರ್ಕಾರ ಸೂಚಿಸಿದ್ದು, ಇದೇ ಮೇ.27ರ ಶುಕ್ರವಾರ ದಂದು ರಾಯಚೂರು ತಾಲೂಕಿನ ಕಲ್ಮಲಾ ಹೋಬಳಿಯ ಜಾಗೀರ ವೆಂಕಟಾಪೂರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾಧಿಕಾರಿಗಳ ನಡೆ, ಹಳ್ಳಿಕಡೆ ಕಾರ್ಯಕ್ರಮ ಮಾಡಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಕೆ.ಆರ್. ದುರುಗೇಶ್ ಅವರು ತಿಳಿಸಿದ್ದಾರೆ.      ಅಂದು ಬೆಳಿಗ್ಗೆ 10ರಿಂದ ಸಾಯಂಕಾಲ 5ಗಂಟೆವರೆಗೆ ಗ್ರಾಮವಾಸ್ತವ್ಯ ನಡೆಸಲಿದ್ದು, ಪ್ರಮುಖವಾಗಿ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು. ಜಾಗೀರ ವೆಂಕಟಾಪೂರ ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದು, ಅದೇ ದಿನ ಇನ್ನುಳಿದ ತಾಲ್ಲೂಕುಗಳಲ್ಲಿ ತಹಶೀಲ್ದಾರರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದು ತಿಳಿಸಿದರು.   ಪಹಣಿಯಲ್ಲಿನ ಲೋಪದೋಷಗಳ ಸರಿಪಡಿಸುವಿಕೆ, ಆಕಾರ ಬಂದ್ ತಾಳೆ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು. ಪೌತಿ ಖಾತೆಯಲ್ಲಿ ನೈಜ ವಾರಸುದಾರರ ಹೆಸರು ಸೇರ್ಪಡೆ, ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ,  ಸ್ಮಶಾನ ಜಾಗ ಲಭ್ಯತೆ ಬಗ್ಗೆ ಪರಿಶೀಲಿಸುವುದು. ಆಶ್ರಯ ಯೋಜನೆಗೆ ಅವಶ್ಯಕತೆ ಇದ್ದಲ್ಲಿ ಲಭ್ಯ ಜಮೀನಿನ

ಏಮ್ಸ್ ಮಂಜೂರಾತಿಗೆ ಬಾಬುರಾವ್ ಒತ್ತಾಯ

  ರಾಯಚೂರು,ಮೇ.25- ಜಿಲ್ಲೆಯ ಜನರ ಬೇಡಿಕೆಯಂತೆ ರಾಯಚೂರಗೆ ಏಮ್ಸ್ ಮಂಜೂರಾತಿ ಮಾಡಬೇಕು. ಜನರ ಭಾವನೆಗೆ ಬೆಲೆ ಕೊಡಬೇಕು ಎಂದು ರೇಲ್ವೇ ಬೋರ್ಡ್ ಸದಸ್ಯ ಬಾಬು ರಾವ್ ಸಂಸದ ಅಮರೇಶ್ವರ ನಾಯಕ ಮೂಲಕ ಪ್ರಧಾನ ಮಂತ್ರಿಗಳಿಗೆ ಒತ್ತಾಯಿಸಿದಾರೆ.ಏಕೆಂದರೆ ರಾಯಚೂರ. ತೀರಾ ಹಿಂದಳಿದ ಜಿಲ್ಲೆಯಾಗಿದೆ.ಇದರ ಅಭಿವೃದ್ದಿಗೆಂದು ಈ ಮೊದಲು ಹೈ.ಕ..ಅಭಿವೃದ್ದಿ ಮಂಡಳಿ ರಚಿಸಲಾಗಿತ್ತು.ನಂತರ ಸಂವಿಧಾನದ 371(j) ಸೌಲಭ್ಯ ನೀಡಿತ್ತು.ಅದಕ್ಕೂ ಮೀರಿ ನೀತಿ ಆಯೋಗವು ಮಹತ್ವಾಕಾಂಕ್ಷಿ ಜಿಲ್ಲೆಯಾಗಿ ಅಭಿವೃದ್ದಿಗೆ ತೆಗೆದುಕೊಂಡಿದೆ.ಅದಕ್ಕೆ ಅಭಿವೃದ್ದಿಗೆ ಪೂರಕವಾಗಿ ಏಮ್ಸ್ ಕೊಡಲೇಬೇಕು.ಈ ಮೊದಲು ಭಾರತೀಯ ತಂತ್ರಜ್ಞಾನ ಸಂಸ್ಥೆ(IIT) ಘೋಷಿಸಿ,ಬೇರೆ ಜಿಲ್ಲೆಗೆ ನೀಡಲಾಗಿದೆ.                                                     ಈ ಭಾಗದ ಜನ ಬೇಸರಗೊಂಡಿದ್ದಾರೆ.ಏಮ್ಸ್ ಕೊಡಲೇಬೇಕೆಂಬ ಬಲವಾದ ಬೇಡಿಕೆ ಇಡಲಾಗಿದೆ.ಇದು ಕಡೆಗಣಿಸುವ ಪ್ರಶ್ನೆಯೇ ಏಳಬಾರದು.ಇಲ್ಲಿ ಭೂಮಿಯ ಲಭ್ಯತೆ ಇದೆ.ನೀರು ಸರಬರಾಜುಗೆ ಅಕ್ಕಪಕ್ಕ ಎರಡು ನದಿಗಳು ಹರಿಯುತ್ತಿವೆ.ವಿದ್ಯುತ ಪೂರೈಕೆಗೆ ಆರ್ಟಿಪಿಎಸ್,ವೈಟಿಪಿಎಸ್ ವಿದ್ಯುತ ಸ್ಥಾವರಗಳಿವೆ.  ಉನ್ನತ  ಶೈಕ್ಷಣಿಕ ಬೆಳವಣಿಗೆಗೆ  ಏಮ್ಸ್ ಸಹಕಾರಿಯಾಗುತ್ತದೆ.ಪ್ರತ್ಯಕ್ಷ,ಪರೋಕ್ಷ ಉದ್ಯೋಗಗಳ ಸೃಷ್ಠಿಯಾಗುತ್ತವೆ.ರಾಜ್ಯ,ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆ  ಗುರುತಿಸಲ್ಪಡುತ್ತದೆ.ಇದಕ್ಕಾಗಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪತ್ರ

ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳನ್ನು ಭೇಟಿಯಾದ ಕೆ.ಶಿವನಗೌಡ ನಾಯಕ

