Posts

Showing posts from April, 2022

ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ- ಆರ್.ವೆಂಕಟೇಶ ಕುಮಾರ್

  ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ- ಆರ್.ವೆಂಕಟೇಶ ಕುಮಾರ್ ರಾಯಚೂರು ಏ.30- ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ವಿಳಂಬ ಮಾಡದೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿಗಳಾದ ಆರ್.ವೆಂಕಟೇಶ ಕುಮಾರ್ ಅವರು ಸಂಬAಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.    ಅವರು ಏ.30ರ ಶನಿವಾರ ದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಪ್ರಸಕ್ತ ವರ್ಷದ ಕಾಮಗಾರಿಗಳು, ಅನುಷ್ಠಾನ ಅಧಿಕಾರಿಗಳ  ಬದಲಾವಣೆ ಮಾಡಬೇಕಿದ್ದರೆ, ಕ್ರಿಯಾಯೋಜನೆ ಅನುಮೋದನೆಯಾದ ಹದಿನೈದು ದಿನಗಳ ಒಳಗಾಗಿ ಬದಲಾವಣೆ ಪ್ರಸ್ತಾವನೆಗಳನ್ನು ಮಂಡಳಿಗೆ ಸಲ್ಲಿಸಬೇಕು. ಒಂದು ವೇಳೆ ವಿಳಂಬವಾದರೆ ಅನುಷ್ಠಾನ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು  ಎಂದರು. ಪ್ರಸಕ್ತ ಸಾಲಿಗೆ ಅನುಮೋದನೆಗೊಂಡ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಅಲ್ಲದೆ ಇನ್ನೂ ಪ್ರಾರಂಭಿಸದೇ ಇರುವ ಕಾಮಗಾರಿಗಳನ್ನು ವಿಳಂಬ ಮಾಡದೆ ಪ್ರಾರಂಭಿಸಬೇಕು. ಒಂದು ವೇಳೆ ವಿಳಂಬ ಮಾಡಿದರೆ ಅಂತಹ ಕಾಮಗಾರಿಗಳನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದರು. ಜಿ

ಶಾಂತಪ್ಪ ಬಾಡದ್ ರವರಿಗೆ ಅರಷಣಗಿ ಗ್ರಾಮಸ್ಥರಿಂದ ಸನ್ಮಾನ

ರಾಯಚೂರು,ಏ.30- ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆಯ ಗೌರವ ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ  ಶಾಂತಪ್ಪ ಬಾಡದ್ ಅವರಿಗೆ ತನ್ನ ಜನ್ಮ ಭೂಮಿಯಾದ ಅರಷಿಣಿಗಿ ಗ್ರಾಮದಲ್ಲಿ  ಶ್ರೀ ಅಂಬಾ  ಮಹೇಶ್ವರಿ ಬಯಲು ನಾಟ್ಯ ಸಂಘ ಹಾಗೂ ಸಾಮಾಜಿಕ ನಾಟ್ಯಸಂಘ ಅರಷಣಗಿ ಗ್ರಾಮದ ಸಕಲ ಕಲಾವಿದರ ವತಿಯಿಂದ   ಗ್ರಾಮಸ್ಥರಿಂದ ಸನ್ಮಾನ ನಡೆಯಿತು.                                                     ಪಾಂಡುರಂಗ ಕಾಡ್ಲೂರು ಮಾತನಾಡಿ,ಈಗಿನ ಕಾಲಮಾನದಲ್ಲಿ  ನಶಿಸಿಹೋಗುವ ಪೌರಾಣಿಕ,  ಬಯಲಾಟ, ನಾಟಕಗಳು  ಅದನ್ನು ಮೈಗೂಡಿಸಿಕೊಂಡು ಒಳ್ಳೆಯ ಅಭಿನಯವನ್ನು ಮಾಡುವುದರ ಮೂಲಕ ,ಪ್ರತಿಭೆಯನ್ನು ಹೊರಹಾಕಿ ,ಇಂದಿನಯುವಪೀಳಿಗೆಗೆ ಮಾರ್ಗದರ್ಶಿಯಾದ, ಬಾಗಲಕೋಟೆಯ ಸಚಿವರು ಮತ್ತು ಶಾಸಕರಿಂದ ಸನ್ಮಾನ ಸ್ವೀಕಾರಗೊಂಡಂತಪ್ರಶಸ್ತಿಗೆ ಭಾಜನರಾದ ,ಗ್ರಾಮದ ಹೆಸರು ಕೀರ್ತಿ ತರುವುದರಲ್ಲಿ ತಮ್ಮ ಸೇವೆ ಅತ್ಯಂತ ಮಹತ್ವವಾದುದು ಎಂದರು .                                                                              *ಈ ಒಂದು ಕಾರ್ಯಕ್ರಮದಲ್ಲಿ   ವೇದಿಕೆಯ ಮೇಲೆ ಊರಿನ ಮುಖಂಡರಾದ ,ಟಿ* *ತಾಯಪ್ಪ ,ಮಲ್ಲಪ್ಪಗೌಡ ,ಮಲ್ಲಿಕಾರ್ಜುನ ಸ್ವಾಮಿ ವೀರಭದ್ರಯ್ಯಸ್ವಾಮಿ ದೇವಪ್ಪ ಬಾಡದ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಎಂ ಡಿ ಸಾದಿಕ್ ,ಗ್ರಾಮ ಪಂಚಾಯಿತಿಯ ಸದಸ್ಯರಾದ ಗಂಗಪ್ಪ ,ಬಸವರಾಜ ಪೂಜಾರಿ ,ಮೀನುಗಾರರ ಸಂಘದ ಅಧ್ಯಕ್ಷರಾದ ಜಂಗ್ಲೆಪ್ಪ ರಾಯಚೂರು , ಜಮ್ಸೇರಲಿ  ಕೊತ್

ನಗರಸಭೆ ಸಾಮಾನ್ಯ ಮಹಾಸಭೆ: ಮಹಿಳಾ ಸದಸ್ಯೆಯಿಂದ ಮಿಂಚಿನ ಪ್ರತಿಭಟನೆ.

 ನಗರಸಭೆ ಸಾಮಾನ್ಯ ಮಹಾಸಭೆ: ಮಹಿಳಾ ಸದಸ್ಯೆಯಿಂದ ಮಿಂಚಿನ ಪ್ರತಿಭಟನೆ.                               ರಾಯಚೂರು,ಏ.30-ತಾವು ಪ್ರತಿನಿಧಿಸುವ ವಾರ್ಡಿನಲ್ಲಿ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು  ಎಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಕಾಮಗಾರಿ ಪ್ರಾರಂಭವಾಗಿಲ್ಲ ಈ ಕೂಡಲೆ ರಸ್ತೆ ಕಾಮಗಾರಿ ಪ್ರಾರಂಭಿಸಬೇಕೆಂದು ನಗರಸಭೆ ಸದಸ್ಯೆಯೋರ್ವರು ಇಂದು ನಡೆದ  ನಗರಸಭೆ ಸಾಮಾನ್ಯ ಮಹಾಸಭೆಯಲ್ಲಿ ಮಿಂಚಿನ ಪ್ರತಿಭಟನೆ ನಡೆಸಿದ್ದರಿಂದ ಸಭೆಯಲ್ಲಿ ಕೆಲ ಕಾಲ ಭಾರಿ ಕೋಲಾಹಲ ಉಂಟಾಯಿತು.  ಸಮಾನ್ಯ ಮಹಾಸಭೆ ಪ್ರಾರಂಭವಾಗುತ್ತಿದಂತೆ  ವಾರ್ಡ ನಂ.11 ಪ್ರತಿನಿಧಿಸುವ ನಗರಸಭೆ ಸದಸ್ಯರಾದ ರತ್ನ ಪ್ರಶಾಂತಿ ರವರು ತಮ್ಮ ಆಸನದಿಂದ ಎದ್ದು ಬಂದು ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ,ಪೌರಾಯುಕ್ತರು ಕುಳಿತಿದ್ದ ವೇದಿಕೆ ಮುಂಭಾಗದಲ್ಲಿ ನೆಲದ ಮೇಲೆ ಕುಳಿತು ತಮ್ಮ ಬೇಡಿಕೆ ಈಡೇರಿಸದಿದ್ದರೆ ತಾವು ಈ ಸ್ಥಳದಿಂದ ಕದಲುವುದಿಲ್ಲ ನನ್ನನ್ನು ಚುನಾಯಿಸಿದ ಜನರು ದಿನ ನಿತ್ಯ ತಮ್ಮ ಮೇಲೆ ಹಿಡಿ ಶಾಪ ಹಾಕುತ್ತಿದ್ದು ನನ್ನ ಮನವಿಗೆ ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಅಳಲು ವ್ಯಕ್ತಪಡಿಸಿದರು ಇದಕ್ಕೆ ಸ್ಪಂದಿಸಿದ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಆಂಜಿನೇಯ್ಯರವರು ಪೌರಾಯುಕ್ತರಿಗೆ ಸೂಚಿಸಿ ಕಾಮಗಾರಿ ಟೆಂಡರ್ ಪ್ರಕ್ರೀಯೆ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು ಇದಕ್ಕೆ ಸಭೆಯಲ್ಲಿದ್ದ ಸರ್ವ ಸದಸ್ಯರು  ಧ್ವನಿಗೂಡಿಸಿ, ನಗರಸಭೆ ಸದಸ್ಯರು ಪ್ರತಿಭಟನೆ

ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಿ- ಸಚಿವ ಆಚಾರ ಹಾಲಪ್ಪ

  ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಿ- ಸಚಿವ ಆಚಾರ ಹಾಲಪ್ಪ ರಾಯಚೂರು ಏ.29- ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮೊದಲ ಆದ್ಯತೆ ನೀಡಬೇಕೆಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಆಚಾರ ಹಾಲಪ್ಪ ಬಸಪ್ಪ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಅವರು ಏ.29ರ ಶುಕ್ರವಾರ ದಂದು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಪರಿವೀಕ್ಷಣೆ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಕಂಪನಿಯ ಕಾರ್ಮಿಕರಿಗೆ ಆರೋಗ್ಯದ ಸಮಸ್ಯೆಯಾದಲ್ಲಿ ಚಿಕಿತ್ಸೆ ವೆಚ್ಚವನ್ನು ಕಂಪನಿ ವತಿಯಿಂದ ಭರಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಸಿಬ್ಬಂದಿ ಹಾಗೂ ಕಾರ್ಮಿಕ ವರ್ಗವನ್ನು ಒಗ್ಗೂಡಿಸಿ ಹೊದಲ್ಲಿ ಮಾತ್ರ ಕಂಪನಿ ಅಭಿವೃದ್ಧಿ ಸಾಧ್ಯ ಎಂದರು. ಕಾರ್ಮಿಕರಿಗೆ ಕಾಲಕಾಲಕ್ಕೆ ಅಗತ್ಯ ಸೌಕರ್ಯಗಳನ್ನು ನೀಡಬೇಕು ಹಾಗೂ ಕಂಪನಿಯ ಮೇಲಾಧಿಕಾರಿಗಳು ಯಾವುದೇ ಲೋಪದೋಷಗಳು ಆಗದಂತೆ ನೋಡಿಕೊಳ್ಳುವ ಮೂಲಕ ಕಾರ್ಯವನ್ನು ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರತಿದಿನ 400ರಿಂದ 500ಜನರಿಗೆ ಚಿಕಿತ್ಸೆ ವ್ಯವಸ್ಥೆ: ಹಟ್ಟಿ ಚಿನ್ನದ ಗಣಿ ಆಸ್ಪತ್ರೆಯು 120 ಹಾಸಿಗೆಯ ಸಾಮರ್ಥ್ಯದ ಸೌಲಭ್ಯವನ್ನು ಹೊಂದಿದ್ದು, ಆಸ್ಪತ್ರೆಯಲ್ಲಿ ಕಂಪನಿಯ ನೌಕರರು ಹಾಗೂ ಅವಲಂಬಿತರಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಪ್ರತಿದಿನ ಸು

ಜಿ.ಪೂರ್ಣಿಮಾ ಗಾಣದಾಳರವರಿಗೆ ಶಾಸಕ ಡಾ. ಶಿವರಾಜ್ ಪಾಟೀಲ್ ರಿಂದ ಸನ್ಮಾನ

 ರಾಯಚೂರು,ಏ.29-  ಹಿರಿಯ ಸಾಹಿತಿಗಳಾದ ಡಾ. ಬಿ.ಲಿಂಗಣ್ಣ ಗಾಣದಾಳ  ಇವರ ಸುಪುತ್ರಿ ಜಿ.ಪೂರ್ಣಿಮಾ ಗಾಣದಾಳ  ಇವರು ಗುಲ್ಬರ್ಗ ವಿಶ್ವವಿದ್ಯಾಲಯ ಗುಲ್ಬರ್ಗದಲ್ಲಿ ನಡೆದ 40ನೇ ಘಟಿಕೋತ್ಸವದಲ್ಲಿ ಎಂ. ಎ. ಕನ್ನಡ ಸ್ನಾತನಕೋತ್ತರ  ವಿಭಾಗದಲ್ಲಿ 12 ಚಿನ್ನದ    ಪದಕವನ್ನು  ಪಡೆದು ರಾಯಚೂರು   ಜಿಲ್ಲೆಗೆ ಕೀರ್ತಿ ತಂದಿರುವ ಹಿನ್ನಲೆ  ನಗರ ಶಾಸಕರಾದ  ಡಾ.   ಶಿವರಾಜ್ ಪಾಟೀಲ್ ಇವರು  ಸನ್ಮಾನಿಸಿ ಗೌರವಿಸಿದರು.         ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ವೈ. ಗೋಪಾಲ್ ರೆಡ್ಡಿ ,ಮಾಜಿ ಸದಸ್ಯರಾದ ಎ.ಚಂದ್ರಶೇಖರ್ ,ನಗರಸಭೆ ಸದಸ್ಯರಾದ ನಾಗರಾಜ್ , ಎನ್ .ಶ್ರೀನಿವಾಸರೆಡ್ಡಿ , ಪೂಗಲ್ ಶ್ರೀನಿವಾಸ್ ರೆಡ್ಡಿ ,ಒಬಿಸಿ ನಗರಾಧ್ಯಕ್ಷರಾದ ಯು. ಆಂಜನೇಯ, ಪ್ರಧಾನ ಕಾರ್ಯದರ್ಶಿ  ನವೀನ್ ರೆಡ್ಡಿ , ಜಿ.ಕೇಶವಮೂರ್ತಿ ಇನ್ನೂ ಅನೇಕ ಕಾರ್ಯಕರ್ತರು ಇದ್ದರು.

ಮೇ.1 ರಂದು ಶ್ರೀ ಜಗನ್ನಾಥ ದಾಸರು ಚಿತ್ರತಂಡಕ್ಕೆ ಸನ್ಮಾನ ಕಾರ್ಯಕ್ರಮ- ಜಗನ್ನಾಥ ಕುಲಕರ್ಣಿ.

 ಮೇ.1 ರಂದು ಶ್ರೀ ಜಗನ್ನಾಥ ದಾಸರು ಚಿತ್ರತಂಡಕ್ಕೆ ಸನ್ಮಾನ ಕಾರ್ಯಕ್ರಮ- ಜಗನ್ನಾಥ ಕುಲಕರ್ಣಿ.                                 ರಾಯಚೂರು,ಏ.29-ದಾಸ ಸಾಹಿತ್ಯದಲ್ಲಿ ಹೊಸ ಅಧ್ಯಾಯ ಬರೆದ  ಶ್ರೀ ಜಗನ್ನಾಥ ದಾಸರು ಚಲನಚಿತ್ರ ತಂಡಕ್ಕೆ ಮೇ 1 ರಂದು ಸನ್ಮಾನಿಸಲಾಗುತ್ತಿದೆ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಜಗನ್ನಾಥ ಕುಲಕರ್ಣಿ ಹೇಳಿದರು.                                                       ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಕೆಕೆಬಿಎಂಎಸ್, ಟಿಟಿಡಿ , ಆದಿ ಶಂಕರ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ   ಅಂದು ಸಂಜೆ 6 ಗಂಟೆಗೆ ನಗರದ ಗಾಜಗಾರಪೇಟೆಯ ಶೃಂಗೇರಿ ಶಂಕರ ಮಠದ ಶ್ರೀಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಭೂತ ಪೂರ್ವ ಯಶಸ್ಸು ಕಂಡ ಶ್ರೀ ಜಗನ್ನಾಥ ದಾಸರು ಚಲನಚಿತ್ರದ ನಿರ್ಮಾಪಕರು, ನಿರ್ದೇಶಕರು, ನಟರು, ಕಲಾವಿದರಿಗೆ ಸನ್ಮಾನಿಸಲಾಗುತ್ತಿದ್ದು ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಶಿವರಾಜ ಪಾಟೀಲ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಮೂರ್ತಿ ಭಾಗವಹಿಸಲಿದ್ದಾರೆಂದರು. ನಿರ್ದೇಶಕ ಮಧುಸೂಧನ್ ಹವಾಲ್ದಾರ್ ಮಾತನಾಡಿ ಶರಣ ಮತ್ತು ದಾಸ ಸಾಹಿತ್ಯದ ತೊಟ್ಟಿಲಾಗಿರುವ ಜಿಲ್ಲೆಯಲ್ಲಿ ಜಗನ್ನಾಥ ದಾಸರು ಚಲನಚಿತ್ರ ಚಿತ್ರಿಕರಣಗೊಂಡು ನೂರು ದಿನಗಳನ್ನು ಪೂರೈಸಿದೆ ನಮಗೆಲ್ಲ ಹೊಸ ಸ್ಪೂರ್ತ

ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಗೆ ವಿಶೇಷ ನಿಗಾ ವಹಿಸಿ- ಸಚಿವ ಹಾಲಪ್ಪಆಚಾರ್

 ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಗೆ ವಿಶೇಷ ನಿಗಾ ವಹಿಸಿ- ಸಚಿವ  ಹಾಲಪ್ಪಆಚಾರ್ ರಾಯಚೂರು ಏ.28:- ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಚೆಕ್ ಪೋಸ್ಟ್ಗಳನ್ನು ಬಿಗಿಗೊಳಿಸುವುದರ ಜೊತೆಗೆ ವಿಶೇಷ ನಿಗಾವಹಿಸುವಂತೆ ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಸಚಿವ  ಹಾಲಪ್ಪ ಬಸ್ಸಪ್ಪ ಆಚಾರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.      ಅವರು  ಗುರುವಾರ ದಂದು ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ವಿಕಲಚೇತನ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಕಡೆಗಳಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ತಡೆಯಲು ಈ ಬಗ್ಗೆ ತೀವ್ರ ನಿಗಾವಹಿಸಿ ಟಾಸ್ಕ್ ಫೋರ್ಸ್ ಸಮಿತಿ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು. ಮರಳು ನಿಯಮ ಬಾಹಿರ ಸಾಗಾಟ ನಡೆಯಬಾರದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಲ್ಲಿಸಬೇಕಾದ ರಾಜಧನ ಹಾಗೂ ಮತ್ತಿತರ ತೆರಿಗೆ ಹಣ ಸಮರ್ಪಕವಾಗಿ ಪಾವತಿ ಆಗುತ್ತಿಲ್ಲ. ಎಲ್ಲ

ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಗೆ ವಿಶೇಷ ನಿಗಾ ವಹಿಸಿ- ಸಚಿವ ಹಾಲಪ್ಪಆಚಾರ್

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಗೆ ವಿಶೇಷ ನಿಗಾ ವಹಿಸಿ- ಸಚಿವ  ಹಾಲಪ್ಪಆಚಾರ್ ರಾಯಚೂರು ಏ.28:- ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಚೆಕ್ ಪೋಸ್ಟ್ಗಳನ್ನು ಬಿಗಿಗೊಳಿಸುವುದರ ಜೊತೆಗೆ ವಿಶೇಷ ನಿಗಾವಹಿಸುವಂತೆ ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಸಚಿವ  ಹಾಲಪ್ಪ ಬಸ್ಸಪ್ಪ ಆಚಾರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.      ಅವರು  ಗುರುವಾರ ದಂದು ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ವಿಕಲಚೇತನ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಕಡೆಗಳಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ತಡೆಯಲು ಈ ಬಗ್ಗೆ ತೀವ್ರ ನಿಗಾವಹಿಸಿ ಟಾಸ್ಕ್ ಫೋರ್ಸ್ ಸಮಿತಿ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು. ಮರಳು ನಿಯಮ ಬಾಹಿರ ಸಾಗಾಟ ನಡೆಯಬಾರದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಲ್ಲಿಸಬೇಕಾದ ರಾಜಧನ ಹಾಗೂ ಮತ್ತಿತರ ತೆರಿಗೆ ಹಣ ಸಮರ್ಪಕವಾಗಿ ಪಾವತಿ ಆಗುತ್ತಿಲ್ಲ. ಎಲ್ಲ ಅ

ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ: ಯೋಜನೆಗಳ ಲಾಭವನ್ನು ಅರ್ಹರಿಗೆ ತಲುಪಿಸಲು ಶ್ರಮಿಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ ನಾಯಕ

  ರಾಯಚೂರು ಏ.28- ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ತ್ವರಿತವಾಗಿ ಅನುಷ್ಠಾನ ಮಾಡುವ ಮೂಲಕ ಸರ್ಕಾರವು ರೈತರ ಅಭಿವೃದ್ಧಿಗಾಗಿ ರೂಪಿಸಿದ ಯೋಜನೆಗಳ ಲಾಭವನ್ನು ಅವರ ಮನೆ ಬಾಗಿಲಿಗೆ ತಲುಪುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಜಿ.ಕುಮಾರ ನಾಯಕ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.    ಅವರು  ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಅನುಷ್ಠಾನ ತಪ್ತಿಕರವಾಗಿದ್ದು, ಅಧಿಕಾರಿಗಳು ಇನ್ನೂ ಹೆಚ್ಚಿನ ವೇಗದಲ್ಲಿ ಕೆಲಸ ಮಾಡಿ ತಮ್ಮ ಇಲಾಖೆಗಳಿಗೆ ನಿಗದಿಪಡಿಸಿದ ಆರ್ಥಿಕ ಹಾಗೂ ಭೌತಿಕ ಗುರಿಯನ್ನು ಸಂಪೂರ್ಣವಾಗಿ ಸಾಧಿಸಬೇಕೆಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲೆಯ ರೈತರಿಗೆ ಸಮಯಕ್ಕೆ ಸರಿಯಾಗಿ ರಸಗೊಬ್ಬರ ಹಾಗೂ ಇತರೆ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಜಿಲ್ಲೆಯ ಕೆರೆಗಳಿಗೆ ಶೇ. 78ರಷ್ಟು ನೀರನ್ನು ತುಂಬುವ ಕಾರ್ಯ ಪೂರ್ಣಗೊಂಡಿದ್ದು, ರಾಯಚೂರಿನಲ್ಲಿ 20, ಮಾನ್ವಿಯಲ್ಲಿ 76, ದೇವದುರ್ಗದಲ್ಲಿ 11, ಲಿಂಗಸೂಗೂರು 3, ಸಿಂಧನೂರಿನಲ್ಲಿ 163 ಸೇರಿದಂತೆ ಒಟ್ಟು 273 ಕೆರೆಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಬೇಸಿಗೆಯಲ

ದಕ್ಷಿಣ ಮಧ್ಯೆ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರುಣ ಕುಮಾರ ಜೈನ್ ರೈಲ್ವೆ ನಿಲ್ದಾಣಕ್ಕೆ ಭೇಟಿ

 ರಾಯಚೂರು,ಏ.28- ದಕ್ಷಿಣ ಮಧ್ಯೆ ರೇಲ್ವೆ ವಲಯದ    ಪ್ರಧಾನ ವ್ಯವಸ್ಥಾಪಕ ಅರುಣ ಕುಮಾರ ಜೈನ ಅವರು ನಗರದ ರೈಲ್ವೆ ನಿಲ್ದಾಣಕ್ಕೆ  ಆಗಮಿಸಿದ್ದರು. ಅವರು  ಇಲ್ಲಿ ನಡೆಯುತ್ತಿರುವ ಎಸ್ಕಾಲೇಟರ್,ಲೀಫ್ಟ ,ಫುಟ ಓವರ್ ಬ್ರೀಜ ಇತರೇ ಕೆಲಸಗಳ ಪ್ರಗತಿ ವೀಕ್ಷಿಸಿದರು.ಗುಡಶೆಡ ಏರಿಯಾಕ್ಕೂ ಭೇಟಿ ನೀಡಿ ಅದರ ಸ್ಥಳಾಂತರದ ಮಾಹಿತಿ ಪಡೆದರು.ಈ  ಸಂದರ್ಭದಲ್ಲಿ ಜೈನ ಅವರಿಗೆ ಮನವಿ ಪತ್ರ ನೀಡಿದ ರೇಲ್ವೆ ಬೋರ್ಡ ಸದಸ್ಯರಾದ ಬಾಬುರಾವ ಅವರು ರಾಯಚೂರ ಕಾಕಿನಾಡ ನಡುವೆ ರೈಲು ಓಡಿಸಬೇಕು.ಸುಕ್ಷೇತ್ರ ಮಂತ್ರಾಲಯದಲ್ಲಿ ಲಿಫ್ಟ,ಎಸ್ಕಾಲೇಟರ, ಸೌಲಭ್ಯಕ್ಕೆ ಆಗ್ರಹಿಸಿದರು.ರಾಯಚೂರ ಕಾಚಿಗೂಡ ರೈಲು ವೇಳೆ ಬದಲಾವಣೆ ಮಾಡಿ, ಸಂಜೆ 5 ಗಂಟೆ ಬದಲಾಗಿ ಬೆಳಿಗ್ಗೆ 6 ಗಂಟೆಗೆ ಓಡಿಸಬೇಕು.ರಾಯಚೂರ ಗುಲ್ಬರ್ಗಾದ ನಡುವೆ   ಓಡುವ ಡೆಮೋ ರೈಲಿಗೆ ಎರಡು ಕೋಚ್ ಅಳವಡಿಸಬೇಕು,     ಪ್ರಯಾಣಿಕರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿದರು. ಹಿರಿಯ ನಾಗರೀಕರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ನೀಡುವ ವ್ಯವಸ್ಥೆ ಮರು ಜಾರಿಗೆ ವಿನಂತಿಸಿದರು.           

ನನ್ನ ಪುತ್ಥಳಿ ಬದಲು ಸಾಧಕರ ಪ್ರತಿಮೆ ಸ್ಥಾಪಿಸಿ-ಸುದೀಪ್

 ನನ್ನ ಪುತ್ಥಳಿ ಬದಲು  ಸಾಧಕರ ಪ್ರತಿಮೆ ಸ್ಥಾಪಿಸಿ-ಸುದೀಪ್.   ರಾಯಚೂರು,ಏ.27-ನಾನು ಕೇವಲ ಚಿತ್ರನಟನಾಗಿದ್ದು ನನ್ನ ಪ್ರತಿಮೆ ಬದಲಿಗೆ ಸಾಧಕರ ಪ್ರತಿಮೆ ಸ್ಥಾಪಿಸಲು ನಾನು ಅಭಿಮಾನಿಗಳಿಗೆ ಕೋರುತ್ತೇನೆಂದು ಕನ್ನಡ ಚಿತ್ರ ರಂಗದ ಖ್ಯಾತ ನಾಯಕ ನಟ ಸುದೀಪ್ ಹೇಳಿದರು .ಅವರಿಂದು ಸಿರವಾರ ತಾಲೂಕಿನ ಕುರಕುಂದ ಗ್ರಾಮದಲ್ಲಿ ಅಭಿಮಾನಿಗಳು ಸ್ಥಾಪಿಸಿರುವ ಮಹರ್ಷಿ ವಾಲ್ಮೀಕಿಯವರ ಪುತ್ಥಳಿ ಸ್ಥಾಪನೆ ಕರ್ಯಕ್ರಮದಲ್ಲಿ ಪಾಲ್ಗೊಂಡು  ಮಾತನಾಡಿದರು.ನಾನಿನ್ನು ಸಾಧಿಸಬೇಕಾಗಿದ್ದು ಬಹಳಯಿದೆ ಸಮಾಜದಲ್ಲಿ ಅನೇಕ ಮಹನೀಯರು, ಸಾಧಕರಿದ್ದಾರೆ ಅವರ ಪುತ್ಥಳಿ ಸ್ಥಾಪಿಸಿ ಎಂದು ಕರೆ ನೀಡಿದ ಅವರ ತಮ್ಮ ಪುತ್ಥಳಿ ಸ್ಥಾಪನೆ ಮಾಡಬೇಡಿ ಎಂದರು.ಅಪ್ಪು ನಮ್ಮನ್ನೆಲ್ಲ ಅಗಲಿದ್ದು ಅತೀವ ದುಃಖದ ಸಂಗತಿಯಾಗಿದ್ದು ಅವರ ಸಾಧನೆ ನಮಗೆಲ್ಲ ಮಾದರಿಯಾಗಿದೆ ಎಂದರು. ಪರಿಶಿಷ್ಟ ಪಂಗಡಕ್ಕೆ ಶೆ.7.5 ರಷ್ಟು ಮೀಸಲಾತಿ ನೀಡಬೇಕೆಂಬ ಹೋರಾಟಕ್ಕೆ ನನ್ನ     ಸಂಪೂರ್ಣ ಬೆಂಬಲ ಹೋರಾಟನಿರತ ಸ್ವಾಮಿಗಳಿಗಿದೆ  ಎಂದರು. ಸುದೀಪ್ ರನ್ನು ನೋಡಲು ಬಂದ ಜನರ ನೂಕು ನುಗ್ಗಲು ನಿಭಾಯಿಸಲು ಪೊಲೀಸರು ಹರ ಸಾಹಸ ಪಟ್ಟರು. 

ಯುವ ಪೀಳಿಗೆಗೆ ರಾಷ್ಟ್ರರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು- ರಮಾನಂದಗೌಡ.