ರಾಯಚೂರು,ಮೇ.24-ನೀರಾವರಿ ಸೌಲಭ್ಯ ವಂಚಿತ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ತಾಲೂಕಿನ ವಿವಿಧೆಡೆ 29 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಂಬಂಧ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳನ್ನು ಬೆಂಗಳೂರಿನಲ್ಲಿ ಶಾಸಕ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ಶಿವನಗೌಡ ನಾಯಕ ಅವರು ಭೇಟಿಯಾಗಿ ಚರ್ಚೆ ನಡೆಸಿದರು. ಕೃಷ್ಣ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಇತರೆ ಅಧಿಕಾರಿಗಳ ಜೊತೆಗೆ ಕೆರೆ ತುಂಬಿಸುವ ಕುರಿತು ಸುದೀರ್ಘವಾಗಿ ಚರ್ಚಿಸಿದ ಅವರು, ಶೀಘ್ರದಲ್ಲೇ ಕೆರೆ ತುಂಬಿಸುವ ಯೋಜನೆ ಪ್ರಾರಂಭಿಸಬೇಕಿದ್ದು ಟೆಂಡರ್ ಪ್ರಕ್ರಿಯೆಗಳನ್ನು ಆರಂಭಿಸಲು ಸೂಚಿಸಿದರು. ಕೆರೆ ತುಂಬಿಸುವ ಯೋಜನೆಯಿಂದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದ್ದು ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಇದರಿಂದ ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ದೇವದುರ್ಗ ತಾಲೂಕಿನ ನೀರಾವರಿ ವಂಚಿತ ಹಾಗೂ ಗುಡ್ಡಗಾಡು ಪ್ರದೇಶದ ರೈತರಿಗೆ ಈ ಯೋಜನೆ ಬಹಳ ಸಹಕಾರಿಯಾಗಲಿದೆ. ಈಗಾಗಲೇ ದೇವದುರ್ಗ ತಾಲೂಕಿನ 29 ಕೆರೆಗಳಿಗೆ ನೀರು ತುಂಬಿಸಲು 330 ಕೋ. ರೂ. ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಮೊದಲ ಹಂತದಲ್ಲಿ 180 ಕೋ. ರೂ.‌ ವೆಚ್ಚದಲ್ಲಿ ಅರಕೇರಾ, ಆಲ್ಕೋಡ್, ಕ್ಯಾದಿಗೇರಾ, ಪಿಲಿಗುಂಡ, ಬುಂಕಲದೊಡ್ಡಿ, ಬಂಡೇಗುಡ್ಡ, ಮಲ್ಲೇನಾಯಕದೊಡ್ಡಿ ಸೇರಿದಂತೆ 9 ಕೆರೆಗಳಿಗೆ ನೀರು ತುಂಬಿಸಲಾಗುವುದು. ಎರಡನ

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಿ ದರ್ಶನ ಪಡೆದ ಶ್ರೀ ಸುಬುಧೇಂದ್ರತೀರ್ಥರು

 ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಿ ದರ್ಶನ ಪಡೆದ ಶ್ರೀ ಸುಬುಧೇಂದ್ರತೀರ್ಥರು.    ರಾಯಚೂರು,ಮೇ.24-ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಹೊರನಾಡು ಶ್ರೀ                           ಅನ್ನಪೂರ್ಣೇಶ್ವರಿ ದೇವಿ ದರ್ಶನ ಪಡೆದುಕೊಂಡರು. ದೇವಸ್ಥಾನ ಆಡಳಿತ ಮಂಡಳಿಯಿಂದ ಗೌರವಪೂರ್ವಕ ಸ್ವಾಗತ ಕೋರಲಾಯಿತು. ‌

ಶಾಸಕ ಡಾ. ಶಿವರಾಜ್ ಪಾಟೀಲರಿಗೆ ಪಿತೃ ವಿಯೋಗ

ರಾಯಚೂರು,ಮೇ.24- ಶಾಸಕರಾದ ಡಾ ಶಿವರಾಜ್ ಪಾಟೀಲ್ ತಂದೆಯವರಾದ ಸಾನಬಾಳ ಮಾಲಿಪಾಟೀಲ್ ವೀರನಗೌಡರವರು ಅಕಾಲಿಕ ನಿಧನರಾಗಿದ್ದಾರೆ. ಅಂತಿಮ ವಿಧಿವಿಧಾನಗಳು ಸಂಜೆ 5 ಗಂಟೆಗೆ ನೀರಮಾನ್ವಿಯಲ್ಲಿ  ನೆರವೇರಿಸಲಾಗುತ್ತದೆ ಎಂದು ತಿಳಿದುಬಂದಿದೆ    .      ‌‌‌‌‌‌‌‌‌‌‌‌‌ ‌       

ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟ

 ರಾಯಚೂರು,ಮೇ.24- ವಿಧಾನ ಪರಿಷತ್ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳಾಗಿ   ಚಲುವಾದಿ ನಾರಾಯಣಸ್ವಾಮಿ, ಶ್ ಹೇಮಲತಾ ನಾಯಕ್,  ಕೇಶವ ಪ್ರಸಾದ್,  ಲಕ್ಷ್ಮಣ ಸವದಿ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ  ಅಭ್ಯರ್ಥಿಯಾಗಿ  ಶ್ರೀ ಬಸವರಾಜ್ ಹೊರಟ್ಟಿ .

ಏಮ್ಸ್ ಹೋರಾಟ: ಸವಿತಾ ಸಮಾಜ ಬೆಂಬಲ

 ರಾಯಚೂರು,ಮೇ.24- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ರಾಯಚೂರು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹನ್ನೆರಡನೇ ದಿನಕ್ಕೆ ಮುಂದುವರಿದಿದೆ . ಇಂದು ರಾಯಚೂರು ಸವಿತಾ ಸಮಾಜದ ವತಿಯಿಂದ ಅಧ್ಯಕ್ಷರಾದ ವಿಜಯ ಭಾಸ್ಕರ್ ಅವರ ನೇತೃತ್ವದಲ್ಲಿ ಬಸವರಾಜ, ಆಂಜನೇಯ, ಅಭಿ, ರಾಜು ಗದ್ವಾಲ್ಕರ್ ,ಮಂಜುನಾಥ್, ವೆಂಕಟಸ್ವಾಮಿ ,ನರಸಿಮ್ಲು, ಮುನಿಸ್ವಾಮಿ, ಸುಧಾಕರ್, ಪಾಂಡು, ಪಾಪಯ್ಯ 'ಆನಂದ್ 'ಸಿ ಸುರೇಶ್, ಜಿ ವೆಂಕಟೇಶ್ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು. ಏಮ್ಸ್ ಹೋರಾಟ ಸಮಿತಿ ವತಿಯಿಂದ ಡಾ .ಬಸವರಾಜ ಕಳಸ, ಅಶೋಕಕುಮಾರ್ ಜೈನ್, ಎಸ್ ಮಾರೆಪ್ಪ ವಕೀಲರು,ವೆಂಕಟೇಶ್ ಆಚಾರಿ , ತಾಯಣ್ಣ ಯರಗೇರಾ, ಸುಲೋಚನ, ಬಶೀರ್ ಅಹ್ಮದ್ ಹೊಸ್ಮನೆ,ಪ್ರಸಾದ್ ಭಂಡಾರಿ, ಅಕ್ಬರ್ ಹುಸೇನ್ ನಾಗುಂಡಿ , ಬಸವರಾಜ್ ಮಿಮಿಕ್ರಿ ,ಕಾಮ್ ರಾಜ್ ಪಾಟೀಲ್ ,ರಮೇಶ್ ಭಂಡಾರಿ,ನರೇಂದ್ರ ಆರ್ಯ  ಮುಂತಾದವರು ಭಾಗವಹಿಸಿದ್ದರು.