 ಯುವ ಪೀಳಿಗೆಗೆ ರಾಷ್ಟ್ರರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು- ರಮಾನಂದಗೌಡ.                    ರಾಯಚೂರು,ಏ.27-ಯುವ ಪೀಳಿಗೆಗೆ ರಾಷ್ಟ್ರರಕ್ಷಣೆಯ ಜಾಗೃತಿ ಮೂಡಿಸಬೇಕೆಂದು ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ರಮಾನಂದಗೌಡ ಹೇಳಿದರು. ಅವರು ಮಂಗಳವಾರ ಸಂಜೆ ನಗರದ ವಾಸವಿನಗರದ ಗುರುಕಲಾ  ಮಂದಿರದಲ್ಲಿ ನಡೆದ  ಚಿಂತನ ಬೈಠಕ್ ನಲ್ಲಿ ಮಾತನಾಡಿದರು. ಭಾರತಕ್ಕೆ ತನ್ನದೆಯಾದ ಅಗ್ರ ಸ್ಥಾನವಿದೆ ಪ್ರಪಂಚದಲ್ಲಿ, ಅದಕ್ಕೆ ಮುಖ್ಯ ಕಾರಣ ಇಲ್ಲಿನ ವೈಚಾರಿಕತೆ ಮತ್ತು ಸಂಸ್ಕೃತಿಯಾಗಿದ್ದು ರಾಷ್ಟ್ರ ಸಂರಕ್ಷಣೆಯಲ್ಲಿ ಯುವ ಪೀಳಿಗೆಗೆ ಜಾಗೃತಿ ಮೂಡಿಸಬೇಕೆಂದರು.ಹಿಂದುತ್ವ ಎಂದರೆ ಸಾತ್ವಿಕತೆ ಎಲ್ಲರನ್ನು ಒಂದೆ ತರನಾಗಿ ಕಾಣುವುದು ರಜೋ ,ತಮ ಗುಣ ಕಡಿಮೆಯಿರುವವರು ಯಾರೆ ಆಗಿದ್ದರು ಅವರು ಹಿಂದು ಆಗಿರುತ್ತಾರೆಂದರು. ಶಾರಿರಿಕ ಮತ್ತು ವೈಚಾರಿಕ ಹಾಗೂ ಆಧ್ಯಾತ್ಮಿಕತೆಯಿಂದ ರಾಷ್ಟ್ರ ರಕ್ಷಣೆ ಸಾಧ್ಯವೆಂದರು. ಕಾನೂನು ಎಲ್ಲರಿಗೂ ಒಂದೆ ಅದನ್ನು ಯಾರು ಸಹ ಮುರಿಯಬಾರದೆಂದರು.ಮಹಾಭಾರತದಲ್ಲಿ ಕೌರವರು ಪಾಂಡವರು ಇಬ್ಬರು ಇದ್ದರು, ಒಳ್ಳೆ ಗುಣಗಳುಳ್ಳ ಪಾಂಡವರ ಹಿಂದೆ ಕೃಷ್ಣ ನಿಂತನು ಎಂದ ಅವರು ಹಿಂದೂ ಸ್ವರಾಜ್ಯ  ಸ್ಥಾಪನೆ ಮಾಡಲು ಮುಂದಾದ ಶಿವಾಜಿ ಮಹಾರಾಜರ ಹಿಂದೆ ಸಮರ್ಥ ರಾಮದಾಸರು ಮಾರ್ಗದರ್ಶನ ಮಾಡಿದ್ದ ರೆಂದರು. ಹಿಂದೂ ಜನ ಜಾಗೃತಿ ಸಮಿತಿ ಬಾಗಲಕೋಟಿ ಜಿಲ್ಲಾ ಸಮನ್ವಯಕಾರರಾದ ವೆಂಕಟರಮಣ ನಾಯಕ ಮಾತನಾಡಿ ಸನಾತನ ಸಂಸ್ಥೆ ಹಿಂದುತ್ವದ ಜಾಗೃತಿಗಾಗಿ ಶ್ರಮಿಸುತ್

ಖಾಜನಗೌಡರ ವಿವಾಸದಲ್ಲಿ ವಿಜಯದಾಸರ ಚಿತ್ರದ ಚಿತ್ರಿಕರಣಕ್ಕೆ ಚಾಲನೆ.

 ರಾಯಚೂರು,ಏ.26-ದಾಸರ ತೊಟ್ಟಿಲು ಎಂದು ಕರೆಸಿಕೊಳ್ಳುವ ರಾಯಚೂರಲ್ಲಿ ಶ್ರೀವಿಜಯ ದಾಸರ ಚಿತ್ರದ ಚಿತ್ರೀಕರಣಕ್ಕೆ ಇಂದು ನಗರದ ಪುರಾತನವಾದ ಖಾಜನಗೌಡರ ವಿವಾಸದಲ್ಲಿ ಚಾಲನೆ ನೀಡಲಾಯಿತು. ರಾಯಚೂರು ವಿಶ್ವವಿದ್ಯಾಲಯ ಕುಲಪತಿ ಡಾ. ಹರೀಶ ರಾಮಸ್ವಾಮಿರವರು ಚಾಲನೆ ನೀಡಿದರು . ಗತ ಇತಿಹಾಸದಲ್ಲಿ ದೊಡ್ಡಮನೆತನವಾದ ಖಾಜನಗೌಡರ ಮನೆ ಇಂದು ಭಾಗಶ ಜರ್ಜರಿತವಾಗಿದ್ದರು ಮನೆಯ ಮುಂಬಾಗಿಲು ಒಳಗಿನ  ಕೋಣೆಗಳು ಕೊಂಚ ಮಟ್ಟಿ ಗೆ ಸುಸ್ಥಿತಿಯಲ್ಲಿದ್ದು ಇಂದ ಚಿತ್ರದ ವಿವಾಹ ಸನ್ನಿವೇಶದ ಚಿತ್ರೀಕರಣ ನಡೆದಿದ್ದು ಮನೆಗೆ ತಳಿರು ತೋರಣ ಕಟ್ಟಲಾಗಿತ್ತು ಮನೆ ಮುಂದೆ ಚಪ್ಪರ ಹಾಕಲಾಗಿತ್ತು ಮಹಿಳೆಯರು ಮತ್ತು ಪುರುಷರು ಸಾಂಪ್ರದಾಯಕ ಉಡುಗೆಯಲ್ಲಿ ಕಂಗೊಳಿಸಿದರು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಮಧುಸೂಧನ ಹವಾಲ್ದಾರ್, ಚಿತ್ರದ ನಿರ್ಮಾಪಕ, ವಿಜಯದಾಸರ ಪಾತ್ರಧಾರಿ ತ್ರಿವಿಕ್ರಮ ಜೋಷಿ,  ಮಾಜಿ   ಶಾಸಕ ಬಸನಗೌಡ ಬ್ಯಾಗವಾಟ್, ಬ್ರಾಹ್ಮಣ ಅಭಿವೃದ್ದಿ  ಮಂಡಳಿ ನಿರ್ದೇಶಕ ಜಗನ್ನಾಥ ಕುಲಕರ್ಣಿ ಸೇರಿದಂತೆ ಸಹ ಕಲಾವಿದರು, ತಂತ್ರಜ್ಞರು ಇದ್ದರು. 

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನಲೆ ಗೃಹ ಸಚಿವ ಅರಗಜ್ಞಾನೇಂದ್ರ ರವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು- ಎ.ವಸಂತ ಕುಮಾರ್

 ರಾಯಚೂರು,ಏ.26- ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನಲೆ ಗೃಹ ಸಚಿವ ಅರಗಜ್ಞಾನೇಂದ್ರ ರವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತ ಕುಮಾರ್ ಒತ್ತಾಯಿಸಿದರು.                                                 ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ  ಪಿಎಸ್ಐ ಅಕ್ರಮ ಕುರಿತು ಕೆಲ ಮಾಹಿತಿ ಮತ್ತು ಆರೋಪಿಗಳ ಸಂಭಾಷಣೆಯ ಆಡಿಯೋ ತುಣಕನ್ನು ಮಾಧ್ಯಮ ಮೂಲಕ ಬಹಿರಂಗಪಡಿಸಿದ ಶಾಸಕ ಪ್ರಿಯಾಂಕ ಖರ್ಗೆಯವರನ್ನೆ ಸಿಐಡಿ ನೋಟೀಸ್ ನೀಡಿ ವಿಚಾರಣೆ ಹಾಜರಾಗುವಂತೆ ಹೇಳಿದ್ದರ ಹಿನ್ನಲೆ ಏನು? ವಿರೋಧ ಪಕ್ಷಗಳ ಶಾಸಕರು ಸರ್ಕಾರದ ಬಗ್ಗೆ ಧ್ವನಿ ಎತ್ತಬಾರದೆಂಬ ಬೆದರಿಕೆ ತಂತ್ರವೆ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿ ಸಮರ್ಥ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದ್ದು ಸರ್ಕಾರದ ಬೆದರಿಕೆ ತಂತ್ರಕ್ಕೆ ಮಣಿಯುವುದಿಲ್ಲವೆಂದರು. ಪರೀಕ್ಷಾ ಕೇಂದ್ರದ ಬಗ್ಗೆ ಅಲ್ಲಿನ ಡಿಡಿಪಿಐ ನಕಾರಾತ್ಮಕವಾಗಿದ್ದರು ಸಂಸದ ಉಮೇಶ ಜಾಧವ್ ಪರೀಕ್ಷಾ ಕೇಂದ್ರದ ಬಗ್ಗೆ ಒಲವು ವ್ಯಕ್ತಪಡಿಸಿ ಶಿಫಾರಸ್ಸು ಮಾಡಿದ್ದೇಕೆ, ಈ ಬಗ್ಗೆ ಅವರಿಗೂ ವಿಚಾರಣೆಗೊಳಪಡಿಸಬೇಕೆಂದರು.                            ಬಿಜೆಪಿ ಸಕ್ರಿಯ ಕಾರ್ಯಕರ್ತೆ ದಿವ್ಯ ಹಾಗರಗಿ ಮನೆಗೆ ಗೃಹ   ಸಚಿವರು ಭೇಟಿ ನೀಡಿದ್ದು ಯಾವ ಉದ್ದೇಶಕ್ಕಾಗಿ ಇದರಲ್ಲಿ ಗೃಹ ಸಚಿವರು ಪಾಲ್ಗೊಂಡಿರುವ ಬಗ್ಗೆ ಅನುಮಾನವಿರುವ ಕಾರಣಕ್ಕೆ ಅವರು

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಹಿನ್ನಲೆ ಗೃಹ ಸಚಿವರು ರಾಜೀನಾಮೆ ನೀಡಬೇಕು- ಎ.ವಸಂತಕುಮಾರ್.

ರಾಯಚೂರು,ಏ.26- ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನಲೆ ಗೃಹ ಸಚಿವ ಅರಗಜ್ಞಾನೇಂದ್ರ ರವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತ ಕುಮಾರ್ ಒತ್ತಾಯಿಸಿದರು.                                                 ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ  ಪಿಎಸ್ಐ ಅಕ್ರಮ ಕುರಿತು ಕೆಲ ಮಾಹಿತಿ ಮತ್ತು ಆರೋಪಿಗಳ ಸಂಭಾಷಣೆಯ ಆಡಿಯೋ ತುಣಕನ್ನು ಮಾಧ್ಯಮ ಮೂಲಕ ಬಹಿರಂಗಪಡಿಸಿದ ಶಾಸಕ ಪ್ರಿಯಾಂಕ ಖರ್ಗೆಯವರನ್ನೆ ಸಿಐಡಿ ನೋಟೀಸ್ ನೀಡಿ ವಿಚಾರಣೆ ಹಾಜರಾಗುವಂತೆ ಹೇಳಿದ್ದರ ಹಿನ್ನಲೆ ಏನು? ವಿರೋಧ ಪಕ್ಷಗಳ ಶಾಸಕರು ಸರ್ಕಾರದ ಬಗ್ಗೆ ಧ್ವನಿ ಎತ್ತಬಾರದೆಂಬ ಬೆದರಿಕೆ ತಂತ್ರವೆ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿ ಸಮರ್ಥ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದ್ದು ಸರ್ಕಾರದ ಬೆದರಿಕೆ ತಂತ್ರಕ್ಕೆ ಮಣಿಯುವುದಿಲ್ಲವೆಂದರು. ಪರೀಕ್ಷಾ ಕೇಂದ್ರದ ಬಗ್ಗೆ ಅಲ್ಲಿನ ಡಿಡಿಪಿಐ ನಕಾರಾತ್ಮಕವಾಗಿದ್ದರು ಸಂಸದ ಉಮೇಶ ಜಾಧವ್ ಪರೀಕ್ಷಾ ಕೇಂದ್ರದ ಬಗ್ಗೆ ಒಲವು ವ್ಯಕ್ತಪಡಿಸಿ ಶಿಫಾರಸ್ಸು ಮಾಡಿದ್ದೇಕೆ, ಈ ಬಗ್ಗೆ ಅವರಿಗೂ ವಿಚಾರಣೆಗೊಳಪಡಿಸಬೇಕೆಂದರು.                            ಬಿಜೆಪಿ ಸಕ್ರಿಯ ಕಾರ್ಯಕರ್ತೆ ದಿವ್ಯ ಹಾಗರಗಿ ಮನೆಗೆ ಗೃಹ   ಸಚಿವರು ಭೇಟಿ ನೀಡಿದ್ದು ಯಾವ ಉದ್ದೇಶಕ್ಕಾಗಿ ಇದರಲ್ಲಿ ಗೃಹ ಸಚಿವರು ಪಾಲ್ಗೊಂಡಿರುವ ಬಗ್ಗೆ ಅನುಮಾನವಿರುವ ಕಾರಣಕ್ಕೆ ಅವರು

ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಶ್ರೀಕಾಂತ್ ಸಾವೂರ್ ರವರಿಗೆ ಪಿತೃ ವಿಯೋಗ

 ರಾಯಚೂರು,ಏ.25-  ನ್ಯೂಸ್ ಫಸ್ಟ್ ಚಾನೆಲ್ ಜಿಲ್ಲಾ  ವರದಿಗಾರ ಶ್ರೀಕಾಂತ್ ಸಾವೂರು ಅವರ ತಂದೆ ನಿವೃತ್ತ ಶಿಕ್ಷಕ ಲಿಂಗಣ್ಣ ಅವರು ಇಂದು ಸಂಜೆ 5-30ಕ್ಕೆ ನಿಧನರಾಗಿದ್ದಾರೆ. ನ್ಯೂಸ್ ಫಸ್ಟ್ ವರದಿಗಾರ ಶ್ರೀಕಾಂತ್, ಟಿವಿ5 ನಿರೂಪಕರಾದ ದಶರಥ ಸಾವೂರು ಸೇರಿದಂತೆ  ಮೂವರು ಪುತ್ರರು, ಓರ್ವ  ಪುತ್ರಿ, ಪತ್ನಿ ಸೇರಿದಂತೆ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ. ನಾಳೆ ಸಂಜೆ ಸ್ವಗ್ರಾಮ ದೇವದುರ್ಗ ತಾಲೂಕಿನ ಯರಮಸಾಳ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದ ಕುಟಂಬ ಮೂಲಗಳು ತಳಿಸಿವೆ.

ಏ.28 ರಂದು ಜಿಲ್ಲೆಗೆ ಗಣಿ ಸಚಿವ ಹಾಲಪ್ಪಆಚಾರ

  ರಾಯಚೂರು ಏ.25- ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಆಚಾರ ಹಾಲಪ್ಪ ಬಸಪ್ಪ ಅವರು ಇದೇ ಏ.28 ಹಾಗೂ 29ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.         ಅವರ ಪ್ರವಾಸದ ವಿವರ ಇಂತಿದೆ; ಅವರು ಏ.28ರ ಮಧ್ಯಾಹ್ನ 2.30ಗಂಟೆಗೆ ರಸ್ತೆ ಮಾರ್ಗವಾಗಿ ಯಾದಗಿರಿ ಜಿಲ್ಲೆಯಿಂದ ನಿರ್ಗಮಿಸಿ ಸಂಜೆ 4.30ರಿಂದ 7.30ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ. ರಾತ್ರಿ 09ಗಂಟೆಗೆ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.   ಏ.29ರ ಬೆಳಿಗ್ಗೆ 10ಯಿಂದ ಸಂಜೆ 4ಗಂಟೆಯವರೆಗೆ ಹಟ್ಟಿ ಚಿನ್ನದ ಗಣಿ ಪರಿವೀಕ್ಷಣೆ ಮತ್ತು ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.   ಸಂಜೆ 4ಗಂಟೆಗೆ ಜಿಲ್ಲೆಯಿಂದ ನಿರ್ಗಮಿಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.     

ಡಾ.ರಾಜಕುಮಾರ್ ಅವರ 93ನೇ ಜನ್ಮದಿನೋತ್ಸವ: ಸಾಧಕರಿಗೆ ಪ್ರಶಸ್ತಿ ಪ್ರದಾನ

 ರಾಯಚೂರು,ಏ.25-ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ  ರಂಗಮಂದಿರದಲ್ಲಿ ಭಾನುವಾರ  ಡಾ. ರಾಜಕುಮಾರ್ ಅವರ 93ನೇ ಜನ್ಮದಿನೋತ್ಸವದ ಅಂಗವಾಗಿ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಪ್ರತಿಷ್ಠಿತ  ಕನ್ನಡ ರತ್ನ ಪ್ರಶಸ್ತಿಯನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮೆರೆದ ಖ್ಯಾತ ನಿರೂಪಕರಾದ ಮುರಳೀಧರ್ ಕುಲಕರ್ಣಿಯವರಿಗೆ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ವಿಜಯ ವಾಣಿ ಪತ್ರಿಕೆ ಜಿಲ್ಲಾ ಪ್ರಧಾನ ವರದಿಗಾರರಾದ ಶಿವಮೂರ್ತಿ ಹೀರೆಮಠ ಹಾಗು ವಿವಿಧ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಧ್ಯಕ್ಷರಾದ ನಾಡೋಜ ಮಹೇಶ ಜೋಷಿ,  ಪ್ರೋ.ಚಂದ್ರಶೇಖರ್, ಬಸವರಾಜ ಕಳಸ, ರಂಗಣ್ಣ ಪಾಟೀಲ ಅಳ್ಳುಂಡಿ,ವೀರ ಹನುಮಾನ, ಮಲ್ಲೇಶ ಗಧಾರ,ಜೆ.ಎಲ್.ಗೋಪಿ,ಶಾಮಣ್ಣ ಮಾಚನೂರು, ವೆಂಕಟೇಶ ಬೇವಿನಬೆಂಚಿ,ಸಾವಿತ್ರಿ ಪುರುಷೋತ್ತಮ ಸೇರಿದಂತೆ ಅನೇಕರಿದ್ದರು.  

ಚೆನ್ನಗಿರಿಯಲ್ಲಿ ಶ್ರೀ ರಾಯರ ಮೃತ್ತಿಕಾ ಬೃಂದಾವನ ಪುನ: ಪ್ರತಿಷ್ಠಾಪನೆ

ಚೆನ್ನಗಿರಿಯಲ್ಲಿ ಶ್ರೀ ರಾಯರ ಮೃತ್ತಿಕಾ ಬೃಂದಾವನ ಪುನ: ಪ್ರತಿಷ್ಠಾಪನೆ.                                         ರಾಯಚೂರು,ಏ.25-ಚೆನ್ನಗಿರಿಯಲ್ಲಿ 239 ವರ್ಷ ಹಳೆದಾದ ಶ್ರೀ ವರದೇಂದ್ರತೀರ್ಥ ಸ್ವಾಮಿಗಳಿಂದ ಪ್ರತಿಷ್ಟಾಪಿಸಲ್ಪಟ್ಟ ರಾಯರ ಮೃತ್ತಿಕಾ ಬೃಂದಾವನವನ್ನು ರಾಯರ ಮಠದ  ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಪುನಃ ಪ್ರತಿಷ್ಠಾಪಿಸಿದರು. ಪುರಾತನವಾದ ಮಠವನ್ನು ನವೀಕರಣಗೊಳಿಸಿಲಾಗಿದ್ದು ಪುನಃ ಪ್ರತಿಷ್ಟಾಪನಾ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ಮರೆಯಾಗಿ ಮನಸಿಗೆ ಘಾಸಿಗೊಳಿಸಿ ಹೋದಳು.

 ಮರೆಯಾಗಿ ಮನಸಿಗೆ ಘಾಸಿಗೊಳಿಸಿ ಹೋದಳು..          ಸದಾ ನಳಿನಳಿಸುವ ಅವಳ ಮೊಗವು ಅಂದೇಕೋ ಬಾಡಿತ್ತು...                                                        ಕಳೆಯಿಲ್ಲದ ಮುಖದಲ್ಲಿ ಕವಿದಿತ್ತು ಕಹಿ ಕಾರ್ಮೋಡ.....     ಮಾತಿಲ್ಲದೆ ಮೌನಕ್ಕೆ ಜಾರಿದ್ದಳು ಮುಖಕ್ಕೆ ಮುಖ ನೀಡಿ ಮಾತನಾಡದೆ ಎಲ್ಲವು ಅಂತ್ಯವಾಗಿತ್ತು....                             ಅವಳ ಮುಖವು ದೂರವಾಯಿತು ಉಳಿಯಿತು ಕೇವಲ ಸುಮಧುರ ನೆನಪುಗಳು ಮಾತ್ರ..                                                ವಿಧಿಯ ಕೆಟ್ಟ ಆಟ ನಮ್ಮೋಡನಾಟ ಕಿತ್ತುಕೊಂಡಿತು ...            ಚಂದ್ರವೆಂಬ ಆಕೃತಿಗೆ ಮೋಡಕವಿದು ಆಚೆ ಬರದೆ ಅಲ್ಲೆ ಠಿಕಾಣಿ ಹೂಡಿತು....                                                     ಪ್ರತಿ ನಿಮಿಷಕ್ಕೂ ನೆನಪಿಸುವ ಅವಳ ಒಂದೊಂದು ವಾಕ್ಕುಸುಮಗಳು ಇಂದು ಕನಸ್ಸಿನಲ್ಲಿ ಕನವರಿಕೆಯಾಗಿವೆ....                                      ಅನ್ಯೋನ್ಯತೆ ಮರೆಯಾಗಿ ಆಕ್ರೋಶ ಮನ ಮಾಡಿದೆ...          ಚೂರಾಯಿತು ಸುಂದರ ಕನ್ನಡಿ ಒಂದೆ ಏಟಿಗೆ ಮತ್ತೆ ಕೂಡದ ಹಾಗೆ ನೂರಾರು ಚೂರಾಗಿದೆ....       ಕಳೆಯಿತು ಒಂದು ಸುಂದರ ಅವಿಸ್ಮರಣೀಯ ಗಳಿಗೆ..                                      ಮತ್ತೆ ಒಂದಾದರೆ ಅದು ಪವಾಡ ಈಗ   ಕೇವಲ ಹೀಗಾಗಬಾರದಿತ್ತು ಎಂಬ ಖೇದ..ಖೇದ ..ಬರಿ ಖೇದ..

ಗಾನ ಗಂಧರ್ವ ಡಾ.ರಾಜಕುಮಾರ್ ಜಯಂತಿ ಆಚರಣೆ.

 ಗಾನ ಗಂಧರ್ವ ಡಾ.ರಾಜಕುಮಾರ್ ಜಯಂತಿ ಆಚರಣೆ ರಾಯಚೂರು ಏ.24- ಕನ್ನಡ ಕಂಠೀರವ, ರಸಿಕರ ರಾಜ, ಗಾನ ಗಂಧರ್ವ, ಕರ್ನಾಟಕ ರತ್ನ, ನಟಸಾರ್ವಭೌಮ, ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ 94ನೇ ಜನ್ಮ ದಿನಾಚರಣೆ ಅಂಗವಾಗಿ ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಆಚರಿಸಲಾಯಿತು, ಅಪರ ಜಿಲ್ಲಾಧಿಕಾರಿಗಳಾದ ಡಾ.ಕೆ.ಆರ್.ದುರುಗೇಶ್ ಅವರು ಡಾ.ರಾಜಕುಮಾರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು.      ಈ ವೇಳೆ ಮಾತನಾಡಿದ ಅವರು ಸಾಮಾನ್ಯ ಕುಟುಂಬದಿಂದ ಬಂದು ಅಸಾಮಾನ್ಯ ಸಾಧನೆ ಮಾಡಿ, ಪ್ರತಿಯೊಬ್ಬರಲ್ಲೂ ಒಂದೇ ತರನಾಗಿ ಕಾಣುವ ವ್ಯಕ್ತಿತ್ವ ಡಾ.ರಾಜಕುಮಾರ್ ಅವರದ್ದು ಎಂದು ಸ್ಮರಿಸಿದರು. ಸಮಗ್ರ ಕರ್ನಾಟಕವನ್ನು ಪ್ರತಿನಿಧಿಸುವ ಏಕೈಕ ಕಲಾವಿದ ಎಂದರೆ ಅದು ಡಾ.ರಾಜ್‌ಕುಮಾರ್ ಮಾತ್ರ, ಅವರ ಪ್ರತಿ ನಡೆ-ನುಡಿ ಇತರರಿಗೆ ಮಾರ್ಗದರ್ಶನವಾಗಿತ್ತು. ಅವರು ಕೇವಲ ಒಬ್ಬ ಕಲಾವಿದರಲ್ಲದೆ ಅತ್ಯುತ್ತಮ ಮಾನವೀಯ ಅಂತಃಕರಣವುಳ್ಳ ಮಹಾನ್ ಮಾನವತಾವಾದಿಯಾಗಿದ್ದರು ಎಂದು ಹೇಳಿದರು.                                                                 ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರರಾದ ಭೀಮರಾಯ ಹದ್ದಿನಾಳ, ಪಿ.ಚನ್ನಬಸವ ಬಾಗಲವಾಡ, ಖಾನ್ ಸಾಬ್ ಮೊಮೆನ್, ಡಾ.ಶರಣಪ್ಪ ಗೋನಾಳ, ಡಾ.ದಂಡಪ್ಪ ಬಿರಾದರ್, ಸುಮಂಗಲ ಸಕ್ರಿ, ಲಲಿತಾ, ಪ್ರತಿಭಾ ಗೋನಾಳ, ತಮ್ಮೇಶ, ಪಿ.ನರಸಿಂಹಲು, ಶಿಲ್ಪಾ ಹಿರೇಮಠ, ರೇಖಾ ಪಾಟೀಲ್, ಬಸೀರ್ ಅಹ್ಮದ್ ಹೊಸಮನಿ,

ಮಲದಕಲ್ ಕ್ರಾಸ್ ಬಳಿ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ್ ಮಾರ್ಗದ ಮಹಾದ್ವಾರ ಉದ್ಘಾಟನೆ

 ರಾಯಚೂರು,ಏ.23- ಇಂದು  ನಗರ ಶಾಸಕರಾದ ಡಾ.ಶಿವರಾಜ್  ಪಾಟೀಲ್ ಅವರು ನ್ಯಾಯಮೂರ್ತಿ ಶಿವರಾಜ್  ಪಾಟೀಲ್ ಇವರ 82ನೇ ಜನ್ಮದಿನೋತ್ಸವ ಶುಭ  ಸಂದರ್ಭದಲ್ಲಿ ಮಲದಕಲ್ ಕ್ರಾಸ್ ಬಳಿ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ . ವಿ. ಪಾಟೀಲ್ ಮಲ್ದಕಲ್ ಮಾರ್ಗದ ಮಹಾದ್ವಾರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ  ಉದ್ಘಾಟನೆ ನೆರವೇರಿಸಿದರು.  ಈ ಶುಭ ಸಂದರ್ಭದಲ್ಲಿ ಶಾಸಕ ಡಾ.ಎಸ್.ಶಿವರಾಜ್ ಪಾಟೀಲ್ ಮಾತನಾಡಿ  ಇಂತಹ ಅರ್ಥ ಪೂರ್ಣವಾದ ಕಾರ್ಯಕ್ರಮದಲ್ಲಿ ಪಾಲುಗೊಂಡಿರುವುದು ಇದು ನನ್ನ ಹಿಂದಿನ ಜನ್ಮದ ಪುಣ್ಯ ಅನಿಸುತ್ತೆ ಕಾರಣ ಜಸ್ಟಿಸ್ ಶಿವರಾಜ್ ವಿ ಪಾಟೀಲ್ ಅವರು ಈ ದೇಶದಲ್ಲಿರುವ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಅವರು ಹುಟ್ಟಿ ಬೆಳೆದ ಗ್ರಾಮದಲ್ಲಿ ಇವತ್ತು ಇಲ್ಲಿಯ ಬಡ ಜನರಿಗೆ ಹಾಗೂ ಅವರ ಆರೋಗ್ಯದ ವ್ಯವಸ್ಥೆ ಮಾಡಬೇಕು ಅಂತಾ ಊರಲ್ಲಿ ಆರೋಗ್ಯ ಮತ್ತು ರಕ್ತದಾನ ಶಿಬಿರವನ್ನು ಮಾಡಿದ್ದಾರೆ ಜಸ್ಟಿಸ್ ಶಿವರಾಜ್ ವಿ ಪಾಟೀಲ್ ಅವರ ಹೆಸರಲ್ಲಿ ಕೇವಲ ಮಲದಕಲ ಕ್ರಾಸ್ ಗೆ ಅವರ ಹೆಸರಲ್ಲಿ ಮಹಾದ್ವಾರವನ್ನು ನಿರ್ಮಾಣ ಮಾಡೋದಕ್ಕಿಂತ ಇಡಿ ರಾಯಚೂರು ಜಿಲ್ಲೆಯ ಮಹಾದ್ವಾರಕ್ಕೆ ಅವರ ಹೆಸರು ಇಡಬೇಕಿತ್ತು ಎಂಬ ಭಾವನೆ ವ್ಯಕ್ತಪಡಿಸಿದ  ಅವರು ಇಡಿ ರಾಜ್ಯದ ದೊಡ್ಡ ದೊಡ್ಡ ನಾಯಕರಿಗೆ ಮಾರ್ಗದರ್ಶಕ್ಕರಾಗಿದ್ದಾರೆ  ನಮ್ಮ ಜಿಲ್ಲೆಯ ಅನೇಕ ನಾಯಕರು ರಾಯಚೂರು ಜಿಲ್ಲೆಯಿಂದ ದೆಹಲಿಗೆ ಹೋದಾಗ ಅಲ್ಲಿ ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಬೇಕಾದ ಅನೇಕ ಕಾರ್ಯಕ್ರಮಗಳನ್ನು ಜಸ್ಟಿಸ್

ಪುಸ್ತಕ ಓದುವ ಹವ್ಯಾಸದಿಂದ ಜ್ಞಾನಾರ್ಜನೆ- ಜಿ.ಪಂ ಸಿಇಓ ನೂರ್ ಜಹರಾ ಖಾನಂ.