25 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ

 ರಾಯಚೂರು ನಗರ: 25ರಂದು ವಿದ್ಯುತ್ ವ್ಯತ್ಯಯ ರಾಯಚೂರು ಮೇ.23,:- ನಗರದ ಜವಾಹರನಗರ 33ಕೆವಿ ವಿದ್ಯುತ್ ಉಪ ಕೇಂದ್ರದಲ್ಲಿ ಜವಾಹರ ನಗರ ವಿದ್ಯುತ್ ಮಾರ್ಗದ ಪರಿವರ್ತಕ ಬದಲಾವಣೆಯ ದುರಸ್ಥಿ ಕಾರ್ಯ ಹಮ್ಮಿಕೊಂಡಿರುವ ಪ್ರಯುಕ್ತ 2022ರ ಮೇ.25ರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2:30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.   ಜವಾಹರನಗರ, ಹನುಮಾನ ಟಾಕೀಸ್, ಎನ್‌ಜಿಓ ಕಾಲೋನಿ, ವಾಸವಿ ನಗರ ಚಾಂನಿಕ್ ಪುರಿ ಲೇಔಟ್, ಬೋಳಂದೊಡ್ಡಿ ರೋಡ್, ವಿದ್ಯಾನಗರ, ಎಲ್‌ವಿಡಿ ಕಾಲೇಜ್ ಏರಿಯಾ, ತಿಮ್ಮಾಪೂರ ಪೇಟೆ, ಕೃಷ್ಣದೇವರಾಯ ಕಾಲೋನಿ, ಡೇಂಟಲ್ ಕಾಲೇಜ್, ಪಾಲಿಟೆಕ್ನಿಕ್ ಕಾಲೇಜ್ ಏರಿಯಾ, ಅಮರಖೇಡ್ ಲೇಔಟ್, ಮಾಣಿಕ್ ಲೇಔಟ್ ಮಾಣಿಕ್ ನಗರ ಹಾಗೂ ಸುತ್ತಮುತ್ತಲಿನ ಎಲ್ಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ರಾಯಚೂರು ನಗರ ಜೆಸ್ಕಾಂ ಕಾ ಮತ್ತು ಪಾ ಉಪ ವಿಭಾಗ 1 ಮತ್ತು 2 ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಜಿಲ್ಲೆಯಲ್ಲಿ ಬೀಜ ,ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಿ-ಶಂಕರ ಪಾಟೀಲ ಮುನೇನಕೊಪ್ಪ

  ಜಿಲ್ಲೆಯಲ್ಲಿ ಬೀಜ ,ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಿ-ಶಂಕರ ಪಾಟೀಲ ಮುನೇನಕೊಪ್ಪ.                  ರಾಯಚೂರು,ಮೇ.23-ಜಿಲ್ಲೆಯಲ್ಲಿ ಬೀಜ ,ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಿ ಎಂದು ಜವಳಿ ,ಕೈಮಗ್ಗ ಹಾಗೂ ಸಕ್ಕರೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ  ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು .ಅವರಿಂದು ಜಿ.ಪಂ ಸಭಾಂಗಣದಲ್ಲಿ ಜಿಲ್ಲೆಯಲಿ ಮಳೆ ಹಾನಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿ  ಜಿಲ್ಲೆಯಲ್ಲಿ ಯಾವುದೆ ಕಾರಣಕ್ಕೂ ಬೀಜ ,ರಸಗೊಬ್ಬರ ಕೊರತೆಯಾಗದಂತೆ ಕೃಷಿ ಅಧಿಕಾರಿಗಳು ಎಚ್ಚರ ವಹಿಸಬೇಕೆಂದರು.ಸಂಸದ ಅಮರೇಶ್ವರ ನಾಯಕ ಮಾತನಾಡಿ ಕಾಳ ಸಂತೆಯಲ್ಲಿ ಅಕ್ರಮವಾಗಿ ಬೀಜ ಮತ್ತು ರಸಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದರು.ಶಾಸಕರಾದ ಡಿ.ಎಸ್ .ಹೂಲಗೇರಿ ಮಾತನಾಡಿ ಅಕ್ರಮ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡಿದ ಎಷ್ಟು ಜನರ ಮೇಲೆ ಪ್ರಕರಣ ದಾಖಲಿಸಿದ್ದೀರಿ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ಶಾಸಕ ದದ್ದಲ ಬಸನಗೌಡ ಮಾತನಾಡಿ ಕೃಷಿ ಇಲಾಖೆ ಸಮರ್ಪಕವಾಗಿ ಬೀಜ ಮತ್ತು ರಸಗೊಬ್ಬರ ದಾಸ್ತಾನು ಇಟ್ಟುಕೊಳ್ಳಬೇಕೆಂದರು.ಶಾಸಕ ಬಸನಗೌಡ ತುರವಿಹಾಳ ಮಾತನಾಡಿ ಹೆಚ್ಚಿನ ಬೆಲೆಯಲ್ಲಿ  ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವವರ ಮೇಲೆ ಕ್ರಮ ವಹಿಸಿ ಎಂದರು. ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ ರೈತರಿಗೆ ಬೀಜ ಮತ್ತು ರಸಗೊಬ್ಬರಕೆ  ಎಷ್ಟು ಸಬ್ಸಿಡಿ ನೀಡುತ್ತೀರಿ ಎಂದು ಕೃಷಿ ಅಧಿಕಾರಿಗಳನ್ನು ವಿಚಾರಿಸಿದರು. ಮಳೆಯಿಂದ ಹಾನಿಯಾದ ಟಿಸಿ ದುರಸ್ಥಿಗೆ ಕ

ಏಮ್ಸ್ ಪಡೆಯಲು ನನ್ನದೆ ರೀತಿಯಲ್ಲಿ ಪ್ರಯತ್ನಿಸುವೆ-ಶಂಕರಪಾಟೀಲ ಮುನೇನಕೊಪ್ಪ.

 ಏಮ್ಸ್ ಪಡೆಯಲು ನನ್ನದೆ ರೀತಿಯಲ್ಲಿ ಪ್ರಯತ್ನಿಸುವೆ-ಶಂಕರಪಾಟೀಲ ಮುನೇನಕೊಪ್ಪ.                                                                                          ರಾಯಚೂರು,ಮೇ.23-ಏಮ್ಸ್ ಪಡೆಯಲು ನನ್ನದೆ ರೀತಿಯಲ್ಲಿ ಪ್ರಯತ್ನಿಸುವುದಾಗಿ ಜವಳಿ ಹಾಗೂ ಕೈಮಗ್ಗ ,ಸಕ್ಕರೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಂಕರ.ಬಿ.ಪಾಟೀಲ ಮುನೇನಕೊಪ್ಪ ಹೇಳಿದರು.     ಅವರಿಂದು ನಗರದ ಜಿ.ಪಂ ಸಭಾಂಗಣದಲ್ಲಿ ಕೆಕೆಆರ್ ಡಿಬಿ ಕಾಮಗಾರಿ ಪ್ರಗತಿ ಪರಿಶೀಲನೆ ಹಾಗೂ ಮಳೆ ಹಾನಿ ಕುರಿತು ಸಭೆ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಜಿಲ್ಲೆಗೆ ಏಮ್ಸ್ ನೀಡುವಂತೆ ಆಗ್ರಹಿಸಿ ಅನಿರ್ಧಿಷ್ಟ ಧರಣಿ ಮುಂದುವರೆದ ಬಗ್ಗೆ ಮಾಹಿತಿ ಇದೆ ನಾನು ಸಹ ನನ್ನದೆ ರೀತಿಯಲ್ಲಿ ಏಮ್ಸ್ ಪಡೆಯಲು ಪ್ರಯತ್ನಿಸುವುದಾಗಿ ಹೇಳಿದ ಅವರು ಏಮ್ಸ್ ಪಡೆಯಲು ಜಿಲ್ಲೆಯ ಎಲ್ಲ  ಜನ ಪ್ರತಿನಿಧಿಗಳ ಸಹಕಾರವಿದ್ದು ಏಮ್ಸ್ ಕುರಿತು ನಮ್ಮನಿರ್ಧಾರ ಅಚಲವಾಗಿದೆ ಎಂದರು.ಜಿಲ್ಲೆಯಲ್ಲಿ 30 ಎಂ.ಎಂ.ಮಳೆಯಿಂದ 55 ಹೆಕ್ಟೇರ್ ವಾಣಿಜ್ಯ ಬೆಳೆ ಹಾಗೂ 40 ಹೆಕ್ಟೇರ್ ತೋಟಗಾರಿಕೆ ಬೆಳೆ ,  ಮನೆಗಳ, ಹಾನಿಯಾಗಿದ್ದು 30 ಜಾನುವಾರುಗಳು ಸತ್ತಿದ್ದು ಅವುಗಳಿಗೆ ಪರಿಹಾರ ನೀಡಲಾಗುತ್ತಿದ್ದು ಬೆಳೆ ಹಾನಿ ಕುರಿತು ಒಂದು  ವಾರದಲ್ಲಿ  ಪಾರದರ್ಶಕವಾಗಿ ಸರ್ವೆ  ಮಾಡಲು ಸೂಚಿಸಲಾಗಿದೆ ಎಂದರು.                   ಬೇರೆ ಜಿಲ್ಲೆಗೆ ಹೋಲಿಸಿದರೆ ದೊಡ್ಡ ಮಟ್ಟದ ಹಾನಿಯಾಗಿಲ್ಲ ಲಿಂಗಸ್ಗೂರಲ್ಲಿ ಸಿಡಿಲಿನಿ

ದಾಸ ಸಾಹಿತ್ಯ ಮೌಲಿಕ ಸಾಹಿತ್ಯ ಇಂದಿಗೂ ಎಂದಿಗೂ ಪ್ರಸ್ತುತ- ಸುಸ್ವರಂ ನಾಗರಾಜ್ ಆಚಾರ್ಯ

ದಾಸ ಸಾಹಿತ್ಯ ಮೌಲಿಕ ಸಾಹಿತ್ಯ ಇಂದಿಗೂ ಎಂದಿಗೂ ಪ್ರಸ್ತುತ- ಸುಸ್ವರಂ ನಾಗರಾಜ್ ಆಚಾರ್ಯ ರಾಯಚೂರು,ಮೇ.23- ದಾಸ ಸಾಹಿತ್ಯವೆಂದರೆ ಅನುಭವದ ಅಡುಗೆ, ಭಕ್ತಿಯ ಕಣಜ, ಪರಮಾತ್ಮನ ಸನ್ನಿಧಾನ, ನೊಂದವರ ಭರವಸೆ, ಹಾಗೂ ಪ್ರೀತಿ ಪ್ರೇಮ ವಿಶ್ವಾಸ ನಡೆ-ನುಡಿ ಹಾಗೂ ಸತ್ಯವಾದ ಮಾತುಗಳನ್ನು ಹೇಳುವ ಸಾಹಿತ್ಯವೇ ದಾಸಸಾಹಿತ್ಯ ಇದು ಇಂದಿಗೂ ಪ್ರಸ್ತುತವಾಗಿದೆ,  ಜೀವನದಲ್ಲಿ ಸಾಮಾಜಿಕ ಮೌಲ್ಯ ಬಿಂಬಿಸುತ್ತದೆ ಎಂದು ಖ್ಯಾತ ವಾಗ್ಮಿಗಳು, ದಾಸ ಸಾಹಿತ್ಯ ವಿದ್ವಾಂಸರಾದ ಶ್ರೀ ಸುಸ್ವರಂ ನಾಗರಾಜಾಚಾರ ಅವರು ತಮ್ಮ ಉಪನ್ಯಾಸದಲ್ಲಿ ಹೇಳಿದರು.    ನಿನ್ನೆ ನಗರದ ಜವಾಹರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯಚೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು  ವತಿಯಿಂದ ಹಮ್ಮಿಕೊಂಡ  *ದಾಸ ವೈಭವ* ಕಾರ್ಯಕ್ರಮದಲ್ಲಿ ದಾಸಸಾಹಿತ್ಯದ 'ಸಾಮಾಜಿಕ ಕಳಕಳಿ' ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡಿದರು.  ಕನಕದಾಸರ ಸಾಹಿತ್ಯವನ್ನು ತಿಳಿದಲ್ಲಿ ಸದೃಢ ಸಮಾಜದೊಂದಿಗೆ ವ್ಯಕ್ತಿಯು ಸಹ ಆರೋಗ್ಯವಂತನಾಗುತ್ತಾನೆ ಎಂದರು.         ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಂಗಣ್ಣ ಪಾಟೀಲ್ ಜಿಲ್ಲಾಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಅವರು ಮಾತನಾಡಿ ರಾಯಚೂರು ದಾಸ ಸಾಹಿತ್ಯದ ತವರೂರು ಈ ಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದಾಸಸಾಹಿತ್ಯದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದರು.     ಈ ಸಂದರ್ಭದಲ್ಲಿ ಶ್ರೀರಾಘವೇಂದ್ರ

ವೈಷ್ಣವಿ ದೇಶಪಾಂಡೆಗೆ ಗಾಯನ ಕಲಾ ರತ್ನ ಪ್ರಶಸ್ತಿ

ರಾಯಚೂರು,ಮೇ.22- ಕೊಪ್ಪಳ ಜಿಲ್ಲೆಯಲ್ಲಿ  ನಡೆದ ಶ್ರೀ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆ (ರಿ) ಕಿನ್ನಾಳ  ವತಿಯಿಂದ ನಡೆದ ಸ್ವರ ಸಾಮ್ರಾಜ್ಯ ಉತ್ಸವ ಕಾರ್ಯಕ್ರಮದಲ್ಲಿ ರಾಯಚೂರಿನ ಕುಮಾರಿ ವೈಷ್ಣವಿ ದೇಶಪಾಂಡೆ ಅವರಿಗೆ  ಗಾಯನ ಕಲಾ ರತ್ನ ಪ್ರಶಸ್ತಿ   ನೀಡಿ ಗೌರವಿಸಲಾಯಿತು.

ಶಾಸಕರ ಪುತ್ರಿ ರಾಜ್ಯಕ್ಕೆ ಟಾಪರ್.

 ಶಾಸಕರ ಪುತ್ರಿ ರಾಜ್ಯಕ್ಕೆ ಟಾಪರ್.                        ರಾಯಚೂರು,ಮೇ.19- ನಗರ  ಶಾಸಕರಾದ ಡಾ. ಶಿವರಾಜ್ ಪಾಟೀಲ್ ಇವರ ಸುಪುತ್ರಿ  ಶ್ವೇತಾ ಪಾಟೀಲ್ ಇವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರ್ನಾಟಕ   ರಾಜ್ಯಕ್ಕೆ   ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ  625ಅಂಕಗಳಿಗೆ  625 ಅಂಕಗಳನ್ನು ಗಳಿಸಿ ರಾಯಚೂರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಏಳನೆಯ ದಿನಕ್ಕೆ ಏಮ್ಸ್ ಹೋರಾಟ: ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘ ಬೆಂಬಲ