ಪುಸ್ತಕ ಓದುವ ಹವ್ಯಾಸದಿಂದ ಜ್ಞಾನಾರ್ಜನೆ- ಜಿ.ಪಂ ಸಿಇಓ ನೂರ್ ಜಹರಾ ಖಾನಂ.                          ರಾಯಚೂರು,ಏ.23-ಪುಸ್ತಕ ಓದುವ ಹವ್ಯಾಸದಿಂದ ಜ್ಞಾನಾರ್ಜನೆ ಸಾಧ್ಯವೆಂದು ಜಿ.ಪಂ ಸಿಇಓ ನೂರ ಜಹರಾ ಖಾನಂ ಹೇಳಿದರು. ಅವರಿಂದು ನಗರದ ರಂಗಮಂದಿರದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಕೇಂದ್ರ ಗ್ರಂಥಾಲಯ ಸಹಯೋಗದಿಂದ ನಡೆದ ವಿಶ್ವ ಪುಸ್ತಕ ದಿನಾಚರಣೆ ಹಾಗೂ ಸಿಬ್ಬಂದಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು . ಸರ್ಕಾರ ರಾಜ್ಯದಲ್ಲಿ ಡಿಜಿಟಲ್ ಲೈಬ್ರರಿ ಪ್ರಾರಂಭಿಸಿದ ನಂತರ 2.35 ಕೋಟಿ ಜನರು ಓದುಗರಾಗಿದ್ದಾರೆ ಜಿಲ್ಲೆಯಲ್ಲಿ 16 ಲಕ್ಷ ಡಿಜಿಟಲ್ ಓದುಗರಿದ್ದಾರೆಂದರು. ಪುಸ್ತಕಗಳಿಂದ ಹಳೆಯ ಸಂಗತಿಗಳ ಬಗ್ಗೆ ತಿಳಿವಳಿಕೆ ಮೂಡುತ್ತದೆ ಎಂದ ಅವರು ತಾಳೆಗರಿ, ಶಾಸನ, ಪುಸ್ತಕ ಮುಂತಾದವುಗಳಿಂದ ಗತ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದಂತಾಗುತ್ತದೆ ಎಂದರು. ಅಪರ ಜಿಲ್ಲಾಧಿಕಾರಿ ಕೆ.ದುರ್ಗೇಶ ಮಾತನಾಡಿ ವಿಶ್ವ ಪುಸ್ತಕ ದಿನ ಅಂಗವಾಗಿ ನಡೆದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ  ವ್ಯಕ್ತಪಡಿಸಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ ಕುಮಾರ ಎಸ್.ಹೊಸಮನಿ ಮಾತನಾಡಿ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಲಾಗಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ವೇದಿಕೆ ಮೇಲೆ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಆಂಜಿನೇಯ್ಯ, ಡಾ.ಎ.ವೈ.ಅಸುಂಡಿ, ಟಿ.

ಕರ್ನಾಟಕ ಸಂಘದ ಅಭಿವೃದ್ದಿಗೆ ಬದ್ಧ- ಡಾ.ಶಿವರಾಜ ಪಾಟೀಲ

  ರಾಯಚೂರು,ಏ.23-  ನಗರದ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಬಯಲು ರಂಗಮಂದಿರದ ಅಗತ್ಯವಿದ್ದು, ಕರ್ನಾಟಕ ಸಂಘದ ಅಭಿವೃದ್ಧಿಗೆ ಅನುದಾನ ಒದಗಿಸುವ ಭರವಸೆಯನ್ನು ಶಾಸಕ ಡಾ.ಎಸ್.ಶಿವರಾಜ.ಪಾಟೀಲ್ ಅವರು ನೀಡಿದರು. ಅವರಿಂದು ಕರ್ನಾಟಕ ಸಂಘದಿಂದ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನಾನು ಶಾಸಕನಾಗಿದ್ದ ಎರಡು ಅವಧಿಯಲ್ಲಿ ನಗರದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದೇನೆ. ಇದು ಚುನಾವಣೆ ವರ್ಷವಾಗಿದ್ದರಿಂದ ಕರ್ನಾಟಕ ಸಂಘದ ಅಭಿವೃದ್ಧಿಗೆ ಎಷ್ಟು ಅನುದಾನ ನೀಡಲು ಸಾಧ್ಯವೇ ಅಷ್ಟು ನೀಡುವ ಭರವಸೆ ನೀಡಿದರು. ನಗರಸಭೆ ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು,ನಗರಸಭೆ ಸದಸ್ಯರು ಇದೇ ಭಾಗಕ್ಕೆ ಸೇರಿದವರಾಗಿದ್ದರಿಂದ ಇವರು ತಮಗೆ ಸಾಧ್ಯವಾದ ಅನುದಾನವನ್ನು ನೀಡಲು ಸೂಚಿಸಿದರು. ಕರ್ನಾಟಕ ಸಂಘದಲ್ಲಿ ಉದ್ಯಾನವನ ಅಭಿವೃದ್ಧಿಗೆ 25 ಲಕ್ಷ ಅನುದಾನ ಒದಗಿಸುವಂತೆಯೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಕೇಳಿದ ಅವರು, ಸಾಹಿತ್ಯ ಚಟುವಟಿಕೆಗಳಿಂದ ಜೀವನ ಕಲಿಯುವ ಅನೇಕ ಅನುಭವ ದೊರೆಯಲಿವೆ. ಸಾಹಿತ್ಯ ಚಟುವಟಿಕೆಗಳು ನಮ್ಮ ಭಾಗದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಯಬೇಕು. ಇದರಿಂದ ಜನರ ಸಾಂಸ್ಕೃತಿಕ ಮಟ್ಟವೂ ಹೆಚ್ಚಲಿದೆ. ಸಾಹಿತ್ಯ ಚಟುವಟಿಕೆಗಳಿಗೆ ಏನೆಲ್ಲಾ ಅಗತ್ಯ ನೆರವು ನೀಡಲು ಸಾಧ್ಯವೋ ಅದನ್ನು ಒದಗಿಸುವ ಪ್ರಯತ್ನ ನನ್ನದಾಗಿರುತ್ತದೆಂದರು.

ವಾರ್ಡ್ ನಂಬರ್ 17 : ಶಾಸಕರಿಂದ ರಸ್ತೆ ಭೂಮಿ ಪೂಜೆ

ರಾಯಚೂರು,ಏ.23-  ಇಂದು ನಗರದ ವಾರ್ಡ್ ನಂ. 17 ರ ಜವಾಹರ್ ನಗರ ಹತ್ತಿರ ಇರುವ ಬಾಪನಯ್ಯ ದೊಡ್ಡಿಯ  ಪಕ್ಕದ ರಸ್ತೆಯ ಭೂಮಿ ಪೂಜೆಯನ್ನು  ಶಾಸಕರಾದ ಡಾ. ಶಿವರಾಜ್ ಪಾಟೀಲ್   ನೆರವೇರಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಲಲಿತಾ ಕಡಗೋಲ  ಆಂಜನೇಯ,      ನಗರ ಪ್ರಾಧಿಕಾರ ಅಧ್ಯಕ್ಷರಾದ ತಿಮ್ಮಪ್ಪ  ನಾಡಗೌಡ, ನಗರಸಭಾ ಸದಸ್ಯರಾದ ಈ .ಶಶಿರಾಜ್, ಹರೀಶ ನಾಡಗೌಡ ಮುಖಂಡರಾದ ಕಡಗೋಲ ಆಂಜಿನೇಯ್ಯ, ಸೇತು ಮಾಧವರಾವ್ ಕನಕವೀಡು, ಯುವರಾಜ, ವಿನ್ನೂ ಸತ್ಯನಾರಾಯಣ, ಬಡಾವಣೆ ನಿವಾಸಿಗಳು ,ಯುವಕರು ಉಪಸ್ಥಿತರಿದ್ದರು .

ಕೆಕೆಬಿಎಂಎಸ್ ನಿಂದ ಪ್ರಹ್ಲಾದ ಜೋಶಿರವರಿಗೆ ಸನ್ಮಾನ

 ರಾಯಚೂರು,ಏ.23-ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವರಾದ  ಪ್ರಹ್ಲಾದ ಜೋಶಿ ಅವರಿಗೆ  ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕಲ್ಯಾಣ ಕರ್ನಾಟಕ ಭ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಾದ ಶ್ರೀ ಜಗನ್ನಾಥ ಕುಲಕರ್ಣಿ ವಕೀಲರು, ಸಂಚಾಲಕರಾದ ಶ್ರೀ ಗುರುರಾಜ ಚಾರ್ಯಜೋಷಿ  ತಾಳಿಕೋಟೆ,ಶಾಮಚಾರ ಇವರುಗಳು ನೇತೃತ್ವದಲ್ಲಿ   ಸನ್ಮಾನಿಸಲಾಯಿತು. ಈ ಸಂದರ್ಭ ದಲ್ಲಿ ಉಪಾಧ್ಯಕ್ಷರು ಆದ  ಪ್ರಕಾಶ್ ಆಲಂಪಲ್ಲಿ ,  ನರಸಿಂಹ ಮೂರ್ತಿ ಕುಲಕರ್ಣಿ, ಸುರೇಶ್ ಕಲ್ಲೂರ್,ವಿಜಯರಾವ, ಗೋಪಾಲಕೃಷ್ಣ ತಟ್ಟಿ ಹಾಗೂ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.

ಜಗತ್ತಿನ ಅತಿ ದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ನಾವು ಮಾಡಿದ್ದೇವೆ-ಜೋಷಿ.

    ಜಗತ್ತಿನ ಅತಿ ದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ನಾವು ಮಾಡಿದ್ದೇವೆ-ಜೋಷಿ.                            ರಾಯಚೂರು,ಏ.22-ಜಗತ್ತಿನ ಅತಿ ದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ನಾವು ಮಾಡಿದ್ದೇವೆಂದು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ ಜೋಷಿ ಹೇಳಿದರು. ಅವರಿಂದು ನಗರದ ರಂಗ ಮಂದಿರದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಏರ್ಪಡಿಸಿದ ತಾಲೂಕು ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಮರ್ಥವಾಗಿ ನಿಭಾಯಿಸಿದರು. ಯಾರು ಹಸಿವಿನಿಂದ ಸಾಯಬಾರದೆಂದು ಗರೀಬ್ ಕಲ್ಯಾಣ ಯೋಜನೆಯಡಿ ಆಹಾರ ಧಾನ್ಯ ವಿತರಿಸಿದರು ಮತ್ತು ಜನರಿಗೆ ಉಚಿತವಾಗಿ ಒಂದು ಮತ್ತು ಎರಡನೆ ಡೋಸ್ ವ್ಯಾಕ್ಸಿನ್ ನೀಡುವ ಅಭಿಯಾನದಲ್ಲಿ 186 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು ಕರೋನಾ ಹಿಮ್ಮೆಟ್ಟಿಸಲು ಸಾಧ್ಯವಾಯಿತೆಂದರು.   ಜಿಲ್ಲೆಯಲ್ಲಿ ಒಂದನೆ ಡೋಸ್ ಪೂರ್ಣ ಪ್ರಮಾಣದಲ್ಲಾಗಿದ್ದು ಎರಡನೆ ಡೋಸ್ ಶೇ.65 ರಷ್ಟಾಗಿದ್ದು ಬೇಗನೆ ಶೇ.100 ಸಾಧಿಸಬೇಕೆಂದರು. ಮೋದಿ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ 2.31 ಲಕ್ಷ ಕೋಟಿ ರೂ. ನೀಡಲಾಗಿದೆ ಎಂದರು.   ಆಯುಷ್ಮಾನ್ ಭಾರತ ಅಡಿ ಜಿಲ್ಲೆಯಲ್ಲಿ 36 ಸಾವಿರ ಜನರು ಆರೋಗ್ಯ ಸೇವೆ ಪಡೆದಿದ್ದಾರೆಂದರು. ಕೇಂದ್ರ ಸರ್ಕಾರ ರಸ್ತೆ ಸಂಪರ್ಕಕ್ಕೆ ಹೆಚ್ಚು ಒತ್ತು ನೀಡಿದ್ದು ಈ ಹಿಂದಿನ ಸರ್ಕಾರ ದಿನ ಒಂದಕ್ಕೆ  10 ಕಿ.ಮಿ ಹೆದ್ದಾರಿ ನಿರ್ಮಿಸಿದರೆ ನಮ್ಮ ಸರ್ಕ

ಜಗತ್ತಿನ ಅತಿ ದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ನಾವು ಮಾಡಿದ್ದೇವೆ-ಜೋಷಿ.