ರಾಯಚೂರು,ಮೇ.19- ಜಿಲ್ಲಾ ಏಮ್ಸ್ ಹೋರಾಟ ಸಮಿತಿಯ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಏಳನೆಯ ದಿನಕ್ಕೆ ಮುಂದುವರೆದಿದೆ. ರಾಯಚೂರಿನಲ್ಲಿಯೇ ಏಮ್ಸ್  ಸ್ಥಾಪಿಸುವಂತೆ ಒತ್ತಾಯಿಸಿ ಇಂದು ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ  ಎನ್. ಮಹಾವೀರ್ ಅವರ ನೇತೃತ್ವದಲ್ಲಿ ಎಲ್ಲಾ ಪದಾಧಿಕಾರಿಗಳು ಸದಸ್ಯರು ಹೋರಾಟಕ್ಕೆ ಬೆಂಬಲಿಸಿ   ಸತ್ಯಾಗ್ರಹ ದಲ್ಲಿ ಭಾಗವಹಿಸಿದ್ದರು . ಈ ಸಂದರ್ಭದಲ್ಲಿ ತರಕಾರಿ ಮಾರಾಟಗಾರರ ಸಂಘದ  ಪ್ರಭು ನಾಯಕ್ ,ಖಾಜಪ್ಪ ,ಬಸವರಾಜ್ , ಚೋಟು ,ಉದಯ್, ಈರಮ್ಮ, ಜಮಲಮ್ಮ, ತಿಪ್ಪಮ್ಮ, ಉದಯ್ ಸೇರಿದಂತೆ ಏಮ್ಸ್ ಹೋರಾಟ ಸಮಿತಿಯಿಂದ ಡಾ . ಬಸವರಾಜ ಕಳಸ, ಎಸ್ ಮಾರೆಪ್ಪ ವಕೀಲರು, ವೆಂಕಟೇಶ ಆಚಾರ್ಯ, ಪ್ರಸಾದ್ ಭಂಡಾರಿ, ಮಿಮಿಕ್ರಿ ಬಸವರಾಜ್ ,ಸುಲೋಚನಾ ,ಕಾಮ್ ರಾಜ್ ಪಾಟೀಲ್  ,ಕಿಶೋರ್ ತಿವಾರಿ, ಜೆ ಬಿ ರಾಜು ,ಅಡವಿ ರಾವ್ ಮುಂತಾದವರು ಭಾಗವಹಿಸಿದ್ದರು. 

ನಗರದಲ್ಲಿ ಮಳೆ ಆರ್ಭಟ

 ನಗರದಲ್ಲಿ ಮಳೆ ಆರ್ಭಟ        ರಾಯಚೂರು,ಮೇ.18-ನಗರದಲ್ಲಿ ಇಂದು ಸಹ ಮಳೆ ಆರ್ಭಟ ಮುಂದುವರೆದಿದ್ದು ಗುಡಗು,ಮಿಂಚು ಹಾಗೂ ಸಿಡಿಲಿನೊಂದಿಗೆ ಮಳೆ ಆರ್ಭಟ ಶುರುವಾಗಿದೆ.      ಬಿರು ಬಿಸಿಲಿನಿಂದ ಕಂಗೆಟ್ಟ ಜನತೆಗೆ ಮುಂಗಾರು ಪೂರ್ವ  ಮಳೆ ಆಗಮನದಿಂದ ಬಿಸಿಲಿನ ಬೇಗೆಯಿಂದ ಕೊಂಚ   ನಿರಾಳತೆ ಸಿಕ್ಕಂತಾಗಿದೆ. ಕರಾವಳಿ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದ್ದು ಬೆಂಗಳೂರಿನಲ್ಲಿ ಮಳೆ ಅವಾಂತರ ಸೃಷ್ಟಿಸಿದೆ ನಗರದಲ್ಲಿಯೂ ಸಹ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿವೆ.ರಾಜಾ ಕಾಲುವೆ ಸ್ವಚ್ಚತೆ ಕಾರ್ಯವನ್ನು ನಗರಸಭೆ ಕೈಗೊಂಡಿದ್ದು ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬಂತಿದೆ ಎಂದು ಜನರ ಮಾತಾಗಿದೆ.ಅವೈಜ್ಞಾನಿಕ ಯೋಜನೆಗಳಿಂದ ಮಳೆ ನೀರು ಮನೆಗಳಿಗೆ ನುಗ್ಗುವುದು ಪ್ರತಿ ವರ್ಷ ಕಾಣುತ್ತೇವೆ ಮಳೆಗಾಲ ಬಂತೆಂದರೆ ಜನರು ಬವಣೆ ಅನುಭವಿಸುವುದಂತು ತಪ್ಪುವುದಿಲ್ಲ.

ಕರ್ನಾಟಕ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಅವರಿಂದ ಜಿಲ್ಲಾ ಪ್ರವಾಸ

 ಕರ್ನಾಟಕ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಅವರಿಂದ ಜಿಲ್ಲಾ ಪ್ರವಾಸ

ಕರ್ನಾಟಕ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಅವರಿಂದ ಜಿಲ್ಲಾ ಪ್ರವಾಸ

 ಕರ್ನಾಟಕ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಅವರಿಂದ ಜಿಲ್ಲಾ ಪ್ರವಾಸ ರಾಯಚೂರು ಮೇ.18- ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಅವರು ಮೇ.19 ಹಾಗೂ 20ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.   ಅವರ ಪ್ರವಾಸದ ವಿವರ ಇಂತಿದೆ.  ಅವರು ಮೇ.19ರ ಗುರುವಾರ ಬೆಳಿಗ್ಗೆ 10.30ಗಂಟೆಗೆ ಜಿಲ್ಲೆಗೆ ಆಗಮಿಸಿ ರಾಯಚೂರಿನಿಂದ ಮಂತ್ರಾಲಯಕ್ಕೆ ಭೇಟಿ ನೀಡಿ ಪೂಜ್ಯ ರಾಯರ ದರ್ಶನ ಪಡೆಯಲಿದ್ದಾರೆ.   ಸಂಜೆ 6.30ಕ್ಕೆ ಮಾನ್ವಿ, ಸಿರವಾರ ಹಾಗೂ ದೇವದುರ್ಗ ತಾಲೂಕಿನ ಅಲೆಮಾರಿ ಕುಟುಂಬಗಳ ಭೇಟಿ ಹಾಗೂ ಅಲೆಮಾರಿ ಸಮಾಜದವರೊಂದಿಗೆ ಸಮಾಲೋಚನೆ. ರಾತ್ರಿ 8.30ಗಂಟೆಗೆ ರಾಯಚೂರಿನ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.   ಮೇ.20ರ ಶುಕ್ರವಾರ ಬೆಳಿಗ್ಗೆ 10.30ಗಂಟೆಗೆ ಜಿಲ್ಲಾ ಕಚೇರಿಗೆ ಭೇಟಿ, ಪ್ರಗತಿ ಪರಿಶೀಲನೆ ಸಭೆ ಹಾಗೂ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಬೆಳಿಗ್ಗೆ 11ಗಂಟೆಗೆ ಸಿಂಧನೂರು ಗ್ರಾಮದ ಅಲೆಮಾರಿ ಕುಟುಂಬಗಳ ಭೇಟಿ ಹಾಗೂ ಅಲೆಮಾರಿ ಸಮಾಜದವರೊಂದಿಗೆ ಸಮಾಲೋಚನೆ ನಡೆಸಿ, ಮಧ್ಯಾಹ್ನ 12.30ಗಂಟೆಗೆ ಸಿಂಧನೂರಿನಿAದ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಅಧ್ಯಕ್ಷರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

ಹಗಲಲ್ಲಿ ಉರಿಯುವ ಬೀದಿ ದೀಪ.