   ಜಗತ್ತಿನ ಅತಿ ದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ನಾವು ಮಾಡಿದ್ದೇವೆ-ಜೋಷಿ.                            ರಾಯಚೂರು,ಏ.22-ಜಗತ್ತಿನ ಅತಿ ದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ನಾವು ಮಾಡಿದ್ದೇವೆಂದು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ ಜೋಷಿ ಹೇಳಿದರು. ಅವರಿಂದು ನಗರದ ರಂಗ ಮಂದಿರದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಏರ್ಪಡಿಸಿದ ತಾಲೂಕು ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಮರ್ಥವಾಗಿ ನಿಭಾಯಿಸಿದರು. ಯಾರು ಹಸಿವಿನಿಂದ ಸಾಯಬಾರದೆಂದು ಗರೀಬ್ ಕಲ್ಯಾಣ ಯೋಜನೆಯಡಿ ಆಹಾರ ಧಾನ್ಯ ವಿತರಿಸಿದರು ಮತ್ತು ಜನರಿಗೆ ಉಚಿತವಾಗಿ ಒಂದು ಮತ್ತು ಎರಡನೆ ಡೋಸ್ ವ್ಯಾಕ್ಸಿನ್ ನೀಡುವ ಅಭಿಯಾನದಲ್ಲಿ 186 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು ಕರೋನಾ ಹಿಮ್ಮೆಟ್ಟಿಸಲು ಸಾಧ್ಯವಾಯಿತೆಂದರು.   ಜಿಲ್ಲೆಯಲ್ಲಿ ಒಂದನೆ ಡೋಸ್ ಪೂರ್ಣ ಪ್ರಮಾಣದಲ್ಲಾಗಿದ್ದು ಎರಡನೆ ಡೋಸ್ ಶೇ.65 ರಷ್ಟಾಗಿದ್ದು ಬೇಗನೆ ಶೇ.100 ಸಾಧಿಸಬೇಕೆಂದರು. ಮೋದಿ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ 2.31 ಲಕ್ಷ ಕೋಟಿ ರೂ. ನೀಡಲಾಗಿದೆ ಎಂದರು.   ಆಯುಷ್ಮಾನ್ ಭಾರತ ಅಡಿ ಜಿಲ್ಲೆಯಲ್ಲಿ 36 ಸಾವಿರ ಜನರು ಆರೋಗ್ಯ ಸೇವೆ ಪಡೆದಿದ್ದಾರೆಂದರು. ಕೇಂದ್ರ ಸರ್ಕಾರ ರಸ್ತೆ ಸಂಪರ್ಕಕ್ಕೆ ಹೆಚ್ಚು ಒತ್ತು ನೀಡಿದ್ದು ಈ ಹಿಂದಿನ ಸರ್ಕಾರ ದಿನ ಒಂದಕ್ಕೆ  10 ಕಿ.ಮಿ ಹೆದ್ದಾರಿ ನಿರ್ಮಿಸಿದರೆ ನಮ್ಮ ಸರ್ಕಾ

22 RCR 2 ಜಗತ್ತಿನ ಅತಿ ದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ನಾವು ಮಾಡಿದ್ದೇವೆ-ಜೋಷಿ.

  22 RCR 2 ಜಗತ್ತಿನ ಅತಿ ದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ನಾವು ಮಾಡಿದ್ದೇವೆ-ಜೋಷಿ.                            ರಾಯಚೂರು,ಏ.22-ಜಗತ್ತಿನ ಅತಿ ದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ನಾವು ಮಾಡಿದ್ದೇವೆಂದು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ ಜೋಷಿ ಹೇಳಿದರು. ಅವರಿಂದು ನಗರದ ರಂಗ ಮಂದಿರದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಏರ್ಪಡಿಸಿದ ತಾಲೂಕು ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಮರ್ಥವಾಗಿ ನಿಭಾಯಿಸಿದರು. ಯಾರು ಹಸಿವಿನಿಂದ ಸಾಯಬಾರದೆಂದು ಗರೀಬ್ ಕಲ್ಯಾಣ ಯೋಜನೆಯಡಿ ಆಹಾರ ಧಾನ್ಯ ವಿತರಿಸಿದರು ಮತ್ತು ಜನರಿಗೆ ಉಚಿತವಾಗಿ ಒಂದು ಮತ್ತು ಎರಡನೆ ಡೋಸ್ ವ್ಯಾಕ್ಸಿನ್ ನೀಡುವ ಅಭಿಯಾನದಲ್ಲಿ 186 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು ಕರೋನಾ ಹಿಮ್ಮೆಟ್ಟಿಸಲು ಸಾಧ್ಯವಾಯಿತೆಂದರು.   ಜಿಲ್ಲೆಯಲ್ಲಿ ಒಂದನೆ ಡೋಸ್ ಪೂರ್ಣ ಪ್ರಮಾಣದಲ್ಲಾಗಿದ್ದು ಎರಡನೆ ಡೋಸ್ ಶೇ.65 ರಷ್ಟಾಗಿದ್ದು ಬೇಗನೆ ಶೇ.100 ಸಾಧಿಸಬೇಕೆಂದರು. ಮೋದಿ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ 2.31 ಲಕ್ಷ ಕೋಟಿ ರೂ. ನೀಡಲಾಗಿದೆ ಎಂದರು.   ಆಯುಷ್ಮಾನ್ ಭಾರತ ಅಡಿ ಜಿಲ್ಲೆಯಲ್ಲಿ 36 ಸಾವಿರ ಜನರು ಆರೋಗ್ಯ ಸೇವೆ ಪಡೆದಿದ್ದಾರೆಂದರು. ಕೇಂದ್ರ ಸರ್ಕಾರ ರಸ್ತೆ ಸಂಪರ್ಕಕ್ಕೆ ಹೆಚ್ಚು ಒತ್ತು ನೀಡಿದ್ದು ಈ ಹಿಂದಿನ ಸರ್ಕಾರ ದಿನ ಒಂದಕ್ಕೆ  10 ಕಿ.ಮಿ ಹೆದ್ದಾರಿ ನಿರ್ಮಿಸಿದರೆ ನಮ

ಕಾಂಗ್ರೆಸ್ ತುಷ್ಟಿಕರಣ ರಾಜಕಾರಣ ನಿಲ್ಲಿಸಲಿ-ಪ್ರಹ್ಲಾದ ಜೋಷಿ.

 ಕಾಂಗ್ರೆಸ್ ತುಷ್ಟಿಕರಣ ರಾಜಕಾರಣ ನಿಲ್ಲಿಸಲಿ-ಪ್ರಹ್ಲಾದ ಜೋಷಿ.                                              ರಾಯಚೂರು,ಏ.22- ಕೋಮು ಗಲಭೆಯಲ್ಲಿ ಪಾಲ್ಗೊಳ್ಳುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಕಾಂಗ್ರೆಸ್ ಪಕ್ಷ ತುಷ್ಟಿಕರಣ ರಾಜಕಾರಣ     ನಿಲ್ಲಿಸಬೇಕೆಂದು ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ ಜೋಷಿ ಹೇಳಿದರು .ಅವರಿಂದು ನಗರದ ಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹುಬ್ಬಳ್ಳಿ ಕೋಮುಗಲಭೆಯಲ್ಲಿ ಪಾಲ್ಗೊಂಡ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು ಈ ದುಶ್ಕೃತ್ಯದಲ್ಲಿ ಭಾಗಿಯಾದವರು ಯಾರೆಯಾದರು ಅವರನ್ನು ಕಾನೂನಿನಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಡಿಜೆ ಹಳ್ಳಿ ಕೆಜೆ ಹಳ್ಳಿ ಘಟನೆ ಮಾದರಿಯಲ್ಲಿ ಹುಬ್ಬಳ್ಳಿ ಘಟನೆ ಮಾಡುವ  ಹುನ್ನಾರವಿತ್ತು ಅದನ್ನು ಪೊಲೀಸರು ವಿಫಲಗೊಳಿಸಿದ್ದಾರೆಂದರು. ಮತಾಂಧರು ಗಲಭೆ ಸೃಷ್ಟಿಸುವದು ಸರಿಯಲ್ಲವೆಂದರು.ಕೋಮು ಗಲಭೆಯ ಲಾಭ ನಷ್ಟದ ಕೀಳು ಮನಸ್ಥಿತಿ ಹೋಗಬೇಕೆಂದ ಅವರು ದೆಹಲಿಯಲಿ ಸರ್ಕಾರಿ ಜಾಗ ಒತ್ತುವರಿ ವಿರುದ್ಧ ಬುಲ್ಡೋಜರ್ ಕಾರ್ಯಚರಣೆಗಿಳಿದಿವೆ ಕೇಜ್ರಿವಾಲರವರ ಆರೋಪದಂತೆ ಬಡವರ ಮೇಲೆ ಬುಲ್ಡೋಜರ್ ಹತ್ತಿಸಿಲ್ಲವೆಂದರು.ಆರ್ ಟಿ ಪಿ ಎಸ್ ಕಲ್ಲಿದ್ದಲು ಸಮಸ್ಯೆ ನಿವಾರಿಸಲಾಗುತ್ತದೆ ಎಂದರು.ಬೇಸಿಗೆ ಹಿನ್ನಲೆ ವಿದ್ಯುತ್ ಬೇಡಿಕೆ ಹೆಚ್ಚಿದೆ ವಿದ್ಯುತ್ ಕೊರತೆ ಕೊಂಚ ಮಟ್ಟಿಗಿದೆ ಎಂದರು.

ಮಹಿಳಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಸನ್ಮಾನ

 ರಾಯಚೂರು,ಏ.21- ಜಿಲ್ಲಾಧಿಕಾರಿಗಳಾದ ಚಂದ್ರಶೇಖರ ನಾಯಕ   ಇವರಿಗೆ  ಮಹಿಳಾ ಕಾಂಗ್ರೆಸ್ ವತಿಯಿಂದ ಸನ್ಮಾನಿಸಿದರು ಈ ಸನ್ಮಾನ ಕಾರ್ಯಕ್ರಮದಲ್ಲಿ  ಶಶಿಕಲಾ ಭೀಮರಾಯ, ಭಾರತಿ ಯಂಕಣ್ಣ ,ಅಂತಮ್ಮ ಮಮದಾಪುರ ಮಾಲಾ ಭಜಂತ್ರಿ, ಕಾಸಿಂ ಡಿ ರಜಿಯಾ ಪಾಟೀಲ್ ಇದ್ದರು.

ಸನ್ನತ್ತಿ ಶ್ರೀ ಚಂದ್ರಲಾಂಬ ಜಾತ್ರೆ ಅಂಗವಾಗಿ ಮಹಾರಥೋತ್ಸವ

 ಸನ್ನತ್ತಿ ಶ್ರೀ ಚಂದ್ರಲಾಂಬ ಜಾತ್ರೆ ಅಂಗವಾಗಿ ಮಹಾರಥೋತ್ಸವ.                               ರಾಯಚೂರು,ಏ.21- ಯಾದಗಿರಿ ಜಿಲ್ಲೆಯ ಪ್ರಸಿಧ್ಧ ಶ್ರೀ ಕ್ಷೇತ್ರ ಸನ್ನತ್ತಿಯಲ್ಲಿ ಶ್ರೀ ಚಂದ್ರಲಾಂಬ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಸಾಯಿಂಕಾಲ ಮಹಾರಥೋತ್ಸವ   ನೆರವೇರಿತು.ದೇವಸ್ಥಾನದ ಆವರಣದಲ್ಲಿ ಪುಷ್ಪಾಲಂಕೃತ ರಥದಲ್ಲಿ ಪಲ್ಲಕ್ಕಿಯಲ್ಲಿ ತರಲಾದ ಚಂದ್ರಲಾಂಬ ದೇವಿಯ ಮೂರ್ತಿ ಕುಳ್ಳಿರಿಸಿ ಮಹಾರಥೋತ್ಸವ ನೆರವೇರಿತು. ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ನೆರಯ ರಾಜ್ಯದಿಂದಲು ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡರು. ನಂತರ ಮಹಾ ಪ್ರಸಾದ ವಿನಿಯೋಗಿಸಲಾಯಿತು.

ರವಿ ಬೋಸರಾಜು ಬುದ್ಧಿ ಭ್ರಮಣೆಯಾಗಿದೆ- ರವೀಂದ್ರ ಜಲ್ದಾರ್.

 ರವಿ ಬೋಸರಾಜು ಬುದ್ಧಿ ಭ್ರಮಣೆಯಾಗಿದೆ- ರವೀಂದ್ರ ಜಲ್ದಾರ್.                                             ರಾಯಚೂರು,ಏ.21-ಶಾಸಕ ಡಾ.ಶಿವರಾಜ ಪಾಟೀಲ್ ರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಕಾಂಗ್ರೆಸ್ ಯುವ ಮುಖಂಡರಾದ ರವಿ ಬೋಸರಾಜು ಬುದ್ದಿ ಭ್ರಮಣೆಯಾಗಿದ್ದು ಅವರ  ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುತ್ತದೆ ಎಂದು ಬಿಜೆಪಿ ಮುಖಂಡರಾದ ರವೀಂದ್ರ ಜಲ್ದಾರ್ ಹೇಳಿದರು.ಇತ್ತೀಚೆಗೆ ರವಿ ಬೋಸರಾಜು ಶಾಸಕ ಡಾ.ಶಿವರಾಜ ಪಾಟೀಲರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ ರಾಜ್ಯದಲ್ಲಿ  224  ಶಾಸಕರಲ್ಲಿ ನಂ.1 ಭ್ರಷ್ಟ ಶಾಸಕರೆಂದು ಆರೋಪಿಸಿದ್ದಾರೆ ಅದಕ್ಕೆ ದಾಖಲೆ ನೀಡಬೇಕೆಂದ ಅವರು ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರಿಗೆ ಶೇ.40 ರಷ್ಟು ಕಮೀಶನ್ ಯಾರು ಕೇಳುತ್ತಾರೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದ ಆಗ್ರಹಿಸಿದ ರು. ರವಿ ಬೋಸರಾಜು ನಿರ್ದೇಶಕರಾಗಿರುವ ಅಮೃತ ಕನ್ಸಟ್ರಕ್ಷನ್ ಅನೇಕ ರಸ್ತೆ ಕಾಮಗಾರಿ ಮುಂತಾದ ಕಾಮಗಾರಿ ನಿರ್ವಹಿಸಿದ್ದು ಕಳಪೆಯಾಗಿದೆ ಈ ಬಗ್ಗೆ ಮಾಹಿತಿ ಪಡೆದು ದೂರು ನೀಡಲಾಗುತ್ತದೆ ಎಂದರು   ಜಿಲ್ಲಾಧಿಕಾರಿಗಳ ದಿಡೀರ್ ವರ್ಗಾವಣೆ ಬಗ್ಗೆ ನಮಗೆ ಅಸಮಧಾನವಿದೆ ಇದರಲ್ಲಿ ಶಾಸಕರ ಹಸ್ತಕ್ಷೇಪವಿಲ್ಲ ಆದರೂ ಅವರು ಈ ಬಗ್ಗೆ ಸ್ಪಷ್ಟನೆ ನೀಡುತ್ತಾರೆ ಎಂದರು. ಶಾಸಕರು ನೂರಾರು ಕೋಟಿ ಅನುದಾನ ತಂದಿದ್ದಾರೆ ಅವರ ಬಗ್ಗೆ ಕೀಳು ಮಟ್ಟದಲ್ಲಿ ಆರೋಪ ಮಾಡುವುದು ಸರಿಯಲ್ಲ ಎಂದರು.ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವಾಗಿ ಟ

ಏ.22ರಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪರಿಂದ ಜಿಲ್ಲಾ ಪ್ರವಾಸ

    ರಾಯಚೂರು ಏ.20- ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಬ.ಪಾಟೀಲ್ ಮುನೇನಕೊಪ್ಪ ಅವರು ಏ.22ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.      ಪ್ರವಾಸದ ವಿವರ ಇಂತಿದೆ. ಅವರು ಏ.22ರ ಬೆಳಿಗ್ಗೆ 07ಗಂಟೆಗೆ ಕಲಬುರಗಿ ಯಿಂದ ರಸ್ತೆ ಮಾರ್ಗವಾಗಿ ಬೆಳಿಗ್ಗೆ 10ಗಂಟೆಗೆ ರಾಯಚೂರಿಗೆ ಆಗಮಿಸಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೊಂದಿಗೆ ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ.  ಮಧ್ಯಾಹ್ನ 01ಗಂಟೆಗೆ ರಾಯಚೂರು, ಸಿಂಧನೂರು ಮಾರ್ಗವಾಗಿ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಸಚಿವರ ವಿಶೇಷ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಥಮ ಜಿಲ್ಲಾ ಕಾರ್ಯಕಾರಿಣಿ ಸಭೆ

   ರಾಯಚೂರು,ಏ.20- ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಥಮ ಜಿಲ್ಲಾ ಕಾರ್ಯಾಕಾರಣಿ ಸಭೆ ಸಂಘದ ಅಧ್ಯಕ್ಷ ಆರ್.ಗುರುನಾಥರವರ ಅಧ್ಯಕ್ಷತೆಯಲ್ಲಿ ನಗರದ ಪತ್ರಿಕಾ ಭವನದಲ್ಲಿ ಇಂದು ನಡೆಯಿತು. 2022-23ನೇ ಸಾಲಿನ ಸಂಘದ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯತ್ವ   ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ   ಆಯೋಜನೆ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಉಪಾಧ್ಯಕ್ಷ ಶಿವಪ್ಪ ಮಡಿವಾಳರ್, ಪಿ.ಪರಮೇಶ, ಪ್ರಧಾನ ಕಾರ್ಯದರ್ಶಿ ಎಂ.ಪಾಷ ಹಟ್ಟಿ, ಕಾರ್ಯದರ್ಶಿಗಳಾದ ಅಬ್ದುಲ್ ಅಜೀಜ್, ಸೂಗೂರೇಶ್ವರ ಗುಡಿ, ಶರಣಬಸವ ನೀರಮಾನ್ವಿ, ಖಜಾಂಚಿ ವೆಂಕಟೇಶ ಹೂಗಾರ,ನಿಕಟಪೂರ್ವ ಅಧ್ಯಕ್ಷ ಬಸವರಾಜ ನಾಗಡದಿನ್ನಿ ಸೇರಿದಂತೆ ಜಿಲ್ಲಾ ಕಾರ್ಯಕಾರಣಿ ಸದಸ್ಯರು  ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಂ.ಪಾಷ ಸ್ವಾಗತಿಸಿದರು. ಕಾರ್ಯದರ್ಶಿ ಅಬ್ದುಲ್ ಅಜೀಜ್ ವಂದಿಸಿದರು.

ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಥಮ ಜಿಲ್ಲಾ ಕಾರ್ಯಕಾರಿಣಿ ಸಭೆ

 ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಥಮ ಜಿಲ್ಲಾ ಕಾರ್ಯಕಾರಿಣಿ ಸಭೆ ರಾಯಚೂರು,ಏ.20- ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಥಮ ಜಿಲ್ಲಾ ಕಾರ್ಯಾಕಾರಣಿ ಸಭೆ ಸಂಘದ ಅಧ್ಯಕ್ಷ ಆರ್.ಗುರುನಾಥರವರ ಅಧ್ಯಕ್ಷತೆಯಲ್ಲಿ ನಗರದ ಪತ್ರಿಕಾ ಭವನದಲ್ಲಿ ಇಂದು ನಡೆಯಿತು. 2022-23ನೇ ಸಾಲಿನ ಸಂಘದ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯತ್ವ   ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ   ಆಯೋಜನೆ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಉಪಾಧ್ಯಕ್ಷ ಶಿವಪ್ಪ ಮಡಿವಾಳರ್, ಪಿ.ಪರಮೇಶ, ಪ್ರಧಾನ ಕಾರ್ಯದರ್ಶಿ ಎಂ.ಪಾಷ ಹಟ್ಟಿ, ಕಾರ್ಯದರ್ಶಿಗಳಾದ ಅಬ್ದುಲ್ ಅಜೀಜ್, ಸೂಗೂರೇಶ್ವರ ಗುಡಿ, ಶರಣಬಸವ ನೀರಮಾನ್ವಿ, ಖಜಾಂಚಿ ವೆಂಕಟೇಶ ಹೂಗಾರ,ನಿಕಟಪೂರ್ವ ಅಧ್ಯಕ್ಷ ಬಸವರಾಜ ನಾಗಡದಿನ್ನಿ ಸೇರಿದಂತೆ ಜಿಲ್ಲಾ ಕಾರ್ಯಕಾರಣಿ ಸದಸ್ಯರು  ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಂ.ಪಾಷ ಸ್ವಾಗತಿಸಿದರು. ಕಾರ್ಯದರ್ಶಿ ಅಬ್ದುಲ್ ಅಜೀಜ್ ವಂದಿಸಿದರು.

ಏ.21, 22 ರಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಜಿಲ್ಲಾ ಪ್ರವಾಸ

ರಾಯಚೂರು ಏ.20- ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಏ.21 ಹಾಗೂ 22ರಂದು ಜಿಲ್ಲಾ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.  ಪ್ರವಾಸದ ವಿವರ ಇಂತಿದೆ. ಅವರು ಏ.21ರ ಸಂಜೆ 05ಗಂಟೆಗೆ ಕಲಬುರ್ಗಿ ಜಿಲ್ಲೆಯಿಂದ ರಸ್ತ ಮಾರ್ಗವಾಗಿ ಸಂಜೆ07.30ಗಂಟೆಗೆ ರಾಯಚೂರಿಗೆ ಆಗಮಿಸಲಿದ್ದಾರೆ. ಏ.22ರ ಮಧ್ಯಾಹ್ನ 12 ಗಂಟೆಗೆ ನಗರದ ಕೃಷಿ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಮಹಾತ್ವಕಾಂಕ್ಷೆ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 01ಗಂಟೆಗೆ ರಾಯಚೂರಿನಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಕೇಂದ್ರ ಸಚಿವರ ಕಾರ್ಯದರ್ಶಿಗಳು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ.

   ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ.         ರಾಯಚೂರು,ಏ.20-ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರವರನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಬೆಳಿಗ್ಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ  ಪ್ರತಿಭಟನೆ ನಡೆಯಿತು. ಈಶ್ವರ ಖಂಡ್ರೆ ಮಾತನಾಡಿ ಶೇ.40 ರಷ್ಟು ಕಮೀಶನ ನೀಡಬೇಕೆಂದು ಈಶ್ವರಪ್ಪ ಬೇಡಿಕೆಯಿಟ್ಟಿದ್ದರಿಂದ ಗುತ್ತಿಗೆದಾರಸಂತೋಷ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಕೂಡಲೆ ಈಶ್ವರಪ್ಪರವರನ್ನು ಪೊಲೀಸರು ಬಂಧಿಸಬೇಕೆಂದರು.ಅವರು ರಾಜೀನಾಮೆ ನೀಡಿದರೆ ಸಾಲದು ಪ್ರಕರಣದಲ್ಲಿ ಅವರು ಪ್ರಮುಖವಾಗಿ ಭಾಗಿಯಾಗಿರುವುದರಿಂದ ಸಾಕ್ಷಿ ನಾಶ ಮಾಡುವ ಸಂಭವ ಇರುವುದರಿಂದ ಅವರನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ , ಮಾಜಿ ಎಂಎಲ್ಸಿ  ಶರಣಪ್ಪ ಮಟ್ಟೂರು, ಬಸವರಾಜ ಪಾಟೀಲ ಇಟಗಿ , ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎ.ವಸಂತ ಕುಮಾರ, ಮಾಜಿ ಶಾಸಕರಾದ ಹಂಪಯ್ಯ ನಾಯಕ,ಸೈಯದ್ ಯಾಸೀನ್,ಸಿರಾಜ ಶೇಕ್, ಪಾರಸಮಲ್ ಸುಖಾಣಿ, ರವಿ ಬೋಸರಾಜು, ಜಯವಂತರಾವ ಪತಂಗೆ,ರಾಜಶೇಖರ ನಾಯಕ, ದೇವಣ್ಣ ನಾಯಕ,ಬಸನಗೌಡ ಬಾದರ್ಲಿ, ಅಸ್ಲಂ ಪಾಷಾ, ಕೆ.ಶಾಂತಪ್ಪ, ಜಿ.ಬಸವರಾಜ ರೆಡ್ಡಿ, ಜಯಣ್ಣ, ತಾಯಣ್ಣ ನಾಯಕ,ಜಿ.ಶಿವ

ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ.

  ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ.         ರಾಯಚೂರು,ಏ.20-ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರವರನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಬೆಳಿಗ್ಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ  ಪ್ರತಿಭಟನೆ ನಡೆಯಿತು. ಈಶ್ವರ ಖಂಡ್ರೆ ಮಾತನಾಡಿ ಶೇ.40 ರಷ್ಟು ಕಮೀಶನ ನೀಡಬೇಕೆಂದು ಈಶ್ವರಪ್ಪ ಬೇಡಿಕೆಯಿಟ್ಟಿದ್ದರಿಂದ ಗುತ್ತಿಗೆದಾರಸಂತೋಷ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಕೂಡಲೆ ಈಶ್ವರಪ್ಪರವರನ್ನು ಪೊಲೀಸರು ಬಂಧಿಸಬೇಕೆಂದರು.ಅವರು ರಾಜೀನಾಮೆ ನೀಡಿದರೆ ಸಾಲದು ಪ್ರಕರಣದಲ್ಲಿ ಅವರು ಪ್ರಮುಖವಾಗಿ ಭಾಗಿಯಾಗಿರುವುದರಿಂದ ಸಾಕ್ಷಿ ನಾಶ ಮಾಡುವ ಸಂಭವ ಇರುವುದರಿಂದ ಅವರನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ , ಮಾಜಿ ಎಂಎಲ್ಸಿ  ಶರಣಪ್ಪ ಮಟ್ಟೂರು, ಬಸವರಾಜ ಪಾಟೀಲ ಇಟಗಿ , ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎ.ವಸಂತ ಕುಮಾರ, ಮಾಜಿ ಶಾಸಕರಾದ ಹಂಪಯ್ಯ ನಾಯಕ,ಸೈಯದ್ ಯಾಸೀನ್,ಸಿರಾಜ ಶೇಕ್, ಪಾರಸಮಲ್ ಸುಖಾಣಿ, ರವಿ ಬೋಸರಾಜು, ಜಯವಂತರಾವ ಪತಂಗೆ,ರಾಜಶೇಖರ ನಾಯಕ, ದೇವಣ್ಣ ನಾಯಕ,ಬಸನಗೌಡ ಬಾದರ್ಲಿ, ಅಸ್ಲಂ ಪಾಷಾ, ಕೆ.ಶಾಂತಪ್ಪ, ಜಿ.ಬಸವರಾಜ ರೆಡ್ಡಿ, ಜಯಣ್ಣ, ತಾಯಣ್ಣ ನಾಯಕ,ಜಿ.ಶಿವಮ

ನವಬೃಂದಾವನ ಗಡ್ಡೆ: ಶ್ರೀ ವಾಗೀಶ ತೀರ್ಥರ ಉತ್ತರಾರಾಧನೆ.

  ನವಬೃಂದಾವನ ಗಡ್ಡೆ: ಶ್ರೀ ವಾಗೀಶ ತೀರ್ಥರ ಉತ್ತರಾರಾಧನೆ.      ರಾಯಚೂರು,ಏ.20- ನವಬೃಂದಾವನ ಗಡ್ಡೆಯಲ್ಲಿ ಶ್ರೀ ವಾಗೀಶ ತೀರ್ಥರ ಉತ್ತರಾರಾಧನೆ ನೆರವೇರಿತು. ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಶ್ರೀ ವಾಗೀಶ ತೀರ್ಥರ ಬೃಂದಾವನಕ್ಕೆ ವಿಶೇಷ ಪೂಜೆ ನೆರವೇರಿಸಿದರು ನಂತರ    ಶ್ರೀಮನ್ಮೂಲರಾಮದೇವರ ಸಂಸ್ಥಾನ ಪೂಜೆ ನಡೆಯಿತು. ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಿತು.ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರದ ಶೇ.40 ಭ್ರಷ್ಟಾಚಾರ ಪಿಡುಗು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ತಂಡದಿಂದ ತನಿಖೆಯಾಗಲಿ- ಈಶ್ವರ ಖಂಡ್ರೆ.

ರಾಯಚೂರು,ಏ.20-ರಾಜ್ಯ ಸರ್ಕಾರದ ಶೇ.40 ಕಮೀಶನ ಭ್ರಷ್ಟಾಚಾರ ಪಿಡುಗನ್ನು  ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನೇತೃತ್ವದ ತಂಡದಿಂದ ನಡೆಯಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದರು.    ಅವರಿಂದು ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ಪೂರ್ವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ   ರಾಜ್ಯ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿದೆ ಪ್ರದಾನಿ ಮೋದಿಯವರು" ನ ಖಾವೂಂಗಾ ನ ಖಾನೆ ದೂಂಗಾ"ಎಂದು ಹೇಳಿ ಇದೀಗ ಅವರ ಪಕ್ಷದ ರಾಜ್ಯ  ಸರ್ಕಾರದಲ್ಲಿ ಮಂತ್ರಿಗಳು ಶೇ.40 ರಷ್ಟು ಕಮೀಶನ್ ಕೇಳಿದ್ದರಿಂದ ನಾಲ್ಕು ಕೋಟಿ ರೂ.ಕಾಮಗಾರಿ ಮಾಡಿದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದು ಯಾವ ನ್ಯಾಯವೆಂದ ಅವರು ಈ ಕೂಡಲೆ ಈಶ್ವರಪ್ಪರವರನ್ನು ಬಂಧಿಸಬೇಕೆಂದರು.ಮೃತ ಸಂತೋಷ ಕುಟುಂಬಕ್ಕೆ ಒಂದು ಕೋಟಿ.ರೂ.ಪರಿಹಾರ, ಪತ್ನಿಗೆ ಸರ್ಕಾರಿ ಕೆಲಸ ಹಾಗೂ ನಾಲ್ಕು ಕೋಟಿ ರೂ.ಕಾಮಗಾರಿ ಬಾಕಿ ಹಣ ನೀಡಬೇಕೆಂದರು. ಪ್ರತಿ ಇಲಾಖೆಯಲ್ಲು ಭ್ರಷ್ಟಾಚಾರವಿದೆ ಪಿಎಸ್ಐ ನೇಮಕಾತಿಯಲ್ಲಿ ಬಿಜೆಪಿ ಮಹಿಳಾ ಮುಖಂಡರು ಶಾಮೀಲಾಗಿದ್ದಾರೆಂದ ಅವರು ಬಿಜೆಪಿ ಸರ್ಕಾರ ದೇಶದಲ್ಲೆ ನಂ.1 ಭ್ರಷ್ಟ ಸರ್ಕಾರವೆಂದ ಅವರು ಬಿಜೆಪಿ ಸುಳ್ಳಿನ ಕಾರ್ಖಾನೆ ನಡೆಸುತ್ತಿದೆ , ಸಮಗ್ರ ತನಿಖೆಯಾದಲ್ಲಿ ಬಹುತೇಕ ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ ಎಂದರು.ಭ್ರಷ್ಟಾಚಾರವನ್ನು ಮರೆ ಮಾಚಲು ಭಾವನಾತ್ಮಕ ವಿಷಯ ಮು

ನೂತನ ಜಿಲ್ಲಾಧಿಕಾರಿಗಳಿಂದ ಅಧಿಕಾರ ಸ್ವೀಕಾರ

  ನೂತನ ಜಿಲ್ಲಾಧಿಕಾರಿಗಳಿಂದ ಅಧಿಕಾರ ಸ್ವೀಕಾರ ರಾಯಚೂರು ಏ.19, ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಲ್.ಚಂದ್ರಶೇಖರ ನಾಯಕ ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.  ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ಹಾಗೂ ರಾಯಚೂರು ಸಹಾಯಕ ಆಯುಕ್ತ ರಜನಿಕಾಂತ್ ಸೇರಿದಂತೆ ಇತರೆ ಅಧಿಕಾರಿಗಳು  ಜಿಲ್ಲಾಧಿಕಾರಿಯವರನ್ನು ಸ್ವಾಗತಿಸಿದರು.   ಈ ಹಿಂದೆ ಬೆಂಗಳೂರಿನಲ್ಲಿ ಹಣಕಾಸು ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಲ್.ಚಂದ್ರಶೇಖರ ನಾಯಕ ಅವರನ್ನು ಇದೇ ಏ.18ರಂದು ರಾಜ್ಯ ಸರಕಾರ, ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.  ಇದೇ ಸಂದರ್ಭದಲ್ಲಿ ತಹಸೀಲ್ದಾರಗಳಾದ ಡಾ.ಹಂಪಣ್ಣ ಸಜ್ಜನ್, ಮಂಜುನಾಥ ಬೋಗಾವತಿ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. 

ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಕರವೇ ತೀರ್ವ ಖಂಡನೆ .

  ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಕರವೇ ತೀರ್ವವಾಗಿ ಖಂಡನೆ      ರಾಯಚೂರು,ಏ.19- ಜಿಲ್ಲಾಧಿಕಾರಿಯಾದ ಡಾ. ಅವಿನಾಶ ಮೆನನ್ ರವರ ವರ್ಗಾವಣೆಗೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಘಟಕ ತೀರ್ವವಾಗಿ ಖಂಡಿಸುತ್ತದೆ. ಕೇವಲ ಆರು ತಿಂಗಳಿಗೆ  ವರ್ಗಾವಣೆ ಮಾಡಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.  ತಮ್ಮ ಮೂಗಿನ ನೇರಕ್ಕೆ ಕಾರ್ಯನಿರ್ವಹಿಸದ ಜಿಲ್ಲಾಧಿಕಾರಿಗಳನ್ನ ವರ್ಗಾಯಿಸಲು ಜಿಲ್ಲೆಯ ಶಾಸಕರುಗಳ ಪಿತೂರಿ ಎಂದು ಜಿಲ್ಲೆಯ ಜನತೆ ಮಾತನಾಡುತ್ತಿದ್ದಾರೆ.  ಜಿಲ್ಲೆಯ ಸ್ಥಿತಿಗತಿಗಳನ್ನು  ಅರಿಯುವಷ್ಟರಲ್ಲೆ ವರ್ಗಾವಣೆ ಗೊಂಡರೆ,  ಜಿಲ್ಲೆಯಾದಂತ ಸಮಸ್ಯೆಗಳು ಶಾಶ್ವತವಾಗಿ ಉಳಿಯುತ್ತವೆ. ವರ್ಗಾವಣೆ ಆಡಳಿತಾತ್ಮಕ ಕ್ರಮವಾಗಿದ್ದರು,  ಕನಿಷ್ಠ  ಎರಡುವರೆ ಅಥವಾ ಮೂರು ವರ್ಷ ಸೇವೆ ಸಲ್ಲಿಸಲು ಅವಕಾಶ ನೀಡಿದರೆ ಜಿಲ್ಲೆಯ ಅಭಿವೃದ್ಧಿ ಆಗುತ್ತದೆ. ತಕ್ಷಣ ಜಿಲ್ಲಾಧಿಕಾರಿಗಳ ವರ್ಗಾವಣೆ ತಡೆ ಹಿಡಿದು ಜಿಲ್ಲೆಯಲ್ಲೇ ಮುಂದುವರೆಯಲು ಕರವೇ ಸಂಘಟನೆಯು ಸರಕಾರವನ್ನು             ಆಗ್ರಹಿಸುತ್ತದೆ.

ಜಿಲ್ಲಾಧಿಕಾರಿ ವರ್ಗಾವಣೆಗೆ ಜಿಲ್ಲೆಯ ಬಿಜೆಪಿ ಶಾಸಕದ್ವಯರು ಕಾರಣ- ರವಿ ಬೋಸರಾಜು.

ಜಿಲ್ಲಾಧಿಕಾರಿ ವರ್ಗಾವಣೆಗೆ ಜಿಲ್ಲೆಯ ಬಿಜೆಪಿ ಶಾಸಕದ್ವಯರು ಕಾರಣ- ರವಿ ಬೋಸರಾಜು.                         ರಾಯಚೂರು,ಏ.19-ಜಿಲ್ಲಾಧಿಕಾರಿ ಡಾ.ಅವಿನಾಶ್ ರಾಜೇಂದ್ರ ಮೆನನ್ ವರ್ಗಾವಣೆಗೆ ಜಿಲ್ಲೆಯ ಬಿಜೆಪಿ ಶಾಸಕ ದ್ವಯರಾದ ಡಾ.ಶಿವರಾಜ ಪಾಟೀಲರು ಮತ್ತು ಕೆ.ಶಿವನಗೌಡ ನಾಯಕರು ಕಾರಣವೆಂದು ಕಾಂಗ್ರೆಸ್ ಯುವ ಮುಖಂಡರಾದ ರವಿ ಬೋಸರಾಜು ಆರೋಪಿಸಿದರು.                                ಅವರಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ  ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದ  ಜಿಲ್ಲಾಧಿಕಾರಿಗಳನ್ನು ದಿಡೀರನೆ ವರ್ಗಾವಣೆ ಮಾಡಿದ್ದು ಏಕೆ ಎಂದು ಪ್ರಶ್ನಿಸಿದ ಅವರು ಬಿಜೆಪಿ ಸರ್ಕಾರ ಬಂದಾಗಿನಿಂದಲು ನಾಲ್ಕೈದು ಜಿಲ್ಲಾಧಿಕಾರಿಗಳು ವರ್ಗಾವಣೆಯಾಗಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವರು ಸಹ ಬದಲಾಗಿದ್ದಾರೆ. ಜಿಲ್ಲಾ ಮಂತ್ರಿಗಳು ಜಿಲ್ಲೆಯ ಬಗ್ಗೆ ತಾತ್ಸಾರ ಮನೋಭಾವನೆ ತಳೆದಿದ್ದಾರೆ ಜಿಲ್ಲೆಗೆ ಭೇಟಿ ನೀಡುವುದು ವಿರಳವಾಗಿದೆ ಜಿಲ್ಲೆಯ ಬಿಜೆಪಿ ಶಾಸಕರು ಜಿಲ್ಲಾಧಿಕಾರಿಗಳು ತಮ್ಮ ಆಣತೆಯಂತೆ  ನಡೆಯುತ್ತಿಲ್ಲವೆಂದು ಹಾಗೂ ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ಶೇ.40 ರಷ್ಟು ಕಮೀಶನ ಹಾವಳಿ ಜಿಲ್ಲೆಯಲ್ಲಿಯೂ ಇದ್ದು ಅದಕ್ಕೆ ಜಿಲ್ಲಾಧಿಕಾರಿಗಳು ಕಡಿವಾಣ ಹಾಕಲು ಮುಂದಾಗಿರುವುದು ವರ್ಗಾವಣೆಗೆ ಕಾರಣವಾಗಿರಬಹುದೆಂದರು. ಜಿಲ್ಲೆಯಲ್ಲಿ ಅಭಿವೃದ್ದಿ ಕುಂಟಿತವಾಗಿದೆ ಕಾಮಗಾರಿಯಲ್ಲಿ ಕಮೀಷನ್ ಪಡೆಯಲು ಮುಂದಾಗಿದ್ದಾರೆ ಶಾಸಕ ಡಾ.ಶಿವರಾಜ ಪಾಟೀಲ್ ಅಣ್ಣ ತಮ್ಮಂ

ಜಿಲ್ಲಾಧಿಕಾರಿ ವರ್ಗಾವಣೆಗೆ ಜಿಲ್ಲೆಯ ಬಿಜೆಪಿ ಶಾಸಕದ್ವಯರು ಕಾರಣ- ರವಿ ಬೋಸರಾಜು.

  ಜಿಲ್ಲಾಧಿಕಾರಿ ವರ್ಗಾವಣೆಗೆ ಜಿಲ್ಲೆಯ ಬಿಜೆಪಿ ಶಾಸಕದ್ವಯರು ಕಾರಣ- ರವಿ ಬೋಸರಾಜು.                         ರಾಯಚೂರು,ಏ.19-ಜಿಲ್ಲಾಧಿಕಾರಿ ಡಾ.ಅವಿನಾಶ್ ರಾಜೇಂದ್ರ ಮೆನನ್ ವರ್ಗಾವಣೆಗೆ ಜಿಲ್ಲೆಯ ಬಿಜೆಪಿ ಶಾಸಕ ದ್ವಯರಾದ ಡಾ.ಶಿವರಾಜ ಪಾಟೀಲರು ಮತ್ತು ಕೆ.ಶಿವನಗೌಡ ನಾಯಕರು ಕಾರಣವೆಂದು ಕಾಂಗ್ರೆಸ್ ಯುವ ಮುಖಂಡರಾದ ರವಿ ಬೋಸರಾಜು ಆರೋಪಿಸಿದರು.                                ಅವರಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ  ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದ  ಜಿಲ್ಲಾಧಿಕಾರಿಗಳನ್ನು ದಿಡೀರನೆ ವರ್ಗಾವಣೆ ಮಾಡಿದ್ದು ಏಕೆ ಎಂದು ಪ್ರಶ್ನಿಸಿದ ಅವರು ಬಿಜೆಪಿ ಸರ್ಕಾರ ಬಂದಾಗಿನಿಂದಲು ನಾಲ್ಕೈದು ಜಿಲ್ಲಾಧಿಕಾರಿಗಳು ವರ್ಗಾವಣೆಯಾಗಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವರು ಸಹ ಬದಲಾಗಿದ್ದಾರೆ. ಜಿಲ್ಲಾ ಮಂತ್ರಿಗಳು ಜಿಲ್ಲೆಯ ಬಗ್ಗೆ ತಾತ್ಸಾರ ಮನೋಭಾವನೆ ತಳೆದಿದ್ದಾರೆ ಜಿಲ್ಲೆಗೆ ಭೇಟಿ ನೀಡುವುದು ವಿರಳವಾಗಿದೆ ಜಿಲ್ಲೆಯ ಬಿಜೆಪಿ ಶಾಸಕರು ಜಿಲ್ಲಾಧಿಕಾರಿಗಳು ತಮ್ಮ ಆಣತೆಯಂತೆ  ನಡೆಯುತ್ತಿಲ್ಲವೆಂದು ಹಾಗೂ ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ಶೇ.40 ರಷ್ಟು ಕಮೀಶನ ಹಾವಳಿ ಜಿಲ್ಲೆಯಲ್ಲಿಯೂ ಇದ್ದು ಅದಕ್ಕೆ ಜಿಲ್ಲಾಧಿಕಾರಿಗಳು ಕಡಿವಾಣ ಹಾಕಲು ಮುಂದಾಗಿರುವುದು ವರ್ಗಾವಣೆಗೆ ಕಾರಣವಾಗಿರಬಹುದೆಂದರು. ಜಿಲ್ಲೆಯಲ್ಲಿ ಅಭಿವೃದ್ದಿ ಕುಂಟಿತವಾಗಿದೆ ಕಾಮಗಾರಿಯಲ್ಲಿ ಕಮೀಷನ್ ಪಡೆಯಲು ಮುಂದಾಗಿದ್ದಾರೆ ಶಾಸಕ ಡಾ.ಶಿವರಾಜ ಪಾಟೀಲ್ ಅಣ್ಣ ತಮ್ಮ

ಆತ್ಮ ನಿರ್ಭರ ಯೋಜನೆಯಡಿಯಲ್ಲಿ ಮೀನುಗಾರರಿಗೆ ಆರ್ಥಿಕ ನೆರವು - ಸಚಿವ ಎಸ್. ಅಂಗಾರ

  ಆತ್ಮ ನಿರ್ಭರ ಯೋಜನೆಯಡಿಯಲ್ಲಿ ಮೀನುಗಾರರಿಗೆ ಆರ್ಥಿಕ ನೆರವು - ಸಚಿವ ಎಸ್. ಅಂಗಾರ ರಾಯಚೂರು ಏ.19-ಜಿಲ್ಲೆಯಲ್ಲಿ ದೊರೆಯುವ ಉತ್ತಮ ನೀರು ಬಳಸಿಕೊಂಡು ಭತ್ತ ಹಾಗೂ ಮೀನು ಕೃಷಿ ಮಾಡಿ ರೈತರು ಆರ್ಥಿಕವಾಗಿ ಸದೃಢರಾಗಬೇಕು. ಅಲ್ಲದೆ ಮೀನು ಒಂದು ಪೌಷ್ಟಿಕ ಆಹಾರವಾಗಿದ್ದು, ಇದರಿಂದ ಸುಮಾರು 19ವಿವಿಧ ಆಹಾರ ಉತ್ಪಾದನೆಗಳನ್ನು ಮಾಡಬಹುದಾಗಿದೆಂದು ಮೀನುಗಾರಿಕೆ, ಬಂದರು, ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗಾರ ಅವರು ಹೇಳಿದರು.     ಅವರು ಏ.19ರ ಮಂಗಳವಾರ ದಂದು ನಗರದ ಹೊರವಲಯದ ಸರ್ಕಿಟ್ ಹೌಸ್‌ನಲ್ಲಿ ಮೀನುಗಾರಿಕೆಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.  ಕಲ್ಯಾಣ ಕರ್ನಾಟಕ ಭಾಗದಲ್ಲಿ ಇತ್ತೀಚೆಗೆ ಸಿರಗುಪ್ಪ ತಾಲೂಕಿನಲ್ಲಿ ಮೊದಲ ಮೀನು ಮಾರುಕಟ್ಟೆ ಪ್ರಾರಂಭಿಸಿದ್ದು, ಕೃಷಿ ಹೊಂಡ, ಮೀನಿನ ಕೆರೆ, ಬಂಜರು ಭೂಮಿ, ಸವಳು ಭೂಮಿಯಲ್ಲಿ ಭತ್ತದ ಬೆಳೆ ಜತೆ ಮೀನುಗಾರಿಕೆ ಕೃಷಿ ಅಳವಡಿಸಿಕೊಂಡರೆ ರೈತರು ಹೆಚ್ಚಿನ ಲಾಭಗಳಿಸಬಹುದಾಗಿದೆ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ಆತ್ಮ ನಿರ್ಭರ ಯೋಜನೆ ಮೂಲಕ ಆನೇಕ ಗುಂಪು ರಚಿಸಿ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ನೀಡುತ್ತಿದ್ದಾರೆ. ಯುವಕರು ಸ್ವಯಂ ಉದ್ಯೋಗ ಕೈಗೊಳ್ಳಬೇಕು, ಕರಾವಳಿ ಭಾಗದ 327ಕಿ.ಮೀ, ಒಳನಾಡಿನ ಭಾಗದ ಮೀನುಗಾರರ ಸಮಸ್ಯೆ ಪರಿಶೀಲಿಸಿ ಇಲಾಖೆಯಿಂದ ಮತ್ತು ನಿಗಮದಿಂದ ಆನೇಕ ಸೌಲಭ್ಯಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.   ಬಡವರು, ಮಧ್ಯಮ ವರ್