 ಹಗಲಲ್ಲಿ ಉರಿಯುವ ಬೀದಿ ದೀಪ.                         ರಾಯಚೂರು,ಮೇ.18- ಒಂದೆಡೆ ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಜನ ಬೇಸತ್ತಿದ್ದರೆ ಮತ್ತೊಂದೆಡೆ ಹಗಲಲ್ಲಿ ಬೀದಿ ದೀಪ ಉರಿಯುತ್ತಿದೆ.         ನಗರದ ವಾರ್ಡ್ ನಂ.17 ರಲ್ಲಿ ಚೌಡಮ್ಮ ಕಟ್ಟೆ ಬಳಿ ಕಾಡ್ಲೂರು ದೇಸಾಯಿ ಮನೆ ಪಕ್ಕದ ಓಣಿಯಲ್ಲಿ ಫೋಕಸ್ ಲೈಟ್ ಹಗಲಲ್ಲಿ ಉರಿಯುವ ಮೂಲಕ ವಿದ್ಯುತ್ ಪೋಲಾಗುತ್ತಿದ್ದು ವಿದ್ಯುತ್ ಉತ್ಪಾದಿಸುವ ಜಿಲ್ಲೆಯಲ್ಲಿ ವಿದ್ಯುತ್ ವ್ಯರ್ಥವಾಗುತ್ತಿದ್ದು ವಿಪರ್ಯಾಸದ ಸಂಗತಿಯಾಗಿದ್ದಕ್ಕೆ ಜನರು ಬೇಸರ ವ್ಯಕ್ತಪಡಿಸುತ್ತಾರೆ.

1098 ಸಹಾಯವಾಣಿಗೆ ಕರೆ ಮಾಡುವ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಿ-ನ್ಯಾ.ದಯಾನಂದ

1098   ಸಹಾಯವಾಣಿಗೆ ಕರೆ ಮಾಡುವ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಿ-ನ್ಯಾ.ದಯಾನಂದ ರಾಯಚೂರು ಮೇ.17, ಸಮಸ್ಯೆಗೆ ದಿನದ 24 ಗಂಟೆಯೂ ಸ್ಪಂದಿಸುವ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡುವ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆಂದು ಇಲ್ಲಿಯ ಮೂರನೇಯ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಧೀಶರಾದ ದಯಾನಂದ ಬೇಲೂರೆ ಅವರು ಹೇಳಿದರು.       ಅವರು ಮೇ.17ರ ಮಂಗಳವಾರ ದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಹಾಗೂ ಮಕ್ಕಳ ಸಹಾಯವಾಣಿ-1098 ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಸಹಾಯವಾಣಿ-1098 ದಿನಾಚರಣೆ ಹಾಗೂ ಮಾಸಾಚರಣೆ ಜಾಥಕ್ಕೆ ಚಾಲನೆ ನೀಡಿ, ಮಾತನಾಡಿದರು. ಸಮಸ್ಯೆಯಲ್ಲಿರುವಾಗ ಯಾರ ನೆರವು ಕೋರಬೇಕು ಎಂದು ಮಕ್ಕಳಿಗೆ ತಿಳಿದಿರುವುದಿಲ್ಲ, ಅಂತಹ ಸಂದರ್ಭ 1098ಕ್ಕೆ ಉಚಿತ ಕರೆ ಮಾಡುವ ಮೂಲಕ ತಮ್ಮ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎಂದರು. ಮಕ್ಕಳ ಮೇಲೆ ಎದುರಾಗುತ್ತಿರುವ ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ ಸಹಕಾರಿಯಾಗಿದೆ. 0 ರಿಂದ 18 ವರ್ಷದೊಳಗಿನ ಎಲ್ಲ ಮಕ್ಕಳು ತಮಗೆ ಯಾವುದೇ ಸಮಸ್ಯೆ ಎದುರಾದಲ್ಲಿ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಹೇಳಿದರು.  ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ಅವರು ಮಾತನಾಡಿ, ದುಡಿವ ವರ್ಗದ ಮಕ್ಕಳು

ಏಮ್ಸ್ ಹೋರಾಟದಲ್ಲಿ ರಾಜಕೀಯ ವ್ಯಕ್ತಿಗಳು ಪಾಲ್ಗೊಳ್ಳದಂತೆ ಹೇಳಿಲ್ಲ- ಬಸವರಾಜ ಕಳಸ.

 ಏಮ್ಸ್ ಹೋರಾಟದಲ್ಲಿ ರಾಜಕೀಯ ವ್ಯಕ್ತಿಗಳು ಪಾಲ್ಗೊಳ್ಳದಂತೆ ಹೇಳಿಲ್ಲ- ಬಸವರಾಜ ಕಳಸ.               ರಾಯಚೂರು,ಮೇ.17- ಏಮ್ಸ್ ಹೋರಾಟದಲ್ಲಿ ರಾಜಕೀಯ ವ್ಯಕ್ತಿಗಳು ಪಾಲ್ಗೊಳ್ಳದಂತೆ ಹೇಳಿಲ್ಲವೆಂದು ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ ಹೇಳಿದರು.                   ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಮ್ಮ ಹೋರಾಟ ಯಾವುದೆ ರಾಜಕೀಯ ಪಕ್ಷಗಳಿಗೆ ಸಂಬಂಧವಿಲ್ಲ ಹಾಗು ಯಾವುದೆ ಚುನಾಯಿತ ಪ್ರತಿನಿಧಿಗಳು ತಾವು ಆಯ್ಕೆಯಾದ ಸಂಸ್ಥೆಗಳಲ್ಲಿ ಏಮ್ಸ್ ಪಡೆಯಬೇಕೆಂಬ ಕೂಗು ಮೊಳಗಿಸಲು ಹೇಳಿದ್ದೇವೆ ಹೊರತು ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಡಿ ಎಂದು ಹೇಳಿಲ್ಲವೆಂದು ಸ್ಪಷ್ಟನೆ ನೀಡಿದ ಅವರು         ಆರನೆ ದಿನಕ್ಕೆ ನಮ್ಮ ಹೋರಾಟ ಮುಂದುವರೆಸಿದ್ದೇವೆಂದರು.                          ಅಶೋಕ ಜೈನ್ ಮಾತನಾಡಿ ಏಮ್ಸ ಪಡೆಯುವುದು ನಮ್ಮ ಹಕ್ಕು ಇಲ್ಲಿ ಯಾರದೆ ವೈಯಕ್ತಿಕವಿಲ್ಲವೆಂದರು.  ಜಿಲ್ಲೆಯ ಎಲ್ಲ ಶಾಸಕರು ಧ್ವನಿ ಎತ್ತಬೇಕೆಂದ ಅವರು  ಏಮ್ಸ ಬಂದರೆ ನಿಮ್ಮ ಮುಂದಿನ ಪೀಳಿಗೆ ನಿಮಗೆ  ಹರಿಸುತ್ತದೆ ಎಂದರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಮರೇಶ್ವರ ನಾಯಕರನ್ನು ಗೆಲ್ಲಿಸಿದರೆ   ಏಮ್ಸ್ ತರುವುದಾಗಿ ಶಾಸಕ ಶಿವನಗೌಡ ನಾಯಕರು ಹೇಳಿದ್ದರು ಇದೀಗ ಅವರ ಅದನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.                               ಅದೆ ರೀತಿ ನಗರ ಶಾಸಕ ಡಾ.ಶಿವರಾಜ ಪಾಟೀಲರು,  ಗ್ರಾಮೀಣ ಶಾಸಕರು, ಮಾನ್ವಿ ಶಾಸಕರು,

ಭತ್ತಕ್ಕೆ ಪರ್ಯಾಯವಾಗಿ ಕೋಕೋ ಬೆಳೆಯನ್ನು ರೈತರು ಬೆಳೆಯಲು ಮಾಹಿತಿ ಅಭಿಯಾನ -ಮನೋಹರ ಮಸ್ಕಿ.

ಭತ್ತಕ್ಕೆ ಪರ್ಯಾಯವಾಗಿ ಕೋಕೋ ಬೆಳೆಯನ್ನು ರೈತರು ಬೆಳೆಯಲು ಮಾಹಿತಿ ಅಭಿಯಾನ -ಮನೋಹರ ಮಸ್ಕಿ.                                    ರಾಯಚೂರು,ಮೇ.17- ಭತ್ತಕ್ಕೆ ಪರ್ಯಾಯವಾಗಿ ರೈತರು  ಕೋಕೋ ಬೆಳೆ ಬೆಳೆಯಲು ನಮ್ಮ ಬ್ಯಾಂಕ್ ಮಾಹಿತಿ ಅಭಿಯಾನವನ್ನು ಕೈಗೊಂಡಿದೆ ಎಂದು ಸುಕೋ ಬ್ಯಾಂಕ್ ಅಧ್ಯಕ್ಷ ಮನೋಹರ ಮಸ್ಕಿ ಹೇಳಿದರು.                                             ಅವರಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ  ದಿನೆ ದಿನೆ ಭತ್ತದ ಬೆಲೆ ಕುಸಿಯುತ್ತಿದ್ದು ಅಲ್ಲದೆ ಭತ್ತದ ಮಾರುಕಟ್ಟೆ ಇಳಿಮುಖವಾಗಿದ್ದು ನೆರೆಯ ತೆಲಂಗಾಣ ,ಆಂಧ್ರದಲ್ಲಿ ಭತ್ತದ ಬಳೆ ಕ್ಷೇತ್ರ ವಿಸ್ತರಣೆಯಾಗುತ್ತಿದ್ದು ನಮ್ಮ ರಾಜ್ಯದಲ್ಲಿ ಭತ್ತ ಬೆಳೆದ ರೃತರು ನಷ್ಟ ಅನುಭವಿಸುತ್ತಿದ್ದು ಇದಕ್ಕೆ ಪರ್ಯಾಯವಾಗಿ ವಾಣಿಜ್ಯ ಮತ್ತು ಪ್ಲಾಂಟೇಷನ್ ಬೆಳೆಯಾದ ಕೋಕೋ ಬೆಳೆ ಬೆಳೆಯಲು ನಮ್ಮ ಬ್ಯಾಂಕ್ ರೈತರಿಗೆ ಆನ್ ಲೈನ್ ಮೂಲಕ ತಜ್ಞರೊಂದಿಗೆ ಸಮಾಲೋಚನೆ ಮುಖಾಂತರ ಅರಿವು ಮೂಡಿಸುವುದಲ್ಲದೆ ನೆರೆಯ ಆಂಧ್ರ ರಾಜ್ಯದ ತಣಕು ಎಂಬ ಗ್ರಾಮದಲ್ಲಿ ಸುಮಾರು ಸಾವಿರ ಎಕರೆ ವಿಸ್ತೀರ್ಣದಲ್ಲಿ ಕೋಕೋ ಬೆಳೆ ಬೆಳೆಯಲಾಗಿದ್ದು ಅಲ್ಲಿಗೆ ಆಯ್ದ ರೈತರನ್ನು ಮೇ 23 ರಂದು ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನಳ್ಳಿ, ವೆಂಕಟರಾವ್ ನಾಡಗೌಡ ನೇತೃತ್ವದಲ್ಲಿ  ಕರೆದುಕೊಂಡು ಹೋಗಲಾಗುತ್ತದೆ ಎಂದರು. ಕೋಕೋ ಬೆಳೆಯನ್ನು ಮಿಶ್ರ ಹಾಗೂ ಪ್ರಮುಖ ಬೆಳೆಯಾಗಿ   ಬೆಳೆಯಬಹುದಾಗಿದ್ದು  ಉತ್ತಮ ಆದಾಯ ತರಲಿದೆ

ನಗರಸಭೆಯಿಂದ ರಾಜಾ ಕಾಲುವೆ ಸ್ವಚ್ಚತಾ ಕಾರ್ಯ

  ರಾಯಚೂರು,ಮೇ.17- ನಗರದ ವಾರ್ಡ್ ನಂಬರ್ 25 ಮತ್ತು 26 ರಲ್ಲಿ  ಜೆಸಿಬಿ ಮೂಲಕ ರಾಜಕಾಲುವೆ ಹೂಳೆತ್ತುವ ಕಾರ್ಯ ನಡೆಸಲಾಯಿತು.                                                                                                     ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಈ.  ಶಶಿರಾಜ್, ಸುನೀಲ್ ಕುಮಾರ್, ಆರೋಗ್ಯ ನಿರೀಕ್ಷಕರಾದ ಮಲ್ಲಿಕಾರ್ಜುನ್,  ಮುಖಂಡರಾದ  ಕಡಗೋಲ ಆಂಜನೇಯ, ರವೀಂದ್ರ ಜಲ್ದಾರ್, ಪೋಗಲ್  ಶ್ರೀನಿವಾಸರೆಡ್ಡಿ, ಮಹೇಂದ್ರ ರೆಡ್ಡಿ ,ಆಸಿಫ್ ಅಲಿ, ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

ಭಗೀರಥ ಸಮಾಜದ ಜನರಲ್ಲಿ ಮನಸ್ಸು ಒಳ್ಳೆಯದಿದೆ- ಗುರುಬಸವ ರಾಜಗುರು ಸ್ವಾಮೀಜಿ

  ಭಗೀರಥ ಸಮಾಜದ ಜನರಲ್ಲಿ ಮನಸ್ಸು ಒಳ್ಳೆಯದಿದೆ-  ಗುರುಬಸವ ರಾಜಗುರು ಸ್ವಾಮೀಜಿ ರಾಯಚೂರು,ಮೇ.17- ಜಗತ್ತಿನಲ್ಲಿ ಎಲ್ಲರೂ ಒಂದೇ ಸಮಾನರೆಂದು ಕಾಣುವವರು ಭಗೀರಥ ಸಮಾಜದವರು, ಮನುಷ್ಯ ಕೆಟ್ಟದ್ದಾರೆ ಹೊರತು ಮನಸ್ಸು ಯಾವತ್ತು ಕೆಟ್ಟಿಲ್ಲ ಎಂದು ನಿಜಾನಂದಾಶ್ರಮ ಮಲದಕಲ್  ಗುರುಬಸವ ರಾಜಗುರು ಸ್ವಾಮೀಜಿ ಹೇಳಿದರು‌. ತಾಲ್ಲೂಕಿನ ಗಣಮೂರ ಗ್ರಾಮದಲ್ಲಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,   ಭಗೀರಥ ಸಮಾಜದವರು ಎಲ್ಲರೂ ಒಗ್ಗಟ್ಟಾಗಿದ್ದಾರೆ. ಹೊಂದಾಣಿಕೆ ಇದೆ ಇದರಿಂದ ತಮ್ಮ ಸಮಸ್ಯೆಗಳನ್ನು ಕುಳಿತು ಬಗೆ ಹರಿಸಿಕಳ್ಳುತ್ತಾರೆ ಎಂದರು. ಒಗ್ಗಟ್ಟಿನಲ್ಲಿ ಶಕ್ತಿ ಇದೆ ಎಂದರೆ ಅದು ಭಗೀರಥ ಸಮಾಜವಾಗಿದೆ, ಸಮಾಜ ಒಗ್ಗೂಡಿ ಭಗೀರಥ ಜಯಂತಿ ಅದ್ದರೂಯಾಗಿ ಆಚರಣೆ ಮಾಡಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅದಕ್ಕೆ ನಾವು ಸಹ 5001 ದೇಣಿಗೆ ನೀಡುತ್ತೇವೆ ಎಂದು ತಿಳಿಸಿದರು. ಸಮಾಜದಲ್ಲಿ ಎಲ್ಲರ ಮನಸ್ಸು ಹೊಲಸು ಮಾಡಿಕೊಳ್ಳದೆ ಪ್ರತಿಯೊಂದರಲ್ಲಿ ಒಗ್ಗೂಡಿ ಕೆಲಸ ಮಾಡಿ ಸಮಾಜಕ್ಕೆ ಮಾದರಿಯಾಗಿ ಭಗೀರಥ ಸಮಾಜದವರು ಎಂದರೆ ಎದೆ ಮುಟ್ಟಿ ನೋಡಿಕೊಳ್ಳವಂತಾಗಬೇಕು ಎಂದರು. ಜಗತ್ತಿನಲ್ಲಿ ಬದುಕುವುದು ಮುಖ್ಯವಲ್ಲ ಬದುಕಿದ್ದಾಗ ಸಮಾಜಕ್ಕೆ ಜಗತ್ತಿಗೆ ಏನು ಕೊಟ್ಟಿದ್ದಾನೆ ಎಂಬುದು ಮುಖ್ಯವಾಗಿದೆ.ಕಚ್ಚೆ ಕೈ ಮತ್ತು ಬಾಯಿ ಶುದ್ದವಾಗಿರಬೇಕು ಎಂದು ತಿಳಿಸಿದರು. ಈ ವೇಳೆ ಜಿಲ್ಲಾದ್ಯಕ್ಷ ವೆಂಕೋಬ ಉಪ್ಪಾರ, ಮಹಿಳಾದ್ಯಕ್ಷ ಪಿ.ಸುರೇಖಾ  ಮಾತನಾಡಿದರು. ಭಗೀರಥರ ಜಯಂ

ಶ್ರೀ ನರಸಿಂಹ ಜಯಂತಿ: ಕೃಷ್ಣಾ ಸಂಗೀತ ವಿದ್ಯಾಲಯದಿಂದ ದಾಸವಾಣಿ.

 ಶ್ರೀ ನರಸಿಂಹ ಜಯಂತಿ: ಕೃಷ್ಣಾ ಸಂಗೀತ ವಿದ್ಯಾಲಯದಿಂದ ದಾಸವಾಣಿ.          ರಾಯಚೂರು,ಮೇ.16- ನಗರದ ಕೋಟೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನರಸಿಂಹ ಜಯಂತಿ ಅಂಗವಾಗಿ  ಮೂರು ದಿನಗಳ ವರೆಗೆ ನಡೆದ ಕಾರ್ಯಕ್ರಮದಲ್ಲಿ ಇಂದು ಸಾಯಿಂಕಾಲ ನಡೆದ   ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣಾ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ದಾಸವಾಣಿ ಕಾರ್ಯಕ್ರಮ ನೆರವೇರಿತು. ಕೊಪ್ರೇಶ ದೇಸಾಯಿ, ಗೋಪಾಲ ಗುಡಿಬಂಡಿ ದಾಸವಾಣಿಗೆ ಸಾಥ್ ನೀಡಿದರು.

ಅಧಿಕಾರಿಗಳ ನಿರ್ಲಕ್ಷದಿಂದ ಆಕ್ರಮ ಮರಳು ದಂಧೆ ಕೆ ಆರ್ ಎಸ್ ಪಕ್ಷ ಆರೋಪ

 ಅಧಿಕಾರಿಗಳ ನಿರ್ಲಕ್ಷದಿಂದ ಆಕ್ರಮ ಮರಳು ದಂಧೆ    ಕೆ ಆರ್ ಎಸ್ ಪಕ್ಷ ಆರೋಪ ರಾಯಚೂರು,ಮೇ.16- ಸಿಂಧನೂರು ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ದಂಧೆ ಸರ್ವೇ ಸಾಮಾನ್ಯವಾಗಿದ್ದು  ಇಂತಹ ಅವ್ಯಹರವನ್ನು ತಡೆಯಲು ಸಂಬಂಧಪಟ್ಟ ಅಧಿಕಾರಿಗಳು ವಿಫಲ ಆಗಿದ್ದಾರೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆರೋಪಿಸಿದೆ.                                               ಮರಳು ತಪಸಣ ಕೇಂದ್ರಗಳನ್ನು ತೆರೆಯದ ಕಾರಣದಿಂದ ಆಕ್ರಮ ಮರಳು ಗಣಿಗಾರಿಕೆ ಮಾಲೀಕರು ಯಾವುದೇ ಅಧಿಕಾರಿಯ ಹಾಗೂ ಕಾನೂನಿನ ಭಯವಿಲ್ಲದೆ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪಸಿದ್ದಾರೆ. ಸಿಂಧನೂರು ತಾಲೂಕಿನ ಸುತ್ತ ಮುತ್ತಲ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ, ಇದರ ಭಾಗವಾಗಿ ಇಂದು ಹಾಡ ಹಗಲೇ ಸಿಂಧನೂರು ಮತ್ತು ಒಳಬಳ್ಳಾರಿ ರಸ್ತೆ ಮಾರ್ಗವಾಗಿ ಮರಳುನ್ನ ಸಾಗಿಸುತ್ತಿದ್ದ ಒಂದು ಟ್ರಾಕ್ಟರ್ ಕೆ ಆರ್ ಎಸ್ ಪಕ್ಷಕ್ಕೆ ಸಿಕ್ಕು ಬಿದ್ದಿದೆ ಎಂದು ತಿಳಿಸಿದ್ದಾರೆ.                                             ರಾಜ್ಯ ಸರ್ಕಾರ ಈಗಾಗಲೇ ಮರಳು ಸಾಗಾಣಿಕೆ ತಡೆಯಲು ವಿಶೇಷ ಅಧಿಕಾರಿಗಳನ್ನು ಹಾಗೂ ತನಿಖಾ ಕೇಂದ್ರಗಳನ್ನು ನಿರ್ಮಿಸಿದೆ ಆದರೆ ಸಿಂಧನೂರು ತಾಲೂಕಿನಲ್ಲಿ ಯಾವುದೇ ಒಂದು ಕಡೆಯಲ್ಲಿ ಚೆಕ್ ಪಾಯಿಂಟ್ ಗಳನ್ನೂ ರಚಿಸಿಲ್ಲ  ಒಂದು ವೇಳೆ ಚೆಕ್ ಪಾಯಿಂಟ್ ಗಳು ಇದ್ದರೂ ಸಹ ಮೇಲಧಿಕಾರಿಗಳ ಸರಿಯಾದ ನಿರ್ವಹಣೆ ಇಲ್ಲದೆ ತಪಾಸಣಾ ಕೇಂದ್ರಗಳು ಪಾಳು ಬಿದ್ದಿರುವ ಉದಾ